Homeಕಥೆಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

ಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

- Advertisement -
- Advertisement -

ನಾನು ಪಾದಚಾರಿ ರಸ್ತೆಯಿಂದ ಹೊರಬಿದ್ದು, ಮೇಲೆ ನೋಡುತ್ತಾ ಕೆಲ ಹೆಜ್ಜೆ ಹಿಂದೆ ಬಂದು, ರಸ್ತೆಯ ನಟ್ಟನಡುವೆ ನಿಂತು, ಎರಡೂ ಕೈಗಳನ್ನ ಬಾಯಿಗೆ ಲೌಡ್ ಸ್ಪೀಕರ್ ರೀತಿಯಲ್ಲಿ ಹಿಡಿದುಕೊಂಡು ಬಿಲ್ಡಿಂಗ್‌ನ ಮೇಲ್ಮಹಡಿಗಳತ್ತ ನೋಡುತ್ತ ಜೋರಾಗಿ ಕೂಗಿಕೊಂಡೆ: “ತೆರೇಸಾ”.

ನನ್ನ ನೆರಳು ಚಂದ್ರನಿಗೆ ಹೆದರಿಕೊಂಡಂತೆ, ನನ್ನ ಕಾಲುಗಳ ನಡುವೆ ಬಂದು ಸೇರಿಕೊಂಡಿತು.

ಯಾರೋ ಒಬ್ಬ ಹತ್ತಿರ ಬಂದ, ನಾನು ಮತ್ತೊಮ್ಮೆ ಕೂಗಿಕೊಂಡೆ: “ತೆರೇಸಾ”. ಆ ಮನುಷ್ಯ ನನ್ನ ಹತ್ತಿರ ಬಂದು ಹೇಳಿದ: “ನೀನು ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸುವುದಿಲ್ಲ. ಇಬ್ಬರೂ ಸೇರಿ ಪ್ರಯತ್ನ ಮಾಡುವ. ಮೂರು ಎಣಿಸುತ್ತೇನೆ, ಮೂರು ಮುಗಿಯುತ್ತಿದ್ದ ಹಾಗೆ ಇಬ್ಬರೂ ಸೇರಿ ಕೂಗುವ”. ಆ ಮನುಷ್ಯ ಮೂರು ಎಣಿಸಲು ಶುರು ಮಾಡಿದ: “ಒಂದು.. ಎರಡು.. ಮೂರು..”. ಇಬ್ಬರೂ ಜೋರಾಗಿ ಕೂಗಿದೆವು, “ತೆ..ರೇ..ಸಾ..”

ಆ ದಾರಿಯಲ್ಲೇ ಹಾದು ಹೋಗುತ್ತಿದ್ದ, ಬಹುಶಃ ಥಿಯೇಟರ್ ಇಂದ ಅಥವಾ ಕಾಫಿ ಶಾಪ್ ಇಂದ ವಾಪಸ್ಸಾಗುತ್ತಿದ್ದ ಸಣ್ಣ ಗೆಳೆಯರ ಗುಂಪೊಂದು ನಾವು ಕೂಗುವುದನ್ನ ಗಮನಿಸಿ, ನನ್ನ ಹತ್ತಿರ ಬಂದು, “ನಾವೂ ನಿಮ್ಮ ಜೊತೆ ಕೂಗುತ್ತೇವೆ” ಎಂದು ರಸ್ತೆಯ ನಡುವೆ ನಮ್ಮನ್ನು ಸೇರಿಕೊಂಡರು. ಆ ಗುಂಪಿನಲ್ಲಿ ಒಬ್ಬ ಮೂರು ಎಣಿಸಲು ಶುರು ಮಾಡಿದ, ಒಂದು.. ಎರಡು.. ಮೂರು, ನಾವೆಲ್ಲ ಸೇರಿ ಜೋರಾಗಿ ಕೂಗಿದೆವು, “ತೆ.. ರೇ.. ಸಾ..!”

ಇನ್ನೂ ಯಾರೋ ಒಬ್ಬರು ಬಂದು ನಮ್ಮನ್ನು ಸೇರಿಕೊಂಡರು; ಹತ್ತು ಹದಿನೈದು ನಿಮಿಷಗಳಲ್ಲಿ ಅಲ್ಲಿ ನಾವು ಒಂದು ಇಪ್ಪತ್ತು ಜನ ಸೇರಿಕೊಂಡಿದ್ದೆವು. ಆಗಾಗ ಇನ್ನೂ ಕೆಲವು ಹೊಸಬರು ನಮ್ಮನ್ನು ಸೇರುತ್ತಲೇ ಇದ್ದರು.

ನಾವೆಲ್ಲರೂ ಸೇರಿ ಒಂದೇ ಬಾರಿ, ಒಂದೇ ರೀತಿಯಲ್ಲಿ ಕೂಗುವುದು ಅಷ್ಟು ಸುಲಭವಾಗಿರಲಿಲ್ಲ. ಯಾರೋ ಒಬ್ಬರು ಮೂರು ಎಣಿಸುವುದಕ್ಕಿಂತ ಮುಂಚೆಯೇ ಕೂಗುತ್ತಿದ್ದರೆ, ಮತ್ತಿನ್ನೊಬ್ಬರು ನಾವೂ ಕೂಗಿ ಆದ ಮೇಲೆ ಕೂಗುತ್ತಿದ್ದರು, ಆದರೆ ಕೊನೆಕೊನೆಗೆ ಎಲ್ಲರೂ ಸೇರಿ ತಕ್ಕಮಟ್ಟಿನ ಜೋರಾದ ಒಂದೇ ದನಿಯ ಕೂಗು ಹಾಕುವುದರಲ್ಲಿ ಸಫಲರಾದೆವು. ’ತೆ’ ಯನ್ನ ಸಣ್ಣದಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ, ’ರೆ’ ಯನ್ನ ಜೋರಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ ಮತ್ತು ’ಸಾ’ನ್ನ ಮೆಲ್ಲಗೆ ಬೇಗ ಕೂಗಿ ಮುಗಿಸುವುದೆಂದೂ ನಮ್ಮ ನಡುವೆ ಒಪ್ಪಂದವಾಯಿತು. ಈ ಥರ ಕೂಗುವುದು ತುಂಬ ಮಜವಾಗಿಯೂ, ಪರಿಣಾಮಕಾರಿಯೂ ಆಗಿತ್ತು. ಯಾರಾದರೂ ತಪ್ಪು ಮಾಡಿದಾಗ ಆಗಾಗ ಸಣ್ಣಪುಟ್ಟ ತಕರಾರುಗಳು ಹುಟ್ಟಿಕೊಳ್ಳುತ್ತಿದ್ದವು.

ನಮ್ಮ ಕೂಗು ಈಗ ಸರಿಯಾಗಿ ಮೂಡಿಬರುತ್ತಿತ್ತು. ಆಗಲೇ ಒಬ್ಬ-ಅವನ ದನಿಯನ್ನಷ್ಟೇ ಕೇಳಿದರೆ ಇವನದು ವಿಚಿತ್ರ ಮುಖ ಆಗಿರಬಹುದು ಅನಿಸುವಂಥವ-ಪ್ರಶ್ನೆ ಮಾಡಿದ: “ಅವಳು ಮನೆಯಲ್ಲಿರುವುದು ನಿನಗೆ ಖಾತ್ರೀನಾ?”

“ಇಲ್ಲ ನಾನು ಉತ್ತರಿಸಿದೆ”.

“ಇದು ಕಷ್ಟ, ಕೀ ಏನಾದರೂ ಮರೆತಿದ್ದೀಯಾ?” ಇನ್ನೊಬ್ಬ ಕೇಳಿದ.

“ಇಲ್ಲ ಇಲ್ಲ ಕೀ ನನ್ನ ಹತ್ತಿರವೇ ಇದೆ”

ಉತ್ತರಿಸಿದೆ.

“ಮೇಲೆ ಹೋಗಿ ಯಾಕೆ ಚೆಕ್ ಮಾಡಬಾರದು ನೀನು?” ಮತ್ತೊಬ್ಬ ಸಲಹೆ ನೀಡಿದ.

“ನಾನು ಇಲ್ಲಿರುವುದಿಲ್ಲ, ನಾನು ಇರೋದು ಊರಿನ ಇನ್ನೊಂದು ಬದಿಯಲ್ಲಿ ಸಮಾಧಾನವಾಗಿ ಹೇಳಿದೆ”.

“ನನ್ನ ಕುತೂಹಲಕ್ಕೆ ಕ್ಷಮೆ ಇರಲಿ, ಹಾಗಾದರೆ ಇಲ್ಲಿ ಇರೋದು ಯಾರು?” ವಿಚಿತ್ರ ದನಿಯ ಮನುಷ್ಯ ಮೆಲುದನಿಯಲ್ಲಿ ಪ್ರಶ್ನೆ ಮಾಡಿದ.

“ನಿಜವಾಗಿಯೂ ನನಗೆ ಗೊತ್ತಿಲ್ಲ ನಾನು ಉತ್ತರಿಸಿದೆ”.

ನನ್ನ ಉತ್ತರ ಕೇಳಿ ಸುತ್ತ ಇದ್ದ ಜನ ಬೇಸರ ಮಾಡಿಕೊಂಡರು.

“ಹಾಗಾದರೆ ನೀನು ಇಲ್ಲಿ ನಿಂತು ತೆರೇಸಾ ಅಂತ ಕೂಗುತ್ತಿರುವುದು ಯಾರನ್ನ?” ಕೀರಲು ದನಿಯ ವ್ಯಕ್ತಿಯೊಬ್ಬ ಸ್ವಲ್ಪ ಗಡುಸಾಗಿಯೇ ಪ್ರಶ್ನಿಸಿದ.

“ನನ್ನ ಪ್ರಕಾರ, ನಾವು ಬೇರೆ ಯಾವ ಹೆಸರನ್ನಾದರೂ ಕೂಗಬಹುದು ಅಥವಾ ಬೇರೆ ಯಾವ ಜಾಗದಲ್ಲೂ ಕೂಗಬಹುದು, ಅದೇನು ಅಂಥ ದೊಡ್ಡ ವಿಷಯ ಅಲ್ಲ” ನಾನೂ ಸ್ವಲ್ಪ ಗಡುಸಾಗಿಯೇ ಉತ್ತರಿಸಿದೆ.

ನನ್ನ ಉತ್ತರದಿಂದ ಸುತ್ತಲಿನ ಜನಕ್ಕೆ ಸಿಟ್ಟು ಬಂತು.

“ನೀನು ನಮ್ಮನ್ನ ಯಾವುದರಲ್ಲಾದರೂ ಸಿಕ್ಕಿಸಿ ಹಾಕಿಸುತ್ತಿಲ್ಲ ತಾನೇ?” ಕೀರಲು ದನಿಯ ಮನುಷ್ಯ ಮತ್ತೆ ಪ್ರಶ್ನೆ ಮಾಡಿದ.

“ಏನು ಹಾಗಂದರೆ?” ನಾನೂ ಸ್ವಲ್ಪ ಸಿಟ್ಟಾದೆ, ನನ್ನ ಒಳ್ಳೆಯತನಕ್ಕಾಗಿ ಸಾಕ್ಷಿ ಹೇಳುವಂತೆ ಸುತ್ತಲಿನ ಜನರನ್ನೊಮ್ಮೆ ತಿರುಗಿ ನೋಡಿದೆ. ಎಲ್ಲ ಸುಮ್ಮನೇ ನಿಂತಿದ್ದರು, ನನ್ನ ಸೂಚನೆಯನ್ನ ಗಮನಿಸದವರಂತೆ.

ಎಲ್ಲರ ಮುಖದಲ್ಲೂ ಮುಜುಗರ ಎದ್ದು ಕಾಣುತ್ತಿತ್ತು.

“ಇಲ್ಲಿಂದ ಹೊರಡುವ ಮುನ್ನ ಯಾಕೆ ನಾವು ಒಮ್ಮೆ ಕೊನೆಯ ಬಾರಿ ಪ್ರಯತ್ನ ಮಾಡಬಾರದು?” ಮೃದು ಸ್ವಭಾವದವನಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮಾತನಾಡಿದ. ಅವನ ಮಾತು ಒಪ್ಪಿಕೊಂಡವರಂತೆ ಒಂದು.. ಎರಡು.. ಮೂರು ಎಣಿಸುತ್ತ ಎಲ್ಲರೂ ಜೋರಾಗಿ ಕೂಗಿದೆವು, ತೆ.. ರೇ.. ಸಾ.. ಆದರೆ ಯಾಕೋ ಈ ಕೂಗು ಅಷ್ಟು ಸರಿಯಾಗಿ ಮೂಡಿ ಬರಲಿಲ್ಲ. ಆಮೇಲೆ ಎಲ್ಲರೂ ತಮ್ಮತಮ್ಮ ದಾರಿ ಹಿಡಿದು ಅಲ್ಲಿಂದ ಹೊರಟುಹೋದರು.

ನಾನೂ ಆ ಜಾಗ ಖಾಲಿ ಮಾಡಿ ಮುಂದಿನ ರಸ್ತೆಯ ಚೌಕಿಗೆ ಬರುತ್ತಿದ್ದ ಹಾಗೆಯೇ, ತೆ.. ರೇ.. ಸಾ ಎಂದು ಕೂಗುತ್ತಿದ್ದ ಒಂದು ದನಿ ನನ್ನ ಕಿವಿಗೆ ಬಿತ್ತು.

ಯಾರೋ ಒಬ್ಬ ಇನ್ನೂ ಅಲ್ಲೇ ನಿಂತು ಪ್ರಯತ್ನ ಮಾಡುತ್ತಿದ್ದಾನೆ, ಯಾರೋ ಒಬ್ಬ ಮೊಂಡ ಮನುಷ್ಯ.

ಅನುವಾದ: ಚಿದಂಬರ ನರೇಂದ್ರ

ಇಟಾಲೋ ಕ್ಯಾಲ್ವಿನೋ

ಇಟಾಲೋ ಕ್ಯಾಲ್ವಿನೋ
ಇಟಾಲಿಯನ್ ಕಥೆಗಾರ-ಕಾದಂಬರಿಕಾರ. ’ಕಾಸ್ಮಿಕಾಮಿಕ್ಸ್’, ’ಇನ್‌ವಿಸಿಬಲ್ ಸಿಟೀಸ್’, ’ಇಫ್ ಆನ್ ಎ ವಿಂಟರ್ಸ್ ನೈಟ್ ಎ ಟ್ರಾವೆಲ್ಲರ್’ ಅವರ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆ ಅವರ ’ನಂಬರ್ಸ್ ಇನ್ ಡಾರ್ಕ್’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....