Homeಅಂಕಣಗಳುಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

ಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

- Advertisement -
- Advertisement -

ಕವಿಯತ್ರಿ ಸರೋಜಿನಿ ನಾಯ್ಡು ಅವರು ಗಾಂಧೀಜಿಯನ್ನು ಪ್ರಥಮ ಬಾರಿಗೆ 1915ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಮಾಡುತ್ತಾರೆ. ಆಗ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡಿಗೆ ಕಾರ್ಯನಿಮಿತ್ತ ಬಂದಿರುತ್ತಾರೆ. ಗಾಂಧೀಜಿ ಕಂಬಳಿ ಮೇಲೆ ನೆಲದಲ್ಲಿ ಕೂತು ಕಡಲೆಕಾಯಿ ಬೀಜ, ಬಿಸ್ಕತ್, ಕಿವಿಚಿದ ಟಮೋಟಗೆ ಬೆರೆಸಿದ ಆಲೀವ್ ಆಯಿಲ್ ಸೇವಿಸುತ್ತಿದ್ದರು. ಇದನ್ನು ನೋಡಿದ ಸರೋಜಿನಿ ನಾಯ್ಡು ಗಾಂಧೀಜಿಯವರ ಕುರಿತು ‘ನೀವು ನನಗೆ ದಕ್ಷಿಣ ಆಫ್ರಿಕಾದ ಭಾರತೀಯರ ಪರವಾಗಿ ಹೋರಾಡುವ ಧೀರರಾಗಿ ಕಾಣುತ್ತಿಲ್ಲ. ನೀವು ಒಂದು ಮಿಕ್ಕಿಮೌಸ್‍ನಂತೆ ಕಾಣುತ್ತಿದ್ದೀರಿ’ ಎಂದರು. ‘ನೀವು ಸರೋಜಿನಿ ಅಲ್ಲವೇ? ಇನ್ನು ಯಾರಿಗೆ ಇಷ್ಟು ಧಿಮಾಕು, ಧೈರ್ಯ ಇದ್ದೀತು?’ ಎಂದರು ಗಾಂಧೀಜಿ ಆ ತುಂಟ ಮಾತು ಆಕೆಯ ಮನ ತುಂಬಿತು. ಅಂದು ಗಾಂಧೀಜಿಯ ಅನುಯಾಯಿಯಾದ ಸರೋಜಿನಿದೇವಿ ಮುಂದೆ 33 ವರ್ಷಗಳ ಕಾಲ ಗಾಂಧೀಜಿಯ ನಿಕಟವರ್ತಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರೊಡನೆ ರಾಯಭಾರ ಕೆಲಸಕೂಡ ಮಾಡಿದರು.
ಗಾಂಧೀಜಿ ಅವರ ರಾಷ್ಟ್ರಭಕ್ತಿ ಎಂಥದ್ದು? ಅವರು ಹೀಗೆ ಬರೆಯುತ್ತಾರೆ. ‘ನನ್ನ ರಾಷ್ಟ್ರ ಭಕ್ತಿ ಉದಾರ ಚರಿತವಾದುದು. ನಾನು ವಸುಧೈವ ಕುಟುಂಬಕಂ ಎಂಬ ವಿಚಾರದಲ್ಲಿ ಶ್ರದ್ಧೆಯುಳ್ಳವನು. ನಾನು ಬದುಕಿರುವುದು ಭಾರತದ ಸ್ವಾತಂತ್ರ್ಯಕ್ಕಾಗಿ. ನಾನು ಸಾಯುವುದೂ ಆ ಗುರಿ ಸಾಧನೆಯಲ್ಲಿಯೇ.’
‘ನಾನು ಹಿಂದು, ಆದರೆ ನನ್ನ ನಿಲುವು ‘ಸರ್ವಧರ್ಮ ಸಮನ್ವಯ’, ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತೇನೆ. ನನ್ನ ಕನಸಿನ ಭಾರತದಲ್ಲಿ ನಾನಾ ಧರ್ಮದವರು ಸಂಪೂರ್ಣ ಸ್ನೇಹದಿಂದ ಕೂಡಿಕೊಂಡು ಬದುಕುತ್ತಾರೆ.’
‘ಸ್ವರಾಜ್ಯವೆಂದರೆ ಹಿಂದು ರಾಷ್ಟ್ರವಲ್ಲ. ನನ್ನ ಶಕ್ತಿಯನ್ನೆಲ್ಲ ಬಳಸಿ ಈ ಸಂಕುಚಿತ ರಾಷ್ಟ್ರ ಪರಿಕಲ್ಪನೆಯ ವಿರುದ್ಧವಾಗಿ ಹೋರಾಡುತ್ತೇನೆ. ಅಧಿಕಾರದ ಅಮಲಿನಲ್ಲಿ ಅಲ್ಪಸಂಖ್ಯಾತರನ್ನು ತುಳಿದು ಹಾಕಿ ಅಂಥಾ ರಾಷ್ಟ್ರ ಸ್ಥಾಪಿಸುವುದಾದರೆ ಅದು ಹಿಂದೂ ಧರ್ಮಕ್ಕೇ ದ್ರೋಹ ಬಗೆದಂತೆ. ಅದು ಹಾನಿಕಾರಕವೂ ಹೌದು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆಗ ಹಿಂದು ದೇವಾಲಯಗಳಿಗೆ ಹರಿಜನರು ಬರುವಂತಿರಲಿಲ್ಲ. ಬಂದರೆ ಅವರನ್ನು ಸನಾತನಿಗಳು ಬರ್ಬರವಾಗಿ ನಡೆಸಿಕೊಳ್ಳುತ್ತಿದ್ದರು. ‘ಭಾರತೀಯರು ತಮ್ಮ ಇಂಥಾ ವರ್ತನೆಗಾಗಿ ಪಶ್ಚಾತಾಪ ಪಡಬೇಕು’ ಎಂದರು ಗಾಂಧೀಜಿ. ಹರಿಜನರಿಗೆ ದೇವಾಲಯಕ್ಕೆ ಪ್ರವೇಶದ ಹಕ್ಕನ್ನು ನೀಡಬೇಕೆಂದು ಹಿಂದುಗಳಲ್ಲಿ ವಿನಂತಿಸಿಕೊಂಡರು. ಸನಾತನಿಗಳು ಗಾಂಧಿಯವರ ನಿಲುವನ್ನು ಅಲ್ಲಗಳೆದರು. ಆಗ ಗಾಂಧೀಜಿ ಹಿಂದುಗಳು ಹರಿಜನರಿಗೆ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹಳ್ಳಿಹಳ್ಳಿಗೂ ಗಾಂಧೀಜಿಯ ಉಪವಾಸದ ಸುದ್ದಿ ಕಾಳ್ಗಿಚ್ಚಿನಂತೆ ಮುಟ್ಟಿತು. ಗಾಂಧೀಜಿ ಉಪವಾಸ 21 ದಿನ ನಡೆಯಿತು. ಉಪವಾಸ ಮುಕ್ತಾಯಕ್ಕೆ ಮೊದಲೇ ಅನೇಕ ಕಡೆ ಹರಿಜನರ ದೇವಾಲಯ ಪ್ರವೇಶಕ್ಕೆ ಜನರು ಅವಕಾಶ ಮಾಡಿಕೊಟ್ಟರು.
ಭಾರತದ ರಾಜಕೀಯವನ್ನು ‘ನಾವು’ ಯುವಕರು ಆಮೂಲಾಗ್ರವಾಗಿ ಬದಲಾಯಿಸಬೇಕು. ರಾಜಕೀಯದಿಂದ ಜಾತಿ, ಧರ್ಮಗಳನ್ನು ದೂರ ಇಡಲು ಹೋರಾಟ ಮಾಡಬೇಕು. ಈ ಬದಲಾವಣೆ ಆಗುವುದೆಂದು ನಿರೀಕ್ಷಣೆ ಮಾಡುತ್ತಾ ಕಾದು ಕೂರುವುದು ಮೂರ್ಖತನ; ಅಥವಾ ಇನ್ಯಾರೋ ನಮ್ಮ ಪರವಾಗಿ ರಾಜಕೀಯದಲ್ಲಿ ಬದಲಾವಣೆ ತರುವುದೆಂದು ಕನಸು ಕಾಣುತ್ತಾ ಕೂಡುವುದೂ ಸರಿಯಲ್ಲ. ಯುವಕರು ತಾವೇ ಬದಲಾವಣೆಯ ವಾಹಕರು ಎಂದು ಘೋಷಣೆ ಮಾಡಬೇಕು.
ದೆಹಲಿಯಲ್ಲಿ ಆಮ್‍ಆದ್ಮಿಪಕ್ಷ ಒಮ್ಮೆಯಲ್ಲ ಎರಡು ಸಾರಿ ಚುನಾವಣೆ ಎದುರಿಸಿ ಸರ್ಕಾರ ರಚಿಸಿದೆ. ಸ್ವಲ್ಪವೇ ಹಣ ಖರ್ಚುಮಾಡಿ ಈ ಚುನಾವಣೆಗಳಲ್ಲಿ ಪಕ್ಷ ಜಯಗಳಿಸಿದೆ. ಹಾಗೆ ಗೆಲ್ಲಿಸಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಜನರಿಗೆ ಈಗಿನ ರಾಜಕೀಯ ಪಕ್ಷಗಳ ವೈಫಲ್ಯಗಳನ್ನು ನೋಡಿ ಬೇಸರವಾಗಿದೆ. ಜನರಿಗೆ ಬದಲಾವಣೆ ಬೇಕಾಗಿದೆ. ಅವರ ಆಸೆಯನ್ನು ಪೂರೈಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ.
ಇಂದಿನ ರಾಜಕೀಯ ಹೀಗಿದೆ:- ಅಧಿಕಾರಬೇಕೆನ್ನುವವರು ಯಾವುದೋ ಒಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಸೋತರೆ ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ. ಸೀಟು ಸಿಗದಿದ್ದರೆ ಬೇರೆ ಪಕ್ಷಕ್ಕೆ ಜಿಗಿಯುತ್ತಾರೆ. ಆ ಪಕ್ಷಗಳು ಇಂತಹವರ ಬರುವಿಕೆಗಾಗಿ ಕಾಯುತ್ತಿರುತ್ತವೆ. ಬಂದೊಡನೆ ಸೇರಿಸಿಕೊಳ್ಳುತ್ತವೆ. ನಾಯಿ ಹಸಿದಿತ್ತು ಹಿಟ್ಟು ಹಳಸಿತ್ತು ಎಂಬಂತಾಗಿದೆ ನಮ್ಮ ಇಂದಿನ ರಾಜಕೀಯ. ಈ ಪದ್ಧತಿ ಬದಲಾಗಬೇಕಲ್ಲವೇ? ಈ ವ್ಯವಸ್ಥೆಗೆ ಬೇಸತ್ತು ಜನ ಯಾವ ಒಂದು ಪಕ್ಷಕ್ಕೂ ಬಹುಮತ ನೀಡದೆ ಒಂದು ಅಭದ್ರ ಸ್ಥಿತಿಯನ್ನು ಸೃಷ್ಟಿಸುತ್ತಾರೆ. ಆಗ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳತೊಡಗುತ್ತವೆ. ಆಗ ಎತ್ತು ಏರಿಗೆ ಎಮ್ಮೆ ನೀರಿಗೆ ಎಂಬ ಅನುಭವ ಆ ಪಕ್ಷಗಳದಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕಪ್ಪು ಹಣ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಚುನಾವಣೆಗೆ ಭಾರೀ ಹಣ ಚೆಲ್ಲಲು ತಯಾರಾಗಬೇಕು. ಈ ಹಣ ರಾಜಕೀಯ ಪಕ್ಷಗಳಿಗೆ ಯಾರು ಯಾರು ಕೊಡುತ್ತಾರೆ? ರಾಜಕೀಯ ಪಕ್ಷಗಳು ಆಯ್ದ ಉದ್ಯಮಿಗಳಿಗೆ ಕೋಟಿ ಕೋಟಿರೂಗಳನ್ನು ದೋಚಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತವೆ. ಈ ಉದ್ಯಮಿಗಳು ಗಳಿಸಿದ ಪಾಪದ ಹಣದಲ್ಲಿ ಒಂದಿಷ್ಟು ನರಿಪಾಲನ್ನು ರಾಜಕೀಯ ಪಕ್ಷಗಳಿಗೆ ಎಸೆಯುತ್ತವೆ. ಹೀಗೆ ಕೊಡಲಾದ ಹಣ ಕೋಟ್ಯಾಂತರ ರೂಪಾಯಿಗಳು.
ಪಕ್ಷ ಕಟ್ಟಲು ಹತ್ತಾರು ವರ್ಷ ಬೇಕು, ಪಕ್ಷ ಬೆಳೆಸಲು ಕೋಟ್ಯಾಂತರ ರೂಗಳು ಬೇಕು ಎನ್ನುವುದು ಈಗ ಸುಳ್ಳಾಗಿದೆ. ಇಷ್ಟು ಬಲವಾಗಿ ಬೇರೂರಿರುವ ಪಕ್ಷಗಳನ್ನು ಮೂಲೋಚ್ಚಾಟನೆ ಮಾಡಲಾಗದು ಎನ್ನುವುದೂ ಒಂದು ಮಿಥ್ಯೆಯಾಗಿದೆ. ಜನ ಈಗಿರುವ ರಾಜಕೀಯ ಪಕ್ಷಗಳಿಂದ, ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಅವರಿಗೆ ಬದಲಾವಣೆ ಬೇಕಾಗಿದೆ.
ಇದಕ್ಕೆ ಪರ್ಯಾಯವಾಗಿ ಆದರ್ಶಗಳಿಂದ ಕೂಡಿದ ಒಂದು ಪಕ್ಷದ ಅಗತ್ಯತೆ ಇದೆ. ಈಗಿರುವ ರಾಜಕೀಯ ಪಕ್ಷಗಳಿಗೆ ಪ್ರತಿ ಸ್ಪರ್ಧಿಯಾಗಿ ನಿಲ್ಲುವುದಷ್ಟೇ ನಮ್ಮ ಆಶಯವಾಗಬಾರದು. ಒಂದು ಹೊಸ ಮೌಲ್ಯ ಸ್ಥಾಪನೆಗಾಗಿ ನಮ್ಮ ಹೋರಾಟ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ನಾವು ಹೊಸ ಪಕ್ಷ ಕಟ್ಟಬೇಕು.

-ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...