Homeಮುಖಪುಟನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು ಅಂಕಣ – 7 ಅನುಭೂತಿ (Empathy) -1

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವ. ಅದರ ಮುಖ್ಯ ಲಕ್ಷಣ ಅನುಭೂತಿ. ಇದು ಮಾನವನಿಗೆ ಹುಟ್ಟುಗುಣ. ಕೇವಲ ಅನುಕಂಪ ಮತ್ತು ಸಹಾನುಭೂತಿಯ ಮಿಶ್ರಣ ಅನುಭೂತಿ ಅಲ್ಲ. ಅನುಭೂತಿಗೂ ಕನಿಕರಕ್ಕೂ ವ್ಯತ್ಯಾಸವಿದೆ; ಎರಡೂ ಬೇರೆ ಬೇರೆ. ಎಂಪಥಿ ನಮ್ಮ ಭಾವನಾತ್ಮಕ ಪ್ರಜ್ಞೆಯ ಒಂದು ಮುಖ್ಯ ಅಂಶ. ಇದು ನಮ್ಮ ಮತ್ತು ಇತರರ ನಡುವಿನ ಕೊಂಡಿ. ಇದರ ಶಕ್ತಿಯ ಆಧಾರದ ಮೇಲೆ ನಮ್ಮ ಅವರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಅಳೆಯಬಹುದು. ಅನುಭೂತಿ ನಮಗೆ ನಮಗಿಂತ ಭಿನ್ನವಾದ ವ್ಯಕ್ತಿಗಳನ್ನು ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು. ಸರಳವಾಗಿ ಹೇಳಬೇಕೆಂದರೆ, ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಹಂಚಿಕೊಳ್ಳುವುದರಲ್ಲಿ ನಾವು ಎಷ್ಟು ಸಮರ್ಥರು ಎನ್ನುವುದು ಅನುಭೂತಿ. ಇದರಲ್ಲಿ ಮೂರು ಬಗೆಗಳನ್ನು ಮನಶಾಸ್ತ್ರಜ್ಞರು ಗುರುತಿಸಿದ್ದಾರೆ.

ಕಾಗ್ನಿಟಿವ್ ಎಂಪಥಿ: ಇದನ್ನು ವೇದನಾ ಅನುಭೂತಿ ಎನ್ನಬಹುದು. ಇನ್ನೊಬ್ಬರ ಮುಖಚರ್ಯೆ, ಹಾವಭಾವದಲ್ಲಿ ಅವರ ಭಾವನೆಯನ್ನು ಗುರುತಿಸುವ ಕಲೆ. ಯಾರೋ ಹತ್ತಿರದವರು ದುಃಖದಲ್ಲಿದ್ದಾಗ ನಾವು ಸಂತಾಪ ಸೂಚಿಸುವ ಸಲುವಾಗಿ ಅವರಿಗೆ ಸಂತಾಪ ಸೂಚಕ ಪತ್ರ ಬರೆಯಬಹುದು, ಕರೆ ಮಾಡಬಹುದು, ಅನುಕಂಪ ಸೂಚಿಸಬಹುದು ಆದರೆ ಅವರ ದುಃಖವನ್ನು ಅರ್ಥಮಾಡಿಕೊಳ್ಳಲು ಅಥವಾ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಅದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ದುಃಖದಲ್ಲಿರುವವರ ಹಾವಭಾವವನ್ನು ನಾವು ನಾವು ಬೇರೆ ಬೇರೆಯಾಗಿ ಅರ್ಥೈಸಬಹುದು. ಹೆಚ್ಚಾಗಿ ನಾವು ಅದನ್ನು ತಪ್ಪಾಗಿ ಅರ್ಥೈಸುತ್ತೇವೆ. ಅವರ ಮುಖದಲ್ಲಿ ಕಾಣುವ ಮುಗುಳ್ನಗೆ ಕೂಡ ದುಃಖಸೂಚಕವಾಗಿರಬಹುದು. ಚಿಕ್ಕ ಮಕ್ಕಳು ಕೂಡ ತಮ್ಮ ತಾಯಂದಿರ ದುಃಖ, ಕೋಪ, ಸಂತೋಷವನ್ನು ಕೂಡಲೇ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತಾರೆ. ಇದು ಕೇವಲ ದುಃಖಕ್ಕೆ ಅಥವಾ ಸ್ತ್ರೀಯರಿಗೆ ಮೀಸಲಾದ ಪ್ರತಿಕ್ರಿಯೆಯಲ್ಲ, ಸುಖಕ್ಕೂ, ಪುರುಷರಿಗೂ ಅನ್ವಯಿಸುವ ಭಾವನಾತ್ಮಕ ಕಲೆ.

ಎಮೋಷನಲ್ ಎಂಪಥಿ: ಇದನ್ನು ಭಾವನಾತ್ಮಕ ಅನುಭೂತಿ ಎಂದು ಕರೆಯಬಹುದು. ಇದು ವ್ಯಕ್ತಿ ನಿಮ್ಮ ಎದುರಿಗೆ ಇಲ್ಲದಿದ್ದರೂ, ವಿಷಯ ತಿಳಿದ ಕೂಡಲೇ ಆಗುವ ನಿಮ್ಮ ಪ್ರತಿಕ್ರಿಯೆ. ಅವರ ಸ್ಥಳದಲ್ಲಿ ನಾವು ಇದ್ದು, ನಮಗೂ ಅದೇ ರೀತಿಯ ದುಃಖ ಅನುಭವಿಸಬೇಕಾಗಿದ್ದಲ್ಲಿ ನಮಗೆ ಆಗ ಹೇಗೆ ಅನಿಸುತ್ತದೆ ಅದನ್ನು ಊಹಿಸಿ (ಅಥವಾ ನೆನಪಿಸಿಕೊಂಡು) ನೀಡುವ ಪ್ರತಿಕ್ರಿಯೆ.

ಕಂಪ್ಯಾಷನೇಟ್ ಎಂಪಥಿ:  ಎಂದರೆ ಕನಿಕರದ ಅನುಭೂತಿ. ಇದು ನಮ್ಮನ್ನು ಭಾವನಾತ್ಮಕವಾಗಿ ವಿಚಲಿತ ಗೊಳಿಸುವುದರ ಜೊತೆಗೆ ಕ್ರಿಯಾಶೀಲರನ್ನಾಗಿಯೂ ಮಾಡುವಂತಹ ಶಕ್ತಿ. ಉದಾ: ಎಲ್ಲಾದರೂ ನೈಸರ್ಗಿಕ ದುರಂತ ಸಂಭವಿಸಿದಾಗ ನಾವು ನೀಡುವ ಸಹಾಯ ಹಸ್ತ. ಅಂತಹ ದುರಂತ ನಾವು ಅನುಭವಿಸಿರಲೇ ಬೇಕೆಂದಿಲ್ಲ. ಅದರ ಬಗ್ಗೆ ಕೇಳಿ, ತಿಳಿದು, ದೃಶ್ಯ ಮಾಧ್ಯಮದಲ್ಲಿ ನೋಡಿ ನಮಗೆ ಮನವರಿಕೆಯಾಗಿ ನಾವು ನೀಡುವ ಪ್ರತಿಕ್ರಿಯೆ ಇದಾಗಿರುತ್ತದೆ.

ಇವುಗಳನ್ನು ಬೆಳೆಸಿಕೊಳ್ಳುವುದು ಹೇಗೆ?

ವೇದನಾ ಅನುಭೂತಿ ನಮ್ಮ ಊಹಾಶಕ್ತಿಯನ್ನು ಆಧರಿಸಿರುತ್ತದೆ. ಇನ್ನೊಬ್ಬರ ಜೊತೆ ನಮ್ಮ ಸಂಬಂಧ ಎಷ್ಟು ಗಾಢವಾಗಿದೆ ಎನ್ನುವುದರ ಮೇಲೂ ಇದು ಹೋಗುತ್ತದೆ. ಉದಾ: ಸಿನಿಮಾ, ನಾಟಕ, ಟಿವಿ ಸೀರಿಯಲ್ಲಿನಲ್ಲಿ ಬರುವ ಭಾವನಾತ್ಮಕ ದೃಶ್ಯಗಳನ್ನು ಇವರು, ತಮ್ಮ ಮನೆಯಲ್ಲಿ ಕುಳಿತು, ನೋಡಿ, ಕಣ್ಣೀರು ಸುರಿಸುವವರೂ ಇರುತ್ತಾರೆ, ಅದು ಕೇವಲ ನಾಟಕೀಯ ಸನ್ನಿವೇಶ ಎಂದು ತಿಳಿದಿದ್ದರೂ ಸಹ. ಅವರಿಗೆ ಆ ಪಾತ್ರಧಾರಿಯ ಜೊತೆಗೆ ಇರುವ ಕಾಲ್ಪನಿಕ ಸಂಬಂಧ ಮತ್ತು ಪಾತ್ರದ/ಪಾತ್ರಧಾರಿಯ ಭಾವನೆಗೆ ಇವರು ನೀಡುವ ಸ್ವಂತ ಪ್ರತಿಕ್ರಿಯೆ ಆಗಿರುತ್ತದೆ. ಅವರ ಪಕ್ಕದಲ್ಲಿ ಕುಳಿತು ಅದೇ ದೃಶ್ಯವನ್ನು ನೋಡುತ್ತಿರುವ ಇನ್ನೋರ್ವ ವ್ಯಕ್ತಿ ಅದಕ್ಕೆ ತೀರಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಬಹುದು. ಪುರುಷರು ಕ್ರಿಕೆಟ್/ಫುಟ್ಬಾಲ್ ಪಂದ್ಯ ನೋಡುವಾಗ, ಅದರಲ್ಲಿ ಅವರ ಭಾಗವಹಿಸುವಿಕೆ/ತಲ್ಲೀನತೆಯೂ ಸಹಿತ ಅನುಭೂತಿಯನ್ನು ತೋರಿಸುತ್ತದೆ. ವೇದನಾ ಅನುಭೂತಿ ಬೆಳೆಸಿಕೊಳ್ಳಲು ಮೊದಲು ಇನ್ನೋರ್ವ ವ್ಯಕ್ತಿಯ/ಸನ್ನಿವೇಶದ ಬಗ್ಗೆ ನಾವು ಸಾಕಷ್ಟು ತಿಳಿದಿರಬೇಕು, ಇಲ್ಲದಿದ್ದಲ್ಲಿ ನಮ್ಮ ಊಹಾ ಶಕ್ತಿ ನಮಗೆ ಮೋಸ ಮಾಡಬಹುದು. ಎಷ್ಟೋ ಆತ್ಮಹತ್ಯೆ ಪ್ರಕರಣದಲ್ಲಿ ವ್ಯಕ್ತಿಗೆ ಹತ್ತಿರವಿದ್ದವರು ಅವರ ವೇದನೆಯನ್ನು ಅರ್ಥಮಾಡಿಕೊಳ್ಳದೇ, ಅವರ ನಗುವನ್ನು ಸಂತೋಷವೆಂದು ತಪ್ಪಾಗಿ ಗ್ರಹಿಸಿ, ಸಮಯವಿದ್ದಾಗ ಕ್ರಮ ವಹಿಸದೇ, ಪ್ರಸಂಗ ಕೈಮೀರಿ ಹೋಗಿರುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಇಂದಿನಿಂದ ಟಿವಿ ಸೀರಿಯಲ್ ನೋಡಿ ನೀವೂ ಸಹ ಕಣ್ಣೀರು ಸುರಿಸಿ ಎಂದು ನಾನು ಹೇಳುವುದಿಲ್ಲ, ಆದರೆ ಅಂತಹವರನ್ನು ಕಂಡರೆ ನೀವು ಅವರಿಂದ ಅನುಭೂತಿಯ ಬಗ್ಗೆ ಏನು ಕಲಿಯಬಹುದು ಯೋಚಿಸಿ.

ಭಾವನಾತ್ಮಕ ಅನುಭೂತಿ ಇನ್ನೊಬ್ಬರ ನೋವು ನಮಗೇ ಆದಂತೆ ಭಾವಿಸುವ ಕಲೆ. ಇಂಗ್ಲಿಷಿನಲ್ಲಿ ಇದನ್ನು “ವಾಕಿಂಗ್ ಇನ್ ಅದರ್ಸ್ ಶೂಸ್” ಎನ್ನುತ್ತಾರೆ. ಇದರಲ್ಲೂ ನಮ್ಮ ಕಲ್ಪನಾ ಶಕ್ತಿ ಕೆಲಸ ಮಾಡುತ್ತದೆ. ನಮಗೂ ಅಂತಹದೇ ಸನ್ನಿವೇಶ ಹಿಂದೆ ಎದುರಾಗಿದ್ದಾಗ, ನಾವು ಅದರಿಂದ ಆಗ ಹೇಗೆ ಪಾರಾದೆವು ಎಂಬುದನ್ನು ನೀವು ಅವರೊಂದಿಗೆ ಹಂಚಿಕೊಳ್ಳಬಹುದು. ಅಂತಹ ಸನ್ನಿವೇಶ ನಿಮ್ಮ ಜೀವನದಲ್ಲಿ ನಡೆಯದೇ ಇದ್ದರೂ, ಕಾಲ್ಪನಿಕವಾಗಿ ನೀವು ತೆಗೆದುಕೊಂಡ ಕ್ರಮ ಹೇಗೆ ಪ್ರಯೋಜನಕಾರಿಯಾಯಿತು, ಎಂಬುದು ನಿಮಗೆ ಹೇಳಿ-ಕೇಳಿ ತಿಳಿದಿದ್ದಲ್ಲಿ, ಅಂತಹ ಸಲಹೆ ಹಂಚಿಕೊಳ್ಳಬಹುದು. ಉದಾ: ಸ್ನೇಹಿತರೊಬ್ಬರು ಕೆಲಸದ ಸಮಯದಲ್ಲಿ ತಾವು ಮಾಡಿದ ತಪ್ಪಿನಿಂದ ಅವರಿಗಾದ ತೊಂದರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಆಗ ಅವರ ಸ್ಥಳದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ ಅಥವಾ ಅವರ ತೊಂದರೆ ಹೇಗೆ ಪರಿಹಾರವಾಯಿತು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಮಾಹಿತಿ ನಿಮಗೆ ಮುಂದೆ ಯಾವಾಗಲಾದರೂ ಪ್ರಯೋಜನಕ್ಕೆ ಬರಬಹುದು. ಇಂತಹ ಸಲಹೆ ಪ್ರತಿಯೊಂದು ಸಮಯ/ಸನ್ನಿವೇಷದಲ್ಲಿ ಕೆಲಸ ಮಾಡದಿರಬಹುದು ಎಂಬುದನ್ನು ನೆನಪಿಡಿ.

ಕನಿಕರದ ಅನುಭೂತಿ ರೂಢಿಸಿಕೊಳ್ಳುವುದು ಸುಲಭ. ದುಃಖದಲ್ಲಿರುವವರಿಗೆ ಸಹಾಯ ಹಸ್ತ ನೀಡಿ. ನಿಮ್ಮ ಹತ್ತಿರದವರಾಗಿದ್ದರೆ, ಸಮಯ-ಸಂದರ್ಭಕ್ಕನುಸಾರ, ಅವರಿಗೆ ಕುಡಿಯಲು ನೀರು ಕೊಡಿ, ಊಟ-ತಿಂಡಿ-ವಸತಿ ವ್ಯವಸ್ಥೆ ಮಾಡಿ. ಅವರು ಒಂಟಿಯಾಗಿರಲು ಇಷ್ಟಪಟ್ಟಲ್ಲಿ, ಇರಲು ಬಿಡಿ. ಅವರ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಡಿ, ಅವರ ಮನೆಯ ಮಕ್ಕಳನ್ನು ವೃದ್ಧರನ್ನು ನೋಡಿಕೊಳ್ಳಿ. ನಿಮ್ಮ ಸಲಹೆಯನ್ನು ಅವರ ಮೇಲೆ ಹೇರಲು ಹೋಗಬೇಡಿ.

ಎಲ್ಲರೂ ತಮ್ಮ ತಮ್ಮ ಯುದ್ಧಗಳನ್ನು ತಾವೇ ಕಾದಾಡಿ ಗೆಲ್ಲಬೇಕು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....