Homeಮುಖಪುಟಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ...

ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್

ಈ ಫೋಟೊವನ್ನು ಸಾವಿರಾರು ಜನರು 'ಇದು ನನ್ನ ಭಾರತ' ಎಂಬ ಹೆಸರಿನೊಂದಿಗೆ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.

- Advertisement -
- Advertisement -

ಯಾವ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಲಾಯಿಯೊ ಅದೇ ಉಡುಪಿಯಲ್ಲಿ ವಿಭಿನ್ನ ಧರ್ಮದ ವಿದ್ಯಾರ್ಥಿನಿಯರು ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ್ದಾರೆ. ಈ ಹೃದಯಸ್ಪರ್ಶಿ ಸಂದರ್ಭದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿವೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ವಿಷಯ ಹೈಕೋರ್ಟ್ ಪ್ರವೇಶಿಸಿತು. ತದನಂತರ ಮಧ್ಯಂತರ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡ ಕಾರಣ ಹಲವೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ ರಾಜ್ಯ ಸರ್ಕಾರ 5 ದಿನಗಳ ರಜೆ ಘೋಷಿಸಿತ್ತು. ಅದಾದ ನಂತರ ಬುಧವಾರದಿಂದ ಶಾಲಾ-ಕಾಲೇಜುಗಳ ಮತ್ತೆ ಆರಂಭವಾಗಿವೆ. ಅಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಹಲವಾರು ವಿದ್ಯಾರ್ಥಿನಿಯರು ಕೈ ಕೈ ಹಿಡಿದು ಬಂದು ಸೌಹಾರ್ದ ಸಂದೇಶ ಸಾರಿದ್ದಾರೆ.

ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯಲ್ಲಿ ಈ ಫೋಟೊ “ವಿಭಿನ್ನತೆಯಲ್ಲಿ ಏಕತೆ” ಹೆಸರಿನಲ್ಲಿ ಪ್ರಕಟಗೊಂಡಿತ್ತು. ಆ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ನಾವು ಒಟ್ಟಾಗಿ ನಿಂತಿದ್ದೇವೆ. ನನ್ನ ಭಾರತ” ಎಂದು ಬರೆದುಕೊಂಡಿದ್ದಾರೆ.

“ಕೋಮುವಾದಿಗಳ ಆಟ ಬಹಳ ದಿನ ನಡೆಯದು. ನಮಗೆ ನಾಳೆಯ ಬಗ್ಗೆ ಭರವಸೆ ನೀಡುವುದು ಇಂತಹ ದೃಶ್ಯಗಳೇ” ಎಂದು ಹಿರಿಯ ಚಿಂತಕರಾದ ಶ್ರೀನಿವಾಸ ಕಾರ್ಕಳರವರು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಮಗುವನ್ನು ತೋಳದಂತೆ ಹಿಂಬಾಲಿಸಿದ ಪತ್ರಕರ್ತನೆಲ್ಲಿ? ಕೆಳಗಿರುವ ಕವಿತೆಯಂಥಾ ಫೋಟೋ ತೆಗೆದ ಇರ್ಶಾದ್‌ ಎಲ್ಲಿ? ಎಂದು ಕನ್ನಡದ ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ.

ಈ ನೆಲದ ಸಹಬಾಳ್ವೆಯ ತತ್ವ, ಪ್ರಭುತ್ವವನ್ನೂ ತಲೆಬಾಗಿಸಿದೆ…. ಎಂದು ದಯಾನಂದಗೌಡರವರು ಹಂಚಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಹಿಜಾಬ್‌ಗೆ ವಿರೋಧವಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಕಾಲೇಜಿಗೆ ಕಲ್ಲು ತೂರಿದ್ದು, ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು, ಮಂಡ್ಯದ ಮುಸ್ಕಾನ್ ಖಾನ್ ಎಂಬ ಹೆಣ್ಣು ಮಗಳ ಸುತ್ತುವರಿದು ಜೈಶ್ರೀರಾಮ್ ಕೂಗಿದ್ದು, ಮಾಧ್ಯಮಗಳು ವಿದ್ಯಾರ್ಥಿನಿಯರನ್ನು ಅಟ್ಟಾಡಿಸಿದ್ದು ಸಾಮಾಜಿಕ ವಾತವಾರಣವನ್ನು ಕಲುಷಿತಗೊಳಿಸಿದ್ದವು. ಈಗ ಉಡುಪಿಯ ವಿದ್ಯಾರ್ಥಿನಿಯರು ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಬಾಂಧವ್ಯ ಮೆರೆದಿದ್ದಾರೆ. ಹಾಗಾಗಿ ಈ ಫೋಟೊವನ್ನು ಸಾವಿರಾರು ಜನ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ; Hijab Live | ಹಿಜಾಬ್ ಲೈವ್‌ | ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ. ಬಹುಶ ಕವನ ಇಷ್ಟೇ ಇತ್ತು ಅನ್ನಿಸುತ್ತೆ.)

  2. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ.)

  3. ‘ ನಾವು ಎಳೆಯರು ನಾವು ಗೆಳೆಯರು ‘
    ಕವನ ರಚಿಸಿದ ಕವಿ
    ಶಂ . ಗು . ಬಿರಾದಾರ
    ಇವರು ನನ್ನ ತಂದೆ ಶಂಕರಗೌಡ ಗುರುಗೌಡ ಬಿರಾದಾರ ಇವರ ಪೂರ್ಣ ಹೆಸರು
    ನೆನಪಿಸಿದ ನಿಮಗೆ ಧನ್ಯವಾದಗಳು
    ಪೂರ್ಣ ಕವನ ಕಳಿಸುವೆ

    • ನಿಮಗೂ ಧನ್ಯವಾದಗಳು ಸರ್. ಸಾರ್ವಕಾಲಿಕ ಕವನ ಅದು. ಅದು ಆಡಿಯೋ ಇದ್ದರೆ ಕೊಡಿ.. ಮಕ್ಕಳಿಂದ ನೃತ್ಯ ಮಾಡಿಸಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

  4. ಈ ಕವನ ರಚಿಸಿದವರು ಶಂ ಗು ಬಿರಾದಾರ
    ಪೂರ್ಣ ಹೆಸರು ಶಂಕರಗೌಡ ಗುರುಗೌಡ ಬಿರಾದಾರ
    ಇವರು ನನ್ನ ತಂದೆ ಪೂರ್ಣ ಕವನ ಕಳಿಸುವೆ

  5. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ

  6. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ
    9448776817 ಈ ನಂಬರನ್ನು ಸಂಪರ್ಕಿಸಿ

  7. Vijay sir ನನಗೂ ಒಂದು ವಿಡಿಯೋ ಕಳಿಸಿ. ಶಮ್. ಗು. ಬಿರಾದಾರ್ ಸರ್ ಆತ್ಮಕ್ಕೆ ಚಿರ ಋಣಿ.

  8. ಶಂ. ಗು. ಬಿರಾದಾರ ಸರ್ ಆತ್ಮಕ್ಕೆ ನಾನು ಚಿರಋಣಿ. ವಿಜಯ್ ಸರ್,ನನಗೂ ಒಂದು ವಿಡಿಯೊ ಬೇಕು.ನಮ್ಮ ಶಾಲೆಯ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬೇಕು. ದಯವಿಟ್ಟು ‌‌‌ಸಂಪರ್ಕಿಸಬಹುದೆ!

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯ (ಎಂಜಿಎನ್‌ಆರ್‌ಇಜಿಎ) ಹೆಸರು ಮತ್ತು ನಿಬಂಧನಗೆಳನ್ನು ಬದಲಿಸುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್),2025 (ವಿಬಿ-ಜಿ ರಾಮ್‌ ಜಿ) ಮಸೂದೆಗೆ...

ಪ್ರೀತಿಸಿ ಮದುವೆಯಾಗಿ ಕೇವಲ 8 ತಿಂಗಳು : ವರದಕ್ಷಿಣೆಗಾಗಿ ಹೆಂಡತಿಯನ್ನು ಹೊಡೆದು ಕೊಂದ ಗಂಡ!

ಮದುವೆಯಾಗಿ ಎಂಟು ತಿಂಗಳಿಗೆ ಗಂಡ ಹೆಂಡತಿಯನ್ನು ಮನೆ ಅಂಗಳದಲ್ಲೇ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ತಂಡೂರ್‌ನಲ್ಲಿ ನಡೆದಿದೆ. ಅನುಷಾ (22) ಕೊಲೆಯಾದ ಹೆಣ್ಣು ಮಗಳು. ಗಂಡ ಪರಮೇಶ್ (28) ವಿರುದ್ದ...

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ

ಢಾಕಾ: ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ...

ತೀವ್ರ ವಿರೋಧಗಳ ನಡುವೆ ಗಣರಾಜ್ಯೋತ್ಸವ ಆಚರಣೆಯಲ್ಲಿ ‘ವಂದೇ ಮಾತರಂ’ ಹಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ 

ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ವಂದೇ ಮಾತರಂ' ಗೀತೆಯನ್ನು ಪ್ರಧಾನವಾಗಿ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುವ...

ಅಣು ವಿದ್ಯುತ್ ಯೋಜನೆ ಕುರಿತು ಯುಪಿ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಮಾತುಕತೆ: ವರದಿ

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿದೆ. ಈ ಬೆನ್ನಲ್ಲೇ...

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...