Homeಕರ್ನಾಟಕಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್

ಎಚ್ ಎಸ್ ದೊರೆಸ್ವಾಮಿ; ಜೇಬಲ್ಲೇ ಪರಿಹಾರ ಇಟ್ಟುಕೊಳ್ಳುತ್ತಿದ್ದ ಎನರ್ಜಿ ಬೂಸ್ಟರ್

- Advertisement -
- Advertisement -

“ಛೇ ಏನೂ ಮಾಡೋಕೆ ಆಗಲ್ಲ ಬಿಡು ಹೋಗ್ಲಿ” ಈ ವಾಕ್ಯವನ್ನು ತಾತನ ಬಾಯಲ್ಲಿ ಯಾರೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಎಂದೂ ನಿರಾಶವಾದಿಯಾಗಿದ್ದವರಲ್ಲ. ತಾತನ ಭೇಟಿ ಮಾಡಿದ ಪ್ರತಿ ಬಾರಿಯೂ ಎನರ್ಜಿ ಡಬಲ್ ಆಗುತ್ತಿದ್ದದ್ದು ನಿಜ. 103 ವಯಸ್ಸನ್ನು ದಾಟಿದ ವ್ಯಕ್ತಿಯೊಬ್ಬರು ಎಂಥ ಕೆಟ್ಟ ಸಂದರ್ಭದಲ್ಲಿಯೂ ನಿರಾಸರಾಗಾದೆ ಸ್ಫೂರ್ತಿಯ ಚಿಲುಮೆಯಂತೆ ಇರುವುದು ನಿಜಕ್ಕೂ ಅಚ್ಚರಿಯೇ ಹೌದು. ಸಂಘಟನೆಯ ಯಾವುದೇ ವ್ಯಕ್ತಿ ಅವರನ್ನು ಭೇಟಿ ಮಾಡಿದಾಗ “ಏನ್ ನಡೀತಿದೆ”? ಆ ಹೋರಾಟ ಏನ್ ಆಗ್ತಿದೆ, ಇದೇನಾಯಿತು, ನೋಡಿ ಹೀಗೆ ಮಾಡಿ, ಇಲ್ಲ ಅಂದ್ರೆ ಹಾಗೆ ಮಾಡಿ ಎನ್ನುತ್ತಾ ಸದಾ ಪರಿಹಾರವನ್ನು ಹೇಳುತ್ತಿದ್ದರೆ ಹೊರತು. ಕೇವಲ ದೂರುತ್ತಾ ಎಂದೂ ಕೂತವರಲ್ಲ.

ಫುಲ್‌ಟೈಮರ್‌ಗಳಿಗೆ ಫುಲ್‍ಖುಷ್

ಸಂಘಟನೆಯಲ್ಲಿ ಫುಲ್‌ಟೈಮರ್ ಆಗಿ ಕೆಲಸ ಮಾಡುತ್ತಿರುವ ಹಲವರು ಇದ್ದೇವೆ. ನಮ್ಮ ಬಗ್ಗೆ, ಅದೆಷ್ಟೋ ಹಿರಿಯರು, ಸಮಾಜದಲ್ಲಿ ಹೆಸರುವಾಸಿಯಾದವರು, ಸಾಹಿತಿಗಳು, ಈ ಎಲ್ಲರೂ ಸರ್ವೇ ಸಾಮಾನ್ಯವಾಗಿ ಹೇಳುವ ಮಾತೆಂದರೆ – “ಇದೆಲ್ಲಾ ಎಷ್ಟು ದಿನ ಅಂತ ಮಾಡ್ತೀರ, ನಿಮ್ಮ ಜೀವನ ನೀವು ನೋಡ್ಕಳಿ” ಎಂದು. ಆದರೆ ತಾತನ ಜೊತೆ ಮೊದಲ ಬಾರಿಗೆ ಒಂದು ದಿನ ಕಳೆಯುವ ಸಂದರ್ಭ ಬಂದಾಗ “ನೀನು ಏನು ಕೆಲಸ ಮಾಡುತ್ತೀಯಪ್ಪ” ಎಂದು ಕೇಳಿದಾಗ, ಅಂಜಿಕೆಯಿಂದಲೇ ಸಂಘಟನೆಯಲ್ಲೇ ಫುಲ್‌ಟೈಮರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದೆ. ಅದಕ್ಕೆ ಅವರು ಬಹಳ ಖುಷಿ ವ್ಯಕ್ತಪಡಿಸಿ, ಊರು, ವಿದ್ಯಾಭ್ಯಾಸ ಎಲ್ಲವನ್ನೂ ವಿಚಾರಿಸಿಕೊಂಡು ಹಲವಾರು ಸಲಹೆಗಳನ್ನು ನೀಡಿದರು. “ನಿಮ್ಮ ಜೀವನ ನೋಡ್ಕಳಿ” ಎನ್ನುವುದಕ್ಕೆ ವಿರುದ್ಧವಾಗಿ ತಾತ “ಸಂಘಟನೆಯಲ್ಲಿ ಕೆಲಸ ಮಾಡುವುದು ಸಾರ್ಥಕತೆಯ ಜೀವನ ನಡೆಸಿದಂತೆ ಎಂದು ನನ್ನಲ್ಲಿ ಹೆಮ್ಮೆ ಮೂಡುವಂತೆ ಮಾಡಿದವರು. ಅಲ್ಲದೆ ಸಮಾಜ ಸೇವೆ ಮಾಡುವುದೆಂದರೆ ಸ್ವಯಂ ಪ್ರೇರಣೆಯಿಂದ ಬಡತನವನ್ನು ಅಪ್ಪಿಕೊಳ್ಳುವುದು ಎಂದು ಯಾವಾಗಲೂ ಹೇಳುತ್ತಾ ನಮ್ಮನ್ನು ಗಟ್ಟಿ ಮಾಡುತ್ತಿದ್ದರು. ಕರಾಳ ಕೃಷಿ ಕಾಯ್ದೆ ವಿರೋಧಿಸಿ ನವೆಂಬರ್ 2020ರಲ್ಲಿ ಪ್ರತಿಭಟನೆಯ ಮಾಹಿತಿಯನ್ನು ಆಸ್ಪತ್ರೆಯಿಂದಲೇ ಮಾಹಿತಿ ಪಡೆಯುತ್ತಿದ್ದ ಅವರು ಕಾರ್ಯಕರ್ತರ ಬಂಧನವಾಗಿದೆ ಎಂದು ತಿಳಿದಮೇಲೆ “ಹೌದ, ಒಳ್ಳೇದು ಇದರಿಂದ ಹುಡುಗರೆಲ್ಲಾ ಗಟ್ಟಿಯಾಗುತ್ತಾರೆ, ಒಂದೆರೆಡು ಲಾಠಿ ಏಟು ಬಿದ್ದರೆ ರಾಜಕೀಯವಾಗಿ ಮತ್ತಷ್ಟು ಗಟ್ಟಿಯಾಗುತ್ತಾರೆ” ಎಂದು ಹೇಳಿ ನಮ್ಮಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿದ್ದರು.

ದೊರೆಸ್ವಾಮಿ, doreswamy

ಕಾರ್ಯಕರ್ತರ ಶ್ರಮವನ್ನು ಗುರುತಿಸಿ ಗೌರವಿಸುವ ಅಪರೂಪದ ವ್ಯಕ್ತಿ

ನಾಯಕರು ಎಂದರೆ ಕಾರ್ಯಕರ್ತರಿಗಿಂತ ಭಿನ್ನ ಮತ್ತು ಅವರಿಗಿಂತ ಮೇಲೆ ಎನ್ನುವ ಧೋರಣೆ ಈಗ ಸಾಮಾನ್ಯವಾಗಿರುವುದು ದುರಂತ. ದೊರೆಸ್ವಾಮಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ಮನೆಗೆ ಬಂದ ಸಂದರ್ಭದಲ್ಲಿ, ಅವರ ಮನೆಯಲ್ಲಿ ಉಳಿದುಕೊಂಡು ರಾತ್ರಿ ಶೌಚಕ್ಕೆ ಹೋಗುವಾಗ ಸಹಾಯ ಮಾಡಲು ನನಗೆ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ತಿಳಿಸಿದ್ದರು. ಅಂತೆಯೇ ಮೊದಲ ಬಾರಿಗೆ ತಾತನ ಮನೆಗೆ ಹೋದ ದಿನ, ನಾನು ಅನ್ನಭಾಗ್ಯ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರ ಪ್ರತಿಭಟನೆಯ ಕೆಲಸ ಮುಗಿಸಿಕೊಂಡು ಹೋಗಿದ್ದನ್ನು ತಾತ ತಿಳಿದುಕೊಂಡರು. ರಾತ್ರಿ ಅಲ್ಲಿಯೇ ಮಲಗಿ ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದೆ. ತಾತ ಅದಾಗಲೇ ಪೇಪರ್ ಓದುತ್ತಾ ಕುಳಿತಿದ್ದರು. ನಾನು ಎಚ್ಚರವಾಗಿದ್ದು ಗಮನಿಸಿ “ನೀವು ತುಂಬಾ ಸುಸ್ತಾಗಿದ್ರಿ ಅನಿಸುತ್ತೆ, ಅದಕ್ಕೆ ಎಬ್ಬಿಸಲಿಲ್ಲ. ಮಲಗಿದ ತಕ್ಷಣ ಗೊರಕೆ ಹೊಡಿಯೋಕೆ ಶುರು ಮಾಡಿದ್ರಿ, ಪ್ರತಿಭಟನೆಯ ಕೆಲಸ ಜಾಸ್ತಿ ಇತ್ತು ಅನಿಸುತ್ತೆ, ಅದಕ್ಕೆ ರಾತ್ರಿ ಟಾಯ್ಲೆಟ್‌ಗೆ ಒಬ್ಬನೇ ಹೋಗಿಬಂದೆ ನಿಮ್ಮನ್ನು ಎಬ್ಬಿಸಲಿಲ್ಲ” ಎಂದರು. ಅವರು ಆ ಹೊತ್ತಲ್ಲಿ ಸಹಾಯವಿಲ್ಲದೆ ಒಬ್ಬರೆ ನಡೆಯುವುದು ಕಷ್ಟದ ಕೆಲಸವಾಗಿತ್ತು. ಆ ಕಾರಣಕ್ಕಾಗಿಯೇ ನಾನು ಅಲ್ಲಿಗೆ ಹೋಗಿದ್ದರೂ ಕೂಡ, ದಣಿದುಕೊಂಡ ಬಂದಿದ್ದಾನೆ ಎಂದು ತಿಳಿದು, ತಾವೇ ನಡೆದು ಶೌಚಕ್ಕೆ ಹೋಗಿಬಂದಿದ್ದರು! ಎಲ್ಲರನ್ನೂ ಅವರು ಅತ್ಯಂತ ಮಾನವೀಯ ದೃಷ್ಟಿಯಿಂದ ನೋಡುತ್ತಿದ್ದರು ಅನ್ನುವುದಕ್ಕೆ ಇದು ಉದಾಹರಣೆ. ಆದರೆ ಅಂದು ರಾತ್ರಿ ನಾನು ಎದ್ದು ಅವರಿಗೆ ಸಹಾಯ ಮಾಡಲಿಲ್ಲ ಎನ್ನುವುದು ಇಂದಿಗೂ ಕಾಡುತ್ತದೆ.

ನಮಗೆಲ್ಲಾ ತಿಳಿದಿರುವಂತೆ ತಾತ ನಿತ್ಯ ಐದು ದಿನಪತ್ರಿಕೆಗಳನ್ನು ತಪ್ಪದೇ ಓದುತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದಾಗಲೂ ಸಹ ನಮ್ಮಲ್ಲಿ ಕೇಳಿ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದರು. ಅಲ್ಲದೆ ಅವರೊಡನೆ ಇರುವವರನ್ನು ಒದುವಂತೆ ಒತ್ತಾಯಿಸುತ್ತಿದ್ದರು. ಓದಿನ ನಂತರ ಚರ್ಚೆ ಮಾಡುತ್ತಿದ್ದರು. ಹಲವು ಬಾರಿ ಗಂಭೀರವಾದ ಸೈದ್ಧಾಂತಿಕ ಚರ್ಚೆಯನ್ನು ನಡೆಸುತ್ತಿದ್ದರು. ತಾವು ಒಪ್ಪದ ವಿಚಾರವನ್ನು ಸೂಕ್ಷ್ಮವಾಗಿ ತಿಳಿಸಿ ಅದಕ್ಕೆ ಪರ್ಯಾಯ ವಿಚಾರವನ್ನು ಮುಂದಿಡುತ್ತಿದ್ದರು. ಇಂತಹ ಅಪರೂಪದ ಸ್ಫೂರ್ತಿಯ ಚಿಲುಮೆಯ ಜೊತೆ ಹೋರಾಟಗಳಲ್ಲಿ ಭಾಗಿಯಾಗಿದ್ದು, ಅವರ ಜೊತೆ ಕೆಲವು ದಿನಗಳು ಕಳೆದದ್ದು ನಿಜಕ್ಕು ನಮ್ಮಂಥವರ ಭಾಗ್ಯವೇ ಹೌದು. ಕೊನೆಯವರೆಗೂ ನಿಜಕ್ಕೂ ಸ್ಫೂರ್ತಿಯಿಂದ ಬದುಕಿದ್ದವರು ಅವರು. ಅವರು ಮುದಕರು ಆಗಲೇ ಇಲ್ಲ 103 ವರ್ಷದ ಯುವಕರಾಗಿಯೇ ದೈಹಿಕವಾಗಿ ನಮ್ಮಿಂದ ಅಗಲಿದ್ದಾರೆ. ಬದುಕಿದರೆ ನಿಮ್ಮಂಥೆ ಬದುಕಬೇಕು. ಶ್ರದ್ಧಾಂಜಲಿಗಳು ತಾತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೇಡಂ ದಯವಿಟ್ಟು ನನಗೆ ಒಂದು ಮಾಹಿತಿ ಬೇಕಿದೆ ಅದೇನು ಅಂದರೆ. ಇಂದಿರಾ ಗಾಂಧಿ ಅವರ ಕುಟುಂಬದ ಜಾತಿ ಅವರ ಧರ್ಮ ಅವರು ಎಲ್ಲಿಂದ ವಲಸೆ ಬಂದಿದ್ದು. ಅವರಿಗೆ ಗಾಂಧಿ ಅನ್ನೋ ಮನೆತನ ಹೇಗಾಯಿತು ಮತ್ತು ಅವರು ಭಾರತ ದೇಶದ ಸದಸ್ಯತ್ವ ಪಡೆದಿದ್ದು ಹೇಗೆ ದಯಮಾಡಿ ನನಗೆ ಈ ಎಲ್ಲಾ ಮಾಹಿತಿ ಬೇಕಿದೆ ದಯವಿಟ್ಟು ಆದಷ್ಟು ಬೇಗ ನಿಮ್ಮ ಮಾಹಿತಿಗಾಗಿ ಕಾದಿರುತ್ತೇನೆ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...