Homeಮುಖಪುಟನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು ಅಂಕಣ – 7 ಅನುಭೂತಿ (Empathy) -1

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವ. ಅದರ ಮುಖ್ಯ ಲಕ್ಷಣ ಅನುಭೂತಿ. ಇದು ಮಾನವನಿಗೆ ಹುಟ್ಟುಗುಣ. ಕೇವಲ ಅನುಕಂಪ ಮತ್ತು ಸಹಾನುಭೂತಿಯ ಮಿಶ್ರಣ ಅನುಭೂತಿ ಅಲ್ಲ. ಅನುಭೂತಿಗೂ ಕನಿಕರಕ್ಕೂ ವ್ಯತ್ಯಾಸವಿದೆ; ಎರಡೂ ಬೇರೆ ಬೇರೆ. ಎಂಪಥಿ ನಮ್ಮ ಭಾವನಾತ್ಮಕ ಪ್ರಜ್ಞೆಯ ಒಂದು ಮುಖ್ಯ ಅಂಶ. ಇದು ನಮ್ಮ ಮತ್ತು ಇತರರ ನಡುವಿನ ಕೊಂಡಿ. ಇದರ ಶಕ್ತಿಯ ಆಧಾರದ ಮೇಲೆ ನಮ್ಮ ಅವರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಅಳೆಯಬಹುದು. ಅನುಭೂತಿ ನಮಗೆ ನಮಗಿಂತ ಭಿನ್ನವಾದ ವ್ಯಕ್ತಿಗಳನ್ನು ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು. ಸರಳವಾಗಿ ಹೇಳಬೇಕೆಂದರೆ, ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಹಂಚಿಕೊಳ್ಳುವುದರಲ್ಲಿ ನಾವು ಎಷ್ಟು ಸಮರ್ಥರು ಎನ್ನುವುದು ಅನುಭೂತಿ. ಇದರಲ್ಲಿ ಮೂರು ಬಗೆಗಳನ್ನು ಮನಶಾಸ್ತ್ರಜ್ಞರು ಗುರುತಿಸಿದ್ದಾರೆ.

ಕಾಗ್ನಿಟಿವ್ ಎಂಪಥಿ: ಇದನ್ನು ವೇದನಾ ಅನುಭೂತಿ ಎನ್ನಬಹುದು. ಇನ್ನೊಬ್ಬರ ಮುಖಚರ್ಯೆ, ಹಾವಭಾವದಲ್ಲಿ ಅವರ ಭಾವನೆಯನ್ನು ಗುರುತಿಸುವ ಕಲೆ. ಯಾರೋ ಹತ್ತಿರದವರು ದುಃಖದಲ್ಲಿದ್ದಾಗ ನಾವು ಸಂತಾಪ ಸೂಚಿಸುವ ಸಲುವಾಗಿ ಅವರಿಗೆ ಸಂತಾಪ ಸೂಚಕ ಪತ್ರ ಬರೆಯಬಹುದು, ಕರೆ ಮಾಡಬಹುದು, ಅನುಕಂಪ ಸೂಚಿಸಬಹುದು ಆದರೆ ಅವರ ದುಃಖವನ್ನು ಅರ್ಥಮಾಡಿಕೊಳ್ಳಲು ಅಥವಾ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಅದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ದುಃಖದಲ್ಲಿರುವವರ ಹಾವಭಾವವನ್ನು ನಾವು ನಾವು ಬೇರೆ ಬೇರೆಯಾಗಿ ಅರ್ಥೈಸಬಹುದು. ಹೆಚ್ಚಾಗಿ ನಾವು ಅದನ್ನು ತಪ್ಪಾಗಿ ಅರ್ಥೈಸುತ್ತೇವೆ. ಅವರ ಮುಖದಲ್ಲಿ ಕಾಣುವ ಮುಗುಳ್ನಗೆ ಕೂಡ ದುಃಖಸೂಚಕವಾಗಿರಬಹುದು. ಚಿಕ್ಕ ಮಕ್ಕಳು ಕೂಡ ತಮ್ಮ ತಾಯಂದಿರ ದುಃಖ, ಕೋಪ, ಸಂತೋಷವನ್ನು ಕೂಡಲೇ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತಾರೆ. ಇದು ಕೇವಲ ದುಃಖಕ್ಕೆ ಅಥವಾ ಸ್ತ್ರೀಯರಿಗೆ ಮೀಸಲಾದ ಪ್ರತಿಕ್ರಿಯೆಯಲ್ಲ, ಸುಖಕ್ಕೂ, ಪುರುಷರಿಗೂ ಅನ್ವಯಿಸುವ ಭಾವನಾತ್ಮಕ ಕಲೆ.

ಎಮೋಷನಲ್ ಎಂಪಥಿ: ಇದನ್ನು ಭಾವನಾತ್ಮಕ ಅನುಭೂತಿ ಎಂದು ಕರೆಯಬಹುದು. ಇದು ವ್ಯಕ್ತಿ ನಿಮ್ಮ ಎದುರಿಗೆ ಇಲ್ಲದಿದ್ದರೂ, ವಿಷಯ ತಿಳಿದ ಕೂಡಲೇ ಆಗುವ ನಿಮ್ಮ ಪ್ರತಿಕ್ರಿಯೆ. ಅವರ ಸ್ಥಳದಲ್ಲಿ ನಾವು ಇದ್ದು, ನಮಗೂ ಅದೇ ರೀತಿಯ ದುಃಖ ಅನುಭವಿಸಬೇಕಾಗಿದ್ದಲ್ಲಿ ನಮಗೆ ಆಗ ಹೇಗೆ ಅನಿಸುತ್ತದೆ ಅದನ್ನು ಊಹಿಸಿ (ಅಥವಾ ನೆನಪಿಸಿಕೊಂಡು) ನೀಡುವ ಪ್ರತಿಕ್ರಿಯೆ.

ಕಂಪ್ಯಾಷನೇಟ್ ಎಂಪಥಿ:  ಎಂದರೆ ಕನಿಕರದ ಅನುಭೂತಿ. ಇದು ನಮ್ಮನ್ನು ಭಾವನಾತ್ಮಕವಾಗಿ ವಿಚಲಿತ ಗೊಳಿಸುವುದರ ಜೊತೆಗೆ ಕ್ರಿಯಾಶೀಲರನ್ನಾಗಿಯೂ ಮಾಡುವಂತಹ ಶಕ್ತಿ. ಉದಾ: ಎಲ್ಲಾದರೂ ನೈಸರ್ಗಿಕ ದುರಂತ ಸಂಭವಿಸಿದಾಗ ನಾವು ನೀಡುವ ಸಹಾಯ ಹಸ್ತ. ಅಂತಹ ದುರಂತ ನಾವು ಅನುಭವಿಸಿರಲೇ ಬೇಕೆಂದಿಲ್ಲ. ಅದರ ಬಗ್ಗೆ ಕೇಳಿ, ತಿಳಿದು, ದೃಶ್ಯ ಮಾಧ್ಯಮದಲ್ಲಿ ನೋಡಿ ನಮಗೆ ಮನವರಿಕೆಯಾಗಿ ನಾವು ನೀಡುವ ಪ್ರತಿಕ್ರಿಯೆ ಇದಾಗಿರುತ್ತದೆ.

ಇವುಗಳನ್ನು ಬೆಳೆಸಿಕೊಳ್ಳುವುದು ಹೇಗೆ?

ವೇದನಾ ಅನುಭೂತಿ ನಮ್ಮ ಊಹಾಶಕ್ತಿಯನ್ನು ಆಧರಿಸಿರುತ್ತದೆ. ಇನ್ನೊಬ್ಬರ ಜೊತೆ ನಮ್ಮ ಸಂಬಂಧ ಎಷ್ಟು ಗಾಢವಾಗಿದೆ ಎನ್ನುವುದರ ಮೇಲೂ ಇದು ಹೋಗುತ್ತದೆ. ಉದಾ: ಸಿನಿಮಾ, ನಾಟಕ, ಟಿವಿ ಸೀರಿಯಲ್ಲಿನಲ್ಲಿ ಬರುವ ಭಾವನಾತ್ಮಕ ದೃಶ್ಯಗಳನ್ನು ಇವರು, ತಮ್ಮ ಮನೆಯಲ್ಲಿ ಕುಳಿತು, ನೋಡಿ, ಕಣ್ಣೀರು ಸುರಿಸುವವರೂ ಇರುತ್ತಾರೆ, ಅದು ಕೇವಲ ನಾಟಕೀಯ ಸನ್ನಿವೇಶ ಎಂದು ತಿಳಿದಿದ್ದರೂ ಸಹ. ಅವರಿಗೆ ಆ ಪಾತ್ರಧಾರಿಯ ಜೊತೆಗೆ ಇರುವ ಕಾಲ್ಪನಿಕ ಸಂಬಂಧ ಮತ್ತು ಪಾತ್ರದ/ಪಾತ್ರಧಾರಿಯ ಭಾವನೆಗೆ ಇವರು ನೀಡುವ ಸ್ವಂತ ಪ್ರತಿಕ್ರಿಯೆ ಆಗಿರುತ್ತದೆ. ಅವರ ಪಕ್ಕದಲ್ಲಿ ಕುಳಿತು ಅದೇ ದೃಶ್ಯವನ್ನು ನೋಡುತ್ತಿರುವ ಇನ್ನೋರ್ವ ವ್ಯಕ್ತಿ ಅದಕ್ಕೆ ತೀರಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಬಹುದು. ಪುರುಷರು ಕ್ರಿಕೆಟ್/ಫುಟ್ಬಾಲ್ ಪಂದ್ಯ ನೋಡುವಾಗ, ಅದರಲ್ಲಿ ಅವರ ಭಾಗವಹಿಸುವಿಕೆ/ತಲ್ಲೀನತೆಯೂ ಸಹಿತ ಅನುಭೂತಿಯನ್ನು ತೋರಿಸುತ್ತದೆ. ವೇದನಾ ಅನುಭೂತಿ ಬೆಳೆಸಿಕೊಳ್ಳಲು ಮೊದಲು ಇನ್ನೋರ್ವ ವ್ಯಕ್ತಿಯ/ಸನ್ನಿವೇಶದ ಬಗ್ಗೆ ನಾವು ಸಾಕಷ್ಟು ತಿಳಿದಿರಬೇಕು, ಇಲ್ಲದಿದ್ದಲ್ಲಿ ನಮ್ಮ ಊಹಾ ಶಕ್ತಿ ನಮಗೆ ಮೋಸ ಮಾಡಬಹುದು. ಎಷ್ಟೋ ಆತ್ಮಹತ್ಯೆ ಪ್ರಕರಣದಲ್ಲಿ ವ್ಯಕ್ತಿಗೆ ಹತ್ತಿರವಿದ್ದವರು ಅವರ ವೇದನೆಯನ್ನು ಅರ್ಥಮಾಡಿಕೊಳ್ಳದೇ, ಅವರ ನಗುವನ್ನು ಸಂತೋಷವೆಂದು ತಪ್ಪಾಗಿ ಗ್ರಹಿಸಿ, ಸಮಯವಿದ್ದಾಗ ಕ್ರಮ ವಹಿಸದೇ, ಪ್ರಸಂಗ ಕೈಮೀರಿ ಹೋಗಿರುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಇಂದಿನಿಂದ ಟಿವಿ ಸೀರಿಯಲ್ ನೋಡಿ ನೀವೂ ಸಹ ಕಣ್ಣೀರು ಸುರಿಸಿ ಎಂದು ನಾನು ಹೇಳುವುದಿಲ್ಲ, ಆದರೆ ಅಂತಹವರನ್ನು ಕಂಡರೆ ನೀವು ಅವರಿಂದ ಅನುಭೂತಿಯ ಬಗ್ಗೆ ಏನು ಕಲಿಯಬಹುದು ಯೋಚಿಸಿ.

ಭಾವನಾತ್ಮಕ ಅನುಭೂತಿ ಇನ್ನೊಬ್ಬರ ನೋವು ನಮಗೇ ಆದಂತೆ ಭಾವಿಸುವ ಕಲೆ. ಇಂಗ್ಲಿಷಿನಲ್ಲಿ ಇದನ್ನು “ವಾಕಿಂಗ್ ಇನ್ ಅದರ್ಸ್ ಶೂಸ್” ಎನ್ನುತ್ತಾರೆ. ಇದರಲ್ಲೂ ನಮ್ಮ ಕಲ್ಪನಾ ಶಕ್ತಿ ಕೆಲಸ ಮಾಡುತ್ತದೆ. ನಮಗೂ ಅಂತಹದೇ ಸನ್ನಿವೇಶ ಹಿಂದೆ ಎದುರಾಗಿದ್ದಾಗ, ನಾವು ಅದರಿಂದ ಆಗ ಹೇಗೆ ಪಾರಾದೆವು ಎಂಬುದನ್ನು ನೀವು ಅವರೊಂದಿಗೆ ಹಂಚಿಕೊಳ್ಳಬಹುದು. ಅಂತಹ ಸನ್ನಿವೇಶ ನಿಮ್ಮ ಜೀವನದಲ್ಲಿ ನಡೆಯದೇ ಇದ್ದರೂ, ಕಾಲ್ಪನಿಕವಾಗಿ ನೀವು ತೆಗೆದುಕೊಂಡ ಕ್ರಮ ಹೇಗೆ ಪ್ರಯೋಜನಕಾರಿಯಾಯಿತು, ಎಂಬುದು ನಿಮಗೆ ಹೇಳಿ-ಕೇಳಿ ತಿಳಿದಿದ್ದಲ್ಲಿ, ಅಂತಹ ಸಲಹೆ ಹಂಚಿಕೊಳ್ಳಬಹುದು. ಉದಾ: ಸ್ನೇಹಿತರೊಬ್ಬರು ಕೆಲಸದ ಸಮಯದಲ್ಲಿ ತಾವು ಮಾಡಿದ ತಪ್ಪಿನಿಂದ ಅವರಿಗಾದ ತೊಂದರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಆಗ ಅವರ ಸ್ಥಳದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ ಅಥವಾ ಅವರ ತೊಂದರೆ ಹೇಗೆ ಪರಿಹಾರವಾಯಿತು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಮಾಹಿತಿ ನಿಮಗೆ ಮುಂದೆ ಯಾವಾಗಲಾದರೂ ಪ್ರಯೋಜನಕ್ಕೆ ಬರಬಹುದು. ಇಂತಹ ಸಲಹೆ ಪ್ರತಿಯೊಂದು ಸಮಯ/ಸನ್ನಿವೇಷದಲ್ಲಿ ಕೆಲಸ ಮಾಡದಿರಬಹುದು ಎಂಬುದನ್ನು ನೆನಪಿಡಿ.

ಕನಿಕರದ ಅನುಭೂತಿ ರೂಢಿಸಿಕೊಳ್ಳುವುದು ಸುಲಭ. ದುಃಖದಲ್ಲಿರುವವರಿಗೆ ಸಹಾಯ ಹಸ್ತ ನೀಡಿ. ನಿಮ್ಮ ಹತ್ತಿರದವರಾಗಿದ್ದರೆ, ಸಮಯ-ಸಂದರ್ಭಕ್ಕನುಸಾರ, ಅವರಿಗೆ ಕುಡಿಯಲು ನೀರು ಕೊಡಿ, ಊಟ-ತಿಂಡಿ-ವಸತಿ ವ್ಯವಸ್ಥೆ ಮಾಡಿ. ಅವರು ಒಂಟಿಯಾಗಿರಲು ಇಷ್ಟಪಟ್ಟಲ್ಲಿ, ಇರಲು ಬಿಡಿ. ಅವರ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಡಿ, ಅವರ ಮನೆಯ ಮಕ್ಕಳನ್ನು ವೃದ್ಧರನ್ನು ನೋಡಿಕೊಳ್ಳಿ. ನಿಮ್ಮ ಸಲಹೆಯನ್ನು ಅವರ ಮೇಲೆ ಹೇರಲು ಹೋಗಬೇಡಿ.

ಎಲ್ಲರೂ ತಮ್ಮ ತಮ್ಮ ಯುದ್ಧಗಳನ್ನು ತಾವೇ ಕಾದಾಡಿ ಗೆಲ್ಲಬೇಕು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...