Homeಅಂತರಾಷ್ಟ್ರೀಯದೊಡ್ಡ ಶ್ರೀಮಂತ ಸೌದಿಯನ್ನು ಸೋಲಿಸುತ್ತಿರುವ ಪುಟ್ಟ ಬಡ ರಾಷ್ಟ್ರ ಯೆಮೆನ್

ದೊಡ್ಡ ಶ್ರೀಮಂತ ಸೌದಿಯನ್ನು ಸೋಲಿಸುತ್ತಿರುವ ಪುಟ್ಟ ಬಡ ರಾಷ್ಟ್ರ ಯೆಮೆನ್

ಇರಾನ್ ಹೌಥಿಗಳ ಮೂಲಕ ಗಳಿಸಿರುವ ದಾಳಿಯ ಶಕ್ತಿಯು ಮುಂದೆ ಈಗ ಮುಂದುವರೆಯುತ್ತಿರುವ ಸಿರಿಯಾ, ಲೆಬನಾನ್ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲುದಾರರಾಗಿರುವ ಇಸ್ರೇಲ್ ಮತ್ತು ಟರ್ಕಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇಡಲಿದೆ.

- Advertisement -
- Advertisement -

ಯೆಮೆನ್ ಎಂಬ ಪುಟ್ಟ ರಾಷ್ಟ್ರದ ಮೇಲೆ ಹೇರಿದ ಯುದ್ಧದಲ್ಲಿ ಸೌದಿ ಅರೇಬಿಯಾ ಸೋಲುತ್ತಿರುವುದು ಮಾತ್ರವಲ್ಲ; ತನ್ನ ಮಿತ್ರರ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ ಎಂದು ಇತ್ತೀಚಿಗಿನ ಬೆಳವಣಿಗೆಗಳು ತೋರಿಸುತ್ತವೆ. ಸೌದಿಯ ಆಡಳಿತದ ವಿರುದ್ಧ ಹುಟ್ಟಿಕೊಂಡ ಹೌಥಿ ಅಥವಾ ಅನ್ಸಾರ್ ಅಲ್ಲಾಹ್ ಚಳವಳಿಯು ಎರಡು ದಶಕಗಳ ಯುದ್ಧದ ಬಳಿಕ ಸೌದಿಯನ್ನು ಮಂಡಿಯೂರುವಂತೆ ಮಾಡಿದೆ. ಪ್ರಪಂಚದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಯೆಮೆನ್ ಪ್ರಪಂಚದ ಅತ್ಯಂತ ಶ್ರೀಮಂತ ದೇಶವಾದ ಸೌದಿ ಅರೇಬಿಯಾವನ್ನು ಮಣಿಸಿರುವುದು ಇತ್ತೀಚಿನ ಕಾಲದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ವಿಷಯವಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಹೌಥಿಗಳು ತಮ್ಮ ಸರಣಿ ದಾಳಿಗಳ ಮೂಲಕ ಸೌದಿ ಅರೇಬಿಯಾದ ಯಾವುದೇ ಜಾಗಕ್ಕೆ ತಾವು ಪ್ರವೇಶಿಸಿಬಲ್ಲೆವು ಮತ್ತು ಅಲ್ಲಿ ದಾಳಿ ನಡೆಸಿ ಆ ದೇಶದ ಆರ್ಥಿಕತೆಯನ್ನು ಸ್ತಬ್ಧಗೊಳಿಸಲು ಶಕ್ತರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ದಾಳಿಗಳಿಂದ ಸೌದಿಯ ರಾಜಧಾನಿ ರಿಯಾದ್ ಮತ್ತು ಆ ದೇಶದ ಎಲ್ಲಾ ತೈಲ ಕ್ಷೇತ್ರಗಳು ಮಾತ್ರವಲ್ಲ, ನೆರೆಯ ದುಬೈಯ ಅತ್ಯಂತ ವ್ಯವಸ್ಥಿತವಾಗಿರುವ ವಿಮಾನ ನಿಲ್ದಾಣ ಕೂಡಾ ತಮ್ಮ ದಾಳಿಯ ವ್ಯಾಪ್ತಿಯಲ್ಲಿವೆ ಎಂದವರು ಸಾಬೀತುಮಾಡಿದ್ದಾರೆ.

ಈ ಪ್ರದೇಶದಲ್ಲಿ ಅಮೆರಿಕದ ಪ್ರಭಾವದ ವಿರುದ್ದ ಇರಾನಿನ ಪ್ರತಿರೋಧ ಕಾರ್ಯತಂತ್ರದ ಭಾಗವಾಗಿ ಶಿಯಾ ಹೌಥಿಗಳು ಹುಟ್ಟಿಕೊಂಡಿದ್ದರು. ಭಾರೀ ಸಾವುನೋವು ಮತ್ತು ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತದ ನಡುವೆಯೂ ಯೆಮೆನ್ ಮೇಲೆ ಸೌದಿಯ ದಾಳಿಯನ್ನು ನಿಯಂತ್ರಿಸಲು ಮಾತ್ರವಲ್ಲ, ಅದನ್ನು ಮಿತ್ರರಾಷ್ಟ್ರಗಳಿಂದ ಪ್ರತ್ಯೇಕಿಸಲು ಅವರೀಗ ಶಕ್ತರಾಗಿದ್ದಾರೆ. ಈಗ ನೋಡಲು ಉಳಿದಿರುವುದೇನೆಂದರೆ, ಸಂಧಾನದ ಮೇಜಿನಲ್ಲಿ ಸೌದಿ ಅರೇಬಿಯಾವು ಎಷ್ಟರ ಮಟ್ಟಿಗೆ ಈ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ ಎಂಬುದು. ಸ್ಥಳೀಯವಾಗಿ ಸೌದಿಯ ಮಿತ್ರಪಕ್ಷಗಳಲ್ಲಿ ಮುಖ್ಯವಾಗಿರುವುದು ಯುಎಇ ಮಾತ್ರ. ಯುಎಸ್‍ಎ, ಯುಕೆ, ಫ್ರಾನ್ಸ್ ಮತ್ತು ಕೆನಡಾಗಳು ಅದಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿವೆ.

ವಿಶ್ವಸಂಸ್ಥೆಯು ಜಗತ್ತಿನ ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತವೆಂದು ಬಣ್ಣಿಸಿರುವ ಯೆಮೆನ್ ಅಂತರ್ಯುದ್ಧದ ಬೆಂಕಿಗೆ 2015ರಲ್ಲಿ ಅಂದಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಎಣ್ಣೆ ಸುರಿದಿದ್ದರು. ಈ ತನಕ ಸೌದಿ ಮಿತ್ರಕೂಟವು 10,000ದಷ್ಟು ಯೆಮೆನ್ ಪ್ರಜೆಗಳನ್ನು ಕೊಂದಿದೆ. ಅದರಲ್ಲಿ 1,000ದಷ್ಟು ಮಕ್ಕಳು. 30 ಲಕ್ಷಕ್ಕೂ ಹೆಚ್ಚು ಯೆಮೆನಿಗಳು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ. 1.7 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿಗೆ ಆಹಾರವಾಗಲೀ, ಕುಡಿಯುವ ನೀರಾಗಲೀ ಸರಿಯಾಗಿ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಯೆಮೆನಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ದಿಗ್ಬಂಧನ ವಿಧಿಸಿ ಉಂಟುಮಾಡಿದ ಮಾನವ ನಿರ್ಮಿತ ಬರ.

ಸೌದಿಗಳು ಯೆಮೆನಿ ಜನರ ಮೇಲೆ ಯದ್ವಾತದ್ವವಾಗಿ ಬಾಂಬ್‍ದಾಳಿ ನಡೆಸಿ, ಆ ದೇಶದ ಶಾಲೆಗಳು, ಆಸ್ಪತ್ರೆಗಳಂತಹಾ ಮೂಲಭೂತ ಸೌಕರ್ಯಗಳನ್ನು, ರಾಜಧಾನಿ ಸಾನಾವನ್ನು ಮತ್ತು ಪುರಾತನ ಸಾಂಸ್ಕೃತಿಕ ನಗರವಾದ ಸಾದ್ಹಾವನ್ನು ನಾಶ ಮಾಡಿದ್ದರು. 50 ಲಕ್ಷಕ್ಕಿಂತಲೂ ಹೆಚ್ಚು ಯೆಮೆನಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಹಸಿವಿನ ಸಾವನ್ನು ಎದುರಿಸುತ್ತಿದ್ದಾರೆ.

ಇರಾನ್ ವಿರುದ್ಧದ ಯುಎಸ್‍ಎಯ ದ್ವೇಷದ ಪರಿಣಾಮವಾಗಿ ಹೌಥಿಗಳು ಅಂತರ್ಖಂಡ ಕ್ಷಿಪಣಿಗಳೂ ಸೇರಿದಂತೆ ತಮ್ಮ ಶಸ್ತ್ರಾಸ್ತ್ರ ಬಲವನ್ನು ಪಡೆದುಕೊಂಡಿದ್ದಾರೆಂಬುದನ್ನು ಇತ್ತೀಚಿನ ಬೆಳವಣಿಗೆಗಳ ಮೂಲಕ ತೋರಿಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಸೌದಿಯ ಅಭಾ ವಿಮಾನ ನಿಲ್ದಾಣದ ಮೇಲೆ ಎರಡು ಬಾರಿ ದಾಳಿ ನಡೆಸಿದ್ದಾರೆ. ಆಗಸ್ಟ್ 17ರಂದು ಸೌದಿ ಅರೇಬಿಯಾದ ತೀರಾ ಒಳಗಿರುವ ತೈಲಬಾವಿಗಳ ಮೇಲೂ ದಾಳಿಯನ್ನು ನಡೆಸಿದ್ದಾರೆ. ಸೌದಿಯ ಮಿತ್ರರಾಷ್ಟ್ರ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಲ್ಲಿ ಯೆಮೆನ್‍ನಿಂದ 1250 ಕಿ.ಮೀ.ನಷ್ಟು ದೂರ ಇರುವ ಸಾಯ್ಬಾ ತೈಲಕ್ಷೇತ್ರದ ಮೇಲೆ ದಾಳಿ ನಡೆಸಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ.

ಕಳೆದ ತಿಂಗಳು ಬಂದರು ನಗರ ಏಡನ್‍ನನ್ನು ಗೆದ್ದ ಬಳಿಕ ಸೌದಿಯ ಮಿತ್ರ ಯುಎಇ, ಮಿತ್ರಕೂಟದಿಂದ ಹೊರಬಂದಿದೆ. ಏಡನ್ ಸುನ್ನಿಗಳು ಬಹುಸಂಖ್ಯಾತರಾಗಿರುವ ನಗರ. ಅದನ್ನು ಯೆಮೆನಿ ಜನರ ಇಚ್ಛೆಗೆ ವಿರುದ್ಧವಾಗಿ ಎಷ್ಟು ಕಾಲ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ಮುಂದೆ ನೋಡಬೇಕಷ್ಟೆ.

ಸೌದಿ ಮತ್ತು ಅದರ ಮಿತ್ರ ಪಕ್ಷಗಳು ಯೆಮೆನಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ದುಬಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ, ಹೌಥಿಗಳು ಇತ್ತೀಚೆಗೆ ಪಡೆದುಕೊಂಡಿರುವ ಶಸ್ತ್ರಾಸ್ತ್ರಗಳಿಂದ ಸೌದಿಯು ತಮ್ಮನ್ನು ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಯುಎಸ್‍ಎಯ ತೀವ್ರವಾದ ಆರ್ಥಿಕ ದಿಗ್ಬಂಧನದ ಹೊರತಾಗಿಯೂ ಇರಾನ್ ಅಭಿವೃದ್ಧಿಪಡಿಸಿದೆ. 2010ರಲ್ಲಿ ಯುಎಸ್‍ಎಯ ‘ಸ್ಟೆಲ್ತ್’ ಡ್ರೋನ್ ಒಂದನ್ನು ವಶಕ್ಕೆ ತೆಗೆದುಕೊಂಡ ಮೇಲೆ, ಇರಾನ್ ತನ್ನ ಸುತ್ತ 1500 ಕಿ.ಮೀ. ವ್ಯಾಪ್ತಿಯಲ್ಲಿ ಕಾವಲಿರಿಸುವ ಡ್ರೋನ್ ತಯಾರಿಸುವ ಕಾರ್ಯಕ್ರಮದಲ್ಲಿ ಯಶಸ್ವಿಯಾಯಿತು.

ಯುಎಸ್‍ಎ ತನ್ನ ಮಿತ್ರ ಪಕ್ಷಗಳ ಜೊತೆಗೂಡಿ ಈ ಪ್ರದೇಶದಲ್ಲಿ ನಡೆಸಿದ ಎಲ್ಲಾ ಯುದ್ಧಗಳು- 2001ರಲ್ಲಿ ಅಫಘಾನಿಸ್ತಾನ, 2003ರಲ್ಲಿ ಇರಾಕ್, 2006ರಲ್ಲಿ ಲೆಬನಾನ್, 2011ರಲ್ಲಿ ಸಿರಿಯಾ, 2014ರಲ್ಲಿ ಮತ್ತೆ ಇರಾಕ್, 2015ರಲ್ಲಿ ಯೆಮೆನ್-ಇವೆಲ್ಲವೂ ಅನುದ್ದೇಶಿತವಾಗಿ ಇರಾನ್ ಮತ್ತು ಅದರ ಮಿತ್ರ ಪಕ್ಷಗಳನ್ನು ಗಟ್ಟಿಗೊಳಿಸಿವೆ. ಇರಾನ್ ಹೌಥಿಗಳ ಮೂಲಕ ಗಳಿಸಿರುವ ದಾಳಿಯ ಶಕ್ತಿಯು ಮುಂದೆ ಈಗ ಮುಂದುವರೆಯುತ್ತಿರುವ ಸಿರಿಯಾ, ಲೆಬನಾನ್ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲುದಾರರಾಗಿರುವ ಇಸ್ರೇಲ್ ಮತ್ತು ಟರ್ಕಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇಡಲಿದೆ.

ಈಗ ಸೌದಿಯು ರಾಜಕೀಯವಾದ ಶಾಂತಿ ಸಂಧಾನಕ್ಕೆ ಒಪ್ಪಬೇಕಾದ ಅನಿವಾರ್ಯತೆಗೆ ಸಿಕ್ಕಿದೆ. ಪರಿಹಾರಧನ ನೀಡಬೇಕೆಂಬ ಯೆಮೆನ್ ಬೇಡಿಕೆಗೂ ಬಲಬರಲಿದೆ. ಆದರೆ, ಈಗಾಗಲೇ ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸೌದಿ ಅರೇಬಿಯಾ ಈ ಯುದ್ಧವನ್ನು ಮುಂದುವರಿಸುವುದು ಕಾರ್ಯಸಾಧುವಲ್ಲ ಎಂಬ ಲಕ್ಷಣಗಳು ಈಗಾಗಲೇ ಕಂಡುಬರುತ್ತಿರುವುದರಿಂದಾಗಿ ಹೌಥಿಗಳ ಬೇಡಿಕೆಗಳಿಗೆ ಒಪ್ಪದೇ ಬೇರೆ ದಾರಿಯಿಲ್ಲ.

ಯುದ್ಧ ಮತ್ತು ಪ್ರತಿದಾಳಿಯ ಮುಖಾಂತರ ಹೌಥಿಗಳು ಸಾಧಿಸಿರುವ ಈ ಗೆಲುವಿನಿಂದಲಾದರೂ, ಆ ಜಾಗದಲ್ಲಿ ಶಾಂತಿ ನೆಲೆಸಿದರೆ ಮನುಕುಲ ಸ್ವಲ್ಪವಾದರೂ ನಿಟ್ಟುಸಿರೆಳೆಯಬಹುದು. ಇಲ್ಲವಾದರೆ, ಮತ್ತಷ್ಟು ರಕ್ತಪಾತ ಹಾಗೂ ಅನಿಶ್ಚಿತತೆ ಆ ಭಾಗವನ್ನು ಕಾಡುವುದರಲ್ಲಿ ಸಂದೇಹವೇ ಇಲ್ಲ.

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...