Homeಕರ್ನಾಟಕಯಾನಾಗುಂದಿ ಮಾತೆ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

ಯಾನಾಗುಂದಿ ಮಾತೆ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಹಳ್ಳಿಯ ಯಾನಾಗುಂದಿ ಮಾಣಿಕಮ್ಮನ ಆರೋಗ್ಯಕ್ಕಾಗಿ ಕೋರ್ಟ ನಿರ್ದೇಶನದಂತೆ ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳು ನಿಗಾವಹಿಸುತ್ತಿದ್ದಾರೆ. ಇದೆಲ್ಲ ಒಂದು ರೀತಿ ಸರಿ ಇರಬಹುದು. ಆದರೆ ಈ ಮಾಣಿಕಮ್ಮ ಊಟ ಉಪಚಾರವನ್ನೆ ಮಾಡದೆ ಇಲ್ಲಿಯವರೆಗೂ ಹಾಗೆಯೇ ಜೀವಿಸುತ್ತಿದ್ದಾಳೆ ಎಂಬ ಸಂಗತಿ ತುಂಬಾ ಮಹತ್ವದ್ದು. ಈ ಪವಾಡದ ಘಟನೆಗಾಗಿಯೆ ಕರ್ನಾಟಕ, ಆಂದ್ರ ಹಾಗೂ ಮಹಾರಾಷ್ಟ್ರದಾದ್ಯಂತ ಈಕೆಗೆ ಭಕ್ತರು ಹುಟ್ಟಿಕೊಂಡರು. ಮುಸುರೆಗೆ ನೊಣ ಮುತ್ತಿಕೊಂಡಂತೆ ರಾಜಕಾರಣಿಗಳೂ ಸಹ ಜನ ಸಾಮಾನ್ಯರು ಸೇರುವ ಕಡೆಗೆ ಅವರೂ ಸೇರಿ ಯಾನಾಗುಂದಿಯನ್ನು ನೋಡ ನೋಡುತ್ತಲೆ ಯಾತ್ರಾಕ್ಷೇತ್ರವಾಗಿ ಪರಿವರ್ತನೆಗೊಳಿಸಿದ್ದಾರೆ.

ವರ್ಷಕ್ಕೆ ಒಂದೆ ಒಂದು ಬಾರಿ ಅಂದರೆ ಶಿವರಾತ್ರಿಯ ದಿನ ಮಾಣಿಕೇಶ್ವರಿ ತನ್ನ ಭಕ್ತಾದಿಗಳಿಗೆ ದರ್ಶನ ಭಾಗ್ಯ ಕರುಣಿಸಿ ಮತ್ತೆ ವರ್ಷದುದ್ದಕ್ಕೂ ತನ್ನ ನೆಲ ಮಹಡಿಯನ್ನು ಸೇರಿ ಬಿಡುತ್ತಾಳೆ. ಮಾಣಿಕಮ್ಮ ಮಾಣಿಕೇಶ್ವರಿ ಆಗುವುದಕ್ಕಿಂತ ಪೂರ್ವದಲ್ಲಿ ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬುಗ್ಗಮ್ಮ ಆಶಪ್ಪ ದಂಪತಿಗಳ ನಾಲ್ಕನೆಯ ಮಗಳು. ಬಡತನಕ್ಕೆ ಕಷ್ಟಗಳು ಜಾಸ್ತಿ ಎನ್ನುವಂತೆ ಅನ್ನ ನೀರಿಲ್ಲದೆ ಬಳಲಿಕೆಯಿಂದ ಮಾಣಿಕಮ್ಮ ಪವಾಡಗಳನ್ನು ಮಾಡುತ್ತಲೆ ಬಂದಳು. ಚಿಕ್ಕಂದಿನಲ್ಲಿ ಈಕೆ ಯಾರೊಂದಿಗೂ ಬೆರೆಯದೆ, ಮಾತಾಡದೆ, ಅರಳಿಯ ಮರದ ಟೊಂಗೆ ಏರಿ ಕುಳಿತುಕೊಳ್ಳುವಳು. ಇದನ್ನು ಕಂಡು ಕಂಗಾಲಾದ ತಂದೆ ತಾಯಿಗಳು ದೇವರಿಗೆ ಹರಕೆ ಹೊತ್ತಿದ್ದಾರೆ. ಸಾಲದೆಂಬಂತೆ ದೆವ್ವ ಬಿಡಿಸುವವರ ಮನೆಗೂ ಎಡತಾಕಿದ್ದಾರೆ. ಕೊನೆಗೆ ಯಾರ ಮಾತೋ ಕೇಳಿ ಮಾಣಿಕಮ್ಮಳಿಗೆ ಹತ್ತನೆ ವರ್ಷದಲ್ಲಿಯೆ ಬಾಲ್ಯ ವಿವಾಹವನ್ನೂ ಮಾಡಿದರು. ಆದರೂ ಆಕೆ ಸರಿ ಹೋಗಲಿಲ್ಲ.

ಗುರುಮಿಠಕಲ್ ಮಠದ ಹಿಂದಿನ ಪೀಠಾಧಿಪತಿಗಳು ತಮ್ಮ ಮಠದಲ್ಲಿಯೆ ಈಕೆಯನ್ನು ಇಟ್ಟುಕೊಂಡು ಔಷದೋಪಚಾರ ಮಾಡಿದ್ದಾರೆ. ಆದರೂ ಅದು ಸರಿ ಹೋಗದೆ ಇದ್ದಾಗ ಮಾಣಿಕಮ್ಮನಿಗೆ ಕಾವಿ ಧರಿಸಿ ಸನ್ಯಾಸಿ ಮಾಡಿದರು ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ತನ್ನಷ್ಟಕ್ಕೆ ತಾನು ಇರುವ ಹರೆಯದ ಹುಡುಗಿ, ಶೂನ್ಯದಲ್ಲಿ ಏನನ್ನೋ ನೋಡುತ್ತ ಕುಳಿತ ಮಾಣಿಕಮ್ಮ ಮೌಢ್ಯ ಭಕ್ತರ ಕಣ್ಣಲ್ಲಿ ಪವಾಡ ಪುರುಷಳಾಗಿ ಗೋಚರವಾಗಿದ್ದಾಳೆ. ಕೆಲವು ಐನಾತಿಗಳಿಗೆ ಇಂಥದ್ದನ್ನು ಕಂಡರೆ ರಸಗವಳ. ಮಾಣಿಕಮ್ಮನನ್ನೆ ಬಂಡವಾಳ ಮಾಡಿಕೊಂಡ ಜನರು ಆಕೆಗಾಗಿ ಯಾನಾಗುಂದಿಯಲ್ಲಿ ಭರ್ಜರಿ ಕಟ್ಟಡವೊಂದನ್ನು ಕಟ್ಟಿ ನೆಲ ಮಹಡಿಯಲ್ಲಿಟ್ಟರು. ಹೇಳಿ ಕೇಳಿ ಆಂದ್ರದ ಜನ ಭಾವನಾತ್ಮಕತೆಯಲ್ಲಿಯೇ ಇರುವವರು.

ಮಾಣಿಕಮ್ಮ ಊಟವನ್ನೇ ಮಾಡದೆ ಜೀವಿಸಿದ್ದಾಳೆ ಎಂಬ ಹರಿಬಿಟ್ಟ ಸಂಗತಿ ಕಿವಿಯಿಂದ ಕಿವಿಗೆ ತಲುಪಿ, ಯಾನಾಗುಂದಿಯಲ್ಲಿ ಜನ ಜಂಗುಳಿಯೆ ಕೂಡಲು ಆರಂಭವಾಯಿತು. ಸಣ್ಣಗೆ ಆರಂಭವಾದ ಧಾರ್ಮಿಕ ವ್ಯಾಪಾರ ಇಂದು ಭರ್ಜರಿಯಾಗಿ ನಡೆಯುತ್ತಿವೆ. ಕಾಯಿ, ಕರ್ಪೂರ, ಹಾರ, ತುರಾಯಿ, ಪ್ರಸಾದ, ದಾಸೋಹ ಸೇವೆ ಕೈಂಕರ್ಯಗಳು ಅವ್ಯಾಹತವಾಗಿ ನಡೆದಿವೆ. ಕುರಿಗಳು ಸಾರ್ ನಾವು ಕುರಿಗಳು ಎಂಬ ಹಾಡಿನಂತೆ ಯೋಚಿಸುವ ಶಕ್ತಿಯನ್ನು ಕಳಕೊಂಡ ಜನತೆ ನಾ ಮುಂದೆ ತಾ ಮುಂದೆ ಎನ್ನುತ್ತಾ ದೌಡಾಯಿಸಿ ಯಾನಾಗುಂದಿಗೆ ಹೋಗಿ ಮಾಣಿಕಮ್ಮನ ದರ್ಶನ ಪಡೆದು ಬಂದರು.

ಆದರೆ ಇದುವರೆಗೂ ಯಾರೊಬ್ಬರೂ ಮಾಣಿಕಮ್ಮ ಊಟ ಮಾಡದೆ, ನೀರು ಕುಡಿಯದೆ ಹೇಗೆ ಜೀವಿಸಬಲ್ಲಳು ? ಎಂಬುದು ಯಾರೂ ಪ್ರಶ್ನಿಸಿಲ್ಲ. ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸುವುದು ಅಂದರೆ ಬತ್ತಲೆ ಇದ್ದವರ ರಾಜ್ಯದಲ್ಲಿ ಬಟ್ಟೆ ಉಟ್ಟವನ ಸ್ಥಿತಿಯಂತೆ. ಪುಂಡ ಪುರೋಹಿತರು, ಆಡಳಿತ ವರ್ಗದವರು ಹಬ್ಬಿಸಿದ ಗಾಳಿ ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡಿದ ಪರಿಣಾಮ ಯಾನಾಗುಂದಿ ಸುಕ್ಷೇತ್ರವಾಯಿತು, ಸುಪ್ರಸಿದ್ಧವಾಯಿತು.

ಜಗತ್ತಿನಾದ್ಯಂತ ಆಹಾರಕ್ಕಾಗಿ ನಡೆದ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ಮನುಷ್ಯನ ಮೋಸ, ತಟವಟ, ವಂಚನೆ, ಭ್ರಷ್ಟಾಚಾರಕ್ಕೆಲ್ಲ ಮೂಲ ಕಾರಣ ಹಸಿವು. ಆ ಹಸಿವಿಗಾಗಿಯೆ ಆತ ಏನೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಲಾದರೂ ಮಾತೆ ಮಾಣಿಕಮ್ಮ ಊಟ ಮಾಡದೆ , ನೀರು ಕುಡಿಯದೆ ಬದುಕಲು ಹೇಗೆ ಸಾಧ್ಯ ? ಎಂಬ ಸೂತ್ರವನ್ನು ಜಗತ್ತಿಗೆ ನೀಡಿದರೆ ಈ ಜಗತ್ತು ಆಕೆಯನ್ನು ಕೃತಜ್ಞತೆಯಿಂದ ನೆನೆಯುತ್ತದೆ. ಆಹಾರ ಮತ್ತು ನೀರಿಗಾಗಿ ಜಗತ್ತಿನಲ್ಲಿ ನಡೆದಿರುವ ಅಂತಃಕಲಹ ತಪ್ಪುತ್ತದೆ. ಮದ್ದು ಗುಂಡುಗಳು ಸೈನಿಕರು ಯುದ್ದ ವಿಮಾನಗಳು ಅರ್ಥಕಳೆದುಕೊಳ್ಳುತ್ತವೆ.

ವೈಜ್ಞಾನಿಕ ಮನೋಭಾವ ಇರುವ ಕೋರ್ಟ, ಸರಕಾರ ಆಕೆಯ ಆರೋಗ್ಯದ ಜೊತೆ ಜೊತೆಗೆ ಆಹಾರದ ಗುಟ್ಟನ್ನು ಬಯಲು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕಿದೆ. ಇದೆಲ್ಲ ಇಂದು ಸಾಧ್ಯವೆ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....