Homeಮುಖಪುಟಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ...

ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್

ಈ ಫೋಟೊವನ್ನು ಸಾವಿರಾರು ಜನರು 'ಇದು ನನ್ನ ಭಾರತ' ಎಂಬ ಹೆಸರಿನೊಂದಿಗೆ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.

- Advertisement -
- Advertisement -

ಯಾವ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಲಾಯಿಯೊ ಅದೇ ಉಡುಪಿಯಲ್ಲಿ ವಿಭಿನ್ನ ಧರ್ಮದ ವಿದ್ಯಾರ್ಥಿನಿಯರು ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ್ದಾರೆ. ಈ ಹೃದಯಸ್ಪರ್ಶಿ ಸಂದರ್ಭದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿವೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ವಿಷಯ ಹೈಕೋರ್ಟ್ ಪ್ರವೇಶಿಸಿತು. ತದನಂತರ ಮಧ್ಯಂತರ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡ ಕಾರಣ ಹಲವೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ ರಾಜ್ಯ ಸರ್ಕಾರ 5 ದಿನಗಳ ರಜೆ ಘೋಷಿಸಿತ್ತು. ಅದಾದ ನಂತರ ಬುಧವಾರದಿಂದ ಶಾಲಾ-ಕಾಲೇಜುಗಳ ಮತ್ತೆ ಆರಂಭವಾಗಿವೆ. ಅಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಹಲವಾರು ವಿದ್ಯಾರ್ಥಿನಿಯರು ಕೈ ಕೈ ಹಿಡಿದು ಬಂದು ಸೌಹಾರ್ದ ಸಂದೇಶ ಸಾರಿದ್ದಾರೆ.

ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯಲ್ಲಿ ಈ ಫೋಟೊ “ವಿಭಿನ್ನತೆಯಲ್ಲಿ ಏಕತೆ” ಹೆಸರಿನಲ್ಲಿ ಪ್ರಕಟಗೊಂಡಿತ್ತು. ಆ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ನಾವು ಒಟ್ಟಾಗಿ ನಿಂತಿದ್ದೇವೆ. ನನ್ನ ಭಾರತ” ಎಂದು ಬರೆದುಕೊಂಡಿದ್ದಾರೆ.

“ಕೋಮುವಾದಿಗಳ ಆಟ ಬಹಳ ದಿನ ನಡೆಯದು. ನಮಗೆ ನಾಳೆಯ ಬಗ್ಗೆ ಭರವಸೆ ನೀಡುವುದು ಇಂತಹ ದೃಶ್ಯಗಳೇ” ಎಂದು ಹಿರಿಯ ಚಿಂತಕರಾದ ಶ್ರೀನಿವಾಸ ಕಾರ್ಕಳರವರು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಮಗುವನ್ನು ತೋಳದಂತೆ ಹಿಂಬಾಲಿಸಿದ ಪತ್ರಕರ್ತನೆಲ್ಲಿ? ಕೆಳಗಿರುವ ಕವಿತೆಯಂಥಾ ಫೋಟೋ ತೆಗೆದ ಇರ್ಶಾದ್‌ ಎಲ್ಲಿ? ಎಂದು ಕನ್ನಡದ ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ.

ಈ ನೆಲದ ಸಹಬಾಳ್ವೆಯ ತತ್ವ, ಪ್ರಭುತ್ವವನ್ನೂ ತಲೆಬಾಗಿಸಿದೆ…. ಎಂದು ದಯಾನಂದಗೌಡರವರು ಹಂಚಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಹಿಜಾಬ್‌ಗೆ ವಿರೋಧವಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಕಾಲೇಜಿಗೆ ಕಲ್ಲು ತೂರಿದ್ದು, ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು, ಮಂಡ್ಯದ ಮುಸ್ಕಾನ್ ಖಾನ್ ಎಂಬ ಹೆಣ್ಣು ಮಗಳ ಸುತ್ತುವರಿದು ಜೈಶ್ರೀರಾಮ್ ಕೂಗಿದ್ದು, ಮಾಧ್ಯಮಗಳು ವಿದ್ಯಾರ್ಥಿನಿಯರನ್ನು ಅಟ್ಟಾಡಿಸಿದ್ದು ಸಾಮಾಜಿಕ ವಾತವಾರಣವನ್ನು ಕಲುಷಿತಗೊಳಿಸಿದ್ದವು. ಈಗ ಉಡುಪಿಯ ವಿದ್ಯಾರ್ಥಿನಿಯರು ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಬಾಂಧವ್ಯ ಮೆರೆದಿದ್ದಾರೆ. ಹಾಗಾಗಿ ಈ ಫೋಟೊವನ್ನು ಸಾವಿರಾರು ಜನ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ; Hijab Live | ಹಿಜಾಬ್ ಲೈವ್‌ | ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ. ಬಹುಶ ಕವನ ಇಷ್ಟೇ ಇತ್ತು ಅನ್ನಿಸುತ್ತೆ.)

  2. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ.)

  3. ‘ ನಾವು ಎಳೆಯರು ನಾವು ಗೆಳೆಯರು ‘
    ಕವನ ರಚಿಸಿದ ಕವಿ
    ಶಂ . ಗು . ಬಿರಾದಾರ
    ಇವರು ನನ್ನ ತಂದೆ ಶಂಕರಗೌಡ ಗುರುಗೌಡ ಬಿರಾದಾರ ಇವರ ಪೂರ್ಣ ಹೆಸರು
    ನೆನಪಿಸಿದ ನಿಮಗೆ ಧನ್ಯವಾದಗಳು
    ಪೂರ್ಣ ಕವನ ಕಳಿಸುವೆ

    • ನಿಮಗೂ ಧನ್ಯವಾದಗಳು ಸರ್. ಸಾರ್ವಕಾಲಿಕ ಕವನ ಅದು. ಅದು ಆಡಿಯೋ ಇದ್ದರೆ ಕೊಡಿ.. ಮಕ್ಕಳಿಂದ ನೃತ್ಯ ಮಾಡಿಸಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

  4. ಈ ಕವನ ರಚಿಸಿದವರು ಶಂ ಗು ಬಿರಾದಾರ
    ಪೂರ್ಣ ಹೆಸರು ಶಂಕರಗೌಡ ಗುರುಗೌಡ ಬಿರಾದಾರ
    ಇವರು ನನ್ನ ತಂದೆ ಪೂರ್ಣ ಕವನ ಕಳಿಸುವೆ

  5. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ

  6. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ
    9448776817 ಈ ನಂಬರನ್ನು ಸಂಪರ್ಕಿಸಿ

  7. Vijay sir ನನಗೂ ಒಂದು ವಿಡಿಯೋ ಕಳಿಸಿ. ಶಮ್. ಗು. ಬಿರಾದಾರ್ ಸರ್ ಆತ್ಮಕ್ಕೆ ಚಿರ ಋಣಿ.

  8. ಶಂ. ಗು. ಬಿರಾದಾರ ಸರ್ ಆತ್ಮಕ್ಕೆ ನಾನು ಚಿರಋಣಿ. ವಿಜಯ್ ಸರ್,ನನಗೂ ಒಂದು ವಿಡಿಯೊ ಬೇಕು.ನಮ್ಮ ಶಾಲೆಯ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬೇಕು. ದಯವಿಟ್ಟು ‌‌‌ಸಂಪರ್ಕಿಸಬಹುದೆ!

LEAVE A REPLY

Please enter your comment!
Please enter your name here

- Advertisment -

ಶಿಕ್ಷೆ ಮುಗಿದ 3 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಗುಜರಾತ್ ಮೀನುಗಾರ ಸಾವು

2022 ರಲ್ಲಿ ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ ನಂತರ ಪಾಕಿಸ್ತಾನ ಏಜೆನ್ಸಿಗಳಿಂದ ಬಂಧಿಸಲ್ಪಟ್ಟ ಗುಜರಾತ್‌ನ ಮೀನುಗಾರನೊಬ್ಬ ಜನವರಿ 16 ರಂದು ಕರಾಚಿ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮೂರು ವರ್ಷಗಳ ಹಿಂದೆ ಆತನ ಶಿಕ್ಷೆಯನ್ನು...

ಸ್ಥಳದಲ್ಲೇ ದಂಡ ಪಾವತಿಸುವಂತೆ ಸಂಚಾರ ಪೊಲೀಸರು ಒತ್ತಾಯಿಸುವಂತಿಲ್ಲ: ತೆಲಂಗಾಣ ಹೈಕೋರ್ಟ್

ಸಂಚಾರ ನಿಯಮ ಉಲ್ಲಂಘಿಸುವವರ ಬ್ಯಾಂಕ್ ಖಾತೆಗಳಿಂದ ಸ್ವಯಂಚಾಲಿತವಾಗಿ ದಂಡ ಕಡಿತಗೊಳಿಸಬೇಕೆಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚಿಸಿದ ಕೆಲವು ದಿನಗಳ ನಂತರ ಮಹತ್ವದ ತೀರ್ಪು ನೀಡಿರುವ ತೆಲಂಗಾಣ ಹೈಕೋರ್ಟ್, ಪೊಲೀಸರು ನಾಗರಿಕರನ್ನು ರಸ್ತೆಯಲ್ಲಿ ನಿಲ್ಲಿಸಿ...

ಎಸ್‌ಸಿ/ಎಸ್‌ಟಿ ಶಾಲೆಗಳ ನವೀಕರಣಕ್ಕೆ ಹಣ ಮಂಜೂರು ಮಾಡದಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ 

ಮಧುರೈ: ತಮಿಳುನಾಡಿನ ಸುಮಾರು 170 ಎಸ್‌ಸಿ/ಎಸ್‌ಟಿ ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಗಳಿಗೆ ತಮಿಳುನಾಡು ಆದಿ ದ್ರಾವಿಡರ್ ವಸತಿ ಅಭಿವೃದ್ಧಿ ನಿಗಮ (ಟಿಎಎಚ್‌ಡಿಸಿಒ) 50 ಕೋಟಿ ರೂ.ಗಳನ್ನು ಖರ್ಚು...

ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ರಾಜ್ಯ ಸಂಸ್ಥೆ ತನಿಖೆ ಮಾಡಬಹುದು : ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರಿ ನೌಕರರು ಮಾಡುವ ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಲು ಮತ್ತು ಆರೋಪಪಟ್ಟಿ ಸಲ್ಲಿಸಲು ಸಮರ್ಥರು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಗ್ಯಾಂಗ್‌ಸ್ಟರ್‌ಗಳ ವಿರುದ್ಧ ರಾಜ್ಯಾದ್ಯಂತ ಕಾರ್ಯಚರಣೆ ಆರಂಭಿಸಿದ ಪಂಜಾಬ್ ಸರ್ಕಾರ

ಮಾದಕ ವಸ್ತುಗಳ ವಿರುದ್ಧದ ತನ್ನ ಕಾರ್ಯಾಚರಣೆಯಿಂದ ಸ್ಫೂರ್ತಿ ಪಡೆದು, ಪಂಜಾಬ್ ಸರ್ಕಾರ ಮಂಗಳವಾರ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ರಾಜ್ಯಾದ್ಯಂತ ಅಭಿಯಾನ ಆರಂಭಿಸಿದ್ದು, ಶಸ್ತ್ರಾಸ್ತ್ರ ಪೂರೈಕೆ ಸರಪಳಿಗಳು, ಲಾಜಿಸ್ಟಿಕ್ಸ್, ಅಡಗುತಾಣಗಳು ಮತ್ತು ಸಂವಹನ ಜಾಲಗಳು ಸೇರಿದಂತೆ...

‘ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ‘ನನ್ನ ಹೆಸರೇ’ ಆಸರೆ’: ಪ್ರಿಯಾಂಕ್ ಖರ್ಗೆ ಆಕ್ರೋಶ 

ಬೆಂಗಳೂರು: ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರೇ ಆಸರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ "ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು...

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ರದ್ದುಗೊಳಿಸಲು ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯ : ತಮಿಳುನಾಡು ಸಿಎಂ ಸ್ಟಾಲಿನ್

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ವಾರ್ಷಿಕ ಭಾಷಣ ಮಾಡುವ ಸಂಪ್ರದಾಯವನ್ನು ರದ್ದುಗೊಳಿಸುವ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌ ರವಿ ನಡುವೆ ಜಟಾಪಟಿ ನಡೆದು,...

ಅಸ್ಸಾಂ| ದನ ಕಳ್ಳತನದ ಶಂಕೆಯಿಂದ ಗುಂಪು ದಾಳಿ; ಓರ್ವ ಸಾವು-ನಾಲ್ವರ ಸ್ಥಿತಿ ಗಂಭೀರ

ದನ ಕಳ್ಳತನದ ಶಂಕೆಯ ಮೇಲೆ ಗುಂಪೊಂದು ದಾಳಿ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ (ಜ.19) ಅಸ್ಸಾಂನ ಕೊಕ್ರಜಾರ್‌ನಲ್ಲಿ ನಡೆದಿದೆ. ಬಲಿಪಶುಗಳು, ರಸ್ತೆ ನಿರ್ಮಾಣ ಯೋಜನೆಯೊಮದರಲ್ಲಿ...

ಕರ್ನಾಟಕ: ಐದು ವರ್ಷಗಳಲ್ಲಿ ಎಸ್‌ಸಿ/ಎಸ್‌ಟಿಗಳ ಮೇಲಿನ ಅಪರಾಧಗಳು ಶೇ. 37.7 ರಷ್ಟು ಏರಿಕೆ; ಬೆಂಗಳೂರಿನದೇ ಅಗ್ರಸ್ಥಾನ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳಿದ್ದರೂ, ಈ ಸಮುದಾಯಗಳ ಮೇಲಿನ ಅಪರಾಧಗಳು ಕಳೆದ ಐದು ವರ್ಷಗಳಲ್ಲಿ ಶೇ. 37.74 ರಷ್ಟು ಹೆಚ್ಚಾಗಿದ್ದು,...

‘ನಿತಿನ್ ನಬಿನ್ ನನ್ನ ಬಾಸ್, ನಾನು ಕೆಲಸಗಾರ..’; ಬಿಜೆಪಿ ನೂತನ ಮುಖ್ಯಸ್ಥರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅತ್ಯಂತ ಕಿರಿಯ ವಯಸ್ಸಿನ ನಿತಿನ್ ನಬಿನ್ ಅವರನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಪಕ್ಷದ ಪರಂಪರೆಯನ್ನು ಮುಂದುವರಿಸುವ 'ಸಹಸ್ರಮಾನದ' ವ್ಯಕ್ತಿ ಎಂದು ಕರೆದರು. "ಪಕ್ಷದ...