Homeಸಾಮಾಜಿಕ"ಜೀವ ಬಿಟ್ಟ ಸೈನಿಕರನ್ನು ನೆನೆಯುತ್ತ.... '

“ಜೀವ ಬಿಟ್ಟ ಸೈನಿಕರನ್ನು ನೆನೆಯುತ್ತ…. ‘

- Advertisement -
- Advertisement -

ಎಂ.ಡಿ.ಒಕ್ಕುಂದ |

ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೀಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…..

ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ……

ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾಾ….

ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳೆದಾಗೊಮ್ಮೆ
ಗುಡ್ದದೋರೆಗೋಡಿ
ಯೆಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…..

ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗವ್ರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದಗದಾಳೆ ತಾಯಿ ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೊರುವಿ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಸಾನೆಯಲ್ಲಿ
ಚಿಟ್ಟನೇ ಚೇರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ…..

ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೇಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…

ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ…

ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾ…

ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳಿದಾಗೊಮ್ಮೆ
ಗುಡ್ದದೋರೆಗೋಡಿ
ಎಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…

ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗೌರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದ್ದಾಳೆ ತಾಯಿ
ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೋರುವೆ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಶಾನೆಯಲ್ಲಿ
ಚಿಟ್ಟನೇ ಚೀರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ……

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...