Homeಕರ್ನಾಟಕಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ: ವೈವಿದ್ಯಮಯ ಗೆಡ್ಡೆ, ಗೆಣಸು ಮಾರಾಟ- ಲಕ್ಷಾಂತರ ರೂ ವಹಿವಾಟು

ಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ: ವೈವಿದ್ಯಮಯ ಗೆಡ್ಡೆ, ಗೆಣಸು ಮಾರಾಟ- ಲಕ್ಷಾಂತರ ರೂ ವಹಿವಾಟು

- Advertisement -
- Advertisement -

ಕಾಡಿನಿಂದ ಆವೃತವಾಗಿರುವ ಉತ್ತರ ಕನ್ನಡದ ಇಡೀ ಜೋಯಿಡಾ ತಾಲ್ಲೂಕಿನಲ್ಲಿ ವೈವಿದ್ಯಮಯ ಗೆಡ್ಡೆ-ಗೆಣಸು ಅನಾದಿ ಕಾಲದಿಂದ ಬೆಳೆಯಲಾಗುತ್ತಿದೆ. ಇಲ್ಲಿಯ ಬುಡಕಟ್ಟು ಕುಣಬಿ ಜನಾಂಗದವರು ಸಾಂಪ್ರದಾಯಿಕವಾಗಿ ಗೆಡ್ಡೆ, ಗೆಣಸು ಬೆಳೆಯುತ್ತಿದ್ದಾರೆ. ಇದು ಕುಣಬಿಗಳ ಮೂಲ ಕಸುಬು. ಕೃಷಿ ವಿಜ್ಞಾನಿಗಳು ಜೋಯಿಡಾ ಭಾಗದ ಗೆಡ್ಡೆ-ಗೆಣಸು ಪರಿಶೀಲಿಸಿ ಇವುಗಳು ಚಿಕ್ಕ ಮಕ್ಕಳ ಆರೋಗ್ಯಕರ ಆಹಾರ ತಯಾರಿಕೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ವರ್ಷದಿಂದ ಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ ನಡೆಸಲಾಗುತ್ತಿದ್ದು, ಬುಧವಾರ ಈ ಬಾರಿಯ ಮೇಳವನ್ನು ಕುಣಬಿ ಅಭಿವೃದ್ಧಿ ಸಂಘ ಮತ್ತು ಕಾಳಿ ರೈತ ಉತ್ಪದಕರ ಸಂಘ ಆಯೋಜಿಸಿತ್ತು.

230ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ತಾವು ಬೆಳೆದ ನಾನಾ ನಮೂನೆಯ ಗೆಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು. ಗೆಡ್ಡೆಗಳ ವಿವಿಧ ಬಗೆಯ ಖಾದ್ಯ ಮಾರಾಟವೂ ಇತ್ತು. ಸಣ್ಣ-ಪುಟ್ಟ ಗಾತ್ರದಿಂದ ಬೃಹದಾಕಾರದ ಗೆಡ್ಡೆ, ಗೆಣಸುಗಳು ಗೋವಾ, ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಿಂದ ಮೇಳಕ್ಕೆ ಬಂದವರನ್ನು ಚಕಿತಗೋಳಿಸಿದವು. ಜೋಯಿಡಾದ ಸುಮಾರು 50 ಎಕರೆ ಪ್ರದೇಶದಲ್ಲಿ ಗೆಡ್ಡೆ-ಗೆಣಸು ಬೆಳೆಯಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷದ ಗೆಡ್ಡೆ ಮೇಳದಲ್ಲಿ ಮೂರರಿಂದ ಮೂರುವರೆ ಲಕ್ಷದ ವ್ಯಾಪಾರವಾಗಿದೆ ಎನ್ನಲಾಗಿದೆ.

ಮೇಳ ಉದ್ಘಾಟಿಸಿದ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ ಮಾರಿಯೋ ಕ್ರಿಸ್ತರಾಜ ಮಾತನಾಡಿ, “ಜೋಯಿಡಾದ ಹಳ್ಳಿಗಾಡಿನ ಜನರು ಅದರಲ್ಲೂ ಕುಣಬಿ ಸಮುದಾಯದವರು ಗೆಡ್ಡೆ-ಗೆಣಸು ಬೆಳೆದು ಪ್ರಸಿದ್ದರಾಗಿದ್ದಾರೆ. ಹಲವಾರು ತಲೆಮಾರಿನಿಂದ ಬಂದಿರುವ ಈ ಕೃಷಿ ಅಭಿವೃದ್ಧಿಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಪೂರ್ವಜರು ಬೆಳೆಸಿ ಉಳಿಸಿದ ಗೆಡ್ಡೆ, ಗೆಣಸು ತಳಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಈ ಪ್ರಯತ್ನ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಎಲ್ಲ ರಂಗದಲ್ಲಿ ತೀರಾ ಹಿಂದುಳಿದಿರುವ ಜೋಯಿಡಾ ತಾಲೂಕು ಗೆಡ್ಡೆ, ಗೆಣಸು ಮೇಳದಿಂದ ಹೊರ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ. ದಟ್ಟ ಅಡವಿಯಲ್ಲಿ ಬೆಳೆಯುವ ಗೆಡ್ಡೆ-ಗೆಣಸನ್ನು ಕುಣಬಿ ಬುಡಕಟ್ಟಿನ ಸಮುದಾಯ ಅಡುಗೆ ಮನೆಗೆ ಪರಿಚಯಿಸಿದೆ. ಗೆಡ್ಡೆ-ಗೆಣಸು ಮೇಳದ ಹಿಂದಿನ ಶಕ್ತಿ ಸಹ ಕುಣಬಿ ಜನಾಂಗವೇ ಆಗಿದೆ. ಕೆಸುವಿನ ಗೆಡ್ಡೆ, ಸುವರ್ಣಗೆಡ್ಡೆ, ಕೆಂಪು ಗೆಣಸು, ಅರಿಶಿಣ, ಶುಂಠಿ, ಮಾವಿನ ಶುಂಠಿ, ಆನೆ ಪಾದದಂತೆ ಇರುವ ಬೃಹತ್ ಗಾತ್ರದ ಚರಣ ಮತ್ತಿತರ ಗೆಡ್ಡೆಗಳು ಮೇಳದಲ್ಲಿತ್ತು.

ಡೇರಿಯಾ, ಡಿಗ್ಗಿ, ಬಜಾರಕುಣಂಗ, ನಿಗುಂಡಿ, ತೇರಾಳಿ, ನುಜ್ಜಿ, ಕುಂಡಲ, ಬಾಡಪೋಲಿ, ದುಮಾಳ, ಕರಂಜೋಯಿಡಾ, ಅಣಶಿ, ಕುಂಬಾರವಾಡ, ಕುವೇಶಿ ಮುಂತಾದ ಹಳ್ಳಿಗಳ ಪ್ರತಿಯೊಂದು ಕುಣಬಿ ಮನೆ ಹಿತ್ತಲಲ್ಲಿ ಗೆಡ್ಡೆ-ಗೆಣಸು ಬೆಳೆಯಲಾಗುತ್ತದೆ. ಕಣಬಿಗಳ ಆಡು ಭಾಷೆಯಲ್ಲಿ ಗೆಣಸಿಗೆ ಕೋನ್ ಎಂದರೆ ಕೆಸುವಿನ ಗೆಡ್ಡೆಗೆ ಮುಡ್ಲಿ ಎನ್ನುತ್ತಾರೆ.

ದಾವಾ ಮುಡ್ಲಿ, ಚೇಡ್ವಾಲಿ ಮುಡ್ಲಿ, ರಕ್ಯಾಮುಡ್ಲಿ, ಕುಣಬಿಮುಡ್ಲಿ, ಕಾಳಿ ಮುಡ್ಲಿ, ಪುಲಾ ಮುಡ್ಲಿ, ಗಿಡ್ಡಿ ಮುಡ್ಲಿ, ಲಾಂಬಟ ಮುಡ್ಲಿ, ಹುಂಡು, ಕಾಳೊ ತೆರೊ, ದುರತಾಳಿ, ಆಳೆಕೋನ್, ಧಯೆಕೋನ್, ತಾಂಬ್ಡೆ ಕೋನ್, ದುಕರ್ ಕೋನ್, ನಾಗರ್ ಕೋನ್, ಮಾಂಡೆ ಕೋನ್, ಆಳೆ ಕೋನ್, ಚೇನಿ ಕೋನ್, ಕಾಟೆ ಕಣಗಾ, ಝಾಡ ಕಣಗಾ, ತಾರೋಟಿ ಕಣಗಾ ಮುಂತಾದ ಹೆಸರಿನ ಗೆಡ್ಡೆ-ಗೆಣಸು ಜೋಯಿಡಾ ಪ್ರದೇಶದಲ್ಲಿ ವಿಪುಲವಾಗಿ ಬೆಳೆಯಲಾಗುತ್ತದೆ. ಜೋಯಿಡಾ ಮತ್ತು ಹತ್ತಿರದ ರಾಮನಗರ ಈ ಗೆಡ್ಡೆ-ಗೆಣಸುಗಳ ಪ್ರಮುಖ ಮಾರುಕಟ್ಟೆ.


ಇದನ್ನೂ ಓದಿ: ಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...