ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ

‘ಯಾರು ಸಂವಿಧಾನವನ್ನು ಗೌರವಿಸುತ್ತಾರೊ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಸೌರ್ಹಾರ್ದತೆಯನ್ನು ಬಯಸುತ್ತಾರೊ ಅವರೇ ನಿಜವಾದ ದೇಶಪ್ರೇಮಿಗಳು’ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು. ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಉದ್ಘಾಟನಾ ಮಾತುಗಳನ್ನಾಡಿದ ಅವರು, “ಜನ ಒಂದುಗೂಡಿದರೆ ಯಾವೂದೂ ಅಸಾಧ್ಯವಲ್ಲ. ಆದ್ದರಿಂದ, ಜನಶಕ್ತಿಯೆ ಅಂತಿಮವಾಗಿದ್ದು. ಅಂತಹ ಜನಶಕ್ತಿಯನ್ನು ಸಂಘಟಿಸಿದರೆ ಸಂವಿಧಾನವನ್ನು ರಕ್ಷಣೆ ಮಾಡಲು ಸಾಧ್ಯ” ಎಂದರು. “ಪ್ರಶ್ನೆ ಮಾಡುವುದು ಮತ್ತು ಪ್ರಶ್ನಿಸಿಕೊಳ್ಳುವುದು ಬಹಳ ಮುಖ್ಯ; ಪ್ರಪಂಚದ ಎಲ್ಲ ಕ್ರಾಂತಿಕಾರಿಗಳು ಇದನ್ನು ಮಾಡುತ್ತಾರೆ. ಸಂವಿಧಾನವನ್ನು ಕೈನಲ್ಲಿ ಹಿಡಿಕೊಂಡಿರುವ … Continue reading ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ