Homeನ್ಯಾಯ ಪಥಇಂದಿನ ಸಮಾಜದ ತಲ್ಲಣಗಳು: ಎಚ್.ಎಸ್ ದೊರೆಸ್ವಾಮಿರವರ ಲೇಖನ

ಇಂದಿನ ಸಮಾಜದ ತಲ್ಲಣಗಳು: ಎಚ್.ಎಸ್ ದೊರೆಸ್ವಾಮಿರವರ ಲೇಖನ

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಇಂದಿನ ಸಮಾಜ ಸಮಾಜವೇ ಅಲ್ಲ. ಒಂದು Human Jungle. ಪ್ರತಿಯೊಬ್ಬನೂ ತನಗಾಗಿ ಬದುಕುವವನು. ಯಾರಿಗೂ ಸಾಮಾಜಿಕ ಪ್ರಜ್ಞೆ ಇಲ್ಲ. ಸಮಾಜದಲ್ಲಿ ಬಡವ-ಬಲ್ಲಿದ, ಈ ಜಾತಿ-ಆ ಜಾತಿ, ಶೋಷಕರು-ಶೋಷಿತರು, ವಿದ್ಯಾವಂತ, ಕೋಟ್ಯಾಧಿಪತಿ, ಭಿಕ್ಷುಕ ಹೀಗೆ ಭೇದಾಸುರನ ಹಾವಳಿ ಇದೆ.

ಸಮಾಜದ ಜನ ಜೇಡಿಮಣ್ಣಿನಂತಿರಬೇಕು. ಜೇಡಿಮಣ್ಣಿನಲ್ಲಿ ಕಣಕಣಕ್ಕೆ ಘರಿಷ್ಠ ತಾಗಿ ಅಂಟಿಕೊಂಡಿರುತ್ತದೆ. ಆದರೆ ನಮ್ಮ ಸಮಾಜ ಮರಳು ದಿಬ್ಬದಂತಿದೆ. ನೋಡುವುದಕ್ಕೆ ಮರಳ ಕಣಗಳು ಒಂದಕ್ಕೊಂದು ಅಂಟಿಕೊಂಡಂತೆ ಕಂಡುಬಂದರೂ ಒಂದು ಬಿರುಗಾಳಿ ಬೀಸಿದಾಗ ಪ್ರತಿ ಕಣವೂ ಒಂದೊಂದು ದಿಕ್ಕಿಗೆ ಚದುರಿಹೋಗುತ್ತದೆ. ಜೇಡಿಮಣ್ಣಿನಲ್ಲಿ ಕಣಕಣವೂ ಗಟ್ಟಿಯಾಗಿ ಅಂಟಿಕೊಂಡಿರುವಂತೆ ನಮ್ಮ ಸಮಾಜ ಇರಬೇಕು. ನೆಹರೂ ಅವರ ಕಾಲದಲ್ಲಿ ಚೀನಾ, ಭಾರತ ಯುದ್ಧ ನಡೆಯಿತು. ಭಾರತ ಪೂರ್ವ ರಾಜ್ಯಗಳ ಟೀ ತೋಟದ ಮಾಲೀಕರು ಹಣ, ಒಡವೆ, ತೆಗೆದುಕೊಂಡು ಪ್ರಾಣ ರಕ್ಷಣೆಗೋಸ್ಕರ ತಮ್ಮ ಮನೆಮಂದಿಯನ್ನು ಕಟ್ಟಿಕೊಂಡು ಪಟ್ಟಣಗಳಿಗೆ ಓಡಿಹೋದರು. ಅವರಿಗೆ ತಮಗಾಗಿ ದುಡಿಯುತ್ತಿದ್ದ ಜನರನ್ನು ರಕ್ಷಿಸಬೇಕೆಂದು ಅನ್ನಿಸಲೇ ಇಲ್ಲ.

ಇದು ಪಟ್ಟಭದ್ರ ಹಿತಾಸಕ್ತಿಗಳ ಸಾಮಾಜಿಕ ನಡವಳಿಕೆ. ನನಗಾಗಿ ಸಮಾಜ, ಸಮಾಜಕ್ಕಾಗಿ ನಾನು ಎಂಬ ಭಾವನೆ ಜನರಲ್ಲಿ ಬೆಳೆಯಬೇಕು ಎಂದು ಸರ್ವೋದಯ ಬಯಸುತ್ತದೆ. ಸ್ವಾರ್ಥಕ್ಕಾಗಿ ಸಮಷ್ಠಿಯನ್ನು ಬಲಿಕೊಡುವ ಸಮಾಜ ಇದು. ಸಮಾಜವನ್ನು ಅಹಿಂಸೆ, ಸತ್ಯ, ಸಮಾನತೆ, ದಯೆ, ಇವುಗಳ ಆಧಾರದ ಮೇಲೆ ಕಟ್ಟಬೇಕು. ಹಸಿವು, ನೋವು, ರೋಗರುಜಿನ ಮತ್ತು ಬಡತನ ನಿರ್ಮೂಲನೆಯ ಮೂಲಕ ಎಲ್ಲರಲ್ಲೂ ಸಂತೋಷ, ಸಮಾಧಾನಗಳನ್ನು ಬೆಳೆಸಿ ಈ ದುಷ್ಟ ಸಮಾಜವನ್ನು ಅಹಿಂಸಾತ್ಮಕ ಮಾರ್ಗಗಳಿಂದ ಬದಲಾವಣೆಗೊಳಿಸಿ ಎಂದು ಗಾಂಧೀಜಿ ಹೇಳುತ್ತಾರೆ.

ಗಾಂಧೀಜಿಗೆ ಗುರಿಯಷ್ಟೇ, ಗುರಿ ತಲುಪುವ ಮಾರ್ಗವೂ ಮುಖ್ಯವಾಗಿತ್ತು. ಗುರಿಯನ್ನು ಅಪಮಾರ್ಗದಲ್ಲಿ ತಲುಪುವುದು ಕೂಡದು. ಅಹಿಂಸಕ ಸಮಾಜವನ್ನು ಹಿಂಸೆಯ ಮೂಲಕ ಕಟ್ಟಲು ಸಾಧ್ಯವಾಗುವುದಿಲ್ಲ ಎಂಬುದು ಗಾಂಧೀಜಿಯವರ ದೃಢ ನಿಲುವು.

ಮನುಷ್ಯನಿಂದ ಮನುಷ್ಯನ ಅಭ್ಯುದಯವೇ ಗಾಂಧೀಜಿಯವರ ಪರಮ ಧ್ಯೇಯ. ಎಲ್ಲಾ ಅಭಿವೃದ್ಧಿಯ ಕಾರ್ಯಕ್ರಮವೂ ಮಾನವನ ಉತ್ಕರ್ಷಕ್ಕೆ ಸಹ ಅನುಕೂಲಕರವಾಗಿರಬೇಕು. ಅಭಿವೃದ್ಧಿಯ ಮುಖ್ಯ ಗುರಿ ಸಮಾಜದಿಂದ ತಿರಸ್ಕøತನಾದ ಬಡವನ ಬಡತನ ನೀಗುವುದು. ವಿಚಾರಹೀನ ಅಭಿವೃದ್ಧಿಯ ಕಾರಣದಿಂದ ಮನುಷ್ಯನ ಭೌತಿಕ, ಮಾನಸಿಕ ಮತ್ತು ನೈತಿಕ ಜೀವನದ ಅವನತಿ ಆಗಿದೆ. ತಂತ್ರಜ್ಞಾನದ ಬೆಳವಣಿಗೆಯನ್ನು 3 ಕಾರಣಗಳಿಗಾಗಿ ವಿರೋಧಿಸುತ್ತಾರೆ. ಜಟಿಲ ಮತ್ತು ಬೃಹತ್ ಯಂತ್ರೋದ್ಯಮ, ಕೇಂದ್ರೀಕೃತ ವ್ಯವಸ್ಥೆಗೆ ತೆರೆದುಕೊಳ್ಳುತ್ತದೆ. ಹಾಗೆಯೇ ಅದು ಸಣ್ಣ ಪ್ರಮಾಣದ ಉದ್ಯಮಗಳನ್ನು ನುಂಗಿ ಹಾಕುತ್ತದೆ. ಮನುಷ್ಯನ ಕಷ್ಟಕರ ದುಡಿಮೆಯನ್ನು ಹಗುರಗೊಳಿಸಲು ಯಂತ್ರದ ಅಗತ್ಯವಿದೆ. ಆದರೆ ಈ ಬೃಹತ್ ಯಂತ್ರಗಳು ಕಾರ್ಮಿಕನನ್ನು ನಿರುದ್ಯೋಗಿ ಮಾಡಿ ಬೀದಿಗೆಸೆಯುತ್ತದೆ ಅಥವಾ ಅವನನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆ.

ಭ್ರಷ್ಟಮುಕ್ತ ಆಡಳಿತ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಒಂದು ಸಾಧನ. ಮಾನವೀಯತೆ ಕಳೆದುಕೊಂಡವರು ಮಾನವ ಹಕ್ಕುಗಳ ಕಡು ವೈರಿಗಳು. ಮಾನವ ಹಕ್ಕುಗಳ ಪಾಲನೆಗಿಂತಲೂ ಮಾನವ ಹಕ್ಕುಗಳ ಉಲ್ಲಂಘನೆಯೂ ಈಗ ಸಮಾಜದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ನಕ್ಸಲ್‍ಬಾರಿಗಳನ್ನು ಹುಟ್ಟಿಹಾಕಿದ್ದು ದುಷ್ಟ ಆಡಳಿತ ಮತ್ತು ದೇಶದ ಕಡು ಬಡತನ.
ಪೊಲೀಸ್ ಠಾಣೆಗಳು, ನ್ಯಾಯಾಲಯಗಳು ಹೆಚ್ಚುತ್ತಿರುವುದು ಅಭಿವೃದ್ಧಿಯ ಲಕ್ಷಣಗಳಲ್ಲ. ಹೆಚ್ಚಿನ ಕಾನೂನುಗಳನ್ನು ಜನರ ಮೇಲೆ ಹೇರುವುದು ಪ್ರಗತಿಯ ಲಕ್ಷಣವಲ್ಲ. ಈ ಕಾನೂನುಗಳನ್ನು ಸರ್ಕಾರ ನಡೆಸುವವರನ್ನು ಟೀಕೆ ಮಾಡಿದವರ ಮೇಲೆ, ದುರಾಡಳಿತ ನಡೆಸುವುದನ್ನು ತಡೆಗಟ್ಟಲು ಹೋರಾಟ ಮಾಡುವವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ಬಯಸುವುದು ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿ ಮಾತ್ರ.

ಕಾನೂನು ಎಷ್ಟಿರಬೇಕು ಎಂದರೆ ಶರೀರದಲ್ಲಿ ಮಲವಿದ್ದಷ್ಟು ಮಾತ್ರ ಇರಬೇಕು. ಶರೀರವೆಲ್ಲವೂ ಮಲದಿಂದ ತುಂಬಿಕೊಂಡರೆ ಅದು ರೋಗರುಜಿನಗಳಿಗೆ, ಸಾವಿಗೆ ಕಾರಣವಾಗುತ್ತದೆ. ಕಾನೂನುಗಳನ್ನು ಬೆಳೆಸಿದಷ್ಟೂ ದೇಶದ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ ಎನ್ನುತ್ತಾರೆ ಪೂಜ್ಯ ವಿನೋಬಾ ಭಾವೆಯವರು.

ಈಗ ನಡೆಯುತ್ತಿರುವ ರಾಜಕೀಯ ಸಮರ ಸಮಾಜವನ್ನು ಒಡೆಯುತ್ತದೆ. ವಿಷಬೀಜ ಬಿತ್ತುತ್ತದೆ. ಸಿವಿಲ್ ವಾರ್‍ಗೆ ದಾರಿ ಮಾಡುತ್ತದೆ. ಧರ್ಮವನ್ನು, ಜಾತಿಗಳನ್ನೂ ರಾಜಕೀಯಕ್ಕೆ ಬೆರೆಸುವ ಕೆಲಸ ಎಲ್ಲ್ಲ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತಿದೆ.

ಮೌಲ್ಯಗಳ ಅಧಃಪತನವೇ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಿಂದ ಕೂಡಿದ ಹೊಸ ಸಮಾಜವನ್ನು ಸೃಷ್ಠಿಸುವುದು ನಮ್ಮ ಗುರಿಯಾಗಬೇಕು.

ನಮ್ಮದು ಶ್ರೇಣೀಕೃತ ಸಮಾಜ. ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳೆಲ್ಲout of date ಆಗಿದೆ. ಈ ಮೌಲ್ಯಗಳೆಲ್ಲ ಆಮೂಲಾಗ್ರವಾಗಿ ಬದಲಾವಣೆಯಾಗಬೇಕಿದೆ. ಇದನ್ನು ವೈಜ್ಞಾನಿಕ ಕ್ರಾಂತಿಯ ಮೂಲಕ ಪರಿವರ್ತನೆ ಮಾಡಬೇಕು.

Rule of Law ಪ್ರಕಾರ ರಾಜ್ಯಾಡಳಿತ ನಡೆಸಬೇಕು. ಆಡಳಿತಗಾರರ ದುರಹಂಕಾರದ ವಿರುದ್ಧ ಜನ ಸಿಡಿದೇಳಬೇಕು. ಹಿಂಸಾಚಾರದ ವಿರುದ್ಧವಾಗಿ ಜನ ಸಂಘಟನೆ ಆಗಬೇಕು. ಪ್ರತಿಯೊಬ್ಬ ಪ್ರಜೆಯೂ ಪರಾವಲಂಬಿಯಾಗದೇ ತನ್ನ ದುಡಿಮೆಯಿಂದ ಗೌರವಯುತ ಜೀವನ ನಡೆಸುವ ಸನ್ನಿವೇಶ ಸೃಷ್ಟಿಯಾಗಬೇಕು. ಸರ್ಕಾರ ಕೊಡುವ ಭಿಕ್ಷೆಗಾಗಿ ಕಾಯುವ ದುಸ್ಥಿತಿ ತೊಲಗಬೇಕು.

ಸುಳ್ಳು ಹೇಳಿಕೆಗಳನ್ನು ನೀಡುವ ಪೊಳ್ಳು ಘೋಷಣೆಗಳನ್ನು ಕೂಗುವ ಗೋಮುಖ ವ್ಯಾಘ್ರಗಳನ್ನು ಪರಿಣಾಮಕಾರಿಯಾಗಿ ಬಯಲಿಗೆಳೆಯಬೇಕು. ರಾಜಕೀಯ ಮತ್ತು ಉತ್ಪ್ರೇಕ್ಷೆ ಎರಡೂ ಹೆಣೆದುಕೊಂಡಿವೆ. ಅದನ್ನು ಬಯಲು ಮಾಡಬೇಕು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಗಳು ಅಸಹ್ಯ ರೀತಿಯಲ್ಲಿ ನಡೆಯುತ್ತಿವೆ. ಈ ಹೊಣೆಗೇಡಿ ಸದಸ್ಯರ ಹುಚ್ಚಾಟಗಳನ್ನು ಪ್ರಜೆಗಳಿಗೆ ಮನವರಿಕೆ ಮಾಡಿಕೊಟ್ಟು, ಎಲ್ಲ ಶಾಸಕರ ಮತ್ತು ಪಾರ್ಲಿಮೆಂಟ್ ಸದಸ್ಯರ ಮನೆಯ ಮುಂದೆ ಧರಣಿ ಮಾಡುವುದಾಗಬೇಕು. ಕುಟಿಲ ರಾಜಕೀಯ ಈಗ ವಿಜೃಂಭಿಸುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ಜನರು ಜಾಗೃತರಾಗುವುದು ಮಾತ್ರ ನಮ್ಮ ಇಂದಿನ ಸಾಮಾಜಿಕ ತಲ್ಲಣಗಳಿಗೆ ಪರಿಹಾರ ಒದಗಿಸಿಕೊಡಬಲ್ಲದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...