Homeಚಳವಳಿಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

ಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

- Advertisement -
- Advertisement -

ಹೇಳಬೇಕಾದ ಮಾತು
ಗಂಟಲಲ್ಲೇ ಉಳಿದಿದೆ..
ಕಣ್ಣಂಚಿಂದ ಜಾರಿದ ಹನಿಗಳು
ನೆನಪುಗಳ ಒತ್ತರಿಸಿ ತಂದಿವೆ..
ಬರೆದು ಕಳೆದುಕೊಳ್ಳಲಾಗದ ನೋವಿದು..
ಪ್ರಿಯ ಸಂಗಾತಿ,
ಹೀಗೆ ಎದ್ದು ನಡೆದರೆ ಹೇಗೆ?
ನಾವಾದರೂ ಎಳೆಯರು
ಸಹಿಸೋದು ಹೇಗೆ?

ಸುಮಾರು ಒಂಭತ್ತು ವರ್ಷಗಳಿಂದ ಸಹಯಾನದ ಪರಿವಾರದಲ್ಲಿ ಮನೆ ಮಗನಂತೆ ಬೆಳೆದವನು ನಾನು. ವಿಠ್ಠಲ ಸರ್ ಎಂದರೆ ಸದಾ ಅಚ್ಚರಿ ನನಗೆ. ಅವರ ಸಂಘಟನಾ ಶಕ್ತಿ, ಅಪಾರ ಶಿಸ್ತು, ಅಗಾಧ ಓದು ಮತ್ತು ಚಳುವಳಿಯ ಕುಲುಮೆಯಲಿ ಹದಗೊಂಡ ಚಿಂತನೆ, ಆ ಚಿಂತನೆಗಳನ್ನು ತೆರೆದಿಡುವ ಮಾತಿನ ಕೌಶಲ್ಯ, ಎದೆ ತುಂಬಿ ಹಂಚುತ್ತಿದ್ದ ಪ್ರೀತಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಮಹತ್ವ ನೀಡುತ್ತಿದ್ದ ಅವರ ವಿಶಾಲ ಗುಣ ನನ್ನನ್ನು ಸದಾ ಬೆರಗುಗೊಳಿಸುತ್ತಿತ್ತು. ಅವರ ಇನ್ನೊಂದು ವಿಶೇಷತೆಯೆಂದರೆ ಇಷ್ಟೆಲ್ಲಾ ಎತ್ತರಕ್ಕೆ ಬೆಳೆದಿದ್ದರೂ ತಮ್ಮೊಳಗಿನ ಮುಗ್ಧತೆಯನ್ನು ಹಾಗೆಯೇ ಕಾಪಿಟ್ಟುಕೊಂಡು ಬಂದಿದ್ದರು. ಮಕ್ಕಳ ರಜಾ ಶಿಬಿರಗಳಲ್ಲಿ ತಾವೂ ಒಬ್ಬ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತಿದ್ದರು, ನಮ್ಮಂತ ಯುವಜನರೊಡನೆ ಉತ್ಸಾಹದ ಚಿಲುಮೆಯಂತೆ ಬೆರೆತು ಹೋಗುತ್ತಿದ್ದರು. ಅವರ ವಿಧ್ಯಾರ್ಥಿಗಳು ನೆನೆಯುವಂತೆ ಅವರೊಬ್ಬ ಆಪ್ತ ಗೆಳೆಯನಂತಹ ಗುರು. ಸಹಯಾನದ ಅಂಗಳದಲ್ಲಿ ನಾವೆಲ್ಲಾ ಯುವಕರು ನಡುರಾತ್ರಿಯವರೆಗೆ ವಿಠ್ಠಲ ಸರ್ ಸುತ್ತ ಕುಳಿತು ಅವರ ಆಪ್ತವಾದ ಮಾತುಗಳಿಗೆ ಕಿವಿಯಾಗುತ್ತಿದ್ದೆವು. ಅವರೂ ಅಷ್ಟೇ ಆಸಕ್ತಿಯಿಂದ ನಮ್ಮ ಮಾತುಗಳನ್ನ ಆಲಿಸುತ್ತಿದ್ದರು. ಹೀಗೆಲ್ಲಾ ನಮ್ಮ ನಡುವೆ ಚೈತನ್ಯದ ಚಿಲುಮೆಯಂತಿದ್ದ ಅವರು ಈಗ ಇಲ್ಲವೆಂಬುದನ್ನ ಮನಸ್ಸು ಒಪ್ಪುತ್ತಲೇ ಇಲ್ಲ!

ವಿಠ್ಠಲ ಸರ್ ಅಗಲುವಿಕೆಯಿಂದ ನಿಜಕ್ಕೂ ತುಂಬಲಾರದ ನಷ್ಟವಾದದ್ದು ಹೊಸ ತಲೆಮಾರಿಗೆ. ಬಹುಶಃ ಇವರಷ್ಟು ಹೊಸ ತಲೆಮಾರನ್ನು ಪ್ರೀತಿಸಿದ, ಭರವಸೆ ಇಟ್ಟ ಮತ್ತು ಅವರಿಗಾಗಿ ಶ್ರಮಿಸಿದ ಮತ್ತೊಬ್ಬ ಸಂಘಟಕರನ್ನು ಕಾಣುವುದು ಕಷ್ಟ. ಸಹಯಾನದ ವೇದಿಕೆಯಲ್ಲಿ ನಡೆವ ಪ್ರತಿಯೊಂದು ಕಾರ್ಯಕ್ರಮವೂ ಹೊಸ ತಲೆಮಾರನ್ನು, ವಿಧ್ಯಾರ್ಥಿಗಳನ್ನು, ಮಕ್ಕಳನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡೇ ನಡೆಯುತ್ತಿದ್ದವು. ಸಂವಿಧಾನ ಓದು ಎಂಬ ಚಳುವಳಿ ರೂಪದ ಅಭಿಯಾನವೂ ಕೂಡ ರಾಜ್ಯದ ಮೂಲೆ ಮೂಲೆ ಸಂಚರಿಸಿ ಲಕ್ಷಾಂತರ ವಿಧ್ಯಾರ್ಥಿಗಳನ್ನು ತಲುಪಲು ಸಾಧ್ಯವಾದದ್ದು ಕೂಡ, ಅವರ ಹೊಸತಲೆಮಾರಿನ ಬಗೆಗಿನ ಅಗಾಧವಾದ ಕಾಳಜಿಯಿಂದಲೇ. ಅಧ್ಯಯನ ಶಿಬಿರಗಳಲ್ಲಿ ಯುವಜನರು ವಿಠ್ಠಲ ಸರ್ ಮಾತುಗಳನ್ನು ಗಂಟೆಗಟ್ಟಲೆ ಆಲಿಸುತ್ತಿದ್ದರು, ಅಪಾರ ಒಳನೋಟಗಳನ್ನು ತೆರೆದಿಡುತ್ತಿದ್ದ ಅವರ ಮಾತುಗಳಲ್ಲಿ ಯುವಜನರು ತಮ್ಮ ವೈಚಾರಿಕತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದರು. ತಾವು ಸಾಗಬೇಕಾದ ದಾರಿಯನ್ನು ನಿಚ್ಚಳಗೊಳಿಸಿಕೊಳ್ಳುತ್ತಿದ್ದರು. ನನ್ನನ್ನು ಸೇರಿ ಅವರಿಂದ ಪ್ರಭಾವಿತರಾದ ದೊಡ್ಡ ಯುವಸಮುದಾಯವೇ ಈ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹರಡಿಕೊಂಡಿವೆ. ಮುಂದೆ ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಕೂಡ ಈ ಹೊಸತಲೆಮಾರಿನ ಮೇಲಿದೆ.

ಮೂಲ ಸೌಕರ್ಯಗಳೇ ತಲುಪಿರದ ಕೆರೆಕೋಣದಂತಹ ಒಂದು ಪುಟ್ಟ ಹಳ್ಳಿಯಲ್ಲಿ, ಸಹಯಾನವನ್ನು ಚಳುವಳಿಯ ರೂಪದಲ್ಲಿ ಹುಟ್ಟುಹಾಕಿ, ಇಂದಿಗೆ ಅದು ರಾಜ್ಯದಲ್ಲೇ ಮಾದರಿಯಾಗಬಲ್ಲ ಒಂದು ಸಂಘಟನೆಯಾಗಿ ರೂಪುಗೊಳ್ಳುವಲ್ಲಿ ವಿಠ್ಠಲ್ ಭಂಡಾರಿಯವರ ಶ್ರಮ, ದೂರದೃಷ್ಟಿ ಮತ್ತು ಪ್ರಖರ ಚಿಂತನೆಗಳ ದೊಡ್ಡ ಕೊಡುಗೆಯೇ ಇದೆ. ಜೊತೆ ಜೊತೆಗೆ ಚಿಂತನ, ಸಮುದಾಯ, ಬಂಡಾಯ, ಸಂಘಟನೆ, ಸಂವಿಧಾನ ಓದು ಹೀಗೇ ಬೇರೇ ಬೇರೆ ರಾಜ್ಯಮಟ್ಟದ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ವಿಠ್ಠಲ್ ಸರ್ ತಮ್ಮದೇ ಆದ ಸಂಘಟನಾ ಕೌಶಲ್ಯದಿಂದ ಆ ಎಲ್ಲಾ ಸಂಘಟನೆಗಳಲ್ಲೂ ಮಹತ್ವದ ಒಡನಾಡಿಯಾಗಿದ್ದರು. ಆ ನಿಟ್ಟಿನಲ್ಲಿ ಅವರ ಅಗಲುವಿಕೆ ಈ ರಾಜ್ಯದ ಒಟ್ಟಾರೆ ಪ್ರಗತಿಪರ, ಜನಪರ ಚಳುವಳಿಗೆ ದೊಡ್ಡ ಹಿನ್ನೆಡೆಯೇ ಹೌದು.

ಇತ್ತೀಚಿನ ಎರಡು ಮೂರು ವರುಷಗಳಲ್ಲಿ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ತೀವ್ರವಾಗಿ ವಿರಾಮವೇ ಇಲ್ಲದೆ ತೊಡಗಿಸಿಕೊಂಡಿದ್ದರು. ದಣಿವರಿಯದೇ ದುಡಿಯುತ್ತಿದ್ದ ಅವರನ್ನ ಈಗ ನೆನೆದರೆ ಬಹುಶಃ ಈ ಅವಸರದ ಅರಿವಿದ್ದೇ ಎಲ್ಲವನ್ನೂ ತ್ವರಿತವಾಗಿ ಕೈಗೊಳ್ಳುತ್ತಿದರೋ ಎಂಬಂತೆ ಭಾಸವಾಗುತ್ತದೆ. ಕಳೆದ ಕೆಲವು ದಿನಗಳವರೆಗೂ ಅವರು ಸಹಯಾನದಲ್ಲಿ ಹೊಸ ಬರಹಗಾರರಿಗಾಗಿ ಕಾವ್ಯ ಕಮ್ಮಟವನ್ನು ಏರ್ಪಡಿಸುವ ಕುರಿತು ಹಾಗೂ ಮುಂದಿನ ಸಹಯಾನ ಸಾಹಿತ್ಯೋತ್ಸವವನ್ನು ಉತ್ತರ ಕನ್ನಡ ಜಿಲ್ಲೆಯ ಯುವ ಬರಹಗಾರರನ್ನು ಕೇಂದ್ರವಾಗಿರಿಸಿಕೊಂಡೇ ಹಮ್ಮಿಕೊಳ್ಳುವ ಕುರಿತು ಸಾಕಷ್ಟು ಯೋಜನೆಗಳನ್ನ ಹಂಚಿಕೊಂಡಿದ್ದರು. ಆ ಕೆಲಸಗಳಿಗಾಗಿ ತಯಾರಿಯನ್ನೂ ಮಾಡಿಕೊಳ್ಳೋಣ ಎಂದು ನನ್ನೊಡನೆ ಮಾತನಾಡಿದ್ದು ಈಗ ಮಾಸದ ನೆನಪು.

ಎಡಪಂಥೀಯ ಚಳುವಳಿಗೆ ಒಂದು ಸಶಕ್ತ ಮಾಧ್ಯಮ ಬೇಕು, ಸುಳ್ಳನ್ನೇ ಭಿತ್ತರಿಸುವ, ಆಡಳಿತದ ಪರವಾಗಿ ವಕಾಲತ್ತು ವಹಿಸುವ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಜನಪರವಾಗಿರುವ ಒಂದು ಮಾಧ್ಯಮವನ್ನ ಹುಟ್ಟು ಹಾಕಬೇಕೆಂಬುದೂ ಅವರ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಜನಶಕ್ತಿ ಮೀಡಿಯಾ ಆರಂಭವಾದಾಗ ಅಲ್ಲಿ ತಮ್ಮ ಕನಸಿನ ‘ವಾರದ ಕವಿತೆ’, ‘ಪಿಚ್ಚರ್ ಪಯಣ’ದಂತಹ ಅಂಕಣಗಳನ್ನು ನಿರಂತರವಾಗಿ ಪ್ರಕಟಿಸಲು ಸಾಕಷ್ಟು ಪರಿಶ್ರಮವಹಿಸಿದ್ದರು.

ಹೀಗೇ ಅವಿರತವಾಗಿ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ವಿಠ್ಠಲ್ ಸರ್ ಅಗಲುವಿಕೆ ದೊಡ್ಡ ಆಘಾತ. ಇದು ಖಾಲಿತನವನ್ನ ಸೃಷ್ಟಿಸಿದೆ. ಆದರೆ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತಿದ್ದರೂ ಸಹ ತಮ್ಮ ಜೊತೆಗೆ ಅಷ್ಟೇ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಒಂದು ದೊಡ್ಡ ಪಡೆಯನ್ನೇ ಸೃಷ್ಟಿಸಿದ್ದಾರೆ ಕೂಡ. ತಾವೆಂದೂ ಏಕಪಕ್ಷೀಯವಾಗಿರದೆ ಎಲ್ಲರನ್ನೂ ಒಳಗೊಳ್ಳುತ್ತಾ, ಹೊಸ ತಲೆಮಾರಿನ ಲೇಖಕರನ್ನು, ಕಲಾವಿದರನ್ನು, ಸಂಘಟಕರನ್ನು ಮುನ್ನೆಲೆಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.. ಅಪಾರ ಸಂಖ್ಯೆಯ ವಿಧ್ಯಾರ್ಥಿಗಳನ್ನ ಪ್ರಭಾವಿಸಿದ ನೆಚ್ಚಿನ ಗುರು ಅವರು. ಹಾಗಾಗಿ ಅಪೂರ್ಣವಾಗಿರುವ ವಿಠ್ಠಲ್ ಸರ್ ಯೋಜನೆಗಳನ್ನು, ಶೋಷಣೆಯಿರದ ಸಮಸಮಾಜದ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಯಶಸ್ವಿಗೊಳಿಸಲು ಈ ಪಡೆಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂಬುದೂ ಕೂಡ ಅಷ್ಟೇ ಸತ್ಯದ ಸಂಗತಿ.

ಸಹಪಯಣವನ್ನು ಮುಂದುವರೆಸೋಣ. ವಿಠ್ಠಲ್ ಸರ್ ಎಂಬ ದಣಿವರಿಯದ ಕ್ರಾಂತಿಯೋಧನನ್ನ ಸದಾ ನಮ್ಮೊಳಗೆ ಜೀವಂತವಾಗಿರಿಸಿಕೊಳ್ಳೋಣ, ಅವರ ಚಿಂತನೆಗಳನ್ನು ಈ ನೆಲದ ಉದ್ದಗಲಕ್ಕೂ ಬಿತ್ತೋಣ…

ಕ್ರಾಂತಿ ಚಿರಾಯುವಾಗಲಿ. ಕಾಮ್ರೇಡ್ ವಿಠ್ಠಲ್ ಭಂಡಾರಿ ಲಾಲ್ ಸಲಾಮ್.


ಇದನ್ನೂ ಓದಿ:  ಕೊರೊನಾ ವೈಫಲ್ಯ: ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರ ತಲೆದಂಡ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...