Homeಅಂತರಾಷ್ಟ್ರೀಯಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಆರ್‌.ಸಿ.ಇ.ಪಿ ಒಪ್ಪಂದ ವಿರೋಧಿಸಿ ರೈತ ಚಳವಳಿಗಳಿಂದ ಅಕ್ಟೊಬರ್ 24 ರಂದು ಕರೆ ನೀಡಿರುವ ಭಾರತದಾದ್ಯಂತ ಪ್ರತಿಭಟನೆಗೆ ನಾವೇಕೆ ಭಾಗವಹಿಸಬೇಕು?

- Advertisement -
- Advertisement -

ಅದು 2015-16 ರ ಕಾಲ. ನರೇಂದ್ರ ಮೋದಿಯವರು ಸುಗ್ರಿವಾಜ್ಞೆಯ ಮೂಲಕ ಭೂಸ್ವಾಧೀನ ಕಾಯ್ದೆಯನ್ನು ತರಲು ಹೊರಟು ರೈತರ ಪ್ರತಿರೋಧಕ್ಕೆ ಮಣಿದು ಅವಮಾನಿತರಾಗಿದ್ದರು. ಅವರ ವಿದೇಶಿ ಪ್ರವಾಸಿಗಳು ಶುರುವಾಗಿದ್ದ ಕಾಲವಾದ್ದರಿಂದ ಹೋದ ದೇಶಗಳಿಗೆಲ್ಲಾ ಒಂದೊಂದು ಕೊಡುಗೆ ನೀಡಿಬರುತ್ತಿದ್ದರು. ಚೀನಾಕ್ಕೆ ಹೋದ ಪ್ರಧಾನಿಗಳು ಅವರನ್ನು ಖುಷಿಪಡಿಸಲು ರೇಷ್ಮೆ ಮೇಲಿನ ಆಮದು ಸುಂಕವನ್ನು ಏಕಾಏಕಿ 30% ನಿಂದ 15%ಗೆ ಇಳಿಸಿಬಿಟ್ಟರು. ಚೀನಾದಿಂದ ಭಾರೀ ಪ್ರಮಾಣದಲ್ಲಿ ರೇಷ್ಮೆ ಆಮದಾದುದ್ದರಿಂದ ಇಲ್ಲಿ ರೇಷ್ಮೆ ಬೆಲೆ ಸಂಪೂರ್ಣ ಕುಸಿಯಿತು. ಯಾವ ಮಟ್ಟಕ್ಕೆಂದರೆ 300 ರೂ ಇದ್ದ ಕೆ.ಜಿ ರೇಷ್ಮೆ 120 ರೂಗಳಿಗೆ ಕುಸಿಯಿತು. ರೇಷ್ಮೆ ಬೆಳೆಗಾರರು ಸಾಲು ಸಾಲಾಗಿ ಆತ್ಮಹತ್ಯೆಗೆ ಶರಣಾದರು.

ಅದೇ ಪರಿಸ್ಥಿತಿ ಕಬ್ಬು ಬೆಳೆದ ರೈತರಿಗೂ ಬಂದಿತು. ಏಕೆಂದರೆ ಸಕ್ಕರೆಯ ಮೇಲಿನ ಆಮದು ಸುಂಕವನ್ನು ಸರ್ಕಾರ ದೀಢಿರ್‌ ಎಂದು ಕಡಿಮೆ ಮಾಡಿದ್ದರ ಪರಿಣಾಮ ಬ್ರೆಜಿಲ್‌ ಕ್ಯೂಬಾ ದಂತಹ ಸಕ್ಕರೆ ನಾಡುಗಳಿಂದ ನುಗ್ಗಿದ ಆಮದು ಇಲ್ಲಿನ ರೈತರಿಗೆ ಕಬ್ಬಿಗೆ ಸಮರ್ಪಕ ಮತ್ತು ಸಕಾಲದಲ್ಲಿ ಬೆಲೆ ದೊರಕದಂತೆ ಮಾಡಿತ್ತು. ಇದರಿಂದ ಮಂಡ್ಯ ಜಿಲ್ಲೆಯೊಂದರಲ್ಲಿಯೇ ವರ್ಷಕ್ಕೆ ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿದ್ದವು.

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಮುಂಬರುವ ವರ್ಷಗಳಲ್ಲಿ ಯಾವ ಬೆಳೆ ಬೆಳೆಯುವ ರೈತರೂ ಸಹ ಬದುಕುಳಿಯಲು ಸಾಧ್ಯವಾಗದಂತಹ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಳ್ಳುತ್ತಿದೆ. ಅದೇ ರೈತರನ್ನು ಬೀದಿಗೆ ತಳ್ಳಲಿರುವ ಆರ್‌.ಸಿ.ಇ.ಪಿ ಒಪ್ಪಂದವಾಗಿದೆ.

ಭಾರತದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾಗತೀಕರಣದ WTO ಒಪ್ಪಂದದ ಸುಳಿಗೆ ಸಿಲುಕಿ 4 ಲಕ್ಷಕ್ಕೂ ಅಧಿಕ ರೈತರು ತಮ್ಮ ಜೀವತೆತ್ತಿದ್ದಾರೆ. ಸತತ ಬರ ಮತ್ತು ಅನಿರೀಕ್ಷಿತ ಪ್ರವಾಹಗಳಿಂದಾಗಿ ಬೆಳೆ ಕಳೆದುಕೊಂಡು ಕಂಗೆಟ್ಟಿದ್ದಾರೆ. ಇಂತಹ ಕಡುಕಷ್ಟದ ಸಮಯದಲ್ಲಿ ರೈತರ ಗಾಯದ ಮೇಲೆ ಬರೆ ಎಳೆಯಲು ದುಷ್ಟ ಕೇಂದ್ರ ಸರ್ಕಾರ ಆರ್‌.ಸಿ.ಇ.ಪಿ ಒಪ್ಪಂದಕ್ಕೆ ಮುಂದಾಗಿದೆ.

ಏನಿದು ಆರ್‌.ಸಿ.ಇ.ಪಿ ಒಪ್ಪಂದ??

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌.ಸಿ.ಇ.ಪಿ) ಎಂದು ಕರೆಸಿಕೊಳ್ಳುವ ಈ ಒಪ್ಪಂದವನ್ನು ಭಾರತ ಇತರ ನೆರಹೊರೆಯ 15 ದೇಶಗಳೊಂದಿಗೆ ಮಾಡಿಕೊಳ್ಳುತ್ತಿದೆ. ಇದರಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಬಲಾಢ್ಯ ದೇಶಗಳೂ ಸೇರಿವೆ.

ಒಪ್ಪಂದದನ್ವಯ ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಈ ದೇಶಗಳಲ್ಲಿ ಯಾವುದೇ ಆಮದು ಸುಂಕಗಳಿರುವುದಿಲ್ಲ. ಅಂದರೆ ಮುಕ್ತ ವ್ಯಾಪಾರ. ಒಪ್ಪಂದಕ್ಕೆ ಒಳಪಟ್ಟ ಯಾವ ದೇಶಗಳು ಬೇಕಾದರೂ, ಯಾವ ದೇಶದಲ್ಲಾದರೂ ತಮ್ಮ ಸರಕುಗಳನ್ನು ಮುಕ್ತವಾಗಿ ಮಾರಬಹುದು. ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.

ನಮಗೇನು ತೊಂದರೆ??

ಇದರಿಂದ ಭಾರತಕ್ಕೇನೂ ತೊಂದರೆ ಎಂದು ನೀವು ಕೇಳಬಹುದು. ಮುಂದುವರಿದ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ಕೃಷಿ ಮೇಲಿನ ಹೂಡಿಕೆ ಸಾಕಷ್ಟು ಹೆಚ್ಚಿದೆ. ಉದಾಹರಣೆಗೆ ಒಂದು ಟನ್‌ ಕಬ್ಬು ಬೆಳೆಯಲು ಭಾರತದ ರೈತ ಅಂದಾಜು 2000 ಖರ್ಚು ಮಾಡಿದರೆ ಅದು ಮುಂದುವರಿದ ದೇಶಗಳಲ್ಲಿ ಕೇವಲ 1000 ಖರ್ಚು ಮಾಡಿ ಒಂದು ಟನ್ ಕಬ್ಬು ಬೆಳೆಯುತ್ತಾರೆ. ಕಾರಣವೆಂದರೆ ಬೀಜ, ಗೊಬ್ಬರ ಸೇರಿದಂತೆ ಆ ದೇಶಗಳಲ್ಲಿ ರೈತರಿಗೆ ಹೆಚ್ಚಿನ ಸಬ್ಸಿಡಿ ದೊರೆಯುತ್ತಿದೆ. ಆದರೆ ಭಾರತದಲ್ಲಿ ಈ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡುತ್ತಿದ್ದು ಸಂಪೂರ್ಣ ನಿಲ್ಲಿಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಭಾರತ ಮಾಡಿಕೊಂಡಿರುವ WTO ಒಪ್ಪಂದದ ಭಾಗವಾಗಿ ಈ ಸಬ್ಸಿಡಿ ಕಡಿತ ನಡೆಯುತ್ತಿದೆ. ರೈತರಿಗೆ ನೀಡುತ್ತಿರುವ ಸಬ್ಸಿಡಿ ನಿಲ್ಲಿಸದಿದ್ದರೆ ನಿಮಗೆ ಸಾಲ ಕೊಡುವುದಿಲ್ಲ ಎಂದು IMF ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಮೇಲೆ ಒತ್ತಡ ತರುತ್ತಿವೆ.

ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಉತ್ಪಾದನೆಗಳನ್ನು ಆ ದೇಶಗಳು ಉತ್ಪಾದಿಸಿ ನಮ್ಮಲ್ಲಿ ಬಂದು ನಮಗಿಂತಲೂ ಕಡಿಮೆ ದರಕ್ಕೆ ಮಾರುವುದರಿದ ಇಲ್ಲಿನ ರೈತರ ಸ್ಥಿತಿ ಹೇಗಾಗುತ್ತದೆ ನೀವೇ ಊಹಿಸಿ? ರೇಷ್ಮೆ ಮತ್ತು ಮತ್ತು ಸಕ್ಕರೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದಾಗ ರೈತರು ಸತ್ತರಲೇ ಥೇಟ್ ಅದೇ ಸ್ಥಿತಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸೃಷ್ಟಿಯಾಗುತ್ತದೆ ಅಷ್ಟೇ..

ಇನ್ನು ಬೀಜ ಸ್ವಾವಲಂಬನೆಯೆಂಬುದು ಇಂದು ಮರೀಚಿಕೆಯ ಮಾತಾಗಿದೆ. 20 ವರ್ಷಗಳ ಹಿಂದೆ ಬಿತ್ತನೆಗೆ ಬೀಜಗಳನ್ನು ಖರೀದಿಸಬೇಕಾಗುತ್ತೆಂಬ ಸುಳಿವು ಯಾರಿಗೂ ಇರಲಿಕ್ಕಿಲ್ಲ ಬಿಡಿ. ಆದರೆ ಈಗ ಪ್ರತಿಯೊಂದು ಬೀಜಗಳಿಗೂ ಬಹುರಾಷ್ಟ್ರೀಯ ದರೋಡೆಕೋರ ಕಂಪನಿಗಳನ್ನು ನಂಬಿಕೂರಬೇಕಿದೆ. ಅವರೋ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯಡಿ ಎಲ್ಲಾ ಬೀಜಗಳಿಗೂ ಪೇಟೆಂಟ್‌ ಮಾಡಿಕೊಂಡಿದ್ದಾರೆ. ಇನ್ನ ನಮ್ಮ ರೈತರು ಅವರೇಳಿದ ರೇಟಿಗೆ ಬೀಜಗಳನ್ನು ಕೊಳ್ಳುವ ದುಸ್ಥಿತಿ ಬರಲಿದೆ. ಬೇಡ ನಾವೇ ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳಲು ಹೋದರೆ ಅದಕ್ಕೂ ಅಪರಾಧಿಗಳೆಂಬ ಪಟ್ಟ ಕಟ್ಟಲು ಅವರ ಬಳಿ ಕಾನೂನಿನ ಕುಣಿಗೆ ಇದೆ.

ಈ ಒಪ್ಪಂದದನ್ವಯ ನಮ್ಮ ಕೋರ್ಟುಗಳಲ್ಲಿ ವಿದೇಶಿಗರ ಆಟಾಟೋಪಗಳನ್ನು ಪ್ರಶ್ನಿಸಲು ಬರುವುದಿಲ್ಲ. ಖಾಸಗಿ ಮಧ್ಯಸ್ಥಿಕೆ ನ್ಯಾಯಮಂಡಳಿಗಳಲ್ಲಿ ಮಾತ್ರ ಪ್ರಶ್ನಿಸಬಹುದಾದರೆ ಆ ಶಕ್ತಿ ನಮ್ಮ ರೈತರಿಗೆಲ್ಲಿಂದ ಬರಬೇಕು? ಇನ್ನು ನಮ್ಮ ಸರ್ಕಾರಗಳು ಸಬ್ಸಿಡಿ ರೀತಿಯ ಯಾವುದೇ ಸಹಾಯಗಳನ್ನು ಮಾಡಿದರೆ ಅವರ ಮೆಲೆಯೇ ದೂರು ದಾಖಲಾಗುವ ಅಪಾಯವಿದೆ ಎಂದಾದರೆ ಅವರೆಲ್ಲಿ ರೈತರಿಗೆ ಸಹಾಯ ಮಾಡುತ್ತಾರೆ?

ರೈತರು ಬೆಳೆಯುವುದನ್ನು ಒಂದು ದಿನ ನಿಲ್ಲಿಸಿದರೆ ಸಾಕು ದೇಶ ಅಲ್ಲಾಡಿಹೋಗುತ್ತದೆ… ಇದು ನಿಜವೇ?

ಈ ಮಾತನ್ನು ನಾವು ಆಗ್ಗಾಗ್ಗೆ ಕೇಳುತ್ತಿರುತ್ತೇವೆ. ರೈತರಿದ್ದರೆ ಅನ್ನ, ಇಲ್ಲದಿದ್ದರೆ ಯಾವ ಸರ್ಕಾರಗಳು ಏನು ಮಾಡಲಾಗುವುದಿಲ್ಲ, ರೈತರು ಬೆಳೆಯುವುದನ್ನು ನಿಲ್ಲಿಸಿದರೆ ಸರ್ಕಾರಗಳು ಬಗ್ಗಿಬಿಡುತ್ತವೆ ಎಂದು ಹಲವರು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ ವಾಸ್ತವವೆನೇಂದರೆ ಆ ಪರಿಸ್ಥಿತಿ ಸದ್ಯಕ್ಕಿಲ್ಲ.

ಏಕೆಂದರೆ ಈ ಮೊದಲೇ ಹೇಳಿದಂತೆ ಭಾರತ ಸರ್ಕಾರ ಆಹಾರಕ್ಕಾಗಿ ಇಂದು ದೇಶಿ ರೈತರನ್ನು ನಂಬಿ ಕೂತಿಲ್ಲ. ಒಂದು ವಿದೇಶದಿಂದ ಬೇಕಾದಷ್ಟು ಆಮದು ಮಾಡಿಕೊಳ್ಳುತ್ತದೆ. ಎರಡನೇದಾಗಿ ಅಂಬಾನಿ, ಅದಾನಿ ಥರದ ದೊಡ್ಡ ದೊಡ್ಡ ಉದ್ದಿಮೆಪತಿಗಳು ಕೃಷಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಹೆಕರೆ ಭೂಮಿ ಖರೀದಿಸಿರುವ ಅವರು ಮುಂದೆ ಕೈಗಾರಿಕೆ ಮಾದರಿಯಲ್ಲಿ ಲಕ್ಷಾಂತರ ಹೆಕರೆ ಪ್ರದೇಶದಲ್ಲಿ ಯಂತ್ರಚಾಲಿತ ಕೃಷಿ ಮಾಡಲು ಸಿದ್ದವಿದ್ದಾರೆ. ಈ ರೀತಿಯ ದೊಡ್ಡ ಕೃಷಿಯಿಂದ ಅವರ ಉತ್ಪಾದನಾ ವೆಚ್ಚ ನಮ್ಮ ಊಹೆ ಮೀರಿ ಕಡಿಮೆಯಾಗುತ್ತದೆ. ಉತ್ಪಾದಿಸಿದ ವಸ್ತುಗಳನ್ನು ಮಾರಲು ಅವರದೇ ಮಾಲ್‌ಗಳು, ಚಿಲ್ಲರೆ ಮಳಿಗೆಗಳು ಎಲ್ಲೆಂದರೆ ತಲೆಯೆತ್ತಿವೆ. ಕಂಗಾಲಾದ ರೈತರಿಂದ ಜಮೀನು ಕಿತ್ತುಕೊಂಡು ಈ ರೀತಿಯ ದೊಡ್ಡ ಬಂಡವಾಳಿಗರು ಕೃಷಿ ನಡೆಸಿದರೆ ರೈತರೂ ಮುಗಿದಂತೆಯೇ, ಅವರನ್ನು ನಂಬಿರುವ ಚಿಲ್ಲರೆ ಮಾರಟಗಾರರು ಮುಗಿದಂತೆಯೇ ಸರಿ. ತಮ್ಮ ಜಮೀನು ಮಾರಿದ ರೈತರ ಅದೇ ಜಮೀನನಲ್ಲಿ ಕೂಲಿಯಾಳಾಗಿ ಬಿಡಿಗಾಸಿಗೆ ದುಡಿಯುವ ದಿನ ಖಂಡಿತಾ ದೂರವಿಲ್ಲ.

ಐಕ್ಯ ಹೋರಾಟವೊಂದೇ ದಾರಿ..

ಒಟ್ಟಿನಲ್ಲಿ ಬಹುಮುಖ ಹೊಡೆತ ನೀಡುವ, ಈ ದೇಶದ ರೈತರನ್ನು ಒಳಗೊಂಡಂತೆ ಬಡವರನ್ನು ಮತ್ತೆ ಜೀತಕ್ಕೆ ದೂಡುವ ಭಾರೀ ಹುನ್ನಾರವೊಂದು ಮುಂದಿನ ದಿನಗಳಲ್ಲಿ ಕಾದಿದೆ ಎಂಬುದರಲ್ಲಿ ಸಂದೇಹವೇ ಬೇಡ. ಹಾಗಾಗಿ ನಮ್ಮ ಉಳಿವಿಗಾಗಿ ದೊಡ್ಡ ಹೋರಾಟ ನಡೆಯಲೇಬೇಕಿದೆ. ಆದ್ದರಿಂದ ಈ ಆರ್‌.ಸಿ.ಇ.ಪಿ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಅಕ್ಟೋಬರ್ 24 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಭಾರೀ ಹೋರಾಟಕ್ಕೆ ರೈತ ಚಳವಳಿಗಳು ಮುಂದಾಗಿವೆ.

“ದೇಶದಲ್ಲಿ ಎರಡೇ ರೀತಿಯ ರೈತರಿದ್ದಾರೆ. ಒಂದು ಆತ್ಮಹತ್ಯೆ ಮಾಡಿಕೊಂಡಿರುವ ರೈತರು ಇನ್ನೊಂದು ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಎಂದು ಹಿರಿಯ ಸಾಮಾಜಿಕ ಚಿಂತಕರಾದ ಶಿವಸುಂದರ್‌ರವರು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ”. ಇಷ್ಟು ದಿನ ರೈತರು ಬೆಳೆದ ಅನ್ನತಿಂದು ಅವರ ಋಣದಲ್ಲಿರುವ ಸಾಮಾನ್ಯ ನಾಗರೀಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತರನ್ನು ಸಾಯದಂತೆ ತಡೆಯುವುದು ಅತೀ ಜರೂರಿನ ಕೆಲಸವಾಗಿದೆ. ಕೇವಲ ಒಂದು ದಿನದ ಹೋರಾಟ ಮಾತ್ರವಲ್ಲದೇ ಈ ವಿಚಾರವನ್ನು ನೂರಾರು ಜನರಿಗೆ ತಲುಪಿಸಿ ಎಚ್ಚರಿಸುವ ಹೋರಾಟವನ್ನು ನಿರಂತರವಾಗಿ ಕಾಪಾಡುವ ಹೊಣೆ ನಮ್ಮೆಲ್ಲದರಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...