Homeಮುಖಪುಟʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ.

- Advertisement -
- Advertisement -

ಈಗ ವಿವಾದಕ್ಕೆ ಗುರಿಯಾಗಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲ ಕಾಯ್ದೆಗೆ ಒಂದು ದೊಡ್ಡ ಇತಿಹಾಸವೇ ಇದೆ. ಗೇಣಿದಾರರ ಪರವಾಗಿ ಆರಂಭವಾದ ಹೋರಾಟವು ನಂತರದ ದಿನಗಳಲ್ಲಿ ರೈತರ ಭೂಮಿಯು ಉಳ್ಳವರ ಪಾಲಾಗದಂತೆ ತಡೆಯುವ ಕಾಯ್ದೆಯವರೆಗೆ ವಿವಿಧ ಘಟ್ಟಗಳಲ್ಲಿ ಹಾದು ಬಂದಿತು. ಗೇಣಿದಾರರ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾಗರದ ಕಾಗೋಡು ತಿಮ್ಮಪ್ಪನವರು ನಂತರ ಕಾಯ್ದೆಯು ಜಾರಿಗೆ ಬರುವ ಹೊತ್ತಿಗೆ ಶಾಸಕರಾಗಿದ್ದರು. ಹಾಗಾಗಿ ಕಾಯ್ದೆ ತಿದ್ದುಪಡಿಯಾಗುತ್ತಿರುವ ಹೊತ್ತಿನಲ್ಲಿ ಅವರನ್ನೇ ಮಾತಾಡಿಸುವುದು ಸೂಕ್ತವಾಗಿದ್ದುದರಿಂದ, ಸಾಗರದ ಜನಪರ ಹೋರಾಟಗಾರ, ಪತ್ರಕರ್ತ ಕಬಸೆ ಅಶೋಕ ಮೂರ್ತಿಯವರು ನ್ಯಾಯಪಥಕ್ಕಾಗಿ ಕಾಗೋಡು ತಿಮ್ಮಪ್ಪನವರನ್ನು ಸಂದರ್ಶಿಸಿದ್ದಾರೆ.

ಪ್ರಶ್ನೆ: ಭೂ ಸುಧಾರಣಾ ಕಾಯ್ದೆಗೆ ಈಗಿನ ಸರ್ಕಾರ ತರಲಿರುವ ತಿದ್ದುಪಡಿ ಸಣ್ಣ ತಿದ್ದುಪಡಿಯೇ ಅಥವಾ ಭೂ ಸುಧಾರಣಾ ಕಾನೂನನ್ನೇ ಕಿತ್ತು ಹಾಕುವ ಪ್ರಮಾಣದ್ದಾ?

ಉ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಮಸೂದೆ ಮಂಡಿಸಿಲ್ಲ. ಆದರೂ ಇವರ ಯೋಚನೆ ಶ್ರೀಮಂತರು, ವ್ಯಾಪಾರಸ್ಥರು ಹಣವಂತರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಕೂಡಿದೆ.

ಪ್ರಶ್ನೆ: ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು, ವಿರೋಧಕ್ಕೆ ವಿರೋಧ ಮಾಡಬಾರದು ಅಂತ ಈಗಿನ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರಲ್ಲ ಇದರ ಕುರಿತು ನಿಮ್ಮ ಅನಿಸಿಕೆ?

ಉ. ದೇವರಾಜ ಅರಸು ಕಾಲದಲ್ಲಿ ತಂದ ತಿದ್ದುಪಡಿಯಿಂದ ಗೇಣಿ ರೈತರಿಗೆ ಶೇ.100 ಅನುಕೂಲ ಆಗಿತ್ತು. ಹಿಡುವಳಿ ದೃಷ್ಟಿಯಿಂದ ಸಮಾಜವಾದಿಗಳ ಆಲೋಚನೆ ಈಡೇರಿಲ್ಲ. ಒಬ್ಬರಿಗೆ 50 ಎಕರೆ ಮಿತಿ ಎಂದು ಯೋಚಿಸಿ ಒಂದು ಕುಟುಂಬದಲ್ಲಿ 3 ಜನ ಇದ್ದರೆ 150 ಎಕರೆ ಜಮೀನು ಬರುತ್ತಿತ್ತು. ಅದು ಸರಿಯಲ್ಲವೆಂದು ಆ ಸಮಿತಿಯಲ್ಲಿದ್ದ ನಾನೂ ಸೇರಿದಂತೆ ಎಲ್ಲರೂ ವಿರೋಧಿಸಿದ್ದೆವು. ಹಿಡುವಳಿ ದೃಷ್ಟಿಯಿಂದ ಅರಸುರವರು ನಮ್ಮ ಸಲಹೆ ಒಪ್ಪಲಿಲ್ಲ. ಆದರೆ ಗೇಣಿ ರೈತರ ದೃಷ್ಟಿಯಿಂದ ನಮ್ಮ ಸಲಹೆ ಒಪ್ಪಿದ್ದರು. ಈಗಿನ ಸರ್ಕಾರದ ಉದ್ದೇಶ ಗೊತ್ತಾಗಿಲ್ಲ. ಮೇಲ್ನೋಟಕ್ಕೆ ಕಂಡುಬರುವುದೇನೆಂದರೇ, ಬಂಡವಾಳಶಾಹಿಗಳಿಗೆ ಹಣವಂತರಿಗೆ, ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ಉದ್ದೇಶ ಕಂಡುಬರುತ್ತಿದೆ. ಸರ್ಕಾರ ತನ್ನ ನಿರ್ದಿಷ್ಟ ಉದ್ದೇಶ ಖಚಿತಪಡಿಸುವವರೆಗೆ ವಿರೋಧಿಸುವುದು ಕಷ್ಟ. ಈ ಕಾನೂನಿಗೆ ತಿದ್ದುಪಡಿತರಲು ಹೊರಟಿರುವವರು ಗೇಣಿಶಾಸನ ಜಾರಿಗೆ ಬರುವ ಸಂದರ್ಭದಲ್ಲಿ ಗೇಣಿ ಶಾಸನ ಜಾರಿಗೆ ಬರುವಾಗ ಯಾವುದೇ ಸಲಹೆ ಸಹಕಾರ ನೀಡಿರಲಿಲ್ಲ. ಆಗ ಇವರುಗಳು ಗೇಣಿದಾರರ ವಿರೋಧಿಯಾಗಿದ್ದರು.

ಪ್ರಶ್ನೆ: ಈ ಕಾಯ್ದೆ ಬಂದು ಮೂರುವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. ಹಾಗಾದರೆ ಏನೂ ಬದಲಾವಣೆ ಬೇಕಿರಲಿಲ್ಲವಾ?

ಉ. ಭೂಸುಧಾರಣೆ ಕಾನೂನು ಜಾರಿಗೆ ಬಂದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಹತ್ತಾರು ವರ್ಷಗಳಿಂದ ಗೇಣಿದಾರರಾಗಿದ್ದವರು ಭೂ ಮಾಲೀಕರಾಗಿದ್ದಾರೆ. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಶ್ನೆ: ದಕ್ಷಿಣ ಭಾರತದ ಉಳಿದ ರಾಜ್ಯಗಳು ಸೇರಿದಂತೆ ಹಲವಾರು ಕಡೆ ಇರದೇ ಇದ್ದ ನಿರ್ಬಂಧಗಳನ್ನು ಕರ್ನಾಟಕದಲ್ಲಿ ಹಾಕಲಾಗಿತ್ತು; ಅದನ್ನಷ್ಟೇ ತೆಗೆದಿದೆ ಎಂದು ಹೇಳುತ್ತಾರೆ. ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಉ. ವಾಸ್ತವವಾಗಿ ಕರ್ನಾಟಕದಲ್ಲಿ ಬಂದಷ್ಟು ಪರಿಣಾಮಕಾರಿಯಾಗಿ ಭೂ ಸುಧಾರಣಾ ಕಾನೂನು ಭಾರತದ ಯಾವ ರಾಜ್ಯದಲ್ಲಿಯೂ ಬಂದಿಲ್ಲ; ಇವರಿಗೆ ಸುಧಾರಣೆ ತರಬೇಕೆಂದು ಅನ್ನಿಸಿದ್ದರೆ, ಈಗ ಅತ್ಯಧಿಕ ಭೂಮಿ ಹೊಂದಿದವರಿಂದ ಭೂಮಿಯನ್ನು ಕಿತ್ತುಕೊಂಡು ಭೂ ರಹಿತರಿಗೆ ಹಂಚುವ ಕೆಲಸ ಮಾಡಬೇಕಿತ್ತು.

ಪ್ರಶ್ನೆ: ನಾವು ತಿದ್ದುಪಡಿ ಮಾಡದಿದ್ದರೂ ಎಸಿ.ಗಳಿಗೆ ದುಡ್ಡುಕೊಟ್ಟು ಭೂಮಿ ಕೊಂಡುಕೊಳ್ಳುವುದು ನಡೆಯುತ್ತಲೇ ಇತ್ತು. ಅದನ್ನು ಈಗ ಕಾನೂನು ಬದ್ಧಗೊಳಿಸಿದ್ದೇವೆ ಎಂಬದು ಸರ್ಕಾರದ ಇನ್ನೊಂದು ಸಮಜಾಯಿಷಿ. ಇದಕ್ಕೇನು ಹೇಳುತ್ತೀರಿ?

ಉ. ಭೂ ನ್ಯಾಯ ಮಂಡಳಿಯಲ್ಲಿ ಎ.ಸಿ.ಯವರು ಅಧ್ಯಕ್ಷರಾಗಿರುತ್ತಾರೆ. ಶಾಸಕರು ಆ ಸಮಿತಿಯಲ್ಲಿರುತ್ತಾರೆ. ಅಂತಹಾ ಅವ್ಯವಹಾರ ಕಂಡು ಬಂದರೆ ಸರಿಯಾದ ತನಿಖೆ ನಡೆಸಿ ಅಂತಹವರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡಲಿ.

ಪ್ರಶ್ನೆ: ಎ.ಪಿ.ಎಂ.ಸಿ. ಕಾಯ್ದೆಗೆ ತಂದ ತಿದ್ದುಪಡಿಯು ಗುತ್ತಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿಯಾಗಿದೆಯೆಂದು ಹೇಳಲಾಗುತ್ತದೆ. ಇವೆಲ್ಲವೂ ಭಾರತದ/ ಕರ್ನಾಟಕದ ಕೃಷಿ ಕ್ಷೇತ್ರ ಉಂಟು ಮಾಡುವ ಪರಿಣಾಮಗಳೇನು?

ಉ. ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ. ಭೂ ಹಿಡುವಳಿ ಹೊಂದಿದವರು ಹೆಚ್ಚಿನ ಹಣದಾಸೆಗಾಗಿ ಭೂಮಿ ಮಾರಿಕೊಂಡು ಭೂ ರಹಿತರಾಗುತ್ತಾರೆ, ಹಣವಂತರು, ಕೈಗಾರಿಕೋದ್ಯಮಿಗಳ ಕೈಗೆ ಕೃಷಿ ಭೂಮಿ ಹೋಗುತ್ತದೆ, ಸಮಾಜದಲ್ಲಿ ಮತ್ತೆ ಅಸಮಾನತೆ ಮೂಡುತ್ತದೆ.

ಪ್ರಶ್ನೆ: ಯಡಿಯೂರಪ್ಪನವರೂ ರೈತರ ಪರ ಕೆಲವು ಹೋರಾಟಗಳನ್ನು ನಡೆಸಿದವರು, ಇದೇ ಜಿಲ್ಲೆಯವರು. ಅವರೇಕೆ ಇಂತಹ ತೀರ್ಮಾನಗಳಿಗೆ ಮುಂದಾಗುತ್ತಿದ್ದಾರೆ?

ಉ. ಯಡಿಯೂರಪ್ಪನವರು ಯಾವ ಹೋರಾಟ ಮಾಡಿದ್ದಾರೆ?

ಪ್ರಶ್ನೆ: ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದ್ದಾರೆ. ಆದರೆ ಈ ರೀತಿ ಹೇಳಿಕೆಗಳನ್ನಷ್ಟೇ ನೀಡಿ ಸುಮ್ಮನಾಗಿ ಬಿಟ್ಟರೆ ಸಾಕೇ? ಕಾಂಗ್ರೆಸ್ ಇನ್ನೂ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಲ್ಲವೇ?

ಉ. ಡಿ.ಕೆ.ಶಿವಕುಮಾರ್‌ರವರು ಈಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಂಡು ಭೂ ಸುಧಾರಣೆ ತಿದ್ದುಪಡಿಯ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡುತ್ತದೆ.

ಪ್ರಶ್ನೆ: ಗೇಣಿದಾರರ ಪರವಾಗಿ ಹೋರಾಟ ಮಾಡಿದ ನೀವು ಈ ಸಂದರ್ಭದಲ್ಲಿ ಏನು ಮಾಡುತ್ತೀರಿ ಸುಮ್ಮನಿರುವುದು ಸರಿಯೇ?

ಭೂ ಸುಧಾರಣಾ ತಿದ್ದುಪಡಿಯ ಬಗ್ಗೆ ನನ್ನ ವಿರೋಧ ಇದ್ದೇ ಇದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಪ್ರಶ್ನೆ: ಭೂಮಿಯನ್ನು ಪಡೆದು ಉಳುಮೆ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಈ ಕಾನೂನಿನಿಂದ ಅನುಕೂಲವಾಗುತ್ತದಲ್ಲವೇ?

ಉ. ಭೂಮಿ ಹೊಂದಿ ಕೃಷಿ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಭೂಮಿ ನೀಡುವ ಅಭಿಲಾಷೆ ಸರ್ಕಾರಕ್ಕಿದ್ದರೆ ಭೂ ತಿದ್ದುಪಡಿಯನ್ನು ಮಾಡುವ ಅಗತ್ಯವಿಲ್ಲ. ಸರ್ಕಾರದ ಹತ್ತಿರ ಇರುವ ಭೂಮಿಯನ್ನು ಅಂತಹವರಿಗೆ ನೀಡಬಹುದಲ್ಲ.

ಸಂದರ್ಶಕರು: ಕಬಸೆ ಅಶೋಕಮೂರ್ತಿ ಮತ್ತು ನಾಗರಾಜ


ಇದನ್ನೂ ಓದಿ: ಹಳೆ ಕಾಂಗ್ರೆಸ್ ಸಂಸ್ಕೃತಿ ಮತ್ತು ದುಡ್ಡು ಎಂಬ ಡಿಕೆಶಿ ಮಾದರಿ ವರ್ಕ್‌ಔಟ್ ಆಗುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...