Homeಮುಖಪುಟಬಲಪಂಥೀಯತೆ ಯಾಕೆ ಗೆಲ್ಲುತ್ತಿದೆ? - ಶಿವ ವಿಶ್ವನಾಥನ್

ಬಲಪಂಥೀಯತೆ ಯಾಕೆ ಗೆಲ್ಲುತ್ತಿದೆ? – ಶಿವ ವಿಶ್ವನಾಥನ್

ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂಸೆ ಮತ್ತು ಕೇಡನ್ನು ಸೃಷ್ಟಿಸುವ ವಿಚಾರದಲ್ಲಿ ಬಲಪಂಥೀಯರು ಪರಿಣಿತರಾಗಿದ್ದರು. ಹಿಂಸೆಯನ್ನು ‘ಇತಿಹಾಸ ಸ್ವಚ್ಚಗೊಳಿಸುವ ಡಿಟರ್ಜೆಂಟ್’ ಆಗಿ ಬಳಸುವ ಬಲಪಂಥೀಯರು ಅದನ್ನು ಭೂತಗನ್ನಡಿಯ ಮೂಲಕ ಸಾದಿಸುತ್ತಾರೆ.

- Advertisement -
- Advertisement -

ಬಲಪಂಥೀಯತೆ ಯಾಕೆ ಯಶಸ್ಸು ಗಳಿಸುತ್ತಿದೆ ಎನ್ನುವ ಪ್ರಶ್ನೆಯನ್ನು ಎಡಪಂಥೀಯತೆಯ ಕುರಿತ ಪ್ರಬಂಧದ ಮೂಲಕ ಪ್ರಾರಂಬಿಸಬೇಕಾಗುತ್ತದೆ, ಆದರೆ ಗತದ ರಮ್ಯತೆಯ ಹಳಹಳಿಕೆಯಿಂದಾಗಲೀ ಅಥವಾ ಎದೆ ತಟ್ಟಿಕೊಳ್ಳುವಿಕೆಯಿಂದಾಗಲಿ ಅಲ್ಲ. ಎಡಪಂಥೀಯತೆ ಮಾಡಿಕೊಂಡ ಸ್ವಯಂ ಗಾಯಗಳ ಕಾರಣದಿಂದಾಗಿ ಬಲಪಂಥೀಯತೆ ಗಟ್ಟಿಗೊಳ್ಳುವುದಕ್ಕೆ ಸಹಕಾರಿಯಾಯಿತು ಎಂಬುದು ಸರಿಯಾದ ವಿಶ್ಲೇಷಣೆ. ತೆವಳುತ್ತಿರುವ ಸ್ಟಾಲಿನ್‍ವಾದದ ಹೆಳವಂಡದಿಂದ ಹೊರಬರಲಾರದೆ ಎಡಪಂಥವು ಇಂದಿಗೂ ಯಾತನೆ ಪಡುತ್ತಿದೆ ಮತ್ತು ಒಂದು ಕಾಲದಲ್ಲಿ ಜನಜನಿತವಾದ ತನ್ನ ಭಿನ್ನಮತೀಯ-ಪ್ರತಿರೋಧದ ಪರಿಕಲ್ಪನೆಯನ್ನು ಅದು ಹಾಳು ಮಾಡುತ್ತಿದೆ. ತನ್ನ ರಾಜಕಾರಣ ಪುನಃ ಪ್ರಾರಂಬಿಸುವುದಕ್ಕಿಂತಲೂ ಮೊದಲು ಅದರೊಳಗಿನ ಈ ಭೂತೋಚ್ಚಾಟನೆಗೆ ಒಬ್ಬ ಮಂತ್ರವಾದಿಯ ಅಗತ್ಯವಿದೆ. ಇಂತಹ ವಿಶ್ಲೇಷಕ ಮಾತ್ರ ವರ್ಗ ಎನ್ನುವ ಪ್ರವರ್ಗವು ಇಂದು ಜಡಗೊಂಡಿದೆ ಮತ್ತು ಸ್ವಯಂಕೇಂದ್ರಿತ ನಂಬಿಕೆಗಳ ಆತ್ಮರತಿಯಲ್ಲಿ ತೊಡಗಿಕೊಂಡಿದೆ ಎಂದು ಎಡಪಂಥೀಯರಿಗೆ ಹೇಳಬಲ್ಲ. ನರ್ಮದಾ ಚಳುವಳಿ ಮತ್ತು ಕೇರಳದ ಮೀನುಗಾರರ ಚಳುವಳಿಗೆ ಎಡಪಂಥೀಯರ ಪ್ರತಿಕ್ರಿಯೆ ಕಂಡಾಗ ಅವರಿಗೆ ಅಂಚಿನಲ್ಲಿರುವ, ಜೀವನೋಪಾಯದ ಸಮತೋಲನ ವೈವಸ್ಥೆಯ ಕುರಿತು ಪ್ರಜ್ಞೆಯೇ ಇಲ್ಲ ಎನ್ನುವ ಭಾವನೆ ಮೂಡುತ್ತದೆ.

ಎಡಪಂಥೀಯರು ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿರುವಾಗ ಬಲಪಂಥೀಯರು ರಾಷ್ಟ್ರ-ಪ್ರಭುತ್ವ ಮತ್ತು ಯುವಜನತೆಯ ವಿಚಾರ ಎನ್ನುವ ಎರಡು ಮಹತ್ವಾಕಾಂಕ್ಷೆಯ ವಲಯಗಳನ್ನು ಹುಡುಕಿಕೊಂಡರು. ಸಣ್ಣ ಗ್ರಾಮಗಳಲ್ಲಿ ವಾಸಿಸುತ್ತಿರುವವರ ಕನಸುಗಳನ್ನು ಬಂಡವಾಳ ಮಾಡಿಕೊಂಡು ಚಲನಶೀಲತೆಯ ಮಿಥ್ಯೆಗಳನ್ನು ಸೃಷ್ಟಿಸಲಾಯಿತು ಮತ್ತು ಇದರ ಮುಂದೆ ‘ವರ್ಗವು ಒಂದು ಬದಲಾವಣೆಯ ಆಶಾಕಿರಣ’ ಎನ್ನುವ ಸಿದ್ದಾಂತ ಯಾವ ಕ್ಷಣಕ್ಕಾದರೂ ಕರಗಬಲ್ಲ ಹಿಮಗಡ್ಡೆಯಂತೆ ಕಂಡುಬಂದಿತು. ಇದೆ ವೇಳೆಯಲ್ಲಿ ಯುವಜನತೆಯ ಮಹತ್ವಾಕಾಂಕ್ಷೆಯ ಅಭಿಮತಕ್ಕೆ ಮಾದರಿಯೊಂದನ್ನು ಸೃಷ್ಟಿಸುತ್ತಿದ್ದೇವೆ ಎಂದು ಸೋಗುಹಾಕಿದ ಬಲಪಂಥೀಯರಿಗೆ ರಾಷ್ಟ್ರ – ಪ್ರಭುತ್ವ ನಿರೂಪಣೆಯು ಸಮವಸ್ತ್ರದಲ್ಲಿ ಕವಾಯತು ನಡೆಸುವ ರೀತಿಯ ಏಕರೂಪತೆಗೆ ಅವಕಾಶ ಮಾಡಿಕೊಟ್ಟಿತು. ಎಡಪಂಥೀಯರು ಎಂದೂ ಕಲಿಯದ ಕಪಟತನದ ಮೂಲಕ ಬಲಪಂಥೀಯರು ಒಳಗಿನಿಂದಲೇ ಕನ್ನ ಹಾಕಿ ಪ್ರಜಾಪ್ರಭುತ್ವವನ್ನು ಟೊಳ್ಳುಗೊಳಿಸಿದರು.

ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂಸೆ ಮತ್ತು ಕೇಡನ್ನು ಸೃಷ್ಟಿಸುವ ವಿಚಾರದಲ್ಲಿ ಬಲಪಂಥೀಯರು ಪರಿಣಿತರಾಗಿದ್ದರು. ಹಿಂಸೆಯನ್ನು ‘ಇತಿಹಾಸ ಸ್ವಚ್ಚಗೊಳಿಸುವ ಡಿಟರ್ಜೆಂಟ್’ ಆಗಿ ಬಳಸುವ ಬಲಪಂಥೀಯರು ಅದನ್ನು ಭೂತಗನ್ನಡಿಯ ಮೂಲಕ ಸಾದಿಸುತ್ತಾರೆ. ಗುಂಪು ಹತ್ಯೆ (mob lynch) ತುಕಡಿ ನಡೆಸುವ ಹಿಂಸೆಯು ಬಹುಸಂಖ್ಯಾತರಿಗೆ ಇತಿಹಾಸದಲ್ಲಿ ತಮ್ಮನ್ನು ತೊಡಗಿಕೊಳ್ಳುವ ಅವಕಾಶವನ್ನು ಬಲಪಂಥ ಕಲ್ಪಿಸಿತು ಮತ್ತು ಎಡಪಂಥೀಯರು ಇದನ್ನು ಒದಗಿಸಲು ಸಾಧ್ಯವಿಲ್ಲ. ಎಡಪಂಥೀಯರು ಭವಿಷ್ಯದ ಕನಸನ್ನು ಸೃಷ್ಟಿಸಿದರು ಆದರೆ ಅದೇ ಸಮಯದಲ್ಲಿ ಬಲಪಂಥೀಯರು ಲೈವ್ ಹಿಂಸೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಗತವನ್ನು ಪುನರ್‌ ನಿರ್ಮಿಸುವ ಅವಕಾಶಗಳನ್ನು ಕಲ್ಪಿಸಿದರು. ನೀನು ಮುಸ್ಲಿಂನನ್ನು ಹತ್ಯೆ ಮಾಡುವ ಮೂಲಕ ರಾಣಾ ಪ್ರತಾಪ್ ಅಥವಾ ಪದ್ಮಿನಿಗೆ ಆದ ಅನ್ಯಾಯವನ್ನು ಸರಿಪಡಿಸಿದ್ದೀಯ ಎನ್ನುವ ಆತ್ಮಸಂತೃಪ್ತಿ ಮೂಡಿಸಲಾಯಿತು. ಬಲಪಂಥೀಯತೆಯು ಹೆಚ್ಚು ಅಮಾನುಷವಾಗಿದ್ದರೂ ಸಹ ಹಿಂಸೆಯು ಭೂತೋಚ್ಚಾಟನೆಗೆ ಸಂತೃಪ್ತಿಯ ಸಿದ್ಧಾಂತ ಎಂದು ನಂಬಿಸುವಲ್ಲಿ ಯಶಸ್ವಿಯಾಯಿತು

ಬಲಪಂಥೀಯರ ರಾಷ್ಟ್ರ-ಪ್ರಭುತ್ವದ ಆಯ್ಕೆಯು ತೋಳ್ಬಲದ ಸಾಮೂಹಿಕ ಪ್ರಜ್ಞೆ, ಸೌಂದರ್ಯಾತ್ಮಕ ಐಕ್ಯಮತ, ರೋಮಾಂಚನದ ರಮಣೀಯ ಕ್ಷಣಗಳನ್ನು ಒದಗಿಸಿತು. ಸಾಮಾಜ ಶಾಸ್ತ್ರದ ವಿಭಾಗವಾದ ವರ್ಗ ಸಿದ್ದಾಂತಗಳು ಇದನ್ನು ಒದಗಿಸಲು ಸಾಧ್ಯವಿರಲಿಲ್ಲ. ವರ್ಗ ಹೋರಾಟಕ್ಕಿಂತಲೂ ಜನಪ್ರಿಯ ರಾಜಕೀಯಕ್ಕೆ (ಪಾಪ್ಯುಲಿಸಂ) ಹೆಚ್ಚಿನ ಬೆಂಬಲ ದೊರಕಿತು. ತನ್ನೆಲ್ಲ ತಗಲೂಫಿತನಗಳೊಂದಿಗೆ ತೇಲಿ ಬಂದ ಮೋದಿಯ ‘ಚಾಯ್‍ವಾಲಾ’ ದುಡಿಯುವ ವರ್ಗದ ಘೋಷಣೆಗಿಂತಲೂ ಹೆಚ್ಚಿನ ಸಖ್ಯವನ್ನು ಬೆಸೆಯಿತು. ಈ ಜನಪ್ರಿಯ ರಾಜಕಾರಣಕ್ಕೆ ಯಾವ ಕಡೆಗಾದರೂ ಹೊರಳಿಕೊಳ್ಳುವ ನಮ್ಯತೆ ಇರುತ್ತದೆ ಮತ್ತು ಎಡಪಂಥೀಯರು ಇದನ್ನು ಅರಿಯುವಲ್ಲಿ ಸೋತರು. ಕಾರ್ಯಕತರು ಮುಖ್ಯ, ಆದರೆ ದೊಂಬಿಕೋರರಿಗೆ ಪೂರಕವಾಗಿ ಮಾತ್ರವೆಂದು ಬಲಪಂಥೀಯರು ಅರ್ಥ ಮಾಡಿಕೊಂಡಿದ್ದರು. ಬಲಪಂಥೀಯತೆಯು ‘ಗಲಭೆಕೋರರು ಮತ್ತು ಬಹುಸಂಖ್ಯಾತವಾದ’ ನಡುವೆ ಪ್ರಜಾಪ್ರಭುತ್ವವನ್ನು ಬರ್ಬರವಾಗಿ ಹತ್ತಿಕ್ಕಬಲ್ಲದು ಮತ್ತು ಎಡಪಂಥೀಯತೆ ಇದನ್ನು ಕನಸಿನಲ್ಲಿಯೂ ಊಹಿಸಲು ಸಾದ್ಯವಿಲ್ಲ. ರಾಷ್ಟ್ರ-ಪ್ರಭುತ್ವದ ಮೂಲಕ ಮತ್ತು ಜನಪ್ರಿಯ ರಾಜಕೀಯ ಬಳಸಿಕೊಂಡು ಸಾಂಕೇತಿಕವಾಗಿ ಮುನ್ನುಗ್ಗಿ ಪ್ರಚೋದಿತ ವಾತಾವರಣ ಸೃಷ್ಟಿಸಿ ಜನತೆಯ ಆಶಾಭಾವನೆಯನ್ನು ಕಬ್ಜಾ ಮಾಡಿಕೊಳ್ಳುವ ಬಲಪಂಥೀಯತೆಯ ತಂತ್ರಗಾರಿಕೆಯ ಮುಂದೆ ಎಡಪಂಥೀಯತೆ ಮಂಕು ಹಿಡಿದಂತೆ ನಿಷ್ಕ್ರಿಯವಾಗಿ ಗೋಚರಿಸುತ್ತದೆ.

ವಿಜ್ಞಾನ, ವೈಜ್ಞಾನಿಕ ಮನೋದರ್ಮ ಕುರಿತಾದ ಚರ್ಚೆ, ಸಂವಾದಗಳಲ್ಲಿ ಹಿಂದುಳಿದು ಹಳೆಯ ವಾದಗಳಿಗೆ ಹೊರಳುವ ಎಡಪಂಥೀಯತೆಯು ಬರ್ನಲ್ ಮತ್ತು ನೀಧಮ್ ಅವರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದೆ. ಮಾಕ್ರ್ಸಿಸಂ ವೇಲ್ಸ್‍ನೊಂದಿಗೆ (ಇಂಗ್ಲೆಂಡ್‍ನ ಒಂದು ಪ್ರಾಂತ) ಸಂಭಾಷಣೆ ನಡೆಸಬೇಕೆಂದು ನೀಧಮ್ ಬಯಸುತ್ತಾನೆ. ಆತ ಪ್ರಾದೇಶಿಕತೆಯನ್ನು ಅರಿತುಕೊಂಡಷ್ಟು ಎಡಪಂಥೀಯರು ಅರಿತಿಲ್ಲ, ಮಹಾಶ್ವೇತದೇವಿಯವರನ್ನು ಹೊರತುಪಡಿಸಿ. ವಿಜ್ಞಾನ ಒಂದು ಸಿದ್ದಾಂತ ಎಂದು ಬಲಪಂಥೀಯತೆ ಯಾವತ್ತಿಗೂ ಆಸಕ್ತಿ ತೋರಲಿಲ್ಲ. ಅವರಿಗೆ ಅದೊಂದು ನಿಮಿತ್ತ ಮಾತ್ರ. ಅದು ಪ್ರಾಚೀನ ವಿಜ್ಞಾನವನ್ನು ಒಂದು ಸಾಧನವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅವರಿಗೆ ವಿಜ್ಞಾನ ಒಂದು ತಂತ್ರಜ್ಞಾನ ಮತ್ತು ತಂತ್ರಜ್ಞಾನವು ರಾಜಕೀಯಕ್ಕೆ ಬದಲಿ ವಸ್ತು ಮಾತ್ರ. ಈ ಎರಡು ಮಾರ್ಪುಗಳೊಂದಿಗೆ ಬಲಪಂಥೀಯತೆಯು ವಿಜ್ಞಾನವನ್ನು ಕಬ್ಜಾ ಮಾಡಿಕೊಂಡಿತು.

ವಿಮೋಚನೆ ಧಾರ್ಮಿಕ ಸಿದ್ಧಾಂತ ಹೊರತುಪಡಿಸಿ ಧರ್ಮದ ಕುರಿತಾಗಿ ಎಡಪಂಥೀಯತೆಯು ಅರ್ಥಶೂನ್ಯತೆಯಿಂದ ವರ್ತಿಸಿತು. ಅದರ ಸೆಕ್ಯುಲರಿಸಂ ಬರಿದಾಗಿದೆ ಮತ್ತು ಸಂವಾದ ನಡೆಸುವ ಪ್ರಜ್ಞೆ ಅದಕ್ಕಿಲ್ಲ. ಧರ್ಮವನ್ನು ಎಡಪಂಥ ಅರ್ಥಮಾಡಿಕೊಳ್ಳುವುದಕ್ಕೆ ಸೋತಿರುವುದು, ಬಹುದೊಡ್ಡ ನಾಗರಿಕತೆಯ ಪರಿಕಲ್ಪನೆಯಿಂದ ತನ್ನನ್ನು ಬೇರ್ಪಡಿಸಿಕೊಳ್ಳುವಂತೆ ಮಾಡಿದೆ. ಇದರ ಫಲವಾಗಿ ಮೌಢ್ಯದ ಕುರಿತು ಪೆದ್ದುತನ, ವಿಜ್ಞಾನದ ಕುರಿತು ಅಜ್ಞಾನ ಪ್ರದರ್ಶಿಸಿದೆ. ಧಾರ್ಮಿಕ ಚಳುವಳಿ ಮತ್ತು ಎಡಪಂಥೀಯತೆ ನಡುವಿನ ಸಂವಾದವು ಪರಿವರ್ತನಾಶೀಲ ನಡೆಯಾಗುತ್ತಿತ್ತು. ಅದು ಭಕ್ತಿ ಮತ್ತು ಮಾಕ್ರ್ಸ್‍ವಾದವನ್ನು ಬೆಸೆದಿದ್ದರೂ ಸರಿಯೆ. ಎಡಪಂಥೀಯತೆಯು ದರ್ಮದ ಕುರಿತು ಪುಕ್ಕಲುತನ ನಿಲುವು ಹೊಂದಿರುವ ಕಾರಣಕ್ಕೆ ಅದು ಬಲಪಂಥೀಯತೆಯ ಕೋಮುವಾದವನ್ನು ಅರಿತುಕೊಳ್ಳಲು ದುರ್ಬಲವಾಗಿದೆ. ಬಲಪಂಥೀಯತೆಯು ದರ್ಮ ಮತ್ತು ಆಧ್ಯಾತ್ಮವನ್ನು ಒಂದು ಸಾಧನವಾಗಿ ಬಳಸಿಕೊಂಡರೆ ಎಡಪಂಥೀಯತೆಯು ನಿಶ್ಚಲತೆಯಿಂದ ಮಂಕು ಬಡಿದಂತೆ ನಿರುಕಿಸುತ್ತಿತ್ತು. ಬಲಪಂಥೀಯತೆಯು ಇತಿಹಾಸವನ್ನು ತನಗೆ ಬೇಕಾದಂತೆ ತಿರುಚುವ ಒಂದು ಪದ್ದತಿಯನ್ನು ರೂಢಿಸಿಕೊಂಡಿತು ಮತ್ತು ಎಡಪಂಥೀಯತೆ ಇದನ್ನು ಗ್ರಹಿಸುವಲ್ಲಿಯೂ ವಿಫಲವಾಯಿತು. ಕೆವಿಐಸಿ (ಖಾದಿ ಅಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಶನ್) ಕ್ಯಾಲೆಂಡರ್‍ನಲ್ಲಿ ಗಾಂಧಿ ಜೊತೆಗೆ ಸಮಾನವಾಗಿ ಗುರುತಿಕೊಳ್ಳುವ ಮೋದಿಯ ಪ್ರಯತ್ನ ಮತ್ತು ಆ ನಡೆಯನ್ನು ಎಡಪಂಥೀಯತೆಯು ಊಹಿಸಲೂ ಸಾದ್ಯವಿಲ್ಲ.

ಅಂತಿಮವಾಗಿ ಇದು ಎರಡು ಸಾಧಾರಣ ಮಟ್ಟಗಳ ತಿಳುವಳಿಕೆಗಳ ನಡುವಿನ ಸಂಘರ್ಷ ಎನ್ನಬಹುದಾದರೂ, ಬಲಪಂಥೀಯತೆಯು ತನ್ನ ಎರಡನೆ ದರ್ಜೆಯ ಗುಣವನ್ನು ನಿರಂಕುಶಪ್ರಭುತ್ವ ಮತ್ತು ಪ್ರಜಾಪ್ರಭುತ್ವದೊಂದಿಗೆ ಸಂಯೋಜಿಸಬಲ್ಲದು. ಅದು ಎಡಪಂಥಕ್ಕಿಂತಲೂ ಕೇಡಿನ ಜೊತೆಗೆ ತುಂಬಾ ಸಕ್ರಿಯವಾಗಿದೆ. ಎಲ್ಲವನ್ನೂ ತನ್ನ ಅಗತ್ಯಕ್ಕೆ ಅನುಗುಣವಾಗಿ ತಿರುಚುವ ತಂತ್ರಗಾರಿಕೆ, ಜನಪ್ರಿಯತೆ ಮತ್ತು ತೋಳ್ಬಲದ ಪ್ರದರ್ಶನವು ಅವರಿಗೆ ಅಧಿಕಾರ ತಂದುಕೊಟ್ಟಿದೆ. ಅದೇ ಸಂದರ್ಭದಲ್ಲಿ ಎಡಪಂಥೀಯರು ನಿಷ್ಕ್ರಿಯರಾಗಿ ತಮ್ಮ ಸೈದ್ಧಾಂತಿಕ ತಪ್ಪುಗಳನ್ನು ಸಂಕುಚಿತ ದೃಷ್ಟಿಕೋನದ ಮೂಲಕ ವಿಮರ್ಶೆಗೆ ಒಳಪಡಿಸುವಲ್ಲಿ ನಿರತರಾಗಿದ್ದಾರೆ.

ಬಹುಶಃ ನವೀಕರಿಸಿದ ಇಪ್ಟಾ (ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಶನ್) ಎಡಪಂಥೀಯತೆಯ ನಿಷ್ಕ್ರಿಯತೆಯನ್ನು ಪ್ರತಿಫಲಿಸುವ ರಂಗಕಲೆಯನ್ನು ಪ್ರದರ್ಶಿಸಬಹುದು. ಬಲಪಂಥೀಯತೆ ಗೆ ಮಾಧ್ಯಮಗಳನ್ನು ಬಳಸಿಕೊಳ್ಳುವ ಕಲೆ ಕರಗತವಾಗಿದೆ ಮತ್ತು ಎಡಪಂಥೀಯರು ಅದನ್ನು ಊಹಿಸಲೂ ಸಾದ್ಯವಿಲ್ಲ. ಮೋದಿ ಸಾಧಾರಣ ಮತ್ತು ಮೊದ್ದು ರಾಜಕಾರಣಿಯಾಗಿರಬಹುದು ಆದರೆ ಕಾರಟ್‍ರವರು ಅಪ್ರಸ್ತುತ ಪಳೆಯುಳಿಕೆ ಪ್ರಾಣಿಯ ಮಾದರಿಯಾಗಿ ಕಾಣುತ್ತಾರೆ. ಅವರು ಮೋದಿಯ ಅಸಡ್ಡಾಳತನವನ್ನು ಎಂದಿಗೂ ಸರಿಗಟ್ಟಲು ಸಾಧ್ಯವಿಲ್ಲ.

  • ಶಿವ ವಿಶ್ವನಾಥನ್ ( ಭಾರತದ ಖ್ಯಾತ ಚಿಂತಕರು. ಒ.ಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರು ಹಲವು ಭಾರತೀಯ ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ)
  • ಅನುವಾದ: ಬಿ.ಶ್ರೀಪಾದ್ ಭಟ್

ಇದನ್ನು ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...