Homeಕರ್ನಾಟಕಉತ್ತರ ಕನ್ನಡದಲ್ಲಿ ತರಕಾರಿ ದುಬಾರಿ; ಕೃಷಿಕ-ಗ್ರಾಹಕ ಕಂಗಾಲು

ಉತ್ತರ ಕನ್ನಡದಲ್ಲಿ ತರಕಾರಿ ದುಬಾರಿ; ಕೃಷಿಕ-ಗ್ರಾಹಕ ಕಂಗಾಲು

- Advertisement -
- Advertisement -

ಅಕಾಲಿಕ ಮಳೆಯಿಂದ ಭತ್ತ, ಗೋವಿನಜೋಳ, ಹತ್ತಿ, ಕಬ್ಬು, ಅಡಿಕೆ ನೀರುಪಾಲಾಗಿ ರೈತರ ಬದುಕು ಮೂರಾಬಟ್ಟೆಯಾಗಿದ್ದರೆ, ಮತ್ತೊಂದೆಡೆ ತರಕಾರಿ ಬಳೆದು ಬದುಕತ್ತಿದ್ದ ಕೃಷಿಕರ ಕೈಗೆ ಫಸಲು ಸಿಗದಂತಾಗಿದೆ. ನಿರಂತರ ಮಳೆಯ ಮಧ್ಯೆ ಅಳಿದುಳಿದ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದು ಗಣಮಟ್ಟ ಇಲ್ಲದಾಗಿದೆ. ಇದರಿಂದಾಗಿ ಸಾಮಾನ್ಯವಾಗಿ ಎಲ್ಲ ತರಕಾರಿ ವಿಪರೀತ ತುಟ್ಟಿಯಾಗಿದ್ದು, ಕೃಷಿಕ ಮತ್ತು ಗ್ರಾಹಕ ಇಬ್ಬರ ಕಣ್ಣಲ್ಲೂ ನೀರು ತರಿಸುತ್ತಿದೆ!

ಅನಾಹುತಕಾರಿ ಮಳೆಗೆ ವಿಶೇಷವಾಗಿ ಟೊಮೊಟೊ ಬೆಳೆ ನೆಲ ಕಚ್ಚಿದ್ದು, ಇದ್ದರಿಂದಾಗಿ ಒಂದು ಕೆಜಿ.ಗೆ 80 ರಿಂದ 100ರೂ ಕೊಡಬೇಕಾಗಿದೆ. ಟೊಮೇಟೊದಂತೆ ಉಳಿದ ಕಾಯಿ-ಪಲ್ಲೆ ದರವೂ ಏರಿಕೆಯಾಗಿದೆ. ಇದು ಮಧ್ಯಮ ವರ್ಗದ ಬದುಕನ್ನು ದುರ್ಬರಗೊಳಿಸಿಬಿಟ್ಟಿದೆ. ಉತ್ತರ ಕನ್ನಡಕ್ಕೆ ಪಕ್ಕದ ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ತರಕಾರಿ-ಟೊಮೇಟೊ ಸರಬರಾಜಾಗುತ್ತದೆ. ಅಲ್ಲೆಲ್ಲ ಮಳೆಯ ಹೊಡೆತಕ್ಕೆ ತರಕಾರಿ ಬೆಳೆ ನಾಶವಾಗಿದೆ. ಇದರಿಂದಾಗಿ ಜಿಲ್ಲೆಯ ತರಕಾರಿ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದ್ದು, ಗ್ರಾಹಕ ತರಕಾರಿ ಬೆಲೆಯೇರಿಕೆಗೆ ಬೆಚ್ಚಿಬಿದ್ದಿದ್ದಾನೆ!

ಎರಡು ವಾರದ ಹಿಂದೆ ಇದ್ದಕ್ಕಿದಂತೆ ಟೊಮೊಟೊ ದರ ಕೆಜಿಗೆ 100 ರೂ.ದಾಟಿತ್ತು. ನಂತರದ ವಾರದಲ್ಲಿ 40 ರಿಂದ 60 ರೂ.ಗೆ ಇಳಿದಿತ್ತು. ಈಗ ಮತ್ತೆ 70 ರಿಂದ 80 ರೂಗೆ ಏರಿಕೆಯಾಗಿದೆ. ಜತೆಗೆ ಬೇರೆಬೇರೆ ಕಾಯಿ-ಪಲ್ಲೆಯೂ 60 ರಿಂದ 80ರ ಆಸುಪಾಸಿನಲ್ಲೆ ಗಿರಕಿ ಹೊಡೆಯುತ್ತಿರುವುದು ಎಲ್ಲ ವರ್ಗದ ಗ್ರಾಹಕರನ್ನು ದಿಕ್ಕೆಡಿಸಿದೆ. ಅಲ್ಪ-ಸ್ವಲ್ಪ ಏರಿಕೆಯಾದರೆ ಹೇಗಾದರೂ ಸಂಬಾಳಿಸಿ ಕಾಲ ಕಳೆಯಬಹುದು; ಆದರೆ ಈ ರೀತಿ 4-6 ಪಟ್ಟು ದುಬಾರಿಯಾದರೆ ಬದುಕುವುದಾದರೂ ಹೇಗೆ? ಎಂದು ಜನರು ಹೇಳುತ್ತಾರೆ. ನಮಗೇನೂ ಸಂಬಳ-ಕೂಲಿ ಹೆಚ್ಚಾಗಿಲ್ಲ. ದಿನಸಿ, ತರಕಾರಿ ಬೆಲೆ ಮಾತ್ರ ಒಂದೇ ಸಮನೆ ಗಗನಕ್ಕೆ ನೇಗೆಯುತ್ತಿದೆಯೆಂದು ಅಂದಿನ ತುತ್ತು ಅಂದು ಗಳಿಸಿ ತಿನ್ನುವ ಮಂದಿ ಗೋಗರೆಯುತ್ತಾರೆ!

ಇಷ್ಟೇಕೆ ತರಕಾರಿ ದರ ಏರಿಕೆಯಾಗುತ್ತಿದೆ. ನೀವು ಹೇಗೆ ಖರೀದಿಸಲು ಸಾಧ್ಯವಾಗುತ್ತದೆ ಎಂದು ತರಕಾರಿ ವ್ಯಾಪಾರಿಗಳನ್ನು ಕೇಳಿದರೆ, ತರಕಾರಿ ಬೆಳೆಯುವ ಹತ್ತಿರದ ಪ್ರದೇಶಗಳಲ್ಲಿನ ನಿರಂತರ ಅಕಾಲಿಕ ಮಳೆ ಹಾವಳಿಯಿಂದ ಟೊಮ್ಯಾಟೊ ಗಿಡಗಳು ಮತ್ತಿತರ ತರಕಾರಿ ಫಸಲು ಕೊಳೆತುಹೋಗಿದೆ. ದೂರದ ನಾಸಿಕ್‌ನಿಂದ ಟೊಮ್ಯಾಟೊ ತರಿಸುತ್ತಿದ್ದೇವೆ. ಹಾಗಾಗಿ ಸಾಗಾಣಿಕಾ ವೆಚ್ಚ ಮತ್ತು ದುಬಾರಿ ಖರೀದಿಯಿಂದ ತುಟ್ಟಿ ಮಾರದಿದ್ದರೆ ನಮಗೇನು ಗಿಟ್ಟುವುದಿಲ್ಲ ಎಂದು ಬೇಸರದಿಂದಲೆ ಹೇಳುತ್ತಾರೆ. ಮಹಾರಾಷ್ಟ್ರ ಕಡೆಯಿಂದ ಜಿಲ್ಲೆಗೆ ಪ್ರತಿ ದಿನ ಟನ್‌ಗಟ್ಟಲೆ ಟೊಮೇಟೊ ಬರುತ್ತಿದ್ದು ದರವೂ ಗಾಬರಿ ಹುಟ್ಟಿಸುವಂತಿದೆ.

ಉತ್ತರ ಕನ್ನಡಕ್ಕೆ ಹೊರ ಜಿಲ್ಲೆಗಳಿಂದ ಬರುವ ತರಕಾರಿ ಬೆಲೆ ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ. ಹಾಗಂತ ಗೋಕರ್ಣ ಸೀಮೆಯ ತರಕಾರಿ ತಾಜಾ ಮತ್ತು ಸ್ವಲ್ಪ ಕಡಿಮೆ ಬೆಲೆಗೆ ಸಿಗತ್ತಿದೆ. ಆ ಭಾಗದ ಹಾಲಕ್ಕಿ ಒಕ್ಕಲು ಬುಡಕಟ್ಟಿನ ಮಂದಿ ಮತ್ತಿತರ ಸಮುದಾಯದವರು ತರಕಾರಿ ಬೆಳೆಯುತ್ತಿದ್ದು ಅದಕ್ಕೆ ವಿಶೇಷ ಬೇಡಿಕೆಯಿದೆ. ಆದರೆ ಜಿಲ್ಲೆಯ ಬೇಡಿಕೆ ಪೂರೈಸುವಷ್ಟು ಪ್ರಮಾಣದಲ್ಲಿ ಗೋಕರ್ಣ ಸೀಮೆಯಲ್ಲಿ ತರಕಾರಿ ಬೆಳೆಯಿಲ್ಲ. ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳಿಯ ಶಾಸಕರು ಒಳ್ಳೆಯ ಗುಣಮಟ್ಟದ ಗೋಕರ್ಣ ಸೀಮೆ ತರಕಾರಿ ಕೃಷಿ ವಿಸ್ತರಣೆಗೆ ಯೋಚಿಸಬೇಕಿದೆಯೆಂಬ ಆಗ್ರಹ ಬಹಳ ಹಿಂದಿನದು. ಈ ದುಬಾರಿ ದಿನಮಾನದಲ್ಲಿ ಗೋಕರ್ಣ ಸೀಮೆ ತರಕಾರಿ ಕ್ಷೇತ್ರ ವಿಸ್ತರಣೆ ಪ್ರೋತ್ಸಾಹಿಸುವ ಅಗತ್ಯದ ಮಾತು ಮತ್ತೆ ಕೇಳಿ ಬರುತ್ತಿದೆ.

ಉತ್ತರ ಕನ್ನಡದ ತರಕಾರಿ ದರ (ಪ್ರತಿ ಕೆಜಿಗೆ)
ಚವಳಿ : 80ರೂ.
ತೊಂಡೆಕಾಯಿ : 30-50ರೂ
ಬೀಟ್ರೂಟ್ : 40-50ರೂ
ಬೆಂಡೆಕಾಯಿ : 60-70ರೂ
ಬೀನ್ಸ್ : 100-120ರೂ
ಹಾಗಲಕಾಯಿ : 80ರೂ.
ಹಸಿ ಮೆಣಸು : 60ರೂ
ನವಿಲುಕೋಸ್ : 60ರೂ

ನುಗ್ಗೆಕಾಯಿ : 100ರೂ
ಬದನೆಕಾಯಿ : 80ರೂ
ಟೊಮ್ಯಾಟೊ : 70-80ರೂ
ಈರುಳ್ಳಿ: 40-50ರೂ
ಬಟಾಣಿ : 30ರೂ
ಹೀರೆಕಾಯಿ : 60ರೂ
ಕ್ಯಾರೇಟ್ : 80ರೂ
ಸೌತೆಕಾಯಿ : 70ರೂ
ಹರಗಿ-1 ಕಟ್ಟು : 10ರೂ
ಬಸಳೆ-1ಕಟ್ಟು : 40ರೂ


ಇದನ್ನೂ ಓದಿ: ಟೊಮಟೊ ಟ್ರಾಲ್‌: ‘ಬೆಲೆ ಏರಿಕೆಕಂಡು ತರಹೇವಾರಿ ಮೀಮ್ಸ್ಸೃಷ್ಟಿ; ನೋಡಿ ನಕ್ಕುಬಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...