Homeಮುಖಪುಟʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ʼಯಡಿಯೂರಪ್ಪ ಯಾವ ಹೋರಾಟ ಮಾಡಿದ್ದಾರೆ?ʼ: ಸಂದರ್ಶನದಲ್ಲಿ ಕಾಗೋಡು ತಿಮ್ಮಪ್ಪ

ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ.

- Advertisement -
- Advertisement -

ಈಗ ವಿವಾದಕ್ಕೆ ಗುರಿಯಾಗಿರುವ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲ ಕಾಯ್ದೆಗೆ ಒಂದು ದೊಡ್ಡ ಇತಿಹಾಸವೇ ಇದೆ. ಗೇಣಿದಾರರ ಪರವಾಗಿ ಆರಂಭವಾದ ಹೋರಾಟವು ನಂತರದ ದಿನಗಳಲ್ಲಿ ರೈತರ ಭೂಮಿಯು ಉಳ್ಳವರ ಪಾಲಾಗದಂತೆ ತಡೆಯುವ ಕಾಯ್ದೆಯವರೆಗೆ ವಿವಿಧ ಘಟ್ಟಗಳಲ್ಲಿ ಹಾದು ಬಂದಿತು. ಗೇಣಿದಾರರ ಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾಗರದ ಕಾಗೋಡು ತಿಮ್ಮಪ್ಪನವರು ನಂತರ ಕಾಯ್ದೆಯು ಜಾರಿಗೆ ಬರುವ ಹೊತ್ತಿಗೆ ಶಾಸಕರಾಗಿದ್ದರು. ಹಾಗಾಗಿ ಕಾಯ್ದೆ ತಿದ್ದುಪಡಿಯಾಗುತ್ತಿರುವ ಹೊತ್ತಿನಲ್ಲಿ ಅವರನ್ನೇ ಮಾತಾಡಿಸುವುದು ಸೂಕ್ತವಾಗಿದ್ದುದರಿಂದ, ಸಾಗರದ ಜನಪರ ಹೋರಾಟಗಾರ, ಪತ್ರಕರ್ತ ಕಬಸೆ ಅಶೋಕ ಮೂರ್ತಿಯವರು ನ್ಯಾಯಪಥಕ್ಕಾಗಿ ಕಾಗೋಡು ತಿಮ್ಮಪ್ಪನವರನ್ನು ಸಂದರ್ಶಿಸಿದ್ದಾರೆ.

ಪ್ರಶ್ನೆ: ಭೂ ಸುಧಾರಣಾ ಕಾಯ್ದೆಗೆ ಈಗಿನ ಸರ್ಕಾರ ತರಲಿರುವ ತಿದ್ದುಪಡಿ ಸಣ್ಣ ತಿದ್ದುಪಡಿಯೇ ಅಥವಾ ಭೂ ಸುಧಾರಣಾ ಕಾನೂನನ್ನೇ ಕಿತ್ತು ಹಾಕುವ ಪ್ರಮಾಣದ್ದಾ?

ಉ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಯಾವುದೇ ಮಸೂದೆ ಮಂಡಿಸಿಲ್ಲ. ಆದರೂ ಇವರ ಯೋಚನೆ ಶ್ರೀಮಂತರು, ವ್ಯಾಪಾರಸ್ಥರು ಹಣವಂತರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಕೂಡಿದೆ.

ಪ್ರಶ್ನೆ: ನಾವು ಬದಲಾವಣೆಗೆ ಹೊಂದಿಕೊಳ್ಳಬೇಕು, ವಿರೋಧಕ್ಕೆ ವಿರೋಧ ಮಾಡಬಾರದು ಅಂತ ಈಗಿನ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರಲ್ಲ ಇದರ ಕುರಿತು ನಿಮ್ಮ ಅನಿಸಿಕೆ?

ಉ. ದೇವರಾಜ ಅರಸು ಕಾಲದಲ್ಲಿ ತಂದ ತಿದ್ದುಪಡಿಯಿಂದ ಗೇಣಿ ರೈತರಿಗೆ ಶೇ.100 ಅನುಕೂಲ ಆಗಿತ್ತು. ಹಿಡುವಳಿ ದೃಷ್ಟಿಯಿಂದ ಸಮಾಜವಾದಿಗಳ ಆಲೋಚನೆ ಈಡೇರಿಲ್ಲ. ಒಬ್ಬರಿಗೆ 50 ಎಕರೆ ಮಿತಿ ಎಂದು ಯೋಚಿಸಿ ಒಂದು ಕುಟುಂಬದಲ್ಲಿ 3 ಜನ ಇದ್ದರೆ 150 ಎಕರೆ ಜಮೀನು ಬರುತ್ತಿತ್ತು. ಅದು ಸರಿಯಲ್ಲವೆಂದು ಆ ಸಮಿತಿಯಲ್ಲಿದ್ದ ನಾನೂ ಸೇರಿದಂತೆ ಎಲ್ಲರೂ ವಿರೋಧಿಸಿದ್ದೆವು. ಹಿಡುವಳಿ ದೃಷ್ಟಿಯಿಂದ ಅರಸುರವರು ನಮ್ಮ ಸಲಹೆ ಒಪ್ಪಲಿಲ್ಲ. ಆದರೆ ಗೇಣಿ ರೈತರ ದೃಷ್ಟಿಯಿಂದ ನಮ್ಮ ಸಲಹೆ ಒಪ್ಪಿದ್ದರು. ಈಗಿನ ಸರ್ಕಾರದ ಉದ್ದೇಶ ಗೊತ್ತಾಗಿಲ್ಲ. ಮೇಲ್ನೋಟಕ್ಕೆ ಕಂಡುಬರುವುದೇನೆಂದರೇ, ಬಂಡವಾಳಶಾಹಿಗಳಿಗೆ ಹಣವಂತರಿಗೆ, ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ಉದ್ದೇಶ ಕಂಡುಬರುತ್ತಿದೆ. ಸರ್ಕಾರ ತನ್ನ ನಿರ್ದಿಷ್ಟ ಉದ್ದೇಶ ಖಚಿತಪಡಿಸುವವರೆಗೆ ವಿರೋಧಿಸುವುದು ಕಷ್ಟ. ಈ ಕಾನೂನಿಗೆ ತಿದ್ದುಪಡಿತರಲು ಹೊರಟಿರುವವರು ಗೇಣಿಶಾಸನ ಜಾರಿಗೆ ಬರುವ ಸಂದರ್ಭದಲ್ಲಿ ಗೇಣಿ ಶಾಸನ ಜಾರಿಗೆ ಬರುವಾಗ ಯಾವುದೇ ಸಲಹೆ ಸಹಕಾರ ನೀಡಿರಲಿಲ್ಲ. ಆಗ ಇವರುಗಳು ಗೇಣಿದಾರರ ವಿರೋಧಿಯಾಗಿದ್ದರು.

ಪ್ರಶ್ನೆ: ಈ ಕಾಯ್ದೆ ಬಂದು ಮೂರುವರೆ ದಶಕಕ್ಕೂ ಹೆಚ್ಚು ಕಾಲವಾಗಿದೆ. ಹಾಗಾದರೆ ಏನೂ ಬದಲಾವಣೆ ಬೇಕಿರಲಿಲ್ಲವಾ?

ಉ. ಭೂಸುಧಾರಣೆ ಕಾನೂನು ಜಾರಿಗೆ ಬಂದಿದ್ದರಿಂದ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಹತ್ತಾರು ವರ್ಷಗಳಿಂದ ಗೇಣಿದಾರರಾಗಿದ್ದವರು ಭೂ ಮಾಲೀಕರಾಗಿದ್ದಾರೆ. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಶ್ನೆ: ದಕ್ಷಿಣ ಭಾರತದ ಉಳಿದ ರಾಜ್ಯಗಳು ಸೇರಿದಂತೆ ಹಲವಾರು ಕಡೆ ಇರದೇ ಇದ್ದ ನಿರ್ಬಂಧಗಳನ್ನು ಕರ್ನಾಟಕದಲ್ಲಿ ಹಾಕಲಾಗಿತ್ತು; ಅದನ್ನಷ್ಟೇ ತೆಗೆದಿದೆ ಎಂದು ಹೇಳುತ್ತಾರೆ. ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಉ. ವಾಸ್ತವವಾಗಿ ಕರ್ನಾಟಕದಲ್ಲಿ ಬಂದಷ್ಟು ಪರಿಣಾಮಕಾರಿಯಾಗಿ ಭೂ ಸುಧಾರಣಾ ಕಾನೂನು ಭಾರತದ ಯಾವ ರಾಜ್ಯದಲ್ಲಿಯೂ ಬಂದಿಲ್ಲ; ಇವರಿಗೆ ಸುಧಾರಣೆ ತರಬೇಕೆಂದು ಅನ್ನಿಸಿದ್ದರೆ, ಈಗ ಅತ್ಯಧಿಕ ಭೂಮಿ ಹೊಂದಿದವರಿಂದ ಭೂಮಿಯನ್ನು ಕಿತ್ತುಕೊಂಡು ಭೂ ರಹಿತರಿಗೆ ಹಂಚುವ ಕೆಲಸ ಮಾಡಬೇಕಿತ್ತು.

ಪ್ರಶ್ನೆ: ನಾವು ತಿದ್ದುಪಡಿ ಮಾಡದಿದ್ದರೂ ಎಸಿ.ಗಳಿಗೆ ದುಡ್ಡುಕೊಟ್ಟು ಭೂಮಿ ಕೊಂಡುಕೊಳ್ಳುವುದು ನಡೆಯುತ್ತಲೇ ಇತ್ತು. ಅದನ್ನು ಈಗ ಕಾನೂನು ಬದ್ಧಗೊಳಿಸಿದ್ದೇವೆ ಎಂಬದು ಸರ್ಕಾರದ ಇನ್ನೊಂದು ಸಮಜಾಯಿಷಿ. ಇದಕ್ಕೇನು ಹೇಳುತ್ತೀರಿ?

ಉ. ಭೂ ನ್ಯಾಯ ಮಂಡಳಿಯಲ್ಲಿ ಎ.ಸಿ.ಯವರು ಅಧ್ಯಕ್ಷರಾಗಿರುತ್ತಾರೆ. ಶಾಸಕರು ಆ ಸಮಿತಿಯಲ್ಲಿರುತ್ತಾರೆ. ಅಂತಹಾ ಅವ್ಯವಹಾರ ಕಂಡು ಬಂದರೆ ಸರಿಯಾದ ತನಿಖೆ ನಡೆಸಿ ಅಂತಹವರಿಂದ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡಲಿ.

ಪ್ರಶ್ನೆ: ಎ.ಪಿ.ಎಂ.ಸಿ. ಕಾಯ್ದೆಗೆ ತಂದ ತಿದ್ದುಪಡಿಯು ಗುತ್ತಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿಯಾಗಿದೆಯೆಂದು ಹೇಳಲಾಗುತ್ತದೆ. ಇವೆಲ್ಲವೂ ಭಾರತದ/ ಕರ್ನಾಟಕದ ಕೃಷಿ ಕ್ಷೇತ್ರ ಉಂಟು ಮಾಡುವ ಪರಿಣಾಮಗಳೇನು?

ಉ. ರೈತರ ಮನೆ ಬಾಗಿಲಿಗೆ ಬಂದು ದವಸಧಾನ್ಯ ಖರೀದಿ ಮಾಡುವುದರಿಂದ ಯಾವ ರೀತಿ ರೈತರಿಗೆ ಲಾಭವಾಗುತ್ತದೆ? ರೈತರಿಗೆ ಲಾಭ ಮಾಡಿಕೊಡುವ ದೃಷ್ಟಿ ಇದ್ದರೆ ಎ.ಪಿ.ಎಂ.ಸಿ.ಗಳ ಶಾಖೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡಲಿ. ಭೂ ಹಿಡುವಳಿ ಹೊಂದಿದವರು ಹೆಚ್ಚಿನ ಹಣದಾಸೆಗಾಗಿ ಭೂಮಿ ಮಾರಿಕೊಂಡು ಭೂ ರಹಿತರಾಗುತ್ತಾರೆ, ಹಣವಂತರು, ಕೈಗಾರಿಕೋದ್ಯಮಿಗಳ ಕೈಗೆ ಕೃಷಿ ಭೂಮಿ ಹೋಗುತ್ತದೆ, ಸಮಾಜದಲ್ಲಿ ಮತ್ತೆ ಅಸಮಾನತೆ ಮೂಡುತ್ತದೆ.

ಪ್ರಶ್ನೆ: ಯಡಿಯೂರಪ್ಪನವರೂ ರೈತರ ಪರ ಕೆಲವು ಹೋರಾಟಗಳನ್ನು ನಡೆಸಿದವರು, ಇದೇ ಜಿಲ್ಲೆಯವರು. ಅವರೇಕೆ ಇಂತಹ ತೀರ್ಮಾನಗಳಿಗೆ ಮುಂದಾಗುತ್ತಿದ್ದಾರೆ?

ಉ. ಯಡಿಯೂರಪ್ಪನವರು ಯಾವ ಹೋರಾಟ ಮಾಡಿದ್ದಾರೆ?

ಪ್ರಶ್ನೆ: ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದ್ದಾರೆ. ಆದರೆ ಈ ರೀತಿ ಹೇಳಿಕೆಗಳನ್ನಷ್ಟೇ ನೀಡಿ ಸುಮ್ಮನಾಗಿ ಬಿಟ್ಟರೆ ಸಾಕೇ? ಕಾಂಗ್ರೆಸ್ ಇನ್ನೂ ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಲ್ಲವೇ?

ಉ. ಡಿ.ಕೆ.ಶಿವಕುಮಾರ್‌ರವರು ಈಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಂಡು ಭೂ ಸುಧಾರಣೆ ತಿದ್ದುಪಡಿಯ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡುತ್ತದೆ.

ಪ್ರಶ್ನೆ: ಗೇಣಿದಾರರ ಪರವಾಗಿ ಹೋರಾಟ ಮಾಡಿದ ನೀವು ಈ ಸಂದರ್ಭದಲ್ಲಿ ಏನು ಮಾಡುತ್ತೀರಿ ಸುಮ್ಮನಿರುವುದು ಸರಿಯೇ?

ಭೂ ಸುಧಾರಣಾ ತಿದ್ದುಪಡಿಯ ಬಗ್ಗೆ ನನ್ನ ವಿರೋಧ ಇದ್ದೇ ಇದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಪ್ರಶ್ನೆ: ಭೂಮಿಯನ್ನು ಪಡೆದು ಉಳುಮೆ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಈ ಕಾನೂನಿನಿಂದ ಅನುಕೂಲವಾಗುತ್ತದಲ್ಲವೇ?

ಉ. ಭೂಮಿ ಹೊಂದಿ ಕೃಷಿ ಮಾಡಬೇಕೆಂದು ಆಸಕ್ತಿ ಹೊಂದಿದವರಿಗೆ ಭೂಮಿ ನೀಡುವ ಅಭಿಲಾಷೆ ಸರ್ಕಾರಕ್ಕಿದ್ದರೆ ಭೂ ತಿದ್ದುಪಡಿಯನ್ನು ಮಾಡುವ ಅಗತ್ಯವಿಲ್ಲ. ಸರ್ಕಾರದ ಹತ್ತಿರ ಇರುವ ಭೂಮಿಯನ್ನು ಅಂತಹವರಿಗೆ ನೀಡಬಹುದಲ್ಲ.

ಸಂದರ್ಶಕರು: ಕಬಸೆ ಅಶೋಕಮೂರ್ತಿ ಮತ್ತು ನಾಗರಾಜ


ಇದನ್ನೂ ಓದಿ: ಹಳೆ ಕಾಂಗ್ರೆಸ್ ಸಂಸ್ಕೃತಿ ಮತ್ತು ದುಡ್ಡು ಎಂಬ ಡಿಕೆಶಿ ಮಾದರಿ ವರ್ಕ್‌ಔಟ್ ಆಗುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...