Homeರಾಜಕೀಯಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

ಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

- Advertisement -
- Advertisement -

ಪಿ.ಕೆ. |

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರ ಶುರುವಾಗಬೇಕು’……

ಇದೊಂದು ವ್ಯವಸ್ಥಿತ ಸಂಚು, ಮತಬೇಟೆಯ ಷಡ್ಯಂತ್ರ. ಮೇಲುನೋಟಕ್ಕೆ ಎಲ್ಲ ಬಿಡಿ ಬಿಡಿ ಘಟನೆ, ಬಿಡಿ ಬಿಡಿ ಹೇಳಿಕೆಗಳು ಎನಿಸುತ್ತವೆ. ಆದರೆ ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ಸ್ಕ್ರಿಪ್ಟ್ ಮೊದಲೇ ಸಿದ್ಧವಾಗಿದೆ.

ಈ ಎಲ್ಲದರ ಅಂತಿಮ ಗುರಿ: ಏನೇನೂ ಜನಪರ ಕೆಲಸ ಮಾಡದ, ಅದೂಅಲ್ಲದೇ ಮೂರ್ಖ, ಮುಠ್ಠಾಳತನದ ನಿರ್ಧಾರಗಳಿಂದ ದೇಶದ ಅರ್ಥವ್ಯವಸ್ಥೆಯನ್ನೇ ಶಿಥಿಲಗೊಳಿಸಿರುವ ಮೋದಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು. ಅದಕ್ಕಿಂತ ಮುಖ್ಯವಾಗಿ, ಈ ನಾಲ್ಕೂವರೆ ವರ್ಷಗಳಲ್ಲಿ ಹುಟ್ಟಿಸಿರುವ ಅಸಹನೆಯ, ಕ್ರೌರ್ಯದ ವಾತಾವರಣವನ್ನು ಶಾಶ್ವತವಾಗಿ ನಿರ್ಮಿಸುವುದು, ಈಗ ಶಿಥಿಲಗೊಳಿಸಲ್ಪಟ್ಟಿರುವ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ನಾಮ ಮಾಡುವುದು. ಆ ಮೂಲಕ ಸಂವಿಧಾನವನ್ನೇ ನಗಣ್ಯವಾಗಿಸಿ, ಚುನಾವಣೆಗಳನ್ನು ಪ್ರಹಸನಗಳನ್ನಾಗಿ ಪರಿವರ್ತಿಸಿ, ಒಂದು ಅರಾಜಕ ಸ್ಥಿತಿ ನಿರ್ಮಾಣ ಮಾಡುವುದು. ಅವರ ಮಟ್ಟಿಗೆ ಅದು ‘ಹಿಂದೂ ರಾಷ್ಟ್ರ’….ಅಲ್ಲಿಗೆ ಭಾರತ ದೇಶವು ಪಾಕಿಸ್ತಾನದ ಮಾದರಿಯಲ್ಲಿ ಸಾಗುವುದಂತೂ ಖಂಡಿತ.

ಆದರೆ, ಇದು ಅಷ್ಟು ಸುಲಭವಲ್ಲೆಂಬುದು ಮೋದಿ, ಶಾಗಳು ಸೇರಿದಂತೆ ಇಡೀ ಸಂಘಪರಿವಾರಕ್ಕೆ ಮನವರಿಕೆಯಾಗಿದೆ. ದೇಶದ ರೈತರು, ಕಾರ್ಮಿಕರು, ಯುವಕರು ಸ್ಪಷ್ಟವಾಗಿಯೇ ತಮ್ಮ ಖಚಿತ ವಿರೋಧಗಳನ್ನು ದಾಖಲಿಸುತ್ತಿದ್ದಾರೆ. ಇದು ಸಂಘದ ಮುಂದಿರುವ ಸವಾಲು.

ಜನರ ಬಳಿ ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲ, ಮಣ್ಣಾಂಗಟ್ಟಿಯೂ ಇಲ್ಲ. ನಾಕೂವರೆ ವರ್ಷ ‘ಇಮೇಜ್’ ಕಾಪಾಡಲು ಹೆಣಗಿದ ಮಾಧ್ಯಮಗಳು ಸುಸ್ತಾಗಿವೆ, ವಿಶ್ವಾಸ ಕಳೆದುಕೊಳ್ಳುತ್ತಿವೆ. ಸುಳ್ಳು ಸುದ್ದಿಗಳನ್ನು ಹರಡುತ್ತ ಬಂದವರಿಗೇ ನಾಚಿಕೆಯಾಗಿದೆ.

ಸಂಘ ಪರಿವಾರದ ಒಳಗಡೆ ಹತಾಶೆ ಗಿಜಿಗಿಟ್ಟಿ ತುಳುಕಾಡುತ್ತಿದೆ. 2019ರ ಚುನಾವಣೆ ಸುಲಭವಲ್ಲ ಎಂಬುದು ಅದಕ್ಕೆ ಪಕ್ಕಾ ಆಗಿದೆ. ಅದಕ್ಕಾಗಿ ಅದು ಭಿನ್ನ ವೇದಿಕೆಗಳಿಂದ ಭಿನ್ನ ಸ್ತರಗಳಲ್ಲಿ ‘ಶೀಘ್ರವೇ ರಾಮ ಮಂದಿರ ನಿರ್ಮಾಣ ಆಗಬೇಕು’ ಎಂದು ಹುಯಿಲು ಎಬ್ಬಿಸಲು ಯತ್ನಿಸುತ್ತಿದೆ. ನಾಲ್ಕೂವರೆ ವರ್ಷದ ನಂತರ ಅದಕ್ಕೆ ದಿಢೀರ್ ಶ್ರೀರಾಮ ನೆನಪಾಗಿದ್ದಾನೆ.

ಖಂಡಿತ, ಅದರ ಗುರಿ ರಾಮಮಂದಿರ ನಿರ್ಮಾಣ ಅಲ್ಲವೇ ಅಲ್ಲ, ಶ್ರೀರಾಮನ ಅಪ್ಪನಾಣೆಗೂ ಅದಕ್ಕೆ ರಾಮ ಮಂದಿರ ನಿರ್ಮಾಣ ಮುಖ್ಯವೇ ಅಲ್ಲ. ರಾಮನ ಹೆಸರಲ್ಲಿ ಸಮಾಜದಲ್ಲಿ ಬಿರುಕು ಮೂಡಿಸಬೇಕು, ನಂತರ ಸಣ್ಣಪುಟ್ಟ ಗಲಾಟೆಗಳು ನಡೆಯಬೇಕು. ಮುಸ್ಲಿಮರನ್ನು ಮಂಇರ ವಿರೋಧಿಗಳು ಎಂದು ಬಿಂಬಿಸಬೇಕು, ಇದಕ್ಕೆ ವಿಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಬೇಕು…… ಇದನ್ನೇ ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಗಲಭೆ, ಹಿಂಸಾಚಾರ ಎಬ್ಬಿಸುವುದು ಅದರ ಮೊಡರೆಸ್ ಅಪರೆಂಡಿ-ಕಾರ್ಯವಿಧಾನ…ಹೆಣಗಳು ಬೀಳಬೇಕು, ಮುಸ್ಲಿಮರದು, ಹಿಂದೂಗಳದು….ಒಟ್ಟು ಹೆಣಗಳು ಬೀಳಬೇಕು, ರಕ್ತಪಾತವಾಗಬೇಕು…’ಹಿಂದೂಗಳು ಅಪಾಯದಲ್ಲಿ’ ಎಂದೆಲ್ಲ ಹುಯಿಲೆಬ್ಬಿಸಿ ಹಿಂದೂ-ಮುಸ್ಲಿಂ ಧ್ರುವೀಕರಣ ನಡೆಯಬೇಕು, ೨೦೧೯ರ ಚುನಾವಣೆ ಇದರ ಆಧಾರದ ಮೇಲೇ ನಡೆದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು…..
* * * *

ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ ನಡೆದ ‘ರಾಮ ಮಂದಿರಕ್ಕಾಗಿ ಜನಾಗ್ರಹ’ ಸಭೆಯಲ್ಲಿ ಪೇಜಾವರ ಶ್ರೀಗಳು ಮಾತಾಡಿ, ‘ರಾಮಮಂದಿರಕ್ಕಾಗಿ ಮುಸ್ಲಿಮರು ಮತ್ತು ಕ್ರೈಸ್ತರು ಕೈ ಜೋಡಿಸಬೇಕು’ ಎಂದು ಫರ್ಮಾನು ಹೊರಿಸಿದ್ದಾರೆ. ಮುಂದುವರೆದು, ‘ಹಿಂದೂ-ಮುಸ್ಲಿಂ ಸೌಹಾರ್ದತೆ ಕಾಪಾಡಲು ಮುಸ್ಲಿಮರಿಗೆ ಇದೊಂದು ಒಳ್ಳೆಯ ಅವಕಾಶ’ ಎನ್ನುತ್ತಾರೆ. ಕೇಳಲಿಕ್ಕೆ ಹಿತ ಎನಿಸಬಹುದಾದ ಈ ಮಾತಿನ ಹಿಂದೆ ಸಂಘದ ಅಜೆಂಡಾ ಇದೆ. ಅಂದರೆ ಈ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದತೆ ಕೆಡಲು ಮುಸ್ಲಿಮರ ತಪ್ಪುಗಳೇ ಕಾರಣ ಎಂದು ಸುಳ್ಳು ಆರೋಪವನ್ನು ಮುಸ್ಲಿಮರ ತಲೆಗೆ ಕಟ್ಟುವ ಹುನ್ನಾರ ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. 1992, 2002 ರ ಹಿಂಸಾಚಾರಗಳಿಗೂ ಮೊದಲು ಇದೇ ರೀತಿ ವ್ಯವಸ್ಥಿತ ಅಪಪ್ರಚಾರ ಮಾಡಲಾಗಿತ್ತು ಎಂಬುದನ್ನು ಮರೆಯದಿರೋಣ.

ಬರುವ ತಿಂಗಳು ಸುಪ್ರಿಂ ಕೋರ್ಟ್ ವಿಚಾರಣೆಯ ಸ್ವರೂಪವನ್ನು ನಿರ್ಧರಿಸುವುದು ಗೊತ್ತಿದ್ದೂ ಪೇಜಾವರಶ್ರೀಗಳು ಸುಗ್ರೀವಾಜ್ಞೆಗೆ ಆಗ್ರಹಿಸುವುದರ ಹಿಂದೆ ಮಸಲತ್ತಿದೆ. ನಿರ್ಣಾಯಕ ಘಟ್ಟಗಳಲ್ಲಿ ಇಂತಹ ಪಾತ್ರ ನಿರ್ವಹಿಸುತ್ತಲೇ ಬಂದಿರುವ ಅವರು ಈಗ ತಮ್ಮ ಪಾತ್ರದ ಅಂತಿಮ ದೃಶ್ಯಕ್ಕೆ ರೆಡಿಯಾದಂತಿದೆ.

ಇದೇ ಹೊತ್ತಲ್ಲಿ, ಅಖಿಲ ಭಾರತ್ ಅಖಾಡ ಪರಿಷತ್ ಎನ್ನುವ ಸಾಧು ಸಂತರ ಗುಂಪು ಮುಸ್ಲಿಮರ ಜೊತೆ ಮಾತುಕತೆ ನಡೆಸುವ ಮೂಲಕ ಮಂದಿರ ಕಟ್ಟುತ್ತೇವೆ ಎನ್ನುತ್ತದೆ. ಮುಖ್ಯವಾಹಿನಿ ಮಾಧ್ಯಮಗಳು, ‘ಹಿಂದೂತ್ವ ಗುಂಪುಗಳಲ್ಲಿ ಭಿನ್ನಮತ’ ಎಂದು ಬರೆದು, ಮತ್ತದೇ ಹಿಂದಿನ ತಪ್ಪನ್ನು (ಬೇಕೆಂತಲೇ) ಮಾಡಿವೆ. ಈ ಅಖಾಡದ ಉದ್ದೇಶವೂ ಮುಸ್ಲಿಮರನ್ನು ಬಲಿಪಶು ಮಾಡುವುದೇ ಆಗಿದೆ ಮತ್ತು ಇದು ಆರ್‌ಎಸ್‌ಎಸ್ ಸ್ಕ್ರಿಪ್ಟ್‌ನ ಭಾಗವೇ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.

ವಿವಾದಿತ ಪ್ರದೇಶ ತನ್ನ ಆಸ್ತಿ ಎಂದು ಭ್ರಮಿಸಿರುವ ವಿಎಚ್‌ಪಿ, ಆ ಜಾಗವನ್ನು ತನ್ನ ಸುಪರ್ದಿಗೆ ಒಪ್ಪಿಸಿ ಮಂದಿರ ನಿರ್ಮಾಣ ಆರಂಭಿಸಲು ಅನುವು ಮಾಡಿ ಕೊಡಬೇಕು ಎನ್ನುತ್ತಿದೆ. ಕೇಂದ್ರ ಸಚಿವ ಗಿರಿರಾಜ್‌ಸಿಂಗ್ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಗದಿದ್ದರೆ ಅನಾಹುತಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾನೆ. ರಾಜ್ಯಸಭಾ ಸದಸ್ಯ ಮತ್ತು ಆರ್‌ಎಸ್‌ಎಸ್ ಸಿದ್ದಾಂತಿ ರಾಕೇಶ್ ಶರ್ಮಾ ಚಳಿಗಾಲ ಅಧಿವೇಶನದಲ್ಲಿ ಮಂದಿರಕ್ಕಾಗಿ ಖಾಸಗಿ ಮಸೂದೆ ಮಂಡಿಸುತ್ತಾನಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಆತ, ‘ನೀವು ಮಂದಿರದ ಪರವೋ, ವಿರೋಧವೋ’ ಎಂಬುದನ್ನು ಹೇಳಬೇಕು ಎಂದು ರಾಹುಲ್ ಗಾಂಧಿ, ಸೀತಾರಾಮ್ ಯೆಚೂರಿ, ಮಾಯಾವತಿ ಮುಂತಾದ ವಿಪಕ್ಷ ನಾಯಕರನ್ನು ಆಗ್ರಹಿಸಿದ್ದಾನೆ. ಮಂದಿರ ನಿರ್ಮಾಣಕ್ಕೆ ವಿಪಕ್ಷಗಳೇ ಮುಖ್ಯವಾಗಿ ಕಾಂಗ್ರೆಸ್ಸೇ ಅಡ್ಡಿ ಎಂಬ ಭಾವ ಸೃಷ್ಟಿಸುವ ಭಾಗವಾಗಿ ಈ ‘ಮಸೂದೆ’ ಡ್ರಾಮಾ ತಯ್ಯಾರಿ ನಡೆಯುತ್ತಿದೆ.

ಈ ಅಜೆಂಡಾದ ಪ್ರಮುಖ ಭಾಗವಾಗಿರುವ ಫಲಾನುಭವಿ ಪ್ರಧಾನಿ, ಮಂದಿರ ವಿಷಯ ಬೇಗ ಇತ್ಯರ್ಥ ಆಗದಂತೆ ನ್ಯಾಯಾಲಯದ ಮೇಲೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದು ಚುನಾವಣಾ ಪ್ರಚಾರದಲ್ಲಿ ನಿರ್ಲಜ್ಜವಾಗಿ ಹೇಳಿದ್ದಾರೆ. ಹೇಳಿಕೊಳ್ಳಲೂ ಯಾವ ಸಾಧನೆಯೂ ಇಲ್ಲ, ಜನರ ದೈನಂದಿನ ಬದುಕು ಹದಗೆಡಲು ಮಾಡಿದ ಕೆಲಸಗಳಿಗೆ ಲೆಕ್ಕವಿಲ್ಲ. ಹೀಗಾಗಿ ಪ್ರಧಾನಿಗೆ ರಾಮನ ಪಾದ ಬಿಟ್ಟರೆ ಗತಿಯಿಲ್ಲ. ಅವರ ಅಜೆಂಡಾದ ಪ್ರಕಾರ ಕೋಮು ಧ್ರುವೀಕರಣ ಆಗಬೇಕು, ಅದಾಗಬೇಕೆಂದರೆ 1992 ಮತ್ತು 2002ರ ಹಿಂಸಾಚಾರಗಳು ಸಂಭವಿಸಬೇಕು… ಈಗ ನಡೆಯುತ್ತಿರುವುದು ಇದಕ್ಕೆ ಬೇಕಾದ ಪೂರ್ವಸಿದ್ದತೆಗಳು ಅಷ್ಟೇ.

ಈಗಲೇ ಜನರು ಇದನ್ನು ಅರಿತುಕೊಂಡರೆ, ಭೀಕರ ಅನಾಹುತವನ್ನು ತಪ್ಪಿಸಬಹುದು. ದೆಹಲಿಯಲ್ಲಿ ನಡೆದ ರೈತರ ರ‍್ಯಾಲಿ ಈ ದಿಸೆಯಲ್ಲಿನ ಆಶಾದಾಯಕ ಬೆಳವಣಿಗೆ. ಧರ್ಮದ ವಿಚಾರ ಬಿಟ್ಟು ಬದುಕಿನ ಸಂಕಟಗಳ ಕುರಿತು, ಅವುಗಳ ಪರಿಹಾರ ದಾರಿಗಳ ಕುರಿತು ಜನ ಯೋಚಿಸತೊಡಗಿದರೆ ಸಂಘದ ಸಂಚು ಮಣ್ಣುಪಾಲಾಗುವುದು ಖಚಿತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...