Homeಕರ್ನಾಟಕಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

ಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

- Advertisement -
- Advertisement -

| ಶುದ್ಧೋದನ |

ಉತ್ತರಕನ್ನಡದ ಸೋಶಿಯಲ್ ಮೀಡಿಯಾದಲ್ಲೀಗ ಕೇಸರಿ ಕುಮಾರರಿಬ್ಬರ ಗುದಮುರಗಿ ಜೋರು ಸದ್ದು ಮಾಡುತ್ತಿದೆ. ಬಿಜೆಪಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಮತ್ತು ಕೇಸರಿ ಭಾಷಣ`ಕೋರ’ ಚಕ್ರವರ್ತಿ ಸೂಲಿಬೆಲೆ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುತ್ತಿರೋದು ರೋಚಕವಿದೆ. ಹಾಗೆ ನೋಡಿದರೆ ಮೊನ್ನೆ ಮುಗಿದ ಇಲೆಕ್ಷನ್ ಸಂದರ್ಭದಲ್ಲೇ ಮಾಣಿಗೆ ಟಿಕೆಟ್ ಕೊಡಬಾರದೆಂದು ದೊಡ್ಡ ಕೂಗೆದ್ದಿತ್ತು. ಆತನ ಬದಲಿಗೆ ನಮೋ ಬ್ರಿಗೇಡ್‍ನ ಪ್ರೊಪ್ರೇಟರ್ ಚಕ್ರವರ್ತಿ ಸೂಲಿಬೆಲೆ ಹೆಸರು ತೇಲಿ ಬಂದಿತ್ತು. ಸ್ಥಳೀಯ ಆರೆಸ್ಸೆಸ್-ಹಿಂಜಾವೇ ಪಡೆಯೇ ಮಾಣಿ ವಿರುದ್ಧ ಮುರಕೊಂಡು ಬಿದ್ದಿತ್ತು. ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರ ತಿರಸ್ಕಾರ, ತಾತ್ಸಾರಕ್ಕೆ ತುತ್ತಾಗಿರುವ ಮಾಣಿಗೆ ಟಿಕೆಟ್ ಕೊಡಬಾರದೆಂದು ಉತ್ತರ ಕನ್ನಡದ ಆರೆಸ್ಸೆಸ್‍ನ ಒಂದು ತಂಡ ಪ್ರಬಲ ಹೋರಾಟ ಮಾಡಿತ್ತು. ಉತ್ತರ ಕನ್ನಡ ಸಂಘಪರಿವಾರದ ಕಲ್ಲಡ್ಕ, ಹನ್ಮಂತ ಶಾನಭಾಗ್ ಎರಡೂ ಕಡೆ “ಆಟ” ಆಡಿದ್ದರು.

ಅಂತಿಮವಾಗಿ ಮಾಣಿಗೇ ಟಿಕೆಟ್ ಸಿಕ್ಕಿತು. ಆತ ಗೆದ್ದೂ ಬಿಟ್ಟ. ಆದರೆ ಬಿಜೆಪಿ ಒಳಮನೆಯ ಬೇಗುದಿ ಕಮ್ಮಿ ಆಗಲಿಲ್ಲ. ಸೂಲಿಬೆಲೆ ಟೀಮಂತೂ ಮೋದಿ ಮತ ಭಿಕ್ಷೆಯಿಂದ ಗೆದ್ದಿರುವ ಮಾಣಿ ಧೀಮಾಕಿಂದ ಬೀಗುವುದು ಬೇಕಾಗಿಲ್ಲ ಎಂಬ ರಹಸ್ಯ ಅಭಿಯಾನವನ್ನೇ ಹುಟ್ಟುಹಾಕಿತು! ಮಾಣಿ ಮಾಡಿದ ಜನದ್ರೋಹದ ಪಾಪಕ್ಕೇ ಮಂತ್ರಿಯಾಗದೆ ಮೂಲೆ ಪಾಲಾಗಿದ್ದಾನೆಂದು ಆತನ ವಿರೋಧಿ ಬಳಗ ತಿವಿಯತೊಡಗಿತ್ತು. ಇದೆಲ್ಲದರಿಂದ ಮಾಣಿ ಕೊತಕೊತ ಕುದಿಯುತ್ತಲೇ ಇದ್ದ. ತನಗೆ ಅಡ್ಡಗಾಲು ಹಾಕಿದವರನ್ನೆಲ್ಲಾ ಒಬ್ಬೊಬ್ಬರಾಗಿ ಸಂಹರಿಸಲು ಆತ ಸ್ಕೆಚ್ ರೆಡಿಮಾಡಿಕೊಂಡಿದ್ದ. ಸಂಘಪರಿವಾರದಲ್ಲಿ ತನಗಿರುವ ಸಂಪರ್ಕ ಬಳಸಿಕೊಂಡು ಮಾಣಿ ಈಗ ಜಿಲ್ಲಾ ಚೆಡ್ಡಿ ಪಡೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಿದ್ದಾನೆ. ತನಗೆ ವಿರೋಧ ಮಾಡಿದ ಜಿಲ್ಲಾ ಆರೆಸ್ಸೆಸ್, ಹಿಂಜಾವೇ ಮುಖಂಡರನ್ನು ಸಂಘಟನೆಯ ಹುದ್ದೆಗಳಿಂದ ಕಿತ್ತುಹಾಕಿಸುತ್ತಿದ್ದಾನೆ. ಈಗಾಗಲೇ ಜಿಲ್ಲಾಮಟ್ಟದ ಒಬ್ಬ ಕಾರ್ಯವಾಹಕ ಮತ್ತು ಭಟ್ಕಳದ ಆರೆಸ್ಸೆಸ್ ಲೀಡರ್‍ಗೆ ಸ್ಥಾನ ಚ್ಯುತಿ ಮಾಡಲಾಗಿದೆ. ಎಲ್ಲಾ ತಾಲ್ಲೂಕಿನ ಬಿಜೆಪಿ-ಆರೆಸ್ಸೆಸ್‍ನಲ್ಲಿ ಮಾಣಿ ಮಾರಿಹಬ್ಬ ನಡೆಯಲಿದೆ!

ಇನ್ನೊಂದೆಡೆ ಮಾಣಿ ಬಂಡವಾಳ ಬಯಲು ಮಾಡುವ ಆನ್‍ಲೈನ್ ಕಸರತ್ತು ನಡೆಯಲಾರಂಭಿಸಿದೆ. ಚಕ್ರವರ್ತಿ ಸೂಲಿಬೆಲೆ, ಮಾಣಿ ಅಯೋಗ್ಯತೆಯನ್ನು ವ್ಯವಸ್ಥಿತವಾಗಿ ಜಗಜ್ಜಾಹೀರು ಮಾಡುತ್ತಿದ್ದಾನೆ. ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯ ಸೋಷಿಯಲ್ ಮೀಡಿಯಾ ಅಭಿಯಾನ ತನ್ನ ತೇಜೋವಧೆ ಮಾಡುವ ಹಿಕಮತ್ತೆಂಬ ಭಾವನೆ ಮಾಣಿಯದು. ಆಸ್ಪತ್ರೆ ಆಗದಿರುವುದು ಸಂಸದನ ಅಸಾಮಥ್ರ್ಯ ಬಿಂಬಿಸುತ್ತಿದೆ ಎಂಬಂತೆ ಪ್ರಚಾರ ಮಾಡಲಾಗಿತ್ತು. ಇದರ ಹಿಂದೆ ತನ್ನ ಹಿತಶತೃ ಸೂಲಿಬೆಲೆ ಇದ್ದಾನೆಂಬ ಖಚಿತ ನಂಬಿಕೆ ಮಾಣಿಯದು. ಹಾಗಾಗಿ ಆತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇಡುವವರನ್ನೇ ತನ್ನ ಟ್ವಿಟರ್ ಖಾತೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು. ಅಷ್ಟೇ ಅಲ್ಲ, ಆಸ್ಪತ್ರೆಗಾಗಿ ಮನವಿ ಹಿಡಿದುಕೊಂಡು ಬಂದ ಹುಡುಗರಿಗೆ ರೇಗಿ ಸೋಷಿಯಲ್ ಮೀಡಿಯಾದವರಿಂದಲೇ ಆಸ್ಪತ್ರೆ ಮಾಡಿಸಿಕೊಳ್ಳಿ ಎಂದಬ್ಬರಿಸಿದ್ದ.

ಈ ಜಗಳ ಸೂಲಿಬೆಲೆ ಮತ್ತು ಅನಂತ್ಮಾಣಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಚಾಮಗೋಚರವಾಗಿ ಬೈದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಇವರ ಕಾಲೆಳೆದಾಟ ಫೇಸ್ಬುಕ್, ವಾಟ್ಸಾಪ್‍ನಲ್ಲಿ ಕದನ ಕುತೂಹಲ ಕೆರಳಿಸಿದೆ. ಗೆದ್ದವರ ಈ ಗದ್ದಲ ವಿರೋಧ ಪಕ್ಷಗಳಿಗೆ ಮಜಾ ನೀಡುತ್ತಿದ್ದರೆ, ಬಿಜೆಪಿಯಲ್ಲಿ ಮುಜುಗರ ಮೂಡಿಸಿದೆ.

ಇದೆಲ್ಲದರಿಂದ ಒಂದು ಹಂತದಲ್ಲಿ ತಬ್ಬಿಬ್ಬಾದ ಸೂಲಿಬೆಲೆ ಜಗಳ ಸಾಕು, ಕೆಲಸ ಮಾಡೋಣ ಎಂಬ ಟ್ವೀಟ್ ಮಾಡಿದರೂ ಆರೋಪ-ಪ್ರತ್ಯಾರೋಪದ ಬಯಲಾಟ ಮಾತ್ರ ನಿಂತಿಲ್ಲ. ಮೋದಿ ಮತ ಭಿಕ್ಷೆಯಿಂದ ಗೆದ್ದ ಸಂಸದರು ಧಿಮಾಕು ತೋರಿಸದೆ ಕೆಲಸ ಮಾಡಬೇಕು ಎಂದು ಸೂಲಿಬೆಲೆ ಟ್ವಿಟಿಸಿದ್ದೇ ಬಿಜೆಪಿಯಲ್ಲಿ ಕಂಪನ ಸೃಷ್ಠಿಯಾಗಲು ಮೂಲಕಾರಣ. ಸದಾನಂದ ಗೌಡ, ಶೋಭಾ ಕರಂದ್ಲಾಜೆಯಂಥ ದೊಡ್ಡವರೆ ಸೂಲಿಬೆಲೆ ಮಾತಿಂದ ಕೆರಳಿ ಕೆಂಡವಾದರು. ನಮಗೆ ಬುದ್ಧಿ ಹೇಳಲು ಚಕ್ರವರ್ತಿ ಯಾರು? ಎಂದು ಎಗರಾಡಿದರು.

ತನಗೆ ಟಿಕೆಟ್ ತಪ್ಪಲು ಕಾರಣವಾದ ನಾಯಕರನ್ನು ನಿರ್ದಿಷ್ಟವಾಗಿ ಗುರಿಮಾಡಿಕೊಂಡೇ ಸೂಲಿಬೆಲೆ ಸಂಸದರ ಬಣ್ಣ ಬಯಲಾಗಿಸುತ್ತಿದ್ದಾನೆ. ಇದು ಬಿಜೆಪಿಯ ಅಧಿಕಾರಸ್ಥರ ಚೇಲಾಗಳನ್ನು ಕೆರಳಿಸಿದೆ. ಜನಪ್ರತಿನಿಧಿಗಳು ಕೆಲಸ ಮಾಡಲಿ ಎಂದು ಹೇಳೋದು ತಪ್ಪೇನಲ್ಲ. ಆದರೆ ಹಾಗೆ ಹೇಳಿದ್ದು ಸೂಲಿಬೆಲೆಯಾದ್ದರಿಂದ ಬಿಜೆಪಿಯಲ್ಲಿ ಬೆಂಕಿಹೊತ್ತಿಕೊಂಡಿತು. ತನ್ನಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆಂದು ಸೂಲಿಬೆಲೆ ಹೇಳಿದ್ದಾನೆಂದು ಕಿಡಿ ಹೊತ್ತಿಸಲಾಯಿತು. ಸೂಲಿಬೆಲೆ ಹಾಗೆ ಹೇಳಿಯೇ ಇಲ್ಲವೆಂದು ಆತನ ಬೆಂಬಲಿಗ ನೆಟ್ಟಿಗರ ವಾದ. ಅಸಲಿಗೆ ಆತ ಹಾಗೆ ಹೇಳಿಯೂ ಇರಲಿಲ್ಲ, ಅಂಥ ಸಂದೇಶವೂ ಲಭ್ಯವಿಲ್ಲ. ಆರು ಸಲ ಸಂಸದರಾದವರಿಗೆ, ಎಂಟು ಸಲ ಮಂತ್ರಿಯಾದವರಿಗೆ ಜನಸಾಮಾನ್ಯರ ಅಳಲಿಗೆ ಸ್ಪಂದಿಸಲಾಗದಾ? ಎಂದಾತ ಟ್ವಿಟಿಸಿದ್ದನಷ್ಟೇ. ಇದು ಮಾಣಿಗೆ ಚೆಡ್ಡಿಯೊಳಗೆ ಇರುವೆ ಕಡಿದಂತೆ ಚಡಪಡಿಕೆ ತಂದಿದೆ.

ಇದರ ಬೆನ್ನಿಗೇ ಕೊಡಗಿನಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಅದಕ್ಕೆ ಅಲ್ಲಿಯ ಸಂಸದ ತಕ್ಷಣ ಸ್ಪಂದಿಸಿದ್ದಾರೆ. ಉ.ಕನ್ನಡದ ಎಂಪಿ ಒಣ ರುಬಾಬು ಮಾಡುತ್ತ ತಲೆ ತಪ್ಪಿಸಿಕೊಳ್ಳುತ್ತಿದ್ದ. ಈ ಹೊತ್ತಲ್ಲಿ ಸೂಲಿಬೆಲೆ ಮಾಡಿದ ಟ್ವೀಟ್ ಮಾಣಿ ಬೆಂಬಲಿಗರಲ್ಲಿ ಆಕ್ರೋಶ ಮೂಡಿಸಿದೆ. ಈಗ ಟ್ರೋಲ್‍ಗಳು ಬರಪೂರ ನಡೆಯುತ್ತಿದೆ. ಬಿಜೆಪಿಯೊಳಗಿನ ಬಡಿದಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...