Homeಮುಖಪುಟಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?

ಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?

ಶೇ. 2.1ರಷ್ಟು ಇರುವ ಜಾತಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಶೇ. 100ರಷ್ಟು ಮೀಸಲಾತಿ ಕೊಟ್ಟಿರುವುದು ಯಾಕೆ?

- Advertisement -
- Advertisement -

ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಮೇಲೆ ಕೇಸರೀಕರಣ ನಡೆಯುತ್ತಿರುವುದು ಹೊಸ ಸಂಗತಿಯಲ್ಲ. ಏಕೆಂದರೆ, ಆರ್.ಎಸ್.ಎಸ್. ಮನುವಾದಿ ಸಿದ್ಧಾಂತದಿಂದ ಪ್ರೇರಣೆ ಹೊಂದಿದ್ದು, ತನ್ನ ಜನಾಂಗವೇ ಶ್ರೇಷ್ಠ ಎಂಬ ವ್ಯಸನ ಹಾಗೂ ಶೇ. 85ರಷ್ಟು ಇರುವ ಶೂದ್ರರು, ಮಹಿಳೆಯರು, ದಲಿತರು, ಬುಡಕಟ್ಟುಗಳನ್ನು ಯಥಾಸ್ಥಿತಿಯಲ್ಲಿಡುವುದು ಅವರ ಸ್ಪಷ್ಟ ಅಜೆಂಡಾ. ಮನುಸ್ಮೃತಿಯಲ್ಲಿ ಶೂದ್ರರು (ಲಿಂಗಾಯತರು, ಒಕ್ಕಲಿಗರು, ಕುರುಬರು, ಅಕ್ಕಸಾಲಿಗರು, ಬಡಗಿಗಳು, ಕಮ್ಮಾರರು, ಅಗಸರು, ಉಪ್ಪಾರರು, ಸಿಂಪಿಗರು ಮತ್ತು ಇನ್ನುಳಿದ ಶ್ರಮವನ್ನು ಆಧರಿಸಿ ದುಡಿಯುವ ವರ್ಗ ಹಾಗೂ ಮಹಿಳೆಯರಿಗೆ) ಶಿಕ್ಷಣ, ಆಸ್ತಿ, ಅಧಿಕಾರ, ಧನಸಂಗ್ರಹದ ಅಧಿಕಾರ ಇಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೇ ಮನುಸ್ಮೃತಿಯನ್ನು ಸಂವಿಧಾನವಾಗಿ ಜಾರಿಗೆ ತರಬೇಕು ಎನ್ನುವುದು ಆರ್.ಎಸ್.ಎಸ್ ಮತ್ತು ಬಿಜೆಪಿಯ ದುರುದ್ದೇಶ.

ಸದ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಮಿತಿಯನ್ನು ರಚಿಸಿದ್ದು, ಇದರಲ್ಲಿ ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ ಮತ್ತು ಬ್ರಾಹ್ಮಣರಿಗೋಸ್ಕರ ಎಂಬಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಈ ಪರಿಷ್ಕರಣೆ ಸಮಿತಿಯಲ್ಲಿರುವ ರೋಹಿತ್ ಚಕ್ರತೀರ್ಥ, ರಾಜಾರಾಮ ಹೆಗಡೆ, ಸತ್ಯ ಪ್ರಕಾಶ್, ಬಿ.ಜೆ.ವಾಸುಕಿ, ಡಾ. ಅನಂತ ಕೃಷ್ಣ ಭಟ್ ವಿಠಲ್ ಪೋತೆದಾರ್, ರಂಗನಾಥ ಎಲ್ಲರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ.

ಬ್ರಾಹ್ಮಣರೇ ಇರುವ ಪಠ್ಯ ಪುಸ್ತಕ ಸಮಿತಿ ಪರಿಷ್ಕರಣೆ ಮಾಡಿ ಸೇರಿಸಿರುವವರ ಪೈಕಿ ಎಸ್. ಎಲ್.ಭೈರಪ್ಪ, ಕೆ.ಬಿ.ಹೆಡ್ಗೇವಾರ್, ಗಜಾನನ ಶರ್ಮಾ, ಎನ್.ರಂಗನಾಥ ಶರ್ಮಾ, ಸುಶ್ರುತ ದೊಡ್ಡೇರಿ, ಎಸ್.ವಿ.ಪರಮೇಶ್ವರ ಭಟ್, ಗಣೇಶ್ ಶತಾವಧಾನಿ, ಬನ್ನಂಜೆ ಗೋವಿಂದಾಚಾರ್ಯ, ಶಿವಾನಂದ ಕಳವೆ, ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ. ಇವರಲ್ಲಿ ಎಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದ್ದಾರೆ.

ಶೂದ್ರ-ದಲಿತ ಸಂಘಟನೆಯ ಪಿ.ಲಂಕೇಶ್, ಎಲ್.ಬಸವರಾಜು, ಕೆ.ನೀಲಾ, ಅರವಿಂದ ಮಾಲಗತ್ತಿ ಸಾರಾ ಅಬೂಬಕ್ಕರ್ ಮತ್ತು ಬಿ.ಟಿ.ಲಲಿತಾ ನಾಯಕ್ ರವರ ಪಠ್ಯ ಕೈಬಿಡಲಾಗಿದೆ.

ಪರಿಷ್ಕರಣೆ ಸಮಿತಿ ಸೇರಿಸಿರುವ ಪುರೋಹಿಶಾಹಿಗಳ ಪಠ್ಯಗಳು

ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿದ್ದ, ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಸೇರುವ ಬದಲು ಬ್ರಿಟಿಷ್ ಸೇನೆ ಸೇರಿ ಎಂದು ಕರೆನೀಡಿದ್ದವರ ಗುಂಪಿನ ಸದಸ್ಯ ಕೆ.ಬಿ.ಹೆಡ್ಗೇವಾರ್ ಅವರ ಅರೆಬರೆ ಭಾಷಣ, ಲಿಂಗ ತಾರತಮ್ಯವನ್ನು ಸಮರ್ಥಿಸುವ ಶುಕಾಸನ ಉಪದೇಶ, ಯಜ್ಞ, ಯಾಗಗಳನ್ನು ಉತ್ತೇಜಿಸುವ ಲೇಖನ, ರಾಮರಾಜ್ಯದ ಕಟ್ಟುಕತೆಯನ್ನು ತಲೆಯಲ್ಲಿ ತುಂಬುವ ಪಠ್ಯಗಳನ್ನು ಮತ್ತು ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಹೆಂಗ್ ಪುಂಗ್ಲೀ ಎಂದು ನಗೆಪಾಟಲಿಗೆ ಗುರಿಯಾಗಿರುವ, ಕಮೆಡಿಯನ್ ಗಳನ್ನು ಮೀರಿಸುವ ವ್ಯಕ್ತಿ ಎಂದು ಕುಖ್ಯಾತಿಯಾಗಿರುವ ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ.

ಹತ್ತನೇ ತರಗತಿಯಿಂದ ಕೈಬಿಡಲಾದ ಪಠ್ಯಗಳು

ಭಗತ್ ಸಿಂಗ್

ತನ್ನನ್ನು ನೇಣಿಗೇರಿಸುವ ಬದಲು ಗುಂಡಿಟ್ಟು ಕೊಲ್ಲಿ ಎಂದು ಬ್ರಿಟಿಷರನ್ನು ಒತ್ತಾಯಿಸಿದ ಮತ್ತು ಎಂದಿಗೂ ಜೀವ ಭಿಕ್ಷೆಗಾಗಿ ಬ್ರಿಟಿಷರ ಕ್ಷಮೆಯನ್ನು ಕೋರದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ನಾಸ್ತಿಕ ಭಗತ್ ಸಿಂಗ್. ಭಗತ್ ಸಿಂಗ್ ರಂತಹ ದೇಶಭಕ್ತರನ್ನು ಕಂಡರೆ ಸಂಘಪರಿವಾರದವರಿಗೆ ಆಗುವುದಿಲ್ಲ. ಏಕೆಂದರೆ, RSSನವರ ಪರಮ ಗುರು ವಿನಾಯಕ ದಾಮೋದರ ಸಾವರ್ಕರ್ ಬ್ರಿಟಿಷರಿಗೆ ಸುಮಾರು 8 ಬಾರಿ ಕ್ಷಮಾಪಣೆ ಪತ್ರ ಬರೆದು ಅಂಡಮಾನ್ ನ ಸೆಲ್ಯುಲರ್ ಸೆರೆಮನೆಯಿಂದ ಬಿಡುಗಡೆಯಾಗಿ, ತಾವು ಬರೆದುಕೊಟ್ಟ ಮುಚ್ಚಳಿಕೆ ಪತ್ರದಂತೆಯೇ ಸ್ವಾತಂತ್ರ್ಯ ಹೋರಾಟದಿಂದ ಹೊರಬಿದ್ದವರು. ಮತ್ತು ಇದೇ ಕಾರಣಕ್ಕೆ ಬ್ರಿಟಿಷರಿಂದ ಪಿಂಚಣಿ ಪಡೆದವರು. ಇಂತಹವರನ್ನು ಸಮರ್ಥಿಸುವವರಿಗೆ ದೇಶಭಕ್ತರ ಪಠ್ಯಗಳನ್ನು ಇಡುವುದು ಸಾಧ್ಯವಿಲ್ಲ.

ಬ್ರಹ್ಮರ್ಷಿ ಶ್ರೀ ನಾರಾಯಣಗುರು ಅವರ ಧರ್ಮ ಪರಿಪಾಲನ ಯೋಗಂ

ಇವರು ಈಳವರಿಗಾಗಿ (ಈಡಿಗ) ಶಿವ ದೇವಾಲಯವನ್ನು ಕೇರಳದಲ್ಲಿ ಸ್ಥಾಪಿಸಿದವರು. ಬಸವಣ್ಣ 12ನೇ ಶತಮಾನದಲ್ಲಿ ಶೋಷಣೆಯ ವಿರುದ್ಧದ ಹೋರಾಟದಲ್ಲಿ ರೂಪಿಸಿದ ಇಷ್ಟ ಲಿಂಗ ಪರಿಕಲ್ಪನೆಯಂತೆ ನಾರಾಯಣ ಗುರುಗಳು ಶಿವ ದೇಗುಲವನ್ನು ಸ್ಥಾಪಿಸಿ, ತಳಸಮುದಾಯದವರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಯಾವುದೇ ಆಟಗಳು ಕೇರಳದಲ್ಲಿ ನಡೆಯುವುದಿಲ್ಲ. ಇದೇ ಕಾರಣದಿಂದ ಅವರ ಪಠ್ಯವನ್ನು ಕೈಬಿಡಲಾಗಿದೆ. 2022ರ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೂಡ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶವನ್ನು ನಿರಾಕರಿಸಿದ್ದನ್ನು ಇದೇ ಹಿನ್ನೆಲೆಯಲ್ಲಿ ಗಮನಿಸಬೇಕಿದೆ.

ಸ್ವಾಮಿ ವಿವೇಕಾನಂದ

ಅವರ ಕುರಿತ ಪೂರಕ ಪಠ್ಯವನ್ನು ಕೈಬಿಡಲಾಗಿದೆ. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಜಾತಿ ವ್ಯವಸ್ಥೆ, ಮೂಢನಂಬಿಕೆಗಳನ್ನು ಎಂದಿಗೂ ಸಮರ್ಥಿಸಿದವರಲ್ಲ. ಹಸಿದವನ ಮುಂದೆ ತತ್ವಜ್ಞಾನವನ್ನು ಹೇಳಬಾರದು ಎಂದವರು. ಜೊತೆಗೆ ಸಂಸ್ಕೃತದ ಹೇರಿಕೆ ಕುರಿತು ತಕರಾರು ಮತ್ತು ಗೋಮಾಂಸ ಸೇವನೆಯ ಪರ ಇದ್ದವರು. ಹಾಗಾಗಿ ಅವರ ಪಠ್ಯ ತೆಗೆದು “ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ” ಎಂಬ ವೈದಿಕ ಪಠ್ಯ ಸೇರಿಸಲಾಗಿದೆ.

ಪೆರಿಯಾರ್: ಇವರು ದ್ರಾವಿಡ ಸ್ವಾಭಿಮಾನಿ ಚಳವಳಿಯನ್ನು ಕಟ್ಟಿದವರು. ತಮಿಳುನಾಡಿನಲ್ಲಿ ಇವರ ಸ್ವಾಭಿಮಾನಿ ಚಳವಳಿಗಳ ಕಾರಣದಿಂದಲೇ ಬಿಜೆಪಿ ಮತ್ತು ಸಂಘಪರಿವಾರದ ಬೇಳೆ ಬೇಯದು. ಧರ್ಮ, ದೇವರು, ಜಾತಿ, ಮೂಢನಂಬಿಕೆ, ಅಸ್ಪೃಶ್ಯತೆ ವಿರುದ್ಧದ ಇವರ ಹೋರಾಟಗಳು ಯಥಾಸ್ಥಿತಿವಾದಿಗಳಿಗೆ ಎಂದಿಗೂ ನುಂಗಲಾಗದ ಕಹಿಗುಳಿಗೆ. ತಮಿಳುನಾಡಿನಲ್ಲಿ ಕೂಡ ಬಿಜೆಪಿಯವರಿಗೆ ಬೇರು ಬಿಡಲು ಇದೇ ಕಾರಣದಿಂದ ಸಾಧ್ಯವಾಗುತ್ತಿಲ್ಲ.

ಕೋಮು ಸಾಮರಸ್ಯದ ರಂಜಾನ್ ಸುರಕುಂಬ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕನ್ನಡ ಮೌಲ್ವಿ

ಆರ್.ಎಸ್.ಎಸ್. ಮತ್ತು ಬಿಜೆಪಿಗೆ ಸಾಮರಸ್ಯದಲ್ಲಿ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಇವೆರೆಡೂ ಪಠ್ಯಗಳನ್ನು ಕೈಬಿಡಲಾಗಿದೆ. ದೇಶವನ್ನು ನಿರ್ಣಾಯಕವಾಗಿ ಒಡೆಯುವುದೇ ಇವರ ಸಿದ್ಧಾಂತ. ದೇಶದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಕೂಡ ಸಂಘ ಪರಿವಾರವೇ. ಇದಕ್ಕೂ ಮುನ್ನ ಪುಷ್ಯಮಿತ್ರನ ಕಾಲದಲ್ಲಿ ಮನುಧರ್ಮಶಾಸ್ತ್ರವನ್ನು ರಚಿಸಿ, 6,500 ಜಾತಿಗಳಾಗಿ ಭಾರತೀಯರನ್ನು ಒಡೆದವರೂ ಇವರ ಸಂತಾನವೇ. ಇನ್ನು ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ, ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ, ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ವಿವಾದ, ಕೊರೊನಾ ಸಮಯದಲ್ಲಿ ತಬ್ಲೀಘಿ ಸೋಂಕು, ಇತ್ತೀಚಿನ ದಿನಗಳಲ್ಲಿ ಹಿಜಾಬ್, ಹಲಾಲ್ ವರ್ಸಸ್ ಜಟ್ಕಾ, ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರಕ್ಕೆ ವಿರೋಧ, ಆಜಾನ್ ವಿವಾದ ಮೊದಲಾದ ನೂರಾರು ಕುತುಂತ್ರಗಳೊಂದಿಗೆ ದೇಶವನ್ನು ಇಬ್ಬಾಗ ಮಾಡುವುದೇ ಇವರ ನಿತ್ಯ ನಿರಂತರ ಕಾಯಕವಾಗಿದೆ. ಇವರು ದೇಶದ ಸಾರ್ವಭೌಮತೆ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಮರಸ್ಯಕ್ಕೆ ಕಂಟಕವಾಗಿದ್ದಾರೆ. ಇಂತಹ ಮನಃಸ್ಥಿತಿಯವರು ಊರುಭಂಗ, ಮರಳಿ ಮನೆಗೆ, ಶಿವಕೋಟಾಚಾರ್ಯರ ಸುಕುಮಾರ ಸ್ವಾಮಿ ಕಥೆ, ಮೂರ್ತಿರಾಯರ ವ್ಯಾಘ್ರ ಪಠ್ಯಗಳನ್ನು ಕೂಡ ಕೈಬಿಟ್ಟಿದ್ದಾರೆ.

ರಾಜ್ಯದಲ್ಲಿ ಜಾತಿವಾರು ಆಧಾರದಲ್ಲಿರುವ ಜನಸಂಖ್ಯೆ
ಜಾತಿ ಜನಸಂಖ್ಯೆ ಶೇಕಡಾವಾರು
ದಲಿತರು – 1.8 ಕೋಟಿ – 18%
ಮುಸ್ಲಿಮರು – 75 ಲಕ್ಷ – 11.53%
ಲಿಂಗಾಯತರು – 59 ಲಕ್ಷ – 9.8%
ಒಕ್ಕಲಿಗರು – 49 ಲಕ್ಷ – 8.16%
ಕುರುಬರು – 43 ಲಕ್ಷ – 7.1%
ಪರಿಶಿಷ್ಟ ಪಂಗಡ – 42 ಲಕ್ಷ – 7೫
ಈಡಿಗರು – 14 ಲಕ್ಷ – 2.2%
ಬ್ರಾಹ್ಮಣರು – 13 ಲಕ್ಷ – 2.1%

ಮೇಲಿನ ಅಂಕಿಅಂಶಗಳನ್ನು ನೋಡಿದಾಗ ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿರುವ ಶೇ. 2.1ರಷ್ಟಿರುವ ಬ್ರಾಹ್ಮಣರು ಪಠ್ಯ ಪರಿಷ್ಕರಣೆಯಲ್ಲಿ ಸ್ಥಾನ ಪಡೆದದ್ದು ಹೇಗೆ? ಎಂಬ ಪ್ರಶ್ನೆಗೆ ಸರಳ ಉತ್ತರವಿದೆ. ರಾಜ್ಯದಲ್ಲಿ ಲಿಂಗಾಯತ ಜಾತಿಗೆ ಸೇರಿದ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಹುದ್ದೆಯಲ್ಲಿ ಕೂರಿಸಿ ಅಧಿಕಾರ ನಡೆಸುತ್ತಿರುವವರು ಯಾರು ಎಂಬುದು ಮೇಲಿನ ಉದಾಹರಣೆಗಳನ್ನು ನೋಡಿದರೆ ಮನದಟ್ಟಾಗದೆ ಇರದು.

ಇನ್ನು ಬ್ರಾಹ್ಮಣರೇ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಹಾಗು ಸಾಮರಸ್ಯವನ್ನು ಕದಡುವ, ಮೂಢನಂಬಿಕೆ, ಕಂದಾಚಾರವನ್ನು ಬಿತ್ತುವ ಸಲುವಾಗಿ ರೂಪಿಸಿರುವ ಪಠ್ಯಗಳನ್ನು ಬಹುಸಂಖ್ಯಾತರು ಏಕೆ ಓದಬೇಕು? ಶೇ. 2.1ರಷ್ಟು ಇರುವ ಜಾತಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಶೇ. 100ರಷ್ಟು ಮೀಸಲಾತಿ ಕೊಟ್ಟಿರುವುದು ಯಾಕೆ? ಅಷ್ಟಕ್ಕೂ ಬ್ರಾಹ್ಮಣರ ಮಕ್ಕಳು ಸಂಸ್ಕೃತ ವಿಷಯವನ್ನು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಾರೆ. ಸಂಸ್ಕೃತ, ಹಿಂದಿ ಪರ ಇರುವವರು ಮತ್ತು ಯಥಾಸ್ಥಿತಿವಾದವನ್ನು ಸಮರ್ಥಿಸುವವರು ರೂಪಿಸಿರುವ ಪಠ್ಯಗಳನ್ನು ಕನ್ನಡ ಶಾಲೆಯ ಮಕ್ಕಳು ಯಾಕೆ ಓದಬೇಕು? ಹಾಗೆ ನೋಡಿದರೆ ಬ್ರಾಹ್ಮಣರು ಕನ್ನಡ ಪಠ್ಯ ಪುಸ್ತಕ ಸಮಿತಿಯಲ್ಲಿ ಇರಲಿಕ್ಕೆ ಕೂಡ ಅರ್ಹರಲ್ಲ.

ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಚಿಂತನೆಗಳ ತಿರುಚುವಿಕೆ: ಪ್ರಗತಿಪರ ವಿಚಾರ ಕೈಬಿಟ್ಟು, ಶಾಸ್ತ್ರ, ವೇದಾಂತ ಹೇರಿದ ನೂತನ ಪಠ್ಯ ಸಮಿತಿ

ಬ್ರಾಹ್ಮಣರು ಕೈಬಿಟ್ಟಿರುವ ಪಠ್ಯಗಳಲ್ಲಿ ಲಿಂಗಾಯತರು, ಮುಸ್ಲಿಮರು, ದಲಿತರು, ಲಂಬಾಣಿ ಜಾತಿಗೆ ಸೇರಿದ ಲೇಖಕರಿದ್ದರೆ, ಇವರು ಸೇರಿಸಿರುವ ಪಠ್ಯಗಳಲ್ಲಿ ಎಲ್ಲರೂ ಬ್ರಾಹ್ಮಣರೇ ರಚಿಸಿರುವ ಮತ್ತು ಯಥಾಸ್ಥಿತಿವಾದವನ್ನು ಪೋಷಿಸುವ, ಸಾಮರಸ್ಯವನ್ನು ಹಾಳುಗೆಡಹುವ, ಮೂಢನಂಬಿಕೆಯನ್ನು ಬಿತ್ತುವ ಲೇಖನಗಳಿವೆ. ಇವನ್ನು ಕನ್ನಡ ಶಾಲೆಯ ಬಡ, ಶೂದ್ರ, ದಲಿತ, ಶೋಷಿತ ಸಮುದಾಯಗಳು ಏಕೆ ಓದಬೇಕು? ಇನ್ನಾದರೂ ಇಂತಹ ವಿಷಯಗಳನ್ನು ಕನ್ನಡಿಗರು ಗಂಭೀರವಾಗಿ ಪರಿಗಣಿಸಬೇಕು. ವಿಶೇಷವಾಗಿ ಲಿಂಗಾಯತ, ದಲಿತ, ಮುಸ್ಲಿಂ, ಲಂಬಾಣಿ ಜಾತಿಯವರು ಭವಿಷ್ಯದಲ್ಲಿ ತಮ್ಮ ನಿಲುವನ್ನು ಖಚಿತಪಡಿಸಿಕೊಳ್ಳಬೇಕು.

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬ್ರಾಹ್ಮಣರು, ದಲಿತರು ಅಂಥ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ನೀವು ಜಾತ್ಯಾತೀತರೆ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...