Homeಮುಖಪುಟಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

ಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ದಿನಬೆಳಗಾಯ್ತೆಂದರೆ ಅವರಿವರ ಮನೆ ಅಟ್ಟಿ ಬಾಗಿಲಿಗೆ ಹೋಗಿ, ಮಾತನಾಡಿಸುತ್ತಿದ್ದ ಜುಮ್ಮಿ, ಈಗ ಮನೆಯೊಳಗೇ ಇರಲು ಒಂದೇ ವಾರಕ್ಕೆ ಸಾಕಾಗಿ ಹೋಗಿತ್ತು. ಆಗ ಬಂದ ವಾಟಿಸ್ಸೆ ನೋಡಿದ ಅವಳು, “ಇನ್ನು ಏಟು ದಿನ ಹಿಂಗೆ ಇರಬೇಕ್ಲ ಮನೆ ವಳಗೆ” ಎಂದಳು.

“ಅದನ್ನು ಮೋದಿ ತೀರಮಾನಸ್ತಾನೆ ಕಣಕ್ಕ”

“ಆ ಕೆರೋನ ಕಾಯ್ಲ ಇರೂ ಜಾಗದಲ್ಲಿ ಅಂಗಿರ್ಲಿ ನಾವಾಕ್ಲ ವಳಗಿರಬೇಕು”

“ಯಾಕಿರಬೇಕು ಅಂದ್ರೇ, ಕರೋನ ವೈರಸ್ ಗಾಳಿಲೆ ಬತ್ತದಂತೆ ಕಣಕ್ಕ”

“ಗಾಳಿಲಿ ಬೆಂಗಳೂರಿಂದ ಇಲ್ಲಿಗಂಟ ಬಂದತ್ಲ”

“ಬೆಂಗಳೂರಲ್ಲ ಕಣಕ್ಕ, ನಮಿಗೆ ತುಮಕೂರು ನಿರ‍್ರು, ಇತ್ಲಗೆ ಮೈಸೂರು ನಿರ‍್ರು. ಅಲ್ಯಾವನಾರ ಕೊರೋನಾ ರ‍್ಯಾಸ್ಕಲ್ ಪವರ್ ಪುಲ್ಲಾಗಿ ಸೀನಿಬುಟ್ಟು ಅದೇ ಟೈಮಿಗೆ ಒಂದು ಬಿರುಗಾಳಿ ಬಂದು ಇಲ್ಯಾಸಿ ಹೋದ್ರೆ ನಾವ್ಯಲ್ಲ ಕೊರೋನಾಗಳಾಯ್ತಿವಿ ಅಂತ ಮೋದಿ ಮನೆವಳಗಿರಿ ಅಂದವುನೆ”

“ಅವುನೇನೊ ಇರತನೆ ನಾವಿರದ್ಯಂಗ್ಲಾ, ಸೊಪ್ಪು ಸ್ಯದೆ ನೋಡಬಾರ್ದೆ, ದನಿಕರಗಳ ಮನೆವಳಗೆ ಏಟುದಿನ ಅಂತ ಕಟಿಗಳಿದ. ಹುಲ್ಲು ಕೊಪ್ಪಲಿಗೋಗಿ ಹುಲ್ಲು ತರಬಾರ್ದೆ, ಸೌದೆ ತರಬಾರ್ದೆ ಬೀದಿ ನಲ್ಲಿಲಿ ನೀರತರಬಾರ್ದೆ”

“ನಿನ್ನ ಕಷ್ಟ ಯಾವು ಅವುನಿಗೆ ಗೊತ್ತಿಲ್ಲ ಕಣಕ್ಕ. ಒಟ್ಟಿನಲ್ಲಿ ಮನೆವಳಗಿರಿ ಈಚೆಗೆ ಬರಬ್ಯಾಡಿ ಅಂದವುನೆ”

“ಇದಿನ್ಯಂಥಾ ಕಾಯಿಲನ್ಲ ಇಲ್ಲಿಗಂಟ ನೋಡಿರಲಿಲ್ಲ”

“ನೋಡಕ್ಕೆ ಕಾಣಬೇಕಲ್ಲಕ್ಕ ಅದೂ ದೇವ್ರಂಗೆ ಕಣ್ಣಿಗೆ ಕಾಣದಿಲವೊ. ಅಂಗೆ ಕೊರೋನಾನು ಕಾಣದಿಲ್ಲ”

“ದೇವುರ ಮಾಡಿದ್ರೆ ಉಸರಾಗದಿಲವೇನ್ಲ”

“ಯಕ್ಕಾ. ಈ ಹಾಳು ಕೊರೊನಾ ಅಂದ್ರೆ ಏನು ತಿಳಕಂಡಿದ್ದೀ? ಅದರ ಒಂದೇಟಿಗೆ ನಿಮ್ಮ ತಿರುಪ್ತಿ ತಿಮ್ಮಣ್ಣ, ಧರುಮಸ್ಥಳದ ಮಂಜಣ್ಣ, ಮ್ಯಾಲುಕೋಟೆ ಚಲುವಣ್ಣನೆ ಬಾಗಲಾಯ್ಕಂಡು ಪರಾರಿಯಾಗ್ಯವರೆ.

ಇನ್ನ ಈ ಲೋಕಲ್ ದೇವುರಂತು ಕೊರೋನ ತಗಲಿ ಸತ್ತೇ ಹೋಗಿರಬವುದು. ಯಾಕೆ ಅಂದ್ರೇ ಅವೂ ಕಣ್ಣಿಗೆ ಕಾಣೋದಿಲ್ಲ ಆ ಕೊರೊನಾಗೂ ಕಾಣದಿಲ್ಲ. ಯಲ್ಲ ಶೂನ್ಯ ಸಮಾಚಾರ”

“ಅದಿನ್ಯಂಗೆ, ಬತ್ತೊ’’

“ನಮ್ಮ ಜನ ಹೇಳೊ ಪ್ರಕಾರ, ಅಮೇರಿಕಾದ ಟ್ರಂಪಿನ ಜೊತೆಲೆ ಬತ್ತಂತೆ ಕಣಕ್ಕ’’

“ಅಮೆರಿಕಾದ ಟ್ರಂಕು ಅಂದ್ರೆ ಅವುನ್ಯಾರ್ಲ’’

‘‘ಅವುನು ಮೋದಿ ಪ್ರೆಂಡು ಕಣಕ್ಕ. ಅವುನೊಂಥರ ಇವುನಂಗೆಯಾ. ಇಬ್ರೂ ಪ್ರಂಡು. ನಾನು ಉಗ್ರಿ ಇದ್ದಿವಿ ನೋಡು ಆ ಥರದ ಪ್ರೆಂಡು. ನೀನೊಂಥರ ಸೋನಿಯಾ ಗಾಂಧಿ ಇದ್ದಂಗೆ”

“ಅಣಕ ವಡಿಬ್ಯಾಡ ಮುಂದಕ್ಕೇಳ್ಳ”

“ಆ ಟ್ರಂಪು ಒಂದು ಸತಿಯ ಮೋದಿಯ ಅಮೆರಿಕಕ್ಕೆ ಕರಿಸಿಗಂಡು, ಬಾಸಣ ಮಾಡಿಸಿದನಂತೆ. ಇವುನು ಬರುವಾಗ ನೀನು ಬಾ ನಮ್ಮ ದೇಸ ಯಂಗದೆ ನೋಡು ಅಂದಿದ್ನಂತೆ. ಆಗವುನು ಬತ್ತಿನಿ ನಡಿ ಅಂದ ಅಂಗೆ ಬಂದೇ ಬುಟ್ಟ’

“ಇನ್ನ ಇಲ್ಲೇ ಇದ್ದನೆ”

“ಅವುನ್ಯಾಕಿದ್ದನಕ್ಕ ಆಗ್ಲೆ ಹೋದ, ಅವುನ ಬತ್ತನೆ ಅಂತ ಈ ಕಡೆವು, ಟ್ರಂಪಿಗೆ ಕಾಣದಂಗೆ ಸ್ಲಂನ್ಯಲ್ಲ ತಗಿಸಿ ಅಲ್ಲಿಗೆ ಬಣ್ಣದ ಪರದೆ ಬುಟ್ಟಿದ್ರಂತೆ”

“ಅದ್ಯಾಕೆ”

“ಸಾಮಾನ್ಯವಾಗಿ ಬಡುವುರು ಬಡತನ ಮುಚ್ಚಿಡತರೆ ನೋಡು, ಅಂಗೆ ಈ ಮೋದಿ ನೋಟುಬ್ಯಾನು ಜಿ.ಎಸ್.ಟಿ ತಂದು, ಜನ ಕ್ಯಲಸ ಕಳಕಂಡು ಬಡುವುರಾಗಿ ಟ್ರಂಪು ಬರೋ ಜಾಗದಲ್ಲಿ ಟೆಂಟಾಕಿದ್ದವಂತೆ”

“ಪಾಪ ಇನ್ನೆಲ್ಲಿಗೋದವುಲ’’

“ನೀನು ಪಾಪ ಅಂತಿಕಣಕ್ಕ ಮೋದಿ ಶಾ ನು ಪಾಪ ಅನ್ನಬೇಕಲ್ಲ. ಅದ್ಕೆ ಅವುರು, ಟ್ರಂಪು ಬರೊ ಜಾಗದ ಟೆಂಟ ಬುಲ್ಡೋಜರ್ ಹಾಕಿ ಮಟ್ಟ ಮಾಡಿ, ಅಲ್ಲಿಗೆ ಪರದೆ ಬುಟ್ಟು, ಡೆಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್, ತಾಜ್ ಮಹಲ್ ಚಿತ್ರ ಹಾಕಿದ್ರಂತೆ”

“ಕಡಿಗೂ ಈ ನನ್ನ ಮಕ್ಕಳು ಸಾಬುರು ಕಟ್ಟಿದ್ದ ಸ್ಮಾರಕ ತೋರಿದ್ರೆ ವರತೂ ಇವುರ ಕಟ್ಟಿದ್ದೇನೂ ಇರಲಿಲ್ಲ ನೋಡು” ಎಂದ ಉಗ್ರಿ

‘‘ಇವುರದಿನ್ನ ಲೇಟಲ್ಲವೇನೋ ಇನ್ನ ಸಾವುರಾರು ಗೋರಿ ಕಟ್ಟಬೇಕಾಗ್ಯದೆ. ಅದ್ಕೆ ಕಾಂಗ್ರೆಸ್ಸಿಗೆ ಯಪ್ಪತೊರಸ ಕೊಟ್ಟಿರೊ ನೀವು ನಮಿಗೆ ಯಪ್ಪತ್ತು ತಿಂಗಳನಾರ ಕೊಡಿ ಅಂತ ಮೋದಿ ಕೇಳಿದ್ದ ಗೊತ್ತೆ”

“ಯಪ್ಪತ್ತು ತಿಂಗಳಾಯ್ತಲ್ಲೊ ಆಗ್ಲೆಯ”

“ಅದ್ಕೆ ದೇಸದ ಕತೆನೆ ಮುಗಿತಾ ಅದಲ್ಲೊ”

“ಅದೇನೊ ನಿಜ ಕಣೊ, ಮುಂದಿನ ದಿನ ನ್ಯನಿಸಿಗಂಡ್ರೆ ನ್ಯನಿಸಿಗಳಕ್ಕೆ ಭಯಾಯ್ತದೆ”

“ಅದೇನು ಟ್ರಂಕಿನ ಸುದ್ದಿ ಹೇಳ್ಳ”

‘‘ಸಾರಿ ಕಣಕ್ಕ, ಆ ಟ್ರಂಪು ಬಂದಾಗ್ಲೆ ಕೊರೋನಾ ಬಂದಿರದು ಯಾಕೆ ಅಂದ್ರೆ, ಅಮೆರಿಕ ದೇಸಕ್ಕಾಗ್ಲೆ ಕೊರೊನಾ ಬಂದಿತ್ತಂತೆ. ಅವುನ ಜೊತೆ ಬಂದೋರು, ಅದ ತಂದು ಇಲ್ಲಿ ಬುಟ್ಟು ಹೋದರಂತೆ ಅಮ್ಯಾಲೆ ಹರಡಿಕತ್ತು”

“ಅದಂಗಲ್ಲ ಕಣೊ”

“ಅಂಗೆ ಕಣೊ ಉಗ್ರಿ ಟ್ರಂಪು ಬಂದು ಹೋಗಗಂಟ ಅವುನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕಳುವಾಗ, ಕಣ್ಣಿಗೆ ಕಾಣದ ಕರೊನ ಯಾರಿಗೂ ಕಾಣಲಿಲ್ಲ. ಅವುನು ಹೋದ ಮ್ಯಾಲೆ ಅಟಗಾಸಿಗತ್ತು”

“ಈಗ್ಯಂಗೆ ವಾಸಿ ಮಾಡಿಕಳದು”

“ಮನಿವಳಿಗಿರಬೇಕಂತೆ”

“ಏಟು ದಿನ”

“ತಿರಿಗ ಪ್ರಧಾನಿ ಹೇಳತನೆ, ಅದ ಕಡ್ಡಿರಂಗ ಹೇಳತನೆ. ಅಲ್ಲಿ ಗಂಟ ಕಡ್ಡಿರಂಗ ಹೇಳಿದಂಗ ಕೇಳಬೇಕು”

“ಅವುನ್ಯಾರರ್ಲ”

“ಏ ಅದೊಂದು ಪೋಲಿಬಡ್ಡೆತ್ತದ್ದು ಕಣಕ್ಕ. ತಲಿ ಕೆಟ್ಟೋಗ್ಯದೆ. ಪಬ್ಲಿಕ್ ಟಿ.ವಿ ವಳಗಡೆ ಕುತುಗಂಡು, ಯಾಕ್ರಿ ಈಚಿಗೆ ಬತ್ತಿರಿ. ಮನೆವಳಗಿರಿ ಇಲ್ಲ ನೇಣಾಯ್ಕಂಡು ಸಾಯಿರಿ ಅಂದವುನೆ”

“ಅಂಗಂದ ಆ ಸೂಳೆಮಗನ್ನ ಯಳಕಂಡು ಬಾರ್ಲ ಇಲ್ಲಿ, ಯಕ್ಕಡದಲ್ಲಿ ಹೊಡಿತಿನಿ”

“ಹೋಗ್ಲಿ ಬುಡಕ್ಕ ಪೂರ್ ಬ್ರಾಹ್ಮಿನ್ ಪೆಲೊ”

*****

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...