Homeಮುಖಪುಟಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ...

ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್

ಈ ಫೋಟೊವನ್ನು ಸಾವಿರಾರು ಜನರು 'ಇದು ನನ್ನ ಭಾರತ' ಎಂಬ ಹೆಸರಿನೊಂದಿಗೆ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.

- Advertisement -
- Advertisement -

ಯಾವ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಲಾಯಿಯೊ ಅದೇ ಉಡುಪಿಯಲ್ಲಿ ವಿಭಿನ್ನ ಧರ್ಮದ ವಿದ್ಯಾರ್ಥಿನಿಯರು ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ್ದಾರೆ. ಈ ಹೃದಯಸ್ಪರ್ಶಿ ಸಂದರ್ಭದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿವೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ವಿಷಯ ಹೈಕೋರ್ಟ್ ಪ್ರವೇಶಿಸಿತು. ತದನಂತರ ಮಧ್ಯಂತರ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡ ಕಾರಣ ಹಲವೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ ರಾಜ್ಯ ಸರ್ಕಾರ 5 ದಿನಗಳ ರಜೆ ಘೋಷಿಸಿತ್ತು. ಅದಾದ ನಂತರ ಬುಧವಾರದಿಂದ ಶಾಲಾ-ಕಾಲೇಜುಗಳ ಮತ್ತೆ ಆರಂಭವಾಗಿವೆ. ಅಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಹಲವಾರು ವಿದ್ಯಾರ್ಥಿನಿಯರು ಕೈ ಕೈ ಹಿಡಿದು ಬಂದು ಸೌಹಾರ್ದ ಸಂದೇಶ ಸಾರಿದ್ದಾರೆ.

ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯಲ್ಲಿ ಈ ಫೋಟೊ “ವಿಭಿನ್ನತೆಯಲ್ಲಿ ಏಕತೆ” ಹೆಸರಿನಲ್ಲಿ ಪ್ರಕಟಗೊಂಡಿತ್ತು. ಆ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ನಾವು ಒಟ್ಟಾಗಿ ನಿಂತಿದ್ದೇವೆ. ನನ್ನ ಭಾರತ” ಎಂದು ಬರೆದುಕೊಂಡಿದ್ದಾರೆ.

“ಕೋಮುವಾದಿಗಳ ಆಟ ಬಹಳ ದಿನ ನಡೆಯದು. ನಮಗೆ ನಾಳೆಯ ಬಗ್ಗೆ ಭರವಸೆ ನೀಡುವುದು ಇಂತಹ ದೃಶ್ಯಗಳೇ” ಎಂದು ಹಿರಿಯ ಚಿಂತಕರಾದ ಶ್ರೀನಿವಾಸ ಕಾರ್ಕಳರವರು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಮಗುವನ್ನು ತೋಳದಂತೆ ಹಿಂಬಾಲಿಸಿದ ಪತ್ರಕರ್ತನೆಲ್ಲಿ? ಕೆಳಗಿರುವ ಕವಿತೆಯಂಥಾ ಫೋಟೋ ತೆಗೆದ ಇರ್ಶಾದ್‌ ಎಲ್ಲಿ? ಎಂದು ಕನ್ನಡದ ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ.

ಈ ನೆಲದ ಸಹಬಾಳ್ವೆಯ ತತ್ವ, ಪ್ರಭುತ್ವವನ್ನೂ ತಲೆಬಾಗಿಸಿದೆ…. ಎಂದು ದಯಾನಂದಗೌಡರವರು ಹಂಚಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಹಿಜಾಬ್‌ಗೆ ವಿರೋಧವಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಕಾಲೇಜಿಗೆ ಕಲ್ಲು ತೂರಿದ್ದು, ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು, ಮಂಡ್ಯದ ಮುಸ್ಕಾನ್ ಖಾನ್ ಎಂಬ ಹೆಣ್ಣು ಮಗಳ ಸುತ್ತುವರಿದು ಜೈಶ್ರೀರಾಮ್ ಕೂಗಿದ್ದು, ಮಾಧ್ಯಮಗಳು ವಿದ್ಯಾರ್ಥಿನಿಯರನ್ನು ಅಟ್ಟಾಡಿಸಿದ್ದು ಸಾಮಾಜಿಕ ವಾತವಾರಣವನ್ನು ಕಲುಷಿತಗೊಳಿಸಿದ್ದವು. ಈಗ ಉಡುಪಿಯ ವಿದ್ಯಾರ್ಥಿನಿಯರು ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಬಾಂಧವ್ಯ ಮೆರೆದಿದ್ದಾರೆ. ಹಾಗಾಗಿ ಈ ಫೋಟೊವನ್ನು ಸಾವಿರಾರು ಜನ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ; Hijab Live | ಹಿಜಾಬ್ ಲೈವ್‌ | ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ. ಬಹುಶ ಕವನ ಇಷ್ಟೇ ಇತ್ತು ಅನ್ನಿಸುತ್ತೆ.)

  2. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ.)

  3. ‘ ನಾವು ಎಳೆಯರು ನಾವು ಗೆಳೆಯರು ‘
    ಕವನ ರಚಿಸಿದ ಕವಿ
    ಶಂ . ಗು . ಬಿರಾದಾರ
    ಇವರು ನನ್ನ ತಂದೆ ಶಂಕರಗೌಡ ಗುರುಗೌಡ ಬಿರಾದಾರ ಇವರ ಪೂರ್ಣ ಹೆಸರು
    ನೆನಪಿಸಿದ ನಿಮಗೆ ಧನ್ಯವಾದಗಳು
    ಪೂರ್ಣ ಕವನ ಕಳಿಸುವೆ

    • ನಿಮಗೂ ಧನ್ಯವಾದಗಳು ಸರ್. ಸಾರ್ವಕಾಲಿಕ ಕವನ ಅದು. ಅದು ಆಡಿಯೋ ಇದ್ದರೆ ಕೊಡಿ.. ಮಕ್ಕಳಿಂದ ನೃತ್ಯ ಮಾಡಿಸಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

  4. ಈ ಕವನ ರಚಿಸಿದವರು ಶಂ ಗು ಬಿರಾದಾರ
    ಪೂರ್ಣ ಹೆಸರು ಶಂಕರಗೌಡ ಗುರುಗೌಡ ಬಿರಾದಾರ
    ಇವರು ನನ್ನ ತಂದೆ ಪೂರ್ಣ ಕವನ ಕಳಿಸುವೆ

  5. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ

  6. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ
    9448776817 ಈ ನಂಬರನ್ನು ಸಂಪರ್ಕಿಸಿ

  7. Vijay sir ನನಗೂ ಒಂದು ವಿಡಿಯೋ ಕಳಿಸಿ. ಶಮ್. ಗು. ಬಿರಾದಾರ್ ಸರ್ ಆತ್ಮಕ್ಕೆ ಚಿರ ಋಣಿ.

  8. ಶಂ. ಗು. ಬಿರಾದಾರ ಸರ್ ಆತ್ಮಕ್ಕೆ ನಾನು ಚಿರಋಣಿ. ವಿಜಯ್ ಸರ್,ನನಗೂ ಒಂದು ವಿಡಿಯೊ ಬೇಕು.ನಮ್ಮ ಶಾಲೆಯ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬೇಕು. ದಯವಿಟ್ಟು ‌‌‌ಸಂಪರ್ಕಿಸಬಹುದೆ!

LEAVE A REPLY

Please enter your comment!
Please enter your name here

- Advertisment -

ಮತ್ತೊಬ್ಬರು ಬಿಎಲ್‌ಒ ಆತ್ಮಹತ್ಯೆ : ಎಸ್‌ಐಆರ್ ಒತ್ತಡ ಆರೋಪ

ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ 40 ವರ್ಷದ ಶಿಕ್ಷಕ ಹಾಗೂ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅರವಿಂದ ಮುಲ್ಜಿ ವಾಧೇರ್ ಎಂಬವರು ತಮ್ಮ ಹುಟ್ಟೂರು ದೇವ್ಲಿ ಗ್ರಾಮದಲ್ಲಿ ಶುಕ್ರವಾರ (ನವೆಂಬರ್ 21) ಆತ್ಮಹತ್ಯೆ...

ಭೂಮಿ-ವಸತಿಗಾಗಿ ನವೆಂಬರ್ 26ರಂದು ಬೆಂಗಳೂರು ಚಲೋ

'ಉಳುವವರಿಗೆ ಭೂಮಿ' ನಿನಾದದೊಂದಿಗೆ ಸ್ವತಂತ್ರಗೊಂಡ ಭಾರತದಲ್ಲಿ 79 ವರ್ಷಗಳಾದರೂ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಕೋಟ್ಯಾಂತರ ಬಡ ಕುಟುಂಬಗಳಿಗೆ ತುಂಡು ಭೂಮಿ ಇಲ್ಲವಾಗಿದೆ. ಉಳುಮೆಗೆ ಮಾತ್ರವಲ್ಲ ನೆತ್ತಿಯ ಮೇಲೊಂದು ಸೂರೂ ಇಲ್ಲವಾಗಿದೆ. ಸತ್ತ...

ದುಬೈ ಏರ್‌ಶೋನಲ್ಲಿ ಭಾರತದ ತೇಜಸ್‌ ಯುದ್ಧವಿಮಾನ ಪತನ ; ಪೈಲಟ್‌ ಸಾವು

ದುಬೈ ಏರ್ ಶೋನಲ್ಲಿ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನಗೊಂಡಿದೆ. ಶುಕ್ರವಾರ (ನವೆಂಬರ್ 21) ಸ್ಥಳೀಯ ಸಮಯ ಮಧ್ಯಾಹ್ನ 2:10ರ ಸುಮಾರಿಗೆ ದುರ್ಘಟನೆ ನಡೆದಿದೆ. ದೊಡ್ಡ ಜನಸಮೂಹದ ಮುಂದೆ ವೈಮಾನಿಕ ಪ್ರದರ್ಶನ ನೀಡುತ್ತಿದ್ದಾಗ...

ಎಲ್ಲ 140 ಮಂದಿ ಶಾಸಕರೂ ನನ್ನವರೇ, ಗುಂಪುಗಾರಿಕೆ ನನ್ನ ರಕ್ತದಲ್ಲಿಲ್ಲ: ಡಿ.ಕೆ. ಶಿವಕುಮಾರ್

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಎಲ್ಲ 140 ಮಂದಿ ಶಾಸಕರೂ ನನ್ನವರೇ. ಗುಂಪುಗಾರಿಕೆ ಮಾಡುವುದು ನನ್ನ ರಕ್ತದಲ್ಲಿಯೇ ಇಲ್ಲ'...

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ : 6 ಸಾವು

ಶುಕ್ರವಾರ (ನವೆಂಬರ್ 21) ಬೆಳಿಗ್ಗೆ ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. 26 ಸೆಕೆಂಡುಗಳ ಕಾಲ ಕಂಪನ ಸಂಭವಿಸಿದ್ದು, ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲೂ...

ರಾಜ್ಯಪಾಲರು ಮಸೂದೆಗಳನ್ನು ಅಂಗೀಕರಿಸಲು ಸಮಯ ಮಿತಿ ನಿಗದಿ ಮಾಡುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ: ಸ್ಟಾಲಿನ್ 

ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳನ್ನು ಅಂಗೀಕರಿಸಲು ರಾಜ್ಯಪಾಲರಿಗೆ ಸಮಯ ಮಿತಿಯನ್ನು ನಿಗದಿಪಡಿಸಲು ಸಂವಿಧಾನದ 200ನೇ ವಿಧಿಗೆ ತಿದ್ದುಪಡಿ ತರಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಆಗ್ರಹಿಸಿದ್ದಾರೆ.  ರಾಷ್ಟ್ರಪತಿಗಳ ಉಲ್ಲೇಖಕ್ಕೆ ಉತ್ತರಿಸುವಾಗ ಸುಪ್ರೀಂ ಕೋರ್ಟ್‌ನ...

ಕೊಲೆಯತ್ನ ಆರೋಪ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಬಂಧನ

ಕೊಲೆಯತ್ನ ಆರೋಪದ ಮೇಲೆ ಕಲಬುರಗಿಯ ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅನ್ನು ಅಫಜಲಪುರ ತಾಲೂಕಿನ ಶಿರವಾಳ ಸಮೀಪ ಗುರುವಾರ (ನವೆಂಬರ್ 20) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ. ನಾಟಿ ಔಷಧಿ...

ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಹಲ್ಲೆ : ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ; ವರದಿ

ಮುಂಬೈ ಉಪನಗರ ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಸಹ ಪ್ರಯಾಣಿಕರು ಹಲ್ಲೆ ನಡೆಸಿದ್ದು, ಇದರಿಂದ ಮನನೊಂದು ಕಲ್ಯಾಣ್ ಮೂಲದ 19 ವರ್ಷದ ಬಿಎಸ್ಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಮುಳುಂದ್‌ನ ಕೇಳ್ಕರ್ ಕಾಲೇಜಿನ ವಿದ್ಯಾರ್ಥಿ...

ಟ್ರಂಪ್ ಬೆದರಿಕೆ ಬೆನ್ನಲ್ಲೇ ರಷ್ಯಾದಿಂದ ತೈಲ ಆಮದು ನಿಲ್ಲಿಸಿದ ರಿಲಯನ್ಸ್ ಇಂಡಸ್ಟ್ರೀಸ್

ಗುಜರಾತ್‌ನ ಜಾಮ್‌ನಗರದಲ್ಲಿರುವ ತನ್ನ ಸಂಸ್ಕರಣಾಗಾರಕ್ಕೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರದಿಂದ (ನವೆಂಬರ್ 20) ನಿಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಗಳ...