Homeಚಳವಳಿಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

ಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

- Advertisement -
- Advertisement -

-ಪ್ರೊ. ಅವಿಜಿತ್ ಪಾಠಕ್, ಸಮಾಜ ಶಾಸ್ತ್ರ ಪ್ರಾಧ್ಯಾಪಕರು, ಜೆಎನ್‌ಯು

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿವೈರ್‌

ಹಿಂಸೆಯು ಮಾನ್ಯತೆ ಪಡೆದು ಸಾಮಾನ್ಯ ಎನಿಸಿರುವ ಈ ಪ್ರಪಂಚದಲ್ಲಿ ಸಾಮೂಹಿಕ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರೂ ಗಾಂಧಿಯವರತ್ತ ನೋಡಬೇಕು. ಗಾಂಧಿಯವರು ಅಸಾಮಾನ್ಯ ಎನಿಸುವುದು ಅವರು ಯಶಸ್ವಿಯಾದರು ಎಂಬುದಕ್ಕಲ್ಲ ಎಂದು ನನಗನಿಸಿದ ಕ್ಷಣಗಳಿವೆ. ಬದಲಾಗಿ ಅವರು ‘ಅಸಾಧ್ಯ’ವಾದುದಕ್ಕಾಗಿ ಶ್ರಮಿಸಿದರು ಎಂಬುದಕ್ಕೆ. ಹಿಂಸೆಯ ಕಾಲದಲ್ಲಿ ಅಹಿಂಸೆಗಾಗಿ; ಅಧಿಕಾರಶಾಹಿ ಮತ್ತು ತಾಂತ್ರಿಕತೆಯ ಅಮಾನವೀಯತೆಯು ಮಾನ್ಯತೆ ಪಡೆದಿರುವ ಕಾಲದಲ್ಲಿ ಸ್ವಾವಲಂಬನೆಗಾಗಿ; ಹೊರಗಿನ ತೋರಿಕೆಯೇ ಮಾನ್ಯತೆ ಪಡೆದಿರುವ ಕಾಲದಲ್ಲಿ ಆತ್ಮವಿಮರ್ಶೆಗಾಗಿ ದುಡಿದರು ಎಂಬ ಕಾರಣಕ್ಕಾಗಿ. ಗಾಂಧಿ ‘ವಿಫಲ’ರಾದರೆಂದು ಬಹಳಷ್ಟು ಸಲ ಹೇಳಲಾಗುತ್ತದೆ. 1948ರ ಜನವರಿ 30ದಂದು ಅವರಿಗೆ ಗುಂಡಿಕ್ಕಿದಾಗ ನಾಥುರಾಂ ಗೋಡ್ಸೆ ನೀಡಿದ ಸಂದೇಶವೆಂದರೆ, ಗಾಂಧಿಯವರ ವೈಫಲ್ಯ ಅಕ್ಷಮ್ಯ ಮತ್ತು ಅದಕ್ಕಾಗಿ ಅವರನ್ನು ತಿಳಿದುಕೊಳ್ಳುವ ಬದಲು ಕೊಲ್ಲಬೇಕು ಎಂಬುದಾಗಿದೆ.

ಸಾಮಾನ್ಯವಾಗಿ ಗೋಡ್ಸೆಯ ರಾಜಕೀಯದ ಜೊತೆ ಸಂಬಂಧವಿಲ್ಲದ ನಮ್ಮಲ್ಲಿನ ಹಲವರಲ್ಲಿಯೂ ಗೋಡ್ಸೆಯ ತುಣುಕೊಂದು ಅಡಗಿದೆಯೆ? ‘ಗಾಂಧಿ ನಿಂದನೆ’ ಎಂದು ನಾನು ಕರೆಯಲಿಚ್ಛಿಸುವ ಕೃತ್ಯದಲ್ಲಿ ನಾವು ತೊಡಗಿರುವುದನ್ನು ಗಮನಿಸಿ. ಆಧುನಿಕವಾದಿಗಳು (ಗಾಂಧಿಯವರ ಅತ್ಯಂತ ನಿಕಟ ಶಿಷ್ಯ ಎನಿಸಿದ ಜವಾಹರಲಾಲ್ ನೆಹರೂ ಅವರನ್ನೂ ಈ ಗುಂಪಿನಲ್ಲಿ ಸೇರಿಸಲು ಇಚ್ಛಿಸುತ್ತೇನೆ)  ಅವರ ‘ಸರಳ’ ಆದರೂ ವಿಸ್ತೃತವಾದ ಹಿಂದ್ ಸ್ವರಾಜ್ ಎಂಬ ವಸಾಹತುವಿರೋಧಿ ಮಾರ್ಗದರ್ಶಿ ಸೂತ್ರದ ಬಗ್ಗೆ ಇರಿಸುಮುರುಸು ಹೊಂದಿರುವುದು ನಿಜ.

ಜಾತಿಪ್ರಜ್ಞೆಯ ಬೀಜಗಳನ್ನು ನಿವಾರಿಸುವಲ್ಲಿ ಗಾಂಧಿಯವರು ಯಾವುದೇ ಅರ್ಥಪೂರ್ಣ ಪಾತ್ರ ಹೊಂದಿದ್ದರು ಎಂಬುದನ್ನು ನಂಬಲು ಅಂಬೇಡ್ಕರ್‌ವಾದಿಗಳು ನಿರಾಕರಿಸಬಹುದು. ಕಮ್ಯುನಿಸ್ಟರು ಅವರ ‘ಅಹಿಂಸಾತ್ಮಕ ಸಮಾಜವಾದ’ ಕಲ್ಪನೆಯ ಕುರಿತು ಬಹಳಷ್ಟು ಸಲ ನಗುತ್ತಾರೆ. ಮಧ್ಯಯುಗದ, ಮೃದು ಹಿಂದೂ, ಪಿತೃಪ್ರಧಾನ ಗಾಂಧಿ- ನಮ್ಮ ಇತಿಹಾಸದಲ್ಲಿನ ಅಪ್ರಿಯವಾದ ಎಲ್ಲಾ ವಿಷಯಗಳಿಗೆ ಹೊಣೆ ಎಂಬ ಭಾವ ಎಷ್ಟು ಬಾರಿ ನಮ್ಮ ಆತ್ಮಸಾಕ್ಷಿಯಲ್ಲಿ ಸುಳಿದಿಲ್ಲ? ಗೋಡ್ಸೆ ಅವರನ್ನು ದೈಹಿಕವಾಗಿ ಕೊಂದ. ಅವರಿಗೆ ಸಹಾನುಭೂತಿಯಿಲ್ಲದೇ ಕಳಂಕಹಚ್ಚುವ ಕೃತ್ಯದಿಂದ ನಮ್ಮಲ್ಲನೇಕರು ಅವರ ಚೈತನ್ಯವನ್ನು ಕೊಲ್ಲಲು ಬಯಸಿದ್ದೇವೆ.

ಗಾಂಧಿಯವರ ಕುರಿತು ಒಲವಿರುವ, ಅವರನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಬಯಸುವ  ಕ್ರಾಂತಿಕಾರಿ ಯುವಜನರನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ಬದಲಾಗಬೇಕೆಂದು ನಾನು ಭಾವಿಸುತ್ತೇನೆ. ಈ ಲೇಖನದಲ್ಲಿ ಇದು ಏಕೆ ಅಗತ್ಯ-ಅದರಲ್ಲೂ ಯುವ ಜನರು ಗಾಂಧಿಯವರನ್ನು ಸ್ವಲ್ಪ ಮಟ್ಟಿನ ಗಂಭೀರತೆಯಿಂದ ತಿಳಿದುಕೊಳ್ಳುವುದು ಏಕೆ ಅಗತ್ಯ ಎಂದು ನಾನು ವಾದಿಸುತ್ತೇನೆ.

ಮೂರು ಸೂಕ್ತ ಪ್ರಶ್ನೆಗಳು

ಮೊದಲಿಗೆ ನಮ್ಮ ಕಾಲದಲ್ಲಿ ನಮ್ಮ ಬದುಕೇ ಎತ್ತುವ ಮೂರು ಪ್ರಶ್ನೆಗಳನ್ನು ನಾನು ಎತ್ತುತ್ತೇನೆ. ಮೊದಲನೆಯದಾಗಿ ನವ ಉದಾರವಾದಿ ಜಾಗತಿಕ ಬಂಡವಾಳಶಾಹಿಯ ಮಾರುಕಟ್ಟೆ ಪ್ರೇರಿತ ಚಿಂತನೆ ಮತ್ತು ಅದರ ಜವಾಬ್ದಾರಿಯಿಲ್ಲದ ಸ್ಪರ್ಧೆ- ಪ್ರೀತಿ, ಕಾಳಜಿ ಮತ್ತು ನ್ಯಾಯಪ್ರಜ್ಞೆಯಿಲ್ಲದ ಸ್ವಾರ್ಥ ತುಂಬಿದ ವ್ಯಕ್ತಿಯನ್ನು ಕೇವಲ ಒಬ್ಬ ಸದಾ ಅತೃಪ್ತನಾದ ಚಡಪಡಿಕೆಯ ಗ್ರಾಹಕನನ್ನಾಗಿ ಮಾತ್ರ ಕಾಣುವ ಅದರ ಸೂಚ್ಯವಾದ ಚಿಂತನೆಯ ಕುರಿತು ಯೋಚಿಸಿ.

ಎರಡನೆಯದಾಗಿ, ಧರ್ಮವನ್ನು ಆತ್ಮರತಿಯನ್ನಾಗಿ ಪರಿವರ್ತಿಸುವ ಮತ್ತು ನಂಬಿಕೆ, ಜೀವನಶೈಲಿ, ಸಾಂಸ್ಕೃತಿಕ ಆಚಾರಗಳ ವೈವಿಧ್ಯಕ್ಕೆ ಕುರುಡಾಗಿರುವ ಕೇಂದ್ರೀಕೃತ, ಏಕರೂಪಿ ಚಿಂತನೆಯ ಧಾರ್ಮಿಕ ರಾಷ್ಟ್ರವಾದದ ಬೆಳವಣಿಗೆಯನ್ನು ನೋಡಿ.

ಮೂರನೆಯದಾಗಿ, ನಾನು ಆತ್ಮದ ಮಿಲಿಟರೀಕರಣ ಎಂದು ಕರೆಯುವ ಮೌಲ್ಯಗಳ ವೈಭವೀಕರಣವನ್ನು ನೋಡಿ. ಇಲ್ಲಿ ಕಾಳಜಿ, ಕರುಣೆ ಮತ್ತು ಉಳಿದವರ ಮಾತುಗಳನ್ನು ತಾಳ್ಮೆಯಿಂದ ಕೇಳುವುದನ್ನು ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ ಅತ್ಯಂತ ಆಕ್ರಮಣಕಾರಿಯಾದ ‘ಕಠೋರ’ ನಿರ್ಧಾರಗಳನ್ನು ಆರಾಧಿಸಲಾಗುತ್ತದೆ. ಯುದ್ಧದ ಅಥವಾ ಸರ್ಜಿಕಲ್ ಸ್ಟ್ರೈಕ್‌ನಂತಹಾ ಪ್ರತಿಮೆಗಳು ನಮ್ಮ ಮನೋಭಿತ್ತಿಯಲ್ಲಿ ಸದ್ದಿಲ್ಲದೇ ಸೇರಿಬಿಟ್ಟಿವೆ.

ಆದುದರಿಂದ, ಸಾಮೂಹಿಕವಾಗಿ ಇದಕ್ಕೆ ಪರಿಹಾರ ಮತ್ತು ನಮ್ಮ ಕಾಲದ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಕೆಳಗಿನ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ನಾನು ಹೇಳಿದರೆ ತಪ್ಪಾಗಲಾರದು.

1. ಮಾನಸಿಕವಾಗಿ ಮತ್ತು ಪಾರಿಸರಿಕವಾಗಿ ವಿನಾಶಕಾರಿಯಾದ ಕೊಳ್ಳುಬಾಕ ಸಂಸ್ಕೃತಿಗೆ ಅಸಹಕಾರ ತೋರಿಸಿ, ನಿಸರ್ಗ, ಪರಿಸರ ಮತ್ತು ಸಮಾಜದೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಿರುವ ಜೀವಪ್ರೇಮಿಯಾದ, ಶಾಂತಿ ಮತ್ತು ಸರಳತೆಯೇ ಕೇಂದ್ರವಾಗಿರುವ ಚಿಂತನೆಯ ಕಡೆಗೆ ಸಾಗಬಲ್ಲ ಧೈರ್ಯವನ್ನು ತೋರುವ ವ್ಯಕ್ತಿಯನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?

2. ಧರ್ಮವನ್ನು ಆಕ್ರಮಣಕಾರಿ ರಾಷ್ಟ್ರವಾದದ ಸಿದ್ಧಾಂತವನ್ನಾಗಿ ಕಾಣದೆ, ಜಾತ್ಯತೀತವಾದ, ಆಧ್ಯಾತ್ಮಿಕವಾದ, ಪ್ರೀತಿ ಮತ್ತು ಸಾಮರಸ್ಯದ ಭಾವನೆಯಾಗಿ ಧಾರ್ಮಿಕತೆಯನ್ನು ಕಾಣಲು ಸಾಧ್ಯವಿದೆಯೇ?

3.  ಕ್ರೌರ್ಯದಿಂದ ಕೂಡಿದ ಅಧಿಕಾರದ ತಕ್ಷಣದ ಲಾಲಸೆಗೆ ಬಲಿಬೀಳದೆ, ಅಹಿಂಸೆಯ ನೈತಿಕಶಕ್ತಿಯಾಗಿ ಧೈರ್ಯವನ್ನು ಮರುವ್ಯಾಖ್ಯಾನಿಸಲು, ಬಂಡಾಯವನ್ನು ಆತ್ಮದ ಉನ್ನತ ಮಟ್ಟಕ್ಕೆ ಒಯ್ದು, ಆ ಮೂಲಕ ಶೋಷಕನ ಹೃದಯವನ್ನು ಮುಟ್ಟಬಯಸುವ ಪ್ರತಿರೋಧದ ವಿಧಾನವನ್ನು ಕಂಡುಕೊಳ್ಳಲು ಸಾಧ್ಯವಿದೆಯೇ? ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೆರಿಲ್ಲಾ ತಂತ್ರದಲ್ಲಿ ತರಬೇತಿ ಹೊಂದಿದ ಕ್ರಾಂತಿಕಾರಿಯಾಗುವ ಬದಲು ಸತ್ಯಾಗ್ರಹಿಯಾಗಲು ಸಾಧ್ಯವೆ?

ಗಾಂಧಿಯವರ ಅರ್ಥಪೂರ್ಣ ಅಧ್ಯಯನದಿಂದ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯುವಜನರಿಗೆ ಸಾಧ್ಯವಾದೀತು. ಅದಕ್ಕೆ ಮೊದಲು ಯಾವುದೇ ಚಿಂತಕ ಪರಿಪೂರ್ಣನಲ್ಲ; ತಪ್ಪುಗಳನ್ನು ಮಾಡುವುದು ಮಾನವ ಸಹಜ ಎಂಬ ತಿಳುವಳಿಕೆಯ ಅಗತ್ಯವಿದೆ. ಗಾಂಧಿಯವರಿಗೆ ಅವರ ತಪ್ಪುಗಳು ಗೊತ್ತಿದ್ದವು ಮತ್ತು ಅವುಗಳನ್ನು ಅವರು ಅತ್ಯಂತ ನಿರ್ಭಿಡೆಯಿಂದ ಮತ್ತು ಪಾರದರ್ಶಕತೆಯಿಂದ ಒಪ್ಪಿಕೊಂಡಿದ್ದಾರೆ ಕೂಡಾ. ನೀವು ಬಿ.ಆರ್. ಅಂಬೇಡ್ಕರ್ ಅಥವಾ ಕಾರ್ಲ್ ಮಾರ್ಕ್ಸ್ ಅಂತವರನ್ನು ಮೆಚ್ಚುತ್ತಿದ್ದರೂ ಗಾಂಧಿಯವರ ಜೊತೆ ಯಾವತ್ತೂ ಹೆಜ್ಜೆಹಾಕಲು ಸಾಧ್ಯವಿದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...