Homeಅಂಕಣಗಳುಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? - ಡಿ.ಉಮಾಪತಿ

ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ

ಬಿಸಿಯೂಟದ ಅಡುಗೆ ಮಾಡುವ ಹೆಣ್ಣುಮಕ್ಕಳು ದಲಿತರೆಂಬ ಕಾರಣಕ್ಕೆ ಪೋಷಕರು ಊಟಕ್ಕೇ ಬಹಿಷ್ಕಾರ ಹಾಕಿದ್ದ ಘಟನೆಗಳು ನಮ್ಮದೇ ಕರ್ನಾಟಕದಿಂದ ವರದಿಯಾಗಿ ತಣ್ಣಗಾಗಿವೆ.

- Advertisement -
- Advertisement -

ಮತ್ತೊಬ್ಬ ದಲಿತ ಮಗಳು ಮೇಲ್ಜಾತಿಯ ಅಹಂಕಾರದ ಬರ್ಬರ ಬೆಂಕಿಯಲ್ಲಿ ಬೆಂದು ಬೂದಿಯಾಗಿ ಮಣ್ಣು ಸೇರಿದ್ದಾಳೆ. ಸದ್ಯದಲ್ಲೇ ಅಂಕಿ ಸಂಖ್ಯೆಯಾಗಿ ಮಾತ್ರವೇ ಇತಿಹಾಸದಲ್ಲಿ ದಾಖಲಾಗಿಬಿಡುತ್ತಾಳೆ.

ದೇಶದ ರಾಜಧಾನಿ ದೆಹಲಿಯಿಂದ ಹೆಚ್ಚು ದೂರವೇನೂ ಇಲ್ಲದ ಹಾಥ್ರಸ್‍ನ ಈ ಮಗಳು ಎದುರಿಸಿದ ಹಿಂಸೆ ಪೈಶಾಚಿಕ ಸ್ವರೂಪದ್ದು. ಹದಿನೈದು ದಿನಗಳ ಕಾಲ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡದೆ ಅಕ್ಷರಶಃ ಕೊಂದ ಕಾರಸ್ಥಾನದಲ್ಲಿ ಸರ್ಕಾರ- ಸಮಾಜದ ಕೈಗಳು ರಕ್ತಸಿಕ್ತವಾಗಿವೆ.

ತನುಶ್ರೀ ಪಾಂಡೆ ಎಂಬ ದೆಹಲಿಯ ಎಳೆಯ ಉತ್ಸಾಹಿ ಟಿವಿ ವರದಿಗಾರ್ತಿಯ ಕಳಕಳಿಯ ಕಸಬುದಾರಿಕೆಯು ಈ ಕೊಲೆಗಡುಕತನವನ್ನು ಬೆತ್ತಲಾಗಿಸಿತು. ಇಲ್ಲದೆ ಹೋಗಿದ್ದರೆ ಹಳ್ಳಿಗಾಡುಗಳಲ್ಲಿ ಸಮಾಧಿಯಾಗುವ ಇಂತಹದೇ ಸಾವಿರಾರು ಪ್ರಕರಣಗಳ ಸಾಲಿಗೆ ಈ ಪ್ರಕರಣವೂ ಸೇರಿ ಹೋಗುತ್ತಿತ್ತು.

ತನುಶ್ರೀ ಪಾಂಡೆ : Photo Courtesy: SheThePeopleTv

ಸಮೂಹ ಮಾಧ್ಯಮಗಳ ಪ್ರಚಾರದ ಮುಂಬೆಳಕು ಬೀಳದ ಹತ್ತಾರು ಸಾವಿರ ನತದೃಷ್ಟ ಪ್ರಕರಣಗಳು ದಶಕಗಳಿಂದ ಕೊಳೆಯುತ್ತಿವೆ. ಸಾಮಾಜಿಕ ಕಳಂಕದ ಕ್ರೂರ ಹೊರೆ ಹೊತ್ತು ದೇಶದ ನಾನಾ ನ್ಯಾಯಾಲಯಗಳಲ್ಲಿ ಧೂಳು ಹಿಡಿದಿರುವ ಕಡತಗಳಲ್ಲಿ ಹೂತು ಹೋಗಿರುವ ಲಕ್ಷಾಂತರ ಹೆಣ್ಣು ಜೀವಗಳ ಮೊರೆಯನ್ನು ಕೇಳುವವರು ಯಾರು?

ಕೊಂಬೆ ಕೊಂಬೆಗಳಲ್ಲಿ ಚಿನ್ನದ ಹಕ್ಕಿಗಳು ಕೂಗುತ್ತಿದ್ದವೆಂದು ಹೇಳಲಾಗುವ ಭವ್ಯ ಇತಿಹಾಸದ ಭಾರತ ದೇಶದ ಹಿಂದೂಗಳಿಗೆ ದಲಿತರು ಮನುಷ್ಯರಂತೆ ಯಾವ ಕಾಲಕ್ಕೆ ಕಾಣಬಹುದು ಎಂಬ ಪ್ರಶ್ನೆ ನಿರಂತರ ಪ್ರಶ್ನೆಯಾಗಿಯೇ ಉಳಿಯಲಿದೆ. ರಕ್ತದಲ್ಲಿ ಬೆರೆತು ಹೋಗಿರುವ ಈ ಅಸಮಾನತೆ ಅಳಿಯುವ ಸಾಧ್ಯತೆ ದೂರ ದಿಗಂತದ ಚುಕ್ಕೆಯಾಗಿಯೂ ಕಾಣಬರುತ್ತಿಲ್ಲ.

photo courtesy : Pratirodh

ಇಂಡಿಯಾ ದೇಶದಲ್ಲಿ ನೀವು ಸವರ್ಣೀಯರಾಗಿದ್ದರೆ, ದಲಿತ ಸಮುದಾಯದಿಂದ ಬಂದ ವ್ಯಕ್ತಿಯೊಬ್ಬನಿಗೆ ಏನಾಗುತ್ತಿದೆಯೆಂದು ಅರಿಯುವುದು ನಿಮಗೆ ಸಾಧ್ಯವೇ ಇಲ್ಲ. ದಲಿತರನ್ನು ಹೇಗೆ ಕಾಣಲಾಗುತ್ತಿದೆ ಮತ್ತು ಅವರ ಜಗತ್ತು ವಾಸ್ತವದಲ್ಲಿ ಹೇಗಿದೆ ಎಂಬ ಸಂಗತಿಯನ್ನು ಬೆರಳೆಣಿಕೆಯ ಜನರಷ್ಟೇ ಬಲ್ಲರು ಎನ್ನುತ್ತಾರೆ ಸಂವೇದನಾಶೀಲ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್.

ನಖಶಿಖಾಂತ ಮೇಲು ಕೀಳನ್ನು ಸಾರಿ ಹೇಳುವ ವರ್ಣವ್ಯವಸ್ಥೆಯು ಇಂಡಿಯಾದ ಕೆಳವರ್ಗಗಳ ದಿಕ್ಕೆಟ್ಟ ಬದುಕುಗಳಿಗೆ ಬೀಸಿ ಬಡಿಯುತ್ತಲೇ ಇರುವ ತೀರದ ಶಾಪ. ಈ ವ್ಯವಸ್ಥೆಯನ್ನು ಅನವರತ ಜೀವಂತ ಇರಿಸುವುದನ್ನೇ ಪರಮವೈಭವ ಎಂದು ಭಾವಿಸುತ್ತಾರೆ ಯಥಾಸ್ಥಿತಿವಾದಿಗಳು. ನಾವೆಲ್ಲ ಒಂದು ಎಂದು ಹೇಳುತ್ತಲೇ ವಂಚಿತ ಸಮುದಾಯಗಳ ಇಹದ ಬದುಕನ್ನು ನರಕ ಆಗಿಸುತ್ತಿದ್ದಾರೆ. ಇಲ್ಲವೇ ಅವರನ್ನು ಕೊಂದು ನಿವಾರಿಸಿ ಭರತಭೂಮಿಗೆ ಅಂಟಿರುವ ‘ಪಾಪ’- ‘ಕಳಂಕ’ವನ್ನು ತೊಳೆಯತೊಡಗಿದ್ದಾರೆ.

ಅವಮಾನಿತ ಕೆಳಜಾತಿಗಳ ದಮನದ ಅಮಾನುಷ ಮುಖಗಳು ಹತ್ತು ಹಲವು. ದಲಿತರು ಚಪ್ಪಲಿ ಧರಿಸುವುದನ್ನು ನಿಷೇಧಿಸಿರುವ, ಊರು ಪ್ರವೇಶ ಮಾಡುವ ಮುನ್ನ ಚಪ್ಪಲಿಯನ್ನು ಕಳಚಿ ಕೈಲಿ ಹಿಡಿದು ನಡೆಯಬೇಕಾದ, ಏರಿದ್ದ ಸೈಕಲ್ಲನ್ನು ಇಳಿದು ಅದನ್ನು ತಳ್ಳಿಕೊಂಡೇ ಮೇಲ್ಜಾತಿಗಳ ವಸತಿಯನ್ನು ಹಾದು ಹೋಗಬೇಕಾದ ರೂಢಿ ಇಂದಿಗೂ ಜಾರಿಯಲ್ಲಿರುವ ಸಾವಿರಾರು ಹಳ್ಳಿಗಳಿವೆ.

ಉತ್ತರಭಾರತದ ಮದುವೆಗಳಲ್ಲಿ ವರ ಕುದುರೆಯೇರಿ ದಿಬ್ಬಣ ಹೊರಡುವ ರಿವಾಜಿದೆ. ದಲಿತರು ಕುದುರೆ ಏರುವಂತಿಲ್ಲ. ಆನೆ ಕುದುರೆ ಎತ್ತಿನ ಗಾಡಿ ಏರಿದ ದಲಿತ ಮದುಮಕ್ಕಳನ್ನು ಮೇಲು ಜಾತಿಗಳು ಥಳಿಸಿ ರಂಪ ಮಾಡುವ ವಿದ್ಯಮಾನಗಳು ಇಂದಿಗೂ ಅಳಿದಿಲ್ಲ.

ಮೋಟರ್ ಸೈಕಲ್ ಸವಾರಿ ಮಾಡುವ ದಲಿತ ಯುವಕನ ಮೂಗು ಕತ್ತರಿಸುವ, ಅಂಬೇಡ್ಕರ್ ರಿಂಗ್‍ಟೋನನ್ನು ತೆಗೆದು ಹಾಕಲಿಲ್ಲವೆಂದು ದಲಿತ ತರುಣನ ಪ್ರಾಣವನ್ನೇ ತೆಗೆಯುವ, ದಲಿತ ಪ್ರೊಫೆಸರಿಗೆ ಬಾಡಿಗೆ ಮನೆ ನಿರಾಕರಿಸುವ, ಮೂರು ವರ್ಷದ ದಲಿತ ಹಸುಳೆಗೆ ಕ್ಷೌರ ಮಾಡಲು ನಿರಾಕರಿಸುವ, ಮೇಲ್ಜಾತಿಯ ಮಕ್ಕಳ ತಟ್ಟೆ ಮುಟ್ಟಿದನೆಂದು ಎಳೆಯ ದಲಿತ ಜೀವವನ್ನು ಥಳಿಸುವ ಘಟನೆಗಳು ಈ ಸಮಾಜದ ಆತ್ಮಸಾಕ್ಷಿಯನ್ನು ಕಲಕುವುದೇ ಇಲ್ಲ.

ಅತ್ಯಾಚಾರವನ್ನು ಪ್ರತಿಭಟಿಸಿದ ದಲಿತ ಬಾಲಕಿಯೊಬ್ಬಳ ಮೂಗು, ಕಿವಿ ಹಾಗೂ ತೋಳನ್ನು ಕತ್ತರಿಸಿ ಒಗೆದವರು ಮೇಲ್ಚಾತಿಗಳ ಬಲಾತ್ಕಾರಿಗಳು. ಆಕೆಯ ದುಪಟ್ಟಾದಿಂದಲೇ ಬಾಲೆಯ ಕಣ್ಣು ಕಟ್ಟಿದ ಧೂರ್ತರು ಮೂಗು ಕಿವಿ ತೋಳನ್ನು ಕೊಡಲಿಯಿಂದ ಕತ್ತರಿಸಿ ಒಗೆದ ಘಟನೆ ನಡೆದದ್ದು ಮಧ್ಯಪ್ರದೇಶದಲ್ಲಿ.

ಛತ್ತೀಸ್‍ಗಢದ ಬಡ ಓರಾನ್ ಆದಿವಾಸಿ ಕುಟುಂಬದ ಮಗಳು ಹದಿನಾರರ ಮೀನಾ ಖಾಲ್ಕೋ. ಒಂದು ಸಂಜೆ ಸೈಕಲ್ ಹತ್ತಿ ಗೆಳತಿಯ ಮನೆಗೆ ತೆರಳಿದವಳು ಪತ್ತೆಯಾದದ್ದು ಆಸ್ಪತ್ರೆಯಲ್ಲಿ. ಸಾವು ಬದುಕಿನ ನಡುವಣ ಹೋರಾಟದಲ್ಲಿ. ಬಾಲೆಯನ್ನು ಅಪಹರಿಸಿದ ಪೊಲೀಸರು ಸಾಮೂಹಿಕ ಬಲಾತ್ಕಾರ ಎಸಗಿ ಗುಂಡು ಹೊಡೆದು ಆಕೆಗೆ ಮಾವೋವಾದಿಯ ಹಣೆಪಟ್ಟಿ ಕಟ್ಟಿದ್ದರು.

ಮಧ್ಯಾಹ್ನದ ಬಿಸಿಯೂಟ ನೀಡಲು ದಲಿತ ಮಕ್ಕಳನ್ನು ದೂರ ಬೇರೆ ಪಂಕ್ತಿಯಲ್ಲಿ ಕೂರಿಸುವ ರೂಢಿ ಕೇವಲ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತ ಅಲ್ಲ. ಇತರೆ ಮಕ್ಕಳಿಗೆ ನೀಡುವ ಪ್ರಮಾಣದ ಕಾಲು ಭಾಗದಷ್ಟನ್ನು ಮಾತ್ರವೇ ದಲಿತ ಮಕ್ಕಳಿಗೆ ಬಡಿಸಿ, ಎರಡನೆಯ ಬಾರಿ ಕೇಳಿದರೆ ಅವಮಾನ ಮಾಡುವ ಪ್ರಕರಣಗಳು ಸರ್ವೇ ಸಾಧಾರಣ. ಮೇಲ್ಜಾತಿಯ ಮಕ್ಕಳಿಗೆ ಬಡಿಸಿ ಉಳಿದ ಚೂರು ಪಾರನ್ನು ದಲಿತ ಮಕ್ಕಳಿಗೆ ಹಾಕುವ ಶಿಕ್ಷಕರ ಮನಸ್ಥಿತಿಗಳು ಅಪರೂಪ ಅಲ್ಲ.

ಬಿಸಿಯೂಟದ ಅಡುಗೆ ಮಾಡುವ ಹೆಣ್ಣುಮಕ್ಕಳು ದಲಿತರೆಂಬ ಕಾರಣಕ್ಕೆ ಪೋಷಕರು ಊಟಕ್ಕೇ ಬಹಿಷ್ಕಾರ ಹಾಕಿದ್ದ ಘಟನೆಗಳು ನಮ್ಮದೇ ಕರ್ನಾಟಕದಿಂದ ವರದಿಯಾಗಿ ತಣ್ಣಗಾಗಿವೆ.

ಥಳಗುಟ್ಟುವ ಭಾರತದ ಆಚೆಗೆ ಬದುಕಿರುವ ಕಗ್ಗತ್ತಲ ಉದ್ದಗಲಗಳಲ್ಲಿ ಜಾತಿ ಬಲವುಳ್ಳವರು, ಹಣದ ಸೊಕ್ಕಿನವರು, ಧರ್ಮದುರಂಧರರು, ಪಿತೃಪ್ರಧಾನ್ಯತೆಯ ಪರಿಪಾಲಕರು, ಪೊಲೀಸರು, ಪ್ಯಾರಾಮಿಲಿಟರಿಗಳ ಅಟ್ಟಹಾಸಗಳಲ್ಲಿ ಈ ಜೀವಗಳು ನಲುಗಿಹೋಗುತ್ತಿವೆ. ಇವರು ಮಾತು ಸತ್ತವರು, ಕಾಸಿಲ್ಲದವರು, ತುಳಿಸಿಕೊಂಡವರು, ಒಕ್ಕಲೆಬ್ಬಿಸಿ ದಬ್ಬಲಾದ ಅನಾಥ ಆದಿವಾಸಿಗಳು. ತಮ್ಮ ಮಾನ ಪ್ರಾಣ ಕಣ್ಣೀರುಗಳಿಗೆ ಕಾಸಿನ ಕಿಮ್ಮತ್ತೂ ಇಲ್ಲದ ದೈನೇಸಿಗಳು. ಖೈರ್ಲಾಂಜಿ, ಕಂಬಾಲಪಲ್ಲಿಗಳಲ್ಲಿ ಬೂದಿಯಾದವರು ಇವರು.

ಭಾರತೀಯ ಸೇನೆಯ ಹನ್ನೊಂದು ಮಂದಿ ಸಿಪಾಯಿಗಳು ಚಿತ್ರಹಿಂಸೆಯ ನಂತರ ಸಾಮೂಹಿಕ ಮಾನಭಂಗ ಮಾಡಿ ಜನನೇಂದ್ರಿಯಕ್ಕೆ ಕಾಡತೂಸುಗಳ ಸಿಡಿಸಿ ಕೊಂದ ಪ್ರಕರಣದ ಬಲಿಪಶು ಮಣಿಪುರದ ಥಂಗ್ಲಾಮ್ ಮನೋರಮಾದೇವಿ ಎಂಬ ಯುವತಿ. 2004ರ ಈ ಪ್ರಕರಣದ ಅಪರಾಧಿಗಳನ್ನು ಕಾನೂನಿನ ಕೈಗಳು ಈಗಲೂ ಮುಟ್ಟಿಲ್ಲ. 1991ರಲ್ಲಿ ಕಾಶ್ಮೀರದ ಮೂವತ್ತು ಮಹಿಳೆಯರ ಮೇಲೆ ಸೇನೆ ನಡೆಸಿತೆನ್ನಲಾದ ಅತ್ಯಾಚಾರ ಪ್ರಕರಣದ ಮರುವಿಚಾರಣೆ ಇನ್ನೂ ಮುಗಿದಿಲ್ಲ.

ಶೇ.75ರಷ್ಟು ಅತ್ಯಾಚಾರ ಪ್ರಕರಣಗಳು ನಡೆಯುವುದು ಗ್ರಾಮೀಣ ಭಾರತದಲ್ಲಿ ಎಂಬುದಾಗಿ ದಿಲ್ಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಸಮೀಕ್ಷೆಯಿಂದ ತಿಳಿದುಬಂದಿತ್ತು. ಗ್ರಾಮೀಣ ಪ್ರದೇಶಗಳ ಅತ್ಯಾಚಾರ ಪ್ರಕರಣಗಳನ್ನು ಜಾತಿ – ವರ್ಗ ಹಾಗೂ ಊಳಿಗಮಾನ್ಯ ವ್ಯವಸ್ಥೆಗಳು ಅಲ್ಲಲ್ಲಿಯೇ ಅದುಮಿ ಹೂತು ಹಾಕುತ್ತಿವೆ.

ಪ್ರಾಣ ಮತ್ತು ಮಾನಹರಣದ ಶುದ್ಧೀಕರಣದ ಹಿಂದೂ ಮಹಾಯಜ್ಞಕ್ಕೆ ದಲಿತರು ಈ ದೇಶದಲ್ಲಿ ನಿರಂತರ ಬಲಿಪಶುಗಳು.


ಇದನ್ನೂ ಓದಿ: ರಾಜಕೀಯ ಸಾಧನವಾಗಿ ಅತ್ಯಾಚಾರದ ಕಲ್ಪನೆಯನ್ನು ಸಾವರ್ಕರ್ ಸಮರ್ಥಿಸಿಕೊಂಡಿದ್ದು ಹೀಗೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...