Homeಕರ್ನಾಟಕಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್

ಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್

- Advertisement -
- Advertisement -

“ಛೇ ಏನೂ ಮಾಡೋಕೆ ಆಗಲ್ಲ ಬಿಡು ಹೋಗ್ಲಿ” ಈ ವಾಕ್ಯವನ್ನು ತಾತನ ಬಾಯಲ್ಲಿ ಯಾರೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಎಂದೂ ನಿರಾಶವಾದಿಯಾಗಿದ್ದವರಲ್ಲ. ತಾತನ ಭೇಟಿ ಮಾಡಿದ ಪ್ರತಿ ಬಾರಿಯೂ ಎನರ್ಜಿ ಡಬಲ್ ಆಗುತ್ತಿದ್ದದ್ದು ನಿಜ. 103 ವಯಸ್ಸನ್ನು ದಾಟಿದ ವ್ಯಕ್ತಿಯೊಬ್ಬರು ಎಂಥ ಕೆಟ್ಟ ಸಂದರ್ಭದಲ್ಲಿಯೂ ನಿರಾಸರಾಗಾದೆ ಸ್ಫೂರ್ತಿಯ ಚಿಲುಮೆಯಂತೆ ಇರುವುದು ನಿಜಕ್ಕೂ ಅಚ್ಚರಿಯೇ ಹೌದು. ಸಂಘಟನೆಯ ಯಾವುದೇ ವ್ಯಕ್ತಿ ಅವರನ್ನು ಭೇಟಿ ಮಾಡಿದಾಗ “ಏನ್ ನಡೀತಿದೆ”? ಆ ಹೋರಾಟ ಏನ್ ಆಗ್ತಿದೆ, ಇದೇನಾಯಿತು, ನೋಡಿ ಹೀಗೆ ಮಾಡಿ, ಇಲ್ಲ ಅಂದ್ರೆ ಹಾಗೆ ಮಾಡಿ ಎನ್ನುತ್ತಾ ಸದಾ ಪರಿಹಾರವನ್ನು ಹೇಳುತ್ತಿದ್ದರೆ ಹೊರತು. ಕೇವಲ ದೂರುತ್ತಾ ಎಂದೂ ಕೂತವರಲ್ಲ.

ಫುಲ್‌ಟೈಮರ್‌ಗಳಿಗೆ ಫುಲ್‍ಖುಷ್

ಸಂಘಟನೆಯಲ್ಲಿ ಫುಲ್‌ಟೈಮರ್ ಆಗಿ ಕೆಲಸ ಮಾಡುತ್ತಿರುವ ಹಲವರು ಇದ್ದೇವೆ. ನಮ್ಮ ಬಗ್ಗೆ, ಅದೆಷ್ಟೋ ಹಿರಿಯರು, ಸಮಾಜದಲ್ಲಿ ಹೆಸರುವಾಸಿಯಾದವರು, ಸಾಹಿತಿಗಳು, ಈ ಎಲ್ಲರೂ ಸರ್ವೇ ಸಾಮಾನ್ಯವಾಗಿ ಹೇಳುವ ಮಾತೆಂದರೆ – “ಇದೆಲ್ಲಾ ಎಷ್ಟು ದಿನ ಅಂತ ಮಾಡ್ತೀರ, ನಿಮ್ಮ ಜೀವನ ನೀವು ನೋಡ್ಕಳಿ” ಎಂದು. ಆದರೆ ತಾತನ ಜೊತೆ ಮೊದಲ ಬಾರಿಗೆ ಒಂದು ದಿನ ಕಳೆಯುವ ಸಂದರ್ಭ ಬಂದಾಗ “ನೀನು ಏನು ಕೆಲಸ ಮಾಡುತ್ತೀಯಪ್ಪ” ಎಂದು ಕೇಳಿದಾಗ, ಅಂಜಿಕೆಯಿಂದಲೇ ಸಂಘಟನೆಯಲ್ಲೇ ಫುಲ್‌ಟೈಮರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದೆ. ಅದಕ್ಕೆ ಅವರು ಬಹಳ ಖುಷಿ ವ್ಯಕ್ತಪಡಿಸಿ, ಊರು, ವಿದ್ಯಾಭ್ಯಾಸ ಎಲ್ಲವನ್ನೂ ವಿಚಾರಿಸಿಕೊಂಡು ಹಲವಾರು ಸಲಹೆಗಳನ್ನು ನೀಡಿದರು. “ನಿಮ್ಮ ಜೀವನ ನೋಡ್ಕಳಿ” ಎನ್ನುವುದಕ್ಕೆ ವಿರುದ್ಧವಾಗಿ ತಾತ “ಸಂಘಟನೆಯಲ್ಲಿ ಕೆಲಸ ಮಾಡುವುದು ಸಾರ್ಥಕತೆಯ ಜೀವನ ನಡೆಸಿದಂತೆ ಎಂದು ನನ್ನಲ್ಲಿ ಹೆಮ್ಮೆ ಮೂಡುವಂತೆ ಮಾಡಿದವರು. ಅಲ್ಲದೆ ಸಮಾಜ ಸೇವೆ ಮಾಡುವುದೆಂದರೆ ಸ್ವಯಂ ಪ್ರೇರಣೆಯಿಂದ ಬಡತನವನ್ನು ಅಪ್ಪಿಕೊಳ್ಳುವುದು ಎಂದು ಯಾವಾಗಲೂ ಹೇಳುತ್ತಾ ನಮ್ಮನ್ನು ಗಟ್ಟಿ ಮಾಡುತ್ತಿದ್ದರು. ಕರಾಳ ಕೃಷಿ ಕಾಯ್ದೆ ವಿರೋಧಿಸಿ ನವೆಂಬರ್ 2020ರಲ್ಲಿ ಪ್ರತಿಭಟನೆಯ ಮಾಹಿತಿಯನ್ನು ಆಸ್ಪತ್ರೆಯಿಂದಲೇ ಮಾಹಿತಿ ಪಡೆಯುತ್ತಿದ್ದ ಅವರು ಕಾರ್ಯಕರ್ತರ ಬಂಧನವಾಗಿದೆ ಎಂದು ತಿಳಿದಮೇಲೆ “ಹೌದ, ಒಳ್ಳೇದು ಇದರಿಂದ ಹುಡುಗರೆಲ್ಲಾ ಗಟ್ಟಿಯಾಗುತ್ತಾರೆ, ಒಂದೆರೆಡು ಲಾಠಿ ಏಟು ಬಿದ್ದರೆ ರಾಜಕೀಯವಾಗಿ ಮತ್ತಷ್ಟು ಗಟ್ಟಿಯಾಗುತ್ತಾರೆ” ಎಂದು ಹೇಳಿ ನಮ್ಮಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿದ್ದರು.

ದೊರೆಸ್ವಾಮಿ, doreswamy

ಕಾರ್ಯಕರ್ತರ ಶ್ರಮವನ್ನು ಗುರುತಿಸಿ ಗೌರವಿಸುವ ಅಪರೂಪದ ವ್ಯಕ್ತಿ

ನಾಯಕರು ಎಂದರೆ ಕಾರ್ಯಕರ್ತರಿಗಿಂತ ಭಿನ್ನ ಮತ್ತು ಅವರಿಗಿಂತ ಮೇಲೆ ಎನ್ನುವ ಧೋರಣೆ ಈಗ ಸಾಮಾನ್ಯವಾಗಿರುವುದು ದುರಂತ. ದೊರೆಸ್ವಾಮಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ಮನೆಗೆ ಬಂದ ಸಂದರ್ಭದಲ್ಲಿ, ಅವರ ಮನೆಯಲ್ಲಿ ಉಳಿದುಕೊಂಡು ರಾತ್ರಿ ಶೌಚಕ್ಕೆ ಹೋಗುವಾಗ ಸಹಾಯ ಮಾಡಲು ನನಗೆ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ತಿಳಿಸಿದ್ದರು. ಅಂತೆಯೇ ಮೊದಲ ಬಾರಿಗೆ ತಾತನ ಮನೆಗೆ ಹೋದ ದಿನ, ನಾನು ಅನ್ನಭಾಗ್ಯ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರ ಪ್ರತಿಭಟನೆಯ ಕೆಲಸ ಮುಗಿಸಿಕೊಂಡು ಹೋಗಿದ್ದನ್ನು ತಾತ ತಿಳಿದುಕೊಂಡರು. ರಾತ್ರಿ ಅಲ್ಲಿಯೇ ಮಲಗಿ ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದೆ. ತಾತ ಅದಾಗಲೇ ಪೇಪರ್ ಓದುತ್ತಾ ಕುಳಿತಿದ್ದರು. ನಾನು ಎಚ್ಚರವಾಗಿದ್ದು ಗಮನಿಸಿ “ನೀವು ತುಂಬಾ ಸುಸ್ತಾಗಿದ್ರಿ ಅನಿಸುತ್ತೆ, ಅದಕ್ಕೆ ಎಬ್ಬಿಸಲಿಲ್ಲ. ಮಲಗಿದ ತಕ್ಷಣ ಗೊರಕೆ ಹೊಡಿಯೋಕೆ ಶುರು ಮಾಡಿದ್ರಿ, ಪ್ರತಿಭಟನೆಯ ಕೆಲಸ ಜಾಸ್ತಿ ಇತ್ತು ಅನಿಸುತ್ತೆ, ಅದಕ್ಕೆ ರಾತ್ರಿ ಟಾಯ್ಲೆಟ್‌ಗೆ ಒಬ್ಬನೇ ಹೋಗಿಬಂದೆ ನಿಮ್ಮನ್ನು ಎಬ್ಬಿಸಲಿಲ್ಲ” ಎಂದರು. ಅವರು ಆ ಹೊತ್ತಲ್ಲಿ ಸಹಾಯವಿಲ್ಲದೆ ಒಬ್ಬರೆ ನಡೆಯುವುದು ಕಷ್ಟದ ಕೆಲಸವಾಗಿತ್ತು. ಆ ಕಾರಣಕ್ಕಾಗಿಯೇ ನಾನು ಅಲ್ಲಿಗೆ ಹೋಗಿದ್ದರೂ ಕೂಡ, ದಣಿದುಕೊಂಡ ಬಂದಿದ್ದಾನೆ ಎಂದು ತಿಳಿದು, ತಾವೇ ನಡೆದು ಶೌಚಕ್ಕೆ ಹೋಗಿಬಂದಿದ್ದರು! ಎಲ್ಲರನ್ನೂ ಅವರು ಅತ್ಯಂತ ಮಾನವೀಯ ದೃಷ್ಟಿಯಿಂದ ನೋಡುತ್ತಿದ್ದರು ಅನ್ನುವುದಕ್ಕೆ ಇದು ಉದಾಹರಣೆ. ಆದರೆ ಅಂದು ರಾತ್ರಿ ನಾನು ಎದ್ದು ಅವರಿಗೆ ಸಹಾಯ ಮಾಡಲಿಲ್ಲ ಎನ್ನುವುದು ಇಂದಿಗೂ ಕಾಡುತ್ತದೆ.

ನಮಗೆಲ್ಲಾ ತಿಳಿದಿರುವಂತೆ ತಾತ ನಿತ್ಯ ಐದು ದಿನಪತ್ರಿಕೆಗಳನ್ನು ತಪ್ಪದೇ ಓದುತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದಾಗಲೂ ಸಹ ನಮ್ಮಲ್ಲಿ ಕೇಳಿ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದರು. ಅಲ್ಲದೆ ಅವರೊಡನೆ ಇರುವವರನ್ನು ಒದುವಂತೆ ಒತ್ತಾಯಿಸುತ್ತಿದ್ದರು. ಓದಿನ ನಂತರ ಚರ್ಚೆ ಮಾಡುತ್ತಿದ್ದರು. ಹಲವು ಬಾರಿ ಗಂಭೀರವಾದ ಸೈದ್ಧಾಂತಿಕ ಚರ್ಚೆಯನ್ನು ನಡೆಸುತ್ತಿದ್ದರು. ತಾವು ಒಪ್ಪದ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿ ಅದಕ್ಕೆ ಪರ್ಯಾಯ ವಿಚಾರವನ್ನು ಮುಂದಿಡುತ್ತಿದ್ದರು. ಇಂತಹ ಅಪರೂಪದ ಸ್ಫೂರ್ತಿಯ ಚಿಲುಮೆಯ ಜೊತೆ ಹೋರಾಟಗಳಲ್ಲಿ ಭಾಗಿಯಾಗಿದ್ದು, ಅವರ ಜೊತೆ ಕೆಲವು ದಿನಗಳು ಕಳೆದದ್ದು ನಿಜಕ್ಕು ನಮ್ಮಂಥವರ ಭಾಗ್ಯವೇ ಹೌದು. ಕೊನೆಯವರೆಗೂ ನಿಜಕ್ಕೂ ಸ್ಫೂರ್ತಿಯಿಂದ ಬದುಕಿದ್ದವರು ಅವರು. ಅವರು ಮುದಕರು ಆಗಲೇ ಇಲ್ಲ 103 ವರ್ಷದ ಯುವಕರಾಗಿಯೇ ದೈಹಿಕವಾಗಿ ನಮ್ಮಿಂದ ಅಗಲಿದ್ದಾರೆ. ಬದುಕಿದರೆ ನಿಮ್ಮಂಥೆ ಬದುಕಬೇಕು. ಶ್ರದ್ಧಾಂಜಲಿಗಳು ತಾತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೇಡಂ ದಯವಿಟ್ಟು ನನಗೆ ಒಂದು ಮಾಹಿತಿ ಬೇಕಿದೆ ಅದೇನು ಅಂದರೆ. ಇಂದಿರಾ ಗಾಂಧಿ ಅವರ ಕುಟುಂಬದ ಜಾತಿ ಅವರ ಧರ್ಮ ಅವರು ಎಲ್ಲಿಂದ ವಲಸೆ ಬಂದಿದ್ದು. ಅವರಿಗೆ ಗಾಂಧಿ ಅನ್ನೋ ಮನೆತನ ಹೇಗಾಯಿತು ಮತ್ತು ಅವರು ಭಾರತ ದೇಶದ ಸದಸ್ಯತ್ವ ಪಡೆದಿದ್ದು ಹೇಗೆ ದಯಮಾಡಿ ನನಗೆ ಈ ಎಲ್ಲಾ ಮಾಹಿತಿ ಬೇಕಿದೆ ದಯವಿಟ್ಟು ಆದಷ್ಟು ಬೇಗ ನಿಮ್ಮ ಮಾಹಿತಿಗಾಗಿ ಕಾದಿರುತ್ತೇನೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...