Homeಮುಖಪುಟಮೋದಿ ಅಲೆ ಮುಗೀತಾ? ಕುಸಿಯುತ್ತಿದೆ ಮೋದಿ, ಬಿಜೆಪಿಯ ತಳಪಾಯ

ಮೋದಿ ಅಲೆ ಮುಗೀತಾ? ಕುಸಿಯುತ್ತಿದೆ ಮೋದಿ, ಬಿಜೆಪಿಯ ತಳಪಾಯ

- Advertisement -
ವಿವಿಧ ರಾಜ್ಯಗಳಲ್ಲಿ ಏಪ್ರಿಲ್ 11 ರಂದು ನಡೆದ ಮೊದಲ ಹಂತದ ಚುನಾವಣೆಗೂ ಮೊದಲು ಪ್ರಕಟ/ಪ್ರಸಾರವಾದ ಚುನಾವಣಾ ಸಮೀಕ್ಷೆಗಳು ಎನ್‍ಡಿಎಗೆ ಸಣ್ಣ ಅಂತರದ ಬಹುಮತ ಅಥವಾ 272ರ ಮಾರ್ಕ್ ತಲುಪುವ ಸಾಧ್ಯತೆಯನ್ನು ತೋರಿಸಿದ್ದವು. ಆದರೆ ಈಗ ಏಪ್ರಿಲ್ 11ರ ನಂತರ ಸಮೀಕ್ಷೆ ಮಾಡಿದ ದೇಶದ ಎರಡು ವಿಶ್ವಾಸಾರ್ಹ ಚುನಾವಣಾ ಸಮೀಕ್ಷಾ ಸಂಸ್ಥೆಗಳ ಪ್ರಕಾರ ಮೋದಿ ಹವಾ ಬಕ್ಕಬರಲು ಬೀಳ್ತಾ ಇದೆ. ಸಿ-ವೋಟರ್ ಸಂಸ್ಥೆ ಪ್ರಕಾರ ಮೋದಿ ಜನಪ್ರಿಯತೆ ಬರೋಬ್ಬರಿ ಶೇ. 19ರಷ್ಟು ಕುಸಿದಿದೆ! ಸಿಎಸ್‍ಡಿಎಸ್ ಪ್ರಕಾರ, ಸೀಟು-ಸೀಟುಗಳ ಫೈಟಿನ ಲೆಕ್ಕದಲ್ಲಿ ಬಿಜೆಪಿ ಎಡವಿ ತೊಂದರೆಗೆ ಸಿಲುಕಿದೆ….
ಸಂಜಯ್ ಕುಮಾರ್
ಏಸಿಯನ್ ಏಜ್‍ನಲ್ಲಿ ಏಪ್ರಿಲ್ 13ರಂದು ಪ್ರಕಟವಾದ ‘ಮೊದಲ ಹಂತದ ಚುನಾವಣೆ ನಂತರ ಬಿಜೆಪಿಗೆ ಅನಾನುಕೂಲಕರ ಪರಿಸ್ಥಿತಿಯೇ?’ ಎಂಬ ತಲೆಬರಹದ ಲೇಖನದಲ್ಲಿ ಸಿಎಸ್‍ಡಿಎಸ್ ನಿರ್ದೇಶಕ ಸಂಜಯ ಕುಮಾರ್ ಹಲವು ಸಂಗತಿಗಳನ್ನು ನಮ್ಮ ಮುಂದೆ ಇಡುತ್ತಾರೆ:
• ಮೊದಲ ಹಂತದಲ್ಲಿ ಉತ್ತರಪ್ರದೇಶದಲ್ಲಿ ನಡೆದ ಎಂಟು ಲೋಕಸಭಾ ಚುನಾವಣೆಯಲ್ಲಿ ಘಾಜಿಯಾಬಾದ್ ಮತ್ತು ಗೌತಮ್ ಬುದ್ಧಿ ನಗರ ಕ್ಷೇತ್ರಗಳಲ್ಲಿ ಮಾತ್ರ ಮತದಾನ ಪ್ರಮಾಣದಲ್ಲಿ ಸಣ್ಣ ಏರಿಕೆ ಕಂಡಿದೆ. ಇಲ್ಲಿ ಕ್ರಮವಾಗಿ, ಕೇಂದ್ರ ಸಚಿವರಾದ ವಿ.ಕೆ. ಸಿಂಗ್ ಮತ್ತು  ಮಹೇಶ್ ಶರ್ಮಾ ಸ್ಪರ್ಧಿಸಿದ್ದಾರೆ.
• ಉಳಿದ ಆರು ಕ್ಷೇತ್ರಗಳಲ್ಲಿ (ಇಲ್ಲಿ ಮುಸ್ಲಿಮರ ಸಂಖ್ಯೆ ಸಾಪೇಕ್ಷವಾಗಿ ಹೆಚ್ಚು) 2014ರ ಚುನಾವಣೆಗಿಂತ ಮತದಾನ ಕಡಿಮೆಯಾಗಿದೆ.
• ನನ್ನ ಲೆಕ್ಕದ ಪ್ರಕಾರ, ಎಂಟರಲ್ಲಿ ಮೇಲೆ ಪ್ರಸ್ತಾಪಿಸಿದ ಎರಡರಲ್ಲಿ ಮಾತ್ರ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿಯಿದೆ.
• ಹಾಗೆಯೇ ಆದರೆ, ಉತ್ತರಪ್ರದೇಶದ ಮೊದಲ ಹಂತದ ಚುನಾವಣೆಯಲ್ಲೇ ಬಿಜೆಪಿಗೆ 6 ಸೀಟುಗಳ ನಷ್ಟವಾಗಲಿದೆ. 2014ರಲ್ಲಿ ಬಿಜೆಪಿ ಇಲ್ಲಿ 8 ಸೀಟನ್ನೂ ಗೆದ್ದಿತ್ತು.
ಈ ಹಿಂದೆ ಇದೇ ಸಂಜಯ ಕುಮಾರ್ ಅವರು ಬಿಜೆಪಿ ಕುರಿತಾಗಿ ಮಾಡಿದ್ದ ಅಂದಾಜುಗಳಿಗೆ ಹೋಲಿಸಿದಾಗ, ಈ ಸಲದ ಅವರ ಲೆಕ್ಕದಲ್ಲಿ ಸಾಕಷ್ಟು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಅಂಶಗಳನ್ನು ನೋಡಬಹುದು. ಈ ಲೇಖನಕ್ಕೂ ಒಂದು ವಾರ ಮುಂಚೆ ಬರೆದ ಲೇಖನದಲ್ಲಿ ಅವರು ‘ಬಿಜೆಪಿಗೆ ಅನುಕೂಲಕರ’ (advantage BJP) ಎಂದಿದ್ದರು. ಈಗ ಮೊದಲ ಹಂತದ ಚುನಾವಣೆ ನಂತರ, ಅವರು ‘ಬಿಜೆಪಿಗೆ ಅನಾನುಕೂಲಕರ?’ (disadvantage BJP?) ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಸಂಜಯ ಕುಮಾರ್ ಅವರ ಲೆಕ್ಕ ಅಥವಾ ಅಂದಾಜನ್ನು ಸಿಎಸ್‍ಡಿಎಸ್‍ನ ಹಿಂದಿನ ಸರ್ವೆಗೆ ಹೋಲಿಸಿ, ಸೀಟುಗಳ ಲೆಕ್ಕದಲ್ಲಿ ವಿಶ್ಲೇಷಣೇ ಮಾಡಿದಾಗ:
ಮೊದಲ ಹಂತದ ಚುನಾವಣೆಗೂ  ಸ್ವಲ್ಪ ದಿನ ಮೊದಲು ಸಿಎಸ್‍ಡಿಎಸ್ ಪ್ರಕಟಿಸಿದ ಸಮೀಕ್ಷೆ ಪ್ರಕಾರ, ಉತ್ರಪ್ರದೇಶದಲ್ಲಿ ಬಿಜೆಪಿಗೆ 80ರಲ್ಲಿ 32-40 ಸೀಟು (ಅಂದರೆ ಶೇ.40-50) ಸಿಗುತ್ತದೆ ಎನ್ನಲಾಗಿತ್ತು. ಆದರೆ, ಮೊದಲ ಹಂತದ ಚುನಾವಣೆ ನಂತರ ಸಂಜಯಕುಮಾರ್ ಬರೆದಿರುವ ಲೇಖನದಲ್ಲಿ ಮೊದಲ ಹಂತದಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಎರಡೇ ಎರಡು ಸೀಟು ಸಿಗಲಿದೆ. ಮುಂದಿನ ಹಂತಗಳಲ್ಲಿ ಇದೇ ಟ್ರೆಂಡ್ ಮುಂದುವರೆದರೆ, ಬಿಜೆಪಿಗೆ  ಉತ್ತರ ಪ್ರದೇಶದ 80ರಲ್ಲಿ ಕೇವಲ 20-25 ಸೀಟು ಮಾತ್ರ ಸಿಗಲಿವೆ.
ಈ ಕುರಿತು ‘ಕ್ವಿಂಟ್’ ಜೊತೆ ಮಾತಾಡಿರುವ ಸಂಜಯ ಕುಮಾರ್, ಮತದಾನದ ಬಗ್ಗೆ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಹೆಚ್ಚು ಉತ್ಸುಕರಾಗಿರಬಹುದು. ಮಹಾಘಟಬಂಧನ್‍ಗೆ ‘ಫಿಕ್ಸ್’ ವೋಟ್‍ಗಳಿವೆ. ಮತದಾನ ಪ್ರಮಾಣದಲ್ಲಿ ಕಡಿಮೆ ಆಯಿತೆಂದರೆ, ಬಿಜೆಪಿ ಎಡವಟ್ಟು ಮಾಡಿಕೊಂಡಿದೆ ಎಂದೇ ಅರ್ಥ’ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಇದೇ ಲೆಕ್ಕಾಚಾರವನ್ನು ಬಿಹಾರ್ ಮತ್ತು ಮಹಾರಾಷ್ಟ್ರಕ್ಕೂ ವಿಸ್ತರಿಸುವ ಅವರು, ಬಿಹಾರದಲ್ಲಿ ಮೊದಲ ಹಂತದಲ್ಲಿ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಅಂದರೆ ಅದು ಬಿಜೆಪಿ ಮೈತ್ರಿಗೆ ಕಷ್ಟ ಎಂದೇ ಅರ್ಥ ಎನ್ನುತ್ತಾರೆ. ಈ ಮೊದಲಿನ ಸರ್ವೆಯಲ್ಲಿ ಸಿಎಸ್‍ಡಿಎಸ್ ಸರ್ವೆ ಬಿಹಾರದಲ್ಲಿ ಎನ್‍ಡಿಎಗೆ ಸ್ವೀಪ್ ಎಂಬರ್ಥದಲ್ಲಿ ಹೇಳಿತ್ತು. ಮಹಾರಾಷ್ಟ್ರದ ವಿದರ್ಭದಲ್ಲೂ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಬರಲಾರದು ಎನ್ನುತ್ತಾರೆ ಸಂಜಯ ಕುಮಾರ್. ಇದೇ ಮೊದಲ ಬಾರಿಗೆ ಮತ ಹಂಚಿಕೆ ಆಧಾರವನ್ನು ಬಿಟ್ಟು ಸೀಟ್‍ಗಳನ್ನು ಆಧಾರವಾಗಿ ಇಟ್ಟುಕೊಂಡು ಸಿಎಸ್‍ಡಿಎಸ್ ಸಮೀಕ್ಷೆ ಮಾಡಿದೆ.
ಸಿ-ವೋಟರ್: ‘ಮೋದಿ ಜನಪ್ರಿಯತೆ ಕುಸಿತ’
ಇನ್ನೊಂದು ವಿಶ್ವಾಸಾರ್ಹ ಸಮೀಕ್ಷಾ ಸಂಸ್ಥೆ ಸಿ-ವೋಟರ್ ಕೂಡ ಬಿಜೆಪಿಗೆ ತೊದರೆ ಎಂಬರ್ಥದಲ್ಲಿ ಅಂಕಿಅಂಶಗಳನ್ನು ನೀಡಲು ಶುರು ಮಾಡಿದೆ. ಮೋದಿ ಮತ್ತು ಅವರ ಸರ್ಕಾರದ ಜನಪ್ರಿಯತೆ ಈ ಒಂದೇ ತಿಂಗಳಲ್ಲಿ 19 ಅಂಕಗಳಷ್ಟು  ಕುಸಿದಿದೆ ಎಂದು ಅದರ ಲೇಟೆಸ್ಟ್ ಸಮೀಕ್ಷೆ ಹೇಳುತ್ತಿದೆ. ಈ ಹಿಂದಿನ ಸರ್ವೆಯಲ್ಲಿ ಅದು ಬಾಲಾಕೋಟ್ ದಾಳಿ ನಂತರ ಮೋದಿ ಜನಪ್ರಿಯತೆ ಹೆಚ್ಚಿದೆ ಎಂದು ಹೇಳಿತ್ತು. ಹೊಸ ಸಮೀಕ್ಷೆಯಲ್ಲಿ ಅದು ಕೇವಲ ಒಂದೇ ತಿಂಗಳಲ್ಲಿ 19 ಅಂಕಗಳಷ್ಟು ಕುಸಿದೆ ಎಂದು ಅಂಕಿಅಂಶಗಳನ್ನು ನೀಡಿದೆ.
ಮಾರ್ಚ್ 7ರಂದು ಮೋದಿ ಸರ್ಕಾರದ ಜನಪ್ರಿಯತೆ ದರ ಶೇ. 62.02 ಇತ್ತು. ನಂತರ ಅದರಲ್ಲಿ ಸಣ್ಣಗೆ ಕುಸಿತ ಶುರುವಾಯಿತು. ಏಪ್ರಿಲ್ 12 ರ ಮೊದಲ ಹಂತದ ಚುನಾವಣೆ ಬಳಿಕ ಅದು ಶೇ. 43.25ಕ್ಕೆ ಕುಸಿದಿದೆ ಎನ್ನುತ್ತದೆ ಸ-ವೋಟರರನ ಲೇಟೆಸ್ಟ್ ಸರ್ವೆ.
     ಸಮೀಕ್ಷೆ ಅಂದಾಜಿಗಿಂತ ಕೆಳಕ್ಕೆ ಬಿಜೆಪಿ
• ಸಿಎಸ್‍ಡಿಎಸ್‍ನ ಸಂಜಯಕುಮಾರ್ ಮತ್ತು ಸಿ-ವೋಟರ್‍ನ ಲೇಟೆಸ್ಟ್ ಲೆಕ್ಕಾಚಾರ ಮತ್ತು ಸಮೀಕ್ಷೆಗಳ ಪ್ರಕಾರ, ಮೊದಲ ಹಂತಕ್ಕೂ ಮೊದಲು ಸರ್ವೆಗಳು ಬಿಜೆಪಿ ಮತ್ತು ಎನ್‍ಡಿಎಗೆ ಅಂದಾಜಿಸಿದ್ದಕ್ಕಿಂತ ಕಡಿಮೆ ಸೀಟುಗಳು ಸಿಗಲಿವೆ.
• ಸಿ-ವೋಟರ್ ಪ್ರಕಾರ, ಬಾಲಾಕೋಟ್ ವಿಷಯ ಈಗ ಕಾಣೆಯಾಗಿದ್ದು, ಮೋದಿಯ ಜನಪ್ರಿಯತೆ ಕೆಳಮುಖದಲ್ಲಿ ಚಲಿಸುತ್ತಿದೆ.
• ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಹೆಚ್ಚು ಬೆಂಬಲ  ನೀಡಿದ್ದ ಉತ್ತರ  ಪ್ರದೇಶ,  ಮಹಾರಾಷ್ಟ್ರ ಮತ್ತು ಬಿಹಾರ್‍ಗಳಲ್ಲಿ ಬಿಜೆಪಿ/ಎನ್‍ಡಿಎ ಮೈತ್ರಿ ಲೆಕ್ಕಾಚಾರ, ಜಾತಿ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ಅಶಕ್ತವಾಗಿವೆ.
• ಉತ್ತರಪ್ರದೇಶದಲ್ಲಿ ಮಹಾಘಟಬಂಧನ್‍ಗೆ ದೊಡ್ಡ ಲಾಭ ಸಿಗಲಿದ್ದರೆ, ಬಿಹಾರ್ ಮತ್ತು ಮಹಾರಾಷ್ಟ್ರಗಳಲ್ಲಿ ಸೀಟ್-ಟು-ಸೀಟ್ ಕದನವಿರುವುದು ಬಿಜೆಪಿ ಮತ್ತು ಮೋದಿಗೆ ಹಿನ್ನಡೆಯೇ ಎನ್ನುತ್ತಾರೆ ಸಂಜಯ ಕುಮಾರ್.
• ಕೊನೆಯ ಹಂತದ ಸರ್ವೆಗಳು ಎನ್‍ಡಿಎಗೆ 260-270 ಸೀಟುಗಳು ಸಿಗಲಿವೆ ಎಂದಿದ್ದವು. ಆದರೆ ಈಗ ಮೊದಲ ಹಂತದ ನಂತರದಲ್ಲಿ ಸಿ-ವೋಟರ್ ಟ್ರ್ಯಾಕರ್ ಮತ್ತು ಸಿಎಸ್‍ಡಿಎಸ್ ನಿರ್ದೇಶಕ ಸಣಜಯ ಕುಮಾರ್ ವಿಶ್ಲೇಷಣೆ ಪ್ರಕಾರ, ಎನ್‍ಡಿಎ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕುಸಿಯಲಿದೆ.
(ಆಧಾರ: ದಿ ಕ್ವಿಂಟ್)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...