Homeಮುಖಪುಟʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ.

- Advertisement -
- Advertisement -

ಈಗ ವಿವಾದಕ್ಕೆ ಗುರಿಯಾಗಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲ ಕಾಯ್ದೆಗೆ ಒಂದು ದೊಡ್ಡ ಇತಿಹಾಸವೇ ಇದೆ. ಗೇಣಿದಾರರ ಪರವಾಗಿ ಆರಂಭವಾದ ಹೋರಾಟವು ನಂತರದ ದಿನಗಳಲ್ಲಿ ರೈತರ ಭೂಮಿಯು ಉಳ್ಳವರ ಪಾಲಾಗದಂತೆ ತಡೆಯುವ ಕಾಯ್ದೆಯವರೆಗೆ ವಿವಿಧ ಘಟ್ಟಗಳಲ್ಲಿ ಹಾದು ಬಂದಿತು. ಗೇಣಿದಾರರ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾಗರದ ಕಾಗೋಡು ತಿಮ್ಮಪ್ಪನವರು ನಂತರ ಕಾಯ್ದೆಯು ಜಾರಿಗೆ ಬರುವ ಹೊತ್ತಿಗೆ ಶಾಸಕರಾಗಿದ್ದರು. ಹಾಗಾಗಿ ಕಾಯ್ದೆ ತಿದ್ದುಪಡಿಯಾಗುತ್ತಿರುವ ಹೊತ್ತಿನಲ್ಲಿ ಅವರನ್ನೇ ಮಾತಾಡಿಸುವುದು ಸೂಕ್ತವಾಗಿದ್ದುದರಿಂದ, ಸಾಗರದ ಜನಪರ ಹೋರಾಟಗಾರ, ಪತ್ರಕರ್ತ ಕಬಸೆ ಅಶೋಕ ಮೂರ್ತಿಯವರು ನ್ಯಾಯಪಥಕ್ಕಾಗಿ ಕಾಗೋಡು ತಿಮ್ಮಪ್ಪನವರನ್ನು ಸಂದರ್ಶಿಸಿದ್ದಾರೆ.

ಪ್ರಶ್ನೆ: ಭೂ ಸುಧಾರಣಾ ಕಾಯ್ದೆಗೆ ಈಗಿನ ಸರ್ಕಾರ ತರಲಿರುವ ತಿದ್ದುಪಡಿ ಸಣ್ಣ ತಿದ್ದುಪಡಿಯೇ ಅಥವಾ ಭೂ ಸುಧಾರಣಾ ಕಾನೂನನ್ನೇ ಕಿತ್ತು ಹಾಕುವ ಪ್ರಮಾಣದ್ದಾ?

ಉ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಮಸೂದೆ ಮಂಡಿಸಿಲ್ಲ. ಆದರೂ ಇವರ ಯೋಚನೆ ಶ್ರೀಮಂತರು, ವ್ಯಾಪಾರಸ್ಥರು ಹಣವಂತರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಕೂಡಿದೆ.

ಪ್ರಶ್ನೆ: ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು, ವಿರೋಧಕ್ಕೆ ವಿರೋಧ ಮಾಡಬಾರದು ಅಂತ ಈಗಿನ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರಲ್ಲ ಇದರ ಕುರಿತು ನಿಮ್ಮ ಅನಿಸಿಕೆ?

ಉ. ದೇವರಾಜ ಅರಸು ಕಾಲದಲ್ಲಿ ತಂದ ತಿದ್ದುಪಡಿಯಿಂದ ಗೇಣಿ ರೈತರಿಗೆ ಶೇ.100 ಅನುಕೂಲ ಆಗಿತ್ತು. ಹಿಡುವಳಿ ದೃಷ್ಟಿಯಿಂದ ಸಮಾಜವಾದಿಗಳ ಆಲೋಚನೆ ಈಡೇರಿಲ್ಲ. ಒಬ್ಬರಿಗೆ 50 ಎಕರೆ ಮಿತಿ ಎಂದು ಯೋಚಿಸಿ ಒಂದು ಕುಟುಂಬದಲ್ಲಿ 3 ಜನ ಇದ್ದರೆ 150 ಎಕರೆ ಜಮೀನು ಬರುತ್ತಿತ್ತು. ಅದು ಸರಿಯಲ್ಲವೆಂದು ಆ ಸಮಿತಿಯಲ್ಲಿದ್ದ ನಾನೂ ಸೇರಿದಂತೆ ಎಲ್ಲರೂ ವಿರೋಧಿಸಿದ್ದೆವು. ಹಿಡುವಳಿ ದೃಷ್ಟಿಯಿಂದ ಅರಸುರವರು ನಮ್ಮ ಸಲಹೆ ಒಪ್ಪಲಿಲ್ಲ. ಆದರೆ ಗೇಣಿ ರೈತರ ದೃಷ್ಟಿಯಿಂದ ನಮ್ಮ ಸಲಹೆ ಒಪ್ಪಿದ್ದರು. ಈಗಿನ ಸರ್ಕಾರದ ಉದ್ದೇಶ ಗೊತ್ತಾಗಿಲ್ಲ. ಮೇಲ್ನೋಟಕ್ಕೆ ಕಂಡುಬರುವುದೇನೆಂದರೇ, ಬಂಡವಾಳಶಾಹಿಗಳಿಗೆ ಹಣವಂತರಿಗೆ, ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ಉದ್ದೇಶ ಕಂಡುಬರುತ್ತಿದೆ. ಸರ್ಕಾರ ತನ್ನ ನಿರ್ದಿಷ್ಟ ಉದ್ದೇಶ ಖಚಿತಪಡಿಸುವವರೆಗೆ ವಿರೋಧಿಸುವುದು ಕಷ್ಟ. ಈ ಕಾನೂನಿಗೆ ತಿದ್ದುಪಡಿತರಲು ಹೊರಟಿರುವವರು ಗೇಣಿಶಾಸನ ಜಾರಿಗೆ ಬರುವ ಸಂದರ್ಭದಲ್ಲಿ ಗೇಣಿ ಶಾಸನ ಜಾರಿಗೆ ಬರುವಾಗ ಯಾವುದೇ ಸಲಹೆ ಸಹಕಾರ ನೀಡಿರಲಿಲ್ಲ. ಆಗ ಇವರುಗಳು ಗೇಣಿದಾರರ ವಿರೋಧಿಯಾಗಿದ್ದರು.

ಪ್ರಶ್ನೆ: ಈ ಕಾಯ್ದೆ ಬಂದು ಮೂರುವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. ಹಾಗಾದರೆ ಏನೂ ಬದಲಾವಣೆ ಬೇಕಿರಲಿಲ್ಲವಾ?

ಉ. ಭೂಸುಧಾರಣೆ ಕಾನೂನು ಜಾರಿಗೆ ಬಂದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಹತ್ತಾರು ವರ್ಷಗಳಿಂದ ಗೇಣಿದಾರರಾಗಿದ್ದವರು ಭೂ ಮಾಲೀಕರಾಗಿದ್ದಾರೆ. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಶ್ನೆ: ದಕ್ಷಿಣ ಭಾರತದ ಉಳಿದ ರಾಜ್ಯಗಳು ಸೇರಿದಂತೆ ಹಲವಾರು ಕಡೆ ಇರದೇ ಇದ್ದ ನಿರ್ಬಂಧಗಳನ್ನು ಕರ್ನಾಟಕದಲ್ಲಿ ಹಾಕಲಾಗಿತ್ತು; ಅದನ್ನಷ್ಟೇ ತೆಗೆದಿದೆ ಎಂದು ಹೇಳುತ್ತಾರೆ. ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಉ. ವಾಸ್ತವವಾಗಿ ಕರ್ನಾಟಕದಲ್ಲಿ ಬಂದಷ್ಟು ಪರಿಣಾಮಕಾರಿಯಾಗಿ ಭೂ ಸುಧಾರಣಾ ಕಾನೂನು ಭಾರತದ ಯಾವ ರಾಜ್ಯದಲ್ಲಿಯೂ ಬಂದಿಲ್ಲ; ಇವರಿಗೆ ಸುಧಾರಣೆ ತರಬೇಕೆಂದು ಅನ್ನಿಸಿದ್ದರೆ, ಈಗ ಅತ್ಯಧಿಕ ಭೂಮಿ ಹೊಂದಿದವರಿಂದ ಭೂಮಿಯನ್ನು ಕಿತ್ತುಕೊಂಡು ಭೂ ರಹಿತರಿಗೆ ಹಂಚುವ ಕೆಲಸ ಮಾಡಬೇಕಿತ್ತು.

ಪ್ರಶ್ನೆ: ನಾವು ತಿದ್ದುಪಡಿ ಮಾಡದಿದ್ದರೂ ಎಸಿ.ಗಳಿಗೆ ದುಡ್ಡುಕೊಟ್ಟು ಭೂಮಿ ಕೊಂಡುಕೊಳ್ಳುವುದು ನಡೆಯುತ್ತಲೇ ಇತ್ತು. ಅದನ್ನು ಈಗ ಕಾನೂನು ಬದ್ಧಗೊಳಿಸಿದ್ದೇವೆ ಎಂಬದು ಸರ್ಕಾರದ ಇನ್ನೊಂದು ಸಮಜಾಯಿಷಿ. ಇದಕ್ಕೇನು ಹೇಳುತ್ತೀರಿ?

ಉ. ಭೂ ನ್ಯಾಯ ಮಂಡಳಿಯಲ್ಲಿ ಎ.ಸಿ.ಯವರು ಅಧ್ಯಕ್ಷರಾಗಿರುತ್ತಾರೆ. ಶಾಸಕರು ಆ ಸಮಿತಿಯಲ್ಲಿರುತ್ತಾರೆ. ಅಂತಹಾ ಅವ್ಯವಹಾರ ಕಂಡು ಬಂದರೆ ಸರಿಯಾದ ತನಿಖೆ ನಡೆಸಿ ಅಂತಹವರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡಲಿ.

ಪ್ರಶ್ನೆ: ಎ.ಪಿ.ಎಂ.ಸಿ. ಕಾಯ್ದೆಗೆ ತಂದ ತಿದ್ದುಪಡಿಯು ಗುತ್ತಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿಯಾಗಿದೆಯೆಂದು ಹೇಳಲಾಗುತ್ತದೆ. ಇವೆಲ್ಲವೂ ಭಾರತದ/ ಕರ್ನಾಟಕದ ಕೃಷಿ ಕ್ಷೇತ್ರ ಉಂಟು ಮಾಡುವ ಪರಿಣಾಮಗಳೇನು?

ಉ. ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ. ಭೂ ಹಿಡುವಳಿ ಹೊಂದಿದವರು ಹೆಚ್ಚಿನ ಹಣದಾಸೆಗಾಗಿ ಭೂಮಿ ಮಾರಿಕೊಂಡು ಭೂ ರಹಿತರಾಗುತ್ತಾರೆ, ಹಣವಂತರು, ಕೈಗಾರಿಕೋದ್ಯಮಿಗಳ ಕೈಗೆ ಕೃಷಿ ಭೂಮಿ ಹೋಗುತ್ತದೆ, ಸಮಾಜದಲ್ಲಿ ಮತ್ತೆ ಅಸಮಾನತೆ ಮೂಡುತ್ತದೆ.

ಪ್ರಶ್ನೆ: ಯಡಿಯೂರಪ್ಪನವರೂ ರೈತರ ಪರ ಕೆಲವು ಹೋರಾಟಗಳನ್ನು ನಡೆಸಿದವರು, ಇದೇ ಜಿಲ್ಲೆಯವರು. ಅವರೇಕೆ ಇಂತಹ ತೀರ್ಮಾನಗಳಿಗೆ ಮುಂದಾಗುತ್ತಿದ್ದಾರೆ?

ಉ. ಯಡಿಯೂರಪ್ಪನವರು ಯಾವ ಹೋರಾಟ ಮಾಡಿದ್ದಾರೆ?

ಪ್ರಶ್ನೆ: ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದ್ದಾರೆ. ಆದರೆ ಈ ರೀತಿ ಹೇಳಿಕೆಗಳನ್ನಷ್ಟೇ ನೀಡಿ ಸುಮ್ಮನಾಗಿ ಬಿಟ್ಟರೆ ಸಾಕೇ? ಕಾಂಗ್ರೆಸ್ ಇನ್ನೂ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಲ್ಲವೇ?

ಉ. ಡಿ.ಕೆ.ಶಿವಕುಮಾರ್‌ರವರು ಈಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಂಡು ಭೂ ಸುಧಾರಣೆ ತಿದ್ದುಪಡಿಯ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡುತ್ತದೆ.

ಪ್ರಶ್ನೆ: ಗೇಣಿದಾರರ ಪರವಾಗಿ ಹೋರಾಟ ಮಾಡಿದ ನೀವು ಈ ಸಂದರ್ಭದಲ್ಲಿ ಏನು ಮಾಡುತ್ತೀರಿ ಸುಮ್ಮನಿರುವುದು ಸರಿಯೇ?

ಭೂ ಸುಧಾರಣಾ ತಿದ್ದುಪಡಿಯ ಬಗ್ಗೆ ನನ್ನ ವಿರೋಧ ಇದ್ದೇ ಇದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಪ್ರಶ್ನೆ: ಭೂಮಿಯನ್ನು ಪಡೆದು ಉಳುಮೆ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಈ ಕಾನೂನಿನಿಂದ ಅನುಕೂಲವಾಗುತ್ತದಲ್ಲವೇ?

ಉ. ಭೂಮಿ ಹೊಂದಿ ಕೃಷಿ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಭೂಮಿ ನೀಡುವ ಅಭಿಲಾಷೆ ಸರ್ಕಾರಕ್ಕಿದ್ದರೆ ಭೂ ತಿದ್ದುಪಡಿಯನ್ನು ಮಾಡುವ ಅಗತ್ಯವಿಲ್ಲ. ಸರ್ಕಾರದ ಹತ್ತಿರ ಇರುವ ಭೂಮಿಯನ್ನು ಅಂತಹವರಿಗೆ ನೀಡಬಹುದಲ್ಲ.

ಸಂದರ್ಶಕರು: ಕಬಸೆ ಅಶೋಕಮೂರ್ತಿ ಮತ್ತು ನಾಗರಾಜ


ಇದನ್ನೂ ಓದಿ: ಹಳೆ ಕಾಂಗ್ರೆಸ್ ಸಂಸ್ಕೃತಿ ಮತ್ತು ದುಡ್ಡು ಎಂಬ ಡಿಕೆಶಿ ಮಾದರಿ ವರ್ಕ್‌ಔಟ್ ಆಗುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...