Homeಮುಖಪುಟಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

ಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

- Advertisement -
- Advertisement -

| ಹೇಮಲತಾ ಶೆಣೈ, ಬೆಂಗಳೂರು |

ಕರ್ನಾಟಕದ ನಗರಗಳ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಅಳಿದುಳಿದ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ಮಳೆನೀರು ಕೊಯ್ಲಿನ ಮೂಲಕ ನೀರು ಸಂಗ್ರಹ ಇತ್ಯಾದಿ ನಮಗೆ ಎಟಕುವಂತಹದನ್ನು ಮಾಡಬೇಕೆನ್ನುವ ತಜ್ಞರ ಮಾತು ಅಧಿಕಾರಸ್ಥರ ಕಿವಿಯೊಳಗೆ ಹೋಗುವುದೇ ಇಲ್ಲ. ನದಿ ತಿರುವು, ನದಿ ಜೋಡಣೆ, ಮೋಡ ಬಿತ್ತನೆಯಂತಹ ದೊಡ್ಡ ಖರ್ಚಿನ ಬಾಬತ್ತುಗಳು ಮಾತ್ರ ಅವರಿಗೆ ಆಕರ್ಷಕವಾಗಿ ಕಾಣುತ್ತವೆ. ನೇತ್ರಾವತಿಯಲ್ಲಿ ನೀರು ಕಡಿಮೆಯಾಗಿ ಒಣಗಲು ಶುರುವಾಗಿದ್ದರೂ – ಈ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ಕಾರಣ ಧರ್ಮಸ್ಥಳದ ಯಾತ್ರಾರ್ಥಿಗಳಿಗೆ ತಮ್ಮ ಪ್ರವಾಸವನ್ನು ಕೆಲ ದಿನ ಮುಂದೂಡಲು ದೇವಸ್ಥಾನದ ಆಡಳಿತಾಧಿಕಾರಿಗಳೇ ಮನವಿ ಮಾಡಿದ್ದನ್ನು ಸ್ಮರಿಸಬಹುದು – ಅಧಿಕಾರಸ್ಥರು ಈಗಲೂ ‘ನೇತ್ರಾವತಿ ತಿರುವು ಯೋಜನೆ’ಯ ಮಾತನ್ನೇ ಆಡುತ್ತಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೊಟ್ಟೆಪಾಡಿಗಾಗಿ ಮತ್ತು ನೀರಿನ ಕೊರತೆಯಿಂದಾಗಿ ಹಳ್ಳಿಗಾಡಿನಿಂದ, ನಮ್ಮದೇ ರಾಜ್ಯದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲದೆ ನಾನಾ ರಾಜ್ಯಗಳಿಂದಲೂ ಅಸಂಖ್ಯಾತ ಜನರು ಬೆಂಗಳೂರನ್ನು ಆಶ್ರಯಿಸಿ ಬರುತ್ತಲೇ ಇದ್ದಾರೆ.

ಬೆಂಗಳೂರಿನ ನೀರಿನ ಬವಣೆ ನಿವಾರಣೆಗೆ ತಜ್ಞರ ಸಲಹೆಯೆಂದರೆ ಮಳೆನೀರು ಸಂಗ್ರಹ – ಒಂದು, ಕೆರೆಗಳಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಿ ನೀರು ಸಂಗ್ರಹ; ಎರಡು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲು. ಇದರಿಂದ ಸಾಕಷ್ಟು ನೀರು ಭೂಮಿಯಲ್ಲಿ ಇಂಗಿ ಜಲಮಟ್ಟ ಮೇಲೇರಿ ಬಾವಿ-ಬೋರ್‍ವೆಲ್‍ಗಳಲ್ಲೂ ನೀರು ಬರುತ್ತದೆ. ಇದು ಅನಿವಾರ್ಯ. ಇಷ್ಟರಲ್ಲಾಗಲೇ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಮಳೆನೀರು ಸಂಗ್ರಹಕ್ಕೆ ಸಿದ್ಧವಾಗಿರಬೇಕಿದ್ದ ಕೆರೆಗಳು ಹಾಗೇ ಇದ್ದಾವೆ.

ಜನಪ್ರತಿನಿಧಿಗಳಿಗೆ ತಮ್ಮ ಏರಿಯದ ಕೆರೆಗಳನ್ನು ನೀರಿನ ಸಂಗ್ರಹಕ್ಕೆ ಸಿದ್ಧ ಮಾಡುವ ತರಾತುರಿಯೇ ಇಲ್ಲ. ಕೋರ್ಟು ಎಷ್ಟು ಚಾಟಿ ಬೀಸಿದರೂ ಇವರ ದಪ್ಪ ಚರ್ಮಕ್ಕೆ ನಾಟುವುದೇ ಇಲ್ಲ. ಯಾಕಿದು ಹೀಗೆ? ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು-ಬಲಾಢ್ಯರಿಂದ ಅದನ್ನು ಬಿಡಿಸಿಕೊಳ್ಳಬೇಕಾಗುತ್ತೆ, ಅದು ಇವರಿಗೆ ಬೇಡವಾಗಿದೆಯಾ?

ಹಲವೆಡೆ ಏರಿಯದ ಜನರು ಸೇರಿ ತಾವೇ ದುರಸ್ತಿ, ಹೂಳೆತ್ತುವುದು ಮಾಡಿಕೊಂಡಿದ್ದಾರೆ. ಯುವ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರು ತಮ್ಮ ಖರ್ಚಿನಿಂದಲೇ ಕೆರೆಗಳನ್ನು ರಿಪೇರಿ ಮಾಡಿಸುತ್ತಿರುವುದು, ಜನಾನುರಾಗಿ ವ್ಯಕ್ತಿಯೊಬ್ಬರು ಎಷ್ಟೋ ಬಾವಿ ತೋಡಿಸುವ ಪಣ ತೊಟ್ಟು ತಮ್ಮಷ್ಟಕ್ಕೆ ಆ ಕೆಲಸ ಮಾಡುತ್ತಿರುವುದು ಇವೆಲ್ಲ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ; ಇಷ್ಟು ದಿನ ಬಂದ ಮಳೆಗೆ ಅವೆಲ್ಲ ತುಂಬಿವೆ. ಆದರೆ ಜನಪ್ರತಿನಿಧಿಗಳು-ಅಧಿಕಾರಸ್ತರು ಇಂತಹ ಕೆಲಸ ಮಾಡಿಸಿದ್ದನ್ನು ಓದಿದ್ದು ನೆನಪಿಲ್ಲ! ಇನ್ನೂ ಕೆಲವು ಕೆರೆಗಳು ರಿಪೇರಿ ಆಗಿ ನೀರು ಸಂಗ್ರಹಿಸಲಿ ಎಂಬ ಕಾರಣಕ್ಕೋ ಎಂಬಂತೆ ನಮ್ಮ ಮುಂಗಾರು ನಾಕ್ನಾಕೇ ದಿನ ಹಿಂದೆ ಸರಿಯುತ್ತಿದೆ.

ಇನ್ನು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವಿಚಾರಕ್ಕೆ ಬಂದರೆ, ಜನರು ಯಾಕೋ ಆ ಬಗ್ಗೆ ಕಾಳಜಿನೇ ವಹಿಸುತ್ತಿಲ್ಲ. ಹೊಸ ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಯನ್ನು ಸರಕಾರ ಕಡ್ಡಾಯಗೊಳಿಸಿ ಕಾಯ್ದೆ ಮಾಡಿ ತನ್ನ ‘ಕರ್ತವ್ಯ ಪೂರೈಸಿ’ ಹಲವು ವರ್ಷಗಳೇ ಸಂದುವು. ಆದರೆ ಬೇಕಾದಷ್ಟು ಬಹುಮಹಡಿ ವಸತಿ ಸಮುಚ್ಚಯಗಳು, ಸರಕಾರಿ ಕಟ್ಟಡಗಳಲ್ಲೇ ಇದನ್ನು ಅಳವಡಿಸಿಲ್ಲ. ಅವರು ಅದಕ್ಕಾಗಿ ದಂಡ ಕಟ್ಟುತ್ತಾರೆ ಹೊರತು ಮಳೆನೀರು ಕೊಯ್ಲು ಮಾಡುತ್ತಿಲ್ಲ. ಯಾಕೆ?

ಮಿಕ್ಕ ರಾಜ್ಯಗಳಲ್ಲಿ ಇದೆಲ್ಲ ಹೇಗೆ ನಡೆಯುತ್ತಿದೆ? ನೆರೆ ರಾಜ್ಯ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಎಷ್ಟು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ಧ ವೃತ್ತಿಪರತೆಯಿಂದ ಈ ಕೆಲಸ ಮಾಡಿಸುತ್ತಿದ್ದರೆಂದರೆ, ಮನೆ ಕಟ್ಟುವ ಪರವಾನಗಿ ಬೇಕಿರುವವರಿಂದ ಸರಕಾರ ಅಥವಾ ಸಂಬಂಧಿತ ಸ್ಥಳೀಯ ಆಡಳಿತಗಳೇ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ನಿಗದಿತ ಹಣ ಕಟ್ಟಿಸಿಕೊಂಡು ಅದರ ವ್ಯವಸ್ಥೆ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ ಬ್ಯಾಂಕಿನಿಂದ ಕೃಷಿ ಸಾಲ ಬೇಕಿದ್ದಲ್ಲಿ ಕೃಷಿ ಹೊಂಡ ನಿರ್ಮಿಸಲೇ ಬೇಕಿತ್ತು. ನಮ್ಮಲ್ಲೇಕೆ ಇಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವುದಿಲ್ಲ?

ಬಹುಮಹಡಿ ಕಟ್ಟಡಗಳ ಹಾಗೂ ದೊಡ್ಡದೊಡ್ಡ ಮನೆಗಳ ನಿವಾಸಿಗಳು ಎಂದಾದರೂ ನೀರಿಗಾಗಿ ಕೊಡ ಹಿಡಿದು ಕ್ಯೂ ನಿಲ್ಲುವುದು ಇದೆಯಾ? ಇಲ್ಲ. ಆ ಮನೆಗಳ ಸಂಪುಗಳೆಲ್ಲ ರಾತ್ರಿಯೇ ತುಂಬಿ ನೀರೆಲ್ಲ ಹರಿದುಹೋಗುತ್ತಿರುತ್ತದೆ. ಆದ್ದರಿಂದಲೇ ಅವರಿಗೆ ನೀರು ಕೊಯ್ಲಿನ ಜರೂರತ್ತು ಕಾಣುತ್ತಿಲ್ಲ. [ನಾವು ವಾಸ ಇರುವ ಕಟ್ಟಡದಲ್ಲಿ ಮಳೆನೀರು ಕೊಯ್ಲಿನಿಂದ ಬೋರ್‍ವೆಲ್‍ಗೆ ನೀರು ಮರುಪೂರಣ ವ್ಯವಸ್ಥೆಯಿದೆ. ಆದರೆ ನಮ್ಮ ಪಕ್ಕದ ಕಟ್ಟಡದಲ್ಲಿ ಆ ವ್ಯವಸ್ಥೆ ಮಾಡಿರಲಿಲ್ಲ. ಅವರ ಬೋರ್‍ವೆಲ್ ಬತ್ತಿಹೋಗಿ, ಟ್ಯಾಂಕರ್ ನೀರು ಸಹ ಸಾಕಾಗದೆ, ಮಾಲೀಕರು ನಿವಾಸಿಗಳಿಗೆ ನೀರಿನ ‘ರೇಶನ್’ ಅಳವಡಿಸಿದ್ದಾರೆ. ಹೀಗಾದ ನಂತರ ಈಗ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿದ್ದಾರೆ; ಆದರೆ ಆ ನಂತರ ಮಳೆಯೇ ಬಂದಿಲ್ಲ ಇನ್ನೂ!]

ಆದ್ದರಿಂದ ಮಳೆನೀರು ಸಂಗ್ರಹ ಸುಗಮವಾಗಿ ಆಗಬೇಕೆಂದರೆ ಬರೀ ದಂಡ ಕಟ್ಟಿಸಿಕೊಳ್ಳುವುದಲ್ಲ. ದುಡ್ಡಿನಿಂದ ನೀರು ಉತ್ಪಾದನೆ ಆಗುವುದಿಲ್ಲ! ಮನೆ ನಿರ್ಮಾಣದ ಪರವಾನಗಿ ಕೊಡುವಾಗಲೇ ಮಳೆನೀರು ಕೊಯ್ಲಿಗೆ ದುಡ್ಡು ಕಟ್ಟಿಸಿಕೊಂಡು ಅಥಾರಿಟಿಗಳೇ ಅದನ್ನು ನಿರ್ಮಿಸುವ ವ್ಯವಸ್ಥೆಯಾಗಬೇಕು; ಅಥವಾ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡದಿದ್ದರೆ ಅವರಿಗೆ ನೀರು ಪೂರೈಕೆಯನ್ನು ಬಂದ್ ಮಾಡುವ ನಿಬಂಧನೆಯೊಂದಿಗೇನೇ ಪರವಾನಗಿ ಕೊಡಬೇಕು ಮತ್ತು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

ಈಗಾಗಲೇ ಬಹಳ ತಡವಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನ ಅದೆಷ್ಟೋ ಸಣ್ಣದೊಡ್ಡ ಬಹುಮಹಡಿ ಕಟ್ಟಡಗಳಲ್ಲಿನ ಬೋರ್‍ವೆಲ್‍ಗಳು ಒಣಗಿಹೋಗಿ ಟ್ಯಾಂಕರ್ ನೀರಿಗಾಗಿ ಪರದಾಡುವ ದೃಷ್ಯ ಕಾಮನ್ ಆಗಿತ್ತು. ಒಂದು ವೇಳೆ ಟ್ಯಾಂಕರುಗಳಿಗೇ ನೀರು ಸಿಗದೆ ಹೋದರೆ? ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಕೊಲ್ಲೂರು ಮುಂತಾದ ಪ್ರಖ್ಯಾತ ಯಾತ್ರಾಸ್ಥಳಗಳಲ್ಲೆಲ್ಲ ನೀರಿಗಾಗಿ ಹಾಹಾಕಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರಿಗೂ ಅಧಿಕಾರಸ್ತರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ. ಮಳೆನೀರು ಸಂಗ್ರಹವನ್ನು ಗರಿಷ್ಠ ಪ್ರಮಾಣಕ್ಕೆ ಮಾಡಿರೆಂಬ ನಮ್ಮ ಜಲತಜ್ಞರ ಸಲಹೆಯನ್ನು ಎಲ್ಲರೂ ಪಾಲಿಸಿದರೆ ಮಾತ್ರ ಉಳಿಗಾಲ ಎಂದು ಅನ್ನಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...