Homeಅಂತರಾಷ್ಟ್ರೀಯಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಆರ್‌.ಸಿ.ಇ.ಪಿ ಒಪ್ಪಂದ ವಿರೋಧಿಸಿ ರೈತ ಚಳವಳಿಗಳಿಂದ ಅಕ್ಟೊಬರ್ 24 ರಂದು ಕರೆ ನೀಡಿರುವ ಭಾರತದಾದ್ಯಂತ ಪ್ರತಿಭಟನೆಗೆ ನಾವೇಕೆ ಭಾಗವಹಿಸಬೇಕು?

- Advertisement -
- Advertisement -

ಅದು 2015-16 ರ ಕಾಲ. ನರೇಂದ್ರ ಮೋದಿಯವರು ಸುಗ್ರಿವಾಜ್ಞೆಯ ಮೂಲಕ ಭೂಸ್ವಾಧೀನ ಕಾಯ್ದೆಯನ್ನು ತರಲು ಹೊರಟು ರೈತರ ಪ್ರತಿರೋಧಕ್ಕೆ ಮಣಿದು ಅವಮಾನಿತರಾಗಿದ್ದರು. ಅವರ ವಿದೇಶಿ ಪ್ರವಾಸಿಗಳು ಶುರುವಾಗಿದ್ದ ಕಾಲವಾದ್ದರಿಂದ ಹೋದ ದೇಶಗಳಿಗೆಲ್ಲಾ ಒಂದೊಂದು ಕೊಡುಗೆ ನೀಡಿಬರುತ್ತಿದ್ದರು. ಚೀನಾಕ್ಕೆ ಹೋದ ಪ್ರಧಾನಿಗಳು ಅವರನ್ನು ಖುಷಿಪಡಿಸಲು ರೇಷ್ಮೆ ಮೇಲಿನ ಆಮದು ಸುಂಕವನ್ನು ಏಕಾಏಕಿ 30% ನಿಂದ 15%ಗೆ ಇಳಿಸಿಬಿಟ್ಟರು. ಚೀನಾದಿಂದ ಭಾರೀ ಪ್ರಮಾಣದಲ್ಲಿ ರೇಷ್ಮೆ ಆಮದಾದುದ್ದರಿಂದ ಇಲ್ಲಿ ರೇಷ್ಮೆ ಬೆಲೆ ಸಂಪೂರ್ಣ ಕುಸಿಯಿತು. ಯಾವ ಮಟ್ಟಕ್ಕೆಂದರೆ 300 ರೂ ಇದ್ದ ಕೆ.ಜಿ ರೇಷ್ಮೆ 120 ರೂಗಳಿಗೆ ಕುಸಿಯಿತು. ರೇಷ್ಮೆ ಬೆಳೆಗಾರರು ಸಾಲು ಸಾಲಾಗಿ ಆತ್ಮಹತ್ಯೆಗೆ ಶರಣಾದರು.

ಅದೇ ಪರಿಸ್ಥಿತಿ ಕಬ್ಬು ಬೆಳೆದ ರೈತರಿಗೂ ಬಂದಿತು. ಏಕೆಂದರೆ ಸಕ್ಕರೆಯ ಮೇಲಿನ ಆಮದು ಸುಂಕವನ್ನು ಸರ್ಕಾರ ದೀಢಿರ್‌ ಎಂದು ಕಡಿಮೆ ಮಾಡಿದ್ದರ ಪರಿಣಾಮ ಬ್ರೆಜಿಲ್‌ ಕ್ಯೂಬಾ ದಂತಹ ಸಕ್ಕರೆ ನಾಡುಗಳಿಂದ ನುಗ್ಗಿದ ಆಮದು ಇಲ್ಲಿನ ರೈತರಿಗೆ ಕಬ್ಬಿಗೆ ಸಮರ್ಪಕ ಮತ್ತು ಸಕಾಲದಲ್ಲಿ ಬೆಲೆ ದೊರಕದಂತೆ ಮಾಡಿತ್ತು. ಇದರಿಂದ ಮಂಡ್ಯ ಜಿಲ್ಲೆಯೊಂದರಲ್ಲಿಯೇ ವರ್ಷಕ್ಕೆ ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿದ್ದವು.

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಮುಂಬರುವ ವರ್ಷಗಳಲ್ಲಿ ಯಾವ ಬೆಳೆ ಬೆಳೆಯುವ ರೈತರೂ ಸಹ ಬದುಕುಳಿಯಲು ಸಾಧ್ಯವಾಗದಂತಹ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಳ್ಳುತ್ತಿದೆ. ಅದೇ ರೈತರನ್ನು ಬೀದಿಗೆ ತಳ್ಳಲಿರುವ ಆರ್‌.ಸಿ.ಇ.ಪಿ ಒಪ್ಪಂದವಾಗಿದೆ.

ಭಾರತದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾಗತೀಕರಣದ WTO ಒಪ್ಪಂದದ ಸುಳಿಗೆ ಸಿಲುಕಿ 4 ಲಕ್ಷಕ್ಕೂ ಅಧಿಕ ರೈತರು ತಮ್ಮ ಜೀವತೆತ್ತಿದ್ದಾರೆ. ಸತತ ಬರ ಮತ್ತು ಅನಿರೀಕ್ಷಿತ ಪ್ರವಾಹಗಳಿಂದಾಗಿ ಬೆಳೆ ಕಳೆದುಕೊಂಡು ಕಂಗೆಟ್ಟಿದ್ದಾರೆ. ಇಂತಹ ಕಡುಕಷ್ಟದ ಸಮಯದಲ್ಲಿ ರೈತರ ಗಾಯದ ಮೇಲೆ ಬರೆ ಎಳೆಯಲು ದುಷ್ಟ ಕೇಂದ್ರ ಸರ್ಕಾರ ಆರ್‌.ಸಿ.ಇ.ಪಿ ಒಪ್ಪಂದಕ್ಕೆ ಮುಂದಾಗಿದೆ.

ಏನಿದು ಆರ್‌.ಸಿ.ಇ.ಪಿ ಒಪ್ಪಂದ??

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌.ಸಿ.ಇ.ಪಿ) ಎಂದು ಕರೆಸಿಕೊಳ್ಳುವ ಈ ಒಪ್ಪಂದವನ್ನು ಭಾರತ ಇತರ ನೆರಹೊರೆಯ 15 ದೇಶಗಳೊಂದಿಗೆ ಮಾಡಿಕೊಳ್ಳುತ್ತಿದೆ. ಇದರಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಬಲಾಢ್ಯ ದೇಶಗಳೂ ಸೇರಿವೆ.

ಒಪ್ಪಂದದನ್ವಯ ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಈ ದೇಶಗಳಲ್ಲಿ ಯಾವುದೇ ಆಮದು ಸುಂಕಗಳಿರುವುದಿಲ್ಲ. ಅಂದರೆ ಮುಕ್ತ ವ್ಯಾಪಾರ. ಒಪ್ಪಂದಕ್ಕೆ ಒಳಪಟ್ಟ ಯಾವ ದೇಶಗಳು ಬೇಕಾದರೂ, ಯಾವ ದೇಶದಲ್ಲಾದರೂ ತಮ್ಮ ಸರಕುಗಳನ್ನು ಮುಕ್ತವಾಗಿ ಮಾರಬಹುದು. ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.

ನಮಗೇನು ತೊಂದರೆ??

ಇದರಿಂದ ಭಾರತಕ್ಕೇನೂ ತೊಂದರೆ ಎಂದು ನೀವು ಕೇಳಬಹುದು. ಮುಂದುವರಿದ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ಕೃಷಿ ಮೇಲಿನ ಹೂಡಿಕೆ ಸಾಕಷ್ಟು ಹೆಚ್ಚಿದೆ. ಉದಾಹರಣೆಗೆ ಒಂದು ಟನ್‌ ಕಬ್ಬು ಬೆಳೆಯಲು ಭಾರತದ ರೈತ ಅಂದಾಜು 2000 ಖರ್ಚು ಮಾಡಿದರೆ ಅದು ಮುಂದುವರಿದ ದೇಶಗಳಲ್ಲಿ ಕೇವಲ 1000 ಖರ್ಚು ಮಾಡಿ ಒಂದು ಟನ್ ಕಬ್ಬು ಬೆಳೆಯುತ್ತಾರೆ. ಕಾರಣವೆಂದರೆ ಬೀಜ, ಗೊಬ್ಬರ ಸೇರಿದಂತೆ ಆ ದೇಶಗಳಲ್ಲಿ ರೈತರಿಗೆ ಹೆಚ್ಚಿನ ಸಬ್ಸಿಡಿ ದೊರೆಯುತ್ತಿದೆ. ಆದರೆ ಭಾರತದಲ್ಲಿ ಈ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡುತ್ತಿದ್ದು ಸಂಪೂರ್ಣ ನಿಲ್ಲಿಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಭಾರತ ಮಾಡಿಕೊಂಡಿರುವ WTO ಒಪ್ಪಂದದ ಭಾಗವಾಗಿ ಈ ಸಬ್ಸಿಡಿ ಕಡಿತ ನಡೆಯುತ್ತಿದೆ. ರೈತರಿಗೆ ನೀಡುತ್ತಿರುವ ಸಬ್ಸಿಡಿ ನಿಲ್ಲಿಸದಿದ್ದರೆ ನಿಮಗೆ ಸಾಲ ಕೊಡುವುದಿಲ್ಲ ಎಂದು IMF ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಮೇಲೆ ಒತ್ತಡ ತರುತ್ತಿವೆ.

ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಉತ್ಪಾದನೆಗಳನ್ನು ಆ ದೇಶಗಳು ಉತ್ಪಾದಿಸಿ ನಮ್ಮಲ್ಲಿ ಬಂದು ನಮಗಿಂತಲೂ ಕಡಿಮೆ ದರಕ್ಕೆ ಮಾರುವುದರಿದ ಇಲ್ಲಿನ ರೈತರ ಸ್ಥಿತಿ ಹೇಗಾಗುತ್ತದೆ ನೀವೇ ಊಹಿಸಿ? ರೇಷ್ಮೆ ಮತ್ತು ಮತ್ತು ಸಕ್ಕರೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದಾಗ ರೈತರು ಸತ್ತರಲೇ ಥೇಟ್ ಅದೇ ಸ್ಥಿತಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸೃಷ್ಟಿಯಾಗುತ್ತದೆ ಅಷ್ಟೇ..

ಇನ್ನು ಬೀಜ ಸ್ವಾವಲಂಬನೆಯೆಂಬುದು ಇಂದು ಮರೀಚಿಕೆಯ ಮಾತಾಗಿದೆ. 20 ವರ್ಷಗಳ ಹಿಂದೆ ಬಿತ್ತನೆಗೆ ಬೀಜಗಳನ್ನು ಖರೀದಿಸಬೇಕಾಗುತ್ತೆಂಬ ಸುಳಿವು ಯಾರಿಗೂ ಇರಲಿಕ್ಕಿಲ್ಲ ಬಿಡಿ. ಆದರೆ ಈಗ ಪ್ರತಿಯೊಂದು ಬೀಜಗಳಿಗೂ ಬಹುರಾಷ್ಟ್ರೀಯ ದರೋಡೆಕೋರ ಕಂಪನಿಗಳನ್ನು ನಂಬಿಕೂರಬೇಕಿದೆ. ಅವರೋ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯಡಿ ಎಲ್ಲಾ ಬೀಜಗಳಿಗೂ ಪೇಟೆಂಟ್‌ ಮಾಡಿಕೊಂಡಿದ್ದಾರೆ. ಇನ್ನ ನಮ್ಮ ರೈತರು ಅವರೇಳಿದ ರೇಟಿಗೆ ಬೀಜಗಳನ್ನು ಕೊಳ್ಳುವ ದುಸ್ಥಿತಿ ಬರಲಿದೆ. ಬೇಡ ನಾವೇ ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳಲು ಹೋದರೆ ಅದಕ್ಕೂ ಅಪರಾಧಿಗಳೆಂಬ ಪಟ್ಟ ಕಟ್ಟಲು ಅವರ ಬಳಿ ಕಾನೂನಿನ ಕುಣಿಗೆ ಇದೆ.

ಈ ಒಪ್ಪಂದದನ್ವಯ ನಮ್ಮ ಕೋರ್ಟುಗಳಲ್ಲಿ ವಿದೇಶಿಗರ ಆಟಾಟೋಪಗಳನ್ನು ಪ್ರಶ್ನಿಸಲು ಬರುವುದಿಲ್ಲ. ಖಾಸಗಿ ಮಧ್ಯಸ್ಥಿಕೆ ನ್ಯಾಯಮಂಡಳಿಗಳಲ್ಲಿ ಮಾತ್ರ ಪ್ರಶ್ನಿಸಬಹುದಾದರೆ ಆ ಶಕ್ತಿ ನಮ್ಮ ರೈತರಿಗೆಲ್ಲಿಂದ ಬರಬೇಕು? ಇನ್ನು ನಮ್ಮ ಸರ್ಕಾರಗಳು ಸಬ್ಸಿಡಿ ರೀತಿಯ ಯಾವುದೇ ಸಹಾಯಗಳನ್ನು ಮಾಡಿದರೆ ಅವರ ಮೆಲೆಯೇ ದೂರು ದಾಖಲಾಗುವ ಅಪಾಯವಿದೆ ಎಂದಾದರೆ ಅವರೆಲ್ಲಿ ರೈತರಿಗೆ ಸಹಾಯ ಮಾಡುತ್ತಾರೆ?

ರೈತರು ಬೆಳೆಯುವುದನ್ನು ಒಂದು ದಿನ ನಿಲ್ಲಿಸಿದರೆ ಸಾಕು ದೇಶ ಅಲ್ಲಾಡಿಹೋಗುತ್ತದೆ… ಇದು ನಿಜವೇ?

ಈ ಮಾತನ್ನು ನಾವು ಆಗ್ಗಾಗ್ಗೆ ಕೇಳುತ್ತಿರುತ್ತೇವೆ. ರೈತರಿದ್ದರೆ ಅನ್ನ, ಇಲ್ಲದಿದ್ದರೆ ಯಾವ ಸರ್ಕಾರಗಳು ಏನು ಮಾಡಲಾಗುವುದಿಲ್ಲ, ರೈತರು ಬೆಳೆಯುವುದನ್ನು ನಿಲ್ಲಿಸಿದರೆ ಸರ್ಕಾರಗಳು ಬಗ್ಗಿಬಿಡುತ್ತವೆ ಎಂದು ಹಲವರು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ ವಾಸ್ತವವೆನೇಂದರೆ ಆ ಪರಿಸ್ಥಿತಿ ಸದ್ಯಕ್ಕಿಲ್ಲ.

ಏಕೆಂದರೆ ಈ ಮೊದಲೇ ಹೇಳಿದಂತೆ ಭಾರತ ಸರ್ಕಾರ ಆಹಾರಕ್ಕಾಗಿ ಇಂದು ದೇಶಿ ರೈತರನ್ನು ನಂಬಿ ಕೂತಿಲ್ಲ. ಒಂದು ವಿದೇಶದಿಂದ ಬೇಕಾದಷ್ಟು ಆಮದು ಮಾಡಿಕೊಳ್ಳುತ್ತದೆ. ಎರಡನೇದಾಗಿ ಅಂಬಾನಿ, ಅದಾನಿ ಥರದ ದೊಡ್ಡ ದೊಡ್ಡ ಉದ್ದಿಮೆಪತಿಗಳು ಕೃಷಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಹೆಕರೆ ಭೂಮಿ ಖರೀದಿಸಿರುವ ಅವರು ಮುಂದೆ ಕೈಗಾರಿಕೆ ಮಾದರಿಯಲ್ಲಿ ಲಕ್ಷಾಂತರ ಹೆಕರೆ ಪ್ರದೇಶದಲ್ಲಿ ಯಂತ್ರಚಾಲಿತ ಕೃಷಿ ಮಾಡಲು ಸಿದ್ದವಿದ್ದಾರೆ. ಈ ರೀತಿಯ ದೊಡ್ಡ ಕೃಷಿಯಿಂದ ಅವರ ಉತ್ಪಾದನಾ ವೆಚ್ಚ ನಮ್ಮ ಊಹೆ ಮೀರಿ ಕಡಿಮೆಯಾಗುತ್ತದೆ. ಉತ್ಪಾದಿಸಿದ ವಸ್ತುಗಳನ್ನು ಮಾರಲು ಅವರದೇ ಮಾಲ್‌ಗಳು, ಚಿಲ್ಲರೆ ಮಳಿಗೆಗಳು ಎಲ್ಲೆಂದರೆ ತಲೆಯೆತ್ತಿವೆ. ಕಂಗಾಲಾದ ರೈತರಿಂದ ಜಮೀನು ಕಿತ್ತುಕೊಂಡು ಈ ರೀತಿಯ ದೊಡ್ಡ ಬಂಡವಾಳಿಗರು ಕೃಷಿ ನಡೆಸಿದರೆ ರೈತರೂ ಮುಗಿದಂತೆಯೇ, ಅವರನ್ನು ನಂಬಿರುವ ಚಿಲ್ಲರೆ ಮಾರಟಗಾರರು ಮುಗಿದಂತೆಯೇ ಸರಿ. ತಮ್ಮ ಜಮೀನು ಮಾರಿದ ರೈತರ ಅದೇ ಜಮೀನನಲ್ಲಿ ಕೂಲಿಯಾಳಾಗಿ ಬಿಡಿಗಾಸಿಗೆ ದುಡಿಯುವ ದಿನ ಖಂಡಿತಾ ದೂರವಿಲ್ಲ.

ಐಕ್ಯ ಹೋರಾಟವೊಂದೇ ದಾರಿ..

ಒಟ್ಟಿನಲ್ಲಿ ಬಹುಮುಖ ಹೊಡೆತ ನೀಡುವ, ಈ ದೇಶದ ರೈತರನ್ನು ಒಳಗೊಂಡಂತೆ ಬಡವರನ್ನು ಮತ್ತೆ ಜೀತಕ್ಕೆ ದೂಡುವ ಭಾರೀ ಹುನ್ನಾರವೊಂದು ಮುಂದಿನ ದಿನಗಳಲ್ಲಿ ಕಾದಿದೆ ಎಂಬುದರಲ್ಲಿ ಸಂದೇಹವೇ ಬೇಡ. ಹಾಗಾಗಿ ನಮ್ಮ ಉಳಿವಿಗಾಗಿ ದೊಡ್ಡ ಹೋರಾಟ ನಡೆಯಲೇಬೇಕಿದೆ. ಆದ್ದರಿಂದ ಈ ಆರ್‌.ಸಿ.ಇ.ಪಿ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಅಕ್ಟೋಬರ್ 24 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಭಾರೀ ಹೋರಾಟಕ್ಕೆ ರೈತ ಚಳವಳಿಗಳು ಮುಂದಾಗಿವೆ.

“ದೇಶದಲ್ಲಿ ಎರಡೇ ರೀತಿಯ ರೈತರಿದ್ದಾರೆ. ಒಂದು ಆತ್ಮಹತ್ಯೆ ಮಾಡಿಕೊಂಡಿರುವ ರೈತರು ಇನ್ನೊಂದು ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಎಂದು ಹಿರಿಯ ಸಾಮಾಜಿಕ ಚಿಂತಕರಾದ ಶಿವಸುಂದರ್‌ರವರು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ”. ಇಷ್ಟು ದಿನ ರೈತರು ಬೆಳೆದ ಅನ್ನತಿಂದು ಅವರ ಋಣದಲ್ಲಿರುವ ಸಾಮಾನ್ಯ ನಾಗರೀಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತರನ್ನು ಸಾಯದಂತೆ ತಡೆಯುವುದು ಅತೀ ಜರೂರಿನ ಕೆಲಸವಾಗಿದೆ. ಕೇವಲ ಒಂದು ದಿನದ ಹೋರಾಟ ಮಾತ್ರವಲ್ಲದೇ ಈ ವಿಚಾರವನ್ನು ನೂರಾರು ಜನರಿಗೆ ತಲುಪಿಸಿ ಎಚ್ಚರಿಸುವ ಹೋರಾಟವನ್ನು ನಿರಂತರವಾಗಿ ಕಾಪಾಡುವ ಹೊಣೆ ನಮ್ಮೆಲ್ಲದರಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...