Homeಅಂತರಾಷ್ಟ್ರೀಯವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

ವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

- Advertisement -
- Advertisement -

| ಮಲ್ಲಿ |

ನಿನ್ನೆಯಿಂದ ವಿಶ್ವದ ಪ್ರಭಾವಿ ವ್ಯಕ್ತಿ ಯಾರು ಎಂಬ ಒಂದು ಮತದಾನ-ಸಮೀಕ್ಷೆಯ ಸುದ್ದಿ ಭಾರತದ ಸಾಮಾಜಿಕ ಜಾಲತಾಣ ಮತ್ತು ಬಿಜೆಪಿಯ ಭಾಗವೇ ಆಗಿರುವ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಹರಿದಾಡುತ್ತಿದೆ. ‘ಅಂತರಾಷ್ಟ್ರೀಯ ಖ್ಯಾತಿಯ ‘ಬ್ರಿಟಿಷ್ ಹೆರಾಲ್ಡ್’ ನಡೆಸಿದ ಓದುಗರ ಅಭಿಪ್ರಾಯ ಸಮೀಕ್ಷೆಯಲ್ಲಿ ಮೋದಿ ಹೆಚ್ಚಿನ ಮತ ಪಡೆದು ವಿಶ್ವದ ಅತಿ ಜನಪ್ರಿಯ ನಾಯಕ ಆಗಿದ್ದಾರೆ’ ಎಂಬುದು ಅದರ ಸಾರಾಂಶ. ಅಂದಂತೆ ಯಾವುದೇ ನಿಯಂತ್ರಣ, ಉತ್ತರದಾಯಿತ್ವ ಇಲ್ಲದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಈ ಸುದ್ದಿ ಹರಡುತ್ತಿದ್ದಾರೆ ಎಂಬುದೇನೂ ಆಶ್ಚರ್ಯದ ವಿಷಯವಲ್ಲ. ಆದರೆ ಸಾರ್ವಜನಿಕರಿಗೆ, ಕನಿಷ್ಠ ತನ್ನ ವೀಕ್ಷಕ/ಗ್ರಾಹಕರಿಗೆ ಬದ್ಧರಾಗಬೇಕಿದ್ದ ರಿಪಬ್ಲಿಕ್ ಟಿವಿ, ಝೀ ನ್ಯೂಸ್ ಮತ್ತು ಆಜ್‍ತಕ್ ಮೀಡಿಯಾಗಳು ಇದು ಸತ್ಯ ಎಂಬಂತೆ ಯಾವ ಲಜ್ಜೆ, ಮಾನಮರ್ಯಾದೆ ಇಲ್ಲದೇ ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡು.

ಅಲ್ಟ್ ನ್ಯೂಸ್ ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿದ ಫ್ಯಾಕ್ಟ್‍ ಚೆಕಿಂಗ್‍ನಲ್ಲಿ ಗೊತ್ತಾಗಿದ್ದೇನೆಂದರೆ ಈ ‘ಬ್ರಿಟಿಷ್ ಹೆರಾಲ್ಡ್’ ಎಂಬುದು ಪರಿಗಣನೆಗೆ ಇಲ್ಲದ ಒಂದು ವೈಬ್‍ಸೈಟ್ ಅಷ್ಟೇ. ಈ ಒಂದು ಅಂಶ ಓದಿದರೆ ಅದರ ಮಹತ್ವ ಗೊತ್ತಾಗುತ್ತದೆ: ಈ ಸಂಸ್ಥೆಯ ಟ್ವಿಟ್ಟರ್ ಗೆ ಇರುವ ಫಾಲೋವರ್ಸ್ ಕೇವಲ 400. ಆಲ್ಟ್ ನ್ಯೂಸ್ ಎಂಬ ಸಣ್ಣ ಮಟ್ಟದ ಸಂಸ್ಥೆಯ ಟ್ವಿಟ್ಟರ್ ಫಾಲೋವರ್ಸ್ 1,20,000ಕ್ಕೂ ಹೆಚ್ಚು. ಖ್ಯಾತ ದಿ ಗಾರ್ಡಿಯನ್ ಮತ್ತು ಬಿಬಿಸಿ ಟ್ವೀಟರ್ ಫಾಲೋವರ್ಸ್ ಸಂಖ್ಯೆ ಮಿಲಿಯನ್‍ಗಳ ಲೆಕ್ಕದಲ್ಲಿದೆ. ಅಂದರೆ 400 ಫಾಲೋವರ್ಸ್‍ಗಳಿರುವ ‘ಬ್ರಿಟಿಷ್ ಹೆರಾಲ್ಡ್’ ಎಂತಹ ‘ವಲ್ರ್ಡ್ ಫೇಮಸ್’ ಸಂಸ್ಥೆ ಮತ್ತು ಮ್ಯಾಗಜೀನ್ ಎಂಬುದು ಗೊತ್ತಾಗುತ್ತದೆ.

ಬ್ರಿಟಿಷ್ ‘ಬ್ರಿಟಿಷ್ ಹೆರಾಲ್ಡ್’ ಎಂಬುದೇ ಇಂತಹ ಪೇಯ್ಡ್ ನ್ಯೂಸ್ ಹರಡಲಿರುವ ವೆಬ್ ಸಂಸ್ಥೆ ಅಷ್ಠೇ, ನಮ್ಮಲ್ಲಿ ಪೋಸ್ಟ್ ಕಾರ್ಡ್ ಇದೆಯಲ್ಲ ಹಾಗೆ!

ಈ ಸುಳ್ಳು ಸುದ್ದಿಯನ್ನೇ ಚೆಕ್ ಮಾಡಲು ನಾವು ಹೋದರೆ, ಅದರ ಲಿಂಕ್ ಆ ಹೆಸರಿನ ಸಂಸ್ಥೆಗೆ ಹೋಗುತ್ತದೆ. ಅಲ್ಲಿ ಮೋದಿ ನಂಬರ್ 1 ಎಂಬ ಸುದ್ದಿಯೇ ಎದ್ದು ಕಾಣುತ್ತದೆ. ವೆಬ್ ಬಳಸುವ ಸುಕ್ಷಿತರು ಇದೇ ಸುದ್ದಿಯ ವಿಶ್ವಾಸಾರ್ಹತೆ ಎನ್ನುವಂತೆ ಇದನ್ನೆಲ್ಲ ಪ್ಲಾನು ಮಾಡಲಾಗಿದೆ. ಮೋದಿ-2 ಬಂದ ಮೇಲೆ, ಹಿಂದಿಗಿಂತ ಹೆಚ್ಚಾಗಿ ದೇಶದ ಪ್ರಚಲಿತ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ ಜನರು ಇಂತಹ ವಿಚಾರಗಳ ಚರ್ಚೆಯಲ್ಲಿ ಮುಳುಗುವಂತೆ ಮಾಡಲು ನಡೆಸುತ್ತಿರುವ ಹಲವು ತುಂಬಾ ವ್ಯವಸ್ಥಿತ ಕುತಂತ್ರಗಳಲ್ಲಿ ಇದೂ ಒಂದು.

ಬಿಜೆಪಿನ ತುತ್ತೂರಿಯಾಗಿರುವ ರಿಪಬ್ಲಿಕ್ ಟಿವಿ, ಆಜ್‍ತಕ್ ಮತ್ತು ಝೀ ನ್ಯೂಸ್‍ನಂತಹ ಮೋದಿ ಬಾಲಗಳು ಇದನ್ನು ಸಾಮಾಜಿಕ ಜಾಲತಾಣದ ಲೆವೆಲ್ಲಿನಲ್ಲೇ ಬಿಜೆಪಿ ಐಟಿ ಸೆಲ್ ಮಾಡುವ ನಿರ್ಲಜ್ಜ ಪ್ರಪಗಂಡಾದ ರೀತಿಯಲ್ಲೇ ಪ್ರಸಾರ ಮಾಡಿವೆ. ದೇಶದ ಮುಖ್ಯವಾಹಿನಿಯ ಯಾವ ಮೀಡಿಯಾವೂ ಇಂತಹ ಫೇಕ್‍ನ್ಯೂಸ್‍ಗೆ ಮಣೆ ಹಾಕಿಲ್ಲ ಎಂಬುದನ್ನು ಗಮನಿಸಿ.

ಅಂದಂತೆ ಮುಂದಿನ ಇಶ್ಯೂನಲ್ಲಿ ಡಿಟೇಲ್ಸ್ ಎಂದಿರುವ ‘‘ಬ್ರಿಟಿಷ್ ಹೆರಾಲ್ಡ್’ ಈ ಸಮೀಕ್ಷೆಯ ಸ್ವರೂಪವೇನು, ಅದನ್ನು ಯಾವ ಮಾದರಿಯಲ್ಲಿ ನಡೆಸಲಾಯಿತು ಎಂಬುದರ ಬಗ್ಗೆ ಯಾವ ವಿವರಣೆಯನ್ನು ನೀಡಿಲ್ಲ. ಹಿಂದೆಲ್ಲ ಬಿಜೆಪಿ ಭಕ್ತರು ಬಿಬಿಸಿ ಹೆಸರಲ್ಲಿ ಇಂತಹ ಸುದ್ದಿ ಮಾಡಿದಾಗ ಬಿಬಿಸಿ ಅಂತಹ ಯಾವ ಸರ್ವೆಯನ್ನೂ ನಾವು ಮಾಡುವುದಿಲ್ಲ ಎಂದು ಘೋಷಿಸಿ ಇವರ ಬಣ್ಣ ಬಯಲು ಮಾಡಿದ್ದರು. ಆದರೆ ವಿದೇಶ ಹೆಸರು ಇದ್ದರೆ ಭಾರತದ ಜನ ನಂಬುತ್ತಾರೆ ಎಂಬ ಕಾರಣದಿಂದ ಬ್ರಿಟಿಷ್ ರೀಡರ್ ಹೆಸರಲ್ಲಿ ಈ ದಂಧೆಯನ್ನು ಮಾಡಲಾಗಿದೆ.

ನಮ್ಮ ಪ್ರಧಾನಿಗಳು ವಿಶ್ವಶ್ರೇಷ್ಟರಾದರೆ ನಮಗೆ ಸಂತೋಷವೇ. ಆ ಮೂಲಕ ಭಾರತದ ಕೀರ್ತಿ ಪ್ರಪಂಚದಲ್ಲೆಡೆ ಹಬ್ಬಿ, ಭಾರತದಲ್ಲಿ ಹೂಡಿಕೆ ಹೆಚ್ಚಾಗಿ ಆರ್ಥಿಕ ಬೆಳವಣಿಗೆ, ಉದ್ಯೋಗಗಳ ಸಂಖ್ಯೆ ಹೆಚ್ಚಾದರೆ ನಮಗೂ ಖುಷಿಯೆ. ಆದರೆ ಸುಳ್ಳಿನ ಮೂಲಕ ಆಗಬಾರದು. ಆಗ ನಮ್ಮ ದೇಶದ ಮಾನ ಮರ್ಯಾದೆ ಹಾಳುತ್ತದೆ. ಆದರೆ ದುರಂತ ಎಂದರೆ ಈ ಸುಳ್ಳನ್ನು ಎಷ್ಟು ವ್ಯವಸ್ಥಿತವಾಗಿ ಹರಡುತ್ತಿದ್ದಾರೆಂದರೆ ಅದೀಗ ವ್ಯಾಟ್ಸಾಪ್‍ಗಳಲ್ಲಿ, ಪೇಸ್‍ಬುಕ್ ಪೇಜ್ ಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಹರಿದಾಡುತ್ತಿದೆ. ಥೂ ಎಂತಹ ನಿರ್ಲಜ್ಜ ದಂಧೆಯಿದು!

(ಕೃಪೆ: ಆಲ್ಟ್ ನ್ಯೂಸ್)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. British herlad news get modi is world famous news if it is true or not But Narendra Modi Universal popular figure no doubt Becasuse Every Indian Nown Him .Because he named in the world .But India has nown in the world .in previous Days indian Prime Minister standing in the corner side in all world confernces But now Indidan Prime Minister is center Gravity all World Summits. Some pepole jealously criticiseing Him .But theyare in Gandhi and Neharu family slaves

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...