Homeಸಾಮಾಜಿಕನಿರ್ದಿಷ್ಟ ಅವಧಿಯ ಉದ್ಯೋಗ: ಕಿಸ್ಕಾ ಸಾಥ್-ಕಿಸ್ಕಾ ವಿಕಾಸ್? ಕಾರ್ಮಿಕರ ಉದ್ಧಾರಕ್ಕೆ ಮೋದಿ ಕೊಡುಗೆ!

ನಿರ್ದಿಷ್ಟ ಅವಧಿಯ ಉದ್ಯೋಗ: ಕಿಸ್ಕಾ ಸಾಥ್-ಕಿಸ್ಕಾ ವಿಕಾಸ್? ಕಾರ್ಮಿಕರ ಉದ್ಧಾರಕ್ಕೆ ಮೋದಿ ಕೊಡುಗೆ!

- Advertisement -
- Advertisement -
  • ಪ್ರೊ. ಬಾಬು ಮ್ಯಾಥ್ಯು, ನ್ಯಾಶನಲ್ ಲಾ ಸ್ಕೂಲ್, ಬೆಂಗಳೂರು |

ಬಿ.ಜೆ.ಪಿಯ ಕಾರ್ಮಿಕ ವಿರೋಧಿ ನೀತಿ ಕರ್ನಾಟಕದ ಚುನಾವಣೆಯ ಪ್ರಮುಖ ವಿಷಯವಾಗಬಹುದಿತ್ತು. ಈ ಮೂಲಕ ಜನರನ್ನು ಎಚ್ಚರಿಸಬಹುದಿತ್ತು. ‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ಹೊರತು ಪಡಿಸಿ ಯಾರೂ ಇದನ್ನು ಬಯಲಿಗೆಳೆದಿಲ್ಲ. ಈ ಕಾಯಿದೆಯ ಹಿಂದೆ ಮತ್ತು ಮುಂದಿನ ಸತ್ಯಗಳನ್ನು ಅರಿತುಕೊಳ್ಳಲು ಈ ಲೇಖನ ಓದಿ.

ಇಡೀ ಪ್ರಪಂಚದಲ್ಲಿ ಕಾರ್ಮಿಕ ನ್ಯಾಯಶಾಸ್ತ್ರ ಹಲವಾರು ಶತಮಾನಗಳಿಂದ ರೂಪುಗೊಳ್ಳುತ್ತಾ ಬಂದಿದೆ. ಗುಲಾಮ ಪದ್ದತಿಯಿಂದ ಹಿಡಿದು, ಈ ಹೊತ್ತಿನ ಕಾರ್ಮಿಕ-ಮಾಲೀಕರ ಸಂಬಂಧದವರೆಗಿನ ಇತಿಹಾಸ ಹಲವಾರು ಹಂತಗಳನ್ನು, ಹೋರಾಟಗಳನ್ನು ದಾಟಿ ಬಂದಿದೆ. ಪ್ರಸ್ತುತ ಅದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ನಿರ್ಣಯಗಳು ಮತ್ತು ವಿವಿಧ ನ್ಯಾಯಲಯಗಳು ಕಾರ್ಮಿಕರ ಸ್ಥಾನ ಮಾನ ಕುರಿತಂತೆ ನೀಡಿರುವ ತೀರ್ಪುಗಳ ಆಧಾರದ ಮೇಲೆ ರೂಪುಗೊಂಡಿದೆ.

ಹಿಂದೆ ಒಂದು ಕಾಲವಿತ್ತು. ಗುಲಾಮರನ್ನು ಸಾರ್ವಜನಿಕ ಹರಾಜಿನಲ್ಲಿ ಬೆಲೆಕಟ್ಟಿ ಕೊಂಡುಕೊಳ್ಳಬಹುದಿತ್ತು. ಹೀಗೆ ಮಾರಾಟವಾದ ಗುಲಾಮ ಒಡೆಯನ ಆಸ್ತಿ ಆಗುತ್ತಿದ್ದ. ಅವನನ್ನು ಬೇಕಾದರೆ ಇನ್ನೊಬ್ಬ ಮಾಲಿಕನಿಗೆ ಮಾರಬಹುದಿತ್ತು. ಅಕಸ್ಮಾತ್ ಗುಲಾಮ ಓಡಿಹೋದರೆ, ಅವನನ್ನು ಹಿಡಿದು, ಬಂಧಿಸಿ ಮತ್ತೆ ಗುಲಾಮಗಿರಿಗೆ ತಳ್ಳಲಾಗುತ್ತಿತ್ತು. ಓಡಿಹೋದ ಗುಲಾಮನಿಗೆ ಆಶ್ರಯ ನೀಡುವುದು ಅಪರಾಧವಾಗಿತ್ತು. ವಸಾಹತುಶಾಹಿ ಕಾಲದ ಮಾಲೀಕರು ಇಂಥ ಕಾನೂನನ್ನು ಸೃಷ್ಟಿಸಿ ಅದಕ್ಕೆ ‘ಕಾರ್ಮಿಕ ಒಪ್ಪಂದದ ಉಲ್ಲಂಘನೆ ಕಾಯಿದೆ 1859’ ಎಂದು ಕರೆದಿದ್ದರು. ಈ ಕಾಯಿದೆಯನ್ನು ಬಳಸಿಕೊಂಡು ಅಸ್ಸಾಮಿನ ಚಹಾ ತೋಟದಲ್ಲಿ ಗುತ್ತಿಗೆ ಕೂಲಿ ಕೆಲಸಕ್ಕೆ ಜನರನ್ನು ನಿಯಮಿಸಲಾಗುತ್ತಿತ್ತು.

ಈ ಗುಲಾಮ ಸಂಬಂಧ ಕ್ರಮೇಣ ‘ಮಾಲೀಕ ಮತ್ತು ಸೇವಕ ಸಂಬಂಧ’ವಾಗಿ ಮಾರ್ಪಟ್ಟಿತು. ಕೂಲಿ ಕೆಲಸದ ಒಪ್ಪಂದದ ನಿಯಮಗಳನ್ನು ಮಾಲೀಕನೇ ನಿರ್ಧರಿಸಬಹುದು ಎಂಬುದೇ ಇದರರ್ಥ. ಈ ಕಾಲ ಘಟ್ಟದಲ್ಲಿ ಮಾಲೀಕ ಮತ್ತು ಸೇವಕನ ನಡುವಿನ ಸಂಬಂಧ ಒಂದು ವ್ಯಕ್ತಿಗತ ನೆಲೆಯ ಮೇಲೆ ನಿಂತಿತ್ತು. ಹೀಗಾಗಿ ಮಾಲೀಕನ ಮಾತೇ ಕಡೆಯ ವಾಕ್ಯ. ಅದರ ಮೇಲೆ ಎಲ್ಲೂ ಮನವಿ ಸಲ್ಲಿಸುವ ಹಾಗಿರಲಿಲ್ಲ. ಇಂಥ ಸಂಬಂಧಗಳಲ್ಲಿ ಸ್ವಾಭಾವಿಕವಾಗಿಯೇ ಬಿಡಿಗಾಸಿನ ಕೂಲಿ ದರವನ್ನು ಮಾತ್ರ ಕೊಡಲಾಗುತ್ತಿತ್ತು. ಕೆಲಸದ ಅವಧಿ ಸಾಮಾನ್ಯವಾಗಿ ಬೆಳಕು ಹರಿಯುವುದರಿಂದ ಹಿಡಿದು, ಸೂರ್ಯಾಸ್ತದವರೆಗೂ ವಿಸ್ತರಿಸುತ್ತಿತ್ತು. ಬೇಕಾದಾಗ ಕೆಲಸಕ್ಕೆ ತೆಗೆದುಕೊಂಡು ಬೇಡದಿದ್ದಾಗ ವಜಾ ಮಾಡುತ್ತಿದ್ದುದರಿಂದ, ಕೂಲಿಗಳ ತಲೆ ಮೇಲೆ ಒಂದು ಅನಿಶ್ಚಿತೆಯ ಕತ್ತಿ ಯಾವಾಗಲೂ ನೇತಾಡುತ್ತಿತ್ತು.

ಯಾವಾಗ ಕಾರ್ಮಿಕರು ಸಂಘಟಿತರಾಗತೊಡಗಿದರೋ, ಅಲ್ಲಿಂದ ಪರಿಸ್ಥಿತಿ ಬದಲಾಗಲು ಪ್ರಾರಂಭವಾಯಿತು. ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಹಕ್ಕುಗಳನ್ನು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು, ಹಾಗೂ ದುಡಿಮೆಯ ಕ್ಷೇತ್ರದಲ್ಲಿ ಒಂದು ಮಾನವೀಯ ವಾತಾವರಣ ನಿರ್ಮಿಸಲು ಮುಂದಾದವು. ಈ ಸಮರದಲ್ಲಿ ಅನೇಕ ಕಾನೂನುಗಳು ಜಾರಿಗೆ ಬಂದು ಕಾರ್ಮಿಕರಿಗೆ ಒಂದಷ್ಟು ಹಕ್ಕುಗಳು ಸಿಗುವ ಹಾಗಾಯಿತು. ಅಮೆರಿಕಾದ ಕಾರ್ಮಿಕರು ದಿನಕ್ಕೆ 8 ಗಂಟೆ ದುಡಿಮೆಯ ನಿಯಮವನ್ನು ತರಲು ನಡೆಸಿದ ಹೋರಾಟಕ್ಕೆ ಈಗ ನೂರೈವತ್ತು ವರ್ಷ ಆಗಿದೆ. ಈ ಕಾನೂನಿನ ಲಾಭ ಕೇವಲ ಆ ದೇಶಕ್ಕೆ ಸೀಮಿತಗೊಳ್ಳದೆ ಜಗತ್ತಿನ ಎಲ್ಲ ಕಾರ್ಮಿಕರಿಗೂ ಲಭಿಸಿದೆ. ನಮ್ಮ ದೇಶದಲ್ಲೂ ‘ಇಂಡಿಯನ್ ಫಾಕ್ಟರೀಸ್ ಆಕ್ಟ್’ ಕಾರ್ಮಿಕರಿಗೆ ಈ ಹಕ್ಕನ್ನು ನೀಡಿದೆ.

ಮುಂದೆ ಕಾರ್ಮಿಕ ಸಂಘಟನೆಗಳು ಸಾಮೂಹಿಕ ಕರಾರಿನ ಹಕ್ಕಗಳನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದವು. ಇದರಿಂದ ಕಾರ್ಮಿಕರ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು, ಅವರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದರಿಂದ, ಓದ್ಯೋಗಿಕ ವಸ್ತುಗಳ ಬೇಡಿಕೆಯಲ್ಲಿ ಹೆಚ್ಚಳ ಉಂಟಾಯಿತು. ಇದು ಕ್ರಮೇಣ ‘ಬಂಡವಾಳ ಶಾಹಿಯ ಸುವರ್ಣಯುಗ’ಕ್ಕೆ ದಾರಿ ಮಾಡಿಕೊಟ್ಟಿತು. ವಿಶ್ವ ವಿಖ್ಯಾತ ಕಾರ್ಮಿಕ ನ್ಯಾಯಶಾಸ್ತ್ರಜ್ಞನಾದ ಓಟ್ಟೊ ಕಾಹ್ನ್ ಫ್ರಾಯಿಂಡ್ ಎಂಬಾತನ ಪ್ರಕಾರ ಈ ವಿದ್ಯಮಾನ ‘ವ್ಯಕ್ತಿಗತ ಸೇವಾ ಕರಾರಿನ’ ಯುಗದಿಂದ, ಸಮಾಜ ‘ಸಾಮೂಹಿಕ ಸೇವಾ ಕರಾರಿಗೆ’ ಬದಲಾದ ಪ್ರಕ್ರಿಯೆಯ ಸೂಚನೆ. ಇದರಿಂದಾಗಿ ಕರಾರು ಕಾನೂನಿನ ನ್ಯಾಯಶಾಸ್ತ್ರ, ಕಾರ್ಮಿಕ ಕಾನೂನಿನ ನ್ಯಾಯಶಾಸ್ತ್ರವಾಗಿ ಪರಿವರ್ತನೆ ಹೊಂದಿತಲ್ಲದೆ, ಮಾಲಿಕ ಮತ್ತು ಕಾರ್ಮಿಕರ ನಡುವೆ ಒಂದು ರೀತಿಯ ಸಮಾನ ನೀತಿ ಜಾರಿಗೆ ಬರಲು ಕಾರಣವಾಯಿತು. ಇದು ಮೂಲತಃ ಬಂಡವಾಳಶಾಹಿ ಮತ್ತು ದುಡಿಮೆಯ ಸಂಬಂಧದಲ್ಲಿ , ತಾತ್ವಿಕವಾಗಿಯಾದರೂ, ಸಮಾನತೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಇದು ಬಹಳ ದೊಡ್ಡ ಹಾಗೂ ಶ್ರಮದಾಯಕವಾದ ಚಳವಳಿ ಮತ್ತು ಕಾನೂನು ಹೋರಾಟದಿಂದ ಮಾತ್ರ ದಕ್ಕಿತೆನ್ನುವುದನ್ನು ಮರೆಯಲಾಗದು. ಇವೆಲ್ಲ ಬೆಳವಣಿಗೆಗಳಿಂದಾಗಿ ಯಾವುದೇ ಸಕಾರಣವಿಲ್ಲದೆ ಕೆಲಸದಿಂದ ವಜಾಮಾಡುವುದು ನ್ಯಾಯಬಾಹಿರವಾಗಿದ್ದಷ್ಟೇ ಅಲ್ಲ, ಹಾಗೆ ವಜಾಮಾಡಲ್ಪಟ್ಟವರನ್ನು ಹಿಂದಿನ ವೇತನದೊಂದಿಗೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ನ್ಯಾಯಲಯಗಳು ತೀರ್ಪನ್ನು ಕೂಡ ಕೊಟ್ಟವು.

ಆದರೆ ಇಷ್ಟು ದೀರ್ಘ ಹೋರಟದಿಂದ ಕಾರ್ಮಿಕರು ಗಳಿಸಿಕೊಂಡಿದ್ದ ನ್ಯಾಯಬದ್ಧ ಹಕ್ಕುಗಳನ್ನು ಮೋದಿ ಸರ್ಕಾರ ಮೊಟಕುಗೊಳಿಸಲು ಹೊರಟಿದೆ. 32ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಕಾಯಿದೆಗಳನ್ನು ರದ್ದುಮಾಡಿ, ಅದರ ಜಾಗದಲ್ಲಿ ನಾಲ್ಕು ಕಾರ್ಮಿಕ ಕಾನೂನಗಳನ್ನು ಜಾರಿ ಮಾಡಿದೆ. ಕುತೂಹಲದ ವಿಷಯವೆಂದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘ ಕೂಡ ಇದನ್ನು ವಿರೋಧಿಸಿದೆ. ಇದಕ್ಕೆ ಸಂಬಂಧಿಸಿದ ಕಾಯಿದೆಗಳು ಸಂಸತ್ತಿನ ಮುಂದಿವೆ.

ಇದರಲ್ಲಿ ಬಹು ಮುಖ್ಯವಾದದ್ದು ಇಂಡಸ್ಟ್ರಿಯಲ್ ಎಂಪ್ಲಾಯಮೆಂಟ್ ಸ್ಟಾಂಡಿಂಗ್ ಆರ್ಡಸ್ ಆಕ್ಟ್, 1946 ಅಡಿಯಲ್ಲಿರುವ ಕಾನೂನಿಗೆ ಬಹು ದೂರಗಾಮಿ ದುಷ್ಪರಿಣಾಮಗಳನ್ನು ಉಂಟುಮಾಡುವ ಬದಲಾವಣೆಗಳು. ಈ ತಿದ್ದುಪಡಿ ನೇರವಾಗಿ “ಆಗ್‍ಮೆಂಟೆಡ್ ವಾಷಿಂಗ್‍ಟನ್ ಕನ್‍ಸೆನ್ಸಸ್” ಎನ್ನುವ ಅಂತರಾಷ್ಟ್ರೀಯ ಒಡಂಬಡಿಕೆಯಿಂದ ಪ್ರೇರಣೆ ಪಡೆದಿದೆ. ಇದನ್ನು ಅಂತರಾಷ್ಟ್ರೀಯ ಸಂಸ್ಥೆಗಳ ಒತ್ತಡವೆಂದರೂ ಸರಿ. ಸಾರಾಂಶದಲ್ಲಿ ಇದರ ಸರಳ ಅರ್ಥವೆಂದರೆ ‘ಹೊಂದಿಕೊಳ್ಳಬಲ್ಲ ದುಡಿಮೆ’ಯನ್ನು ಉತ್ತೇಜಿಸುವುದು. ಹಾಗೆಂದರೇನು? ಇದರ ಪ್ರಕಾರ ಉದ್ಯೋಗದಾತ ದಣಿಗಳು ತಮ್ಮ ನೌಕರರಿಗೆ ಉದ್ಯೋಗದ ಆದೇಶಗಳನ್ನು ನೀಡುವಾಗಲೇ ಅವರನ್ನು ಉದ್ಯೋಗದಿಂದ ತೆಗೆದುಹಾಕುವ ದಿನಾಂಕವನ್ನು ನಮೂದಿಸಬಹುದಾಗಿದೆ. ಇದಕ್ಕೆ ಬೇಕಾದ ಕಾನೂನಿನ ಬದಲಾವಣೆಗಳನ್ನು ತಂದು ಅಂತಹ ಆದೇಶಗಳನ್ನು ಅಧಿಕೃತಗೊಳಿಸುವಂತೆ ಈಗಾಗಲೇ ಮಾಡಲಾಗಿದೆ. ಉದಾಹರಣೆಗೆ ಈ ಮೇಲ್ಕಂಡ ಕಾಯ್ದೆಯ ಮೊದಲನೇ ಶೆಡ್ಯೂಲಿನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಬಿ ಜೆ ಪಿ ಹೊಸರೀತಿಯ ಉದ್ಯೋಗ ನೀತಿಯನ್ನು ಸದ್ದಿಲ್ಲದೆ ಜಾರಿಗೊಳಿಸಿದಂತಾಗಿದೆ. ಅದನ್ನು ಅದು ‘ನಿರ್ದಿಷ್ಟ ಅವಧಿಯ ಉದ್ಯೋಗ’ ಎಂದು ಕರೆದಿದೆ. ಇದಕ್ಕಿಂತಲೂ ಹೆಚ್ಚಿನ ಅನುಕೂಲವನ್ನು ಉದ್ಯೋಗದಾತರಿಗೂ, ಮಾಲೀಕರಿಗೂ ಒದಗಿಸಲು ಸಾಧ್ಯವೇ? ಬಹುಷಃ ಇದು ಅವರು ಬಯಸಿದ್ದಕ್ಕಿಂತಲೂ ದೊಡ್ಡದಾದ, ಅವರುಗಳ್ಯಾರೂ ಕನಸಿನಲ್ಲೂ ಕಂಡಿರದಿದ್ದ ಕೊಡುಗೆ. ಇದರಿಂದ ಬಿ ಜೆ ಪಿ ಯಾರ ಪರ ಇದೆ ಎನ್ನುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸ್ಪಷ್ಟವಾಗಿದೆ. ಭಾರರದ ಬಂಡವಾಳ ಶಾಹಿ ಈಗ 500 ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯ ‘ಹೊಂದಿಕೊಳ್ಳಬಲ್ಲ’ (ಅಂದರೆ, ಯಾವಾಗ ಬೇಕಾದರೂ ವಜಾಗೊಳಿಸಬಹುದಾದ) ಕಾರ್ಮಿಕರನ್ನು ಹೊಂದಲಿದೆ. ಮೋದಿ ತಮ್ಮ ಭಾಷಣಗಳಲ್ಲಿ ಯಾವಾಗಲೂ ತಮ್ಮ ಸರ್ಕಾರ ‘ಸುಗಮ ವ್ಯವಹಾರ’ವನ್ನು ಜಾರಿತರಲಿದೆ ಎಂದು ಹೇಳುತ್ತಿರುತ್ತಾರೆ. ಅವರ ಪ್ರಕಾರ ಬಹುಷಃ ಭಾರತದ ಬಂಡವಾಳಿಗರಿಗೆ ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸುವುದಕ್ಕೆ ಮೋದಿ ಕೊಟ್ಟ ಉಡುಗೊರೆ ಇದೇ ಇರಬಹುದು.

ಈ ಹೊಸ ಕಾರ್ಮಿಕ ಕಾಯಿದೆ ತಿದ್ದುಪಡಿಯಿಂದಾಗಿ 500 ಮಿಲಿಯನ್ ಕಾರ್ಮಿಕ ವೃಂದಕ್ಕೆ ಈಗಲೇ ‘ಅಚ್ಚೇ ದಿನ’ ಬಂದಿದೆ. ಇದರೊಂದಿಗೆ ‘ಎಲ್ಲರೊಡನೆ ಸೇರಿ, ಎಲ್ಲರ ವಿಕಾಸ’ ಎಂಬ ಮೋದಿ ಅವರ ಮೆಚ್ಚಿನ ಘೋಷಣೆಗೆ ಜಾರಿಯಾಗಿದೆ ಎಂದುಕೊಳ್ಳೋಣವೇ? ಆದರೆ ಸ್ವದೇಶಿ ಕಾರ್ಮಿಕರ ಹಿತಕ್ಕೇ ಕೊಡಲಿ ಪೆಟ್ಟು ನೀಡುವ ಈ ತಿದ್ದುಪಡಿಯ ಹಿಂದೆ ಕೆಲಸಮಾಡಿರುವ ಒತ್ತಡ ಮಾತ್ರ ವಿದೇಶದಲ್ಲಿ ತಯಾರಾದ ‘ವಾಷಿಂಗ್‍ಟನ್ ಒಪ್ಪಂದ’ ಎನ್ನುವುದು ಒಂದು ದೊಡ್ಡ ವ್ಯಂಗ್ಯ. ನೂರು ವರ್ಷಗಳ ಹೋರಾಟದಿಂದ ಕಾರ್ಮಿಕರು ಗಳಿಸಿಕೊಂಡಿದ್ದ ಉದ್ಯೋಗ ಭದ್ರತೆಗೆ ಸಂಬಂಧಿಸಿದ ಹಕ್ಕುಗಳನ್ನು ಈ ಒಪ್ಪಂದ ಒಂದೇ ಬೀಸಿಗೆ ಎತ್ತಿ ಹೊರಗೆಸಿದಿದೆ. ಅಂದರೆ ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವಿನ ಸಂಬಂಧವನ್ನು ಬದಿಗಿಟ್ಟು ಹಳೆಯ ‘ಮಾಲೀಕ-ಗುಲಾಮ’ ಸಂಬಂಧವನ್ನು ಈ ಕಾಯ್ದೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಇದರಿಂದ ‘ಹೈರ್ ಅಂಡ್ ಫೈರ್’ ಎನ್ನುವ ಜಂಗ್ಲೀ ಕಾನೂನು ಮತ್ತೆ ಅಧಿಕೃತವಾಗಿ ಜಾರಿಗೆ ಬರಲಿದೆ. ಹಾಗಾದರೆ ಇದು ‘ಯಾರ ಸಾಥ್ ಮತ್ತು ಯಾರ ವಿಕಾಸ್’ ಎಂದು ನಾವು ಕೇಳಲೇಬೇಕಾಗಿದೆ. ಮತ್ತೆ ಊಳಿಗಮಾನ್ಯ ಕಾಲದ ‘ಮಾಲೀಕ-ಗುಲಾಮ’ ಪದ್ಧತಿಗೆ ನಮ್ಮ ಸಮಾಜ ಹೊರಳಿಕೊಳ್ಳದಂತೆ ನಾವು ಈಗ ಜಾಗರೂಕವಾಗಬೇಕಿದೆ.

ಮುಂದಿರುವ ಸಭಿಕರನ್ನು ನೋಡಿ, ಆ ಕ್ಷಣಕ್ಕೆ ಅವರನ್ನು ಓಲೈಸುವ ಮಾತುಗಳನ್ನು ಒಗೆಯುವುದರಲ್ಲಿ ಮೋದಿ ನಿಪುಣರು. ಇತ್ತೀಚೆಗೆ, ಕರ್ನಾಟಕದ ಸಂತೆಮಾರನಹಳ್ಳಿಯಲ್ಲಿ ಕಾರ್ಮಿಕರ ದಿನದಂದು ಮೋದಿ ಕಾರ್ಮಿಕರನ್ನು ಇನ್ನಿಲ್ಲದಂತೆ ಹೊಗಳುತ್ತಾ, ಇಂದು ದೇಶವನ್ನು ಮುನ್ನಡೆಸುವುದರಲ್ಲಿ ಕಾರ್ಮಿಕರ ಕೊಡುಗೆಯನ್ನು ಯದ್ವಾತದ್ವಾ ಕೊಂಡಾಡಿದರು. ಅವರಿಲ್ಲದೆ ದೇಶದ ಪ್ರಗತಿ ಅಸಾಧ್ಯ ಎಂದ ಅದೇ ಮೋದಿ ಕೆಲವೇ ವಾರಗಳ ಹಿಂದೆ ಕಾರ್ಮಿಕರ ಕತ್ತನ್ನು ಕೊಯ್ಯುವ, ಅವರ ಉದ್ಯೋಗ ಭದ್ರತೆಯನ್ನೇ ಕಿತ್ತುಕೊಳ್ಳುವ ಕಾಯಿದೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕಿಂತಲೂ ಬೂಟಾಟಿಕೆ ಇನ್ನೊಂದಿರಲಾರದು.

ಅನು: ವಿ.ಎಸ್. ಶ್ರೀಧರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...