Homeಕರ್ನಾಟಕಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು

ಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು

- Advertisement -
- Advertisement -

ಹರಿಗೆ ಎಂದು ಗುಡಿಯನೊಂದು
ಕಟ್ಟುತ್ತಿರುವೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?

ಎಂದು ಹಾಡಿದ ಅಂಕೋಲೆಯ “ಚುಟುಕು ಬ್ರಹ್ಮ” ದಿನಕರ ದೇಸಾಯಿಯವರ ಮಾತೃಭಾಷೆ ಕೊಂಕಣಿ! ರೈತ-ಕಾರ್ಮಿಕ ಹೋರಾಟ ಕಟ್ಟಿದ ದೇಸಾಯಿ ಕನ್ನಡ ಕಟ್ಟುವ ಕೈಂಕರ್ಯದಲ್ಲೂ ಹಿಂದಿರಲಿಲ್ಲ. ವಿಭಿನ್ನ ಜನ-ಜಾತಿ ಮತ್ತು ವಿವಿಧ ಭಾಷೆಯ ಉತ್ತರ ಕನ್ನಡದ ಮಣ್ಣಿನ ಸೊಗಡು-ಕಸುವುಗಳೇ ಅಂಥದ್ದು. ವಿಭಿನ್ನ ಭಾಷೆ-ಸಂಸ್ಕೃತಿಗಳಿದ್ದರೂ ಕನ್ನಡ ನಾಡು, ನುಡಿಯ ಜೊತೆಗೆ ಬಾಂಧವ್ಯ ಉಳಿಸಿಕೊಂಡೇ ಬಂದಿದೆ ಉತ್ತರ ಕನ್ನಡ.

ಮಲೆನಾಡು, ಕರಾವಳಿ, ಅರೆಬಯಲುಸೀಮೆಯಂಥ ವಿಶಿಷ್ಟ ಭೌಗೋಳಿಕ ಪರಿಸರದ ಈ ಜಿಲ್ಲೆಯ ಹಲವು ಕೊಂಕಣಿ ಮತ್ತು ಮರಾಠಿಗರು ಕನ್ನಡ ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ, ರಾಜಕೀಯ, ಸಾಮಾಜಿಕ, ಮಾಹಿತಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಿಗೆ ಎಂದೆಂದೂ ಅಳಿಸಲಾಗದ ದೊಡ್ಡ ಕೊಡುಗೆಗಳನ್ನೇ ಕೊಟ್ಟಿದ್ದಾರೆ. ಜಿಲ್ಲೆಗೊಂದು ನಿಜ ನಾಯಕತ್ವ ನೀಡಿದ್ದ ದಿನಕರ ದೇಸಾಯಿ ಲೋಕಸಭಾ ಸದಸ್ಯರೂ ಆಗಿದ್ದರು. ತ್ರಿಭಾಷಾ ಸಾಹಿತಿಯಾಗಿದ್ದ ಈ ಗೇಣಿದಾರರ-ಕೂಲಿಕಾರರ ಗೆಣೆಗಾರ ಲಲಿತ ಸಾಹಿತ್ಯ ಮತ್ತು ವೈಚಾರಿಕ ಬರಹಗಳಿಂದ ಪ್ರಸಿದ್ಧಿ ಪಡೆದಿದ್ದರು. ಜನರಲ್ಲಿ ತಿಳಿವು ಅರಿವು ಮೂಡಿಸಲೆಂದು “ಜನಸೇವಕ” ಎಂಬ ಪತ್ರಿಕೆ ಹೊರತರುತ್ತಿದ್ದ ದೇಸಾಯಿ ಹತ್ತಾರು ಹೈಸ್ಕೂಲು, ಕಾಲೇಜು ತೆರೆದು ಹಳ್ಳಿಗಾಡಿನಲ್ಲಿ ವಿದ್ಯಾಪ್ರಸಾರದ ಅಭೂತಪೂರ್ವ ಸಾಹಸ-ಸಾಧನೆ ಮಾಡಿದ್ದರು.

ಕನ್ನಡ, ಮರಾಠಿ, ಕೊಂಕಣಿ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸಿರುವ ಗೋಕರ್ಣದ ಡಾ. ಗೌರೀಶ್ ಕಾಯ್ಕಿಣಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಮೂರ್ತಿಭಂಜಕ ಪ್ರವೃತ್ತಿಯ ಕೊಂಕಣಿ ಮನೆಮಾತಾಗಿರುವ ಕಾಯ್ಕಿಣಿ ಅವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎನ್ನುತ್ತಿದ್ದರು. ಹರಿತ ವೈಚಾರಿಕ ಸಾಹಿತ್ಯದಿಂದ ಖ್ಯಾತಿ ಪಡೆದಿದ್ದ ಕಾಯ್ಕಿಣಿ ಪತ್ರಿಕೋದ್ಯಮಿಯೂ ಆಗಿದ್ದರು. ಮೆದು ಮಾತು-ಮೆಲುದನಿಯ ಕಥೆಗಾರ ಜಯಂತ್ ಕಾಯ್ಕಿಣಿ ಗೌರೀಶ್ ಕಾಯ್ಕಿಣಿಯವರ ಪುತ್ರ. ಕನ್ನಡಿಗರ ಅಚ್ಚುಮೆಚ್ಚಿನ ಸಾಹಿತಿ ಜಯಂತ್ 2006ರ ಬಳಿಕ ಸಿನಿಮಾ ಸಾಹಿತ್ಯದ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿದ್ದಾರೆ.

ಕಾಯ್ಕಿಣಿಗಳಂತೆ ಗೋಕರ್ಣ ಹತ್ತಿರದ ಹನೇಹಳ್ಳಿಯ ಖ್ಯಾತ ಕಥೆಗಾರ, ಕಾದಂಬರಿಕಾರ ಯಶವಂತ ಚಿತ್ತಾಲರೂ ಕೊಂಕಣಿ ಆಡುಮಾತಿನವರು. ‘ಶಿಕಾರಿ’ ಕಾದಂಬರಿಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲರು ಕವಿಯಾಗಿ ಗುರುತಿಸಿಕೊಂಡವರು. ಗೋಕರ್ಣಕ್ಕೆ ಹತ್ತಿರವೇ ಇರುವ ಬಂಕಿಕೊಡ್ಲದ ಅರವಿಂದ ನಾಡಕರ್ಣಿ ಮತ್ತು ಸುಂದರ ನಾಡಕರ್ಣಿ ಸೋದರರು ಹಲವು ಕನ್ನಡಕವನ ಸಂಕಲನ ಪ್ರಕಟಿಸಿದ್ದಾರೆ. ಇವರೂ ಕೊಂಕಣಿ ಭಾಷೆಯ ಸಾರಸ್ವತ ಕುಟುಂಬದ ರೇ.ದಾಮೋದರ ಚಿತ್ತಾಲರೂ ಕನ್ನಡ ಸಾಹಿತ್ಯ ಕ್ಷೇತ್ರದ ಗಮನ ಸೆಳೆದ ಬರಹಗಾರರು.

ಕನ್ನಡ ಕಾದಂಬರಿ ಲೋಕಕ್ಕೆ ನವ್ಯಮಾರ್ಗ ತಂದ ಶಾಂತಿನಾಥ ದೇಸಾಯಿ ಹಳಿಯಾಳದವರು. ಸಣ್ಣಕತೆ, ಪ್ರಬಂಧ, ವಿಮರ್ಶೆ…ಮುಂತಾದ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಅಳವಡಿಸಿ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಬರಹಗಾರನೆಂದು ಖ್ಯಾತರಾಗಿದ್ದ ದೇಸಾಯಿ ಕೊಂಕಣಿಗರು. ಕೊಂಕಣಿ ಮಾತಾಡುವ ಕುಟುಂಬದ ಉತ್ತರಕನ್ನಡಿಗ ವಿವೇಕ್ ಶಾನ್‍ಭಾಗ್ ಕನ್ನಡದ ಪ್ರಮುಖ ಕತೆಗಾರ, ಕಾದಂಬರಿಕಾರ ಮತ್ತು ನಾಟಕಕಾರರಲ್ಲಿ ಒಬ್ಬರು.

1950-60ರ ದಶಕದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮನೋಜ್ಞ ಅಭಿನಯದಿಂದ ಪ್ರಖ್ಯಾತರಾಗಿದ್ದ ಅಭಿನೇತ್ರಿಯರಾದ ಮೈನಾವತಿ ಮತ್ತು ಪಂಡರಿಬಾಯಿ ಮೂಲ ಭಟ್ಕಳ. ಕೊಂಕಣಿ ಮನೆಮಾತಿನ ಈ ಸಹೋದರಿಯರ ತಂದೆ ರಂಗರಾವ್ ಹರಿಕಥೆ, ಸಂಗೀತ, ಸಾಹಿತ್ಯ, ಅಭಿನಯದಲ್ಲಿ ಪರಿಣಿತರಾಗಿದ್ದರು. ಮೈನಾವತಿ ಸರಿಸುಮಾರು ನೂರು ಚಿತ್ರಗಳಲ್ಲಿ ನಟಿಸಿದ್ದರೆ, ಪಂಡರಿಬಾಯಿ ಕನ್ನಡ ಸಿನಿಮಾಗಳ ಮೊದಲ ಯಶಸ್ವೀ ತಾರೆ. ಡಾ. ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಮಿಂಚಿದ ಪಂಡರಿಬಾಯಿ ಆನಂತರ ಕನ್ನಡ ಚಿತ್ರರಂಗದ “ಅಮ್ಮ”ನೆಂದೇ ಹೆಸರಾಗಿದ್ದರು.

ಕುಮಟಾದ ಮಲ್ಲಾಪುರ ಗ್ರಾಮದ ಸಾರಸ್ವತ ಕೊಂಕಣಿ ಕುಟುಂಬದ ಅನಂತ್‍ನಾಗ್ ಮತ್ತು ಶಂಕರ್‌ನಾಗ್ ಇವತ್ತಿಗೂ ಕನ್ನಡ ಸಿನಿಮಾ ಲೋಕದಲ್ಲಿ ಮಾಂತ್ರಿಕ ಹೆಸರು. ಅನನ್ಯ ಪ್ರತಿಭೆಯ ಈ ಸಹೋದರರ ನಟನಾಕೌಶಲ್ಯ ಕನ್ನಡ ಸಿನಿಮಾರಂಗದಲ್ಲಿ ಸರ್ವಕಾಲಿಕ ದಾಖಲೆ! ಸಿನಿಮಾ ನಟಿ ರಾಧಿಕಾಪಂಡಿತ್ ಭಟ್ಕಳದ ಚಿತ್ರಾಪುರ ಮೂಲದ ಸಾರಸ್ವತ ಕೊಂಕಣಿ. ಉತ್ತರ ಕನ್ನಡದ ಯು.ಎಸ್. ಕೃಷ್ಣರಾವ್ ಮತ್ತವರ ಮಡದಿ ಚಂದ್ರಭಾಗಾದೇವಿ ಶಾಸ್ತ್ರೀಯ ನೃತ್ಯದ ಮೂಲಕ ಹೆಸರು ಮಾಡಿದ್ದಾರೆ. ಕೊಳಲುವಾದಕ ನಿತ್ಯಾನಂದ ಹಳದಿಪುರ್, ಸಂಗೀತಗಾರ ಮೋಹನ್‍ಚಿತ್ರಮನೆ, ತಬಲಾ ವಾದಕ ಆದಿತ್ಯ ಕಲ್ಯಾಣ್‍ಪುರ್, ಸಂಗೀತಗಾರ ಭರತ್ ಬಳವಳ್ಳಿ, ನಟ ವೆಂಕಟರಾವ್ ತಲಗೇರಿ, ಅನುಪಮಾ (ಕಾಯ್ಕಿಣಿ), ದೇಶಪಾಂಡೆ(ಸಂಗೀತ), ಆರ್.ಡಿ ಕಾಮತ್ (ರಂಗಭೂಮಿ) ಲೀನಾ ಚಂದಾವರ್ಕರ್ (ಪ್ರಸಿದ್ಧ ಗಾಯಕಿ), ಅನುರಾಧಾ ಪೋಡ್ವಾಲ್, ಅನುರಾಧಾ ಧಾರೇಶ್ವರ್ (ಹಾಡುಗಾರ್ತಿ) ಕೊಂಕಣಿಗರಾದರೂ ಕನ್ನಡ ಪ್ರತಿಭೆಗಳೆಂದೇ ಗುರುತಿಸಲ್ಪಡುವವರು!

ಸುಮಾರು ಮೂರೂಮುಕ್ಕಾಲು ದಶಕದಿಂದ ಕರ್ನಾಟಕದ ರಾಜಕಾರಣದಲ್ಲಿ ಪ್ರಮುಖ ರಾಜಕಾರಣಿಯಾಗಿರುವ ಹಳಿಯಾಳದ ರಘುನಾಥ್ ವಿಶ್ವನಾಥ್‍ರಾವ್ ದೇಶಪಾಂಡೆ ಕೊಂಕಣಿ ಮನೆ ಮಾತಿನವರು. ಅಧಿಕಾರ ರಾಜಕಾರಣದ ಹಲವು ಆಯಕಟ್ಟಿನ ಸ್ಥಾನದಲ್ಲಿದ್ದ ದೇಶಪಾಂಡೆ ಒಂದು ಸಂದರ್ಭದಲ್ಲಿ ಸಿಎಂ ಮಟೇರಿಯಲ್ ಅನಿಸಿಕೊಂಡವರು! ಸಮಾಜವಾದಿ ದಿನಕರ ದೇಸಾಯಿ ಒಡನಾಡಿ ಅಂಕೋಲೆಯ ದಯಾನಂದ ನಾಡಕರ್ಣಿ ಶಾಸಕರೂ ಆಗಿದ್ದರು. ಕುಮಟೆಯಲ್ಲಿ ವಸಂತಲತಾ ಮಿರ್ಜಾನ್‍ಕರ್ ಶಾಸಕಿಯಾಗಿದ್ದರು. ಇವರಿಬ್ಬರೂ ಸಾರಸ್ವತ ಕೊಂಕಣಿಗರು. ದಟ್ಟ ಕೊಂಕಣಿ ಪ್ರಭಾವದ ಕಾರವಾರದ ಬಿ.ಪಿ. ಕದಮ್ ವಿಧಾನಸಭೆಯ ಉಪಾಧ್ಯಕ್ಷರಾಗಿ, ಸಂಸದರಾಗಿದ್ದ ಕೊಂಕಣಿ ಭಾಷಿಕ. ವಿಧಾನಪರಿಷತ್‍ನ ಸಭಾಪತಿಯಾಗಿದ್ದ ಇದೇ ಕಾರವಾರದ ಎಸ್.ಡಿ. ಗಾಂವ್ಕರ್ ಕೂಡ ಕೊಂಕಣಿ ಮನೆ ಮಾತಿನವರಾಗಿದ್ದರು. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಲ್ಲೊಬ್ಬರಾಗಿರುವ ನಂದನ್ ನೀಲೇಕಣಿ ಶಿರಸಿ ಮೂಲದ ಸಾರಸ್ವತ ಕೊಂಕಣಿಗರು. ಕಾರಾವಾರದ ಶಾಸಕಿ ರೂಪಾಲಿ ನಾಯ್ಕ್ ಮನೆಮಾತು ಕೊಂಕಣಿ.

ಕನ್ನಡದ ಗಂಧಗಾಳಿಯೇ ಇಲ್ಲದ ಹಲವು ಪ್ರದೇಶವಿರುವ ಉತ್ತರಕನ್ನಡದ ಎರಡನೇ ಪ್ರಮುಖ ವ್ಯಾವಹಾರಿಕ ಭಾಷೆ ಕೊಂಕಣಿ. ಕನ್ನಡಾಂಬೆಯ ತೇರು ಎಳೆಯುವಾಗ ಎಲ್ಲರೂ ಒಂದೇ. ಇದೇ ಉತ್ತರ ಕನ್ನಡದ ಭಾಷಾ ಸಹಿಷ್ಣುತೆ, ಸಾಮರಸ್ಯದ ವೈಶಿಷ್ಟ್ಯ!


ಇದನ್ನೂ ಓದಿ: ತಾತ್ಸಾರ ತೊರೆದು ಸ್ವಾಯತ್ತತೆಗಾಗಿ – ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...