Homeಎಕಾನಮಿಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿತೇ ಕೇಂದ್ರ ಸರ್ಕಾರ!?

ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿತೇ ಕೇಂದ್ರ ಸರ್ಕಾರ!?

- Advertisement -
- Advertisement -

ಭ್ರಷ್ಟಾಚಾರಭರಿತ ಎಲೆಕ್ಟೋರಲ್ ಬಾಂಡ್ ಎಂಬ ಕಾನೂನುಬಾಹಿರ ಬಾಂಡನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. ರಿಸರ್ವ್ ಬ್ಯಾಂಕ್ ಮತ್ತು ಚುನಾವಣಾ ಆಯೋಗಗಳು ಈ ಕಣ್‍ಕಟ್ಟಿನ ರಾಜಕೀಯ ನಿಧಿ ಹಂಚಿಕೆಯ ಬಗೆಗೆ ವ್ಯಾಪಕ ಚರ್ಚೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಈ ಕರಾಳಕೃತ್ಯದ ವಿವರಗಳು ಹೊರಬರದಂತೆ ತಡೆಗೋಡೆ ನಿರ್ಮಿಸಿದೆ.
2017ರಲ್ಲಿ ಚುನಾವಣೆಗೆ ನಿಧಿಯನ್ನು ನೀಡುವ ಬಾಂಡ್‍ಗಳ ಬಿಡುಗಡೆಗೆ ಮೊದಲು, ಹಣಕಾಸು ಸಚಿವಾಲಯ ರಿಸರ್ವ್ ಬ್ಯಾಂಕ್‍ನ ಸಲಹೆ ಕೋರಿತ್ತು. ಈ ಬಾಂಡ್‍ಗಳ ಪ್ರಸ್ತಾವನೆಗೆ ರಿಸರ್ವ್ ಬ್ಯಾಂಕ್ ಗಂಭೀರ ವಿರೋಧ ವ್ಯಕ್ತಪಡಿಸಿತ್ತು. ಈ ಚುನಾವಣೆ ಬಾಂಡ್‍ಗಳನ್ನು ಸರ್ಕಾರ ಬಿಡುಗಡೆ ಮಾಡುವುದಾದರೆ ಹಣಕಾಸು ದುವ್ರ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಬಾಂಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದರೆ ಭಾರತೀಯ ಬ್ಯಾಂಕುಗಳ ಬಗೆಗೆ ನಂಬಿಕೆ ಕಳೆದುಹೋಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿತ್ತು.

“ಈ ಬಾಂಡುಗಳ bearer bond ಜಗಳು. ಅವುಗಳನ್ನು ಬೇರೆಯವರಿಗೆ ವರ್ಗಾವಣೆ ಮಾಡಲೂ ಅವಕಾಶ ಕಲ್ಪಿಸಿರುವುದರಿಂದ ಯಾರು ಹಣವನ್ನು ನೀಡಿದ್ದಾರೆ ಎಂಬುದು ಪತ್ತೆಯಾಗುವುದೇ ಇಲ್ಲ” ಎಂದು ರಿಸರ್ವ್ ಬ್ಯಾಂಕ್ ತಿಳಿಸಿತು. ಆದರೆ ಸರ್ಕಾರ ಆರ್‍ಬಿಐನ ಎಚ್ಚರಿಕೆಯ ಮಾತುಗಳನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಆಗಿನ ಕಂದಾಯ ವಿಭಾಗದ ಕಾರ್ಯದರ್ಶಿಯಾಗಿದ್ದ ಹಸಮುಖ್ ಅಧಿಯ “ರಿಸರ್ವ ಬ್ಯಾಂಕ್ ಸರ್ಕಾರದ ಕಾರ್ಯತಂತ್ರವನ್ನು ಅರ್ಥಮಾಡಿಕೊಂಡಿಲ್ಲ. ಅಲ್ಲದೆ ಫೈನಾನ್ಸ್ ಬಿಲ್ ಅಚ್ಚಾದ ಮೇಲೆ ಈ ಸಲಹೆ ನೀಡಿದೆ. ಈ ವಿಳಂಬ ಸಲಹೆಯನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿ ಆರ್.ಬಿ.ಐ ಸಲಹೆಯನ್ನು ತಳ್ಳಿಹಾಕಿದ್ದರು. 2017 ಫೆಬ್ರವರಿ ಮೊದಲ ತಾರೀಖು ಆಗಿನ ಅರ್ಥಸಚಿವರಾದ ಜೈಟ್ಲಿಯವರು ತಮ್ಮ ಬಜೆಟ್ ಭಾಷಣದಲ್ಲಿ ಚುನಾವಣೆ ಬಾಂಡ್‍ಗಳನ್ನು ಸೃಷ್ಟಿಮಾಡುವ ಪ್ರಸ್ತಾಪ ಮಾಡಿದರು ಹಾಗೂ ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ಪದ್ಧತಿಯಲ್ಲಿ ನುಸುಳಿರುವ ಲೋಪದೋಷಗಳನ್ನು ಅಳಿಸಿಹಾಕುವ ಕಾರಣಕ್ಕಾಗಿ ಈ ಆರ್.ಬಿ.ಐ ತಿದ್ದುಪಡಿ ಬಿಲ್ ಮಾಡಿರುವುದಾಗಿ ಹೇಳಿದರು.
ಅದಾದನಂತರ ಚುನಾವಣೆ ಆಯೋಗವು ಕೂಡಾ ಮೇ 2017ರಲ್ಲಿ ಕಾನೂನು ಇಲಾಖೆ ಮಂತ್ರಾಲಯಕ್ಕೆ ಚುನಾವಣೆ ಬಾಂಡ್ ಬಿಡುಗಡೆ ಮಾಡುವ ಬಗೆಗೆ ಎಚ್ಚರಿಕೆ ನೀಡಿತ್ತು. 2017 ಮೇ 26ರ ಕಾಗದದಲ್ಲಿ “Representation of People Actನ 29 ಸಿ ವಿಧಿಗೆ ಸರ್ಕಾರ ಮಾಡಿರುವ ತಿದ್ದುಪಡಿ ಸರಿಯಲ್ಲ, ಇದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರುಗಳನ್ನು ಮುಚ್ಚಿಡುವ ಹುನ್ನಾರ” ಎಂದು ಪತ್ರ ಬರೆಯಿತು. ಈ ತಿದ್ದುಪಡಿಯನ್ನು ವಾಪಾಸ್ ಪಡೆಯಿರಿ ಎಂಬ ಸಲಹೆಯನ್ನೂ ನೀಡಿತ್ತು.

ಚುನಾವಣೆ ಆಯೋಗದ ಸೂಚನೆಯನ್ನು ಧಿಕ್ಕರಿಸಿದ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪೊನ್ ರಾಧಾಕೃಷ್ಣನ್ 2018ರ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನದಲ್ಲಿ ‘ಈ ವಿಚಾರದಲ್ಲಿ ಚುನಾವಣಾ ಆಯೋಗ ಯಾವುದೇ ಸೂಚನೆ ನೀಡಿಲ್ಲ’ ಎಂದು ತಿಳಿಸಿದರು. Breach of privilege notice ನೀಡಿದಾಗ ಸಚಿವರು ಪಾರ್ಲಿಮೆಂಟಿನ ದಾರಿತಪ್ಪಿಸಲು ಯತ್ನಿಸುತ್ತಿದ್ದಾರೆ ಎಂಬುದು ಬಯಲಿಗೆ ಬಂದಿತ್ತು.

ಮಾರ್ಚ್ 2018ರವರೆಗೆ 6128 ಕೋಟಿ ರೂ. ಮೌಲ್ಯದ ಚುನಾವಣೆ ಬಾಂಡ್‍ಗಳು ಮಾರಾಟವಾಗಿವೆ. ಇದರಲ್ಲಿ ಶೇ.95ರಷ್ಟು ಹಣ ಬಿಜೆಪಿಗೇ ಪಾವತಿಯಾಗಿದೆ. ಚುನಾವಣೆ ಬಾಂಡ್‍ಗಳು ಒಂದು ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ, ಒಂದು ಕೋಟಿ ಮೌಲ್ಯಗಳ ಮುಖಬೆಲೆಯಲ್ಲಿ ಬಿಡುಗಡೆ ಆಗಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಈ ಬಾಂಡ್‍ಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಬಾಂಡುಗಳನ್ನು ವರ್ಷದಲ್ಲಿ 4 ಸಾರಿ ಮಾತ್ರ ತಲಾ 8-10 ದಿನಗಳ ಅಲ್ಪಾವಧಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ವರ್ಷದಲ್ಲಿ ಮಾತ್ರ ಈ ನಾಲ್ಕು ಅವಧಿಯಲ್ಲದೆ 30 ದಿನಗಳ ಒಂದು ದೀರ್ಘಾವಧಿಯ ವಿಶೇಷ ಮಾರಾಟದ ಅವಕಾಶ ಕಲ್ಪಿಸಲಾಗುವುದು. ಬಾಂಡ್ ಕೊಂಡವರು ಅದನ್ನು ತಮಗೆ ಇಷ್ಟಬಂದ ರಾಜಕೀಯ ಪಕ್ಷಕ್ಕೆ ನೀಡಬಹುದು. ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕನಿಷ್ಠ ಶೇ.1ಕ್ಕಿಂತ ಹೆಚ್ಚು ಮತಗಳಿಸಿದ ಪಕ್ಷಗಳಿಗೆ ಮಾತ್ರ ಈ ಬಾಂಡ್‍ಗಳನ್ನು ನೀಡಬಹುದಾಗಿದೆ. ಬ್ಯಾಂಕ್‍ನಿಂದ ಬಾಂಡ್ ಕೊಂಡುಕೊಂಡ ಹದಿನೈದು ದಿನಗಳ ಒಳಗಾಗಿ ಅದನ್ನು ನಗದು ಮಾಡಿಕೊಳ್ಳಬೇಕು. ಅಂದರೆ ಅಷ್ಟರೊಳಗೆ ಕೊಂಡವರು, ಅದನ್ನು ತಮಗಿಷ್ಟ ಬಂದ ಪಕ್ಷಕ್ಕೆ ಕೊಟ್ಟು, ಆ ಪಕ್ಷ ಅದನ್ನು ಕ್ಯಾಶ್ ಮಾಡಿಕೊಳ್ಳಬೇಕು.
ಈ ಬಾಂಡ್‍ಗಳಲ್ಲಿ ಕ್ರಮಾಂಕ ಸೂಚಿಸಬಾರದೆಂದು ಬಿಜೆಪಿ ಪಕ್ಷ ಸರ್ಕಾರಕ್ಕೆ ಸೂಚಿಸಿತ್ತು. ಬಾಂಡ್‍ಗಳಿಗೆ ಕ್ರಮಸಂಖ್ಯೆ ಹಾಕದಿದ್ದರೆ ಯಾವ ಮೊತ್ತದ ಬಾಂಡ್ ಯಾರ ಕೈಸೇರಿತು ಎಂಬುದು ಗೊತ್ತಾಗುವುದಿಲ್ಲ. ಗೊತ್ತಾಗಬಾರದು ಎಂಬುದೇ ಉದ್ದೇಶ. ಈ ಮೊದಲು ಬೇರೆ ದೇಶದವರು ದೇಣಿಗೆ ಕೊಡಲು ನಿಷೇಧವಿತ್ತು. ಈಗ ಬೇರೆ ದೇಶದವರು ದೇಣಿಗೆ ಕೊಟ್ಟರೂ ಅದರಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಸರ್ಕಾರ ಸೂಚಿಸಿತ್ತು.

ರಾಜಕೀಯ ಪಕ್ಷಗಳಿಗೆ ತಾವಾಗಿಯೇ ಯಾರೂ ಚುನಾವಣೆಗೆ ಹಣ ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾರ್ಪೊರೇಟ್ ಸಂಸ್ಥೆಗಳಂತೂ ತಮಗೆ ಲಾಭ ಮಾಡಿಕೊಡುವವರಿಗೆ ದೇಣಿಗೆ ಕೂಡುವರೆಂಬುದೂ ಗುಟ್ಟಿನ ವಿಚಾರವೇನಲ್ಲ. ತನಿಖಾ ಇಲಾಖೆ ಹಾಗೂ Regulatory bodyಜಥಿಗಳು ಸರ್ಕಾರವನ್ನು ಬಳಸಿಕೊಂಡು ಕಾರ್ಪೊರೇಟ್ ಕಂಪೆನಿಗಳನ್ನು ಹಣ್ಣು ಮಾಡುವ ವ್ಯವಸ್ಥೆ ಇದ್ದೇಇದೆ. ಆ ಮೂಲಕ ಚುನಾವಣೆಗೆ ಹಣ ತಾನಾಗಿಯೇ ಬಂದುಬೀಳುತ್ತದೆ. ಈ ಸೌಲಭ್ಯ ದೊರೆಯುವುದು ಆಡಳಿತ ಪಕ್ಷಕ್ಕೆ ಮಾತ್ರ.
`ಕಾಮನ್ ಕಾಸ್’ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ಚುನಾವಣೆ ಬಾಂಡ್ ವಿಚಾರವಾಗಿ ಖಟ್ಲೆ ಹೂಡಿದೆ. ರಾಜಕೀಯ ಪಕ್ಷಗಳು ತಮಗೆ ಸಂದಾಯವಾಗಿರುವ ಎಲೆಕ್ಟೋರಲ್ ಬಾಂಡುಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಎಂದು ನಿರ್ದೇಶನ ನೀಡಿತ್ತು. ಈ ನಡುವೆ ಚುನಾವಣೆ ಆಯೋಗ ಕೂಡ ನ್ಯಾಯಾಲಯಕ್ಕೆ ಚುನಾವಣಾ ಬಾಂಡ್ ಬಿಡುಗಡೆಯನ್ನು ಪ್ರಶ್ನಿಸಿ ಒಂದು ಅಫಿಡವಿಟ್ ಸಲ್ಲಿಸಿದೆ.

ಸರ್ಕಾರ ಭ್ರಷ್ಟಾಚಾರವನ್ನು ಈ ಕಾನೂನುಬದ್ಧವಾಗಿ ಜಾರಿಗೆ ತಂದಿರುವ ಈ ಚುನಾವಣೆ ಬಾಂಡನ್ನು ಹಿಂತೆಗೆಯಬೇಕೆಂದು ಒತ್ತಾಯ ತರಬೇಕಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕ್ರಮವನ್ನು ಪರಿಶುದ್ಧಗೊಳಿಸುತ್ತೇನೆ ಎಂದೇಳಿದ್ದ ಮೋದಿ ಸರ್ಕಾರ, ಚುನಾವಣಾ ಬಾಂಡ್ ವಿತರಣೆ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳ ಕಪ್ಪುಹಣ ಆಡಳಿತ ನಡೆಸುವವರ ಕೈಸೇರುವಂತೆ ವ್ಯವಸ್ಥೆ ಮಾಡಿಕೊಂಡಿದೆ. ತಮ್ಮ ಬಳಿ ಇರುವ ಬ್ಲ್ಯಾಕ್‍ಮನಿಯನ್ನು ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಒಪ್ಪಿಸುವ ಕಾರ್ಪೊರೇಟ್ ಕಂಪನಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನುಕೂಲವಾಗುತ್ತದೆ. ದೇಣಿಗೆ ಪಡೆದ ಋಣಕ್ಕೆ ಪ್ರತಿಯಾಗಿ ಸರ್ಕಾರದ ಗದ್ದುಗೆ ಏರುವ ರಾಜಕೀಯ ಪಕ್ಷವೂ ಅಂತಹ ಕಂಪನಿಗಳ ಲಾಭಕೋರತನಕ್ಕೆ ಬೆಂಬಲ ನೀಡಬೇಕಾಗುತ್ತದೆ. ಕೊನೆಗೆ ಕತ್ತರಿ ಬೀಳುವುದು ಶ್ರೀಸಾಮಾನ್ಯನ ಜೇಬಿಗೆ!

ಭ್ರಷ್ಟಾಚಾರವನ್ನು ಮಾನ್ಯಮಾಡುವ ಈ ಅನೀತಿಯನ್ನು ಮನಗಂಡು ಸರ್ಕಾರ ಈ ಕೂಡಲೇ ಚುನಾವಣಾ ಬಾಂಡ್ ಸ್ಕೀಮನ್ನು ರದ್ದುಗೊಳಿಸುವಂತೆ ಒತ್ತಾಯಿಸುವುದು ಇಂದಿನ ತುರ್ತಾಗಿದೆ. ಇಲ್ಲವಾದಲ್ಲಿ ಚುನಾವಣೆಗಳಲ್ಲಿ ಸಿದ್ಧಾಂತ, ಜನಪರ ಚಿಂತನೆಗಳು ಶಾಶ್ವತವಾಗಿ ಮೂಲೆಗುಂಪಾಗಿ ಹಣವೇ ಫಲಿತಾಂಶವನ್ನು ಖಾಯಮ್ಮಾಗಿ ನಿರ್ಧರಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...