Homeಮುಖಪುಟಲಾಕ್‌ಡೌನ್‌ನಲ್ಲಿ ಮಹಿಳೆಯರು: ಕಡೆಗಣಿಸಲ್ಪಟ್ಟ ಈ ಮೌನ ಬಿಕ್ಕಟ್ಟಿಗೆ ಅಗತ್ಯವಿದೆ ಗಟ್ಟಿ ಧ್ವನಿಯ ಪ್ರತಿಕ್ರಿಯೆ

ಲಾಕ್‌ಡೌನ್‌ನಲ್ಲಿ ಮಹಿಳೆಯರು: ಕಡೆಗಣಿಸಲ್ಪಟ್ಟ ಈ ಮೌನ ಬಿಕ್ಕಟ್ಟಿಗೆ ಅಗತ್ಯವಿದೆ ಗಟ್ಟಿ ಧ್ವನಿಯ ಪ್ರತಿಕ್ರಿಯೆ

- Advertisement -
- Advertisement -

ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸುವುದಕ್ಕಾಗಿ ಜಾರಿ ಮಾಡಿದ ಹಿಂದೆಂದೂ ಕಾಣದ ಲಾಕ್‌ಡೌನ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದೆ. ಒಂದು ವರ್ಷ – ಲಾಕ್‌ಡೌನ್ ಹೇರಿದ ನಂತರ, ಈ ಬಿಕ್ಕಟ್ಟಿನ ಹಲವು ಆಯಾಮಗಳು ಇನ್ನೂ ತೆರೆದುಕೊಳ್ಳುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ, ಜಿಡಿಪಿ ಕುಸಿತಗೊಂಡಿದೆ. ಇದಕ್ಕೆ ಜೊತೆಗೆ, ವ್ಯಾಪಕವಾದ ಉದ್ಯೋಗ ನಷ್ಟ ಮತ್ತು ಕಾರ್ಮಿಕರು ಆರ್ಥಿಕ ಭಾಗವಹಿಸುವಿಕೆಯ ಇಳಿಕೆ ಕಂಡಿದೆ. ತಲಾ ಆದಾಯದಲ್ಲಿ ಗಮನಾರ್ಹ ಕುಸಿತ ನಿರೀಕ್ಷಿಸಲಾಗಿದೆ. ಸಾಮಾಜಿಕ ಮಟ್ಟದಲ್ಲಿ, ಕಡಿಮೆ ಖರ್ಚು ಮತ್ತು ಕಡಿಮೆ ಚಲನಶೀಲತೆಯಿಂದಾಗಿ ಆರ್ಥಿಕತೆಯ ಬಗ್ಗೆ ಜನರ ವಿಶ್ವಾಸ ಕಡಿಮೆಯಾಗಿದೆ.

ತಕ್ಷಣದ ಭವಿಷ್ಯದ ಬಗ್ಗೆ ಅನಿಶ್ಚಿತತೆಯು ಕುಟುಂಬಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ ಮತ್ತು ಆರೋಗ್ಯ ವೆಚ್ಚಗಳ ವ್ಯಾಪ್ತಿ ಸೇರಿದಂತೆ ಇತರೆಲ್ಲ ಸಾಮಾಜಿಕ ಭದ್ರತೆಯ ಸಾಧಾರಣ ವೆಚ್ಚಕ್ಕೆ ಧಕ್ಕೆ ತಂದಿರುವುದು ಇದನ್ನು ಉಲ್ಬಣಗೊಳಿಸಿದೆ. ಅಂತೆಯೇ, ಭಾರತೀಯ ಸಮಾಜವು ಆರ್ಥಿಕ ಅಸಮಾನತೆ ಮತ್ತು ಹೆಚ್ಚು ತೀವ್ರವಾದ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿದೆ. ಹೀಗಾಗಿ ಬಿಕ್ಕಟ್ಟಿನ ಸಮಯದಲ್ಲಿ, ಕೆಳಮಟ್ಟದ ಸಾಮಾಜಿಕ-ಆರ್ಥಿಕ ಗುಂಪುಗಳು ಹೆಚ್ಚು ಬಳಲುತ್ತವೆ; ಉನ್ನತ ವರ್ಗದ ಜನರು ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳುತ್ತಾರೆ ಮತ್ತು ಒತ್ತಡವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಸಮಸ್ಯೆ ಹೀಗಿದ್ದು, ಇನ್ನೂ ದೊಡ್ಡ ಮಾನವೀಯ ಬಿಕ್ಕಟ್ಟು ಎಂದರೆ ಲಿಂಗಗಳ ನಡುವಿನ ಅಡ್ಡ ಅಸಮಾನತೆಯಿಂದ ಪ್ರೇರಿತವಾಗಿರುವುದು ಮತ್ತು ಈ ಎಲ್ಲದರಲ್ಲೂ ಸಂಕಷ್ಟ ಅನುಭವಿಸುವವರಲ್ಲಿ ಮಹಿಳೆಯರೇ ಹೆಚ್ಚಿರುವುದು.

ಲಾಕ್‌ಡೌನ್ ಎಲ್ಲಾ ಸಾಮಾಜಿಕ-ಆರ್ಥಿಕ ಗುಂಪುಗಳ ಮಹಿಳೆಯರ ಮೇಲೆ ತೀವ್ರವಾದ ಅಸ್ತಿತ್ವವಾದದ ಬಿಕ್ಕಟ್ಟನ್ನು ಉಂಟು ಮಾಡಿದೆ. 2020ರ ಜನವರಿಯಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು 9.9% ಇದ್ದು ಇದನ್ನು ಲಾಕ್‌ಡೌನ್ ನಂತರದ ಸಮಯಕ್ಕೆ ಹೋಲಿಸಿದರೆ 6.9%ಕ್ಕೆ ಕುಸಿದಿದೆ. ಮುಂದುವರೆದು, ಸೆಪ್ಟೆಂಬರ್ 2020ರ ನಂತರ, ಪುರುಷರಿಗಿಂತ ಭಿನ್ನವಾಗಿ, ತುಸು ಆರ್ಥಿಕ ಚೇತರಿಕೆ, ಉದ್ಯೋಗದ ವಿಷಯದಲ್ಲಿ ಮಹಿಳೆಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಲಾಕ್‌ಡೌನ್ ಮಹಿಳೆಯರ ಗಳಿಕೆಯಿಂದ ಲಭಿಸುವ ಸಣ್ಣ ಸ್ವಾತಂತ್ರ್ಯ ಮತ್ತು ಸಂಧಾನ ಶಕ್ತಿಯನ್ನು ಕಸಿದುಕೊಳ್ಳುವುದರಿಂದ ಅವರ ಅಧೀನತೆಯನ್ನು ಹೆಚ್ಚಿಸಿರುವ ಸಾಧ್ಯತೆ ಇದೆ.

PC : YourStory

ಲಾಕ್‌ಡೌನ್ ಮತ್ತು ನಂತರದ ಚಲನಶೀಲತೆಯ ಇಳಿಕೆಯಿಂದಾಗಿ ಜನ ಹೆಚ್ಚಿನ ಸಮಯ ಕೌಟುಂಬಿಕ ವಾಸಸ್ಥಾನಗಳಲ್ಲಿ ವಾಸಿಸುವಂತೆ ಮಾಡಿದೆ. ಹೀಗಾಗಿ, ಮನೆಕೆಲಸಗಳ ಬೇಡಿಕೆ ಹೆಚ್ಚಾಗಿದೆ, ಇದರ ಪರಿಣಾಮವಾಗಿ ಮಹಿಳೆಯರ ಮೇಲೆ ಹೆಚ್ಚಿನ ದೈಹಿಕ ಕೆಲಸದ ಹೊರೆ ಬೀಳುತ್ತದೆ. ರಾಷ್ಟ್ರವ್ಯಾಪಿ ಸಂಶೋಧನೆ (ಪ್ರಿಯಾನ್ಶಿ ಚೌಹಾನ್, ಲಿಂಗ ಸಮಸ್ಯೆಗಳು, 2020) ವರದಿ ಮಾಡಿದ ಪ್ರಕಾರ, ನಿರುದ್ಯೋಗಿ ಮತ್ತು ಉದ್ಯೋಗದಲ್ಲಿರುವ ಮಹಿಳೆಯರು ಕ್ರಮವಾಗಿ 30.5%, 14.5% ಹೆಚ್ಚಿನ ಸಮಯವನ್ನು ಮನೆಗೆಲಸಗಳಿಗಾಗಿ ಮೀಸಲಿಡುತ್ತಿದ್ದಾರೆ, ಆಗಾಗ್ಗೆ ವಾರಕ್ಕೆ 70 ಗಂಟೆಗಳ ಕೆಲಸವನ್ನು ಮೀರುತ್ತಾರೆ. ಆಸಕ್ತಿದಾಯಕ ಎಂದರೆ, ವಿವಾಹಿತ ಮಹಿಳೆಯರ ಮೇಲೆ ಈ ಭಾರ ಅನುಪಾತದ ಎಲ್ಲೆ ಮೀರಿ ಬಿದ್ದಿದೆ ಎಂದು ಈ ಅಧ್ಯಯನ ಸೂಚಿಸುತ್ತದೆ.

ಈ ಸಂಗತಿಯು ವಿವಾಹದ ಪಿತೃಪ್ರಭುತ್ವದ ಸಂಸ್ಥೆಯಿಂದ ವ್ಯಾಖ್ಯಾನಿಸಲ್ಪಟ್ಟ ಅಸಮಾನ ಮತ್ತು ಅನ್ಯಾಯದ ಲಿಂಗ ಪಾತ್ರಗಳನ್ನು ಒತ್ತಿಹೇಳುತ್ತದೆ – ಇದೆಲ್ಲವೂ ಮಹಿಳೆಯರ ಮೇಲೆ ಮಾತ್ರ ಒತ್ತಡ, ಸಂಕಟವನ್ನು ಉಂಟುಮಾಡುತ್ತದೆ. ಗುಜರಾತ್, ದೆಹಲಿ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳ ಹಲವಾರು ಗುಣಾತ್ಮಕ ಮೌಲ್ಯಮಾಪನ ವರದಿಗಳಲ್ಲಿ, ಮಹಿಳೆಯರಿಗೆ ಕೆಲಸ ಮತ್ತು ಜವಾಬ್ದಾರಿಗಳು ಹೆಚ್ಚಿರುವುದರಿಂದ ಮಾನಸಿಕ ಯಾತನೆ, ಹತಾಶ ಭಾವನೆ, ದೈಹಿಕ ನಿಶಕ್ತಿ ಉಂಟಾಗಿದ್ದನ್ನು ವ್ಯಕ್ತ ಪಡಿಸಿದ್ದಾರೆ. ಮುಖ್ಯವಾಗಿ, ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮಹಿಳೆಯರು, ಸಾಮಾನ್ಯವಾಗಿ ಸಹವರ್ತಿಗಳು, ಪುರುಷರು ಮತ್ತು ಸಮುದಾಯದಿಂದ ಬೆಂಬಲದ ಕೊರತೆಯನ್ನು ವ್ಯಕ್ತಪಡಿಸಿದ್ದಾರೆ. ನಿಸ್ಸಂದೇಹವಾಗಿ, ಈ ಕೆಲಸದ ಹೆಚ್ಚಳ, ಈಗಾಗಲೇ ಒತ್ತಡದಲ್ಲಿರುವ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಉಂಟು ಮಾಡುತ್ತದೆ, ಅದು ಗಮನಕ್ಕೆ ಬಾರದ ಸಾಧ್ಯತೆ ಹೆಚ್ಚಿದೆ.

ಕೌಟುಂಬಿಕ ವಾಸಸ್ಥಾನದ ಜಾಗಗಳಲ್ಲಿ ಜನರನ್ನು ಈ ಸಾಂಕ್ರಾಮಿಕ ಗುಂಪುಗೂಡಿಸುತ್ತಿರುವುದರಿಂದ, ಕೌಟುಂಬಿಕ ಮತ್ತು ಸಂಗಾತಿಯ ಹಿಂಸಾಚಾರಕ್ಕೆ ಮಹಿಳೆ ಒಳಗಾಗಿದ್ದಾಳೆ. ಅಂತೆಯೇ, ಒಟ್ಟು ವಿವಾಹಿತ ಮೂವರಲ್ಲಿ ಒಬ್ಬರು ನಿರಂತರ ಕೌಟುಂಬಿಕ ಹಿಂಸಾಚಾರವನ್ನು (ಲೈಂಗಿಕ ಮತ್ತು ದೈಹಿಕ) ಎದುರಿಸುತ್ತಾರೆ ಮತ್ತು 100ರಲ್ಲಿ ಒಬ್ಬರಿಗಿಂತ ಕಡಿಮೆ ಮಹಿಳೆತರಷ್ಟೇ ಬಾಹ್ಯ ಸಹಾಯವನ್ನು ಪಡೆಯಲು ಸಮರ್ಥರಾಗಿದ್ದಾರೆ. ಲಾಕ್‌ಡೌನ್ ಮಹಿಳೆಯರನ್ನು ಕೌಟುಂಬಿಕ ಸ್ಥಳಗಳಲ್ಲಿ (ಅವರ ಸಹಜ ವಾಸಸ್ಥಳದಲ್ಲಿ) ಹಿಂಸಾಚಾರಿಗಳೊಂದಿಗೆ (ಪತಿ, ಅತ್ತೆ-ಮಾವ ಮತ್ತು ವಿಸ್ತೃತ ಕುಟುಂಬ) ದೊಡ್ಡ ಅವಧಿಗೆ ಲಾಕ್ ಮಾಡಿತು. ಹಿಂದಿನ ಸಂಶೋಧನೆಗಳ ಪ್ರಕಾರ, ಆರ್ಥಿಕ ಅನಿಶ್ಚಿತತೆ ಮತ್ತು ಮಾನಸಿಕ ಯಾತನೆ ಪುರುಷರ ದರ್ಪವನ್ನು ಹೆಚ್ಚಿಸುತ್ತದೆ, ಇದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುತ್ತದೆ.

ನಿರೀಕ್ಷೆಯಂತೆಯೇ, 2019ರ ಇದೇ ಅವಧಿಗೆ ಹೋಲಿಸಿದರೆ ಮಹಿಳೆಯರಿಗಾಗಿ ಇರುವ ರಾಷ್ಟ್ರೀಯ ಆಯೋಗವು ಲಾಕ್‌ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರದ 2.5 ಪಟ್ಟು ಹೆಚ್ಚು ದೂರುಗಳನ್ನು ದಾಖಲಿಸಿದೆ. ಲಾಕ್‌ಡೌನ್ ಮಾಡಿದ ಮೊದಲ ಹತ್ತು ದಿನಗಳಲ್ಲಿ, ರಾಷ್ಟ್ರೀಯ ಮಕ್ಕಳ ಸಹಾಯವಾಣಿಗೆ 90,000ಕ್ಕೂ ಹೆಚ್ಚು ಎಸ್‌ಒಎಸ್ ಕರೆಗಳು ಬಂದವು. ದೆಹಲಿಯಲ್ಲಿ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ವಿಶೇಷ ಕ್ಲಿನಿಕ್‌ಗಳನ್ನು ನಡೆಸುವ ಡಾಕ್ಟರ್ಸ್ ವಿಥ್‌ಔಟ್ ಬಾರ್ಡರ್ಸ್ ಸಂಸ್ಥೆ ಲಾಕ್‌ಡೌನ್ ನಂತರ, ವೈದ್ಯಕೀಯ ಆರೈಕೆ ಬಯಸುವ ಸಂತ್ರಸ್ತರ ಪ್ರಮಾಣ ದುಪ್ಪಟ್ಟಾಗಿರುವುದನ್ನು ಕಂಡಿತು. ಮಹಿಳೆಯ ಧ್ವನಿಯ ’ಲೋಕಲ್ ಡೈರಿಸ್’ ಎಂಬ ದಾಖಲೆ ವ್ಯವಸ್ಥೆ ಲಾಕ್‌ಡೌನ್ ಸಂದರ್ಭದಲ್ಲಿನ ಭಾರತದಾದ್ಯಂತದ ಮಹಿಳೆಯರ ಕಥೆಗಳನ್ನು ನಿರೂಪಿಸಿದೆ. ಅವರು ಸಾಮಾನ್ಯವಾಗಿ ಗಂಡಂದಿರಿಂದ ದಿನವಿಡೀ ದೈಹಿಕ ಹಲ್ಲೆ ಎದುರಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುವುದು ಬಿಕ್ಕಟ್ಟಿನ ಕಥೆಯ ಒಂದು ಭಾಗ ಮಾತ್ರ. ಲಾಕ್‌ಡೌನ್ ಮಹಿಳೆಯರಿಗೆ ಸಹಾಯವನ್ನು ಪಡೆಯುವುದನ್ನು ಅಥವಾ ಹಿಂಸಾಚಾರದ ವಿರುದ್ಧ ನಿಭಾಯಿಸುವ ಕ್ರಮಗಳನ್ನು ತೆಗೆದುಕೊಳ್ಳದಂತೆ ತೀವ್ರವಾಗಿ ನಿರ್ಬಂಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಚಲನವಲನದ ನಿರ್ಬಂಧಗಳು ಬಾಹ್ಯ ಸಹಾಯವನ್ನು ಪಡೆಯಲು ಅಥವಾ ಸಮಾಧಾನಕ್ಕಾಗಿ ಇತರ ಮಹಿಳೆಯರೊಂದಿಗೆ ಬೆರೆಯಲು ಒಂದು ತಡೆಯಾಗಿತ್ತು. ಇದಲ್ಲದೆ, ಕೌಟುಂಬಿಕ ಹಿಂಸಾಚಾರದ ವಿರುದ್ಧ ಪ್ರಾಥಮಿಕ ಪರಿಹಾರವನ್ನು ನೀಡುವ ಸರ್ಕಾರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಲೂ ತೊಂದರೆಯಾಗಿದೆ. ಈಗ ಅವರುಗಳನ್ನು ಕೋವಿಡ್ ಸಂಬಂಧಿ ಚಟುವಟಿಕೆಗಳಿಗೆ ತಿರುಗಿಸಲಾಗಿದೆ. ಆರ್ಥಿಕ ತೊಂದರೆ ಮತ್ತು ಚಲನೆಯ ನಿರ್ಬಂಧಗಳಿಂದಾಗಿ ತಳಮಟ್ಟದ ಎನ್‌ಜಿಒಗಳು ಅಥವಾ ಸಮುದಾಯ ಬೆಂಬಲ ಗುಂಪುಗಳನ್ನು ಕೊನೆಗೊಳಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ. ಇದಲ್ಲದೆ, ಹಿಂಸಾಚಾರಿಗಳ ನಿರಂತರ ಉಪಸ್ಥಿತಿ ಮಹಿಳೆಯರಿಗೆ ಫೋನ್ ಮೂಲಕ ಸಹಾಯ ಅಥವಾ ಪರಿಹಾರವನ್ನು ಪಡೆಯುವುದನ್ನು ತಡೆಯುತ್ತದೆ. ಇದನ್ನು ಇನ್ನಷ್ಟು ಹದಗೆಡಿಸುವುದು, ಹೆಚ್ಚಿದ ಮನೆಕೆಲಸ, ಮಹಿಳೆಯರಿಗೆ ತಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಮಾತನಾಡಲು ಸಮಯವಿಲ್ಲದಂತೆ ಮಾಡಲಾಗಿರುವುದು.

PC : Financial Times

ತೀವ್ರವಾದ ಲಾಕ್‌ಡೌನ್ ಸರಾಗಗೊಳಿಸುವಿಕೆಯು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಿದೆ ಮತ್ತು ಮನೆಯ ಕೆಲಸದ ಒತ್ತಡವನ್ನು ಕೂಡ ಕಡಿತಗೊಳಿಸಿದೆ.

ಆದರೂ, ಚಲನವಲನದ ನಿರ್ಬಂಧಗಳು ಹಾಗೇ ಉಳಿದಿವೆ ಮತ್ತು ಸಾಮಾಜಿಕವಾಗಿ ಬೆರೆಯಲು ಅವಕಾಶಗಳು ಕಡಿಮೆಯಾಗಿವೆ. ವಲಯ ನಿಯಂತ್ರಣ (ಕಂಟೇನ್ಮೆಂಟ್) ಮತ್ತು ಸ್ಥಳೀಯ ಲಾಕ್‌ಡೌನ್‌ಗಳ ಹೇರಿಕೆ ಮುಂದುವರಿಯುತ್ತಿವೆ ಮತ್ತು ಮುಂದಿನ ದಿನಗಳಲ್ಲಿ ಅದು ದಿನನಿತ್ಯದ ವಾಸ್ತವ ಆಗಲಿದೆ.

ನಿರುದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಯಾತನೆ ಹೆಚ್ಚಾದರೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಯಾತನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಾಗರಿಕ ಮತ್ತು ಪ್ರಗತಿಪರ ಸಮಾಜವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಪ್ರತಿಕ್ರಿಯಿಸಬೇಕು ಮತ್ತು ಸಂತ್ರಸ್ತರೆ ಪರಿಹಾರ ನೆರವಿಗೆ ಮುಂದಾಗಬೇಕು.

ಹಿಂಸೆಯ ರಚನಾತ್ಮಕ ಮತ್ತು ವ್ಯವಸ್ಥಿತ ಸ್ವರೂಪವನ್ನು ಗಮನಿಸಿದರೆ, ಮಹಿಳೆಯರಿಗೆ ಪರಿಹಾರಕ್ಕಾಗಿ ಪರಿಣಾಮಕಾರಿ ಪ್ರತಿಕ್ರಿಯೆ ಬರುವುದು ಸುಲಭವಲ್ಲ. ಯಾವುದೇ ಪ್ರತಿಕ್ರಿಯೆಯನ್ನು ರೂಪಿಸುವುದು ಸಮಸ್ಯೆಯ ಗುರುತಿಸುವಿಕೆ ಮತ್ತು ತಿಳಿವಳಿಕೆಯೊಂದಿಗೆ ಪ್ರಾರಂಭವಾಗುತ್ತದೆ.

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯವು ಸಾಂಸ್ಕೃತಿಕವಾಗಿ ಅಂಗೀಕರಿಸಲ್ಪಟ್ಟ ರೂಢಿ ಆಗಿರುವುದರಿಂದ ಸರ್ಕಾರ ಅಥವಾ ಸಾಮಾಜಿಕ ನಿರೂಪಣೆಗೆ ಸಮಸ್ಯೆಯ ಆಳವನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಬಹುಸಂಖ್ಯಾತ ಸಾಮಾಜಿಕ ರಚನೆಯು ಕೆಲಸದ ಹೊರೆಯನ್ನು ಸೀಮಿತಗೊಳಿಸದೆ ಮಹಿಳೆಯರ ಮೇಲಿನ ಮನೆಕೆಲಸಗಳ ಜವಾಬ್ದಾರಿಯನ್ನು ಒತ್ತಾಯಿಸುತ್ತದೆ. ಇದಲ್ಲದೆ, ಕೌಟುಂಬಿಕ ಹಿಂಸಾಚಾರವು ಹೆಚ್ಚಾಗಿ ಕುಟುಂಬದ ಅಥವಾ ಸುತ್ತಲಿನ ಸಮಾಜದ ಒಳಗಿನ ನಾಗರಿಕ ವಿಷಯವಾಗಿದ್ದು, ಅದು ಮಾತುಕತೆಯ ಆಟದಲ್ಲಿ ಕೊನೆಗೊಳ್ಳುವುದಕ್ಕೆ ಮುಕ್ತವಾಗಿದ್ದು, ಮಹಿಳೆಯರನ್ನು ಅದೇ ಸಂಕಷ್ಟದಲ್ಲಿ ಇಡುತ್ತದೆ, ಈ ಕಾರಣಕ್ಕೆ ನಿಕಟ ಸಂಗಾತಿಯ ಹಿಂಸಾಚಾರವನ್ನು ಉದ್ದೇಶಪೂರ್ವಕವಾಗಿ ಗುರುತಿಸಲಾಗುವುದಿಲ್ಲ. ಆದ್ದರಿಂದ, ಹಿಂಸಾಚಾರವನ್ನು ತಡೆಗಟ್ಟಲು ಅಥವಾ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ವ್ಯವಸ್ಥಿತ ಕಾರ್ಯಕ್ರಮವು ಸಾಧ್ಯವಾದಷ್ಟು ದೂರವಿದೆ. ಹೀಗಾಗಿ, ಹಿಂಸೆ-ದೌರ್ಜನ್ಯದ ಸ್ಥಳಗಳಲ್ಲಿ ಸಿಲುಕಿರುವ ಮಹಿಳೆಯರ ಪರಿಹಾರಕ್ಕಾಗಿ ತುರ್ತು ಪ್ರತಿಕ್ರಿಯೆಯನ್ನು ಆಯೋಜಿಸಲು ತಿಳುವಳಿಕೆಯುಳ್ಳ ನಾಗರಿಕ ಸಮಾಜದ ಮೇಲೆ ಜವಾಬ್ದಾರಿ ಇದೆ.

ಹಿಂಸಾಚಾರದ ರಚನಾತ್ಮಕ ಮತ್ತು ಪ್ರಮಾಣಿತ ಸ್ವರೂಪವನ್ನು ಪರಿಗಣಿಸಿದರೆ, ನಾಗರಿಕ ಸಮಾಜ ಕೂಡ ಮಧ್ಯಸ್ಥಿಕೆ ವಿಧಾನಗಳ ಸೀಮಿತ ಆಯ್ಕೆಗಳನ್ನು ಹೊಂದಿದೆ. ಮಹಿಳೆಯರಿಗೆ ಸಮುದಾಯ ಮಟ್ಟದ ಬೆಂಬಲವನ್ನು (ಮಾನಸಿಕ ಆರೋಗ್ಯ, ವೈದ್ಯಕೀಯ ಮತ್ತು ಹಣಕಾಸು) ಆಯೋಜಿಸುವುದು ನೊಂದ ಮಹಿಳೆಯರಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ ಎಂದು ಪುರಾವೆಗಳು ಸೂಚಿಸುತ್ತವೆ. ಆದರೂ, ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಗಳು ಮತ್ತು ಕೋವಿಡ್ ಭಯವು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸವಾಲನ್ನೆಸೆಯುತ್ತವೆ. ಸಾಂಪ್ರದಾಯಿಕ ಸಮುದಾಯ ಬೆಂಬಲ ವಿಧಾನಗಳು ಹೊಸ ಅಡೆತಡೆಗಳನ್ನು ಎದುರಿಸಲು ಸೃಜನಶೀಲ ಸಾಧನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಸಮುದಾಯ ಬೆಂಬಲ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ತುರ್ತು ಸಾರ್ವಜನಿಕ ಸಂವಾದದ ಅಗತ್ಯವಿದೆ. ಸಮಾನಾಂತರವಾಗಿ, ತಿಳಿವಳಿಕೆಯುಳ್ಳ ನಾಗರಿಕ ಸಮಾಜವು ಮಹಿಳೆಯರ ಈ ಬಿಕ್ಕಟ್ಟನ್ನು ಮುಖ್ಯವಾಹಿನಿಯ ಸಾಮಾಜಿಕ ನಿರೂಪಣೆಯಲ್ಲಿ ಪ್ರತಿನಿಧಿಸಲು ಪ್ರಯತ್ನಿಸಬೇಕು. ಮೂಕ ಯಾತನೆ ಮತ್ತದೇ ಹೊಸ ಸಾಮಾನ್ಯ ಸ್ಥಿತಿಯನ್ನು ಮಾತ್ರ ಸ್ಥಾಪಿಸುತ್ತದೆ.

ಡಾ. ಹಿಮಾಂಶು

ಡಾ. ಹಿಮಾಂಶು
ಆರೋಗ್ಯ ಯೋಜನೆಗಳನ್ನು ರೂಪಿಸುವ ಅನುಭವವಿರುವ ಹಿಮಾಂಶು ಅವರು ಜಾಗತಿಕ ಆರೋಗ್ಯ ವಿಷಯದಲ್ಲಿ ಸಂಶೋಧಕರು ಮತ್ತು ವೈದ್ಯರು. ನವದೆಹಲಿಯ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಜೊತೆಗೆ ಅವರು ಪ್ರಸಕ್ತ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಕೊರೊನಾ: ಪಂಜಾಬ್‌‌‌ನ 9 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ 2 ಗಂಟೆ ವಿಸ್ತರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...