Homeಮುಖಪುಟಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ...

ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್

ಈ ಫೋಟೊವನ್ನು ಸಾವಿರಾರು ಜನರು 'ಇದು ನನ್ನ ಭಾರತ' ಎಂಬ ಹೆಸರಿನೊಂದಿಗೆ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.

- Advertisement -
- Advertisement -

ಯಾವ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಲಾಯಿಯೊ ಅದೇ ಉಡುಪಿಯಲ್ಲಿ ವಿಭಿನ್ನ ಧರ್ಮದ ವಿದ್ಯಾರ್ಥಿನಿಯರು ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ್ದಾರೆ. ಈ ಹೃದಯಸ್ಪರ್ಶಿ ಸಂದರ್ಭದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿವೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ವಿಷಯ ಹೈಕೋರ್ಟ್ ಪ್ರವೇಶಿಸಿತು. ತದನಂತರ ಮಧ್ಯಂತರ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡ ಕಾರಣ ಹಲವೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ ರಾಜ್ಯ ಸರ್ಕಾರ 5 ದಿನಗಳ ರಜೆ ಘೋಷಿಸಿತ್ತು. ಅದಾದ ನಂತರ ಬುಧವಾರದಿಂದ ಶಾಲಾ-ಕಾಲೇಜುಗಳ ಮತ್ತೆ ಆರಂಭವಾಗಿವೆ. ಅಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಹಲವಾರು ವಿದ್ಯಾರ್ಥಿನಿಯರು ಕೈ ಕೈ ಹಿಡಿದು ಬಂದು ಸೌಹಾರ್ದ ಸಂದೇಶ ಸಾರಿದ್ದಾರೆ.

ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯಲ್ಲಿ ಈ ಫೋಟೊ “ವಿಭಿನ್ನತೆಯಲ್ಲಿ ಏಕತೆ” ಹೆಸರಿನಲ್ಲಿ ಪ್ರಕಟಗೊಂಡಿತ್ತು. ಆ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ನಾವು ಒಟ್ಟಾಗಿ ನಿಂತಿದ್ದೇವೆ. ನನ್ನ ಭಾರತ” ಎಂದು ಬರೆದುಕೊಂಡಿದ್ದಾರೆ.

“ಕೋಮುವಾದಿಗಳ ಆಟ ಬಹಳ ದಿನ ನಡೆಯದು. ನಮಗೆ ನಾಳೆಯ ಬಗ್ಗೆ ಭರವಸೆ ನೀಡುವುದು ಇಂತಹ ದೃಶ್ಯಗಳೇ” ಎಂದು ಹಿರಿಯ ಚಿಂತಕರಾದ ಶ್ರೀನಿವಾಸ ಕಾರ್ಕಳರವರು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಮಗುವನ್ನು ತೋಳದಂತೆ ಹಿಂಬಾಲಿಸಿದ ಪತ್ರಕರ್ತನೆಲ್ಲಿ? ಕೆಳಗಿರುವ ಕವಿತೆಯಂಥಾ ಫೋಟೋ ತೆಗೆದ ಇರ್ಶಾದ್‌ ಎಲ್ಲಿ? ಎಂದು ಕನ್ನಡದ ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ.

ಈ ನೆಲದ ಸಹಬಾಳ್ವೆಯ ತತ್ವ, ಪ್ರಭುತ್ವವನ್ನೂ ತಲೆಬಾಗಿಸಿದೆ…. ಎಂದು ದಯಾನಂದಗೌಡರವರು ಹಂಚಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಹಿಜಾಬ್‌ಗೆ ವಿರೋಧವಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಕಾಲೇಜಿಗೆ ಕಲ್ಲು ತೂರಿದ್ದು, ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು, ಮಂಡ್ಯದ ಮುಸ್ಕಾನ್ ಖಾನ್ ಎಂಬ ಹೆಣ್ಣು ಮಗಳ ಸುತ್ತುವರಿದು ಜೈಶ್ರೀರಾಮ್ ಕೂಗಿದ್ದು, ಮಾಧ್ಯಮಗಳು ವಿದ್ಯಾರ್ಥಿನಿಯರನ್ನು ಅಟ್ಟಾಡಿಸಿದ್ದು ಸಾಮಾಜಿಕ ವಾತವಾರಣವನ್ನು ಕಲುಷಿತಗೊಳಿಸಿದ್ದವು. ಈಗ ಉಡುಪಿಯ ವಿದ್ಯಾರ್ಥಿನಿಯರು ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಬಾಂಧವ್ಯ ಮೆರೆದಿದ್ದಾರೆ. ಹಾಗಾಗಿ ಈ ಫೋಟೊವನ್ನು ಸಾವಿರಾರು ಜನ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ; Hijab Live | ಹಿಜಾಬ್ ಲೈವ್‌ | ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ. ಬಹುಶ ಕವನ ಇಷ್ಟೇ ಇತ್ತು ಅನ್ನಿಸುತ್ತೆ.)

  2. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ.)

  3. ‘ ನಾವು ಎಳೆಯರು ನಾವು ಗೆಳೆಯರು ‘
    ಕವನ ರಚಿಸಿದ ಕವಿ
    ಶಂ . ಗು . ಬಿರಾದಾರ
    ಇವರು ನನ್ನ ತಂದೆ ಶಂಕರಗೌಡ ಗುರುಗೌಡ ಬಿರಾದಾರ ಇವರ ಪೂರ್ಣ ಹೆಸರು
    ನೆನಪಿಸಿದ ನಿಮಗೆ ಧನ್ಯವಾದಗಳು
    ಪೂರ್ಣ ಕವನ ಕಳಿಸುವೆ

    • ನಿಮಗೂ ಧನ್ಯವಾದಗಳು ಸರ್. ಸಾರ್ವಕಾಲಿಕ ಕವನ ಅದು. ಅದು ಆಡಿಯೋ ಇದ್ದರೆ ಕೊಡಿ.. ಮಕ್ಕಳಿಂದ ನೃತ್ಯ ಮಾಡಿಸಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

  4. ಈ ಕವನ ರಚಿಸಿದವರು ಶಂ ಗು ಬಿರಾದಾರ
    ಪೂರ್ಣ ಹೆಸರು ಶಂಕರಗೌಡ ಗುರುಗೌಡ ಬಿರಾದಾರ
    ಇವರು ನನ್ನ ತಂದೆ ಪೂರ್ಣ ಕವನ ಕಳಿಸುವೆ

  5. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ

  6. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ
    9448776817 ಈ ನಂಬರನ್ನು ಸಂಪರ್ಕಿಸಿ

  7. Vijay sir ನನಗೂ ಒಂದು ವಿಡಿಯೋ ಕಳಿಸಿ. ಶಮ್. ಗು. ಬಿರಾದಾರ್ ಸರ್ ಆತ್ಮಕ್ಕೆ ಚಿರ ಋಣಿ.

  8. ಶಂ. ಗು. ಬಿರಾದಾರ ಸರ್ ಆತ್ಮಕ್ಕೆ ನಾನು ಚಿರಋಣಿ. ವಿಜಯ್ ಸರ್,ನನಗೂ ಒಂದು ವಿಡಿಯೊ ಬೇಕು.ನಮ್ಮ ಶಾಲೆಯ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬೇಕು. ದಯವಿಟ್ಟು ‌‌‌ಸಂಪರ್ಕಿಸಬಹುದೆ!

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...