Homeಮುಖಪುಟಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

ಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ದಿನಬೆಳಗಾಯ್ತೆಂದರೆ ಅವರಿವರ ಮನೆ ಅಟ್ಟಿ ಬಾಗಿಲಿಗೆ ಹೋಗಿ, ಮಾತನಾಡಿಸುತ್ತಿದ್ದ ಜುಮ್ಮಿ, ಈಗ ಮನೆಯೊಳಗೇ ಇರಲು ಒಂದೇ ವಾರಕ್ಕೆ ಸಾಕಾಗಿ ಹೋಗಿತ್ತು. ಆಗ ಬಂದ ವಾಟಿಸ್ಸೆ ನೋಡಿದ ಅವಳು, “ಇನ್ನು ಏಟು ದಿನ ಹಿಂಗೆ ಇರಬೇಕ್ಲ ಮನೆ ವಳಗೆ” ಎಂದಳು.

“ಅದನ್ನು ಮೋದಿ ತೀರಮಾನಸ್ತಾನೆ ಕಣಕ್ಕ”

“ಆ ಕೆರೋನ ಕಾಯ್ಲ ಇರೂ ಜಾಗದಲ್ಲಿ ಅಂಗಿರ್ಲಿ ನಾವಾಕ್ಲ ವಳಗಿರಬೇಕು”

“ಯಾಕಿರಬೇಕು ಅಂದ್ರೇ, ಕರೋನ ವೈರಸ್ ಗಾಳಿಲೆ ಬತ್ತದಂತೆ ಕಣಕ್ಕ”

“ಗಾಳಿಲಿ ಬೆಂಗಳೂರಿಂದ ಇಲ್ಲಿಗಂಟ ಬಂದತ್ಲ”

“ಬೆಂಗಳೂರಲ್ಲ ಕಣಕ್ಕ, ನಮಿಗೆ ತುಮಕೂರು ನಿರ‍್ರು, ಇತ್ಲಗೆ ಮೈಸೂರು ನಿರ‍್ರು. ಅಲ್ಯಾವನಾರ ಕೊರೋನಾ ರ‍್ಯಾಸ್ಕಲ್ ಪವರ್ ಪುಲ್ಲಾಗಿ ಸೀನಿಬುಟ್ಟು ಅದೇ ಟೈಮಿಗೆ ಒಂದು ಬಿರುಗಾಳಿ ಬಂದು ಇಲ್ಯಾಸಿ ಹೋದ್ರೆ ನಾವ್ಯಲ್ಲ ಕೊರೋನಾಗಳಾಯ್ತಿವಿ ಅಂತ ಮೋದಿ ಮನೆವಳಗಿರಿ ಅಂದವುನೆ”

“ಅವುನೇನೊ ಇರತನೆ ನಾವಿರದ್ಯಂಗ್ಲಾ, ಸೊಪ್ಪು ಸ್ಯದೆ ನೋಡಬಾರ್ದೆ, ದನಿಕರಗಳ ಮನೆವಳಗೆ ಏಟುದಿನ ಅಂತ ಕಟಿಗಳಿದ. ಹುಲ್ಲು ಕೊಪ್ಪಲಿಗೋಗಿ ಹುಲ್ಲು ತರಬಾರ್ದೆ, ಸೌದೆ ತರಬಾರ್ದೆ ಬೀದಿ ನಲ್ಲಿಲಿ ನೀರತರಬಾರ್ದೆ”

“ನಿನ್ನ ಕಷ್ಟ ಯಾವು ಅವುನಿಗೆ ಗೊತ್ತಿಲ್ಲ ಕಣಕ್ಕ. ಒಟ್ಟಿನಲ್ಲಿ ಮನೆವಳಗಿರಿ ಈಚೆಗೆ ಬರಬ್ಯಾಡಿ ಅಂದವುನೆ”

“ಇದಿನ್ಯಂಥಾ ಕಾಯಿಲನ್ಲ ಇಲ್ಲಿಗಂಟ ನೋಡಿರಲಿಲ್ಲ”

“ನೋಡಕ್ಕೆ ಕಾಣಬೇಕಲ್ಲಕ್ಕ ಅದೂ ದೇವ್ರಂಗೆ ಕಣ್ಣಿಗೆ ಕಾಣದಿಲವೊ. ಅಂಗೆ ಕೊರೋನಾನು ಕಾಣದಿಲ್ಲ”

“ದೇವುರ ಮಾಡಿದ್ರೆ ಉಸರಾಗದಿಲವೇನ್ಲ”

“ಯಕ್ಕಾ. ಈ ಹಾಳು ಕೊರೊನಾ ಅಂದ್ರೆ ಏನು ತಿಳಕಂಡಿದ್ದೀ? ಅದರ ಒಂದೇಟಿಗೆ ನಿಮ್ಮ ತಿರುಪ್ತಿ ತಿಮ್ಮಣ್ಣ, ಧರುಮಸ್ಥಳದ ಮಂಜಣ್ಣ, ಮ್ಯಾಲುಕೋಟೆ ಚಲುವಣ್ಣನೆ ಬಾಗಲಾಯ್ಕಂಡು ಪರಾರಿಯಾಗ್ಯವರೆ.

ಇನ್ನ ಈ ಲೋಕಲ್ ದೇವುರಂತು ಕೊರೋನ ತಗಲಿ ಸತ್ತೇ ಹೋಗಿರಬವುದು. ಯಾಕೆ ಅಂದ್ರೇ ಅವೂ ಕಣ್ಣಿಗೆ ಕಾಣೋದಿಲ್ಲ ಆ ಕೊರೊನಾಗೂ ಕಾಣದಿಲ್ಲ. ಯಲ್ಲ ಶೂನ್ಯ ಸಮಾಚಾರ”

“ಅದಿನ್ಯಂಗೆ, ಬತ್ತೊ’’

“ನಮ್ಮ ಜನ ಹೇಳೊ ಪ್ರಕಾರ, ಅಮೇರಿಕಾದ ಟ್ರಂಪಿನ ಜೊತೆಲೆ ಬತ್ತಂತೆ ಕಣಕ್ಕ’’

“ಅಮೆರಿಕಾದ ಟ್ರಂಕು ಅಂದ್ರೆ ಅವುನ್ಯಾರ್ಲ’’

‘‘ಅವುನು ಮೋದಿ ಪ್ರೆಂಡು ಕಣಕ್ಕ. ಅವುನೊಂಥರ ಇವುನಂಗೆಯಾ. ಇಬ್ರೂ ಪ್ರಂಡು. ನಾನು ಉಗ್ರಿ ಇದ್ದಿವಿ ನೋಡು ಆ ಥರದ ಪ್ರೆಂಡು. ನೀನೊಂಥರ ಸೋನಿಯಾ ಗಾಂಧಿ ಇದ್ದಂಗೆ”

“ಅಣಕ ವಡಿಬ್ಯಾಡ ಮುಂದಕ್ಕೇಳ್ಳ”

“ಆ ಟ್ರಂಪು ಒಂದು ಸತಿಯ ಮೋದಿಯ ಅಮೆರಿಕಕ್ಕೆ ಕರಿಸಿಗಂಡು, ಬಾಸಣ ಮಾಡಿಸಿದನಂತೆ. ಇವುನು ಬರುವಾಗ ನೀನು ಬಾ ನಮ್ಮ ದೇಸ ಯಂಗದೆ ನೋಡು ಅಂದಿದ್ನಂತೆ. ಆಗವುನು ಬತ್ತಿನಿ ನಡಿ ಅಂದ ಅಂಗೆ ಬಂದೇ ಬುಟ್ಟ’

“ಇನ್ನ ಇಲ್ಲೇ ಇದ್ದನೆ”

“ಅವುನ್ಯಾಕಿದ್ದನಕ್ಕ ಆಗ್ಲೆ ಹೋದ, ಅವುನ ಬತ್ತನೆ ಅಂತ ಈ ಕಡೆವು, ಟ್ರಂಪಿಗೆ ಕಾಣದಂಗೆ ಸ್ಲಂನ್ಯಲ್ಲ ತಗಿಸಿ ಅಲ್ಲಿಗೆ ಬಣ್ಣದ ಪರದೆ ಬುಟ್ಟಿದ್ರಂತೆ”

“ಅದ್ಯಾಕೆ”

“ಸಾಮಾನ್ಯವಾಗಿ ಬಡುವುರು ಬಡತನ ಮುಚ್ಚಿಡತರೆ ನೋಡು, ಅಂಗೆ ಈ ಮೋದಿ ನೋಟುಬ್ಯಾನು ಜಿ.ಎಸ್.ಟಿ ತಂದು, ಜನ ಕ್ಯಲಸ ಕಳಕಂಡು ಬಡುವುರಾಗಿ ಟ್ರಂಪು ಬರೋ ಜಾಗದಲ್ಲಿ ಟೆಂಟಾಕಿದ್ದವಂತೆ”

“ಪಾಪ ಇನ್ನೆಲ್ಲಿಗೋದವುಲ’’

“ನೀನು ಪಾಪ ಅಂತಿಕಣಕ್ಕ ಮೋದಿ ಶಾ ನು ಪಾಪ ಅನ್ನಬೇಕಲ್ಲ. ಅದ್ಕೆ ಅವುರು, ಟ್ರಂಪು ಬರೊ ಜಾಗದ ಟೆಂಟ ಬುಲ್ಡೋಜರ್ ಹಾಕಿ ಮಟ್ಟ ಮಾಡಿ, ಅಲ್ಲಿಗೆ ಪರದೆ ಬುಟ್ಟು, ಡೆಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್, ತಾಜ್ ಮಹಲ್ ಚಿತ್ರ ಹಾಕಿದ್ರಂತೆ”

“ಕಡಿಗೂ ಈ ನನ್ನ ಮಕ್ಕಳು ಸಾಬುರು ಕಟ್ಟಿದ್ದ ಸ್ಮಾರಕ ತೋರಿದ್ರೆ ವರತೂ ಇವುರ ಕಟ್ಟಿದ್ದೇನೂ ಇರಲಿಲ್ಲ ನೋಡು” ಎಂದ ಉಗ್ರಿ

‘‘ಇವುರದಿನ್ನ ಲೇಟಲ್ಲವೇನೋ ಇನ್ನ ಸಾವುರಾರು ಗೋರಿ ಕಟ್ಟಬೇಕಾಗ್ಯದೆ. ಅದ್ಕೆ ಕಾಂಗ್ರೆಸ್ಸಿಗೆ ಯಪ್ಪತೊರಸ ಕೊಟ್ಟಿರೊ ನೀವು ನಮಿಗೆ ಯಪ್ಪತ್ತು ತಿಂಗಳನಾರ ಕೊಡಿ ಅಂತ ಮೋದಿ ಕೇಳಿದ್ದ ಗೊತ್ತೆ”

“ಯಪ್ಪತ್ತು ತಿಂಗಳಾಯ್ತಲ್ಲೊ ಆಗ್ಲೆಯ”

“ಅದ್ಕೆ ದೇಸದ ಕತೆನೆ ಮುಗಿತಾ ಅದಲ್ಲೊ”

“ಅದೇನೊ ನಿಜ ಕಣೊ, ಮುಂದಿನ ದಿನ ನ್ಯನಿಸಿಗಂಡ್ರೆ ನ್ಯನಿಸಿಗಳಕ್ಕೆ ಭಯಾಯ್ತದೆ”

“ಅದೇನು ಟ್ರಂಕಿನ ಸುದ್ದಿ ಹೇಳ್ಳ”

‘‘ಸಾರಿ ಕಣಕ್ಕ, ಆ ಟ್ರಂಪು ಬಂದಾಗ್ಲೆ ಕೊರೋನಾ ಬಂದಿರದು ಯಾಕೆ ಅಂದ್ರೆ, ಅಮೆರಿಕ ದೇಸಕ್ಕಾಗ್ಲೆ ಕೊರೊನಾ ಬಂದಿತ್ತಂತೆ. ಅವುನ ಜೊತೆ ಬಂದೋರು, ಅದ ತಂದು ಇಲ್ಲಿ ಬುಟ್ಟು ಹೋದರಂತೆ ಅಮ್ಯಾಲೆ ಹರಡಿಕತ್ತು”

“ಅದಂಗಲ್ಲ ಕಣೊ”

“ಅಂಗೆ ಕಣೊ ಉಗ್ರಿ ಟ್ರಂಪು ಬಂದು ಹೋಗಗಂಟ ಅವುನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕಳುವಾಗ, ಕಣ್ಣಿಗೆ ಕಾಣದ ಕರೊನ ಯಾರಿಗೂ ಕಾಣಲಿಲ್ಲ. ಅವುನು ಹೋದ ಮ್ಯಾಲೆ ಅಟಗಾಸಿಗತ್ತು”

“ಈಗ್ಯಂಗೆ ವಾಸಿ ಮಾಡಿಕಳದು”

“ಮನಿವಳಿಗಿರಬೇಕಂತೆ”

“ಏಟು ದಿನ”

“ತಿರಿಗ ಪ್ರಧಾನಿ ಹೇಳತನೆ, ಅದ ಕಡ್ಡಿರಂಗ ಹೇಳತನೆ. ಅಲ್ಲಿ ಗಂಟ ಕಡ್ಡಿರಂಗ ಹೇಳಿದಂಗ ಕೇಳಬೇಕು”

“ಅವುನ್ಯಾರರ್ಲ”

“ಏ ಅದೊಂದು ಪೋಲಿಬಡ್ಡೆತ್ತದ್ದು ಕಣಕ್ಕ. ತಲಿ ಕೆಟ್ಟೋಗ್ಯದೆ. ಪಬ್ಲಿಕ್ ಟಿ.ವಿ ವಳಗಡೆ ಕುತುಗಂಡು, ಯಾಕ್ರಿ ಈಚಿಗೆ ಬತ್ತಿರಿ. ಮನೆವಳಗಿರಿ ಇಲ್ಲ ನೇಣಾಯ್ಕಂಡು ಸಾಯಿರಿ ಅಂದವುನೆ”

“ಅಂಗಂದ ಆ ಸೂಳೆಮಗನ್ನ ಯಳಕಂಡು ಬಾರ್ಲ ಇಲ್ಲಿ, ಯಕ್ಕಡದಲ್ಲಿ ಹೊಡಿತಿನಿ”

“ಹೋಗ್ಲಿ ಬುಡಕ್ಕ ಪೂರ್ ಬ್ರಾಹ್ಮಿನ್ ಪೆಲೊ”

*****

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...