Homeಮುಖಪುಟಲಾಕ್‌ಡೌನ್‌ನಲ್ಲಿ ಮಹಿಳೆಯರು: ಕಡೆಗಣಿಸಲ್ಪಟ್ಟ ಈ ಮೌನ ಬಿಕ್ಕಟ್ಟಿಗೆ ಅಗತ್ಯವಿದೆ ಗಟ್ಟಿ ಧ್ವನಿಯ ಪ್ರತಿಕ್ರಿಯೆ

ಲಾಕ್‌ಡೌನ್‌ನಲ್ಲಿ ಮಹಿಳೆಯರು: ಕಡೆಗಣಿಸಲ್ಪಟ್ಟ ಈ ಮೌನ ಬಿಕ್ಕಟ್ಟಿಗೆ ಅಗತ್ಯವಿದೆ ಗಟ್ಟಿ ಧ್ವನಿಯ ಪ್ರತಿಕ್ರಿಯೆ

- Advertisement -
- Advertisement -

ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸುವುದಕ್ಕಾಗಿ ಜಾರಿ ಮಾಡಿದ ಹಿಂದೆಂದೂ ಕಾಣದ ಲಾಕ್‌ಡೌನ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದೆ. ಒಂದು ವರ್ಷ – ಲಾಕ್‌ಡೌನ್ ಹೇರಿದ ನಂತರ, ಈ ಬಿಕ್ಕಟ್ಟಿನ ಹಲವು ಆಯಾಮಗಳು ಇನ್ನೂ ತೆರೆದುಕೊಳ್ಳುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ, ಜಿಡಿಪಿ ಕುಸಿತಗೊಂಡಿದೆ. ಇದಕ್ಕೆ ಜೊತೆಗೆ, ವ್ಯಾಪಕವಾದ ಉದ್ಯೋಗ ನಷ್ಟ ಮತ್ತು ಕಾರ್ಮಿಕರು ಆರ್ಥಿಕ ಭಾಗವಹಿಸುವಿಕೆಯ ಇಳಿಕೆ ಕಂಡಿದೆ. ತಲಾ ಆದಾಯದಲ್ಲಿ ಗಮನಾರ್ಹ ಕುಸಿತ ನಿರೀಕ್ಷಿಸಲಾಗಿದೆ. ಸಾಮಾಜಿಕ ಮಟ್ಟದಲ್ಲಿ, ಕಡಿಮೆ ಖರ್ಚು ಮತ್ತು ಕಡಿಮೆ ಚಲನಶೀಲತೆಯಿಂದಾಗಿ ಆರ್ಥಿಕತೆಯ ಬಗ್ಗೆ ಜನರ ವಿಶ್ವಾಸ ಕಡಿಮೆಯಾಗಿದೆ.

ತಕ್ಷಣದ ಭವಿಷ್ಯದ ಬಗ್ಗೆ ಅನಿಶ್ಚಿತತೆಯು ಕುಟುಂಬಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ ಮತ್ತು ಆರೋಗ್ಯ ವೆಚ್ಚಗಳ ವ್ಯಾಪ್ತಿ ಸೇರಿದಂತೆ ಇತರೆಲ್ಲ ಸಾಮಾಜಿಕ ಭದ್ರತೆಯ ಸಾಧಾರಣ ವೆಚ್ಚಕ್ಕೆ ಧಕ್ಕೆ ತಂದಿರುವುದು ಇದನ್ನು ಉಲ್ಬಣಗೊಳಿಸಿದೆ. ಅಂತೆಯೇ, ಭಾರತೀಯ ಸಮಾಜವು ಆರ್ಥಿಕ ಅಸಮಾನತೆ ಮತ್ತು ಹೆಚ್ಚು ತೀವ್ರವಾದ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿದೆ. ಹೀಗಾಗಿ ಬಿಕ್ಕಟ್ಟಿನ ಸಮಯದಲ್ಲಿ, ಕೆಳಮಟ್ಟದ ಸಾಮಾಜಿಕ-ಆರ್ಥಿಕ ಗುಂಪುಗಳು ಹೆಚ್ಚು ಬಳಲುತ್ತವೆ; ಉನ್ನತ ವರ್ಗದ ಜನರು ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳುತ್ತಾರೆ ಮತ್ತು ಒತ್ತಡವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಸಮಸ್ಯೆ ಹೀಗಿದ್ದು, ಇನ್ನೂ ದೊಡ್ಡ ಮಾನವೀಯ ಬಿಕ್ಕಟ್ಟು ಎಂದರೆ ಲಿಂಗಗಳ ನಡುವಿನ ಅಡ್ಡ ಅಸಮಾನತೆಯಿಂದ ಪ್ರೇರಿತವಾಗಿರುವುದು ಮತ್ತು ಈ ಎಲ್ಲದರಲ್ಲೂ ಸಂಕಷ್ಟ ಅನುಭವಿಸುವವರಲ್ಲಿ ಮಹಿಳೆಯರೇ ಹೆಚ್ಚಿರುವುದು.

ಲಾಕ್‌ಡೌನ್ ಎಲ್ಲಾ ಸಾಮಾಜಿಕ-ಆರ್ಥಿಕ ಗುಂಪುಗಳ ಮಹಿಳೆಯರ ಮೇಲೆ ತೀವ್ರವಾದ ಅಸ್ತಿತ್ವವಾದದ ಬಿಕ್ಕಟ್ಟನ್ನು ಉಂಟು ಮಾಡಿದೆ. 2020ರ ಜನವರಿಯಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು 9.9% ಇದ್ದು ಇದನ್ನು ಲಾಕ್‌ಡೌನ್ ನಂತರದ ಸಮಯಕ್ಕೆ ಹೋಲಿಸಿದರೆ 6.9%ಕ್ಕೆ ಕುಸಿದಿದೆ. ಮುಂದುವರೆದು, ಸೆಪ್ಟೆಂಬರ್ 2020ರ ನಂತರ, ಪುರುಷರಿಗಿಂತ ಭಿನ್ನವಾಗಿ, ತುಸು ಆರ್ಥಿಕ ಚೇತರಿಕೆ, ಉದ್ಯೋಗದ ವಿಷಯದಲ್ಲಿ ಮಹಿಳೆಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಲಾಕ್‌ಡೌನ್ ಮಹಿಳೆಯರ ಗಳಿಕೆಯಿಂದ ಲಭಿಸುವ ಸಣ್ಣ ಸ್ವಾತಂತ್ರ್ಯ ಮತ್ತು ಸಂಧಾನ ಶಕ್ತಿಯನ್ನು ಕಸಿದುಕೊಳ್ಳುವುದರಿಂದ ಅವರ ಅಧೀನತೆಯನ್ನು ಹೆಚ್ಚಿಸಿರುವ ಸಾಧ್ಯತೆ ಇದೆ.

PC : YourStory

ಲಾಕ್‌ಡೌನ್ ಮತ್ತು ನಂತರದ ಚಲನಶೀಲತೆಯ ಇಳಿಕೆಯಿಂದಾಗಿ ಜನ ಹೆಚ್ಚಿನ ಸಮಯ ಕೌಟುಂಬಿಕ ವಾಸಸ್ಥಾನಗಳಲ್ಲಿ ವಾಸಿಸುವಂತೆ ಮಾಡಿದೆ. ಹೀಗಾಗಿ, ಮನೆಕೆಲಸಗಳ ಬೇಡಿಕೆ ಹೆಚ್ಚಾಗಿದೆ, ಇದರ ಪರಿಣಾಮವಾಗಿ ಮಹಿಳೆಯರ ಮೇಲೆ ಹೆಚ್ಚಿನ ದೈಹಿಕ ಕೆಲಸದ ಹೊರೆ ಬೀಳುತ್ತದೆ. ರಾಷ್ಟ್ರವ್ಯಾಪಿ ಸಂಶೋಧನೆ (ಪ್ರಿಯಾನ್ಶಿ ಚೌಹಾನ್, ಲಿಂಗ ಸಮಸ್ಯೆಗಳು, 2020) ವರದಿ ಮಾಡಿದ ಪ್ರಕಾರ, ನಿರುದ್ಯೋಗಿ ಮತ್ತು ಉದ್ಯೋಗದಲ್ಲಿರುವ ಮಹಿಳೆಯರು ಕ್ರಮವಾಗಿ 30.5%, 14.5% ಹೆಚ್ಚಿನ ಸಮಯವನ್ನು ಮನೆಗೆಲಸಗಳಿಗಾಗಿ ಮೀಸಲಿಡುತ್ತಿದ್ದಾರೆ, ಆಗಾಗ್ಗೆ ವಾರಕ್ಕೆ 70 ಗಂಟೆಗಳ ಕೆಲಸವನ್ನು ಮೀರುತ್ತಾರೆ. ಆಸಕ್ತಿದಾಯಕ ಎಂದರೆ, ವಿವಾಹಿತ ಮಹಿಳೆಯರ ಮೇಲೆ ಈ ಭಾರ ಅನುಪಾತದ ಎಲ್ಲೆ ಮೀರಿ ಬಿದ್ದಿದೆ ಎಂದು ಈ ಅಧ್ಯಯನ ಸೂಚಿಸುತ್ತದೆ.

ಈ ಸಂಗತಿಯು ವಿವಾಹದ ಪಿತೃಪ್ರಭುತ್ವದ ಸಂಸ್ಥೆಯಿಂದ ವ್ಯಾಖ್ಯಾನಿಸಲ್ಪಟ್ಟ ಅಸಮಾನ ಮತ್ತು ಅನ್ಯಾಯದ ಲಿಂಗ ಪಾತ್ರಗಳನ್ನು ಒತ್ತಿಹೇಳುತ್ತದೆ – ಇದೆಲ್ಲವೂ ಮಹಿಳೆಯರ ಮೇಲೆ ಮಾತ್ರ ಒತ್ತಡ, ಸಂಕಟವನ್ನು ಉಂಟುಮಾಡುತ್ತದೆ. ಗುಜರಾತ್, ದೆಹಲಿ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳ ಹಲವಾರು ಗುಣಾತ್ಮಕ ಮೌಲ್ಯಮಾಪನ ವರದಿಗಳಲ್ಲಿ, ಮಹಿಳೆಯರಿಗೆ ಕೆಲಸ ಮತ್ತು ಜವಾಬ್ದಾರಿಗಳು ಹೆಚ್ಚಿರುವುದರಿಂದ ಮಾನಸಿಕ ಯಾತನೆ, ಹತಾಶ ಭಾವನೆ, ದೈಹಿಕ ನಿಶಕ್ತಿ ಉಂಟಾಗಿದ್ದನ್ನು ವ್ಯಕ್ತ ಪಡಿಸಿದ್ದಾರೆ. ಮುಖ್ಯವಾಗಿ, ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮಹಿಳೆಯರು, ಸಾಮಾನ್ಯವಾಗಿ ಸಹವರ್ತಿಗಳು, ಪುರುಷರು ಮತ್ತು ಸಮುದಾಯದಿಂದ ಬೆಂಬಲದ ಕೊರತೆಯನ್ನು ವ್ಯಕ್ತಪಡಿಸಿದ್ದಾರೆ. ನಿಸ್ಸಂದೇಹವಾಗಿ, ಈ ಕೆಲಸದ ಹೆಚ್ಚಳ, ಈಗಾಗಲೇ ಒತ್ತಡದಲ್ಲಿರುವ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಉಂಟು ಮಾಡುತ್ತದೆ, ಅದು ಗಮನಕ್ಕೆ ಬಾರದ ಸಾಧ್ಯತೆ ಹೆಚ್ಚಿದೆ.

ಕೌಟುಂಬಿಕ ವಾಸಸ್ಥಾನದ ಜಾಗಗಳಲ್ಲಿ ಜನರನ್ನು ಈ ಸಾಂಕ್ರಾಮಿಕ ಗುಂಪುಗೂಡಿಸುತ್ತಿರುವುದರಿಂದ, ಕೌಟುಂಬಿಕ ಮತ್ತು ಸಂಗಾತಿಯ ಹಿಂಸಾಚಾರಕ್ಕೆ ಮಹಿಳೆ ಒಳಗಾಗಿದ್ದಾಳೆ. ಅಂತೆಯೇ, ಒಟ್ಟು ವಿವಾಹಿತ ಮೂವರಲ್ಲಿ ಒಬ್ಬರು ನಿರಂತರ ಕೌಟುಂಬಿಕ ಹಿಂಸಾಚಾರವನ್ನು (ಲೈಂಗಿಕ ಮತ್ತು ದೈಹಿಕ) ಎದುರಿಸುತ್ತಾರೆ ಮತ್ತು 100ರಲ್ಲಿ ಒಬ್ಬರಿಗಿಂತ ಕಡಿಮೆ ಮಹಿಳೆತರಷ್ಟೇ ಬಾಹ್ಯ ಸಹಾಯವನ್ನು ಪಡೆಯಲು ಸಮರ್ಥರಾಗಿದ್ದಾರೆ. ಲಾಕ್‌ಡೌನ್ ಮಹಿಳೆಯರನ್ನು ಕೌಟುಂಬಿಕ ಸ್ಥಳಗಳಲ್ಲಿ (ಅವರ ಸಹಜ ವಾಸಸ್ಥಳದಲ್ಲಿ) ಹಿಂಸಾಚಾರಿಗಳೊಂದಿಗೆ (ಪತಿ, ಅತ್ತೆ-ಮಾವ ಮತ್ತು ವಿಸ್ತೃತ ಕುಟುಂಬ) ದೊಡ್ಡ ಅವಧಿಗೆ ಲಾಕ್ ಮಾಡಿತು. ಹಿಂದಿನ ಸಂಶೋಧನೆಗಳ ಪ್ರಕಾರ, ಆರ್ಥಿಕ ಅನಿಶ್ಚಿತತೆ ಮತ್ತು ಮಾನಸಿಕ ಯಾತನೆ ಪುರುಷರ ದರ್ಪವನ್ನು ಹೆಚ್ಚಿಸುತ್ತದೆ, ಇದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುತ್ತದೆ.

ನಿರೀಕ್ಷೆಯಂತೆಯೇ, 2019ರ ಇದೇ ಅವಧಿಗೆ ಹೋಲಿಸಿದರೆ ಮಹಿಳೆಯರಿಗಾಗಿ ಇರುವ ರಾಷ್ಟ್ರೀಯ ಆಯೋಗವು ಲಾಕ್‌ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರದ 2.5 ಪಟ್ಟು ಹೆಚ್ಚು ದೂರುಗಳನ್ನು ದಾಖಲಿಸಿದೆ. ಲಾಕ್‌ಡೌನ್ ಮಾಡಿದ ಮೊದಲ ಹತ್ತು ದಿನಗಳಲ್ಲಿ, ರಾಷ್ಟ್ರೀಯ ಮಕ್ಕಳ ಸಹಾಯವಾಣಿಗೆ 90,000ಕ್ಕೂ ಹೆಚ್ಚು ಎಸ್‌ಒಎಸ್ ಕರೆಗಳು ಬಂದವು. ದೆಹಲಿಯಲ್ಲಿ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ವಿಶೇಷ ಕ್ಲಿನಿಕ್‌ಗಳನ್ನು ನಡೆಸುವ ಡಾಕ್ಟರ್ಸ್ ವಿಥ್‌ಔಟ್ ಬಾರ್ಡರ್ಸ್ ಸಂಸ್ಥೆ ಲಾಕ್‌ಡೌನ್ ನಂತರ, ವೈದ್ಯಕೀಯ ಆರೈಕೆ ಬಯಸುವ ಸಂತ್ರಸ್ತರ ಪ್ರಮಾಣ ದುಪ್ಪಟ್ಟಾಗಿರುವುದನ್ನು ಕಂಡಿತು. ಮಹಿಳೆಯ ಧ್ವನಿಯ ’ಲೋಕಲ್ ಡೈರಿಸ್’ ಎಂಬ ದಾಖಲೆ ವ್ಯವಸ್ಥೆ ಲಾಕ್‌ಡೌನ್ ಸಂದರ್ಭದಲ್ಲಿನ ಭಾರತದಾದ್ಯಂತದ ಮಹಿಳೆಯರ ಕಥೆಗಳನ್ನು ನಿರೂಪಿಸಿದೆ. ಅವರು ಸಾಮಾನ್ಯವಾಗಿ ಗಂಡಂದಿರಿಂದ ದಿನವಿಡೀ ದೈಹಿಕ ಹಲ್ಲೆ ಎದುರಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುವುದು ಬಿಕ್ಕಟ್ಟಿನ ಕಥೆಯ ಒಂದು ಭಾಗ ಮಾತ್ರ. ಲಾಕ್‌ಡೌನ್ ಮಹಿಳೆಯರಿಗೆ ಸಹಾಯವನ್ನು ಪಡೆಯುವುದನ್ನು ಅಥವಾ ಹಿಂಸಾಚಾರದ ವಿರುದ್ಧ ನಿಭಾಯಿಸುವ ಕ್ರಮಗಳನ್ನು ತೆಗೆದುಕೊಳ್ಳದಂತೆ ತೀವ್ರವಾಗಿ ನಿರ್ಬಂಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಚಲನವಲನದ ನಿರ್ಬಂಧಗಳು ಬಾಹ್ಯ ಸಹಾಯವನ್ನು ಪಡೆಯಲು ಅಥವಾ ಸಮಾಧಾನಕ್ಕಾಗಿ ಇತರ ಮಹಿಳೆಯರೊಂದಿಗೆ ಬೆರೆಯಲು ಒಂದು ತಡೆಯಾಗಿತ್ತು. ಇದಲ್ಲದೆ, ಕೌಟುಂಬಿಕ ಹಿಂಸಾಚಾರದ ವಿರುದ್ಧ ಪ್ರಾಥಮಿಕ ಪರಿಹಾರವನ್ನು ನೀಡುವ ಸರ್ಕಾರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಲೂ ತೊಂದರೆಯಾಗಿದೆ. ಈಗ ಅವರುಗಳನ್ನು ಕೋವಿಡ್ ಸಂಬಂಧಿ ಚಟುವಟಿಕೆಗಳಿಗೆ ತಿರುಗಿಸಲಾಗಿದೆ. ಆರ್ಥಿಕ ತೊಂದರೆ ಮತ್ತು ಚಲನೆಯ ನಿರ್ಬಂಧಗಳಿಂದಾಗಿ ತಳಮಟ್ಟದ ಎನ್‌ಜಿಒಗಳು ಅಥವಾ ಸಮುದಾಯ ಬೆಂಬಲ ಗುಂಪುಗಳನ್ನು ಕೊನೆಗೊಳಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ. ಇದಲ್ಲದೆ, ಹಿಂಸಾಚಾರಿಗಳ ನಿರಂತರ ಉಪಸ್ಥಿತಿ ಮಹಿಳೆಯರಿಗೆ ಫೋನ್ ಮೂಲಕ ಸಹಾಯ ಅಥವಾ ಪರಿಹಾರವನ್ನು ಪಡೆಯುವುದನ್ನು ತಡೆಯುತ್ತದೆ. ಇದನ್ನು ಇನ್ನಷ್ಟು ಹದಗೆಡಿಸುವುದು, ಹೆಚ್ಚಿದ ಮನೆಕೆಲಸ, ಮಹಿಳೆಯರಿಗೆ ತಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಮಾತನಾಡಲು ಸಮಯವಿಲ್ಲದಂತೆ ಮಾಡಲಾಗಿರುವುದು.

PC : Financial Times

ತೀವ್ರವಾದ ಲಾಕ್‌ಡೌನ್ ಸರಾಗಗೊಳಿಸುವಿಕೆಯು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಿದೆ ಮತ್ತು ಮನೆಯ ಕೆಲಸದ ಒತ್ತಡವನ್ನು ಕೂಡ ಕಡಿತಗೊಳಿಸಿದೆ.

ಆದರೂ, ಚಲನವಲನದ ನಿರ್ಬಂಧಗಳು ಹಾಗೇ ಉಳಿದಿವೆ ಮತ್ತು ಸಾಮಾಜಿಕವಾಗಿ ಬೆರೆಯಲು ಅವಕಾಶಗಳು ಕಡಿಮೆಯಾಗಿವೆ. ವಲಯ ನಿಯಂತ್ರಣ (ಕಂಟೇನ್ಮೆಂಟ್) ಮತ್ತು ಸ್ಥಳೀಯ ಲಾಕ್‌ಡೌನ್‌ಗಳ ಹೇರಿಕೆ ಮುಂದುವರಿಯುತ್ತಿವೆ ಮತ್ತು ಮುಂದಿನ ದಿನಗಳಲ್ಲಿ ಅದು ದಿನನಿತ್ಯದ ವಾಸ್ತವ ಆಗಲಿದೆ.

ನಿರುದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಯಾತನೆ ಹೆಚ್ಚಾದರೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಯಾತನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಾಗರಿಕ ಮತ್ತು ಪ್ರಗತಿಪರ ಸಮಾಜವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಪ್ರತಿಕ್ರಿಯಿಸಬೇಕು ಮತ್ತು ಸಂತ್ರಸ್ತರೆ ಪರಿಹಾರ ನೆರವಿಗೆ ಮುಂದಾಗಬೇಕು.

ಹಿಂಸೆಯ ರಚನಾತ್ಮಕ ಮತ್ತು ವ್ಯವಸ್ಥಿತ ಸ್ವರೂಪವನ್ನು ಗಮನಿಸಿದರೆ, ಮಹಿಳೆಯರಿಗೆ ಪರಿಹಾರಕ್ಕಾಗಿ ಪರಿಣಾಮಕಾರಿ ಪ್ರತಿಕ್ರಿಯೆ ಬರುವುದು ಸುಲಭವಲ್ಲ. ಯಾವುದೇ ಪ್ರತಿಕ್ರಿಯೆಯನ್ನು ರೂಪಿಸುವುದು ಸಮಸ್ಯೆಯ ಗುರುತಿಸುವಿಕೆ ಮತ್ತು ತಿಳಿವಳಿಕೆಯೊಂದಿಗೆ ಪ್ರಾರಂಭವಾಗುತ್ತದೆ.

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯವು ಸಾಂಸ್ಕೃತಿಕವಾಗಿ ಅಂಗೀಕರಿಸಲ್ಪಟ್ಟ ರೂಢಿ ಆಗಿರುವುದರಿಂದ ಸರ್ಕಾರ ಅಥವಾ ಸಾಮಾಜಿಕ ನಿರೂಪಣೆಗೆ ಸಮಸ್ಯೆಯ ಆಳವನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಬಹುಸಂಖ್ಯಾತ ಸಾಮಾಜಿಕ ರಚನೆಯು ಕೆಲಸದ ಹೊರೆಯನ್ನು ಸೀಮಿತಗೊಳಿಸದೆ ಮಹಿಳೆಯರ ಮೇಲಿನ ಮನೆಕೆಲಸಗಳ ಜವಾಬ್ದಾರಿಯನ್ನು ಒತ್ತಾಯಿಸುತ್ತದೆ. ಇದಲ್ಲದೆ, ಕೌಟುಂಬಿಕ ಹಿಂಸಾಚಾರವು ಹೆಚ್ಚಾಗಿ ಕುಟುಂಬದ ಅಥವಾ ಸುತ್ತಲಿನ ಸಮಾಜದ ಒಳಗಿನ ನಾಗರಿಕ ವಿಷಯವಾಗಿದ್ದು, ಅದು ಮಾತುಕತೆಯ ಆಟದಲ್ಲಿ ಕೊನೆಗೊಳ್ಳುವುದಕ್ಕೆ ಮುಕ್ತವಾಗಿದ್ದು, ಮಹಿಳೆಯರನ್ನು ಅದೇ ಸಂಕಷ್ಟದಲ್ಲಿ ಇಡುತ್ತದೆ, ಈ ಕಾರಣಕ್ಕೆ ನಿಕಟ ಸಂಗಾತಿಯ ಹಿಂಸಾಚಾರವನ್ನು ಉದ್ದೇಶಪೂರ್ವಕವಾಗಿ ಗುರುತಿಸಲಾಗುವುದಿಲ್ಲ. ಆದ್ದರಿಂದ, ಹಿಂಸಾಚಾರವನ್ನು ತಡೆಗಟ್ಟಲು ಅಥವಾ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ವ್ಯವಸ್ಥಿತ ಕಾರ್ಯಕ್ರಮವು ಸಾಧ್ಯವಾದಷ್ಟು ದೂರವಿದೆ. ಹೀಗಾಗಿ, ಹಿಂಸೆ-ದೌರ್ಜನ್ಯದ ಸ್ಥಳಗಳಲ್ಲಿ ಸಿಲುಕಿರುವ ಮಹಿಳೆಯರ ಪರಿಹಾರಕ್ಕಾಗಿ ತುರ್ತು ಪ್ರತಿಕ್ರಿಯೆಯನ್ನು ಆಯೋಜಿಸಲು ತಿಳುವಳಿಕೆಯುಳ್ಳ ನಾಗರಿಕ ಸಮಾಜದ ಮೇಲೆ ಜವಾಬ್ದಾರಿ ಇದೆ.

ಹಿಂಸಾಚಾರದ ರಚನಾತ್ಮಕ ಮತ್ತು ಪ್ರಮಾಣಿತ ಸ್ವರೂಪವನ್ನು ಪರಿಗಣಿಸಿದರೆ, ನಾಗರಿಕ ಸಮಾಜ ಕೂಡ ಮಧ್ಯಸ್ಥಿಕೆ ವಿಧಾನಗಳ ಸೀಮಿತ ಆಯ್ಕೆಗಳನ್ನು ಹೊಂದಿದೆ. ಮಹಿಳೆಯರಿಗೆ ಸಮುದಾಯ ಮಟ್ಟದ ಬೆಂಬಲವನ್ನು (ಮಾನಸಿಕ ಆರೋಗ್ಯ, ವೈದ್ಯಕೀಯ ಮತ್ತು ಹಣಕಾಸು) ಆಯೋಜಿಸುವುದು ನೊಂದ ಮಹಿಳೆಯರಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ ಎಂದು ಪುರಾವೆಗಳು ಸೂಚಿಸುತ್ತವೆ. ಆದರೂ, ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಗಳು ಮತ್ತು ಕೋವಿಡ್ ಭಯವು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸವಾಲನ್ನೆಸೆಯುತ್ತವೆ. ಸಾಂಪ್ರದಾಯಿಕ ಸಮುದಾಯ ಬೆಂಬಲ ವಿಧಾನಗಳು ಹೊಸ ಅಡೆತಡೆಗಳನ್ನು ಎದುರಿಸಲು ಸೃಜನಶೀಲ ಸಾಧನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಸಮುದಾಯ ಬೆಂಬಲ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ತುರ್ತು ಸಾರ್ವಜನಿಕ ಸಂವಾದದ ಅಗತ್ಯವಿದೆ. ಸಮಾನಾಂತರವಾಗಿ, ತಿಳಿವಳಿಕೆಯುಳ್ಳ ನಾಗರಿಕ ಸಮಾಜವು ಮಹಿಳೆಯರ ಈ ಬಿಕ್ಕಟ್ಟನ್ನು ಮುಖ್ಯವಾಹಿನಿಯ ಸಾಮಾಜಿಕ ನಿರೂಪಣೆಯಲ್ಲಿ ಪ್ರತಿನಿಧಿಸಲು ಪ್ರಯತ್ನಿಸಬೇಕು. ಮೂಕ ಯಾತನೆ ಮತ್ತದೇ ಹೊಸ ಸಾಮಾನ್ಯ ಸ್ಥಿತಿಯನ್ನು ಮಾತ್ರ ಸ್ಥಾಪಿಸುತ್ತದೆ.

ಡಾ. ಹಿಮಾಂಶು

ಡಾ. ಹಿಮಾಂಶು
ಆರೋಗ್ಯ ಯೋಜನೆಗಳನ್ನು ರೂಪಿಸುವ ಅನುಭವವಿರುವ ಹಿಮಾಂಶು ಅವರು ಜಾಗತಿಕ ಆರೋಗ್ಯ ವಿಷಯದಲ್ಲಿ ಸಂಶೋಧಕರು ಮತ್ತು ವೈದ್ಯರು. ನವದೆಹಲಿಯ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಜೊತೆಗೆ ಅವರು ಪ್ರಸಕ್ತ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಕೊರೊನಾ: ಪಂಜಾಬ್‌‌‌ನ 9 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ 2 ಗಂಟೆ ವಿಸ್ತರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...