Homeಕರ್ನಾಟಕಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

ಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

- Advertisement -
- Advertisement -

ಹಳ್ಳಿಯ ಹುರುಪಿನ ಹುರಿಯಾಳುಗಳ ಜಟಾಪಟಿಯ ಕ್ಷೇತ್ರ ಗ್ರಾಮ ಪಂಚಾಯತ್ ಚುನಾವಣೆ. ಇಲ್ಲಿಯೂ ಕೂಡ ಹೆಣ್ಣಿನ ಸ್ಥಾನ ಕೇವಲ ಮೀಸಲಾತಿಯ ನೆಪದಲ್ಲಿ ಹೆಸರು ಮತ್ತೊಂದು ಫೋಟೋಗಷ್ಟೆ ಸೀಮಿತ.

ಈ ಚುನಾವಣೆಗಳು ಜನರನ್ನು ಭ್ರಷ್ಟರನ್ನಾಗಿ ಮಾಡುವುದಷ್ಟೆಯಲ್ಲದೆ ಪುರುಷಪ್ರಾಧಾನ್ಯತೆಯ ಝಂಡಾಗಳನ್ನು ನೆಟ್ಟು ನೀರೆರೆಯುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.

1992ರ ಪಂಚಾಯತ್ ರಾಜ್ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಅನುಪಾತದಲ್ಲಿ ಸ್ಥಾನಗಳು ಮೀಸಲಾಗಿದ್ದವು. ಅಂದರೆ, ಮಹಿಳೆಯರ ಸಂಖ್ಯೆಯ ಅನುಪಾತದಲ್ಲಿ ಒಟ್ಟು 1/3 ಸೀಟುಗಳು ಮೀಸಲಿರಬೇಕು ಎಂದು. ರಾಜ್ಯದಲ್ಲಿ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಮೀಸಲಾತಿ ನೀಡಲಾಯಿತು. ಆದರೆ ಇದಕ್ಕೊಪ್ಪದ ಮಹಿಳೆಯರ ದಶಕಗಳ ಹೋರಾಟದ ಫಲವಾಗಿ ಪಂಚಾಯಿತಿ ಚುನಾವಣೆಗಳಲ್ಲಿ ಶೇ 33ರಷ್ಟು ಇದ್ದ ಮಹಿಳಾ ಮೀಸಲಾತಿ ಇನ್ನೂ ಹೆಚ್ಚಾಯಿತು. ಭಾರತ ಸರ್ಕಾರದ ಕೇಂದ್ರ ಸಚಿವ ಸಂಪುಟ 27 ಆಗಸ್ಟ್ 2009ರಲ್ಲಿ ನೀಡಲಾದ ಅನುಮೋದನೆಯ ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲು ಒಪ್ಪಿಗೆ ನೀಡಿತು. ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಛತ್ತೀಸ್‌ಘಡ, ಜಾರ್ಖಂಡ್, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತ್ರಿಪುರದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಅಳವಡಿಸಲಾಯಿತು.

ಮಹಾತ್ಮಗಾಂಧಿಯವರ ಕನಸು ಗ್ರಾಮ ಸ್ವರಾಜ್ ಅಂದರೆ ಹಳ್ಳಿಯ ಜನಗಳಿಗೆ ಅಧಿಕಾರ ವರ್ಗಾವಣೆ ಮಾಡುವುದು. ಅವರ ಪ್ರಕಾರ ಹಳ್ಳಿಗಳು ಸಾಕಷ್ಟು ಸ್ವಾಯತ್ತವಾಗಲು, ಪಂಚಾಯತ್ ವ್ಯವಸ್ಥೆ ಮೂಲಕ ಗ್ರಾಮಗಳು ತಮ್ಮ ಆಡಳಿತ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸ್ಥಳೀಯ ಸ್ವಾಯತ್ತತೆಯನ್ನು ಸಮನ್ವಯಗೊಳಿಸುವ ದೃಷ್ಟಿಯಿಂದ ಭಾರತೀಯ ಸರ್ಕಾರಿ ಆಡಳಿತವು ಆಧುನಿಕ ವ್ಯವಸ್ಥೆ ತರಲು ನಿರ್ಧರಿಸಿತು. ಅತಿಯಾಗಿ ಕೇಂದ್ರೀಕೃತವಾದ ಆಡಳಿತವನ್ನು ವಿಕೇಂದ್ರೀಕೃತಗೊಳಿಸಿ ಕೆಳ ಹಂತದ ಸ್ಥಳೀಯ ವಿವಿಧ ಸಮಿತಿಗಳು ಆಡಳಿತ ನಡೆಸುವುದರ ಮೂಲಕ ಎಲ್ಲಾ ಸ್ತರದ ಜನರಿಗೆ ಅನುಕೂಲ ಮಾಡಲೆಂದೆ ತಂದದ್ದು ಈ ಪಂಚಾಯತ್ ವ್ಯವಸ್ಥೆ. ಇವೆಲ್ಲದರ ಭಾಗವಾಗಿ ಬಂದ ಮಹಿಳಾ ಮೀಸಲಾತಿಗಳು ಕೇವಲ ಪುಸ್ತಕದಲ್ಲಿವೆಯಷ್ಟೇ! ಇನ್ನುಳಿದಂತೆ ಆಡಳಿತವೆಲ್ಲ ಗಂಡ, ಮಗ ಅಥವಾ ಮನೆಯ ಇತರ ಪುರುಷರೆ ನಿಭಾಯಿಸುತ್ತಾರೆ ಎಂಬ ನಿಚ್ಚಳ ಸತ್ಯ. ಕೆಲವು ದಿನಗಳ ಮೊದಲು ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ನಾನೇ ಪ್ರತ್ಯಕ್ಷವಾಗಿ ಕಂಡಂತೆ, ನಾಮಿನೇಷನ್ ಸಲ್ಲಿಕೆಯ ಸಂದರ್ಭ ಜೊತೆಗೆ ಒಂದೆರಡು ದಿನ ಚುನಾವಣೆಯ ಪ್ರಚಾರದಲ್ಲಿ ಈ ಮಹಿಳೆಯರು ಕಾಣಿಸಿಕೊಂಡರೆ ಹೊರತು ಇನ್ನುಳಿದ ಯಾವ ಪ್ರಕ್ರಿಯೆಗಳಲ್ಲೂ ಅವರ ಪಾಲು ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ.

’ಹಳ್ಳಿ ರಾಜಕೀಯ ಕಲಿತರೆ ದೆಲ್ಲಿ ರಾಜಕೀಯ ಕಲಿತಂಗೆ’ ಎಂಬ ಆಡುಮಾತಿದೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಯ ಎಲ್ಲಾ ಮಜಲುಗಳನ್ನು ತಿಳಿಯಲೇಬೇಕೆಂಬ ಕಾರಣಕ್ಕೆ ಮತ ಎಣಿಕೆಯ ಏಜೆಂಟ್ ಆಗಿಯ ನಮ್ಮ ತಾಲೂಕು ಕೇಂದ್ರದ ಮತ ಎಣಿಕೆ ನಡೆಯುತ್ತಿದ್ದ ಕಾಂಪೌಂಡಿನೊಳಗೆ ಕಾಲಿಟ್ಟರೆ ಸಾವಿರಾರು ಗಂಡಸರೆ ತುಂಬಿದ್ದ ಆ ಶಾಲಾ ಮೈದಾನದಲ್ಲಿ ಕಂಡದ್ದು ಕೇವಲ ಇಬ್ಬರು ಹೆಂಗಸರು ಮಾತ್ರ ಮತ್ತು ನಾನು ಮೂರನೆಯವಳು.

PC : Dailyhunt

ತಮಗೆ ಬಿದ್ದ ಮತಗಳ ಲೆಕ್ಕವನ್ನು ನೋಡಲು ಸಹ ಹೆಣ್ಣಿಗೆ ಅವಕಾಶವನ್ನು ನೀಡದಿರುವ ಈ ಪುರುಷ ಪ್ರಧಾನ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೆಂದೆ ಕರೆಯಲ್ಪಡುವ ಪಂಚಾಯಿತಿ ಚುನಾವಣೆಗಳ ಮೂಲ ಆಶಯವಾದ ಸರ್ವರಿಗು ಸಮಾನ ಹಕ್ಕುಗಳನ್ನು ಮೊಟಕುಗೊಳಿಸಿ ಹಳ್ಳಿಯ ಮಟ್ಟದಲ್ಲೆ ಹೆಣ್ಣುಮಕ್ಕಳು ರಾಜಕೀಯ ಅಭಿಲಾಷೆಗಳನ್ನು ಚಿವುಟಿ ಹಾಕುತ್ತಿವೆ.

ಸ್ತ್ರೀ ಸಬಲೀಕರಣಕ್ಕಾಗಿ ಬಂದ ಈ ಮೀಸಲಾತಿ ಹೀಗೆ ದುರುಪಯೋಗವಾಗುತ್ತಿರುವಾಗ ಇದಕ್ಕೆ ಕಡಿವಾಣ ಹಾಕಲು ಹೊಸದೊಂದು ಕಾನೂನಿನ ಅಗತ್ಯಕ್ಕಿಂತ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ತಾವೆ ದುಡಿದು ಇಡೀ ಕುಟುಂಬ ನಿರ್ವಹಿಸುವ ಹೆಂಗಸರ ಬಳಿ ಮತಯಾಚನೆ ಮಾಡಲು ಹೋದಾಗ ಮುಲಾಜಿಲ್ಲದೆ “ನಮ್ಮ ಗಂಡ ಹೇಳಿದವರಿಗೆ ನಾನು ವೋಟ್ ಹಾಕೋದು” ಎನ್ನುವಾಗ ಪುಸ್ತಕದಲ್ಲಿ ಓದಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಎಲ್ಲಾ ಕಲ್ಪನೆಗಳು ಬುಡಮೇಲಾಗುತ್ತಿದ್ದವು.

ಎಷ್ಟೇ ಅರ್ಥ ಮಾಡಿಸಿದರೂ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವವರು 50 ಪ್ರತಿಶತ ಜನರಿಗಿಂತಲೂ ಕಡಿಮೆ. ನಂಬಲಿಕ್ಕೆ ಸಾಧ್ಯವಾದಷ್ಟು ಮೊಂಡು ಹಿಡಿಸಿಬಿಟ್ಟಿದೆ ಈ ಚುನಾವಣಾ ವ್ಯವಸ್ಥೆ.

ಸಾಮಾಜಿಕ ಕಾರ್ಯಕರ್ತೆಯಾಗಿ ರಾಜಕೀಯವನ್ನು ವಿಶ್ಲೇಷಿಸುವುದೆ ಬೇರೆ. ಸಕ್ರಿಯ ರಾಜಕಾರಣಿಯಾಗಿ ರಾಜಕೀಯದೊಳಗಿನ ರಾಜಕೀಯ ಮಾಡುವುದೆ ಬೇರೆ ಎಂಬುದನ್ನು ನನ್ನ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ದಿನದಿಂದ ಹಿಡಿದು ಮತ ಎಣಿಕೆಯ ಕೊನೆ ಘಳಿಗೆಯವರೆಗು ನಡೆದ ಬೆಳವಣಿಗೆಗಳು ಪಾಠ ಕಲಿಸಿದವು.

“ಏನ್ ಹೇಳ್ತಿರಾ ಮೇಡಮ್ ದುಡ್ಡಿಲ್ದೆ ರಾಜಕೀಯ ಮಾಡಕ್ಕಾಯ್ತದ” ಎನ್ನುತ್ತಲೆ ಮನೆ ಚಿನ್ನ ಅಡವಿಟ್ಟು ಸೈಟುಗಳನ್ನು ಮಾರಿಯಾದರು ಗೆಲ್ಲಲೆಬೇಕೆಂಬ ಜಿದ್ದಿಗೆ ಬಿದ್ದು ಜೀವನವನ್ನೆ ಹರಾಜಿಗಿಟ್ಟವರನ್ನು ಕಣ್ಣಾರೆ ಕಂಡೆ.

ಮತದಾರರನ್ನು ಅತ್ಯಂತ ನಿಕೃಷ್ಟ ಮಟ್ಟಕ್ಕೆ ಭ್ರಷ್ಟರನ್ನಾಗಿ ಮಾಡಿದ ಸಕಲ ಕೀರ್ತಿಗಳು ಈ ಹಳ್ಳಿ ರಾಜಕೀಯಕ್ಕೆ ಸಲ್ಲುತ್ತದೆ ಎಂಬುದು ’ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎನ್ನುವ ಗಾದೆಮಾತಿನ ತಿಳಿವಳಿಕೆಯಷ್ಟೇ ಸತ್ಯ. ಹಣ, ಹೆಂಡ, ಮೂಗುಬೊಟ್ಟುಗಳ ಸುತ್ತ ನಡೆಯುವ ರಾಜಕೀಯದ ಹೊಲಸಿನ ನಡುವೆ ವ್ಯಕ್ತಿಯ ದೂರದೃಷ್ಟಿಯ ಆಶಯಗಳು ಪೇಲವವಾಗಿಬಿಡುತ್ತವೆ.

ಇದರ ನಡುವೆಯು 50-50 ಎನ್ನುವಂತೆ ಇಂದಿನ ಯುವ ಸಮುದಾಯದ ವಿವೇಚನಾಯುತ ಹೆಜ್ಜೆಗಳು ಆಶಾದಾಯಕವೆನಿಸುತ್ತವೆ.

ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲು ಹಿಂದಿನ ಯಜಮಾನಿಕೆ ಪದ್ಧತಿಯಂತೆ ತನ್ನ ಮಾತು ಕೇಳುವವರನ್ನೆ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಿ, ಗೆಲ್ಲಿಸಿ ವಂಶಪಾರಂಪರ್ಯದ ಯಜಮಾನಿಕೆ ಪದ್ಧತಿಯನ್ನು ನಡೆಸಿಕೊಂಡೆ ಬರುತ್ತಿದ್ದವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಿ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡಲು ಯುವಕರು ಶ್ರಮಿಸಿದ್ದಾರೆ.

ಒಂದೆಡೆ ನವ ಯುವ ರಾಜಕಾರಣದ ಅಲೆ ಸಮಾಧಾನ ತಂದರೂ ಕೂಡ ಹಣದ ಹೊಳೆ, ಮಹಿಳೆಯರನ್ನು ಚುನಾವಣಾ ದಾಳಗಳಾಗಿಯಷ್ಟೆ ಬಳಸಿಕೊಳ್ಳುತ್ತಿರುವ ವ್ಯವಸ್ಥೆಯ ಬಗ್ಗೆ ವಿದ್ರಾವಕ ಕೋಪವಂತೂ ಇದ್ದೆ ಇದೆ.


ಇದನ್ನೂ ಓದಿ: ಬೆಂಗಳೂರು IISc ಪ್ರಾಧ್ಯಾಪಕಿ ರೋಹಿಣಿ ಗೋಡ್ಬೋಲೆಗೆ ಫ್ರಾನ್ಸ್‌‌ನ ಅತ್ಯುನ್ನತ ಗೌರವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...