Homeಸಾಮಾಜಿಕ"ಜೀವ ಬಿಟ್ಟ ಸೈನಿಕರನ್ನು ನೆನೆಯುತ್ತ.... '

“ಜೀವ ಬಿಟ್ಟ ಸೈನಿಕರನ್ನು ನೆನೆಯುತ್ತ…. ‘

- Advertisement -
- Advertisement -

ಎಂ.ಡಿ.ಒಕ್ಕುಂದ |

ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೀಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…..

ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ……

ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾಾ….

ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳೆದಾಗೊಮ್ಮೆ
ಗುಡ್ದದೋರೆಗೋಡಿ
ಯೆಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…..

ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗವ್ರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದಗದಾಳೆ ತಾಯಿ ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೊರುವಿ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಸಾನೆಯಲ್ಲಿ
ಚಿಟ್ಟನೇ ಚೇರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ…..

ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೇಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…

ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ…

ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾ…

ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳಿದಾಗೊಮ್ಮೆ
ಗುಡ್ದದೋರೆಗೋಡಿ
ಎಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…

ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗೌರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದ್ದಾಳೆ ತಾಯಿ
ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೋರುವೆ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಶಾನೆಯಲ್ಲಿ
ಚಿಟ್ಟನೇ ಚೀರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ……

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋವಿಡ್-19 ಲಸಿಕೆ ಮತ್ತು ಯುವ ವಯಸ್ಕರ ಹಠಾತ್ ಸಾವುಗಳ ನಡುವೆ ಯಾವುದೇ ವೈಜ್ಞಾನಿಕ ಸಂಬಂಧ ಕಂಡುಬಂದಿಲ್ಲ: ಏಮ್ಸ್ ಅಧ್ಯಯನ

ನವದೆಹಲಿ: ದೆಹಲಿಯ ಏಮ್ಸ್‌ನಲ್ಲಿ ನಡೆಸಿದ ಒಂದು ವರ್ಷದ ಸಮಗ್ರ, ಶವಪರೀಕ್ಷೆ ಆಧಾರಿತ ವೀಕ್ಷಣಾ ಅಧ್ಯಯನವು, ಯುವ ವಯಸ್ಕರಲ್ಲಿ ಕೋವಿಡ್-19 ಲಸಿಕೆಯನ್ನು ಹಠಾತ್ ಸಾವುಗಳೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ, ಇದು ಕೋವಿಡ್ ಲಸಿಕೆಗಳ...

ಬಿಜೆಪಿ ಜನ ನಾಟಕೀಯರು, ದೇಶದ್ರೋಹಿಗಳು; ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಮಲ್ಲಿಕಾರ್ಜುನ ಖರ್ಗೆ

"ಬಿಜೆಪಿಯವರು 'ಗದ್ದಾರ್‌ಗಳು' (ದೇಶದ್ರೋಹಿಗಳು) ಮತ್ತು 'ಡ್ರಮೆಬಾಜ್' (ನಾಟಕೀಯದಲ್ಲಿ ತೊಡಗಿಸಿಕೊಳ್ಳುವವರು). ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.  ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರಿ ಕುರಿತ...

ಆಸ್ಟ್ರೇಲಿಯಾ | ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ : 12 ಜನರು ಸಾವು

ಭಾನುವಾರ (ಡಿ.14) ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಸಮುದಾಯದ 'ಹನುಕ್ಕಾ' ಕಾರ್ಯಕ್ರಮದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....

ಕೋಲ್ಕತ್ತಾದಲ್ಲಿ ನಡೆದ ಅವ್ಯವಸ್ಥೆ: ‘ಮೆಸ್ಸಿ ಭಾರತ ಪ್ರವಾಸ 2025’ರ ಪ್ರಮುಖ ಆಯೋಜಕರಿಗೆ 14 ದಿನಗಳ ಕಸ್ಟಡಿ

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಲಿಯೋನೆಲ್ ಮೆಸ್ಸಿ ಅವರ ಇಂಡಿಯಾ ಟೂರ್ 2025 ರ ಪ್ರಮುಖ ಆಯೋಜಕರನ್ನು ವಶಕ್ಕೆ ಪಡೆದಿದ್ದಾರೆ.  ಈ ಘಟನೆಯು ಪ್ರತಿಭಟನೆಗಳಿಗೆ...

ಹೆಡ್ಗೆವಾರ್ ಸ್ಮಾರಕ ಭೇಟಿ ತಪ್ಪಿಸಿಕೊಂಡ ಅಜಿತ್ ಪವಾರ್ : ನಮ್ಮದು ಅಂಬೇಡ್ಕರ್, ಫುಲೆ ಸಿದ್ಧಾಂತ ಎಂದ ಎನ್‌ಸಿಪಿ ವಕ್ತಾರ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ (ಡಿ.14) ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಸ್ಮಾರಕ ಭೇಟಿ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದು, ಅವರ ಪಕ್ಷ ಎನ್‌ಸಿಪಿ ರಾಜ್ಯದ ಅಭಿವೃದ್ಧಿಗಾಗಿ ಮಹಾಯುತಿ ಮೈತ್ರಿಕೂಟಕ್ಕೆ ಸೇರಿರುವುದಾಗಿ ಒತ್ತಿ...

ದೆಹಲಿಗೆ ಬರುವ ನಮ್ಮ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ : ಡಿಕೆಶಿ

ದೆಹಲಿ ಬರುತ್ತಿರುವ ನಮ್ಮವರ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್‌ಲೀಲಾ...

ಹೊಸೂರು ವಿಮಾನ ನಿಲ್ದಾಣ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಿಂದ 2,900 ಎಕರೆ ಸ್ವಾಧೀನ ಸಾಧ್ಯತೆ

ಚೆನ್ನೈ: ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸರ್ಕಾರಿ ಸ್ವಾಮ್ಯದ 800 ಎಕರೆ ಸೇರಿದಂತೆ ಸುಮಾರು 3,000...

ಸೋನಮ್ ವಾಂಗ್‌ಚುಕ್ ಸಂಸ್ಥೆ ಅನುಕರಣೀಯ ಕೆಲಸ ಮಾಡುತ್ತಿದೆ, ಯುಜಿಸಿ ಮಾನ್ಯತೆ ನೀಡಬೇಕು ಎಂದ ಸಂಸದೀಯ ಸಮಿತಿ

ಲಡಾಖ್‌ನ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (ಹೆಚ್‌ಐಎಎಲ್‌) 'ಅನುಕರಣೀಯ' ಕೆಲಸ ಮಾಡುತ್ತಿದೆ. ಹಾಗಾಗಿ, ಆ ಸಂಸ್ಥೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಮಾನ್ಯತೆ...

ಮುಸ್ಲಿಂ ಎಂದು ಪರಿಶೀಲಿಸಿ ಗುಂಪುಹಲ್ಲೆ: ತೀವ್ರ ದಾಳಿಗೆ ಒಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ  ಸಾವು

ನವಾಡಾ ಜಿಲ್ಲೆಯ ರೋಹ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಕ್ರೂರವಾಗಿ ಹಲ್ಲೆಗೊಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಥರ್ ಹುಸೇನ್ ಶುಕ್ರವಾರ ತಡರಾತ್ರಿ ಬಿಹಾರ್ಷರೀಫ್ ಸದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಸೆಂಬರ್...

ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 2 ಸಾವು, 8 ಜನರಿಗೆ ತೀವ್ರ ಗಾಯಗಳಾಗಿವೆ

ಅಮೆರಿಕಾದ ರೊಡ್ ಐಲ್ಯಂಡ್ ರಾಜ್ಯದ ಪ್ರೊವಿಡೆನ್ಸ್ ನಗರದಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಸಮಯದಲ್ಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದಿದೆ, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಡಿಸೆಂಬರ್ 13ರ,...