Homeಅಂತರಾಷ್ಟ್ರೀಯವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

ವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

- Advertisement -
- Advertisement -

| ಮಲ್ಲಿ |

ನಿನ್ನೆಯಿಂದ ವಿಶ್ವದ ಪ್ರಭಾವಿ ವ್ಯಕ್ತಿ ಯಾರು ಎಂಬ ಒಂದು ಮತದಾನ-ಸಮೀಕ್ಷೆಯ ಸುದ್ದಿ ಭಾರತದ ಸಾಮಾಜಿಕ ಜಾಲತಾಣ ಮತ್ತು ಬಿಜೆಪಿಯ ಭಾಗವೇ ಆಗಿರುವ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಹರಿದಾಡುತ್ತಿದೆ. ‘ಅಂತರಾಷ್ಟ್ರೀಯ ಖ್ಯಾತಿಯ ‘ಬ್ರಿಟಿಷ್ ಹೆರಾಲ್ಡ್’ ನಡೆಸಿದ ಓದುಗರ ಅಭಿಪ್ರಾಯ ಸಮೀಕ್ಷೆಯಲ್ಲಿ ಮೋದಿ ಹೆಚ್ಚಿನ ಮತ ಪಡೆದು ವಿಶ್ವದ ಅತಿ ಜನಪ್ರಿಯ ನಾಯಕ ಆಗಿದ್ದಾರೆ’ ಎಂಬುದು ಅದರ ಸಾರಾಂಶ. ಅಂದಂತೆ ಯಾವುದೇ ನಿಯಂತ್ರಣ, ಉತ್ತರದಾಯಿತ್ವ ಇಲ್ಲದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಈ ಸುದ್ದಿ ಹರಡುತ್ತಿದ್ದಾರೆ ಎಂಬುದೇನೂ ಆಶ್ಚರ್ಯದ ವಿಷಯವಲ್ಲ. ಆದರೆ ಸಾರ್ವಜನಿಕರಿಗೆ, ಕನಿಷ್ಠ ತನ್ನ ವೀಕ್ಷಕ/ಗ್ರಾಹಕರಿಗೆ ಬದ್ಧರಾಗಬೇಕಿದ್ದ ರಿಪಬ್ಲಿಕ್ ಟಿವಿ, ಝೀ ನ್ಯೂಸ್ ಮತ್ತು ಆಜ್‍ತಕ್ ಮೀಡಿಯಾಗಳು ಇದು ಸತ್ಯ ಎಂಬಂತೆ ಯಾವ ಲಜ್ಜೆ, ಮಾನಮರ್ಯಾದೆ ಇಲ್ಲದೇ ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡು.

ಅಲ್ಟ್ ನ್ಯೂಸ್ ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿದ ಫ್ಯಾಕ್ಟ್‍ ಚೆಕಿಂಗ್‍ನಲ್ಲಿ ಗೊತ್ತಾಗಿದ್ದೇನೆಂದರೆ ಈ ‘ಬ್ರಿಟಿಷ್ ಹೆರಾಲ್ಡ್’ ಎಂಬುದು ಪರಿಗಣನೆಗೆ ಇಲ್ಲದ ಒಂದು ವೈಬ್‍ಸೈಟ್ ಅಷ್ಟೇ. ಈ ಒಂದು ಅಂಶ ಓದಿದರೆ ಅದರ ಮಹತ್ವ ಗೊತ್ತಾಗುತ್ತದೆ: ಈ ಸಂಸ್ಥೆಯ ಟ್ವಿಟ್ಟರ್ ಗೆ ಇರುವ ಫಾಲೋವರ್ಸ್ ಕೇವಲ 400. ಆಲ್ಟ್ ನ್ಯೂಸ್ ಎಂಬ ಸಣ್ಣ ಮಟ್ಟದ ಸಂಸ್ಥೆಯ ಟ್ವಿಟ್ಟರ್ ಫಾಲೋವರ್ಸ್ 1,20,000ಕ್ಕೂ ಹೆಚ್ಚು. ಖ್ಯಾತ ದಿ ಗಾರ್ಡಿಯನ್ ಮತ್ತು ಬಿಬಿಸಿ ಟ್ವೀಟರ್ ಫಾಲೋವರ್ಸ್ ಸಂಖ್ಯೆ ಮಿಲಿಯನ್‍ಗಳ ಲೆಕ್ಕದಲ್ಲಿದೆ. ಅಂದರೆ 400 ಫಾಲೋವರ್ಸ್‍ಗಳಿರುವ ‘ಬ್ರಿಟಿಷ್ ಹೆರಾಲ್ಡ್’ ಎಂತಹ ‘ವಲ್ರ್ಡ್ ಫೇಮಸ್’ ಸಂಸ್ಥೆ ಮತ್ತು ಮ್ಯಾಗಜೀನ್ ಎಂಬುದು ಗೊತ್ತಾಗುತ್ತದೆ.

ಬ್ರಿಟಿಷ್ ‘ಬ್ರಿಟಿಷ್ ಹೆರಾಲ್ಡ್’ ಎಂಬುದೇ ಇಂತಹ ಪೇಯ್ಡ್ ನ್ಯೂಸ್ ಹರಡಲಿರುವ ವೆಬ್ ಸಂಸ್ಥೆ ಅಷ್ಠೇ, ನಮ್ಮಲ್ಲಿ ಪೋಸ್ಟ್ ಕಾರ್ಡ್ ಇದೆಯಲ್ಲ ಹಾಗೆ!

ಈ ಸುಳ್ಳು ಸುದ್ದಿಯನ್ನೇ ಚೆಕ್ ಮಾಡಲು ನಾವು ಹೋದರೆ, ಅದರ ಲಿಂಕ್ ಆ ಹೆಸರಿನ ಸಂಸ್ಥೆಗೆ ಹೋಗುತ್ತದೆ. ಅಲ್ಲಿ ಮೋದಿ ನಂಬರ್ 1 ಎಂಬ ಸುದ್ದಿಯೇ ಎದ್ದು ಕಾಣುತ್ತದೆ. ವೆಬ್ ಬಳಸುವ ಸುಕ್ಷಿತರು ಇದೇ ಸುದ್ದಿಯ ವಿಶ್ವಾಸಾರ್ಹತೆ ಎನ್ನುವಂತೆ ಇದನ್ನೆಲ್ಲ ಪ್ಲಾನು ಮಾಡಲಾಗಿದೆ. ಮೋದಿ-2 ಬಂದ ಮೇಲೆ, ಹಿಂದಿಗಿಂತ ಹೆಚ್ಚಾಗಿ ದೇಶದ ಪ್ರಚಲಿತ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ ಜನರು ಇಂತಹ ವಿಚಾರಗಳ ಚರ್ಚೆಯಲ್ಲಿ ಮುಳುಗುವಂತೆ ಮಾಡಲು ನಡೆಸುತ್ತಿರುವ ಹಲವು ತುಂಬಾ ವ್ಯವಸ್ಥಿತ ಕುತಂತ್ರಗಳಲ್ಲಿ ಇದೂ ಒಂದು.

ಬಿಜೆಪಿನ ತುತ್ತೂರಿಯಾಗಿರುವ ರಿಪಬ್ಲಿಕ್ ಟಿವಿ, ಆಜ್‍ತಕ್ ಮತ್ತು ಝೀ ನ್ಯೂಸ್‍ನಂತಹ ಮೋದಿ ಬಾಲಗಳು ಇದನ್ನು ಸಾಮಾಜಿಕ ಜಾಲತಾಣದ ಲೆವೆಲ್ಲಿನಲ್ಲೇ ಬಿಜೆಪಿ ಐಟಿ ಸೆಲ್ ಮಾಡುವ ನಿರ್ಲಜ್ಜ ಪ್ರಪಗಂಡಾದ ರೀತಿಯಲ್ಲೇ ಪ್ರಸಾರ ಮಾಡಿವೆ. ದೇಶದ ಮುಖ್ಯವಾಹಿನಿಯ ಯಾವ ಮೀಡಿಯಾವೂ ಇಂತಹ ಫೇಕ್‍ನ್ಯೂಸ್‍ಗೆ ಮಣೆ ಹಾಕಿಲ್ಲ ಎಂಬುದನ್ನು ಗಮನಿಸಿ.

ಅಂದಂತೆ ಮುಂದಿನ ಇಶ್ಯೂನಲ್ಲಿ ಡಿಟೇಲ್ಸ್ ಎಂದಿರುವ ‘‘ಬ್ರಿಟಿಷ್ ಹೆರಾಲ್ಡ್’ ಈ ಸಮೀಕ್ಷೆಯ ಸ್ವರೂಪವೇನು, ಅದನ್ನು ಯಾವ ಮಾದರಿಯಲ್ಲಿ ನಡೆಸಲಾಯಿತು ಎಂಬುದರ ಬಗ್ಗೆ ಯಾವ ವಿವರಣೆಯನ್ನು ನೀಡಿಲ್ಲ. ಹಿಂದೆಲ್ಲ ಬಿಜೆಪಿ ಭಕ್ತರು ಬಿಬಿಸಿ ಹೆಸರಲ್ಲಿ ಇಂತಹ ಸುದ್ದಿ ಮಾಡಿದಾಗ ಬಿಬಿಸಿ ಅಂತಹ ಯಾವ ಸರ್ವೆಯನ್ನೂ ನಾವು ಮಾಡುವುದಿಲ್ಲ ಎಂದು ಘೋಷಿಸಿ ಇವರ ಬಣ್ಣ ಬಯಲು ಮಾಡಿದ್ದರು. ಆದರೆ ವಿದೇಶ ಹೆಸರು ಇದ್ದರೆ ಭಾರತದ ಜನ ನಂಬುತ್ತಾರೆ ಎಂಬ ಕಾರಣದಿಂದ ಬ್ರಿಟಿಷ್ ರೀಡರ್ ಹೆಸರಲ್ಲಿ ಈ ದಂಧೆಯನ್ನು ಮಾಡಲಾಗಿದೆ.

ನಮ್ಮ ಪ್ರಧಾನಿಗಳು ವಿಶ್ವಶ್ರೇಷ್ಟರಾದರೆ ನಮಗೆ ಸಂತೋಷವೇ. ಆ ಮೂಲಕ ಭಾರತದ ಕೀರ್ತಿ ಪ್ರಪಂಚದಲ್ಲೆಡೆ ಹಬ್ಬಿ, ಭಾರತದಲ್ಲಿ ಹೂಡಿಕೆ ಹೆಚ್ಚಾಗಿ ಆರ್ಥಿಕ ಬೆಳವಣಿಗೆ, ಉದ್ಯೋಗಗಳ ಸಂಖ್ಯೆ ಹೆಚ್ಚಾದರೆ ನಮಗೂ ಖುಷಿಯೆ. ಆದರೆ ಸುಳ್ಳಿನ ಮೂಲಕ ಆಗಬಾರದು. ಆಗ ನಮ್ಮ ದೇಶದ ಮಾನ ಮರ್ಯಾದೆ ಹಾಳುತ್ತದೆ. ಆದರೆ ದುರಂತ ಎಂದರೆ ಈ ಸುಳ್ಳನ್ನು ಎಷ್ಟು ವ್ಯವಸ್ಥಿತವಾಗಿ ಹರಡುತ್ತಿದ್ದಾರೆಂದರೆ ಅದೀಗ ವ್ಯಾಟ್ಸಾಪ್‍ಗಳಲ್ಲಿ, ಪೇಸ್‍ಬುಕ್ ಪೇಜ್ ಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಹರಿದಾಡುತ್ತಿದೆ. ಥೂ ಎಂತಹ ನಿರ್ಲಜ್ಜ ದಂಧೆಯಿದು!

(ಕೃಪೆ: ಆಲ್ಟ್ ನ್ಯೂಸ್)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. British herlad news get modi is world famous news if it is true or not But Narendra Modi Universal popular figure no doubt Becasuse Every Indian Nown Him .Because he named in the world .But India has nown in the world .in previous Days indian Prime Minister standing in the corner side in all world confernces But now Indidan Prime Minister is center Gravity all World Summits. Some pepole jealously criticiseing Him .But theyare in Gandhi and Neharu family slaves

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...