Homeಮುಖಪುಟಕರ್ನಾಟಕದ ಗೆಳೆಯರನ್ನೆಲ್ಲಾ ಕಳೆದುಕೊಳ್ಳುತ್ತಾ ಹೋದೆ.. ಈಗ ಮಹಾನ್ ಭೂಮಿಪುತ್ರ ದೊರೆಸ್ವಾಮಿಯವರನ್ನು..

ಕರ್ನಾಟಕದ ಗೆಳೆಯರನ್ನೆಲ್ಲಾ ಕಳೆದುಕೊಳ್ಳುತ್ತಾ ಹೋದೆ.. ಈಗ ಮಹಾನ್ ಭೂಮಿಪುತ್ರ ದೊರೆಸ್ವಾಮಿಯವರನ್ನು..

- Advertisement -
- Advertisement -

ನನ್ನ ಅಕೆಡೆಮಿಕ್ ಜೀವನವನ್ನು ಮತ್ತು ಆದಿವಾಸಿಗಳೊಂದಿಗಿನ ಕೆಲಸದ ವರ್ಷಗಳನ್ನು ಗುಜರಾತ್‌ನಲ್ಲಿ ಕಳೆದದ್ದು. ಗುಜರಾತ್ ಹಿಂದುತ್ವ ಪ್ರಯೋಗಾಲಯವಾಗಿ ಹೊರಹೊಮ್ಮಿದಾಗ, ಆ ರಾಜ್ಯದಿಂದ ಹೊರಹೋಗುವ ಆಲೋಚನೆಗಳು ನನ್ನನ್ನು ಕಾಡಲು ಪ್ರಾರಂಭಿಸಿದವು. ಸುಮಾರು ಒಂದು ದಶಕದ ಹಿಂದೆ, ನಾನು ಆ ಹೆಜ್ಜೆ ಇಡಲು ಹೆಚ್ಚುಕಡಿಮೆ ನಿರ್ಧರಿಸಿದ್ದೆ. ನಾನು ಕರ್ನಾಟಕದಲ್ಲಿ ವಾಸಿಸುವ ಬಗ್ಗೆ ಯೋಚಿಸುವುದು ಸಹಜವಾಗಿತ್ತು.
ನನ್ನ ಹೆಂಡತಿ ಕರ್ನಾಟಕ ಮೂಲದವಳು ಮತ್ತು ಸಾಹಿತ್ಯದ ವಿಷಯಕ್ಕೆ ಬಂದರೆ ನನ್ನ ಶಿಕ್ಷಕ ಶಾಂತಿನಾಥ್ ದೇಸಾಯಿ ಕರ್ನಾಟಕದವರು. ಆದರೆ ಈ ವೈಯಕ್ತಿಕ ಕಾರಣಗಳನ್ನು ಹೊರತುಪಡಿಸಿ, ನಾನು ಹಾಗೆ ಯೋಚಿಸಲು ಹೆಚ್ಚು ಬಲವಾದ ಕಾರಣವಿತ್ತು. ಆ ಸಮಯದಲ್ಲಿ ಬದುಕಿದ್ದ ಕರ್ನಾಟಕದ ಕೆಲವು ಮಹಾನ್ ವ್ಯಕ್ತಿಗಳಿಂದ ಬೌದ್ಧಿಕ ಆಳ-ಅರಿವು ಮತ್ತು ಸೈದ್ಧಾಂತಿಕ ಶಕ್ತಿಯನ್ನು ಪಡೆಯುವುದು ನನ್ನ ಉದ್ದೇಶವಾಗಿತ್ತು. ನಾನು ಎಂದಾದರೂ ಕರ್ನಾಟಕಕ್ಕೆ ಹೋದರೆ ನಾನು ಭೇಟಿಯಾಗಲು ಬಯಸುವ ವ್ಯಕ್ತಿಗಳ ಪಟ್ಟಿಯಲ್ಲಿ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಗೌರಿ ಲಂಕೇಶ್, ಎಸ್. ಶೆಟ್ಟರ್, ಎಂ.ಎಂ. ಕಲಬುರ್ಗಿ, ರೊದ್ದಂ ನರಸಿಂಹ ಮತ್ತು ಎಚ್.ಎಸ್. ದೊರೆಸ್ವಾಮಿ ಇದ್ದರು.

ಹಣೆಬರಹದ ಅತಿ ದೊಡ್ಡ ವಿಪರ್ಯಾಸ, ಡಾ. ಕಲ್ಬುರ್ಗಿ (1938-2015) ಹತ್ಯೆಯಾಗುವ ಮೊದಲು ನಾನು ಕರ್ನಾಟಕಕ್ಕೆ ನನ್ನ ವಾಸಸ್ಥಾನ ಬದಲಾಯಿಸುವ ಹೆಜ್ಜೆಯನ್ನು ಇಡಲು ಸಾಧ್ಯವಾಗಲೇ ಇಲ್ಲ. ಅವರ ಹತ್ಯೆಗೂ ಮೊದಲು ನಾನು ಅವನನ್ನು ಎರಡು ಬಾರಿ ಭೇಟಿಯಾಗಿದ್ದೆ ಮತ್ತು ಅವರ ಪ್ರಭಾವಿಸುವ ವಿದ್ವತ್ತಿಗಾಗಿ ಸ್ವಾಭಾವಿಕವಾಗಿ ಆಕರ್ಷಿತನಾಗಿದ್ದೆ. ಆದರೆ, ನಾವು ಯಾವುದೇ ದೀರ್ಘ ಸಂಭಾಷಣೆಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಡಾ. ಕಲಬುರ್ಗಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಧಾರವಾಡಕ್ಕೆ ತೆರಳುವ ನನ್ನ ನಿರ್ಧಾರ, ಭಾಗಶಃ ನಮ್ಮ ನಡುವೆ ನಡೆಯದೆ ಉಳಿದುಹೋದ ಸಂಭಾಷಣೆಯಿಂದ ತಪ್ಪಿತಸ್ಥ ಭಾವನೆ ಮೂಡಿ, ಅದಕ್ಕೆ ಪ್ರಾಯಶ್ಚಿತ್ತವೂ ಆಗಿತ್ತು .

2016ರಲ್ಲಿ, ನಾನು ಧಾರವಾಡಕ್ಕೆ ಬಂದು ನೆಲೆಸಿದೆ. ನನ್ನ ಬರುವಿಕೆಗೆ ಸುಮಾರು ಹದಿನೆಂಟು ತಿಂಗಳ ಮೊದಲು ಕಟ್ಟಿಕೊಂಡಿದ್ದ ’ನನ್ನ ಕಲ್ಪನೆಯ ಕರ್ನಾಟಕ’ದ ಪ್ರಮುಖ ಭಾಗವು ಈಗಾಗಲೇ ಕಾಣೆಯಾಗಿದೆ ಎಂದು ನನಗೆ ತಿಳಿದಿತ್ತು, ಯು.ಆರ್. ಅನಂತ ಮೂರ್ತಿ (1932-2014) ಆಗಸ್ಟ್ 2014ರಲ್ಲಿ ನಿಧನರಾದರು. ತಾವು ಜರ್ಜರಿತರಾಗಿದ್ದ ತಮ್ಮ ಕೊನೆ ತಿಂಗಳುಗಳಲ್ಲಿ ಒಂದು ಪುಟ್ಟ ಪುಸ್ತಕವನ್ನು ಅವರು ಬರೆದರು. ಹಿಂದುತ್ವದ ಉದಯದ ಕುರಿತು ಜಗತ್ತಿಗೆ ಎಚ್ಚರಿಸಲು, ಪುರಾವೆಗಳನ್ನು ಪ್ರಮಾಣೀಕರಿಸಿ, ಆತುರದಿಂದ ಬರೆದ ಪುಸ್ತಕವಾಗಿತ್ತು ಅದು. ನಾನು ಅವರನ್ನು ಸುಮಾರು ನಾಲ್ಕು ದಶಕಗಳಿಂದ ಬಲ್ಲೆನಾಗಿದ್ದರೂ, ಅವರ ಜೊತೆಗೆ ಸಂಭಾಷಣೆ ನಡೆಸುವ ಅವಕಾಶ ಮುಗಿದುಹೋಗಿತ್ತು.

ಡಾ. ಕಲಬುರ್ಗಿ ಅವರ ನಂತರ, ಸನಾತನಿಗಳು ಗೌರಿ ಲಂಕೇಶ್ (1962-2017) ಅವರನ್ನು ಕೊಲೆ ಮಾಡಿದರು. 1990ರ ದಶಕದಲ್ಲಿ ನಾನು ಗೌರಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದು. ನಾನು ಅವರನ್ನು ಎರಡನೇ ಬಾರಿಗೆ ಭೇಟಿಯಾದದ್ದು ಸಿದ್ದರಾಮಯ್ಯ ಅವರ ಆಗಿನ ನಿವಾಸದ ಹೊರಗೆ – ಅಲ್ಲಿ ನಾವು ಪ್ರತ್ಯೇಕವಾದ ನಿಯೋಗಗಳಲ್ಲಿ ಕಲ್ಬುರ್ಗಿ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಲು ಮನವಿ ಮಾಡಲು ಹೋಗಿದ್ದೆವು. ದೀರ್ಘಕಾಲ ಮರೆತುಹೋದ ಒಬ್ಬ ಸ್ನೇಹಿತನನ್ನು ಕಂಡುಕೊಂಡ ಸಂತೋಷವು ನಮ್ಮಿಬ್ಬರಿಗೂ ಆಗಿತ್ತು. ಆ ಆಕಸ್ಮಿಕ ಭೇಟಿಯ ನಂತರ ಕೆಲವೇ ದಿನಗಳಲ್ಲಿ ಗೌರಿ ಕೊಲ್ಲಲ್ಪಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಮತ್ತೊಬ್ಬ ಒಡನಾಡಿ ಕಳೆದುಹೋದರು.

ಪ್ರೊ. ಶೆಟ್ಟರ್ (1935-2020)ರ ವಿಷಯದಲ್ಲಿ, ನಾನು ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುತ್ತಿದ್ದೆ ಮತ್ತು ಕರ್ನಾಟಕದ ಹಾಗೂ ದಕ್ಷಿಣದ ಇತಿಹಾಸವನ್ನು ಮರು-ಶೋಧನೆಗೆ ಒಳಪಡಿಸುವ ಸರಣಿ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚಿಸಿದ್ದೆ. ಅವರು ಈ ವಿಚಾರದಿಂದ ಬಹಳ ಉತ್ಸುಕರಾಗಿದ್ದರು. ಒಬ್ಬ ಪ್ರಬಲ ವಿದ್ವಾಂಸ ತನ್ನ ಹಿರಿಮೆಯನ್ನು ಈ ಆಲೋಚನೆಯ ಹಿಂದೆ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ತಿಳಿದು ನಾನು ರೋಮಾಂಚನಗೊಂಡೆ. ಆದರೆ, ಆಲೋಚನೆಯು ಯಾವುದೇ ಸ್ಪಷ್ಟ ರೂಪವನ್ನು ತೆಗೆದುಕೊಳ್ಳುವ ಮೊದಲು ಅವರು ನಮ್ಮನ್ನಗಲಿದರು. ರೊದ್ದಂ ನರಸಿಂಹ ಅವರ ವಿಷಯದಲ್ಲಿ ಕೂಡ ನಾನು ಅದೃಷ್ಟಶಾಲಿಯಾಗಿರಲಿಲ್ಲ. ಶಿವ ವಿಶ್ವನಾಥನ್ ಮತ್ತು ಅನಂತಮೂರ್ತಿಯಂತಹ ಸ್ನೇಹಿತರಿಂದ ನಾನು ಅವರ ಬಗ್ಗೆ ಕೇಳಿದ್ದೆ, ಆದರೆ ಅವರೊಂದಿಗೆ ನೇರ ಸಂಪರ್ಕವಿರಲಿಲ್ಲ. ನಾನು ಅವರನ್ನು ದೂರದಿಂದ ಮೆಚ್ಚಿಕೊಂಡಿದ್ದೆ. ’ಭಾರತೀಯ ಚಿಂತನೆಯ ಧಾರೆ’ಯ ಬಗ್ಗೆ ತುಂಬಾ ಉತ್ಸುಕನಾಗಿ ಮತ್ತು ಆಳವಾಗಿ ಕೆಲಸ ಮಾಡಿದ ದೇಶದ ಕೆಲವೇ ಕೆಲವು ಚಿಂತಕರಲ್ಲಿ ಅವರು ಕೂಡ ಒಬ್ಬರು. ಭಾರತದಲ್ಲಿನ ನಿಯೋ-ಫ್ಯಾಸಿಸಂ ಎದುರು ಹೋರಾಡಬೇಕಾದರೆ, ಅನೇಕ ಭಾರತೀಯ ಆಲೋಚನಾ ಕ್ರಮಗಳಲ್ಲಿ ಯಾವುದಾದರೊಂದನ್ನು ಬಳಸಿ ಹೋರಾಡಿದರೆ ಯಶಸ್ಸು ಸಾಧ್ಯ ಎಂದು ನಾನು ಸದಾ ನಂಬಿದ್ದೆ. ಆ ದೃಷ್ಟಿಕೋನದಿಂದ, ರೊದ್ದಂ ನರಸಿಂಹರ ಕೆಲಸವು ಬಹಳ ಮಹತ್ವದ್ದಾಗಿದೆ. ಆದರೆ ಕರ್ನಾಟಕ ಮತ್ತು ಭಾರತ ಇಂದು ಅವರನ್ನು ಕಳೆದುಕೊಂಡಿದೆ.

ಗಿರೀಶ್ ಕಾರ್ನಾಡ್ (1938-2019) ಅವರೊಂದಿಗೆ ನಾನು ಈ ಹಿಂದೆ ಕರ್ನಾಟಕದ ಹೊರಗಡೆ ಮತ್ತು ಭಾರತದ ಹೊರಗಿನ ನಮ್ಮ ಭೇಟಿಗಳಲ್ಲಿ ಸ್ನೇಹ ಬೆಳೆಸಿಕೊಂಡಿದ್ದೆ. ಧಾರವಾಡಕ್ಕೆ ಬಂದನಂತರ ನಾನು ಅವರನ್ನು ಎರಡು ಬಾರಿ ಭೇಟಿಯಾಗಿದ್ದೆ. ಸಾಹಿತ್ಯ ಸಂಭ್ರಮಕ್ಕಾಗಿ ಅವರು ಧಾರವಾಡಕ್ಕೆ ಬಂದಿದ್ದಾಗ ಅವರು ಮನೆಗೆ ಊಟಕ್ಕೆ ಬಂದರು. ರಾಮಚಂದ್ರ ಗುಹಾ ಅವರೂ ಇದ್ದರು. ಅನೇಕ ವಿಷಯಗಳ ಕುರಿತು ನಮ್ಮ ಸಂಭಾಷಣೆ ಸಂತೋಷದಾಯಕವಾಗಿತ್ತು. ಮುಂದಿನ ಬಾರಿ ನಾನು ಅವರನ್ನು ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭೇಟಿಯಾದಾಗ ಅಲ್ಲಿ ಅವರು ’ನಾನು ನಗರ ನಕ್ಸಲೈಟ್’ ಎಂದು ಬರೆದ ಫಲಕವನ್ನು ಧರಿಸಿ ಬಂದರು. ಆದರೆ, ದುಃಖಕರವೆಂದರೆ, ಶೀಘ್ರದಲ್ಲೇ ಅವರೂ ನಮ್ಮನ್ನು ಅಗಲಿದರು.

ಎಚ್.ಎಸ್. ದೊರೆಸ್ವಾಮಿ (1918-2021) ಅವರನ್ನು ನನ್ನ ಹಾರೈಕೆ-ಪಟ್ಟಿಯಲ್ಲಿದ್ದ ಇತರರಿಗಿಂತ ಹೆಚ್ಚು ಬಾರಿ ಭೇಟಿಯಾದೆ. ನನ್ನ ಹಿರಿಯ ಸ್ನೇಹಿತರಾದ ಗುಜರಾತ್‌ನ ಮಹಾದೇವ್ ದೇಸಾಯಿ ಅವರ ಮಗ ನಾರಾಯಣಭಾಯ್ ದೇಸಾಯಿ ಅವರಿಂದ ನಾನು ದೊರೆಸ್ವಾಮಿ ಅವರ ಬಗ್ಗೆ ಮೊದಲು ಕೇಳಿದ್ದು. ಆದ್ದರಿಂದ, ನಾನು ಮೊದಲ ಬಾರಿಗೆ ದೊರೆಸ್ವಾಮಿಯವರನ್ನು ಭೇಟಿಯಾದಾಗ, ನನ್ನ ಸಂಬಂಧಿಯೊಬ್ಬರನ್ನು ಅಥವಾ ಹಲವು ದಶಕಗಳಿಂದ ಪರಿಚಿತರಾದ ಸ್ನೇಹಿತನನ್ನು ಭೇಟಿಯಾಗುತ್ತಿದ್ದೇನೆ ಎಂದೆನಿಸಿತು. ಗೌರಿ ಮೆಮೋರಿಯಲ್ ಟ್ರಸ್ಟ್ ಸಭೆಗಳು, ಭೇಟಿಯಾಗಲು ಮತ್ತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತಷ್ಟು ಸಂದರ್ಭಗಳನ್ನು ಒದಗಿಸಿದವು. ನಾನು ಅವರನ್ನು ಕೊನೆಯ ಬಾರಿಗೆ ಭೇಟಿಯಾದದ್ದು ಸುಮಾರು ಮೂರು ತಿಂಗಳ ಹಿಂದೆ ಅವರ ನಿವಾಸದಲ್ಲಿ. ಕರ್ನಾಟಕದ ಕೆಲವು ರಾಷ್ಟ್ರ ವಿರೋಧಿಗಳು ಅವರನ್ನು ’ದೇಶದ್ರೋಹಿ’ ಎಂದು ಬಿಂಬಿಸಲು ಪ್ರಯತ್ನಿಸಿದ್ದನ್ನು ನೋಡಿ ನನಗೆ ತೀವ್ರ ನೋವಾಗಿತ್ತು. ಆದರೆ, ಅವರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆ ಭೇಟಿಯಲ್ಲಿ ಅವರು ಕರ್ನಾಟಕದ ಬಡವರ್ಗಗಳ ಸುಧಾರಣೆಗೆ ಭೂ ಹಂಚಿಕೆ ಏಕೆ ಅಗತ್ಯ ಎಂಬುದರ ಕುರಿತು ಬಹಳ ದೀರ್ಘವಾಗಿ ಮಾತನಾಡಿದರು. ಸಾಮಾಜಿಕ ನ್ಯಾಯದ ಬಗ್ಗೆ ಅವರ ಬದ್ಧತೆ ಮತ್ತು ಅವರ ರಾಜಕೀಯ ಕುಶಾಗ್ರಮತಿ ಬಗ್ಗೆ ಹೇಳಲು ನನ್ನ ಬಳಿ ಪದಗಳಿಲ್ಲ. ಇತ್ತೀಚೆಗೆ ಅವರು ಕೋವಿಡ್ ಪಾಸಿಟಿವ್ ಆಗಿದ್ದರು, ಆದರೆ ವೈರಸ್ ವಿರುದ್ಧ ಹೋರಾಡಲು ಯಶಸ್ವಿಯಾದರು ಮತ್ತು ಬದುಕುಳಿದರು. ಅದು ಅದ್ಭುತ ಸುದ್ದಿ. ’104 ವರ್ಷದ ವ್ಯಕ್ತಿ ಕೋವಿಡ್ ಜಯಿಸಿದರು’ ಎಂಬುದು ಹೆಡ್‌ಲೈನ್ ಸುದ್ದಿ.

ದಂತಕತೆಯಂತಿದ್ದ ಎಚ್‌ಎಸ್‌ಡಿ ಇನ್ನಿಲ್ಲ ಎಂದು ತಿಳಿದಾಗ ನನ್ನ ಹೃದಯ ಕುಸಿದುಹೋಯಿತು. ’ನನ್ನ ಕಲ್ಪನೆಯ ಕರ್ನಾಟಕದ’ ಕೊನೆಯ ಉಳಿದ ಭಾಗ ಕೈಬಿಟ್ಟು ಹೋಗಿದೆ. ಶೂನ್ಯ ನನ್ನನ್ನು ಮರಗಟ್ಟಿಸಿದೆ. ಈ ಸಮಯದಲ್ಲಿ ದೂರವಾದ ಇಂತಹ ಮಹಾನ್ ಭೂಮಿಪುತ್ರರನ್ನು, ಚಿಂತನೆ ಮತ್ತು ಅಭಿರುಚಿಯ
ಬದುಕಿನ ಪ್ರಬಲ ನಾಯಕರನ್ನು ಕರ್ನಾಟಕ ಅದೇ ದೇಶ-ಕಾಲಗಳಲ್ಲಿ ಹೇಗೆ ಮತ್ತು ಎಲ್ಲಿ ಕಂಡುಕೊಳ್ಳಲಿದೆ?

 

ಪ್ರೊ. ಜಿ ಎನ್ ದೇವಿ

ಪ್ರೊ. ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

(ಕನ್ನಡಕ್ಕೆ): ಪಿ ಮಲ್ಲನಗೌಡರ್


ಇದನ್ನೂ ಓದಿ: ಮೋದಿ ವಿರುದ್ದ ಮಾತನಾಡಿದ್ದಕ್ಕೆ ದಾಖಲಿಸಿದ್ದ ದೇಶದ್ರೋಹ ಪ್ರಕರಣ ಸುಪ್ರೀಂನಿಂದ ರದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...