Homeಕರ್ನಾಟಕಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

- Advertisement -
- Advertisement -

ಉತ್ತರ ಕನ್ನಡ ರಾಜಕೀಯದ ಹಳೆ ಹುಲಿ ರಘುನಾಥ್ ವಿಶ್ವನಾಥರಾವ್ ದೇಶಪಾಂಡೆಯ ಉತ್ತರಾಧಿಕಾರಿ ಎಂದೆ ಬಿಂಬಿತವಾಗಿರುವ ಅವರ ಪುತ್ರ ಪ್ರಶಾಂತ ದೇಶಪಾಂಡೆ ತಾನು ಯಲ್ಲಾಪುರದಿಂದ ಅಸೆಂಬ್ಲಿಗೆ ಸ್ಪರ್ಧಿಸಲು ಸಿದ್ಧನೆಂದು ಹೇಳಿದ್ದಾರೆ. ಈ ಮೂಲಕ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ನಾನಾ ನಮೂನೆಯ ಸಮೀಕರಣದ ಸಾಧ್ಯತೆಯ ಚರ್ಚೆ ಶುರುವಾಗಿಬಿಟ್ಟಿದೆ.

ಪ್ರಶಾಂತ್ ದೇಶಪಾಂಡೆ ಕಳೆದೊಂದು ವರ್ಷದಿಂದ ತುಂಬ ಆಸಕ್ತಿಯಿಂದ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ಧಾರೆ. ತಾನು ಕಾಂಗ್ರೆಸ್‌ನಲ್ಲಿದ್ದರೆ ದೇಶಪಾಂಡೆ ತನಗೆ ಮಂತ್ರಿಯಾಗಲು ಬಿಡುವುದಿಲ್ಲ… ತನ್ನ ಏಳ್ಗೆಗೆ ದೇಶಪಾಂಡೆ ಅಡ್ಡಗಾಲು ಹಾಕುತ್ತಾರೆಂಬ ಅರ್ಥದ ಮಾತಾಡಿ ಬಿಜೆಪಿ ಸೇರಿ ಸಚಿವರಾದ ಶಿವರಾಮ್ ಹೆಬ್ಬಾರ್ ರವರ ತವರು ಕ್ಷೇತ್ರ ಯಲ್ಲಾಪುರ. ಅಪ್ಪ ನಾಲ್ಕು ದಶಕದಿಂದ ಪ್ರತಿನಿಧಿಸುತ್ತಿರುವ ಹಳಿಯಾಳ ಬಿಟ್ಟು ಮಂತ್ರಿ ಹೆಬ್ಬಾರರ ಸ್ವಜಾತಿ ಹವ್ಯಕ ಬ್ರಾಹ್ಮಣರೆ ಹೆಚ್ಚಿರುವ ಯಲ್ಲಾಪುರದಲ್ಲೇಕೆ ಪ್ರಶಾಂತ ಆಟ ಆರಂಭಿಸಿದ್ದಾರೆಂಬ ಒಗಟು ಒಡೆಯಲಾಗದೆ ರಾಜಕೀಯ ತಂತ್ರಜ್ಞರು ತಲೆ ಕೆರೆದುಕೊಳ್ಳುವಂತಾಗಿತ್ತು!

ದೇಶಪಾಂಡೆ

ಮಗನನ್ನು ಲೋಕಸಭಾ ಸದಸ್ಯ ಮಾಡಬೇಕೆಂಬ ದೊಡ್ಡ ಕನಸು ದೇಶಪಾಂಡೆಯವರದು. 2014ರ ಪಾರ್ಲಿಮೆಂಟ್ ಎಲೆಕ್ಷನ್‌ಗೆ ಮಗನನ್ನು ಆಖಾಡಕ್ಕಿಳಿಸಿದ್ದರು. ಆದರೆ ನಂಬಿದವರೆ ಕೈಕೊಟ್ಟು ಸೋಲಿಸಿದ್ದರು. ಹತಾಶನಾದ ಪ್ರಶಾಂತ್ ಮುಂಬೈನ ವಕೀಲಿ ವೃತ್ತಿಯಲ್ಲಿ ತೊಡಗಿಕೊಂಡು ಐದಾರು ವರ್ಷ ಜಿಲ್ಲೆಯತ್ತ ತಿರುಗಿಯೂ ನೋಡಲಿಲ್ಲ. 2019ರ ಚುನಾವಣೆ ಹುಸಾಬರಿಗೂ ಹೋಗಲಿಲ್ಲ. ಯಾವಾಗ ಹೆಬ್ಬಾರ್ ಬಿಜೆಪಿಯಿಂದ ಉಪಚುನಾವಣೆಗೆ ಸ್ಪರ್ಧಿಸಿದರೋ ಆಗ ಚುರುಕಾದ ಪ್ರಶಾಂತ್ ಹೆಚ್ಚೆಚ್ಚು ಯಲ್ಲಾಪುರ-ಮುಂಡಗೋಡಲ್ಲಿ ಕಾಣಿಸಿ ಕೊಳ್ಳತೊಡಗಿದರು. ಕೋವಿಡ್ ಸಂತ್ರಸ್ತರಿಗೆ ತನ್ನಜ್ಜನ ಹೆಸರಿನ ಟ್ರಸ್ಟ್ ವತಿಯಿಂದ ನೆರವಾಗುವ ನೆಪದಲ್ಲಿ ಹಳ್ಳಿ-ಹಳ್ಳಿ ಹೊಕ್ಕು ಹೊರಬರತೊಡಗಿದರು. ಯಲ್ಲಾಪುರದಿಂದ ಶಾಸಕನಾಗುವ ಇರಾದೆಯಿಂದಲೇ ನಿಧಾನವಾಗಿ ಕ್ಷೇತ್ರ ಹದಗೊಳಿಸಿಕೊಳ್ಳ ಹತ್ತಿದ್ದರು. ಕೇತ್ರ ಪುನರ್ ವಿಂಗಡಣೆಗೂ ಮೊದಲು ಈಗ ಯಲ್ಲಾಪುರದ ಜತೆಗಿರುವ ಮುಂಡಗೋಡು ಹಳಿಯಾಳ ಕ್ಷೇತ್ರದಲ್ಲಿತ್ತು. ಇಲ್ಲಿಂದ ದೇಶಪಾಂಡೆ ನಾಲ್ಕು ಸಲ ಆಯ್ಕೆಯಾಗಿದ್ದರು. ಹೀಗಾಗಿ ಮಂಡಗೋಡಿನಲ್ಲಿರುವ ತಂದೆಯ ಪ್ರಭಾವ ತನಗೆ ಅನುಕೂಲಕರವೆಂದು ಪ್ರಶಾಂತ ಲೆಕ್ಕಹಾಕಿದ್ದಾರೆ.

ಅಪ್ಪ-ಮಗ ತಮ್ಮ ಶತ್ರು ಹೆಬ್ಬಾರ್‌ಗೆ ಪಾಠ ಕಲಿಸಲು ಪ್ಲಾನ್ ಹಾಕಿದ್ದಾರೆಂಬ ಭಾವನೆ ಸಹಜವಾಗೆ ಮೂಡಿತ್ತು. ಮಂತ್ರಿ ಹೆಬ್ಬಾರ್‌ಗೂ ಕಿರಿಕಿರಿಯಾದರೂ ದೇಶಪಾಂಡೆ ಆ ರಿಸ್ಕ್ ತೆಗೆದುಕೊಳ್ಳಲಿಕ್ಕಿಲ್ಲವೆಂಬ ಸಮಾಧಾನದಲ್ಲಿದ್ದರು. ಆದರೆ ಸ್ವಕ್ಷೆತ್ರ ಹಳಿಯಾಳದಲ್ಲಾಗತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಹೆಬ್ಬಾರ್ ಕಾಂಗ್ರೆಸಲ್ಲಿದ್ದಾಗ ಭಟ್ಕಳ ಶಾಸಕನಾಗಿದ್ದ ಮಂಕಾಳ್ ವೈದ್ಯ, ಕಾರವಾರದ ಸತೀಶ್ ಸೈಲ್‌ರ ಜತೆ ಸೇರಿ ಕೆಡಿಸಿಸಿ ಸಿಂಡಿಕೇಟ್ [ಇವರೆಲ್ಲ ಅಂದು ಜಿಲ್ಲಾ ಮದ್ಯವರ್ತಿ ಬ್ಯಾಂಕ್-ಕೆಡಿಸಿಸಿ ನಿರ್ದೇಶಕರಾಗಿದ್ದರು] ಕಟ್ಟಿ ಕಾಡಿದ ಸೇಡು ತೀರಿಸಿಕೊಳ್ಳುವ ಹಠದಿಂದ ದೇಶಪಾಂಡೆಗೆ ಮಗನನ್ನು ಯಲ್ಲಾಪುರದಲ್ಲಿ ಅಶ್ವಮೇಧದ ಕುದುರೆಯಾಗಿ ಬಿಡಬೇಕಾಗಿ ಬಂತು! ಬಿಜೆಪಿ ಮಂತ್ರಿಯಾಗಿದ್ದರೂ ಈಗಲೂ ಸಹ ಹೆಬ್ಬಾರ್ ಕಾಂಗ್ರೆಸ್ ರಾಜಕಾರಣದಲ್ಲಿ ಕೈಯ್ಯಾಡಿಸುತ್ತ ತನ್ನ ವಿರುದ್ದ ಸಂಚು ಮಾಡುತ್ತಿದ್ದಾರರೆಂಬ ಸಂಶಯ ಕಾಡುತ್ತಿದೆಯಂದು ಹೆಬ್ಬಾರ್ ಹಳೆ ’ಸಿಂಡಿಕೇಟ್’ ಹಿಡಿದುಕೊಂಡು ಹೊಸ ಡಿಸಿಸಿ ಅಧ್ಯಕ್ಷ ದೇಶಪಾಂಡೆ ನಿಷ್ಟನಾಗದಂತೆ ನೋಡಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.

ಮಗನಿಗಾಗಿ ದೆಶಪಾಂಡೆ ಮೊದಲ ಆಯ್ಕೆ ಹಳಿಯಾಳವೇ ಆಗಿತ್ತು. ಆದರೆ ಅಲ್ಲಿ ಮಗನನ್ನು ಉತ್ತರಾಧಿಕಾರಿಯಾಗಿ ಪ್ರತಿಷ್ಟಾಪಿಸಲು ಈಗ ವೈರಿಯಾಗಿ ಬದಲಾಗಿರುವ ಹಲವು ವರ್ಷದ ನಿಷ್ಟಾವಂತ ಶಿಷ್ಯ ಎಮ್‌ಎಲ್‌ಸಿ ಶ್ರೀಕಾಂತ ಘೋಟನೇಕರ್ ಬಿಡುತ್ತಿಲ್ಲ. ಮರಾಠರು ಪ್ರಥಮ ಬಹು ಸಂಖ್ಯಾತರಾಗಿರುವ ಹಳಿಯಾಳದಲ್ಲಿ ದೇಶಪಾಂಡೆಯ ಕೊಂಕಣಿ [ಜಿಎಸ್‌ಬಿ] ಸಮುದಾಯ ಸೂಕ್ಮದರ್ಶಕದಲ್ಲಿ ನೋಡಬೇಕಾದಷ್ಟು ಸಣ್ಣದು! ದೇಶಪಾಂಡೆಗೆ ವಯಸ್ಸಾಗಿರುವುದರಿಂದ ತನಗೆ ಕ್ಷೇತ್ರ ಬಿಟ್ಟುಕೊಡುವಂತೆ ಮರಾಠ ಜಾತಿಯ ಘೋಟನೇಕರ್ ಕೇಳುತ್ತಿದ್ದಾರೆ. ಸಂದರ್ಭ ಸಿಕ್ಕಾಗೆಲ್ಲ ದೇಶಪಾಂಡೆಯನ್ನು ಬಹಿರಂಗವಾಗೆ ಜರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಡಿಕೆಶಿ ಹುಬ್ಬಳ್ಳಿಯಲ್ಲಿ ಉತ್ತರ ಕನ್ನಡದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಾಗ ದೇಶಪಾಂಡೆ ಎದುರೇ ಘೋಟನೇಕರ್ ಟಿಕೆಟ್ ಕ್ಲೇಮ್ ಮಾಡಿದ್ದರು.

ಶಿವರಾಮ್ ಹೆಬ್ಬಾರ್

ಸ್ಥಳೀಯ ಸಂಸ್ಥೆಯಿಂದ ಎಮ್‌ಎಲ್‌ಸಿಯಾಗಿರುವ ಘೋಟನೇಕರ್ ಈ ಬಾರಿ ಅಸೆಂಬ್ಲಿ ಸ್ಪರ್ಧೆಗೆ ಹಠದಿಂದ ಅವಕಾಶ ಕೇಳುತ್ತಿರುವುದಕ್ಕೆ ಎರಡು ಕಾರಣವಿದೆ. ಒಂದು ದೇಶಪಾಂಡೆ ಮತ್ತೆ ಪರಿಷತ್ ಸ್ಪರ್ದೆಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವುದಿಲ್ಲವೆಂಬುದು. ಇನ್ನೊಂದು ಸ್ಥಳೀಯ ಸಂಸ್ಥೆ ಸದಸ್ಯ ಮತದಾರರು ಕಾಂಗ್ರೆಸ್‌ಗಿಂತ ಬಿಜೆಪಿಯಲ್ಲಿ ತುಸು ಹೆಚ್ಚೇ ಇರುವುದರಿಂದ ಗೆಲ್ಲುವುದು ಕಷ್ಟವೆಂಬುದು ಅವರ ಲೆಕ್ಕಾಚಾರ. ಪರಿಷತ್ ಚುನಾವಣೆ ಬೆನ್ನಿಗೆ ವಿಧಾನಸಭೆ ಎಲೆಕ್ಷನ್ ಬರುವುದರಿಂದ ಘೋಟನೇಕರ್ ಪ್ರತಿ ಬಾರಿಯೂ ಇಂಥದೇ ಒತ್ತಡ ತಂತ್ರಗಾರಿಕೆ ನಡೆಸುತ್ತಾರೆಂದು ದೇಶಪಾಂಡೆ, ಘೋಟನೇಕರ್ “ಜಗಳ್”ಬಂದಿ ಬಲ್ಲವರು ಹೇಳುತ್ತಾರೆ. ಒಂದಂತೂ ಖರೆ ಹೈಕಮಾಂಡ್ ಮಟ್ಟದಲ್ಲಿ ಬೆಳೆದಿರುವ ದೇಶಪಾಂಡೆಗೆ ಟಿಕೆಟ್ ತಪ್ಪಿಸುವ ತಾಕತ್ತು ಘೋಟನೇಕರ್‌ಗೆ ಇಲ್ಲ. ಬಂಡಾಯವೆದ್ದು ಸ್ಪರ್ಧಿಸಿ ದೇಶಪಾಂಡೆಗೆ ನಡುಕ ಮೂಡಿಸಬಹುದಷ್ಟೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗ ಬಿಜೆಪಿಯಲ್ಲಿರುವ ಮಾಜಿ ಶಾಸಕ ಸುನೀಲ್ ಹೆಗ್ಡೆ ಕಾಂಗ್ರೆಸ್‌ನಿಂದ ಹೊರಬೀಳುವಾಗ ಇಂಥದೆ ಪರಿಸ್ಥಿತಿ ಉದ್ಭವವಾಗಿತ್ತು. ಸುನೀಲ್ ತಂದೆ ವಿ.ಡಿ.ಹೆಗ್ಡೆ ಒತ್ತಡ ಹಾಕಿಯೇ ಎಮ್‌ಎಲ್‌ಸಿ ಆಗಿದ್ದರು. ಎರಡನೇ ಬಾರಿ ವಿ.ಡಿ ಹೆಗ್ಡೆಗೆ ದೇಶಪಾಂಡೆ ಅವಕಾಶ ಕೊಡಲಿಲ್ಲ. ಕೆರಳಿದ ವಿ.ಡಿ ಹೆಗ್ಡೆ ಮಗ ಸುನೀಲ್ ಸಮೇತ ಜೆಡಿಎಸ್ ಸೇರಿದ್ದರು. ದೇಶಪಾಂಡೆ ಯಾವ ಪಕ್ಷದಲ್ಲೆ ಇರಲಿ ಎಮ್‌ಎಲ್‌ಸಿಯಾಗಲು ಯಾರಿಗೂ ಎರಡನೇ ಅವಕಾಶ ಕೊಟ್ಟಿದ್ದೆ ಇಲ್ಲ. ಆದರೆ ಘೋಟನೇಕರ್ ಮಾತ್ರ ಗುರುವನ್ನು ಬಗ್ಗಿಸಿ ಎರಡನೇ ಛಾನ್ಸ್ ಗಿಟ್ಟಿಸಿದ್ದರು. ದೇಶಪಾಂಡೆ ಕ್ಷೇತ್ರದಲ್ಲಿ ದುರ್ಬಲಗೊಂಡಿದ್ದೆ ಇದಕ್ಕೆ ಕಾರಣವಾಗಿತ್ತು. ಈಗ ದೇಶಪಾಂಡೆಗೆ ಹಳೆ ಸಂದಿಗ್ಧ ಎದುರಾಗಿದೆ. ದೇಶಪಾಂಡೆ ಮಣಿಯುವರಾ? ಘೋಟನೇಕರ್ ತಿರುಗಿ ಬೀಳುವರಾ? ದೇಶಪಾಂಡೆ, ಘೋಟನೇಕರ್, ಸುನೀಲ್ ಹೆಗ್ಡೆ ಮಧ್ಯೆ ತ್ರಿಕೋನ ಕಾಳಗವಾದರೆ ಯಾರು ಬೇಕಾದರೂ ಗೆಲ್ಲಬಹುದೆಂಬ ಚರ್ಚೆ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಶುರುಹತ್ತಿಕೊಂಡಿದೆ.


ಇದನ್ನೂ ಓದಿ: ನೆಹರು ಕುರಿತು ಸಿ.ಟಿ ರವಿ ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪರೋಕ್ಷ ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...