Homeಅಂತರಾಷ್ಟ್ರೀಯವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

ವಾವ್, ಮೋದಿ ವಿಶ್ವನಾಯಕ! ಹಾಗಂತ ಹೇಳಿದ ಸಂಸ್ಥೆ ಯಾವುದು ಗೊತ್ತೆ?

- Advertisement -
- Advertisement -

| ಮಲ್ಲಿ |

ನಿನ್ನೆಯಿಂದ ವಿಶ್ವದ ಪ್ರಭಾವಿ ವ್ಯಕ್ತಿ ಯಾರು ಎಂಬ ಒಂದು ಮತದಾನ-ಸಮೀಕ್ಷೆಯ ಸುದ್ದಿ ಭಾರತದ ಸಾಮಾಜಿಕ ಜಾಲತಾಣ ಮತ್ತು ಬಿಜೆಪಿಯ ಭಾಗವೇ ಆಗಿರುವ ಕೆಲವು ಮೀಡಿಯಾ ಸಂಸ್ಥೆಗಳಲ್ಲಿ ಹರಿದಾಡುತ್ತಿದೆ. ‘ಅಂತರಾಷ್ಟ್ರೀಯ ಖ್ಯಾತಿಯ ‘ಬ್ರಿಟಿಷ್ ಹೆರಾಲ್ಡ್’ ನಡೆಸಿದ ಓದುಗರ ಅಭಿಪ್ರಾಯ ಸಮೀಕ್ಷೆಯಲ್ಲಿ ಮೋದಿ ಹೆಚ್ಚಿನ ಮತ ಪಡೆದು ವಿಶ್ವದ ಅತಿ ಜನಪ್ರಿಯ ನಾಯಕ ಆಗಿದ್ದಾರೆ’ ಎಂಬುದು ಅದರ ಸಾರಾಂಶ. ಅಂದಂತೆ ಯಾವುದೇ ನಿಯಂತ್ರಣ, ಉತ್ತರದಾಯಿತ್ವ ಇಲ್ಲದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಈ ಸುದ್ದಿ ಹರಡುತ್ತಿದ್ದಾರೆ ಎಂಬುದೇನೂ ಆಶ್ಚರ್ಯದ ವಿಷಯವಲ್ಲ. ಆದರೆ ಸಾರ್ವಜನಿಕರಿಗೆ, ಕನಿಷ್ಠ ತನ್ನ ವೀಕ್ಷಕ/ಗ್ರಾಹಕರಿಗೆ ಬದ್ಧರಾಗಬೇಕಿದ್ದ ರಿಪಬ್ಲಿಕ್ ಟಿವಿ, ಝೀ ನ್ಯೂಸ್ ಮತ್ತು ಆಜ್‍ತಕ್ ಮೀಡಿಯಾಗಳು ಇದು ಸತ್ಯ ಎಂಬಂತೆ ಯಾವ ಲಜ್ಜೆ, ಮಾನಮರ್ಯಾದೆ ಇಲ್ಲದೇ ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡು.

ಅಲ್ಟ್ ನ್ಯೂಸ್ ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿದ ಫ್ಯಾಕ್ಟ್‍ ಚೆಕಿಂಗ್‍ನಲ್ಲಿ ಗೊತ್ತಾಗಿದ್ದೇನೆಂದರೆ ಈ ‘ಬ್ರಿಟಿಷ್ ಹೆರಾಲ್ಡ್’ ಎಂಬುದು ಪರಿಗಣನೆಗೆ ಇಲ್ಲದ ಒಂದು ವೈಬ್‍ಸೈಟ್ ಅಷ್ಟೇ. ಈ ಒಂದು ಅಂಶ ಓದಿದರೆ ಅದರ ಮಹತ್ವ ಗೊತ್ತಾಗುತ್ತದೆ: ಈ ಸಂಸ್ಥೆಯ ಟ್ವಿಟ್ಟರ್ ಗೆ ಇರುವ ಫಾಲೋವರ್ಸ್ ಕೇವಲ 400. ಆಲ್ಟ್ ನ್ಯೂಸ್ ಎಂಬ ಸಣ್ಣ ಮಟ್ಟದ ಸಂಸ್ಥೆಯ ಟ್ವಿಟ್ಟರ್ ಫಾಲೋವರ್ಸ್ 1,20,000ಕ್ಕೂ ಹೆಚ್ಚು. ಖ್ಯಾತ ದಿ ಗಾರ್ಡಿಯನ್ ಮತ್ತು ಬಿಬಿಸಿ ಟ್ವೀಟರ್ ಫಾಲೋವರ್ಸ್ ಸಂಖ್ಯೆ ಮಿಲಿಯನ್‍ಗಳ ಲೆಕ್ಕದಲ್ಲಿದೆ. ಅಂದರೆ 400 ಫಾಲೋವರ್ಸ್‍ಗಳಿರುವ ‘ಬ್ರಿಟಿಷ್ ಹೆರಾಲ್ಡ್’ ಎಂತಹ ‘ವಲ್ರ್ಡ್ ಫೇಮಸ್’ ಸಂಸ್ಥೆ ಮತ್ತು ಮ್ಯಾಗಜೀನ್ ಎಂಬುದು ಗೊತ್ತಾಗುತ್ತದೆ.

ಬ್ರಿಟಿಷ್ ‘ಬ್ರಿಟಿಷ್ ಹೆರಾಲ್ಡ್’ ಎಂಬುದೇ ಇಂತಹ ಪೇಯ್ಡ್ ನ್ಯೂಸ್ ಹರಡಲಿರುವ ವೆಬ್ ಸಂಸ್ಥೆ ಅಷ್ಠೇ, ನಮ್ಮಲ್ಲಿ ಪೋಸ್ಟ್ ಕಾರ್ಡ್ ಇದೆಯಲ್ಲ ಹಾಗೆ!

ಈ ಸುಳ್ಳು ಸುದ್ದಿಯನ್ನೇ ಚೆಕ್ ಮಾಡಲು ನಾವು ಹೋದರೆ, ಅದರ ಲಿಂಕ್ ಆ ಹೆಸರಿನ ಸಂಸ್ಥೆಗೆ ಹೋಗುತ್ತದೆ. ಅಲ್ಲಿ ಮೋದಿ ನಂಬರ್ 1 ಎಂಬ ಸುದ್ದಿಯೇ ಎದ್ದು ಕಾಣುತ್ತದೆ. ವೆಬ್ ಬಳಸುವ ಸುಕ್ಷಿತರು ಇದೇ ಸುದ್ದಿಯ ವಿಶ್ವಾಸಾರ್ಹತೆ ಎನ್ನುವಂತೆ ಇದನ್ನೆಲ್ಲ ಪ್ಲಾನು ಮಾಡಲಾಗಿದೆ. ಮೋದಿ-2 ಬಂದ ಮೇಲೆ, ಹಿಂದಿಗಿಂತ ಹೆಚ್ಚಾಗಿ ದೇಶದ ಪ್ರಚಲಿತ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ ಜನರು ಇಂತಹ ವಿಚಾರಗಳ ಚರ್ಚೆಯಲ್ಲಿ ಮುಳುಗುವಂತೆ ಮಾಡಲು ನಡೆಸುತ್ತಿರುವ ಹಲವು ತುಂಬಾ ವ್ಯವಸ್ಥಿತ ಕುತಂತ್ರಗಳಲ್ಲಿ ಇದೂ ಒಂದು.

ಬಿಜೆಪಿನ ತುತ್ತೂರಿಯಾಗಿರುವ ರಿಪಬ್ಲಿಕ್ ಟಿವಿ, ಆಜ್‍ತಕ್ ಮತ್ತು ಝೀ ನ್ಯೂಸ್‍ನಂತಹ ಮೋದಿ ಬಾಲಗಳು ಇದನ್ನು ಸಾಮಾಜಿಕ ಜಾಲತಾಣದ ಲೆವೆಲ್ಲಿನಲ್ಲೇ ಬಿಜೆಪಿ ಐಟಿ ಸೆಲ್ ಮಾಡುವ ನಿರ್ಲಜ್ಜ ಪ್ರಪಗಂಡಾದ ರೀತಿಯಲ್ಲೇ ಪ್ರಸಾರ ಮಾಡಿವೆ. ದೇಶದ ಮುಖ್ಯವಾಹಿನಿಯ ಯಾವ ಮೀಡಿಯಾವೂ ಇಂತಹ ಫೇಕ್‍ನ್ಯೂಸ್‍ಗೆ ಮಣೆ ಹಾಕಿಲ್ಲ ಎಂಬುದನ್ನು ಗಮನಿಸಿ.

ಅಂದಂತೆ ಮುಂದಿನ ಇಶ್ಯೂನಲ್ಲಿ ಡಿಟೇಲ್ಸ್ ಎಂದಿರುವ ‘‘ಬ್ರಿಟಿಷ್ ಹೆರಾಲ್ಡ್’ ಈ ಸಮೀಕ್ಷೆಯ ಸ್ವರೂಪವೇನು, ಅದನ್ನು ಯಾವ ಮಾದರಿಯಲ್ಲಿ ನಡೆಸಲಾಯಿತು ಎಂಬುದರ ಬಗ್ಗೆ ಯಾವ ವಿವರಣೆಯನ್ನು ನೀಡಿಲ್ಲ. ಹಿಂದೆಲ್ಲ ಬಿಜೆಪಿ ಭಕ್ತರು ಬಿಬಿಸಿ ಹೆಸರಲ್ಲಿ ಇಂತಹ ಸುದ್ದಿ ಮಾಡಿದಾಗ ಬಿಬಿಸಿ ಅಂತಹ ಯಾವ ಸರ್ವೆಯನ್ನೂ ನಾವು ಮಾಡುವುದಿಲ್ಲ ಎಂದು ಘೋಷಿಸಿ ಇವರ ಬಣ್ಣ ಬಯಲು ಮಾಡಿದ್ದರು. ಆದರೆ ವಿದೇಶ ಹೆಸರು ಇದ್ದರೆ ಭಾರತದ ಜನ ನಂಬುತ್ತಾರೆ ಎಂಬ ಕಾರಣದಿಂದ ಬ್ರಿಟಿಷ್ ರೀಡರ್ ಹೆಸರಲ್ಲಿ ಈ ದಂಧೆಯನ್ನು ಮಾಡಲಾಗಿದೆ.

ನಮ್ಮ ಪ್ರಧಾನಿಗಳು ವಿಶ್ವಶ್ರೇಷ್ಟರಾದರೆ ನಮಗೆ ಸಂತೋಷವೇ. ಆ ಮೂಲಕ ಭಾರತದ ಕೀರ್ತಿ ಪ್ರಪಂಚದಲ್ಲೆಡೆ ಹಬ್ಬಿ, ಭಾರತದಲ್ಲಿ ಹೂಡಿಕೆ ಹೆಚ್ಚಾಗಿ ಆರ್ಥಿಕ ಬೆಳವಣಿಗೆ, ಉದ್ಯೋಗಗಳ ಸಂಖ್ಯೆ ಹೆಚ್ಚಾದರೆ ನಮಗೂ ಖುಷಿಯೆ. ಆದರೆ ಸುಳ್ಳಿನ ಮೂಲಕ ಆಗಬಾರದು. ಆಗ ನಮ್ಮ ದೇಶದ ಮಾನ ಮರ್ಯಾದೆ ಹಾಳುತ್ತದೆ. ಆದರೆ ದುರಂತ ಎಂದರೆ ಈ ಸುಳ್ಳನ್ನು ಎಷ್ಟು ವ್ಯವಸ್ಥಿತವಾಗಿ ಹರಡುತ್ತಿದ್ದಾರೆಂದರೆ ಅದೀಗ ವ್ಯಾಟ್ಸಾಪ್‍ಗಳಲ್ಲಿ, ಪೇಸ್‍ಬುಕ್ ಪೇಜ್ ಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಹರಿದಾಡುತ್ತಿದೆ. ಥೂ ಎಂತಹ ನಿರ್ಲಜ್ಜ ದಂಧೆಯಿದು!

(ಕೃಪೆ: ಆಲ್ಟ್ ನ್ಯೂಸ್)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. British herlad news get modi is world famous news if it is true or not But Narendra Modi Universal popular figure no doubt Becasuse Every Indian Nown Him .Because he named in the world .But India has nown in the world .in previous Days indian Prime Minister standing in the corner side in all world confernces But now Indidan Prime Minister is center Gravity all World Summits. Some pepole jealously criticiseing Him .But theyare in Gandhi and Neharu family slaves

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...