Homeಮುಖಪುಟತುಮಕೂರು: ಬಡವರನ್ನು ಎತ್ತಂಗಡಿ ಮಾಡುವ ಪಾಲಿಕೆ, ಬಲಾಢ್ಯರ ಒತ್ತುವರಿ ಬಗ್ಗೆ ಮೌನ ವಹಿಸುವುದೇಕೆ?

ತುಮಕೂರು: ಬಡವರನ್ನು ಎತ್ತಂಗಡಿ ಮಾಡುವ ಪಾಲಿಕೆ, ಬಲಾಢ್ಯರ ಒತ್ತುವರಿ ಬಗ್ಗೆ ಮೌನ ವಹಿಸುವುದೇಕೆ?

- Advertisement -
- Advertisement -

ಸರ್ಕಾರಿ ಜಾಗಗಳ ಒತ್ತುವರಿ ತೆರವು ಕಾರ್ಯಾಚರಣೆ ಬೆಂಗಳೂರಿನಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಬಡವರು, ವಲಸೆ ಬಂದವರು, ಬಾಡಿಗೆ ತೆರಲು ಸಾಧ್ಯವಾಗದವರು ಸರ್ಕಾರಿ ಜಾಗಗಳಲ್ಲಿ ಜೋಪಡಿ-ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗುಸುತ್ತಿರುವವರನ್ನು ಎಲ್ಲೆಡೆ ನೋಡಿರುತ್ತೀರಿ. ಅಂತಹ ವಸತಿರಹಿತರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುವ ಬೆಂಗಳೂರು ಮಹಾನಗರ ಪಾಲಿಕೆ ಸರ್ಕಾರದ ವಶಕ್ಕೆ ಸೇರಿದ ಕನ್ಸರ್ ವೆನ್ಸಿ ಗಳನ್ನು ಒತ್ತುವರಿ ಮಾಡಿ ದೊಡ್ಡ ದೊಡ್ಡ ಮಹಲುಗಳನ್ನು ನಿಮಾರ್ಣ ಮಾಡಿರುವವರ ಕ್ರಮ ಕೈಗೊಳ್ಳದೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಶ್ರೀಮಂತರು, ಬಲಾಢ್ಯರು, ಪ್ರಭಾವಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಅವರು ನೀಡುವ ಅಮೇಧ್ಯ ತಿಂದುಕೊಂಡು  ಬೆಂಗಳೂರು ಮಹಾನಗರ ಪಾಲಿಕೆ ಕ್ರಮಕ್ಕೆ ಮುಂದಾಗುತ್ತಿಲ್ಲ.

ಇದೇ ಪರಿಸ್ಥಿತಿ ತುಮಕೂರು ಸೇರಿದಂತೆ ಇತರೆ ನಗರಗಳಿಗೂ ವ್ಯಾಪಿಸಿದೆ. ಬೆಂಗಳೂರಿಗೆ 75 ಕಿಲೋ ಮೀಟರ್ ದೂರವಿರುವ, ಬೆಂಗಳೂರಿನ ಹೆಬ್ಬಾಗಿಲೆಂದೇ ಕರೆಯುವ ತುಮಕೂರು ಸ್ಮಾರ್ಟ್ ಸಿಟಿಯೂ ಹೌದು. ಇಂತಹ ಸ್ಮಾರ್ಟ್ ನಗರದಲ್ಲಿ ‘ಸ್ಮಾರ್ಟ್’ ಪದಕ್ಕೆ ಅರ್ಥವೇ ಇಲ್ಲವಾಗಿದೆ. ತುಮಕೂರು ಪುರಸಭೆ, ನಗರಸಭೆ ಆಗಿದ್ದ ಸಂದರ್ಭದಲ್ಲಿ ಕನ್ಸರ್ ವೆನ್ಸಿಗಳಿದ್ದವು. ಗಾಳಿ ಬೆಳಕಿಗೇನೂ ಕೊರತೆ ಇರಲಿಲ್ಲ. ತುಮಕೂರು ಮಹಾನಗರ  ಪಾಲಿಕೆಯಾದ ಮೇಲೆ ಕನ್ಸರ್ ವೆನ್ಸಿಗಳು ನಿಧಾನವಾಗಿ ಒತ್ತುವರಿಯಾಗುತ್ತಿವೆ. ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇಂತಹ ಸರ್ಕಾರಿ ಜಾಗದ ಒತ್ತುವರಿದಾರರ ವಿರುದ್ದ ಕ್ರಮ ಕೈಗೊಳ್ಳುವವರೇ ಇಲ್ಲವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಕನ್ಸರ್ ವೆನ್ಸಿಗಳ ಬಳಕೆ ಕುರಿತಂತೆ ಚರ್ಚೆ ನಡೆಯಿತು. ಕನ್ಸರ್ ವೆನ್ಸಿಗಳಿಗೆ ಕ್ರಾಂಕ್ರೀಟ್ ಹಾಕಿ ಅಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುವ ಯತ್ನವೂ ನಡೆಯಿತು. ಅದರಂತೆ ಸೋಮೇಶ್ವರಪುರಂ ಸೇರಿದಂತೆ ಕೆಲವು ಕಡೆ ಕನ್ಸರ್ ವೆನ್ಸಿಗಳಿಗೆ ಕಾಂಕ್ರೀಟ್ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ಅನುವು ಮೋಡಿಕೊಡಲಾಯಿತು. ಇದನ್ನೇ ನೆಪಮಾಡಿಕೊಂಡ ಕೆಲವು ಮಂದಿ ಬಲಾಢ್ಯರು, ರಾಜಕೀಯ ಪ್ರಭಾವವಿರುವವರು ತಮ್ಮ ಮನೆ, ಆಸ್ಪತ್ರೆ ಪಕ್ಕದಲ್ಲಿರುವ ಕನ್ಸರ್ ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡರು. ಇದಕ್ಕಾಗಿ ಆಯಾ ವಾರ್ಡ್‌ನ  ಪಾಲಿಕೆ ಸದಸ್ಯರಿಗೆ ಒಂದಿಷ್ಟು ‘ಕಾಣಿಕೆ’ಯೂ ಸಿಕ್ಕಿತು.

ಈ ರೋಗ ನಗರದೆಲ್ಲೆಡೆ ಹರಡಿಕೊಂಡಿದೆ. ಹೊಸದಾಗಿ ಮನೆಗಳನ್ನು ನಿರ್ಮಿಸುವವರು ಪಾಲಿಕೆಯ ಎಲ್ಲಾ ನಿಯಮಗಳನ್ನು ದಿಕ್ಕರಿಸುತ್ತಿದ್ದಾರೆ. ಗಾಂಧೀನಗರದ ಕಸ್ತೂರ ಬಾ ರಸ್ತೆಯಲ್ಲಿ ನಾಲ್ಕು ಹಂತಸ್ತಿನ ಮನೆ ನಿರ್ಮಾಣವಾಗುತ್ತಿದೆ. ಮಹಡಿಗಳ ಮೇಲೆ ಮಹಿಡಿ ನಿರ್ಮಾಣವಾದಂತೆ ಗಾಳಿ ಬೆಳಕು ಬೀಳುವಂತೆ ಹೆಚ್ಚು ಜಾಗ ಬಿಡಬೇಕು. ಕಟ್ಟಡದ ಎತ್ತರಕ್ಕೆ, ಗಾತ್ರಕ್ಕೆ ಅನುಗುಣವಾಗಿ ಅಕ್ಕಪಕ್ಕ ಜಾಗ ಬಿಡಬೇಕು. ಕಸ್ತೂರ ಬಾ ರಸ್ತೆಯಲ್ಲಿ ಐದು ಹಂತಸ್ತಿನ ಬೃಹತ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿದ್ದಾರೆ. ಈ ಕಟ್ಟಡ ಮಾರ್ವಾಡಿಯೊಬ್ಬನಿಗೆ ಸೇರಿದ್ದು ಸ್ಥಳೀಯ ಕಾರ್ಪೋರೇಟರ್ ಅನ್ನು ಒಳಗೆ ಹಾಕಿಕೊಂಡು ಈ ಕಟ್ಟಡ ನಿರ್ಮಿಸುತ್ತಿದ್ದಾರೆ  ಎನ್ನಲಾಗುತ್ತಿದೆ.

ತುಮಕೂರು ನಗರದ ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿ ಹಲವು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ಪ್ರತಿಯೊಂದು ದೊಡ್ಡ ಮಳಿಗೆಯ ನೆಲಮಾಳಿಗೆಯನ್ನು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂಬ ನಿಯಮವಿದೆ. ಆದರೆ 13ನೇ ಕ್ರಾಸ್ ನ ಎದುರುಗಡೆ ಕಟ್ಟಡದ ನೆಲಮಾಳಿಗೆಯಲ್ಲಿ ಡ್ಯಾನ್ಸ್ ಕ್ಲಾಸ್ ಮಾಡುತ್ತಿದ್ದಾರೆ. ನಮ್ಮೂರ ಆಹಾರ ಕಟ್ಟಡದ ನೆಲಮಾಳಿಗೆಯಲ್ಲಿ ಬೇಕರಿ ತಯಾರಿಕೆ ಕೆಲಸ ನಡೆಯುತ್ತಿದೆ. ಮಲ್ಲಿಗೆ ಪ್ಯಾಲಸ್ ಕಟ್ಟಡಕ್ಕೊಂದು ನೆಲಮಾಳಿಗೆ ಇದೆ. ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಿರುವುದರಿಂದ ಸೋಮೇಶ್ವರ ಪುರಂ ಮುಖ್ಯರಸ್ತೆಯಲ್ಲಿ ವಾಹನನಿಲುಗಡೆ ಹೆಚ್ಚಾಗಿದ್ದು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಆದರೂ ಸಂಚಾರಿ ಪೊಲೀಸರು ಮತ್ತು ಪಾಲಿಕೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ, ಮಳಿಗೆ ನಿರ್ಮಾಣ ಮಾಡಿದವರನ್ನು ಪ್ರಶ್ನೆ ಮಾಡದೆ ನಾಲಿಗೆಯನ್ನು ಕಳೆದುಕೊಂಡಿದ್ದಾರೆ.

ಯಾವ ಮಹಾಶಯ ಹೇಳಿದನೋ ಗೊತ್ತಿಲ್ಲ. ಅವರವರ ಮನೆಗಳು ಇರುವ ಕನ್ಸರ್ ವೆನ್ಸಿಗಳ ಜಾಗ ಅವರಿಗೆ ಸೇರಿದ್ದು ಎಂದು. ಎಲ್ಲರೂ ತಮಗೆ ಸಾಧ್ಯವಿರುವಷ್ಟು ಒತ್ತುವರಿ ಮಾಡಿಕೊಂಡು ಪಕ್ಕದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಅಳಲುತೋಡಿಕೊಳ್ಳುತ್ತಿದ್ದಾರೆ. ಅಶೋಕನಗರ ವಿನಾಯಕ ಆಸ್ಪತ್ರೆಯ ರಸ್ತೆಯಲ್ಲೂ ಕನ್ಸರ್ ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೊರಪೇಟೆ ಸೇರಿದಂತೆ ತುಮಕೂರಿನ ಬಹುತೇಕ ಕಡೆ ಕನ್ಸರ್ ವೆನ್ಸಿಗಳ ಒತ್ತುವರಿಯಾಗಿವೆ. ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಲಾಗಿದೆ. ಹೀಗಾಗಿ ಸಿದ್ದಗಂಗಾ ಬಡಾವಣೆಯಲ್ಲಿ ಮಳೆ ಬಂದರೆ ಕೆರೆ ನಿರ್ಮಾಣವಾಗುತ್ತದೆ. ಸಾರ್ವಜನಿಕ ಸ್ವತ್ತು, ಸರ್ಕಾರಿ ಭೂಮಿ ಎಗ್ಗಿಲ್ಲದೆ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತ, ಪಾಲಿಕೆ ಸತ್ತಂತೆ ವರ್ತಿಸುತ್ತಿದೆ.

ಸರ್ಕಾರಿ ಜಾಗದಲ್ಲಿ ಬಡವರು ಒಂದಿಂಚು ಒತ್ತುವರಿ ಮಾಡಿಕೊಂಡರೆ ತೆರವುಗೊಳಿಸುವ ಪಾಲಿಕೆ ಬಲಾಢ್ಯರ ಬಗ್ಗೆ ಮೌನ ವಹಿಸಿದೆ. ಕಸ್ತೂರಾ ಆಸ್ಪತ್ರೆ, ಉಪ್ಪಾರಹಳ್ಳಿಯಲ್ಲಿ ಖಾಸಗಿ ಕಾಲೇಜೊಂದನ್ನು ರಾಜಗಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿದ್ದರೂ ಪಾಲಿಕೆ ಮಾತ್ರ ಅತ್ತ ತಿರುಗಿಯೂ ನೋಡುತ್ತಿಲ್ಲ. ಕಾಲೇಜುಗಳು, ದೇವಾಲಯಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ. ಇಂತಹವರಿಗೆ ಪಾಲಿಕೆಯ ನಿಯಮಗಳು ಅನ್ವಯ ಆಗುವುದಿಲ್ಲವೇ? ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನೀಡುವ ಕಟ್ಟಡದ ನಕಾಶೆಗಳನ್ನು ಸರಿಯಾಗಿ ಪರಿಶೀಲಿಸುವುದಿಲ್ಲವೇ? ನೆಪಮಾತ್ರಕ್ಕೆ ಕಟ್ಟಡಗಳ ನಕ್ಷೆಯನ್ನು ಪಡೆಯಲಾಗುತ್ತಿದೆಯೇ? ಪಾಲಿಕೆ ಆಯುಕ್ತ ಭೂಬಾಲನ್ ಹೇಳಬೇಕು. ಕನ್ಸರ್ ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡವರನ್ನು ತೆರೆಗೊಳಿಸುವ ಕೆಲಸಕ್ಕೆ ಕ್ರಮ ಕೈಗೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...