Homeಮುಖಪುಟಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

ಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ದಿನಬೆಳಗಾಯ್ತೆಂದರೆ ಅವರಿವರ ಮನೆ ಅಟ್ಟಿ ಬಾಗಿಲಿಗೆ ಹೋಗಿ, ಮಾತನಾಡಿಸುತ್ತಿದ್ದ ಜುಮ್ಮಿ, ಈಗ ಮನೆಯೊಳಗೇ ಇರಲು ಒಂದೇ ವಾರಕ್ಕೆ ಸಾಕಾಗಿ ಹೋಗಿತ್ತು. ಆಗ ಬಂದ ವಾಟಿಸ್ಸೆ ನೋಡಿದ ಅವಳು, “ಇನ್ನು ಏಟು ದಿನ ಹಿಂಗೆ ಇರಬೇಕ್ಲ ಮನೆ ವಳಗೆ” ಎಂದಳು.

“ಅದನ್ನು ಮೋದಿ ತೀರಮಾನಸ್ತಾನೆ ಕಣಕ್ಕ”

“ಆ ಕೆರೋನ ಕಾಯ್ಲ ಇರೂ ಜಾಗದಲ್ಲಿ ಅಂಗಿರ್ಲಿ ನಾವಾಕ್ಲ ವಳಗಿರಬೇಕು”

“ಯಾಕಿರಬೇಕು ಅಂದ್ರೇ, ಕರೋನ ವೈರಸ್ ಗಾಳಿಲೆ ಬತ್ತದಂತೆ ಕಣಕ್ಕ”

“ಗಾಳಿಲಿ ಬೆಂಗಳೂರಿಂದ ಇಲ್ಲಿಗಂಟ ಬಂದತ್ಲ”

“ಬೆಂಗಳೂರಲ್ಲ ಕಣಕ್ಕ, ನಮಿಗೆ ತುಮಕೂರು ನಿರ‍್ರು, ಇತ್ಲಗೆ ಮೈಸೂರು ನಿರ‍್ರು. ಅಲ್ಯಾವನಾರ ಕೊರೋನಾ ರ‍್ಯಾಸ್ಕಲ್ ಪವರ್ ಪುಲ್ಲಾಗಿ ಸೀನಿಬುಟ್ಟು ಅದೇ ಟೈಮಿಗೆ ಒಂದು ಬಿರುಗಾಳಿ ಬಂದು ಇಲ್ಯಾಸಿ ಹೋದ್ರೆ ನಾವ್ಯಲ್ಲ ಕೊರೋನಾಗಳಾಯ್ತಿವಿ ಅಂತ ಮೋದಿ ಮನೆವಳಗಿರಿ ಅಂದವುನೆ”

“ಅವುನೇನೊ ಇರತನೆ ನಾವಿರದ್ಯಂಗ್ಲಾ, ಸೊಪ್ಪು ಸ್ಯದೆ ನೋಡಬಾರ್ದೆ, ದನಿಕರಗಳ ಮನೆವಳಗೆ ಏಟುದಿನ ಅಂತ ಕಟಿಗಳಿದ. ಹುಲ್ಲು ಕೊಪ್ಪಲಿಗೋಗಿ ಹುಲ್ಲು ತರಬಾರ್ದೆ, ಸೌದೆ ತರಬಾರ್ದೆ ಬೀದಿ ನಲ್ಲಿಲಿ ನೀರತರಬಾರ್ದೆ”

“ನಿನ್ನ ಕಷ್ಟ ಯಾವು ಅವುನಿಗೆ ಗೊತ್ತಿಲ್ಲ ಕಣಕ್ಕ. ಒಟ್ಟಿನಲ್ಲಿ ಮನೆವಳಗಿರಿ ಈಚೆಗೆ ಬರಬ್ಯಾಡಿ ಅಂದವುನೆ”

“ಇದಿನ್ಯಂಥಾ ಕಾಯಿಲನ್ಲ ಇಲ್ಲಿಗಂಟ ನೋಡಿರಲಿಲ್ಲ”

“ನೋಡಕ್ಕೆ ಕಾಣಬೇಕಲ್ಲಕ್ಕ ಅದೂ ದೇವ್ರಂಗೆ ಕಣ್ಣಿಗೆ ಕಾಣದಿಲವೊ. ಅಂಗೆ ಕೊರೋನಾನು ಕಾಣದಿಲ್ಲ”

“ದೇವುರ ಮಾಡಿದ್ರೆ ಉಸರಾಗದಿಲವೇನ್ಲ”

“ಯಕ್ಕಾ. ಈ ಹಾಳು ಕೊರೊನಾ ಅಂದ್ರೆ ಏನು ತಿಳಕಂಡಿದ್ದೀ? ಅದರ ಒಂದೇಟಿಗೆ ನಿಮ್ಮ ತಿರುಪ್ತಿ ತಿಮ್ಮಣ್ಣ, ಧರುಮಸ್ಥಳದ ಮಂಜಣ್ಣ, ಮ್ಯಾಲುಕೋಟೆ ಚಲುವಣ್ಣನೆ ಬಾಗಲಾಯ್ಕಂಡು ಪರಾರಿಯಾಗ್ಯವರೆ.

ಇನ್ನ ಈ ಲೋಕಲ್ ದೇವುರಂತು ಕೊರೋನ ತಗಲಿ ಸತ್ತೇ ಹೋಗಿರಬವುದು. ಯಾಕೆ ಅಂದ್ರೇ ಅವೂ ಕಣ್ಣಿಗೆ ಕಾಣೋದಿಲ್ಲ ಆ ಕೊರೊನಾಗೂ ಕಾಣದಿಲ್ಲ. ಯಲ್ಲ ಶೂನ್ಯ ಸಮಾಚಾರ”

“ಅದಿನ್ಯಂಗೆ, ಬತ್ತೊ’’

“ನಮ್ಮ ಜನ ಹೇಳೊ ಪ್ರಕಾರ, ಅಮೇರಿಕಾದ ಟ್ರಂಪಿನ ಜೊತೆಲೆ ಬತ್ತಂತೆ ಕಣಕ್ಕ’’

“ಅಮೆರಿಕಾದ ಟ್ರಂಕು ಅಂದ್ರೆ ಅವುನ್ಯಾರ್ಲ’’

‘‘ಅವುನು ಮೋದಿ ಪ್ರೆಂಡು ಕಣಕ್ಕ. ಅವುನೊಂಥರ ಇವುನಂಗೆಯಾ. ಇಬ್ರೂ ಪ್ರಂಡು. ನಾನು ಉಗ್ರಿ ಇದ್ದಿವಿ ನೋಡು ಆ ಥರದ ಪ್ರೆಂಡು. ನೀನೊಂಥರ ಸೋನಿಯಾ ಗಾಂಧಿ ಇದ್ದಂಗೆ”

“ಅಣಕ ವಡಿಬ್ಯಾಡ ಮುಂದಕ್ಕೇಳ್ಳ”

“ಆ ಟ್ರಂಪು ಒಂದು ಸತಿಯ ಮೋದಿಯ ಅಮೆರಿಕಕ್ಕೆ ಕರಿಸಿಗಂಡು, ಬಾಸಣ ಮಾಡಿಸಿದನಂತೆ. ಇವುನು ಬರುವಾಗ ನೀನು ಬಾ ನಮ್ಮ ದೇಸ ಯಂಗದೆ ನೋಡು ಅಂದಿದ್ನಂತೆ. ಆಗವುನು ಬತ್ತಿನಿ ನಡಿ ಅಂದ ಅಂಗೆ ಬಂದೇ ಬುಟ್ಟ’

“ಇನ್ನ ಇಲ್ಲೇ ಇದ್ದನೆ”

“ಅವುನ್ಯಾಕಿದ್ದನಕ್ಕ ಆಗ್ಲೆ ಹೋದ, ಅವುನ ಬತ್ತನೆ ಅಂತ ಈ ಕಡೆವು, ಟ್ರಂಪಿಗೆ ಕಾಣದಂಗೆ ಸ್ಲಂನ್ಯಲ್ಲ ತಗಿಸಿ ಅಲ್ಲಿಗೆ ಬಣ್ಣದ ಪರದೆ ಬುಟ್ಟಿದ್ರಂತೆ”

“ಅದ್ಯಾಕೆ”

“ಸಾಮಾನ್ಯವಾಗಿ ಬಡುವುರು ಬಡತನ ಮುಚ್ಚಿಡತರೆ ನೋಡು, ಅಂಗೆ ಈ ಮೋದಿ ನೋಟುಬ್ಯಾನು ಜಿ.ಎಸ್.ಟಿ ತಂದು, ಜನ ಕ್ಯಲಸ ಕಳಕಂಡು ಬಡುವುರಾಗಿ ಟ್ರಂಪು ಬರೋ ಜಾಗದಲ್ಲಿ ಟೆಂಟಾಕಿದ್ದವಂತೆ”

“ಪಾಪ ಇನ್ನೆಲ್ಲಿಗೋದವುಲ’’

“ನೀನು ಪಾಪ ಅಂತಿಕಣಕ್ಕ ಮೋದಿ ಶಾ ನು ಪಾಪ ಅನ್ನಬೇಕಲ್ಲ. ಅದ್ಕೆ ಅವುರು, ಟ್ರಂಪು ಬರೊ ಜಾಗದ ಟೆಂಟ ಬುಲ್ಡೋಜರ್ ಹಾಕಿ ಮಟ್ಟ ಮಾಡಿ, ಅಲ್ಲಿಗೆ ಪರದೆ ಬುಟ್ಟು, ಡೆಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್, ತಾಜ್ ಮಹಲ್ ಚಿತ್ರ ಹಾಕಿದ್ರಂತೆ”

“ಕಡಿಗೂ ಈ ನನ್ನ ಮಕ್ಕಳು ಸಾಬುರು ಕಟ್ಟಿದ್ದ ಸ್ಮಾರಕ ತೋರಿದ್ರೆ ವರತೂ ಇವುರ ಕಟ್ಟಿದ್ದೇನೂ ಇರಲಿಲ್ಲ ನೋಡು” ಎಂದ ಉಗ್ರಿ

‘‘ಇವುರದಿನ್ನ ಲೇಟಲ್ಲವೇನೋ ಇನ್ನ ಸಾವುರಾರು ಗೋರಿ ಕಟ್ಟಬೇಕಾಗ್ಯದೆ. ಅದ್ಕೆ ಕಾಂಗ್ರೆಸ್ಸಿಗೆ ಯಪ್ಪತೊರಸ ಕೊಟ್ಟಿರೊ ನೀವು ನಮಿಗೆ ಯಪ್ಪತ್ತು ತಿಂಗಳನಾರ ಕೊಡಿ ಅಂತ ಮೋದಿ ಕೇಳಿದ್ದ ಗೊತ್ತೆ”

“ಯಪ್ಪತ್ತು ತಿಂಗಳಾಯ್ತಲ್ಲೊ ಆಗ್ಲೆಯ”

“ಅದ್ಕೆ ದೇಸದ ಕತೆನೆ ಮುಗಿತಾ ಅದಲ್ಲೊ”

“ಅದೇನೊ ನಿಜ ಕಣೊ, ಮುಂದಿನ ದಿನ ನ್ಯನಿಸಿಗಂಡ್ರೆ ನ್ಯನಿಸಿಗಳಕ್ಕೆ ಭಯಾಯ್ತದೆ”

“ಅದೇನು ಟ್ರಂಕಿನ ಸುದ್ದಿ ಹೇಳ್ಳ”

‘‘ಸಾರಿ ಕಣಕ್ಕ, ಆ ಟ್ರಂಪು ಬಂದಾಗ್ಲೆ ಕೊರೋನಾ ಬಂದಿರದು ಯಾಕೆ ಅಂದ್ರೆ, ಅಮೆರಿಕ ದೇಸಕ್ಕಾಗ್ಲೆ ಕೊರೊನಾ ಬಂದಿತ್ತಂತೆ. ಅವುನ ಜೊತೆ ಬಂದೋರು, ಅದ ತಂದು ಇಲ್ಲಿ ಬುಟ್ಟು ಹೋದರಂತೆ ಅಮ್ಯಾಲೆ ಹರಡಿಕತ್ತು”

“ಅದಂಗಲ್ಲ ಕಣೊ”

“ಅಂಗೆ ಕಣೊ ಉಗ್ರಿ ಟ್ರಂಪು ಬಂದು ಹೋಗಗಂಟ ಅವುನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕಳುವಾಗ, ಕಣ್ಣಿಗೆ ಕಾಣದ ಕರೊನ ಯಾರಿಗೂ ಕಾಣಲಿಲ್ಲ. ಅವುನು ಹೋದ ಮ್ಯಾಲೆ ಅಟಗಾಸಿಗತ್ತು”

“ಈಗ್ಯಂಗೆ ವಾಸಿ ಮಾಡಿಕಳದು”

“ಮನಿವಳಿಗಿರಬೇಕಂತೆ”

“ಏಟು ದಿನ”

“ತಿರಿಗ ಪ್ರಧಾನಿ ಹೇಳತನೆ, ಅದ ಕಡ್ಡಿರಂಗ ಹೇಳತನೆ. ಅಲ್ಲಿ ಗಂಟ ಕಡ್ಡಿರಂಗ ಹೇಳಿದಂಗ ಕೇಳಬೇಕು”

“ಅವುನ್ಯಾರರ್ಲ”

“ಏ ಅದೊಂದು ಪೋಲಿಬಡ್ಡೆತ್ತದ್ದು ಕಣಕ್ಕ. ತಲಿ ಕೆಟ್ಟೋಗ್ಯದೆ. ಪಬ್ಲಿಕ್ ಟಿ.ವಿ ವಳಗಡೆ ಕುತುಗಂಡು, ಯಾಕ್ರಿ ಈಚಿಗೆ ಬತ್ತಿರಿ. ಮನೆವಳಗಿರಿ ಇಲ್ಲ ನೇಣಾಯ್ಕಂಡು ಸಾಯಿರಿ ಅಂದವುನೆ”

“ಅಂಗಂದ ಆ ಸೂಳೆಮಗನ್ನ ಯಳಕಂಡು ಬಾರ್ಲ ಇಲ್ಲಿ, ಯಕ್ಕಡದಲ್ಲಿ ಹೊಡಿತಿನಿ”

“ಹೋಗ್ಲಿ ಬುಡಕ್ಕ ಪೂರ್ ಬ್ರಾಹ್ಮಿನ್ ಪೆಲೊ”

*****

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...