Homeಮುಖಪುಟಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಗಾಂಧಿಯವರ ಅಹಿಂಸೆಯ ದಾರಿಯಿಂದ ಸ್ವಾತಂತ್ರ‍್ಯ ಬರಲಿಲ್ಲ ಎಂಬ ಮಾತನ್ನು ಅವರು 21ನೆಯ ಶತಮಾನದಲ್ಲೂ ಮತ್ತೆ ಮತ್ತೆ ಯುವಪೀಳಿಗೆಗಳ ಮನಸ್ಸಿನಲ್ಲಿ ತುಂಬಲು ಶ್ರಮಿಸುತ್ತಿದ್ದಾರೆ.

- Advertisement -
- Advertisement -

ನಾಜಿ ಜರ್ಮನಿಯನ್ನು ಕಟ್ಟಿದ ಪ್ರಮುಖ ರೂವಾರಿ ಅಡಾಲ್ಪ್ ಹಿಟ್ಲರ್ ಎಷ್ಟು ಮುಖ್ಯನೋ, ಅವನ ಸಚಿವ ಸಂಪುಟದಲ್ಲಿ ಪ್ರಪೊಗಾಂಡ ಸಚಿವನಾಗಿದ್ದ ಗೊಬೆಲ್ಸ್ ಕೂಡ ಅಷ್ಟೇ ಪ್ರಮುಖ. ಆ ಕಾಲದ ಜರ್ಮನಿಯ, ಜರ್ಮನಿಯ ಜನಸಮುದಾಯಗಳ ವಿವೇಕ ಮತ್ತು ಸಾಮಾಜಿಕ ಸಾಮರಸ್ಯದ ಅವಸಾನಕ್ಕೂ ಇವರಿಬ್ಬರೂ ಮುಖ್ಯ ರೂವಾರಿಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಸರಳವಾಗಿ ಹೇಳುವುದಾದರೆ, ಹಿಟ್ಲರ್‌ನ ಬಲಗೈ ಭಂಟನಾಗಿದ್ದ ಗೊಬೆಲ್ಸ್.

ನಾಜಿ ಜರ್ಮನಿಯ ರೇಡಿಯೋ, ಪತ್ರಿಕೆಗಳು, ರಂಗಭೂಮಿ, ಸಾಹಿತ್ಯ, ಸಂಗೀತ, ಪಿಲ್ಮ್‌ಗಳು ಎಲ್ಲವನ್ನೂ ಬಹಳ ಪರಿಣಾಮಕಾರಿಯಾಗಿ ಬಳಸಿ, ನಿಭಾಯಿಸಿ ಜ್ಯೂಗಳ ವಿರುದ್ಧ ಜನಾಂಗೀಯ ದ್ವೇಷದ ಮನೋಭಾವವನ್ನು ಬಹುಸಂಖ್ಯಾತ ಜರ್ಮನ್ನರಿಗೆ ಸಮರ್ಥವಾಗಿ ತುಂಬಲು ಸಫಲನಾಗಿದ್ದ. ಜರ್ಮನ್ ವಿರೋಧಿ ಸಾಹಿತ್ಯ ಎಂದು ವಿಂಗಡಿಸಿ ಸಾವಿರಾರು ಪುಸ್ತಕಗಳನ್ನು ನಡುರಸ್ತೆಯಲ್ಲಿ ಸುಟ್ಟ ದುಷ್ಕೃತ್ಯದ ಶ್ರೇಯಸ್ಸು ಇವನದ್ದೇ. ಇವತ್ತಿಗೂ ವಿಶ್ವದಾದ್ಯಂತ ಬಲಪಂಥೀಯ ಸಂಘಟನೆಗಳಿಗೆ, ಸರ್ವಾಧಿಕಾರದ ಧೋರಣೆಯ ಸರ್ಕಾರಗಳಿಗೆ ಇವನು ದ್ರೋಣಾಚಾರ್ಯ. ಇವನು ತನ್ನ ಸಿದ್ಧಾಂತಗಳನ್ನು ಪ್ರಚಾರ ನಡೆಸಲು ತೊಡಗಿಸಿಕೊಂಡ ದಾರಿಗಳನ್ನು ಇವತ್ತಿಗೂ ಇವರೆಲ್ಲಾ ಅನುಕರಿಸುತ್ತಾರೆ.

ಗೊಬೆಲ್ಸ್

ಆಸಕ್ತಿದಾಯಕವಾಗಿ ಗೊಬೆಲ್ಸ್ ತನ್ನ ಕೊನೆಯ ವರ್ಷಗಳಲ್ಲಿ ದಿನಚರಿಯನ್ನು ಬರೆದುಕೊಳ್ಳುತ್ತಿದ್ದ. ಆ ದಿನಚರಿಗಳಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಕೆಲವು ಸಾಲುಗಳನ್ನು ಮೂರು ವಿಭಿನ್ನ ದಿನಾಂಕಗಳಂದು ದಾಖಲಿಸಿದ್ದಾನೆ. ಮಹಾತ್ಮ ಗಾಂಧಿಯವರ ಬಗ್ಗೆ ಅವನಿಗಿದ್ದ ಅಸಹನೆಗೂ, ಅವನ ಕಾಲಕ್ಕೆ ಗಾಂಧಿಯವರ ಬಗ್ಗೆ ಭಾರತದಲ್ಲಿ ಆರ್.ಎಸ್.ಎಸ್ ಸಂಘಟನೆ ಮತ್ತು ಹಿಂದು ಮಹಾಸಭಾದ ಮುಖಂಡರು ತೋರಿಸುತ್ತಿದ್ದ ಅಸಹನೆ, ದ್ವೇಷಕ್ಕೂ ಬಹಳ ಹತ್ತಿರದ ಹೋಲಿಕೆಗಳಿವೆ. ಇಟಲಿಯ ಫ್ಯಾಸಿಸ್ಟ್‌ಗಳಿಂದ, ಜರ್ಮನಿಯ ನಾಜಿಗಳಿಂದ ಅಂದಿನ ಆರ್‌ಎಸ್‌ಎಸ್ ಮತ್ತು ಹಿಂದು ಮಹಾಸಭಾದ ನಾಯಕರು ಉಗ್ರ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದು, ಮುಸ್ಲಿಮರ ವಿರುದ್ಧ ಜನಾಂಗೀಯ ದ್ವೇಷವನ್ನು ತೀವ್ರತರಕ್ಕೆ ತೆಗೆದುಕೊಂಡು ಹೋಗಿದ್ದು ಈಗಾಗಲೇ ಹಲವು ಬಾರಿ ದಾಖಲು ಆಗಿದೆ. ಗಾಂಧಿಯ ಬಗ್ಗೆ ದ್ವೇಷವನ್ನೂ ನಾಜಿಗಳು ಕಲಿಸಿಕೊಟ್ಟರೇ?

ಏಪ್ರಿಲ್ 6, 1942ರಂದು ತನ್ನ ಡೈರಿಯಲ್ಲಿ ಗೋಬೆಲ್ಸ್ ಗಾಂಧಿ ಬಗ್ಗೆ ಹೀಗೆ ನಮೂದಿಸಿದ್ದಾನೆ.
“… ಗಾಂಧಿ ಇಂದು ಮುದ್ರಣ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬ್ರಿಟಿಷರ ಶೋಷಣೆಯ ವಿರುದ್ಧ ಸಂದರ್ಶನ ಪ್ರಕಟಿಸಿದ್ದಾರೆ. ಶಾಂತಿಯುತ ಪ್ರತಿಭಟನೆಯ ಹೊರತಾಗಿ ಇವರು ಬೇರೆ ಯಾವ ತಂತ್ರಗಳನ್ನು ಮುಂದುಮಾಡಿಲ್ಲ. ಶಾಂತಿಯುತ ಪ್ರತಿಭಟನೆ ಇಂಗ್ಲಿಷ್‌ ಜನಗಳಿಗೆ ಸ್ವಾಭಾವಿಕವಾಗಿ ಯಾವುದೇ ತೊಂದರೆ ನೀಡುವುದಿಲ್ಲ. ಗಾಂಧಿ ನೀತಿಗಳು ಭಾರತಕ್ಕೆ ದುರದೃಷ್ಟವನ್ನು ಹೊರತುಪಡಿಸಿ ಬೇರೇನೂ ತಂದುಕೊಟ್ಟಿಲ್ಲ. ಈ ನಾಲ್ಕು ನೂರ ಐವತ್ತು ದಶಲಕ್ಷ ಜನ ಶಕ್ತಿಯುತವಾದ ರಾಷ್ಟ್ರೀಯತೆಯ, ಭಾರತ ಸ್ವಾತಂತ್ರ‍್ಯ ಸಂಗ್ರಾಮದ ರಾಜಕೀಯವನ್ನು ಕಟ್ಟಿದ್ದರೆ ಇವತ್ತಿಗೆ ಇರುವ ಸ್ಥಿತಿಗಿಂತಲೂ ಎಷ್ಟೋ ಮುಂದೆ ಇರುತ್ತಿದ್ದರು”

ಇದು ಇವತ್ತಿಗೂ ಸಂಘ ಪರಿವಾರದವರು ಉಚ್ಚರಿಸುವ ಮಾತುಗಳು. ಗಾಂಧಿಯವರ ಅಹಿಂಸೆಯ ದಾರಿಯಿಂದ ಸ್ವಾತಂತ್ರ‍್ಯ ಬರಲಿಲ್ಲ ಎಂಬ ಮಾತನ್ನು ಅವರು 21ನೆಯ ಶತಮಾನದಲ್ಲೂ ಮತ್ತೆ ಮತ್ತೆ ಯುವಪೀಳಿಗೆಗಳ ಮನಸ್ಸಿನಲ್ಲಿ ತುಂಬಲು ಶ್ರಮಿಸುತ್ತಿದ್ದಾರೆ. ಉಗ್ರ ರಾಷ್ಟ್ರೀಯತೆಯ ಪ್ರತಿಪಾದನೆಯಿಂದ, ಜನಾಂಗೀಯ ದ್ವೇಷಗಳಿಂದ, ಹಿಂಸೆಯಿಂದ ಜರ್ಮನಿ ಮತ್ತು ಇತರ ಯೂರೋಪ್ ದೇಶಗಳು ಸರ್ವನಾಶವಾಗಿ ಹೋಗಿದ್ದರೂ, ಭಾರತದಲ್ಲಿ ಇಂದಿಗೂ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ, ಸಾಹಿತ್ಯ ಸಿನೆಮಾಗಳಲ್ಲಿ ಇಂತಹ ಪ್ರತಿಪಾದನೆಗಳು ಪಡೆಯುತ್ತಿರುವ ಸ್ಥಾನ ಆತಂಕ ಮೂಡಿಸುತ್ತದೆ.

ಏಪ್ರಿಲ್ 20, 1942ರಂದು ಮತ್ತೆ ಗಾಂಧಿ ಅವರ ಅಹಿಂಸಾಮಾರ್ಗವನ್ನು ಛೇಡಿಸಿ ತನ್ನ ದಿನಚರಿಯಲ್ಲಿ ಗೋಬೆಲ್ಸ್ ಈ ರೀತಿ ದಾಖಲಿಸಿಕೊಂಡಿದ್ದಾನೆ.

“ಗಾಂಧಿ ಇವತ್ತು ನೀಡಿದ ಸಂದರ್ಶನದಲ್ಲಿ ಮತ್ತೆ ಅಹಿಂಸೆಯನ್ನು ಆಚರಿಸುವಂತೆ ಕರೆಕೊಟ್ಟಿದ್ದಾರೆ. ಭಾರತವನ್ನು ಇನ್ನೂ ಹೆಚ್ಚಿನ ಸಮಸ್ಯೆಗೆ ಎಳೆಯುವುದಕ್ಕೆ ಲೆಕ್ಕಾಚಾರದ ನಡೆ ಇದು”

ಅಂದೇ ತನ್ನ ದಿನಚರಿಯಲ್ಲಿ ಹಿಟ್ಲರ್ ಹುಟ್ಟುಹಬ್ಬವನ್ನು ಆಚರಿಸಿದ ಬಗ್ಗೆ, ಅಲ್ಲಿ ತಾನು ಕೊಟ್ಟ ಭಾಷಣದ ಬಗ್ಗೆ ಬರೆದುಕೊಳ್ಳುತ್ತಾನೆ. ಅಂದರೆ ತನ್ನ ಸರ್ವಾಧಿಕಾರಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯ ದಿನವೂ ಗಾಂಧಿ ಮತ್ತು ಅಹಿಂಸೆಯ ಬಗೆಗಿನ ಗಾಂಧಿ ಮಾತುಗಳು ಈ ಕ್ರೂರಿಯನ್ನು ಕಾಡಿವೆ. ಇವತ್ತಿಗೂ ಗಾಂಧಿ ಮತ್ತು ಗಾಂಧಿ ಹೇಳಿಕೊಟ್ಟ ಪ್ರತಿಭಟನೆಯ ಪಾಠಗಳು ಸರ್ವಾಧಿಕಾರವನ್ನು ಬಯಸುವ ವರ್ಗಕ್ಕೆ ಭೂತವಾಗಿ ಕಾಡುತ್ತಲೇ ಇದೆ. ಆದುದರಿಂದಲೇ ಗಾಂಧಿಯನ್ನು, ಗಾಂಧಿ ಹೇಳಿಕೊಟ್ಟ ಪಾಠವನ್ನು ಅನುಸರಿಸುವ ಯಾರನ್ನೇ ಆಗಲಿ, ಅವರ ಚಾರಿತ್ರ‍್ಯಹರಣಕ್ಕೆ ಈ ಗುಂಪು ಸದಾಕಾಲ ಸಿದ್ಧರಾಗಿ ಕಾದಿರುತ್ತಾರೆ.

ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ, ನಡೆದ ಘರ್ಷಣೆಗಳಿಗೆ ಗಾಂಧಿಯವರ ಮೇಲೆ ನೇರ ಆರೋಪ ಹೊರಿಸಿ ಬಂಧಿಸಿದಾಗ, ಗಾಂಧಿ ಆತ್ಮಶುದ್ಧಿಗಾಗಿ ಜೈಲಿನಲ್ಲಿಯೇ 21 ದಿನಗಳ ಉಪವಾಸ ಮಾಡುತ್ತಾರೆ. ಗಾಂಧಿಯವರು ಉಪವಾಸ ಅಂತ್ಯ ಮಾಡಿದ ನಂತರ ಮಾರ್ಚ್ 5, 1943 ರಂದು ಗೊಬೆಲ್ಸ್ ತನ್ನ ದಿನಚರಿಯಲ್ಲಿ ಹೀಗೆ ದಾಖಲಿಸಿದ್ದಾನೆ.

“ಗಾಂಧಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಅವರು ಇಡೀ ಪ್ರಪಂಚಕ್ಕೆ ತಮಾಷೆ ತೋರಿಸಿದ್ದಾರೆ ಎಂಬುದು ನನ್ನ ನಂಬಿಕೆ. ಇಂಗ್ಲಿಷ್‌ ದಿನಪತ್ರಿಕೆಗಳು ಇದನ್ನು ವರದಿ ಮಾಡಿ ತಮ್ಮದೇ ಆದ ವ್ಯಂಗ್ಯವನ್ನು ಮತ್ತು ಲೇವಡಿ ಮಾಡುವ ಭಾಷೆಯನ್ನು ಸೇರಿಸಿದ್ದಾರೆ. ಗಾಂಧಿ ಸಿಕ್ಕಾಪಟ್ಟೆ ಬುದ್ಧಿವಂತ. ಆತ ಸಂತ ಎಂದು ನಾನು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಆದರೆ ಈ ಬಾರಿ ಆತನ ನಾಟಕೀಯ ಉಪವಾಸದಿಂದ ಇಂಗ್ಲಿಷರು ಮೋಸಹೋಗಲಿಲ್ಲ”

ಗಾಂಧಿ ಉಪವಾಸದ ಬಗ್ಗೆ, ಗಾಂಧಿ ಅವರು ಬಯಸುತ್ತಿದ್ದ ಹಿಂದೂ-ಮುಸ್ಲಿಮ್ ಸಾಮರಸ್ಯದ ಬಗ್ಗೆ ಆರ್‌ಎಸ್‌ಎಸ್ ಕೂಡ ಹಲವು ಬಾರಿ ಮೂದಲಿಸಿರುವುದು ದಾಖಲಾಗಿದೆ. ಬಂಗಾಳದಲ್ಲಿ ಹಿಂದೂ ಮುಸ್ಲಿಮರ ಕೋಮುಗಲಭೆಯನ್ನು ಕೊನೆಗಾಣಿಸಲು ಕೊನೆಯ ಅಸ್ತ್ರ ಎಂಬುವಂತೆ ಗಾಂಧಿ ಅವರು ಉಪವಾಸ ಕೂತಾಗ, ಆರ್‌ಎಸ್‌ಎಸ್ ಮುಖವಾಣಿ ಪತ್ರಿಕೆ ಆರ್ಗನೈಸರ್‌ನಲ್ಲಿ “ರೋಮ್ ಹತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದನಂತೆ” ಎಂದಿದ್ದಲ್ಲದೆ “ಇತಿಹಾಸ ನಮ್ಮ ಕಣ್ಣೆದುರಿಗೆ ಇಲ್ಲಿ ಮರುಕಳಿಸುತ್ತಿದೆ. ಕಲ್ಕತ್ತಾದಿಂದ ಮಹಾತ್ಮ ಗಾಂಧಿ ಇಸ್ಲಾಮ್‌ನನ್ನು ಹಾಡಿಹೊಗಳುತ್ತಾ, ಅಲ್ಲ ಓ ಅಕ್ಬರ್ ಕೂಗುತ್ತಿದ್ದಾರೆ ಮತ್ತು ಹಿಂದೂಗಳನ್ನು ಅದನ್ನೇ ಮಾಡಲು ಪ್ರೇರೇಪಿಸುತ್ತಿದ್ದಾರೆ ಆದರೆ ಪಂಜಾಬ್ ಮತ್ತು ಇತರೆಡೆಗಳಲ್ಲಿ ಇಸ್ಲಾಮ್ ಮತ್ತು ಅಲ್ಲ ಓ ಅಕ್ಬರ್ ಕೂಗಿನ ಹೆಸರಿನಲ್ಲಿ ಸ್ವಲ್ಪವೂ ನಾಚಿಕೆಯಿಲ್ಲದ ಬರ್ಬರ ಕ್ರೌರ್ಯ ಮತ್ತು ದೌರ್ಜನ್ಯ ನಡೆಯುತ್ತಿದೆ” ಎಂದು ಬರೆದು ಕೋಮುದಳ್ಳುರಿಯ ಬೆಂಕಿಯನ್ನು ಕಾರಿಕೊಂಡಿತ್ತು.

ಹೀಗೆ ಗಾಂಧಿ ದ್ವೇಷ, ಹಿಂಸೆಯ ಬಗ್ಗೆ ಅತಿರೇಕದ ಪ್ರತಿಪಾದನೆ, ಉಗ್ರ ಧಾರ್ಮಿಕ ರಾಷ್ಟ್ರೀಯತೆ ಮತ್ತು ಜನಾಂಗೀಯ ದ್ವೇಷಗಳು ಗಾಂಧಿ ಕೊಲೆಗೂ ಪ್ರೇರೇಪಿಸಿದ್ದಲ್ಲದೆ, ಹಲವು ಪೀಳಿಗೆಗಳ ಮನಸ್ಸುಗಳನ್ನು ಭ್ರಷ್ಟಗೊಳಿಸಿತು.

ಇಂತಹ ಚಿಂತನೆಗಳನ್ನು ಜರ್ಮನಿಯಲ್ಲಿ ಹರಡಿದ ಗೊಬೆಲ್ಸ್, ಗಾಂಧಿ ಬಗ್ಗೆ ತನ್ನ ದಿನಚರಿಯಲ್ಲಿ ಮೇಲಿನ ಹೇಳಿಕೆ ದಾಖಲಿಸಿದ ಮೇಲೆ ಸುಮಾರು ಎರಡು ವರ್ಷಗಳ ಕಾಲ ಬದುಕಿದ್ದ. ಹಿಟ್ಲರ್ ತನ್ನ ಪಿಸ್ತೂಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಆಗ ಜರ್ಮನಿಯ ಚಾನ್ಸಲರ್ ಆಗಿ ನೇಮಕಗೊಂಡ ಗೊಬೆಲ್ಸ್ ಸರ್ವಾಧಿಕಾರ ನಡೆಸಿದ್ದು ಕೇವಲ ಒಂದು ದಿನ. ಅಂದೇ ತನ್ನ ಆರು ಜನ ಮಕ್ಕಳು ಮತ್ತು ಪತ್ನಿಗೆ ವಿಷ ಉಣ್ಣಿಸಿ ತಾನು ವಿಷ ಕುಡಿದು ಏಪ್ರಿಲ್ 30, 1945ರಂದು ತಾನಿದ್ದ ಬಂಕರ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ.

ಹಿಟ್ಲರ್, ಗೊಬೆಲ್ಸ್ ಮತ್ತು ಇತರ ನಾಜಿಗಳು ಸೃಷ್ಟಿಸಿದ ಕ್ರೌರ್ಯದ ಪಾಠಗಳನ್ನು ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಈಗಲೂ ಅನುಕರಿಸುವ ಜನ ಇರುವುದು ದುರಂತ. ಇನ್ನಾದರೂ ಗಾಂಧಿ ಚಿಂತನೆಗಳಿಗೆ ಪ್ರಚಾರ ಸಿಕ್ಕಿ, 21ನೆಯ ಶತಮಾನದ ಅವಸಾನವನ್ನು ತಡೆಯಬೇಕಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...