Homeಮುಖಪುಟಚಕ್ರತೀರ್ಥ ಸಮಿತಿ ಸಂಭಾವನೆ ವಿಚಾರದಲ್ಲಿ ಹೀಗೇಕೆ ಸುಳ್ಳು ಹೇಳಿತು ಬಿಜೆಪಿ ಪರಿವಾರ?

ಚಕ್ರತೀರ್ಥ ಸಮಿತಿ ಸಂಭಾವನೆ ವಿಚಾರದಲ್ಲಿ ಹೀಗೇಕೆ ಸುಳ್ಳು ಹೇಳಿತು ಬಿಜೆಪಿ ಪರಿವಾರ?

‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಆಗಿರುವ ವರದಿಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

- Advertisement -
- Advertisement -

“ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಹೋಲಿಸಿದರೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ” ಎಂದು ಬಿಂಬಿಸುವ ವರದಿಯಾಗಿದ್ದು, ‘ಬಿಜೆಪಿ ಪರಿವಾರ ಹೀಗೇಕೆ ಸುಳ್ಳು ಹೇಳುತ್ತಿದೆ’ ಎಂಬ ಪ್ರಶ್ನೆ ಮೂಡಿದೆ.

‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಚಕ್ರತೀರ್ಥ ಸಮಿತಿ ಸಂಭಾವನೆ 5 ಸಾವಿರ’ ಎಂಬ ಹೆಡ್‌ಲೈನ್‌ನಲ್ಲಿ ವರದಿ ಪ್ರಕಟವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಚಕ್ರತೀರ್ಥ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ ಎಂದು ಹೇಳುವ ವರದಿಯು ಏಕಪಕ್ಷೀಯವಾಗಿದೆ ಎಂಬ ಟೀಕೆಗಳು ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ವಿಜಯ ಕರ್ನಾಟಕ’ ವರದಿಯಲ್ಲಿನ ಮುಖ್ಯಾಂಶಗಳು

  • ಚಕ್ರತೀರ್ಥ ಸಮಿತಿ ಪಡೆದ ಸಂಭಾವನೆ ಕೇವಲ 33 ಸಾವಿರ ರೂಪಾಯಿ. ಸರ್ಕಾರ 28,600 ರೂ. ಬಾಕಿ ಉಳಿಸಿಕೊಂಡಿದೆ. ಸಮಿತಿಗೆ ಸಿಕ್ಕಿರುವುದು ಕೇವಲ 5200 ರೂ. ಸಮಿತಿ ಮಾಡಿದ ಒಟ್ಟು ವೆಚ್ಚ 50 ಲಕ್ಷ ರೂ.
  • ಈ ಹಿಂದಿನ ಸಮಿತಿಗಳು ಪಡೆದ ಸಂಭಾವನೆಗಿಂತ ಐದಾರು ಪಟ್ಟು ಕಮ್ಮಿ ಸಂಭಾವನೆಯನ್ನು ಚಕ್ರತೀರ್ಥ ಸಮಿತಿ ಪಡೆದಿದೆ. ಉಳಿದ ಸಮಿತಿಗಳ ಸಂಭಾವನೆ 3.75 ಲಕ್ಷ ರೂ.ಗಳಿಂದ 5.45 ಲಕ್ಷ ರೂ.ಗಳಾಗಿದೆ.

ಮೇಲು ನೋಟಕ್ಕೆ ಚಕ್ರತೀರ್ಥ ಸಮಿತಿಯು ಕಡಿಮೆ ವೆಚ್ಚ ಮಾಡಿದೆ ಎಂದು ಅನಿಸಿದರೂ ಇದು ಅರ್ಧ ಸತ್ಯದಿಂದ ಕೂಡಿದೆ. ಈ ಕುರಿತು ಸ್ವತಃ ಪ್ರೊ.ಬರಗೂರು ರಾಮಚಂದ್ರಪ್ಪ ಅವರೇ ಸ್ಪಷ್ಟನೆ ನೀಡಿದ್ದು, “ಪಠ್ಯಪುಸ್ತಕಗಳ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಮಾಡಿರುವ ವರದಿಯಲ್ಲಿ ಏಕಪಕ್ಷೀಯವಾದ ವಿವರಗಳಿವೆ” ಎಂದು ಬರಗೂರರು ಸ್ಪಷ್ಟಪಡಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಸ್ಪಷ್ಟನೆಗಳೇನು?

ಸ್ಪಷ್ಟನೆ 1: ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಗಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದೆ ಎಂದು ವರದಿ ಹೇಳುತ್ತದೆ. ವಾಸ್ತವವಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದ್ದು ಪಠ್ಯಪುಸ್ತಕಗಳ ರಚನೆ ಹಾಗೂ ಪರಿಷ್ಕರಣೆಗಾಗಿ ಅಲ್ಲ. ಸಂಕೀರ್ಣ ವಿಷಯಗಳ ಪರಿಶೀಲನೆ ಮಾಡಿ ಒಂದು ತಿಂಗಳಲ್ಲಿ ವರದಿಯನ್ನು ಕೊಡಬೇಕೆಂದು ಸಮಿತಿ ರಚನೆಯಾಯಿತು.

ಸ್ಪಷ್ಟನೆ 2: ಚಕ್ರತೀರ್ಥ ಸಮಿತಿಗೆ ಕೇವಲ ಐದು ಸಾವಿರ ರೂಪಾಯಿಗಳ ಸಂಭಾವನೆಯನ್ನು ಕೊಡಲಾಗಿದೆ ಎಂದು ದೊಡ್ಡ ಶೀರ್ಷಿಕೆಯನ್ನು ವರದಿಗೆ ನೀಡಲಾಗಿದೆ. ಆದರೆ ಅದೇ ವರದಿಯಲ್ಲಿ ಸಂಭಾವನೆ 33,800 ರೂಪಾಯಿ ಎಂದಿದೆ. 28,000 ಬಾಕಿ ಉಳಿದಿದೆ ಎಂದು ಬರೆಯಲಾಗಿದೆ. ಬಾಕಿ ಉಳಿಸಿಕೊಂಡು ಆನಂತರ ಹಣ ಜಮಾ ಮಾಡುವ ಪದ್ಧತಿಯು ನಮ್ಮ ಸರ್ಕಾರದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಸಮಿತಿಯಲ್ಲೂ ಅನೇಕರಿಗೆ ಬಾಕಿ ಉಳಿಸಿಕೊಂಡು ಆನಂತರದಲ್ಲಿ ಹಣ ನೀಡಲಾಯಿತು. ಹೀಗಾಗಿ ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 5,000 ರೂಪಾಯಿಯಲ್ಲ, 33,800 ರೂಪಾಯಿ ಎಂಬುದು ಸತ್ಯ ಸಂಗತಿ.

ಸ್ಪಷ್ಟನೆ- 3: ಮುಡಂಬಡಿತ್ತಾಯ ಸಮಿತಿಯು 3 ಕೋಟಿ 63 ಲಕ್ಷ ಖರ್ಚು ಮಾಡಿದೆ ಎಂದೂ, ನಮ್ಮ ಸಮಿತಿ 2 ಕೋಟಿ 59 ಲಕ್ಷ ಖರ್ಚು ಮಾಡಿದೆ ಎಂದೂ, ಚಕ್ರತೀರ್ಥ ಸಮಿತಿ 49 ಲಕ್ಷ 99 ಸಾವಿರ ರೂ. ಖರ್ಚು ಮಾಡಿದೆ ಎಂದೂ ವರದಿ ಹೇಳುತ್ತದೆ. ಇದು ನಿಜವೇ ಇರಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಮೇಲ್ನೋಟಕ್ಕೆ ನಮ್ಮ ಸಮಿತಿ ತುಂಬಾ ಖರ್ಚು ಮಾಡಿದೆ ಎಂದೂ ಚಕ್ರತೀರ್ಥ ಸಮಿತಿಯು ಕಡಿಮೆ ಖರ್ಚು ಮಾಡಿದೆ ಎಂದೂ ತೋರಿಸಲಾಗುತ್ತಿದೆ. ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ- ನಮ್ಮ ಸಮಿತಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ವಾಸ್ತವವಾಗಿ ಮೊದಲು 27 ಸಮಿತಿಗಳ ರಚನೆ ಮಾಡಲಾಯಿತು. ಆ ನಂತರ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಯಿತು. ಆ ಸಮಿತಿಗಳು ಎರಡೂವರೆ ವರ್ಷ ಕೆಲಸ ಮಾಡಿದವು. ನಾನು ಎರಡು ವರ್ಷ ಕೆಲಸ ಮಾಡಿದೆ. ಒಟ್ಟು ಸಮಿತಿಯಲ್ಲಿ 172 ಜನರಿದ್ದರು. ಅಧಿಕಾರಿಗಳನ್ನೂ ಒಳಗೊಂಡು ಚಕ್ರತೀರ್ಥ ಸಮಿತಿಯಲ್ಲಿದ್ದದ್ದು (ಸರ್ಕಾರದ ಆದೇಶದ ಪ್ರಕಾರ) ಕೇವಲ 16 ಜನ. ಇವರು ಕೆಲಸ ಮಾಡಿದ್ದು ಹೆಚ್ಚೆಂದರೆ ಎರಡು ಅಥವಾ ಮೂರು ತಿಂಗಳು ಮಾತ್ರ. ಇಲ್ಲಿ ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ. ನಾನು ಸರ್ವಾಧ್ಯಕ್ಷನಾಗಿದ್ದಾಗ 27 ಸಮಿತಿಗಳು, 172 ಜನರು ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಹೊರಗಿನ 30ಕ್ಕೂ ಹೆಚ್ಚು ತಜ್ಞರ ಜೊತೆಯಲ್ಲಿ, ಅಧ್ಯಾಪಕರ ಜೊತೆಯಲ್ಲಿ ಸಭೆ ಮಾಡಿದ್ದೇವೆ. ಒಟ್ಟಾರೆ ಹೇಳುವುದಾದರೆ ನೂರಾರು ಕಾರ್ಯಾಗಾರಗಳು ನಡೆದಿವೆ. ಇವರಿಗೆ ಪ್ರಯಾಣ  ಭತ್ಯೆ, ಸಭಾ ಭತ್ಯೆ ಇತ್ಯಾದಿಗಳನ್ನು ಭರಿಸಿದ್ದು ಪಠ್ಯಪುಸ್ತಕ ಸಂಘ. ಅದೆಲ್ಲವೂ ಈ ರಚನಾ ಪ್ರಕ್ರಿಯೆಯಲ್ಲಿ ಸೇರಿವೆ. ಇಷ್ಟು ಕಾಲ, ಇಷ್ಟು ಮಂದಿ ಮಾಡಿದ ರಚನೆಯ ಕುರಿತು ಆ ವರದಿಯಲ್ಲಿ ಉಲ್ಲೇಖ ಇಲ್ಲದೆ ಇರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಕಾಲವಧಿಯ ವ್ಯತ್ಯಾಸ, ಕೆಲಸದ ರೀತಿಯ ವ್ಯತ್ಯಾಸ, ಸದಸ್ಯರ ಸಂಖ್ಯೆಯ ವ್ಯತ್ಯಾಸ ಈ ವಿವರಗಳೆಲ್ಲ ವರದಿಯಲ್ಲಿ ಇದ್ದಿದ್ದರೆ ಓದುಗರಿಗೆ ಸ್ಪಷ್ಟವಾಗುತ್ತಿತ್ತು.

ಇದನ್ನೂ ಓದಿರಿ: ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಸ್ಪಷ್ಟನೆ – 4: ಪಠ್ಯಪುಸ್ತಕ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಡಿಟಿಪಿ ಮಾಡಿರುವ ಖರ್ಚುಗಳೂ ಸೇರಿರುತ್ತವೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಮೇಲೆ ನಿಯಮಗಳ ಪ್ರಕಾರ ಸರ್ಕಾರ ಕೊಡುವ ಭತ್ಯೆಗಳ ಜೊತೆಗೆ ಡಿಟಿಪಿ ಇತ್ಯಾದಿಗಳೆಲ್ಲವೂ ಸೇರಿರುತ್ತವೆ. ಸಮಿತಿಯ ಸದಸ್ಯರಿಗಾಗಲೀ, ಅಧ್ಯಕ್ಷರಿಗಾಗಿ ಹಣ ಕೊಟ್ಟು ಹಂಚಲಾಗುವುದಿಲ್ಲ. ಪಠ್ಯ ಪುಸ್ತಕ ಸಂಘ ಅಥವಾ ಇಲಾಖೆ ಆ ಹಣವನ್ನು ಹಂಚುತ್ತದೆ. ಇಡೀ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವುದು ನಿಯಮಾನುಸಾರ ಪಠ್ಯಪುಸ್ತಕ ಸಂಘವೇ ಹೊರತು ನಮ್ಮ ಸಮಿತಿಗಳೂ ಅಲ್ಲ, ಸದಸ್ಯರೂ ಅಲ್ಲ, ಅಧ್ಯಕ್ಷರೂ ಅಲ್ಲ. ಈ ವ್ಯತ್ಯಾಸವನ್ನು ಸಾರ್ವಜನಿಕರು ಗಮನಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ನೇಮಕಗೊಂಡ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಕೆಲಸ ಕಾರ್ಯಗಳ ವ್ಯಾಪ್ತಿಗೂ, ಸಂಕೀರ್ಣ ವಿಷಯಗಳ ಪರಿಶೀಲನೆಗಾಗಿ ನೇಮಕವಾದ ರೋಹಿತ್ ಚಕ್ರತೀರ್ಥ ಸಮಿತಿಯ ಕೆಲಸ ಕಾರ್ಯಗಳ ವ್ಯಾಪ್ತಿಗೂ ವ್ಯತ್ಯಾಸ ಇದೆ; ಅದಕ್ಕಾಗಿ, ತೆಗೆದುಕೊಂಡ ಸಮಯ ಮತ್ತು ಮಾಡಿದ ಖರ್ಚು ಸಹಜವಾಗಿ ಬೇರೆ ಬೇರೆಯಾಗಿ ಇರುವುದು ಸಾಮಾನ್ಯ. ಒಬ್ಬ ವರದಿಗಾರನಿಗೆ ಈ ವ್ಯತ್ಯಾಸದ ಸಾಮಾನ್ಯ ಜ್ಞಾನ ಇರಬೇಕು. ಇಲ್ಲ ಎಂದಾದರೆ, ಈ ವರದಿ ದುರುದ್ದೇಶಪೂರಿತ ಎಂಬುದು ಸ್ಪಷ್ಟ! ಇಂತಹ ಕುಚೋದ್ಯ ಮಾಡಲು ಪತ್ರಿಕೆಯನ್ನು ಪ್ರತಿನಿಧಿಸುವವರಿಗೆ ನಾಚಿಕೆಯೂ ಆಗುವುದಿಲ್ಲವೆ?!?

  2. ಜೀ ಹುಜೂರ್‌ ಎನ್ನುವ ಗುಲಾಮ ವರದಿಗಾರ ಮಾತ್ರ ಈ ರೀತಿ ಸುಳ್ಳು ವರದಿ ನೀಡಲು ಸಾಧ್ಯ. ದೇವರಾಜ್‌ ಕನಕಪುರ ತಲೆಯು ಸಾಮಾನ್ಯರಂತೆ ಇಲ್ಲದಿರುವುದು ಆಶ್ಚರ್ಯ. ಇವನು ಹೊಟ್ಟೆಗೆ ಎಲ್ಲರ ತರಹ ಹೊಟ್ಟೆಗೆ ಅನ್ನ ತಿನ್ನುತ್ತಾನೋ? ಇಲ್ಲ ಇನ್ನೇನಾದರೂ ತಿನ್ನುತ್ತಾನೋ? ಗೊತ್ತಿಲ್ಲ. ಇಂತಹ ಭ್ರಷ್ಟ ವರದಿಗಾರು ಸುಳ್ಳು ಮಾಹಿತಿಯನ್ನು ದುರದ್ದೇಶಪೂರಿತವಾಗಿ ನೀಡಲು ಕಾರಣವೇನಿಬಹುದು ಎಂದು ಬಹಿರಂಗ ಪಡಿಸಲಿ. ಇಲ್ಲದಿದ್ದರೆ ಸಾರ್ವಜಿಕವಾಗಿ ಕನ್ನಡ ಜನತೆಯ ಕ್ಷಮೆ ಕೇಳಲಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...