Homeಮುಖಪುಟಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

ಟ್ರಂಪು ಬಂದಾಗ್ಲೆ ಕರೋನ ಬತ್ತಂತೆ : ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ದಿನಬೆಳಗಾಯ್ತೆಂದರೆ ಅವರಿವರ ಮನೆ ಅಟ್ಟಿ ಬಾಗಿಲಿಗೆ ಹೋಗಿ, ಮಾತನಾಡಿಸುತ್ತಿದ್ದ ಜುಮ್ಮಿ, ಈಗ ಮನೆಯೊಳಗೇ ಇರಲು ಒಂದೇ ವಾರಕ್ಕೆ ಸಾಕಾಗಿ ಹೋಗಿತ್ತು. ಆಗ ಬಂದ ವಾಟಿಸ್ಸೆ ನೋಡಿದ ಅವಳು, “ಇನ್ನು ಏಟು ದಿನ ಹಿಂಗೆ ಇರಬೇಕ್ಲ ಮನೆ ವಳಗೆ” ಎಂದಳು.

“ಅದನ್ನು ಮೋದಿ ತೀರಮಾನಸ್ತಾನೆ ಕಣಕ್ಕ”

“ಆ ಕೆರೋನ ಕಾಯ್ಲ ಇರೂ ಜಾಗದಲ್ಲಿ ಅಂಗಿರ್ಲಿ ನಾವಾಕ್ಲ ವಳಗಿರಬೇಕು”

“ಯಾಕಿರಬೇಕು ಅಂದ್ರೇ, ಕರೋನ ವೈರಸ್ ಗಾಳಿಲೆ ಬತ್ತದಂತೆ ಕಣಕ್ಕ”

“ಗಾಳಿಲಿ ಬೆಂಗಳೂರಿಂದ ಇಲ್ಲಿಗಂಟ ಬಂದತ್ಲ”

“ಬೆಂಗಳೂರಲ್ಲ ಕಣಕ್ಕ, ನಮಿಗೆ ತುಮಕೂರು ನಿರ‍್ರು, ಇತ್ಲಗೆ ಮೈಸೂರು ನಿರ‍್ರು. ಅಲ್ಯಾವನಾರ ಕೊರೋನಾ ರ‍್ಯಾಸ್ಕಲ್ ಪವರ್ ಪುಲ್ಲಾಗಿ ಸೀನಿಬುಟ್ಟು ಅದೇ ಟೈಮಿಗೆ ಒಂದು ಬಿರುಗಾಳಿ ಬಂದು ಇಲ್ಯಾಸಿ ಹೋದ್ರೆ ನಾವ್ಯಲ್ಲ ಕೊರೋನಾಗಳಾಯ್ತಿವಿ ಅಂತ ಮೋದಿ ಮನೆವಳಗಿರಿ ಅಂದವುನೆ”

“ಅವುನೇನೊ ಇರತನೆ ನಾವಿರದ್ಯಂಗ್ಲಾ, ಸೊಪ್ಪು ಸ್ಯದೆ ನೋಡಬಾರ್ದೆ, ದನಿಕರಗಳ ಮನೆವಳಗೆ ಏಟುದಿನ ಅಂತ ಕಟಿಗಳಿದ. ಹುಲ್ಲು ಕೊಪ್ಪಲಿಗೋಗಿ ಹುಲ್ಲು ತರಬಾರ್ದೆ, ಸೌದೆ ತರಬಾರ್ದೆ ಬೀದಿ ನಲ್ಲಿಲಿ ನೀರತರಬಾರ್ದೆ”

“ನಿನ್ನ ಕಷ್ಟ ಯಾವು ಅವುನಿಗೆ ಗೊತ್ತಿಲ್ಲ ಕಣಕ್ಕ. ಒಟ್ಟಿನಲ್ಲಿ ಮನೆವಳಗಿರಿ ಈಚೆಗೆ ಬರಬ್ಯಾಡಿ ಅಂದವುನೆ”

“ಇದಿನ್ಯಂಥಾ ಕಾಯಿಲನ್ಲ ಇಲ್ಲಿಗಂಟ ನೋಡಿರಲಿಲ್ಲ”

“ನೋಡಕ್ಕೆ ಕಾಣಬೇಕಲ್ಲಕ್ಕ ಅದೂ ದೇವ್ರಂಗೆ ಕಣ್ಣಿಗೆ ಕಾಣದಿಲವೊ. ಅಂಗೆ ಕೊರೋನಾನು ಕಾಣದಿಲ್ಲ”

“ದೇವುರ ಮಾಡಿದ್ರೆ ಉಸರಾಗದಿಲವೇನ್ಲ”

“ಯಕ್ಕಾ. ಈ ಹಾಳು ಕೊರೊನಾ ಅಂದ್ರೆ ಏನು ತಿಳಕಂಡಿದ್ದೀ? ಅದರ ಒಂದೇಟಿಗೆ ನಿಮ್ಮ ತಿರುಪ್ತಿ ತಿಮ್ಮಣ್ಣ, ಧರುಮಸ್ಥಳದ ಮಂಜಣ್ಣ, ಮ್ಯಾಲುಕೋಟೆ ಚಲುವಣ್ಣನೆ ಬಾಗಲಾಯ್ಕಂಡು ಪರಾರಿಯಾಗ್ಯವರೆ.

ಇನ್ನ ಈ ಲೋಕಲ್ ದೇವುರಂತು ಕೊರೋನ ತಗಲಿ ಸತ್ತೇ ಹೋಗಿರಬವುದು. ಯಾಕೆ ಅಂದ್ರೇ ಅವೂ ಕಣ್ಣಿಗೆ ಕಾಣೋದಿಲ್ಲ ಆ ಕೊರೊನಾಗೂ ಕಾಣದಿಲ್ಲ. ಯಲ್ಲ ಶೂನ್ಯ ಸಮಾಚಾರ”

“ಅದಿನ್ಯಂಗೆ, ಬತ್ತೊ’’

“ನಮ್ಮ ಜನ ಹೇಳೊ ಪ್ರಕಾರ, ಅಮೇರಿಕಾದ ಟ್ರಂಪಿನ ಜೊತೆಲೆ ಬತ್ತಂತೆ ಕಣಕ್ಕ’’

“ಅಮೆರಿಕಾದ ಟ್ರಂಕು ಅಂದ್ರೆ ಅವುನ್ಯಾರ್ಲ’’

‘‘ಅವುನು ಮೋದಿ ಪ್ರೆಂಡು ಕಣಕ್ಕ. ಅವುನೊಂಥರ ಇವುನಂಗೆಯಾ. ಇಬ್ರೂ ಪ್ರಂಡು. ನಾನು ಉಗ್ರಿ ಇದ್ದಿವಿ ನೋಡು ಆ ಥರದ ಪ್ರೆಂಡು. ನೀನೊಂಥರ ಸೋನಿಯಾ ಗಾಂಧಿ ಇದ್ದಂಗೆ”

“ಅಣಕ ವಡಿಬ್ಯಾಡ ಮುಂದಕ್ಕೇಳ್ಳ”

“ಆ ಟ್ರಂಪು ಒಂದು ಸತಿಯ ಮೋದಿಯ ಅಮೆರಿಕಕ್ಕೆ ಕರಿಸಿಗಂಡು, ಬಾಸಣ ಮಾಡಿಸಿದನಂತೆ. ಇವುನು ಬರುವಾಗ ನೀನು ಬಾ ನಮ್ಮ ದೇಸ ಯಂಗದೆ ನೋಡು ಅಂದಿದ್ನಂತೆ. ಆಗವುನು ಬತ್ತಿನಿ ನಡಿ ಅಂದ ಅಂಗೆ ಬಂದೇ ಬುಟ್ಟ’

“ಇನ್ನ ಇಲ್ಲೇ ಇದ್ದನೆ”

“ಅವುನ್ಯಾಕಿದ್ದನಕ್ಕ ಆಗ್ಲೆ ಹೋದ, ಅವುನ ಬತ್ತನೆ ಅಂತ ಈ ಕಡೆವು, ಟ್ರಂಪಿಗೆ ಕಾಣದಂಗೆ ಸ್ಲಂನ್ಯಲ್ಲ ತಗಿಸಿ ಅಲ್ಲಿಗೆ ಬಣ್ಣದ ಪರದೆ ಬುಟ್ಟಿದ್ರಂತೆ”

“ಅದ್ಯಾಕೆ”

“ಸಾಮಾನ್ಯವಾಗಿ ಬಡುವುರು ಬಡತನ ಮುಚ್ಚಿಡತರೆ ನೋಡು, ಅಂಗೆ ಈ ಮೋದಿ ನೋಟುಬ್ಯಾನು ಜಿ.ಎಸ್.ಟಿ ತಂದು, ಜನ ಕ್ಯಲಸ ಕಳಕಂಡು ಬಡುವುರಾಗಿ ಟ್ರಂಪು ಬರೋ ಜಾಗದಲ್ಲಿ ಟೆಂಟಾಕಿದ್ದವಂತೆ”

“ಪಾಪ ಇನ್ನೆಲ್ಲಿಗೋದವುಲ’’

“ನೀನು ಪಾಪ ಅಂತಿಕಣಕ್ಕ ಮೋದಿ ಶಾ ನು ಪಾಪ ಅನ್ನಬೇಕಲ್ಲ. ಅದ್ಕೆ ಅವುರು, ಟ್ರಂಪು ಬರೊ ಜಾಗದ ಟೆಂಟ ಬುಲ್ಡೋಜರ್ ಹಾಕಿ ಮಟ್ಟ ಮಾಡಿ, ಅಲ್ಲಿಗೆ ಪರದೆ ಬುಟ್ಟು, ಡೆಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್, ತಾಜ್ ಮಹಲ್ ಚಿತ್ರ ಹಾಕಿದ್ರಂತೆ”

“ಕಡಿಗೂ ಈ ನನ್ನ ಮಕ್ಕಳು ಸಾಬುರು ಕಟ್ಟಿದ್ದ ಸ್ಮಾರಕ ತೋರಿದ್ರೆ ವರತೂ ಇವುರ ಕಟ್ಟಿದ್ದೇನೂ ಇರಲಿಲ್ಲ ನೋಡು” ಎಂದ ಉಗ್ರಿ

‘‘ಇವುರದಿನ್ನ ಲೇಟಲ್ಲವೇನೋ ಇನ್ನ ಸಾವುರಾರು ಗೋರಿ ಕಟ್ಟಬೇಕಾಗ್ಯದೆ. ಅದ್ಕೆ ಕಾಂಗ್ರೆಸ್ಸಿಗೆ ಯಪ್ಪತೊರಸ ಕೊಟ್ಟಿರೊ ನೀವು ನಮಿಗೆ ಯಪ್ಪತ್ತು ತಿಂಗಳನಾರ ಕೊಡಿ ಅಂತ ಮೋದಿ ಕೇಳಿದ್ದ ಗೊತ್ತೆ”

“ಯಪ್ಪತ್ತು ತಿಂಗಳಾಯ್ತಲ್ಲೊ ಆಗ್ಲೆಯ”

“ಅದ್ಕೆ ದೇಸದ ಕತೆನೆ ಮುಗಿತಾ ಅದಲ್ಲೊ”

“ಅದೇನೊ ನಿಜ ಕಣೊ, ಮುಂದಿನ ದಿನ ನ್ಯನಿಸಿಗಂಡ್ರೆ ನ್ಯನಿಸಿಗಳಕ್ಕೆ ಭಯಾಯ್ತದೆ”

“ಅದೇನು ಟ್ರಂಕಿನ ಸುದ್ದಿ ಹೇಳ್ಳ”

‘‘ಸಾರಿ ಕಣಕ್ಕ, ಆ ಟ್ರಂಪು ಬಂದಾಗ್ಲೆ ಕೊರೋನಾ ಬಂದಿರದು ಯಾಕೆ ಅಂದ್ರೆ, ಅಮೆರಿಕ ದೇಸಕ್ಕಾಗ್ಲೆ ಕೊರೊನಾ ಬಂದಿತ್ತಂತೆ. ಅವುನ ಜೊತೆ ಬಂದೋರು, ಅದ ತಂದು ಇಲ್ಲಿ ಬುಟ್ಟು ಹೋದರಂತೆ ಅಮ್ಯಾಲೆ ಹರಡಿಕತ್ತು”

“ಅದಂಗಲ್ಲ ಕಣೊ”

“ಅಂಗೆ ಕಣೊ ಉಗ್ರಿ ಟ್ರಂಪು ಬಂದು ಹೋಗಗಂಟ ಅವುನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕಳುವಾಗ, ಕಣ್ಣಿಗೆ ಕಾಣದ ಕರೊನ ಯಾರಿಗೂ ಕಾಣಲಿಲ್ಲ. ಅವುನು ಹೋದ ಮ್ಯಾಲೆ ಅಟಗಾಸಿಗತ್ತು”

“ಈಗ್ಯಂಗೆ ವಾಸಿ ಮಾಡಿಕಳದು”

“ಮನಿವಳಿಗಿರಬೇಕಂತೆ”

“ಏಟು ದಿನ”

“ತಿರಿಗ ಪ್ರಧಾನಿ ಹೇಳತನೆ, ಅದ ಕಡ್ಡಿರಂಗ ಹೇಳತನೆ. ಅಲ್ಲಿ ಗಂಟ ಕಡ್ಡಿರಂಗ ಹೇಳಿದಂಗ ಕೇಳಬೇಕು”

“ಅವುನ್ಯಾರರ್ಲ”

“ಏ ಅದೊಂದು ಪೋಲಿಬಡ್ಡೆತ್ತದ್ದು ಕಣಕ್ಕ. ತಲಿ ಕೆಟ್ಟೋಗ್ಯದೆ. ಪಬ್ಲಿಕ್ ಟಿ.ವಿ ವಳಗಡೆ ಕುತುಗಂಡು, ಯಾಕ್ರಿ ಈಚಿಗೆ ಬತ್ತಿರಿ. ಮನೆವಳಗಿರಿ ಇಲ್ಲ ನೇಣಾಯ್ಕಂಡು ಸಾಯಿರಿ ಅಂದವುನೆ”

“ಅಂಗಂದ ಆ ಸೂಳೆಮಗನ್ನ ಯಳಕಂಡು ಬಾರ್ಲ ಇಲ್ಲಿ, ಯಕ್ಕಡದಲ್ಲಿ ಹೊಡಿತಿನಿ”

“ಹೋಗ್ಲಿ ಬುಡಕ್ಕ ಪೂರ್ ಬ್ರಾಹ್ಮಿನ್ ಪೆಲೊ”

*****

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ತೆಗೆದುಕೊಂಡ ಬಳಿಕ ನಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ: ಪೋಷಕರ ಆರೋಪ

0
ಕೋವಿಶೀಲ್ಡ್ ಲಸಿಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಂತಹ ಅಡ್ಡಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಟಿಷ್ ಫಾರ್ಮಾ ದೈತ್ಯ 'ಅಸ್ಟ್ರಾಜೆನೆಕಾ' ಯುಕೆ ಕೋರ್ಟ್‌ನಲ್ಲಿ ಒಪ್ಪಿಕೊಂಡ ಬೆನ್ನಲ್ಲಿ ಕೋವಿಶೀಲ್ಡ್‌ ತೆಗೆದುಕೊಂಡ...