Homeಚಳವಳಿಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

ಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

- Advertisement -
- Advertisement -

-ಪ್ರೊ. ಅವಿಜಿತ್ ಪಾಠಕ್, ಸಮಾಜ ಶಾಸ್ತ್ರ ಪ್ರಾಧ್ಯಾಪಕರು, ಜೆಎನ್‌ಯು

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿವೈರ್‌

ಹಿಂಸೆಯು ಮಾನ್ಯತೆ ಪಡೆದು ಸಾಮಾನ್ಯ ಎನಿಸಿರುವ ಈ ಪ್ರಪಂಚದಲ್ಲಿ ಸಾಮೂಹಿಕ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರೂ ಗಾಂಧಿಯವರತ್ತ ನೋಡಬೇಕು. ಗಾಂಧಿಯವರು ಅಸಾಮಾನ್ಯ ಎನಿಸುವುದು ಅವರು ಯಶಸ್ವಿಯಾದರು ಎಂಬುದಕ್ಕಲ್ಲ ಎಂದು ನನಗನಿಸಿದ ಕ್ಷಣಗಳಿವೆ. ಬದಲಾಗಿ ಅವರು ‘ಅಸಾಧ್ಯ’ವಾದುದಕ್ಕಾಗಿ ಶ್ರಮಿಸಿದರು ಎಂಬುದಕ್ಕೆ. ಹಿಂಸೆಯ ಕಾಲದಲ್ಲಿ ಅಹಿಂಸೆಗಾಗಿ; ಅಧಿಕಾರಶಾಹಿ ಮತ್ತು ತಾಂತ್ರಿಕತೆಯ ಅಮಾನವೀಯತೆಯು ಮಾನ್ಯತೆ ಪಡೆದಿರುವ ಕಾಲದಲ್ಲಿ ಸ್ವಾವಲಂಬನೆಗಾಗಿ; ಹೊರಗಿನ ತೋರಿಕೆಯೇ ಮಾನ್ಯತೆ ಪಡೆದಿರುವ ಕಾಲದಲ್ಲಿ ಆತ್ಮವಿಮರ್ಶೆಗಾಗಿ ದುಡಿದರು ಎಂಬ ಕಾರಣಕ್ಕಾಗಿ. ಗಾಂಧಿ ‘ವಿಫಲ’ರಾದರೆಂದು ಬಹಳಷ್ಟು ಸಲ ಹೇಳಲಾಗುತ್ತದೆ. 1948ರ ಜನವರಿ 30ದಂದು ಅವರಿಗೆ ಗುಂಡಿಕ್ಕಿದಾಗ ನಾಥುರಾಂ ಗೋಡ್ಸೆ ನೀಡಿದ ಸಂದೇಶವೆಂದರೆ, ಗಾಂಧಿಯವರ ವೈಫಲ್ಯ ಅಕ್ಷಮ್ಯ ಮತ್ತು ಅದಕ್ಕಾಗಿ ಅವರನ್ನು ತಿಳಿದುಕೊಳ್ಳುವ ಬದಲು ಕೊಲ್ಲಬೇಕು ಎಂಬುದಾಗಿದೆ.

ಸಾಮಾನ್ಯವಾಗಿ ಗೋಡ್ಸೆಯ ರಾಜಕೀಯದ ಜೊತೆ ಸಂಬಂಧವಿಲ್ಲದ ನಮ್ಮಲ್ಲಿನ ಹಲವರಲ್ಲಿಯೂ ಗೋಡ್ಸೆಯ ತುಣುಕೊಂದು ಅಡಗಿದೆಯೆ? ‘ಗಾಂಧಿ ನಿಂದನೆ’ ಎಂದು ನಾನು ಕರೆಯಲಿಚ್ಛಿಸುವ ಕೃತ್ಯದಲ್ಲಿ ನಾವು ತೊಡಗಿರುವುದನ್ನು ಗಮನಿಸಿ. ಆಧುನಿಕವಾದಿಗಳು (ಗಾಂಧಿಯವರ ಅತ್ಯಂತ ನಿಕಟ ಶಿಷ್ಯ ಎನಿಸಿದ ಜವಾಹರಲಾಲ್ ನೆಹರೂ ಅವರನ್ನೂ ಈ ಗುಂಪಿನಲ್ಲಿ ಸೇರಿಸಲು ಇಚ್ಛಿಸುತ್ತೇನೆ)  ಅವರ ‘ಸರಳ’ ಆದರೂ ವಿಸ್ತೃತವಾದ ಹಿಂದ್ ಸ್ವರಾಜ್ ಎಂಬ ವಸಾಹತುವಿರೋಧಿ ಮಾರ್ಗದರ್ಶಿ ಸೂತ್ರದ ಬಗ್ಗೆ ಇರಿಸುಮುರುಸು ಹೊಂದಿರುವುದು ನಿಜ.

ಜಾತಿಪ್ರಜ್ಞೆಯ ಬೀಜಗಳನ್ನು ನಿವಾರಿಸುವಲ್ಲಿ ಗಾಂಧಿಯವರು ಯಾವುದೇ ಅರ್ಥಪೂರ್ಣ ಪಾತ್ರ ಹೊಂದಿದ್ದರು ಎಂಬುದನ್ನು ನಂಬಲು ಅಂಬೇಡ್ಕರ್‌ವಾದಿಗಳು ನಿರಾಕರಿಸಬಹುದು. ಕಮ್ಯುನಿಸ್ಟರು ಅವರ ‘ಅಹಿಂಸಾತ್ಮಕ ಸಮಾಜವಾದ’ ಕಲ್ಪನೆಯ ಕುರಿತು ಬಹಳಷ್ಟು ಸಲ ನಗುತ್ತಾರೆ. ಮಧ್ಯಯುಗದ, ಮೃದು ಹಿಂದೂ, ಪಿತೃಪ್ರಧಾನ ಗಾಂಧಿ- ನಮ್ಮ ಇತಿಹಾಸದಲ್ಲಿನ ಅಪ್ರಿಯವಾದ ಎಲ್ಲಾ ವಿಷಯಗಳಿಗೆ ಹೊಣೆ ಎಂಬ ಭಾವ ಎಷ್ಟು ಬಾರಿ ನಮ್ಮ ಆತ್ಮಸಾಕ್ಷಿಯಲ್ಲಿ ಸುಳಿದಿಲ್ಲ? ಗೋಡ್ಸೆ ಅವರನ್ನು ದೈಹಿಕವಾಗಿ ಕೊಂದ. ಅವರಿಗೆ ಸಹಾನುಭೂತಿಯಿಲ್ಲದೇ ಕಳಂಕಹಚ್ಚುವ ಕೃತ್ಯದಿಂದ ನಮ್ಮಲ್ಲನೇಕರು ಅವರ ಚೈತನ್ಯವನ್ನು ಕೊಲ್ಲಲು ಬಯಸಿದ್ದೇವೆ.

ಗಾಂಧಿಯವರ ಕುರಿತು ಒಲವಿರುವ, ಅವರನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಬಯಸುವ  ಕ್ರಾಂತಿಕಾರಿ ಯುವಜನರನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ಬದಲಾಗಬೇಕೆಂದು ನಾನು ಭಾವಿಸುತ್ತೇನೆ. ಈ ಲೇಖನದಲ್ಲಿ ಇದು ಏಕೆ ಅಗತ್ಯ-ಅದರಲ್ಲೂ ಯುವ ಜನರು ಗಾಂಧಿಯವರನ್ನು ಸ್ವಲ್ಪ ಮಟ್ಟಿನ ಗಂಭೀರತೆಯಿಂದ ತಿಳಿದುಕೊಳ್ಳುವುದು ಏಕೆ ಅಗತ್ಯ ಎಂದು ನಾನು ವಾದಿಸುತ್ತೇನೆ.

ಮೂರು ಸೂಕ್ತ ಪ್ರಶ್ನೆಗಳು

ಮೊದಲಿಗೆ ನಮ್ಮ ಕಾಲದಲ್ಲಿ ನಮ್ಮ ಬದುಕೇ ಎತ್ತುವ ಮೂರು ಪ್ರಶ್ನೆಗಳನ್ನು ನಾನು ಎತ್ತುತ್ತೇನೆ. ಮೊದಲನೆಯದಾಗಿ ನವ ಉದಾರವಾದಿ ಜಾಗತಿಕ ಬಂಡವಾಳಶಾಹಿಯ ಮಾರುಕಟ್ಟೆ ಪ್ರೇರಿತ ಚಿಂತನೆ ಮತ್ತು ಅದರ ಜವಾಬ್ದಾರಿಯಿಲ್ಲದ ಸ್ಪರ್ಧೆ- ಪ್ರೀತಿ, ಕಾಳಜಿ ಮತ್ತು ನ್ಯಾಯಪ್ರಜ್ಞೆಯಿಲ್ಲದ ಸ್ವಾರ್ಥ ತುಂಬಿದ ವ್ಯಕ್ತಿಯನ್ನು ಕೇವಲ ಒಬ್ಬ ಸದಾ ಅತೃಪ್ತನಾದ ಚಡಪಡಿಕೆಯ ಗ್ರಾಹಕನನ್ನಾಗಿ ಮಾತ್ರ ಕಾಣುವ ಅದರ ಸೂಚ್ಯವಾದ ಚಿಂತನೆಯ ಕುರಿತು ಯೋಚಿಸಿ.

ಎರಡನೆಯದಾಗಿ, ಧರ್ಮವನ್ನು ಆತ್ಮರತಿಯನ್ನಾಗಿ ಪರಿವರ್ತಿಸುವ ಮತ್ತು ನಂಬಿಕೆ, ಜೀವನಶೈಲಿ, ಸಾಂಸ್ಕೃತಿಕ ಆಚಾರಗಳ ವೈವಿಧ್ಯಕ್ಕೆ ಕುರುಡಾಗಿರುವ ಕೇಂದ್ರೀಕೃತ, ಏಕರೂಪಿ ಚಿಂತನೆಯ ಧಾರ್ಮಿಕ ರಾಷ್ಟ್ರವಾದದ ಬೆಳವಣಿಗೆಯನ್ನು ನೋಡಿ.

ಮೂರನೆಯದಾಗಿ, ನಾನು ಆತ್ಮದ ಮಿಲಿಟರೀಕರಣ ಎಂದು ಕರೆಯುವ ಮೌಲ್ಯಗಳ ವೈಭವೀಕರಣವನ್ನು ನೋಡಿ. ಇಲ್ಲಿ ಕಾಳಜಿ, ಕರುಣೆ ಮತ್ತು ಉಳಿದವರ ಮಾತುಗಳನ್ನು ತಾಳ್ಮೆಯಿಂದ ಕೇಳುವುದನ್ನು ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ ಅತ್ಯಂತ ಆಕ್ರಮಣಕಾರಿಯಾದ ‘ಕಠೋರ’ ನಿರ್ಧಾರಗಳನ್ನು ಆರಾಧಿಸಲಾಗುತ್ತದೆ. ಯುದ್ಧದ ಅಥವಾ ಸರ್ಜಿಕಲ್ ಸ್ಟ್ರೈಕ್‌ನಂತಹಾ ಪ್ರತಿಮೆಗಳು ನಮ್ಮ ಮನೋಭಿತ್ತಿಯಲ್ಲಿ ಸದ್ದಿಲ್ಲದೇ ಸೇರಿಬಿಟ್ಟಿವೆ.

ಆದುದರಿಂದ, ಸಾಮೂಹಿಕವಾಗಿ ಇದಕ್ಕೆ ಪರಿಹಾರ ಮತ್ತು ನಮ್ಮ ಕಾಲದ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಕೆಳಗಿನ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ನಾನು ಹೇಳಿದರೆ ತಪ್ಪಾಗಲಾರದು.

1. ಮಾನಸಿಕವಾಗಿ ಮತ್ತು ಪಾರಿಸರಿಕವಾಗಿ ವಿನಾಶಕಾರಿಯಾದ ಕೊಳ್ಳುಬಾಕ ಸಂಸ್ಕೃತಿಗೆ ಅಸಹಕಾರ ತೋರಿಸಿ, ನಿಸರ್ಗ, ಪರಿಸರ ಮತ್ತು ಸಮಾಜದೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಿರುವ ಜೀವಪ್ರೇಮಿಯಾದ, ಶಾಂತಿ ಮತ್ತು ಸರಳತೆಯೇ ಕೇಂದ್ರವಾಗಿರುವ ಚಿಂತನೆಯ ಕಡೆಗೆ ಸಾಗಬಲ್ಲ ಧೈರ್ಯವನ್ನು ತೋರುವ ವ್ಯಕ್ತಿಯನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?

2. ಧರ್ಮವನ್ನು ಆಕ್ರಮಣಕಾರಿ ರಾಷ್ಟ್ರವಾದದ ಸಿದ್ಧಾಂತವನ್ನಾಗಿ ಕಾಣದೆ, ಜಾತ್ಯತೀತವಾದ, ಆಧ್ಯಾತ್ಮಿಕವಾದ, ಪ್ರೀತಿ ಮತ್ತು ಸಾಮರಸ್ಯದ ಭಾವನೆಯಾಗಿ ಧಾರ್ಮಿಕತೆಯನ್ನು ಕಾಣಲು ಸಾಧ್ಯವಿದೆಯೇ?

3.  ಕ್ರೌರ್ಯದಿಂದ ಕೂಡಿದ ಅಧಿಕಾರದ ತಕ್ಷಣದ ಲಾಲಸೆಗೆ ಬಲಿಬೀಳದೆ, ಅಹಿಂಸೆಯ ನೈತಿಕಶಕ್ತಿಯಾಗಿ ಧೈರ್ಯವನ್ನು ಮರುವ್ಯಾಖ್ಯಾನಿಸಲು, ಬಂಡಾಯವನ್ನು ಆತ್ಮದ ಉನ್ನತ ಮಟ್ಟಕ್ಕೆ ಒಯ್ದು, ಆ ಮೂಲಕ ಶೋಷಕನ ಹೃದಯವನ್ನು ಮುಟ್ಟಬಯಸುವ ಪ್ರತಿರೋಧದ ವಿಧಾನವನ್ನು ಕಂಡುಕೊಳ್ಳಲು ಸಾಧ್ಯವಿದೆಯೇ? ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೆರಿಲ್ಲಾ ತಂತ್ರದಲ್ಲಿ ತರಬೇತಿ ಹೊಂದಿದ ಕ್ರಾಂತಿಕಾರಿಯಾಗುವ ಬದಲು ಸತ್ಯಾಗ್ರಹಿಯಾಗಲು ಸಾಧ್ಯವೆ?

ಗಾಂಧಿಯವರ ಅರ್ಥಪೂರ್ಣ ಅಧ್ಯಯನದಿಂದ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯುವಜನರಿಗೆ ಸಾಧ್ಯವಾದೀತು. ಅದಕ್ಕೆ ಮೊದಲು ಯಾವುದೇ ಚಿಂತಕ ಪರಿಪೂರ್ಣನಲ್ಲ; ತಪ್ಪುಗಳನ್ನು ಮಾಡುವುದು ಮಾನವ ಸಹಜ ಎಂಬ ತಿಳುವಳಿಕೆಯ ಅಗತ್ಯವಿದೆ. ಗಾಂಧಿಯವರಿಗೆ ಅವರ ತಪ್ಪುಗಳು ಗೊತ್ತಿದ್ದವು ಮತ್ತು ಅವುಗಳನ್ನು ಅವರು ಅತ್ಯಂತ ನಿರ್ಭಿಡೆಯಿಂದ ಮತ್ತು ಪಾರದರ್ಶಕತೆಯಿಂದ ಒಪ್ಪಿಕೊಂಡಿದ್ದಾರೆ ಕೂಡಾ. ನೀವು ಬಿ.ಆರ್. ಅಂಬೇಡ್ಕರ್ ಅಥವಾ ಕಾರ್ಲ್ ಮಾರ್ಕ್ಸ್ ಅಂತವರನ್ನು ಮೆಚ್ಚುತ್ತಿದ್ದರೂ ಗಾಂಧಿಯವರ ಜೊತೆ ಯಾವತ್ತೂ ಹೆಜ್ಜೆಹಾಕಲು ಸಾಧ್ಯವಿದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...