Homeಚಳವಳಿಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಭಾರತದ ಮುಸ್ಲಿಂ ಸಮುದಾಯವು ತನ್ನ ಸಾಂವಿಧಾನಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಬಲ್ಲಂತಹ ನಾಯಕತ್ವಕ್ಕಾಗಿ ಬೇಡಿಕೆ ಮುಂದಿಡುವ ಕಾಲ ಸನ್ನಿಹಿತವಾಗಿದೆ.

- Advertisement -
- Advertisement -

ಕೃಪೆ: ದಿ ಪ್ರಿಂಟ್‌ -ಅಸೀಮ್ ಆಲಿ

ಅನುವಾದ: ನಿಖಿಲ್ ಕೋಲ್ಪೆ

ಅಯೋಧ್ಯೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರತೀಯ ಮುಸ್ಲಿಮರು ಪ್ರತಿಭಟಿಸಿಲ್ಲ. ಅದರ ಅರ್ಥ ಹಲವಾರು ವಿಶ್ಲೇಷಕರು ಹೇಳುವಂತೆ ಪ್ರಬುದ್ಧತೆಯಾಗಲೀ, ಸ್ವೀಕಾರವಾಗಲೀ ಅಲ್ಲ. ಮುಸ್ಲಿಮರ ಮೌನಕ್ಕೆ ಭಯ, ಅಸಹಾಯಕತೆ ಮತ್ತು ಹತಾಶೆಗಳೇ ಹೆಚ್ಚು ಸೂಕ್ತವಾದ ವಿವರಣೆಗಳು.

ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉತ್ಥಾನವು ಚುನಾವಣೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯವನ್ನು ಅಪ್ರಸ್ತುತವಾಗಿಸಿದೆ ಎಂಬುದಿಂದು ಸಾಮಾನ್ಯವಾಗಿ ಒಪ್ಪಿತ ವಿಷಯ. ಆದರೆ, ಭ್ರಮನಿರಸನದ ಭಾವನೆಯು ಅದಕ್ಕಿಂತಲೂ ಆಳವಾಗಿದೆ. ನಮಗೆ ಪ್ರತಿಭಟಿಸಲು ಯಾವುದೇ ಶಕ್ತಿಯಾಗಲೀ, ಯಾವುದೇ ಸಂಸ್ಥೆಯಾಗಲೀ, ಯಾವುದೇ ಅವಕಾಶವಾಗಲೀ ಉಳಿದಿಲ್ಲ ಎಂದು ನಾನು ನನ್ನ ಸಹಧರ್ಮೀಯರಿಗೆ ವಿನಮ್ರವಾಗಿ ಹೇಳುತ್ತೇನೆ” ಎಂದು ಸಾಮಾಜಿಕ ಕಾರ್ಯಕರ್ತರಾದ ಸಯ್ಯೆದಾ ಹಮೀದ್ ತೀರ್ಪಿನ ಮರುದಿನ ಬರೆದರು.

ಆದರೆ, ಈ ಅಸಹಾಯಕ ಸ್ಥಿತಿಯಲ್ಲಿ ಒಂದು ಮುಖ್ಯವಾದ ಪಾಠವಿದೆ. ಮುಸ್ಲಿಂ ಉಲೆಮಾಗಳು (ಉಲೆಮಾ ಎಂದರೆ, ಮತಪಂಡಿತರು ಮತ್ತು ಧಾರ್ಮಿಕ ನಾಯಕರು ಅಥವಾ ಒಟ್ಟಾಗಿ ಒಂದು ವರ್ಗ-ಅನು.) ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದರಲ್ಲಿ ತಮ್ಮನ್ನು ತಾವು  ನಿಷ್ಪ್ರಯೋಜಕರೆಂದು ಮತ್ತೆಮತ್ತೆ ಸಾಬೀತು ಮಾಡಿದ್ದಾರೆ, ಮಾತ್ರವಲ್ಲದೇ, ಈ ಹಕ್ಕುಗಳ ಸವಕಳಿಯಲ್ಲಿ ಸಹಭಾಗಿಯಾಗಿದ್ದಾರೆ. ಈ ಇಷ್ಟು ದಶಕಗಳಲ್ಲಿ ಧಾರ್ಮಿಕ ವರ್ಗವು ಸಾಮಾನ್ಯ ಮುಸ್ಲಿಮರಿಗಾಗಿ ಏನನ್ನು ಸಾಧಿಸಿದೆ ಎಂದು ಮುಸ್ಲಿಮ್ ಸಮುದಾಯ ತಡವಾಗಿಯಾದರೂ ಪ್ರಶ್ನಿಸಬೇಕು- ಆ ಪ್ರಶ್ನೆ ಕೆಲವು ಹಿಂದೂ ಸಿದ್ಧಾಂತಿಗಳು ಮುಸ್ಲಿಮರ ರಾಜಕೀಯವನ್ನು ಟೀಕಿಸಲು ಕೇಳುವ ಪ್ರಶ್ನೆಯನ್ನೇ ಹೋಲುವ ಅಪಾಯವಿದ್ದರೂ ಪರವಾಗಿಲ್ಲ,

ಮುಸ್ಲಿಂ ಗುರುತಾಗಿ ಶೆರಿಯ

ಸ್ವಾತಂತ್ರ್ಯೋತ್ತರದಲ್ಲಿ ಉಲೆಮಾಗಳು, ಜುಮ್ಮಾ ಮಸೀದಿಯ ಇಮಾಮ್ ಬುಖಾರಿ ಅವರಂತೆ ತಮ್ಮನ್ನು ತಾವು ಮುಸ್ಲಿಂ ಧ್ವನಿ ಎಂಬಂತೆ ಬಿಂಬಿಸಿಕೊಂಡರು. ಇದಕ್ಕೆ, ಮುಸ್ಲಿಂ ಮತಗಳ ವಿಶ್ವಾಸಾರ್ಹ ನಿರ್ಣಾಯಕರ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪಕ್ಷ ನೆರವಾಯಿತು. ಉಲೆಮಾಗಳು ರಾಜಕೀಯ ಪಕ್ಷಗಳಿಂದ ಉದಾರವಾದ ಆಶ್ರಯ ಪಡೆದರೂ, ಅವರು ಸಮುದಾಯಕ್ಕಾಗಿ ಖಾತರಿಪಡಿಸಿದ ಒಂದೇ ಒಂದು ಗ್ರಾಹ್ಯ ಪ್ರಯೋಜನವನ್ನು ಯೋಚಿಸುವುದೂ ಕಷ್ಟ.

ಮುಸ್ಲಿಂ ಸಮುದಾಯದ ಅಗತ್ಯಗಳು ಯಾವತ್ತಿಗೂ ಉದ್ಯೋಗ, ಶಿಕ್ಷಣ, ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಳಷ್ಟೇ ಆಗಿದ್ದವು. ಆದರೆ, ಉಲೆಮಾಗಳು ಯಾವತ್ತೂ ‘ಧಾರ್ಮಿಕ ಪ್ರತ್ಯೇಕತೆ’ಯ ರಾಜಕೀಯವನ್ನು ಅನುಸರಿಸಿದರು ಮತ್ತು  ತೋರಿಕೆ ವಿಷಯಗಳು ಹಾಗೂ ಪೊಳ್ಳು ಸಾಂಕೇತಿಕತೆಯಲ್ಲಿಯೇ ತೊಡಗಿಕೊಂಡರು. ಶಾಬಾನೊ ಪ್ರಕರಣದಲ್ಲಿ ಸರಳವಾದ ಜೀವನಾಂಶದ ಪ್ರಶ್ನೆಯನ್ನು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕಿನ ಅಸ್ತಿತ್ವಕ್ಕೇ ಬೆದರಿಕೆ ಎಂಬಂತೆ ಬಿಂಬಿಸಿದರು. ರಾಮ ಜನ್ಮಭೂಮಿ ಅಭಿಯಾನ ಮತ್ತು ಅಸ್ಸಾಂ ಒಪ್ಪಂದಗಳ ನೆರಳಿನಲ್ಲಿ ಮುಸ್ಲಿಮರ ಭಯವನ್ನು ಉಪಯೋಗಿಸಿಕೊಂಡು ಅದನ್ನವರು ಮಾಡಿದರು.

ಅಷ್ಟೇ ಅಲ್ಲದೇ, ಶಾಬಾನೊ ಪ್ರಕರಣವು ಶೆರಿಯಾ ಅಥವಾ ವೈಯಕ್ತಿಕ ಕಾನೂನು ಮಾತ್ರವಲ್ಲ; ಮುಸ್ಲಿಂ ಅಸ್ಮಿತೆ (ಗುರುತು)ಯ ಉಳಿವಿಗೇ ಒಂದು ಪರೀಕ್ಷೆ ಎಂಬ ಮಟ್ಟಕ್ಕೆ ಏರಿಸಿದರು. ಜಮೀಯತ್ ಉಲೆಮಾ-ಇ- ಹಿಂದ್ ಶೆರಿಯಾದ ಅನುಸರಣೆಯು ಮುಸ್ಲಿಂ ಅಸ್ಮಿತೆಯ ಉಳಿವಿಗೆ ನಿರ್ಣಾಯಕ ಎಂಬಂತೆ ಬಿಂಬಿಸಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಅಧ್ಯಕ್ಷ ಮೌಲಾನಾ ಅಬ್ದುಲ್ ಹಸನ್ ನದ್ವಿಯವರು, ಶೆರಿಯಾದ ರಕ್ಷಣೆಯು “ಭಾರತದಲ್ಲಿ ಮುಸ್ಲಿಮರ ಅತ್ಯಂತ ಮುಖ್ಯವಾದ ಸಮಸ್ಯೆ” ಎಂದು ಬಣ್ಣಿಸಿದರು. ಈ ಆಟಾಟೋಪಗಳು ಈ ವೈಯಕ್ತಿಕ, ಧಾರ್ಮಿಕ ಕಾನೂನುಗಳು ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿದ ಖಾತರಿ ಎಂದು ಬಿಂಬಿಸುವುದಕ್ಕೆ ಬದಲಾಗಿ, ಅವು ಸಂವಿಧಾನಕ್ಕೂ ಮಿಗಿಲಾದದ್ದೇನೋ ಎಂಬಂತೆ ಬಿಂಬಿಸಿದವು.

ಧಾರ್ಮಿಕ ವ್ಯವಸ್ಥೆಯು ಮೋದಿ ಸರಕಾರ ತಂದಿರುವ ತ್ರಿವಳಿ ತಲಾಖನ್ನು ಅಪರಾಧೀಕರಣಗೊಳಿಸುವ ಕಾನೂನಿಗೆ ಸಂಬಂಧಿಸಿದಂತೆ ಅದೇ ತಪ್ಪನ್ನು ಪುನರಾವರ್ತಿಸಿತು.

ಮುಸ್ಲಿಂ ಹಕ್ಕು, ಬೇಡಿಕೆಗಳ ಧ್ವನಿ

ಇಂದು ಮುಸ್ಲಿಂ ಸಮುದಾಯವು ಭಾರತದಲ್ಲಿ ಉದ್ಯೋಗ ಮತ್ತು ಶಿಕ್ಷಣದ ವಿಷಯದಲ್ಲಿ ಅತ್ಯಂತ ಹಿಂದುಳಿದಿದೆ. ಅವರು ದಲಿತರಿಗಿಂತಲೂ ಹಿಂದಿದ್ದಾರೆ. ಸಮಯ ಕಳೆದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಭದ್ರತಾ ಸಂಸ್ಥೆಗಳು ಮುಸ್ಲಿಮರ ಕಾನೂನು ಹಕ್ಕುಗಳನ್ನು ಸಾಮಾನ್ಯವೆಂಬಂತೆ ದಮನಿಸುತ್ತಿವೆ. ಇದು ಕೇವಲ ಜಾತ್ಯತೀತ ಭಾರತಕ್ಕೆ ಒಂದು ಕಳಂಕ ಮಾತ್ರವಲ್ಲ, ಭಾರತ ಸರಕಾರಕ್ಕೆ ಈ ಸಂಬಂಧದಲ್ಲಿ ಸಾಕಷ್ಟು ಒತ್ತಡ ಹೇರುವಲ್ಲಿ ಸಮುದಾಯದ ಸ್ವಯಂಘೋಷಿತ ವಕ್ತಾರರೂ, ನಾಯಕರೂ ಆದ ಉಲೆಮಾಗಳ ಸಾರಾಸಗಟು ವೈಫಲ್ಯವನ್ನೂ ಪ್ರತಿಬಿಂಬಿಸುತ್ತದೆ.

ಒಂದು ಹೆಚ್ಚು ಪ್ರಬುದ್ಧ ನಾಯಕತ್ವವು ತನ್ನ ಸಮುದಾಯಕ್ಕೆ ಈ ಲೌಕಿಕ ಅವಕಾಶಗಳು ಮತ್ತು ಕಾನೂನು ಹಕ್ಕುಗಳನ್ನು ಪಡೆಯಲು ನಾಯಕತ್ವ ವಹಿಸಿ ಚಳವಳಿಗಳನ್ನು ನಡೆಸುತ್ತಿತ್ತು. ನಾಗರಿಕ ಹಕ್ಕುಗಳ ಚಳವಳಿಯ ಸಂದರ್ಭದಲ್ಲಿ ಯುಎಸ್ಎಯ ಕರಿಯರ ಚರ್ಚುಗಳು ವಹಿಸಿದ ಕೇಂದ್ರ ಪಾತ್ರ ಇದಕ್ಕೊಂದು ಉದಾಹರಣೆ. ಈ ಚರ್ಚುಗಳು ಇಂದಿಗೂ ಆಫ್ರಿಕನ್ ಅಮೇರಿಕನ್ ಸಮುದಾಯಕ್ಕೆ ಆಧಾರ ಸ್ಥಂಭಗಳಾಗಿವೆ. ಅವು ಚರ್ಚಿಗೆ ಹೋಗುವವರಿಗೆ ಬಡತನ, ಮಾದಕವಸ್ತು ಬಳಕೆ, ಸಾಂಸ್ಥಿಕ ಜನಾಂಗೀಯವಾದ ಇತ್ಯಾದಿಯಾಗಿ ಜ್ವಲಂತ, ಪ್ರಗತಿಪರ ಸಾಮಾಜಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುತ್ತಿವೆ.

ಅದರೆ, ಭಾರತೀಯ ಮುಸ್ಲಿಂ ಸಮುದಾಯದ ಧಾರ್ಮಿಕ-ರಾಜಕೀಯ ಮಧ್ಯವರ್ತಿಗಳು ರಾಜಕೀಯ ವರ್ಗವನ್ನು ಸಂರಕ್ಷಿಸುವ ಹೊರೆಯನ್ನು ಹೊತ್ತಿದ್ದಾರೆ; ಇಲ್ಲವೇ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ದೊಂಬರಾಟದಲ್ಲಿ ನಿರತರಾಗಿದ್ದಾರೆ.

ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳಿಗೆ ನೇರವಾಗಿ ಆತಂಕ ಒಡ್ಡುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆಆರ್‌ಸಿ)ಯನ್ನು ನವೀಕರಿಸಲು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಜಮೀಯತ್ ಉಲೆಮಾ-ಇ-ಹಿಂದ್‌ನ ಈಗಿನ ಮುಖ್ಯಸ್ಥ ಮಹಮೂದ್ ಮದನಿಯವರ ಬೆಂಬಲವು ಅವರನ್ನು ಬಯಲು ಮಾಡುವಂತಹ ಮಾತ್ರವಲ್ಲ; ನಾಚಿಕೆಗೇಡಿನ ಕ್ರಮವೂ ಆಗಿದೆ. ಆದರೆ, 2012ರ ಚುನಾವಣೆಗೆ ಮೊದಲಿನಿಂದಲೇ ನರೇಂದ್ರ ಮೋದಿಯನ್ನು ಸಕ್ರಿಯವಾಗಿ ಸಮರ್ಥಿಸಿ, ಆತ 2002ರ ಘಟನೆಗಳಿಗೆ ಕ್ಷಮೆ ಯಾಚಿಸಬೇಕಾದುದು ಏನೂ ಇಲ್ಲ ಎಂದು ಹೇಳಿದ ವ್ಯಕ್ತಿಯೊಬ್ಬರಿಂದ ಇದು ನಡೆಯುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಅಥವಾ ಪ್ರತೀ ಚುನಾವಣೆಯಲ್ಲಿ  ಯಾವ ಪಕ್ಷ ಹೆಚ್ಚು ಪ್ರಬಲವಾಗಿದೆ, ಆದುದರಿಂದ ಯಾರು ಹೆಚ್ಚಿನ ಕೃಪಾಶ್ರಯ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ, ಪ್ರತೀ ಚುನಾವಣೆಯಲ್ಲಿಯೂ ಒಂದೊಂದು ಪಕ್ಷಕ್ಕೆ ಬೆಂಬಲ ಘೋಷಿಸುತ್ತಾ, ಸದಾ ಅತ್ತಿಂದಿತ್ತ ಓಲಾಡುವ ಜುಮ್ಮಾ ಮಸೀದಿಯ ಶಾಹಿ ಇಮಾಮರೂ ಅಷ್ಟೇ.

ರಾಜಕೀಯ ವಿಷಯಗಳಲ್ಲಿ ಮುಸ್ಲಿಂ ಧಾರ್ಮಿಕ ನಾಯಕತ್ವದ ನಿರುಪಯುಕ್ತತೆಯ ಬಗ್ಗೆ ನಿಮಗೆ ಇನ್ನೂ ಮನವರಿಕೆಯಾಗದಿದ್ದರೆ, ರಾಜಕೀಯ ಅಂಗಳದಿಂದಲೇ ಅವರ ಕಣ್ಮರೆಯನ್ನು ಊಹಿಸಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...