Homeಮುಖಪುಟನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು ಅಂಕಣ – 7 ಅನುಭೂತಿ (Empathy) -1

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವ. ಅದರ ಮುಖ್ಯ ಲಕ್ಷಣ ಅನುಭೂತಿ. ಇದು ಮಾನವನಿಗೆ ಹುಟ್ಟುಗುಣ. ಕೇವಲ ಅನುಕಂಪ ಮತ್ತು ಸಹಾನುಭೂತಿಯ ಮಿಶ್ರಣ ಅನುಭೂತಿ ಅಲ್ಲ. ಅನುಭೂತಿಗೂ ಕನಿಕರಕ್ಕೂ ವ್ಯತ್ಯಾಸವಿದೆ; ಎರಡೂ ಬೇರೆ ಬೇರೆ. ಎಂಪಥಿ ನಮ್ಮ ಭಾವನಾತ್ಮಕ ಪ್ರಜ್ಞೆಯ ಒಂದು ಮುಖ್ಯ ಅಂಶ. ಇದು ನಮ್ಮ ಮತ್ತು ಇತರರ ನಡುವಿನ ಕೊಂಡಿ. ಇದರ ಶಕ್ತಿಯ ಆಧಾರದ ಮೇಲೆ ನಮ್ಮ ಅವರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಅಳೆಯಬಹುದು. ಅನುಭೂತಿ ನಮಗೆ ನಮಗಿಂತ ಭಿನ್ನವಾದ ವ್ಯಕ್ತಿಗಳನ್ನು ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು. ಸರಳವಾಗಿ ಹೇಳಬೇಕೆಂದರೆ, ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಹಂಚಿಕೊಳ್ಳುವುದರಲ್ಲಿ ನಾವು ಎಷ್ಟು ಸಮರ್ಥರು ಎನ್ನುವುದು ಅನುಭೂತಿ. ಇದರಲ್ಲಿ ಮೂರು ಬಗೆಗಳನ್ನು ಮನಶಾಸ್ತ್ರಜ್ಞರು ಗುರುತಿಸಿದ್ದಾರೆ.

ಕಾಗ್ನಿಟಿವ್ ಎಂಪಥಿ: ಇದನ್ನು ವೇದನಾ ಅನುಭೂತಿ ಎನ್ನಬಹುದು. ಇನ್ನೊಬ್ಬರ ಮುಖಚರ್ಯೆ, ಹಾವಭಾವದಲ್ಲಿ ಅವರ ಭಾವನೆಯನ್ನು ಗುರುತಿಸುವ ಕಲೆ. ಯಾರೋ ಹತ್ತಿರದವರು ದುಃಖದಲ್ಲಿದ್ದಾಗ ನಾವು ಸಂತಾಪ ಸೂಚಿಸುವ ಸಲುವಾಗಿ ಅವರಿಗೆ ಸಂತಾಪ ಸೂಚಕ ಪತ್ರ ಬರೆಯಬಹುದು, ಕರೆ ಮಾಡಬಹುದು, ಅನುಕಂಪ ಸೂಚಿಸಬಹುದು ಆದರೆ ಅವರ ದುಃಖವನ್ನು ಅರ್ಥಮಾಡಿಕೊಳ್ಳಲು ಅಥವಾ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಅದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ದುಃಖದಲ್ಲಿರುವವರ ಹಾವಭಾವವನ್ನು ನಾವು ನಾವು ಬೇರೆ ಬೇರೆಯಾಗಿ ಅರ್ಥೈಸಬಹುದು. ಹೆಚ್ಚಾಗಿ ನಾವು ಅದನ್ನು ತಪ್ಪಾಗಿ ಅರ್ಥೈಸುತ್ತೇವೆ. ಅವರ ಮುಖದಲ್ಲಿ ಕಾಣುವ ಮುಗುಳ್ನಗೆ ಕೂಡ ದುಃಖಸೂಚಕವಾಗಿರಬಹುದು. ಚಿಕ್ಕ ಮಕ್ಕಳು ಕೂಡ ತಮ್ಮ ತಾಯಂದಿರ ದುಃಖ, ಕೋಪ, ಸಂತೋಷವನ್ನು ಕೂಡಲೇ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತಾರೆ. ಇದು ಕೇವಲ ದುಃಖಕ್ಕೆ ಅಥವಾ ಸ್ತ್ರೀಯರಿಗೆ ಮೀಸಲಾದ ಪ್ರತಿಕ್ರಿಯೆಯಲ್ಲ, ಸುಖಕ್ಕೂ, ಪುರುಷರಿಗೂ ಅನ್ವಯಿಸುವ ಭಾವನಾತ್ಮಕ ಕಲೆ.

ಎಮೋಷನಲ್ ಎಂಪಥಿ: ಇದನ್ನು ಭಾವನಾತ್ಮಕ ಅನುಭೂತಿ ಎಂದು ಕರೆಯಬಹುದು. ಇದು ವ್ಯಕ್ತಿ ನಿಮ್ಮ ಎದುರಿಗೆ ಇಲ್ಲದಿದ್ದರೂ, ವಿಷಯ ತಿಳಿದ ಕೂಡಲೇ ಆಗುವ ನಿಮ್ಮ ಪ್ರತಿಕ್ರಿಯೆ. ಅವರ ಸ್ಥಳದಲ್ಲಿ ನಾವು ಇದ್ದು, ನಮಗೂ ಅದೇ ರೀತಿಯ ದುಃಖ ಅನುಭವಿಸಬೇಕಾಗಿದ್ದಲ್ಲಿ ನಮಗೆ ಆಗ ಹೇಗೆ ಅನಿಸುತ್ತದೆ ಅದನ್ನು ಊಹಿಸಿ (ಅಥವಾ ನೆನಪಿಸಿಕೊಂಡು) ನೀಡುವ ಪ್ರತಿಕ್ರಿಯೆ.

ಕಂಪ್ಯಾಷನೇಟ್ ಎಂಪಥಿ:  ಎಂದರೆ ಕನಿಕರದ ಅನುಭೂತಿ. ಇದು ನಮ್ಮನ್ನು ಭಾವನಾತ್ಮಕವಾಗಿ ವಿಚಲಿತ ಗೊಳಿಸುವುದರ ಜೊತೆಗೆ ಕ್ರಿಯಾಶೀಲರನ್ನಾಗಿಯೂ ಮಾಡುವಂತಹ ಶಕ್ತಿ. ಉದಾ: ಎಲ್ಲಾದರೂ ನೈಸರ್ಗಿಕ ದುರಂತ ಸಂಭವಿಸಿದಾಗ ನಾವು ನೀಡುವ ಸಹಾಯ ಹಸ್ತ. ಅಂತಹ ದುರಂತ ನಾವು ಅನುಭವಿಸಿರಲೇ ಬೇಕೆಂದಿಲ್ಲ. ಅದರ ಬಗ್ಗೆ ಕೇಳಿ, ತಿಳಿದು, ದೃಶ್ಯ ಮಾಧ್ಯಮದಲ್ಲಿ ನೋಡಿ ನಮಗೆ ಮನವರಿಕೆಯಾಗಿ ನಾವು ನೀಡುವ ಪ್ರತಿಕ್ರಿಯೆ ಇದಾಗಿರುತ್ತದೆ.

ಇವುಗಳನ್ನು ಬೆಳೆಸಿಕೊಳ್ಳುವುದು ಹೇಗೆ?

ವೇದನಾ ಅನುಭೂತಿ ನಮ್ಮ ಊಹಾಶಕ್ತಿಯನ್ನು ಆಧರಿಸಿರುತ್ತದೆ. ಇನ್ನೊಬ್ಬರ ಜೊತೆ ನಮ್ಮ ಸಂಬಂಧ ಎಷ್ಟು ಗಾಢವಾಗಿದೆ ಎನ್ನುವುದರ ಮೇಲೂ ಇದು ಹೋಗುತ್ತದೆ. ಉದಾ: ಸಿನಿಮಾ, ನಾಟಕ, ಟಿವಿ ಸೀರಿಯಲ್ಲಿನಲ್ಲಿ ಬರುವ ಭಾವನಾತ್ಮಕ ದೃಶ್ಯಗಳನ್ನು ಇವರು, ತಮ್ಮ ಮನೆಯಲ್ಲಿ ಕುಳಿತು, ನೋಡಿ, ಕಣ್ಣೀರು ಸುರಿಸುವವರೂ ಇರುತ್ತಾರೆ, ಅದು ಕೇವಲ ನಾಟಕೀಯ ಸನ್ನಿವೇಶ ಎಂದು ತಿಳಿದಿದ್ದರೂ ಸಹ. ಅವರಿಗೆ ಆ ಪಾತ್ರಧಾರಿಯ ಜೊತೆಗೆ ಇರುವ ಕಾಲ್ಪನಿಕ ಸಂಬಂಧ ಮತ್ತು ಪಾತ್ರದ/ಪಾತ್ರಧಾರಿಯ ಭಾವನೆಗೆ ಇವರು ನೀಡುವ ಸ್ವಂತ ಪ್ರತಿಕ್ರಿಯೆ ಆಗಿರುತ್ತದೆ. ಅವರ ಪಕ್ಕದಲ್ಲಿ ಕುಳಿತು ಅದೇ ದೃಶ್ಯವನ್ನು ನೋಡುತ್ತಿರುವ ಇನ್ನೋರ್ವ ವ್ಯಕ್ತಿ ಅದಕ್ಕೆ ತೀರಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಬಹುದು. ಪುರುಷರು ಕ್ರಿಕೆಟ್/ಫುಟ್ಬಾಲ್ ಪಂದ್ಯ ನೋಡುವಾಗ, ಅದರಲ್ಲಿ ಅವರ ಭಾಗವಹಿಸುವಿಕೆ/ತಲ್ಲೀನತೆಯೂ ಸಹಿತ ಅನುಭೂತಿಯನ್ನು ತೋರಿಸುತ್ತದೆ. ವೇದನಾ ಅನುಭೂತಿ ಬೆಳೆಸಿಕೊಳ್ಳಲು ಮೊದಲು ಇನ್ನೋರ್ವ ವ್ಯಕ್ತಿಯ/ಸನ್ನಿವೇಶದ ಬಗ್ಗೆ ನಾವು ಸಾಕಷ್ಟು ತಿಳಿದಿರಬೇಕು, ಇಲ್ಲದಿದ್ದಲ್ಲಿ ನಮ್ಮ ಊಹಾ ಶಕ್ತಿ ನಮಗೆ ಮೋಸ ಮಾಡಬಹುದು. ಎಷ್ಟೋ ಆತ್ಮಹತ್ಯೆ ಪ್ರಕರಣದಲ್ಲಿ ವ್ಯಕ್ತಿಗೆ ಹತ್ತಿರವಿದ್ದವರು ಅವರ ವೇದನೆಯನ್ನು ಅರ್ಥಮಾಡಿಕೊಳ್ಳದೇ, ಅವರ ನಗುವನ್ನು ಸಂತೋಷವೆಂದು ತಪ್ಪಾಗಿ ಗ್ರಹಿಸಿ, ಸಮಯವಿದ್ದಾಗ ಕ್ರಮ ವಹಿಸದೇ, ಪ್ರಸಂಗ ಕೈಮೀರಿ ಹೋಗಿರುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಇಂದಿನಿಂದ ಟಿವಿ ಸೀರಿಯಲ್ ನೋಡಿ ನೀವೂ ಸಹ ಕಣ್ಣೀರು ಸುರಿಸಿ ಎಂದು ನಾನು ಹೇಳುವುದಿಲ್ಲ, ಆದರೆ ಅಂತಹವರನ್ನು ಕಂಡರೆ ನೀವು ಅವರಿಂದ ಅನುಭೂತಿಯ ಬಗ್ಗೆ ಏನು ಕಲಿಯಬಹುದು ಯೋಚಿಸಿ.

ಭಾವನಾತ್ಮಕ ಅನುಭೂತಿ ಇನ್ನೊಬ್ಬರ ನೋವು ನಮಗೇ ಆದಂತೆ ಭಾವಿಸುವ ಕಲೆ. ಇಂಗ್ಲಿಷಿನಲ್ಲಿ ಇದನ್ನು “ವಾಕಿಂಗ್ ಇನ್ ಅದರ್ಸ್ ಶೂಸ್” ಎನ್ನುತ್ತಾರೆ. ಇದರಲ್ಲೂ ನಮ್ಮ ಕಲ್ಪನಾ ಶಕ್ತಿ ಕೆಲಸ ಮಾಡುತ್ತದೆ. ನಮಗೂ ಅಂತಹದೇ ಸನ್ನಿವೇಶ ಹಿಂದೆ ಎದುರಾಗಿದ್ದಾಗ, ನಾವು ಅದರಿಂದ ಆಗ ಹೇಗೆ ಪಾರಾದೆವು ಎಂಬುದನ್ನು ನೀವು ಅವರೊಂದಿಗೆ ಹಂಚಿಕೊಳ್ಳಬಹುದು. ಅಂತಹ ಸನ್ನಿವೇಶ ನಿಮ್ಮ ಜೀವನದಲ್ಲಿ ನಡೆಯದೇ ಇದ್ದರೂ, ಕಾಲ್ಪನಿಕವಾಗಿ ನೀವು ತೆಗೆದುಕೊಂಡ ಕ್ರಮ ಹೇಗೆ ಪ್ರಯೋಜನಕಾರಿಯಾಯಿತು, ಎಂಬುದು ನಿಮಗೆ ಹೇಳಿ-ಕೇಳಿ ತಿಳಿದಿದ್ದಲ್ಲಿ, ಅಂತಹ ಸಲಹೆ ಹಂಚಿಕೊಳ್ಳಬಹುದು. ಉದಾ: ಸ್ನೇಹಿತರೊಬ್ಬರು ಕೆಲಸದ ಸಮಯದಲ್ಲಿ ತಾವು ಮಾಡಿದ ತಪ್ಪಿನಿಂದ ಅವರಿಗಾದ ತೊಂದರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಆಗ ಅವರ ಸ್ಥಳದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ ಅಥವಾ ಅವರ ತೊಂದರೆ ಹೇಗೆ ಪರಿಹಾರವಾಯಿತು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಮಾಹಿತಿ ನಿಮಗೆ ಮುಂದೆ ಯಾವಾಗಲಾದರೂ ಪ್ರಯೋಜನಕ್ಕೆ ಬರಬಹುದು. ಇಂತಹ ಸಲಹೆ ಪ್ರತಿಯೊಂದು ಸಮಯ/ಸನ್ನಿವೇಷದಲ್ಲಿ ಕೆಲಸ ಮಾಡದಿರಬಹುದು ಎಂಬುದನ್ನು ನೆನಪಿಡಿ.

ಕನಿಕರದ ಅನುಭೂತಿ ರೂಢಿಸಿಕೊಳ್ಳುವುದು ಸುಲಭ. ದುಃಖದಲ್ಲಿರುವವರಿಗೆ ಸಹಾಯ ಹಸ್ತ ನೀಡಿ. ನಿಮ್ಮ ಹತ್ತಿರದವರಾಗಿದ್ದರೆ, ಸಮಯ-ಸಂದರ್ಭಕ್ಕನುಸಾರ, ಅವರಿಗೆ ಕುಡಿಯಲು ನೀರು ಕೊಡಿ, ಊಟ-ತಿಂಡಿ-ವಸತಿ ವ್ಯವಸ್ಥೆ ಮಾಡಿ. ಅವರು ಒಂಟಿಯಾಗಿರಲು ಇಷ್ಟಪಟ್ಟಲ್ಲಿ, ಇರಲು ಬಿಡಿ. ಅವರ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಡಿ, ಅವರ ಮನೆಯ ಮಕ್ಕಳನ್ನು ವೃದ್ಧರನ್ನು ನೋಡಿಕೊಳ್ಳಿ. ನಿಮ್ಮ ಸಲಹೆಯನ್ನು ಅವರ ಮೇಲೆ ಹೇರಲು ಹೋಗಬೇಡಿ.

ಎಲ್ಲರೂ ತಮ್ಮ ತಮ್ಮ ಯುದ್ಧಗಳನ್ನು ತಾವೇ ಕಾದಾಡಿ ಗೆಲ್ಲಬೇಕು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...