Homeಕಥೆಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

ಸಣ್‌ಸಣ್ ಕಥೆ: ತೆರೇಸಾ ಎಂದು ಕೂಗಿದ ಮನುಷ್ಯ

- Advertisement -
- Advertisement -

ನಾನು ಪಾದಚಾರಿ ರಸ್ತೆಯಿಂದ ಹೊರಬಿದ್ದು, ಮೇಲೆ ನೋಡುತ್ತಾ ಕೆಲ ಹೆಜ್ಜೆ ಹಿಂದೆ ಬಂದು, ರಸ್ತೆಯ ನಟ್ಟನಡುವೆ ನಿಂತು, ಎರಡೂ ಕೈಗಳನ್ನ ಬಾಯಿಗೆ ಲೌಡ್ ಸ್ಪೀಕರ್ ರೀತಿಯಲ್ಲಿ ಹಿಡಿದುಕೊಂಡು ಬಿಲ್ಡಿಂಗ್‌ನ ಮೇಲ್ಮಹಡಿಗಳತ್ತ ನೋಡುತ್ತ ಜೋರಾಗಿ ಕೂಗಿಕೊಂಡೆ: “ತೆರೇಸಾ”.

ನನ್ನ ನೆರಳು ಚಂದ್ರನಿಗೆ ಹೆದರಿಕೊಂಡಂತೆ, ನನ್ನ ಕಾಲುಗಳ ನಡುವೆ ಬಂದು ಸೇರಿಕೊಂಡಿತು.

ಯಾರೋ ಒಬ್ಬ ಹತ್ತಿರ ಬಂದ, ನಾನು ಮತ್ತೊಮ್ಮೆ ಕೂಗಿಕೊಂಡೆ: “ತೆರೇಸಾ”. ಆ ಮನುಷ್ಯ ನನ್ನ ಹತ್ತಿರ ಬಂದು ಹೇಳಿದ: “ನೀನು ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸುವುದಿಲ್ಲ. ಇಬ್ಬರೂ ಸೇರಿ ಪ್ರಯತ್ನ ಮಾಡುವ. ಮೂರು ಎಣಿಸುತ್ತೇನೆ, ಮೂರು ಮುಗಿಯುತ್ತಿದ್ದ ಹಾಗೆ ಇಬ್ಬರೂ ಸೇರಿ ಕೂಗುವ”. ಆ ಮನುಷ್ಯ ಮೂರು ಎಣಿಸಲು ಶುರು ಮಾಡಿದ: “ಒಂದು.. ಎರಡು.. ಮೂರು..”. ಇಬ್ಬರೂ ಜೋರಾಗಿ ಕೂಗಿದೆವು, “ತೆ..ರೇ..ಸಾ..”

ಆ ದಾರಿಯಲ್ಲೇ ಹಾದು ಹೋಗುತ್ತಿದ್ದ, ಬಹುಶಃ ಥಿಯೇಟರ್ ಇಂದ ಅಥವಾ ಕಾಫಿ ಶಾಪ್ ಇಂದ ವಾಪಸ್ಸಾಗುತ್ತಿದ್ದ ಸಣ್ಣ ಗೆಳೆಯರ ಗುಂಪೊಂದು ನಾವು ಕೂಗುವುದನ್ನ ಗಮನಿಸಿ, ನನ್ನ ಹತ್ತಿರ ಬಂದು, “ನಾವೂ ನಿಮ್ಮ ಜೊತೆ ಕೂಗುತ್ತೇವೆ” ಎಂದು ರಸ್ತೆಯ ನಡುವೆ ನಮ್ಮನ್ನು ಸೇರಿಕೊಂಡರು. ಆ ಗುಂಪಿನಲ್ಲಿ ಒಬ್ಬ ಮೂರು ಎಣಿಸಲು ಶುರು ಮಾಡಿದ, ಒಂದು.. ಎರಡು.. ಮೂರು, ನಾವೆಲ್ಲ ಸೇರಿ ಜೋರಾಗಿ ಕೂಗಿದೆವು, “ತೆ.. ರೇ.. ಸಾ..!”

ಇನ್ನೂ ಯಾರೋ ಒಬ್ಬರು ಬಂದು ನಮ್ಮನ್ನು ಸೇರಿಕೊಂಡರು; ಹತ್ತು ಹದಿನೈದು ನಿಮಿಷಗಳಲ್ಲಿ ಅಲ್ಲಿ ನಾವು ಒಂದು ಇಪ್ಪತ್ತು ಜನ ಸೇರಿಕೊಂಡಿದ್ದೆವು. ಆಗಾಗ ಇನ್ನೂ ಕೆಲವು ಹೊಸಬರು ನಮ್ಮನ್ನು ಸೇರುತ್ತಲೇ ಇದ್ದರು.

ನಾವೆಲ್ಲರೂ ಸೇರಿ ಒಂದೇ ಬಾರಿ, ಒಂದೇ ರೀತಿಯಲ್ಲಿ ಕೂಗುವುದು ಅಷ್ಟು ಸುಲಭವಾಗಿರಲಿಲ್ಲ. ಯಾರೋ ಒಬ್ಬರು ಮೂರು ಎಣಿಸುವುದಕ್ಕಿಂತ ಮುಂಚೆಯೇ ಕೂಗುತ್ತಿದ್ದರೆ, ಮತ್ತಿನ್ನೊಬ್ಬರು ನಾವೂ ಕೂಗಿ ಆದ ಮೇಲೆ ಕೂಗುತ್ತಿದ್ದರು, ಆದರೆ ಕೊನೆಕೊನೆಗೆ ಎಲ್ಲರೂ ಸೇರಿ ತಕ್ಕಮಟ್ಟಿನ ಜೋರಾದ ಒಂದೇ ದನಿಯ ಕೂಗು ಹಾಕುವುದರಲ್ಲಿ ಸಫಲರಾದೆವು. ’ತೆ’ ಯನ್ನ ಸಣ್ಣದಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ, ’ರೆ’ ಯನ್ನ ಜೋರಾಗಿ ಮತ್ತು ಬಹಳ ಹೊತ್ತಿನವರೆಗೆ ಕೂಗುವುದೆಂದೂ ಮತ್ತು ’ಸಾ’ನ್ನ ಮೆಲ್ಲಗೆ ಬೇಗ ಕೂಗಿ ಮುಗಿಸುವುದೆಂದೂ ನಮ್ಮ ನಡುವೆ ಒಪ್ಪಂದವಾಯಿತು. ಈ ಥರ ಕೂಗುವುದು ತುಂಬ ಮಜವಾಗಿಯೂ, ಪರಿಣಾಮಕಾರಿಯೂ ಆಗಿತ್ತು. ಯಾರಾದರೂ ತಪ್ಪು ಮಾಡಿದಾಗ ಆಗಾಗ ಸಣ್ಣಪುಟ್ಟ ತಕರಾರುಗಳು ಹುಟ್ಟಿಕೊಳ್ಳುತ್ತಿದ್ದವು.

ನಮ್ಮ ಕೂಗು ಈಗ ಸರಿಯಾಗಿ ಮೂಡಿಬರುತ್ತಿತ್ತು. ಆಗಲೇ ಒಬ್ಬ-ಅವನ ದನಿಯನ್ನಷ್ಟೇ ಕೇಳಿದರೆ ಇವನದು ವಿಚಿತ್ರ ಮುಖ ಆಗಿರಬಹುದು ಅನಿಸುವಂಥವ-ಪ್ರಶ್ನೆ ಮಾಡಿದ: “ಅವಳು ಮನೆಯಲ್ಲಿರುವುದು ನಿನಗೆ ಖಾತ್ರೀನಾ?”

“ಇಲ್ಲ ನಾನು ಉತ್ತರಿಸಿದೆ”.

“ಇದು ಕಷ್ಟ, ಕೀ ಏನಾದರೂ ಮರೆತಿದ್ದೀಯಾ?” ಇನ್ನೊಬ್ಬ ಕೇಳಿದ.

“ಇಲ್ಲ ಇಲ್ಲ ಕೀ ನನ್ನ ಹತ್ತಿರವೇ ಇದೆ”

ಉತ್ತರಿಸಿದೆ.

“ಮೇಲೆ ಹೋಗಿ ಯಾಕೆ ಚೆಕ್ ಮಾಡಬಾರದು ನೀನು?” ಮತ್ತೊಬ್ಬ ಸಲಹೆ ನೀಡಿದ.

“ನಾನು ಇಲ್ಲಿರುವುದಿಲ್ಲ, ನಾನು ಇರೋದು ಊರಿನ ಇನ್ನೊಂದು ಬದಿಯಲ್ಲಿ ಸಮಾಧಾನವಾಗಿ ಹೇಳಿದೆ”.

“ನನ್ನ ಕುತೂಹಲಕ್ಕೆ ಕ್ಷಮೆ ಇರಲಿ, ಹಾಗಾದರೆ ಇಲ್ಲಿ ಇರೋದು ಯಾರು?” ವಿಚಿತ್ರ ದನಿಯ ಮನುಷ್ಯ ಮೆಲುದನಿಯಲ್ಲಿ ಪ್ರಶ್ನೆ ಮಾಡಿದ.

“ನಿಜವಾಗಿಯೂ ನನಗೆ ಗೊತ್ತಿಲ್ಲ ನಾನು ಉತ್ತರಿಸಿದೆ”.

ನನ್ನ ಉತ್ತರ ಕೇಳಿ ಸುತ್ತ ಇದ್ದ ಜನ ಬೇಸರ ಮಾಡಿಕೊಂಡರು.

“ಹಾಗಾದರೆ ನೀನು ಇಲ್ಲಿ ನಿಂತು ತೆರೇಸಾ ಅಂತ ಕೂಗುತ್ತಿರುವುದು ಯಾರನ್ನ?” ಕೀರಲು ದನಿಯ ವ್ಯಕ್ತಿಯೊಬ್ಬ ಸ್ವಲ್ಪ ಗಡುಸಾಗಿಯೇ ಪ್ರಶ್ನಿಸಿದ.

“ನನ್ನ ಪ್ರಕಾರ, ನಾವು ಬೇರೆ ಯಾವ ಹೆಸರನ್ನಾದರೂ ಕೂಗಬಹುದು ಅಥವಾ ಬೇರೆ ಯಾವ ಜಾಗದಲ್ಲೂ ಕೂಗಬಹುದು, ಅದೇನು ಅಂಥ ದೊಡ್ಡ ವಿಷಯ ಅಲ್ಲ” ನಾನೂ ಸ್ವಲ್ಪ ಗಡುಸಾಗಿಯೇ ಉತ್ತರಿಸಿದೆ.

ನನ್ನ ಉತ್ತರದಿಂದ ಸುತ್ತಲಿನ ಜನಕ್ಕೆ ಸಿಟ್ಟು ಬಂತು.

“ನೀನು ನಮ್ಮನ್ನ ಯಾವುದರಲ್ಲಾದರೂ ಸಿಕ್ಕಿಸಿ ಹಾಕಿಸುತ್ತಿಲ್ಲ ತಾನೇ?” ಕೀರಲು ದನಿಯ ಮನುಷ್ಯ ಮತ್ತೆ ಪ್ರಶ್ನೆ ಮಾಡಿದ.

“ಏನು ಹಾಗಂದರೆ?” ನಾನೂ ಸ್ವಲ್ಪ ಸಿಟ್ಟಾದೆ, ನನ್ನ ಒಳ್ಳೆಯತನಕ್ಕಾಗಿ ಸಾಕ್ಷಿ ಹೇಳುವಂತೆ ಸುತ್ತಲಿನ ಜನರನ್ನೊಮ್ಮೆ ತಿರುಗಿ ನೋಡಿದೆ. ಎಲ್ಲ ಸುಮ್ಮನೇ ನಿಂತಿದ್ದರು, ನನ್ನ ಸೂಚನೆಯನ್ನ ಗಮನಿಸದವರಂತೆ.

ಎಲ್ಲರ ಮುಖದಲ್ಲೂ ಮುಜುಗರ ಎದ್ದು ಕಾಣುತ್ತಿತ್ತು.

“ಇಲ್ಲಿಂದ ಹೊರಡುವ ಮುನ್ನ ಯಾಕೆ ನಾವು ಒಮ್ಮೆ ಕೊನೆಯ ಬಾರಿ ಪ್ರಯತ್ನ ಮಾಡಬಾರದು?” ಮೃದು ಸ್ವಭಾವದವನಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮಾತನಾಡಿದ. ಅವನ ಮಾತು ಒಪ್ಪಿಕೊಂಡವರಂತೆ ಒಂದು.. ಎರಡು.. ಮೂರು ಎಣಿಸುತ್ತ ಎಲ್ಲರೂ ಜೋರಾಗಿ ಕೂಗಿದೆವು, ತೆ.. ರೇ.. ಸಾ.. ಆದರೆ ಯಾಕೋ ಈ ಕೂಗು ಅಷ್ಟು ಸರಿಯಾಗಿ ಮೂಡಿ ಬರಲಿಲ್ಲ. ಆಮೇಲೆ ಎಲ್ಲರೂ ತಮ್ಮತಮ್ಮ ದಾರಿ ಹಿಡಿದು ಅಲ್ಲಿಂದ ಹೊರಟುಹೋದರು.

ನಾನೂ ಆ ಜಾಗ ಖಾಲಿ ಮಾಡಿ ಮುಂದಿನ ರಸ್ತೆಯ ಚೌಕಿಗೆ ಬರುತ್ತಿದ್ದ ಹಾಗೆಯೇ, ತೆ.. ರೇ.. ಸಾ ಎಂದು ಕೂಗುತ್ತಿದ್ದ ಒಂದು ದನಿ ನನ್ನ ಕಿವಿಗೆ ಬಿತ್ತು.

ಯಾರೋ ಒಬ್ಬ ಇನ್ನೂ ಅಲ್ಲೇ ನಿಂತು ಪ್ರಯತ್ನ ಮಾಡುತ್ತಿದ್ದಾನೆ, ಯಾರೋ ಒಬ್ಬ ಮೊಂಡ ಮನುಷ್ಯ.

ಅನುವಾದ: ಚಿದಂಬರ ನರೇಂದ್ರ

ಇಟಾಲೋ ಕ್ಯಾಲ್ವಿನೋ

ಇಟಾಲೋ ಕ್ಯಾಲ್ವಿನೋ
ಇಟಾಲಿಯನ್ ಕಥೆಗಾರ-ಕಾದಂಬರಿಕಾರ. ’ಕಾಸ್ಮಿಕಾಮಿಕ್ಸ್’, ’ಇನ್‌ವಿಸಿಬಲ್ ಸಿಟೀಸ್’, ’ಇಫ್ ಆನ್ ಎ ವಿಂಟರ್ಸ್ ನೈಟ್ ಎ ಟ್ರಾವೆಲ್ಲರ್’ ಅವರ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆ ಅವರ ’ನಂಬರ್ಸ್ ಇನ್ ಡಾರ್ಕ್’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...