Homeಚಳವಳಿಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಭಾರತದ ಮುಸ್ಲಿಂ ಸಮುದಾಯವು ತನ್ನ ಸಾಂವಿಧಾನಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಬಲ್ಲಂತಹ ನಾಯಕತ್ವಕ್ಕಾಗಿ ಬೇಡಿಕೆ ಮುಂದಿಡುವ ಕಾಲ ಸನ್ನಿಹಿತವಾಗಿದೆ.

- Advertisement -
- Advertisement -

ಕೃಪೆ: ದಿ ಪ್ರಿಂಟ್‌ -ಅಸೀಮ್ ಆಲಿ

ಅನುವಾದ: ನಿಖಿಲ್ ಕೋಲ್ಪೆ

ಅಯೋಧ್ಯೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರತೀಯ ಮುಸ್ಲಿಮರು ಪ್ರತಿಭಟಿಸಿಲ್ಲ. ಅದರ ಅರ್ಥ ಹಲವಾರು ವಿಶ್ಲೇಷಕರು ಹೇಳುವಂತೆ ಪ್ರಬುದ್ಧತೆಯಾಗಲೀ, ಸ್ವೀಕಾರವಾಗಲೀ ಅಲ್ಲ. ಮುಸ್ಲಿಮರ ಮೌನಕ್ಕೆ ಭಯ, ಅಸಹಾಯಕತೆ ಮತ್ತು ಹತಾಶೆಗಳೇ ಹೆಚ್ಚು ಸೂಕ್ತವಾದ ವಿವರಣೆಗಳು.

ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉತ್ಥಾನವು ಚುನಾವಣೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯವನ್ನು ಅಪ್ರಸ್ತುತವಾಗಿಸಿದೆ ಎಂಬುದಿಂದು ಸಾಮಾನ್ಯವಾಗಿ ಒಪ್ಪಿತ ವಿಷಯ. ಆದರೆ, ಭ್ರಮನಿರಸನದ ಭಾವನೆಯು ಅದಕ್ಕಿಂತಲೂ ಆಳವಾಗಿದೆ. ನಮಗೆ ಪ್ರತಿಭಟಿಸಲು ಯಾವುದೇ ಶಕ್ತಿಯಾಗಲೀ, ಯಾವುದೇ ಸಂಸ್ಥೆಯಾಗಲೀ, ಯಾವುದೇ ಅವಕಾಶವಾಗಲೀ ಉಳಿದಿಲ್ಲ ಎಂದು ನಾನು ನನ್ನ ಸಹಧರ್ಮೀಯರಿಗೆ ವಿನಮ್ರವಾಗಿ ಹೇಳುತ್ತೇನೆ” ಎಂದು ಸಾಮಾಜಿಕ ಕಾರ್ಯಕರ್ತರಾದ ಸಯ್ಯೆದಾ ಹಮೀದ್ ತೀರ್ಪಿನ ಮರುದಿನ ಬರೆದರು.

ಆದರೆ, ಈ ಅಸಹಾಯಕ ಸ್ಥಿತಿಯಲ್ಲಿ ಒಂದು ಮುಖ್ಯವಾದ ಪಾಠವಿದೆ. ಮುಸ್ಲಿಂ ಉಲೆಮಾಗಳು (ಉಲೆಮಾ ಎಂದರೆ, ಮತಪಂಡಿತರು ಮತ್ತು ಧಾರ್ಮಿಕ ನಾಯಕರು ಅಥವಾ ಒಟ್ಟಾಗಿ ಒಂದು ವರ್ಗ-ಅನು.) ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದರಲ್ಲಿ ತಮ್ಮನ್ನು ತಾವು  ನಿಷ್ಪ್ರಯೋಜಕರೆಂದು ಮತ್ತೆಮತ್ತೆ ಸಾಬೀತು ಮಾಡಿದ್ದಾರೆ, ಮಾತ್ರವಲ್ಲದೇ, ಈ ಹಕ್ಕುಗಳ ಸವಕಳಿಯಲ್ಲಿ ಸಹಭಾಗಿಯಾಗಿದ್ದಾರೆ. ಈ ಇಷ್ಟು ದಶಕಗಳಲ್ಲಿ ಧಾರ್ಮಿಕ ವರ್ಗವು ಸಾಮಾನ್ಯ ಮುಸ್ಲಿಮರಿಗಾಗಿ ಏನನ್ನು ಸಾಧಿಸಿದೆ ಎಂದು ಮುಸ್ಲಿಮ್ ಸಮುದಾಯ ತಡವಾಗಿಯಾದರೂ ಪ್ರಶ್ನಿಸಬೇಕು- ಆ ಪ್ರಶ್ನೆ ಕೆಲವು ಹಿಂದೂ ಸಿದ್ಧಾಂತಿಗಳು ಮುಸ್ಲಿಮರ ರಾಜಕೀಯವನ್ನು ಟೀಕಿಸಲು ಕೇಳುವ ಪ್ರಶ್ನೆಯನ್ನೇ ಹೋಲುವ ಅಪಾಯವಿದ್ದರೂ ಪರವಾಗಿಲ್ಲ,

ಮುಸ್ಲಿಂ ಗುರುತಾಗಿ ಶೆರಿಯ

ಸ್ವಾತಂತ್ರ್ಯೋತ್ತರದಲ್ಲಿ ಉಲೆಮಾಗಳು, ಜುಮ್ಮಾ ಮಸೀದಿಯ ಇಮಾಮ್ ಬುಖಾರಿ ಅವರಂತೆ ತಮ್ಮನ್ನು ತಾವು ಮುಸ್ಲಿಂ ಧ್ವನಿ ಎಂಬಂತೆ ಬಿಂಬಿಸಿಕೊಂಡರು. ಇದಕ್ಕೆ, ಮುಸ್ಲಿಂ ಮತಗಳ ವಿಶ್ವಾಸಾರ್ಹ ನಿರ್ಣಾಯಕರ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪಕ್ಷ ನೆರವಾಯಿತು. ಉಲೆಮಾಗಳು ರಾಜಕೀಯ ಪಕ್ಷಗಳಿಂದ ಉದಾರವಾದ ಆಶ್ರಯ ಪಡೆದರೂ, ಅವರು ಸಮುದಾಯಕ್ಕಾಗಿ ಖಾತರಿಪಡಿಸಿದ ಒಂದೇ ಒಂದು ಗ್ರಾಹ್ಯ ಪ್ರಯೋಜನವನ್ನು ಯೋಚಿಸುವುದೂ ಕಷ್ಟ.

ಮುಸ್ಲಿಂ ಸಮುದಾಯದ ಅಗತ್ಯಗಳು ಯಾವತ್ತಿಗೂ ಉದ್ಯೋಗ, ಶಿಕ್ಷಣ, ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಳಷ್ಟೇ ಆಗಿದ್ದವು. ಆದರೆ, ಉಲೆಮಾಗಳು ಯಾವತ್ತೂ ‘ಧಾರ್ಮಿಕ ಪ್ರತ್ಯೇಕತೆ’ಯ ರಾಜಕೀಯವನ್ನು ಅನುಸರಿಸಿದರು ಮತ್ತು  ತೋರಿಕೆ ವಿಷಯಗಳು ಹಾಗೂ ಪೊಳ್ಳು ಸಾಂಕೇತಿಕತೆಯಲ್ಲಿಯೇ ತೊಡಗಿಕೊಂಡರು. ಶಾಬಾನೊ ಪ್ರಕರಣದಲ್ಲಿ ಸರಳವಾದ ಜೀವನಾಂಶದ ಪ್ರಶ್ನೆಯನ್ನು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕಿನ ಅಸ್ತಿತ್ವಕ್ಕೇ ಬೆದರಿಕೆ ಎಂಬಂತೆ ಬಿಂಬಿಸಿದರು. ರಾಮ ಜನ್ಮಭೂಮಿ ಅಭಿಯಾನ ಮತ್ತು ಅಸ್ಸಾಂ ಒಪ್ಪಂದಗಳ ನೆರಳಿನಲ್ಲಿ ಮುಸ್ಲಿಮರ ಭಯವನ್ನು ಉಪಯೋಗಿಸಿಕೊಂಡು ಅದನ್ನವರು ಮಾಡಿದರು.

ಅಷ್ಟೇ ಅಲ್ಲದೇ, ಶಾಬಾನೊ ಪ್ರಕರಣವು ಶೆರಿಯಾ ಅಥವಾ ವೈಯಕ್ತಿಕ ಕಾನೂನು ಮಾತ್ರವಲ್ಲ; ಮುಸ್ಲಿಂ ಅಸ್ಮಿತೆ (ಗುರುತು)ಯ ಉಳಿವಿಗೇ ಒಂದು ಪರೀಕ್ಷೆ ಎಂಬ ಮಟ್ಟಕ್ಕೆ ಏರಿಸಿದರು. ಜಮೀಯತ್ ಉಲೆಮಾ-ಇ- ಹಿಂದ್ ಶೆರಿಯಾದ ಅನುಸರಣೆಯು ಮುಸ್ಲಿಂ ಅಸ್ಮಿತೆಯ ಉಳಿವಿಗೆ ನಿರ್ಣಾಯಕ ಎಂಬಂತೆ ಬಿಂಬಿಸಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಅಧ್ಯಕ್ಷ ಮೌಲಾನಾ ಅಬ್ದುಲ್ ಹಸನ್ ನದ್ವಿಯವರು, ಶೆರಿಯಾದ ರಕ್ಷಣೆಯು “ಭಾರತದಲ್ಲಿ ಮುಸ್ಲಿಮರ ಅತ್ಯಂತ ಮುಖ್ಯವಾದ ಸಮಸ್ಯೆ” ಎಂದು ಬಣ್ಣಿಸಿದರು. ಈ ಆಟಾಟೋಪಗಳು ಈ ವೈಯಕ್ತಿಕ, ಧಾರ್ಮಿಕ ಕಾನೂನುಗಳು ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿದ ಖಾತರಿ ಎಂದು ಬಿಂಬಿಸುವುದಕ್ಕೆ ಬದಲಾಗಿ, ಅವು ಸಂವಿಧಾನಕ್ಕೂ ಮಿಗಿಲಾದದ್ದೇನೋ ಎಂಬಂತೆ ಬಿಂಬಿಸಿದವು.

ಧಾರ್ಮಿಕ ವ್ಯವಸ್ಥೆಯು ಮೋದಿ ಸರಕಾರ ತಂದಿರುವ ತ್ರಿವಳಿ ತಲಾಖನ್ನು ಅಪರಾಧೀಕರಣಗೊಳಿಸುವ ಕಾನೂನಿಗೆ ಸಂಬಂಧಿಸಿದಂತೆ ಅದೇ ತಪ್ಪನ್ನು ಪುನರಾವರ್ತಿಸಿತು.

ಮುಸ್ಲಿಂ ಹಕ್ಕು, ಬೇಡಿಕೆಗಳ ಧ್ವನಿ

ಇಂದು ಮುಸ್ಲಿಂ ಸಮುದಾಯವು ಭಾರತದಲ್ಲಿ ಉದ್ಯೋಗ ಮತ್ತು ಶಿಕ್ಷಣದ ವಿಷಯದಲ್ಲಿ ಅತ್ಯಂತ ಹಿಂದುಳಿದಿದೆ. ಅವರು ದಲಿತರಿಗಿಂತಲೂ ಹಿಂದಿದ್ದಾರೆ. ಸಮಯ ಕಳೆದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಭದ್ರತಾ ಸಂಸ್ಥೆಗಳು ಮುಸ್ಲಿಮರ ಕಾನೂನು ಹಕ್ಕುಗಳನ್ನು ಸಾಮಾನ್ಯವೆಂಬಂತೆ ದಮನಿಸುತ್ತಿವೆ. ಇದು ಕೇವಲ ಜಾತ್ಯತೀತ ಭಾರತಕ್ಕೆ ಒಂದು ಕಳಂಕ ಮಾತ್ರವಲ್ಲ, ಭಾರತ ಸರಕಾರಕ್ಕೆ ಈ ಸಂಬಂಧದಲ್ಲಿ ಸಾಕಷ್ಟು ಒತ್ತಡ ಹೇರುವಲ್ಲಿ ಸಮುದಾಯದ ಸ್ವಯಂಘೋಷಿತ ವಕ್ತಾರರೂ, ನಾಯಕರೂ ಆದ ಉಲೆಮಾಗಳ ಸಾರಾಸಗಟು ವೈಫಲ್ಯವನ್ನೂ ಪ್ರತಿಬಿಂಬಿಸುತ್ತದೆ.

ಒಂದು ಹೆಚ್ಚು ಪ್ರಬುದ್ಧ ನಾಯಕತ್ವವು ತನ್ನ ಸಮುದಾಯಕ್ಕೆ ಈ ಲೌಕಿಕ ಅವಕಾಶಗಳು ಮತ್ತು ಕಾನೂನು ಹಕ್ಕುಗಳನ್ನು ಪಡೆಯಲು ನಾಯಕತ್ವ ವಹಿಸಿ ಚಳವಳಿಗಳನ್ನು ನಡೆಸುತ್ತಿತ್ತು. ನಾಗರಿಕ ಹಕ್ಕುಗಳ ಚಳವಳಿಯ ಸಂದರ್ಭದಲ್ಲಿ ಯುಎಸ್ಎಯ ಕರಿಯರ ಚರ್ಚುಗಳು ವಹಿಸಿದ ಕೇಂದ್ರ ಪಾತ್ರ ಇದಕ್ಕೊಂದು ಉದಾಹರಣೆ. ಈ ಚರ್ಚುಗಳು ಇಂದಿಗೂ ಆಫ್ರಿಕನ್ ಅಮೇರಿಕನ್ ಸಮುದಾಯಕ್ಕೆ ಆಧಾರ ಸ್ಥಂಭಗಳಾಗಿವೆ. ಅವು ಚರ್ಚಿಗೆ ಹೋಗುವವರಿಗೆ ಬಡತನ, ಮಾದಕವಸ್ತು ಬಳಕೆ, ಸಾಂಸ್ಥಿಕ ಜನಾಂಗೀಯವಾದ ಇತ್ಯಾದಿಯಾಗಿ ಜ್ವಲಂತ, ಪ್ರಗತಿಪರ ಸಾಮಾಜಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುತ್ತಿವೆ.

ಅದರೆ, ಭಾರತೀಯ ಮುಸ್ಲಿಂ ಸಮುದಾಯದ ಧಾರ್ಮಿಕ-ರಾಜಕೀಯ ಮಧ್ಯವರ್ತಿಗಳು ರಾಜಕೀಯ ವರ್ಗವನ್ನು ಸಂರಕ್ಷಿಸುವ ಹೊರೆಯನ್ನು ಹೊತ್ತಿದ್ದಾರೆ; ಇಲ್ಲವೇ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ದೊಂಬರಾಟದಲ್ಲಿ ನಿರತರಾಗಿದ್ದಾರೆ.

ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳಿಗೆ ನೇರವಾಗಿ ಆತಂಕ ಒಡ್ಡುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆಆರ್‌ಸಿ)ಯನ್ನು ನವೀಕರಿಸಲು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಜಮೀಯತ್ ಉಲೆಮಾ-ಇ-ಹಿಂದ್‌ನ ಈಗಿನ ಮುಖ್ಯಸ್ಥ ಮಹಮೂದ್ ಮದನಿಯವರ ಬೆಂಬಲವು ಅವರನ್ನು ಬಯಲು ಮಾಡುವಂತಹ ಮಾತ್ರವಲ್ಲ; ನಾಚಿಕೆಗೇಡಿನ ಕ್ರಮವೂ ಆಗಿದೆ. ಆದರೆ, 2012ರ ಚುನಾವಣೆಗೆ ಮೊದಲಿನಿಂದಲೇ ನರೇಂದ್ರ ಮೋದಿಯನ್ನು ಸಕ್ರಿಯವಾಗಿ ಸಮರ್ಥಿಸಿ, ಆತ 2002ರ ಘಟನೆಗಳಿಗೆ ಕ್ಷಮೆ ಯಾಚಿಸಬೇಕಾದುದು ಏನೂ ಇಲ್ಲ ಎಂದು ಹೇಳಿದ ವ್ಯಕ್ತಿಯೊಬ್ಬರಿಂದ ಇದು ನಡೆಯುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಅಥವಾ ಪ್ರತೀ ಚುನಾವಣೆಯಲ್ಲಿ  ಯಾವ ಪಕ್ಷ ಹೆಚ್ಚು ಪ್ರಬಲವಾಗಿದೆ, ಆದುದರಿಂದ ಯಾರು ಹೆಚ್ಚಿನ ಕೃಪಾಶ್ರಯ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ, ಪ್ರತೀ ಚುನಾವಣೆಯಲ್ಲಿಯೂ ಒಂದೊಂದು ಪಕ್ಷಕ್ಕೆ ಬೆಂಬಲ ಘೋಷಿಸುತ್ತಾ, ಸದಾ ಅತ್ತಿಂದಿತ್ತ ಓಲಾಡುವ ಜುಮ್ಮಾ ಮಸೀದಿಯ ಶಾಹಿ ಇಮಾಮರೂ ಅಷ್ಟೇ.

ರಾಜಕೀಯ ವಿಷಯಗಳಲ್ಲಿ ಮುಸ್ಲಿಂ ಧಾರ್ಮಿಕ ನಾಯಕತ್ವದ ನಿರುಪಯುಕ್ತತೆಯ ಬಗ್ಗೆ ನಿಮಗೆ ಇನ್ನೂ ಮನವರಿಕೆಯಾಗದಿದ್ದರೆ, ರಾಜಕೀಯ ಅಂಗಳದಿಂದಲೇ ಅವರ ಕಣ್ಮರೆಯನ್ನು ಊಹಿಸಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...