Homeಅಂತರಾಷ್ಟ್ರೀಯದೊಡ್ಡ ಶ್ರೀಮಂತ ಸೌದಿಯನ್ನು ಸೋಲಿಸುತ್ತಿರುವ ಪುಟ್ಟ ಬಡ ರಾಷ್ಟ್ರ ಯೆಮೆನ್

ದೊಡ್ಡ ಶ್ರೀಮಂತ ಸೌದಿಯನ್ನು ಸೋಲಿಸುತ್ತಿರುವ ಪುಟ್ಟ ಬಡ ರಾಷ್ಟ್ರ ಯೆಮೆನ್

ಇರಾನ್ ಹೌಥಿಗಳ ಮೂಲಕ ಗಳಿಸಿರುವ ದಾಳಿಯ ಶಕ್ತಿಯು ಮುಂದೆ ಈಗ ಮುಂದುವರೆಯುತ್ತಿರುವ ಸಿರಿಯಾ, ಲೆಬನಾನ್ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲುದಾರರಾಗಿರುವ ಇಸ್ರೇಲ್ ಮತ್ತು ಟರ್ಕಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇಡಲಿದೆ.

- Advertisement -
- Advertisement -

ಯೆಮೆನ್ ಎಂಬ ಪುಟ್ಟ ರಾಷ್ಟ್ರದ ಮೇಲೆ ಹೇರಿದ ಯುದ್ಧದಲ್ಲಿ ಸೌದಿ ಅರೇಬಿಯಾ ಸೋಲುತ್ತಿರುವುದು ಮಾತ್ರವಲ್ಲ; ತನ್ನ ಮಿತ್ರರ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ ಎಂದು ಇತ್ತೀಚಿಗಿನ ಬೆಳವಣಿಗೆಗಳು ತೋರಿಸುತ್ತವೆ. ಸೌದಿಯ ಆಡಳಿತದ ವಿರುದ್ಧ ಹುಟ್ಟಿಕೊಂಡ ಹೌಥಿ ಅಥವಾ ಅನ್ಸಾರ್ ಅಲ್ಲಾಹ್ ಚಳವಳಿಯು ಎರಡು ದಶಕಗಳ ಯುದ್ಧದ ಬಳಿಕ ಸೌದಿಯನ್ನು ಮಂಡಿಯೂರುವಂತೆ ಮಾಡಿದೆ. ಪ್ರಪಂಚದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಯೆಮೆನ್ ಪ್ರಪಂಚದ ಅತ್ಯಂತ ಶ್ರೀಮಂತ ದೇಶವಾದ ಸೌದಿ ಅರೇಬಿಯಾವನ್ನು ಮಣಿಸಿರುವುದು ಇತ್ತೀಚಿನ ಕಾಲದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ವಿಷಯವಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಹೌಥಿಗಳು ತಮ್ಮ ಸರಣಿ ದಾಳಿಗಳ ಮೂಲಕ ಸೌದಿ ಅರೇಬಿಯಾದ ಯಾವುದೇ ಜಾಗಕ್ಕೆ ತಾವು ಪ್ರವೇಶಿಸಿಬಲ್ಲೆವು ಮತ್ತು ಅಲ್ಲಿ ದಾಳಿ ನಡೆಸಿ ಆ ದೇಶದ ಆರ್ಥಿಕತೆಯನ್ನು ಸ್ತಬ್ಧಗೊಳಿಸಲು ಶಕ್ತರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ದಾಳಿಗಳಿಂದ ಸೌದಿಯ ರಾಜಧಾನಿ ರಿಯಾದ್ ಮತ್ತು ಆ ದೇಶದ ಎಲ್ಲಾ ತೈಲ ಕ್ಷೇತ್ರಗಳು ಮಾತ್ರವಲ್ಲ, ನೆರೆಯ ದುಬೈಯ ಅತ್ಯಂತ ವ್ಯವಸ್ಥಿತವಾಗಿರುವ ವಿಮಾನ ನಿಲ್ದಾಣ ಕೂಡಾ ತಮ್ಮ ದಾಳಿಯ ವ್ಯಾಪ್ತಿಯಲ್ಲಿವೆ ಎಂದವರು ಸಾಬೀತುಮಾಡಿದ್ದಾರೆ.

ಈ ಪ್ರದೇಶದಲ್ಲಿ ಅಮೆರಿಕದ ಪ್ರಭಾವದ ವಿರುದ್ದ ಇರಾನಿನ ಪ್ರತಿರೋಧ ಕಾರ್ಯತಂತ್ರದ ಭಾಗವಾಗಿ ಶಿಯಾ ಹೌಥಿಗಳು ಹುಟ್ಟಿಕೊಂಡಿದ್ದರು. ಭಾರೀ ಸಾವುನೋವು ಮತ್ತು ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತದ ನಡುವೆಯೂ ಯೆಮೆನ್ ಮೇಲೆ ಸೌದಿಯ ದಾಳಿಯನ್ನು ನಿಯಂತ್ರಿಸಲು ಮಾತ್ರವಲ್ಲ, ಅದನ್ನು ಮಿತ್ರರಾಷ್ಟ್ರಗಳಿಂದ ಪ್ರತ್ಯೇಕಿಸಲು ಅವರೀಗ ಶಕ್ತರಾಗಿದ್ದಾರೆ. ಈಗ ನೋಡಲು ಉಳಿದಿರುವುದೇನೆಂದರೆ, ಸಂಧಾನದ ಮೇಜಿನಲ್ಲಿ ಸೌದಿ ಅರೇಬಿಯಾವು ಎಷ್ಟರ ಮಟ್ಟಿಗೆ ಈ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ ಎಂಬುದು. ಸ್ಥಳೀಯವಾಗಿ ಸೌದಿಯ ಮಿತ್ರಪಕ್ಷಗಳಲ್ಲಿ ಮುಖ್ಯವಾಗಿರುವುದು ಯುಎಇ ಮಾತ್ರ. ಯುಎಸ್‍ಎ, ಯುಕೆ, ಫ್ರಾನ್ಸ್ ಮತ್ತು ಕೆನಡಾಗಳು ಅದಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿವೆ.

ವಿಶ್ವಸಂಸ್ಥೆಯು ಜಗತ್ತಿನ ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತವೆಂದು ಬಣ್ಣಿಸಿರುವ ಯೆಮೆನ್ ಅಂತರ್ಯುದ್ಧದ ಬೆಂಕಿಗೆ 2015ರಲ್ಲಿ ಅಂದಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಎಣ್ಣೆ ಸುರಿದಿದ್ದರು. ಈ ತನಕ ಸೌದಿ ಮಿತ್ರಕೂಟವು 10,000ದಷ್ಟು ಯೆಮೆನ್ ಪ್ರಜೆಗಳನ್ನು ಕೊಂದಿದೆ. ಅದರಲ್ಲಿ 1,000ದಷ್ಟು ಮಕ್ಕಳು. 30 ಲಕ್ಷಕ್ಕೂ ಹೆಚ್ಚು ಯೆಮೆನಿಗಳು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ. 1.7 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿಗೆ ಆಹಾರವಾಗಲೀ, ಕುಡಿಯುವ ನೀರಾಗಲೀ ಸರಿಯಾಗಿ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಯೆಮೆನಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ದಿಗ್ಬಂಧನ ವಿಧಿಸಿ ಉಂಟುಮಾಡಿದ ಮಾನವ ನಿರ್ಮಿತ ಬರ.

ಸೌದಿಗಳು ಯೆಮೆನಿ ಜನರ ಮೇಲೆ ಯದ್ವಾತದ್ವವಾಗಿ ಬಾಂಬ್‍ದಾಳಿ ನಡೆಸಿ, ಆ ದೇಶದ ಶಾಲೆಗಳು, ಆಸ್ಪತ್ರೆಗಳಂತಹಾ ಮೂಲಭೂತ ಸೌಕರ್ಯಗಳನ್ನು, ರಾಜಧಾನಿ ಸಾನಾವನ್ನು ಮತ್ತು ಪುರಾತನ ಸಾಂಸ್ಕೃತಿಕ ನಗರವಾದ ಸಾದ್ಹಾವನ್ನು ನಾಶ ಮಾಡಿದ್ದರು. 50 ಲಕ್ಷಕ್ಕಿಂತಲೂ ಹೆಚ್ಚು ಯೆಮೆನಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಹಸಿವಿನ ಸಾವನ್ನು ಎದುರಿಸುತ್ತಿದ್ದಾರೆ.

ಇರಾನ್ ವಿರುದ್ಧದ ಯುಎಸ್‍ಎಯ ದ್ವೇಷದ ಪರಿಣಾಮವಾಗಿ ಹೌಥಿಗಳು ಅಂತರ್ಖಂಡ ಕ್ಷಿಪಣಿಗಳೂ ಸೇರಿದಂತೆ ತಮ್ಮ ಶಸ್ತ್ರಾಸ್ತ್ರ ಬಲವನ್ನು ಪಡೆದುಕೊಂಡಿದ್ದಾರೆಂಬುದನ್ನು ಇತ್ತೀಚಿನ ಬೆಳವಣಿಗೆಗಳ ಮೂಲಕ ತೋರಿಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಸೌದಿಯ ಅಭಾ ವಿಮಾನ ನಿಲ್ದಾಣದ ಮೇಲೆ ಎರಡು ಬಾರಿ ದಾಳಿ ನಡೆಸಿದ್ದಾರೆ. ಆಗಸ್ಟ್ 17ರಂದು ಸೌದಿ ಅರೇಬಿಯಾದ ತೀರಾ ಒಳಗಿರುವ ತೈಲಬಾವಿಗಳ ಮೇಲೂ ದಾಳಿಯನ್ನು ನಡೆಸಿದ್ದಾರೆ. ಸೌದಿಯ ಮಿತ್ರರಾಷ್ಟ್ರ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಲ್ಲಿ ಯೆಮೆನ್‍ನಿಂದ 1250 ಕಿ.ಮೀ.ನಷ್ಟು ದೂರ ಇರುವ ಸಾಯ್ಬಾ ತೈಲಕ್ಷೇತ್ರದ ಮೇಲೆ ದಾಳಿ ನಡೆಸಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ.

ಕಳೆದ ತಿಂಗಳು ಬಂದರು ನಗರ ಏಡನ್‍ನನ್ನು ಗೆದ್ದ ಬಳಿಕ ಸೌದಿಯ ಮಿತ್ರ ಯುಎಇ, ಮಿತ್ರಕೂಟದಿಂದ ಹೊರಬಂದಿದೆ. ಏಡನ್ ಸುನ್ನಿಗಳು ಬಹುಸಂಖ್ಯಾತರಾಗಿರುವ ನಗರ. ಅದನ್ನು ಯೆಮೆನಿ ಜನರ ಇಚ್ಛೆಗೆ ವಿರುದ್ಧವಾಗಿ ಎಷ್ಟು ಕಾಲ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ಮುಂದೆ ನೋಡಬೇಕಷ್ಟೆ.

ಸೌದಿ ಮತ್ತು ಅದರ ಮಿತ್ರ ಪಕ್ಷಗಳು ಯೆಮೆನಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ದುಬಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ, ಹೌಥಿಗಳು ಇತ್ತೀಚೆಗೆ ಪಡೆದುಕೊಂಡಿರುವ ಶಸ್ತ್ರಾಸ್ತ್ರಗಳಿಂದ ಸೌದಿಯು ತಮ್ಮನ್ನು ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಯುಎಸ್‍ಎಯ ತೀವ್ರವಾದ ಆರ್ಥಿಕ ದಿಗ್ಬಂಧನದ ಹೊರತಾಗಿಯೂ ಇರಾನ್ ಅಭಿವೃದ್ಧಿಪಡಿಸಿದೆ. 2010ರಲ್ಲಿ ಯುಎಸ್‍ಎಯ ‘ಸ್ಟೆಲ್ತ್’ ಡ್ರೋನ್ ಒಂದನ್ನು ವಶಕ್ಕೆ ತೆಗೆದುಕೊಂಡ ಮೇಲೆ, ಇರಾನ್ ತನ್ನ ಸುತ್ತ 1500 ಕಿ.ಮೀ. ವ್ಯಾಪ್ತಿಯಲ್ಲಿ ಕಾವಲಿರಿಸುವ ಡ್ರೋನ್ ತಯಾರಿಸುವ ಕಾರ್ಯಕ್ರಮದಲ್ಲಿ ಯಶಸ್ವಿಯಾಯಿತು.

ಯುಎಸ್‍ಎ ತನ್ನ ಮಿತ್ರ ಪಕ್ಷಗಳ ಜೊತೆಗೂಡಿ ಈ ಪ್ರದೇಶದಲ್ಲಿ ನಡೆಸಿದ ಎಲ್ಲಾ ಯುದ್ಧಗಳು- 2001ರಲ್ಲಿ ಅಫಘಾನಿಸ್ತಾನ, 2003ರಲ್ಲಿ ಇರಾಕ್, 2006ರಲ್ಲಿ ಲೆಬನಾನ್, 2011ರಲ್ಲಿ ಸಿರಿಯಾ, 2014ರಲ್ಲಿ ಮತ್ತೆ ಇರಾಕ್, 2015ರಲ್ಲಿ ಯೆಮೆನ್-ಇವೆಲ್ಲವೂ ಅನುದ್ದೇಶಿತವಾಗಿ ಇರಾನ್ ಮತ್ತು ಅದರ ಮಿತ್ರ ಪಕ್ಷಗಳನ್ನು ಗಟ್ಟಿಗೊಳಿಸಿವೆ. ಇರಾನ್ ಹೌಥಿಗಳ ಮೂಲಕ ಗಳಿಸಿರುವ ದಾಳಿಯ ಶಕ್ತಿಯು ಮುಂದೆ ಈಗ ಮುಂದುವರೆಯುತ್ತಿರುವ ಸಿರಿಯಾ, ಲೆಬನಾನ್ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲುದಾರರಾಗಿರುವ ಇಸ್ರೇಲ್ ಮತ್ತು ಟರ್ಕಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇಡಲಿದೆ.

ಈಗ ಸೌದಿಯು ರಾಜಕೀಯವಾದ ಶಾಂತಿ ಸಂಧಾನಕ್ಕೆ ಒಪ್ಪಬೇಕಾದ ಅನಿವಾರ್ಯತೆಗೆ ಸಿಕ್ಕಿದೆ. ಪರಿಹಾರಧನ ನೀಡಬೇಕೆಂಬ ಯೆಮೆನ್ ಬೇಡಿಕೆಗೂ ಬಲಬರಲಿದೆ. ಆದರೆ, ಈಗಾಗಲೇ ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸೌದಿ ಅರೇಬಿಯಾ ಈ ಯುದ್ಧವನ್ನು ಮುಂದುವರಿಸುವುದು ಕಾರ್ಯಸಾಧುವಲ್ಲ ಎಂಬ ಲಕ್ಷಣಗಳು ಈಗಾಗಲೇ ಕಂಡುಬರುತ್ತಿರುವುದರಿಂದಾಗಿ ಹೌಥಿಗಳ ಬೇಡಿಕೆಗಳಿಗೆ ಒಪ್ಪದೇ ಬೇರೆ ದಾರಿಯಿಲ್ಲ.

ಯುದ್ಧ ಮತ್ತು ಪ್ರತಿದಾಳಿಯ ಮುಖಾಂತರ ಹೌಥಿಗಳು ಸಾಧಿಸಿರುವ ಈ ಗೆಲುವಿನಿಂದಲಾದರೂ, ಆ ಜಾಗದಲ್ಲಿ ಶಾಂತಿ ನೆಲೆಸಿದರೆ ಮನುಕುಲ ಸ್ವಲ್ಪವಾದರೂ ನಿಟ್ಟುಸಿರೆಳೆಯಬಹುದು. ಇಲ್ಲವಾದರೆ, ಮತ್ತಷ್ಟು ರಕ್ತಪಾತ ಹಾಗೂ ಅನಿಶ್ಚಿತತೆ ಆ ಭಾಗವನ್ನು ಕಾಡುವುದರಲ್ಲಿ ಸಂದೇಹವೇ ಇಲ್ಲ.

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...