Homeಕರ್ನಾಟಕಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

ಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

- Advertisement -
- Advertisement -

ಸಾವರ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸ್ವಾತಂತ್ರ್ಯದ 75ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹೊರಡಿಸಿದ ಒಂದು ಜಾಹೀರಾತಿನಲ್ಲಿ ಭಾರತದ ಮೊದಲನೆಯ ಪ್ರಧಾನಿ ಜವಾಹರಲಾಲ ನೆಹರೂ ಅವರ ಚಿತ್ರವನ್ನು ಕೈಬಿಟ್ಟು ಸಾವರ್ಕರ್ ಅವರ ಚಿತ್ರವನ್ನು ಸೇರಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಚಿತ್ರವನ್ನು ಕಿತ್ತುಹಾಕಿದ ಸುದ್ದಿಬಂದಿತ್ತು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನನ ಚಿತ್ರವನ್ನು ಇಡಲು ಹೋದವರನ್ನು ಬಂಧಿಸಲಾಗಿರುವ ವರದಿಯಾಗಿತ್ತು. ಮಂಗಳೂರಿನಲ್ಲಿ ರಾಷ್ಟ್ರೀಯ ಹಿಂದೂ ಸೇನೆಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಅವರಂತೂ ಸಾವರ್ಕರ್ ಅವರ ಚಿತ್ರವನ್ನು ಕಿತ್ತು ಹಾಕುವವರ ಕೈಗಳನ್ನು ಕತ್ತರಿಸುತ್ತೇವೆ ಎಂಬ ಬೆದರಿಕೆಯನ್ನು ಹಾಕಿದ್ದಾರೆಂಬ ಸುದ್ದಿಯೂ ಬಂದಿದೆ.

ಈ ಹಿಂದುತ್ವವಾದಿಗಳಿಗೆ ಸಾವರ್ಕರ್ ಅವರ ಮೇಲೆ ಯಾಕೆ ಇಷ್ಟೊಂದು ಪ್ರೀತಿ? ಈ ಹಿಂದುತ್ವವಾದಿಗಳು ಬ್ರಿಟಿಷರ ವಿರುದ್ಧ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರಿಗೆ ಸಹಾಯ ಮಾಡಿದ್ದು ಈಗ ಇವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿರುವವರಲ್ಲಿ ಇವರಲ್ಲಿ ಇರಬಹುದಾದ ಒಂದೇಒಂದು ಹೆಸರು ವಿನಾಯಕ ದಾಮೋದರ ಸಾವರ್ಕರ್ ಅವರದ್ದು. 23.12.1910ರಂದು ಅವರನ್ನು ರಾಜ್ಯವ್ಯವಸ್ಥೆಯ ವಿರುದ್ಧ ಯುದ್ಧವನ್ನು ಸಾರಿದ್ದಕ್ಕಾಗಿ 25 ವರ್ಷಗಳ ಕಾರಾವಾಸವನ್ನೂ, 30.01.1911ರಂದು ಒಬ್ಬ ಬ್ರಿಟಿಷ್ ಅಧಿಕಾರಿಯ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತೊಂದು 25 ವರ್ಷಗಳ ಕಾರಾವಾಸವನ್ನೂ ಬ್ರಿಟಿಷರು ವಿಧಿಸಿದ್ದರು. ಆದುದರಿಂದ ಸಾವರ್ಕರ್ ಅವರು ಮಹಾನ್ ದೇಶಭಕ್ತರಾಗಿದ್ದರೆಂದೂ, ಬ್ರಿಟಿಷರ ವಿರುದ್ಧ ಹೋರಾಡಿದ್ದರೆಂದೂ ಹಿಂದುತ್ವವಾದಿಗಳು ಬೀಗುತ್ತಾರೆ.

ಸಾವರ್ಕರ್ ಅವರು ತಾವು ಇನ್ನು ಬ್ರಿಟಿಷರ ವಿರುದ್ಧ ಯಾವ ಹೋರಾಟವನ್ನೂ ಮಾಡುವುದಿಲ್ಲವೆಂದೂ, ಬ್ರಿಟಿಷರಿಗೆ ವಿಧೇಯನಾಗಿರುತ್ತೇನೆಂದೂ ಬ್ರಿಟಿಷರಲ್ಲಿ ಒಂದಲ್ಲ ಎಂಟು ಬಾರಿ ಕ್ಷಮೆ ಯಾಚಿಸಿ ಪತ್ರ ಬರೆದು ಕೇಳಿಕೊಂಡು ಬಿಡುಗಡೆ ಹೊಂದಿದ್ದರೂ ಅವರ ಕ್ಷಮಾ ಯಾಚನಾ ಪತ್ರಗಳು ಅವರ ಬದುಕಿನ ಅವಧಿಯಲ್ಲಿ ಹೊರಬಂದಿರಲಿಲ್ಲ. ಆದರೆ ಅವರ ದುರಾದೃಷ್ಟಕ್ಕೆ ಅವರ ಮರಣದ ನಂತರ ಅವರ ಕ್ಷಮಾ ಯಾಚನಾ ಪತ್ರಗಳು ಬಹಿರಂಗವಾಗಿದ್ದು ಹಿಂದುತ್ವವಾದಿಗಳಿಗೆ ಮುಜುಗರವನ್ನುಂಟು ಮಾಡುತ್ತಿವೆ.

ಹಿಂದುತ್ವವಾದಿಗಳಿಂದ ’ವೀರ ಸಾವರ್ಕರ್’ ಎಂದು ಬಿರುದು ಪಡೆದಿರುವ ಅವರು ಅಂತಹ ಮಹಾನ್ ದೇಶಭಕ್ತರಾಗಿದ್ದರೆ ಬ್ರಿಟಿಷರಿಂದ ಪ್ರತಿ ತಿಂಗಳು ರೂ. 60/- ಮಾಸಾಶನವನ್ನು ಏಕೆ ಪಡೆಯುತ್ತಿದ್ದರು? ಸಾವರ್ಕರ್ ಅವರು ಅಷ್ಟೊಂದು ಬಡವರಾಗಿದ್ದರೆ? ಆದರೆ ಅವರು ಮಹಾತ್ಮಾ ಗಾಂಧಿಯನ್ನು ಗುಂಡು ಹಾರಿಸಿ ಸಾಯಿಸಿದ ನಾಥುರಾಮ ಗೋಡ್ಸೆಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ’ಅಗ್ರಣಿ’ ಎಂಬ ತಮ್ಮ ಪತ್ರಿಕೆಯನ್ನು ಹೊರಡಿಸಲು ರೂ. 15000/- ಗಳನ್ನು ಸಾಲವಾಗಿ ನೀಡಿದ್ದರು. ಅಂದು ಸಾವರ್ಕರ್ ಅವರು ಗೋಡ್ಸೆಗೆ ನೀಡಿದ ಹಣದ ಬೆಲೆ ಇಂದಿನ ರೂ. 3,42,000/- ಗಳಿಗೆ ಸಮ ಎಂದು ಅಂದಾಜಿಸಬಹುದು. ಸಾವರ್ಕರ್ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿತ್ತು? ಈ ಆದಾಯದ ಮೂಲ ಯಾವುದು?

ಇತಿಹಾಸಕಾರ ಶ್ರೀ ಅಶೋಕ್ ಕುಮಾರ್ ಪಾಂಡೆ ಹಿಂದಿಯಲ್ಲಿ – “ಸಾವರ್ಕರ್ – ಕಾಲಾ ಪಾನಿ ಔರ್ ಉಸ್ಕೆ ಬಾದ್”- (ಸಾವರ್ಕರ್- ಕಾಲಾ ಪಾನಿ ಮತ್ತು ಅದರ ನಂತರ) ಎಂಬ ಒಂದು ಪುಸ್ತಕವನ್ನು ಬರೆದಿದ್ದಾರೆ. ಇತ್ತೀಚೆಗೆ ರಾಜಕಮಲ ಪ್ರಕಾಶನ ಅದನ್ನು ಪ್ರಕಟಿಸಿದೆ. ಅದರ ಪುಟ 200ರಲ್ಲಿ ಅವರು ಸಾವರ್ಕರ್ ಅವರ ಬದುಕಿನ ಒಂದು ಹೊಸ ಆಯಾಮವನ್ನು ಹೊರಹಾಕಿದ್ದಾರೆ. “ಇತ್ತೀಚೆಗೆ ಬಹಿರಂಗಪಡಿಸಲಾದ ವರ್ಗೀಕೃತ ಕೆಲವು ಸಿಐಎ (ಅಮೆರಿಕದ ಗುಪ್ತಚರ ವಿಭಾಗ) ಫೈಲ್‌ಗಳಲ್ಲಿ ಸಾವರ್ಕರ್ ಹೆಸರನ್ನು ಕಂಡು ನನಗೆ ಆಶ್ಚರ್ಯವಾಯಿತು. ಜೂನ್ 27, 1961ರ ಫೈಲ್ ಸಂಖ್ಯೆ ಎಸ್‌ಆರ್/2-ಬಿ -61-292, ಸಿಐಎ ಏಜೆಂಟರಾದ ರಾಬರ್ಟ್ ಟಿ. ಗೋಫೋರ್ತ್ (ಅವರ ಗುಪ್ತ ಹೆಸರು) ಸಿಐಎ ಅಧಿಕಾರಿಯೊಂದಿಗಿನ ಸಭೆಯ ವರದಿಯಾಗಿದೆ. ವರದಿಯಲ್ಲಿ, ಗೋಫೋರ್ತ್ ಅವರು ತನ್ನ ಸಂಪರ್ಕದಲ್ಲಿರುವ ಬೇರೆಬೇರೆ ವ್ಯಕ್ತಿಗಳ ವಿವರಗಳನ್ನು ನೀಡುತ್ತಾರೆ”. ಈ ವರದಿಯಲ್ಲಿ ಅವರು ಸಾವರ್ಕರ್ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಪಾಂಡೆ ಅವರು ತಮ್ಮ ಪುಸ್ತಕದ ಕೊನೆಯಲ್ಲಿ ಸಾವರ್ಕರ್ ಹೆಸರನ್ನು ಪ್ರಸ್ತಾಪಿಸುವ ವರದಿಯ ಸಂಬಂಧಿತ ಪ್ಯಾರಾಗಳ ಛಾಯಾಪ್ರತಿಗಳನ್ನೂ ಪ್ರಕಟಿಸಿದ್ದಾರೆ.

ಅಶೋಕ್ ಕುಮಾರ್ ಪಾಂಡೆ ಅವರು ಪ್ರಕಟಿಸಿರುವ ಸಂಬಂಧಿತ ಮೂರು ಪುಟಗಳಲ್ಲಿ ಪ್ರಮುಖವಾದ ಅಂಶಗಳ ಕನ್ನಡ ಅನುವಾದ ಹೀಗಿದೆ: ಸಾವರ್ಕರ್ ಬಾಂಬೆ ಪ್ರಾಂತ್ಯದ ಪೂನಾದಲ್ಲಿರುವ ಕೆಸ್ಟ್ರೆ ಹೆಸರಿನ ಪತ್ರಿಕೆಯ ವರದಿಗಾರರಾಗಿದ್ದಾರೆ. ಇದಲ್ಲದೆ, ಅವರು ಬಾಲ್ಟಿಕ್ ಇನ್ಸ್ಟಿಟ್ಯೂಟ್‌ಗಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರು ಸಾಮಾನ್ಯವಾಗಿ ಪ್ರತಿ ವಾರ ಕಮ್ಯುನಿಸಂನ ಕೆಲವು ಅಂಶಗಳನ್ನು ಸ್ಪರ್ಶಿಸುವ ಒಂದು ಲೇಖನವನ್ನು ಸಿದ್ಧಪಡಿಸುತ್ತಾರೆ. ಈ ಲೇಖನವನ್ನು ನಂತರ ಆಫ್ರಿಕಾ ಮತ್ತು ಏಷ್ಯಾದ ಸುಮಾರು 168 ವಿವಿಧ ಪತ್ರಿಕೆಗಳಿಗೆ ಕಳುಹಿಸಲಾಗುತ್ತದೆ. ಈ ಪ್ರಕಟಣೆಗಳಿಂದ ಸಾಮಾನ್ಯವಾಗಿ ತಿಂಗಳಿಗೆ ಅವರ ಲೇಖನಗಳನ್ನು ಬಳಸಿದ್ದಕ್ಕೆ ರುಜುವಾತಾಗಿ ಮೂರರಿಂದ ಐದು ಪತ್ರಿಕಾ ತುಣುಕುಗಳು ಬರುತ್ತವೆ. ಆದರೆ ಇದು ಈ ಲೇಖನಗಳನ್ನು ಸಂಪಾದಕೀಯಕ್ಕಾಗಿ ಅಥವಾ ಇತರ ವಿಶೇಷ ಲೇಖನಗಳಿಗಾಗಿ ಆಧಾರವಾಗಿ ಬಳಸಿರುವುದನ್ನು ಒಳಗೊಂಡಿರುವುದಿಲ್ಲ. ಆದುದರಿಂದ ಅಂತಹುವುಗಳ ಶ್ರೇಯವನ್ನು ಸಾವರ್ಕರ್ ಅವರಿಗೆ ಕೊಡುತ್ತಿಲ್ಲ. ಬಾಲ್ಟಿಕ್ ಇನ್ಸ್ಟಿಟ್ಯೂಟ್ ಇದು ಯುರೋಪನ್ನು ಸ್ವತಂತ್ರಗೊಳಿಸುವ ಯೋಜನೆಯ ಒಂದು ಭಾಗವಾಗಿದ್ದು (Free Europe Project) ಶೀಘ್ರದಲ್ಲೇ ಅದನ್ನು ನಿಲ್ಲಿಸಲಾಗುವುದು. ಪ್ರಸ್ತುತ ಇದಕ್ಕೆ ಪ್ರಮುಖ ವೆಚ್ಚಗಳೆಂದರೆ ಸಾವರ್ಕರ್‌ಗೆ ಲೇಖನಗಳಿಗಾಗಿ ಪ್ರತಿವಾರ 75 ಡಾಲರಗಳನ್ನು ಪಾವತಿಸುವುದನ್ನು ಒಳಗೊಂಡಿದೆ. ಅವರಿಗೆ ಈ ಲೇಖನಗಳನ್ನು ಪ್ರತಿವಾರ ಮುದ್ರಿಸುವ ಮತ್ತು ಮೇಲ್ ಮಾಡುವ ವೆಚ್ಚವನ್ನು ಸೇರಿಸಿ ಸುಮಾರು 120 ಡಾಲರ್‌ಗಳನ್ನು ಕೊಡಲಾಗುತ್ತಿದೆ. ಸಾವರ್ಕರ್ ಅವರ ಲೇಖನಗಳನ್ನು ಕಳುಹಿಸಲಾಗುತ್ತಿರುವ ಪ್ರಮುಖ ಪತ್ರಿಕೆಗಳ ಪಟ್ಟಿಯನ್ನು, ಅವರು ಸಿದ್ಧಪಡಿಸಿದ ಲೇಖನಗಳನ್ನು ಹಾಗೂ ಅವರ ಲೇಖನಗಳನ್ನು ಬಳಸಿದ ಲೇಖನಗಳ ತುಣುಕುಗಳನ್ನು ತಾವು ಶೀಘ್ರದಲ್ಲಿಯೇ ಒದಗಿಸುವುದಾಗಿ ಅವರು ಭರವಸೆ ನೀಡಿದರು”.

1961ರಲ್ಲಿ ಅಮೇರಿಕೆಯ 1 ಡಾಲರ್ ಭಾರತದ 4.76 ರೂಪಾಯಿಗಳಿಗೆ ಸಮನಾಗಿತ್ತು. ಸಾವರ್ಕರ್ ಅವರಿಗೆ ಪ್ರತಿವಾರ 75 ಡಾಲರ್ ಕೊಡಲಾಗುತ್ತಿತ್ತು ಅಂದರೆ ಪ್ರತಿವಾರ ಸುಮಾರು ರೂ. 357 ಕೊಡಲಾಗುತ್ತಿತ್ತು. ಈ ಮೊತ್ತದ ಇಂದಿನ ಮೌಲ್ಯ ಸುಮಾರು ರೂ. 30,000 ಆಗುತ್ತದೆ. ಅಂದರೆ ಸಾವರ್ಕರ್ ಅವರಿಗೆ ಪ್ರತಿ ತಿಂಗಳು ಇಂದಿನ ಮೌಲ್ಯದಲ್ಲಿ ರೂ. 1,20,000ಗಳನ್ನು ಅಮೆರಿಕದ ಗುಪ್ತಚರ ವಿಭಾಗದಿಂದ ನೀಡಲಾಗುತ್ತಿತ್ತು ಎಂದಾಗುತ್ತದೆ. ಇನ್ನು ಮುದ್ರಣದ ಖರ್ಚು ಮುಂತಾದವನ್ನು ಸೇರಿಸಿದರೆ ಅಮೆರಿಕದ ಗುಪ್ತಚರ ವಿಭಾಗ ಸಾವರ್ಕರ್ ಅವರಿಗೆ ಪ್ರತಿ ತಿಂಗಳು ಇಂದಿನ ಮೌಲ್ಯದಲ್ಲಿ ಸುಮಾರು ರೂ. 1,77,000ಗಳನ್ನು ನೀಡುತ್ತಿತ್ತು ಎಂದು ಅಂದಾಜಿಸಬಹುದು.

ಹಾಗಾದರೆ ಸಾವರ್ಕರ್ ಅವರು ಅಮೆರಿಕದ ಗುಪ್ತಚರ ವಿಭಾಗಕ್ಕಾಗಿ ಕೆಲಸ ಮಾಡಿ ಅದರಿಂದ ಹಣ ಪಡೆಯುತ್ತಿದ್ದರೆ? ಇದು ಎಷ್ಟು ವರ್ಷಗಳಿಂದ ನಡೆಯುತ್ತಿತ್ತು? ಈ ಬಗ್ಗೆ ವಿವರವಾದ ತನಿಖೆ ಅಗತ್ಯವಿದೆ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...