Homeಕರ್ನಾಟಕಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ: ವೈವಿದ್ಯಮಯ ಗೆಡ್ಡೆ, ಗೆಣಸು ಮಾರಾಟ- ಲಕ್ಷಾಂತರ ರೂ ವಹಿವಾಟು

ಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ: ವೈವಿದ್ಯಮಯ ಗೆಡ್ಡೆ, ಗೆಣಸು ಮಾರಾಟ- ಲಕ್ಷಾಂತರ ರೂ ವಹಿವಾಟು

- Advertisement -
- Advertisement -

ಕಾಡಿನಿಂದ ಆವೃತವಾಗಿರುವ ಉತ್ತರ ಕನ್ನಡದ ಇಡೀ ಜೋಯಿಡಾ ತಾಲ್ಲೂಕಿನಲ್ಲಿ ವೈವಿದ್ಯಮಯ ಗೆಡ್ಡೆ-ಗೆಣಸು ಅನಾದಿ ಕಾಲದಿಂದ ಬೆಳೆಯಲಾಗುತ್ತಿದೆ. ಇಲ್ಲಿಯ ಬುಡಕಟ್ಟು ಕುಣಬಿ ಜನಾಂಗದವರು ಸಾಂಪ್ರದಾಯಿಕವಾಗಿ ಗೆಡ್ಡೆ, ಗೆಣಸು ಬೆಳೆಯುತ್ತಿದ್ದಾರೆ. ಇದು ಕುಣಬಿಗಳ ಮೂಲ ಕಸುಬು. ಕೃಷಿ ವಿಜ್ಞಾನಿಗಳು ಜೋಯಿಡಾ ಭಾಗದ ಗೆಡ್ಡೆ-ಗೆಣಸು ಪರಿಶೀಲಿಸಿ ಇವುಗಳು ಚಿಕ್ಕ ಮಕ್ಕಳ ಆರೋಗ್ಯಕರ ಆಹಾರ ತಯಾರಿಕೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ವರ್ಷದಿಂದ ಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ ನಡೆಸಲಾಗುತ್ತಿದ್ದು, ಬುಧವಾರ ಈ ಬಾರಿಯ ಮೇಳವನ್ನು ಕುಣಬಿ ಅಭಿವೃದ್ಧಿ ಸಂಘ ಮತ್ತು ಕಾಳಿ ರೈತ ಉತ್ಪದಕರ ಸಂಘ ಆಯೋಜಿಸಿತ್ತು.

230ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ತಾವು ಬೆಳೆದ ನಾನಾ ನಮೂನೆಯ ಗೆಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು. ಗೆಡ್ಡೆಗಳ ವಿವಿಧ ಬಗೆಯ ಖಾದ್ಯ ಮಾರಾಟವೂ ಇತ್ತು. ಸಣ್ಣ-ಪುಟ್ಟ ಗಾತ್ರದಿಂದ ಬೃಹದಾಕಾರದ ಗೆಡ್ಡೆ, ಗೆಣಸುಗಳು ಗೋವಾ, ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಿಂದ ಮೇಳಕ್ಕೆ ಬಂದವರನ್ನು ಚಕಿತಗೋಳಿಸಿದವು. ಜೋಯಿಡಾದ ಸುಮಾರು 50 ಎಕರೆ ಪ್ರದೇಶದಲ್ಲಿ ಗೆಡ್ಡೆ-ಗೆಣಸು ಬೆಳೆಯಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷದ ಗೆಡ್ಡೆ ಮೇಳದಲ್ಲಿ ಮೂರರಿಂದ ಮೂರುವರೆ ಲಕ್ಷದ ವ್ಯಾಪಾರವಾಗಿದೆ ಎನ್ನಲಾಗಿದೆ.

ಮೇಳ ಉದ್ಘಾಟಿಸಿದ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ ಮಾರಿಯೋ ಕ್ರಿಸ್ತರಾಜ ಮಾತನಾಡಿ, “ಜೋಯಿಡಾದ ಹಳ್ಳಿಗಾಡಿನ ಜನರು ಅದರಲ್ಲೂ ಕುಣಬಿ ಸಮುದಾಯದವರು ಗೆಡ್ಡೆ-ಗೆಣಸು ಬೆಳೆದು ಪ್ರಸಿದ್ದರಾಗಿದ್ದಾರೆ. ಹಲವಾರು ತಲೆಮಾರಿನಿಂದ ಬಂದಿರುವ ಈ ಕೃಷಿ ಅಭಿವೃದ್ಧಿಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಪೂರ್ವಜರು ಬೆಳೆಸಿ ಉಳಿಸಿದ ಗೆಡ್ಡೆ, ಗೆಣಸು ತಳಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಈ ಪ್ರಯತ್ನ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಎಲ್ಲ ರಂಗದಲ್ಲಿ ತೀರಾ ಹಿಂದುಳಿದಿರುವ ಜೋಯಿಡಾ ತಾಲೂಕು ಗೆಡ್ಡೆ, ಗೆಣಸು ಮೇಳದಿಂದ ಹೊರ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ. ದಟ್ಟ ಅಡವಿಯಲ್ಲಿ ಬೆಳೆಯುವ ಗೆಡ್ಡೆ-ಗೆಣಸನ್ನು ಕುಣಬಿ ಬುಡಕಟ್ಟಿನ ಸಮುದಾಯ ಅಡುಗೆ ಮನೆಗೆ ಪರಿಚಯಿಸಿದೆ. ಗೆಡ್ಡೆ-ಗೆಣಸು ಮೇಳದ ಹಿಂದಿನ ಶಕ್ತಿ ಸಹ ಕುಣಬಿ ಜನಾಂಗವೇ ಆಗಿದೆ. ಕೆಸುವಿನ ಗೆಡ್ಡೆ, ಸುವರ್ಣಗೆಡ್ಡೆ, ಕೆಂಪು ಗೆಣಸು, ಅರಿಶಿಣ, ಶುಂಠಿ, ಮಾವಿನ ಶುಂಠಿ, ಆನೆ ಪಾದದಂತೆ ಇರುವ ಬೃಹತ್ ಗಾತ್ರದ ಚರಣ ಮತ್ತಿತರ ಗೆಡ್ಡೆಗಳು ಮೇಳದಲ್ಲಿತ್ತು.

ಡೇರಿಯಾ, ಡಿಗ್ಗಿ, ಬಜಾರಕುಣಂಗ, ನಿಗುಂಡಿ, ತೇರಾಳಿ, ನುಜ್ಜಿ, ಕುಂಡಲ, ಬಾಡಪೋಲಿ, ದುಮಾಳ, ಕರಂಜೋಯಿಡಾ, ಅಣಶಿ, ಕುಂಬಾರವಾಡ, ಕುವೇಶಿ ಮುಂತಾದ ಹಳ್ಳಿಗಳ ಪ್ರತಿಯೊಂದು ಕುಣಬಿ ಮನೆ ಹಿತ್ತಲಲ್ಲಿ ಗೆಡ್ಡೆ-ಗೆಣಸು ಬೆಳೆಯಲಾಗುತ್ತದೆ. ಕಣಬಿಗಳ ಆಡು ಭಾಷೆಯಲ್ಲಿ ಗೆಣಸಿಗೆ ಕೋನ್ ಎಂದರೆ ಕೆಸುವಿನ ಗೆಡ್ಡೆಗೆ ಮುಡ್ಲಿ ಎನ್ನುತ್ತಾರೆ.

ದಾವಾ ಮುಡ್ಲಿ, ಚೇಡ್ವಾಲಿ ಮುಡ್ಲಿ, ರಕ್ಯಾಮುಡ್ಲಿ, ಕುಣಬಿಮುಡ್ಲಿ, ಕಾಳಿ ಮುಡ್ಲಿ, ಪುಲಾ ಮುಡ್ಲಿ, ಗಿಡ್ಡಿ ಮುಡ್ಲಿ, ಲಾಂಬಟ ಮುಡ್ಲಿ, ಹುಂಡು, ಕಾಳೊ ತೆರೊ, ದುರತಾಳಿ, ಆಳೆಕೋನ್, ಧಯೆಕೋನ್, ತಾಂಬ್ಡೆ ಕೋನ್, ದುಕರ್ ಕೋನ್, ನಾಗರ್ ಕೋನ್, ಮಾಂಡೆ ಕೋನ್, ಆಳೆ ಕೋನ್, ಚೇನಿ ಕೋನ್, ಕಾಟೆ ಕಣಗಾ, ಝಾಡ ಕಣಗಾ, ತಾರೋಟಿ ಕಣಗಾ ಮುಂತಾದ ಹೆಸರಿನ ಗೆಡ್ಡೆ-ಗೆಣಸು ಜೋಯಿಡಾ ಪ್ರದೇಶದಲ್ಲಿ ವಿಪುಲವಾಗಿ ಬೆಳೆಯಲಾಗುತ್ತದೆ. ಜೋಯಿಡಾ ಮತ್ತು ಹತ್ತಿರದ ರಾಮನಗರ ಈ ಗೆಡ್ಡೆ-ಗೆಣಸುಗಳ ಪ್ರಮುಖ ಮಾರುಕಟ್ಟೆ.


ಇದನ್ನೂ ಓದಿ: ಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...