Homeಕರ್ನಾಟಕಎಸ್‍ಬಿಎಂ ಮತ್ತು ಎಟಿಎಂಗಳು, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿರುವ ಆನಂದ್‍ಸಿಂಗ್‍ಗಳೂ….

ಎಸ್‍ಬಿಎಂ ಮತ್ತು ಎಟಿಎಂಗಳು, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿರುವ ಆನಂದ್‍ಸಿಂಗ್‍ಗಳೂ….

‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ...’

- Advertisement -
- Advertisement -

‘ಶಾಸಕರು (ಮುಂಬೈನಲ್ಲಿರುವವರು) ರಾಜೀನಾಮೆ ನೀಡುವುದನ್ನು ಅಂಗೀಕರಿಸದಿರುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತೆ. ಅವರು ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದು….’

ಅರೆ ಇವ್ನಾ, ಅಂದರೆ ಈಗ ರಿಯಲ್ (ಎ)ಸ್ಟೇಟ್‍ಗಾಗಿ ಫೈಟ್ ಮಾಡ್ತಿರೋ ಎಸ್‍ಬಿಎಂ (ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ), ಎಂಟಿಬಿ ನಾಗರಾಜ್, ವರ್ಷದಿಂದ ಕುಮಟಳ್ಳಿ ಎಳಕೊಂಡು ಜಾರುತ್ತಲೇ ಇದ್ದರೂ ಡೆಸ್ಟಿನೇಷನ್ ತಲುಪಲು ತಿಣುಕಾಡ್ತಿರೋ ಜಾರಕಿಹೊಳಿ, ಗಣಿಧೂಳು ಕಾಣದಂತೆ ಪೌಡರ್ ಮೆತ್ತಿಕೊಂಡಿರೋ ಆನಂದಸಿಂಗ್, ಫೇಸ್‍ಬುಕ್‍ನಲ್ಲೇ ಕ್ಷೇತ್ರದ ಜನರ ಸೇವೆ ಮಾಡ್ತೀರೋ ಶಿವರಾಮ್ ಹೆಬ್ಬಾರ್, ಮುಂಬೈ ದಂಧೆ ಮೂಲಕವೇ ಇಲ್ಲಿ ಶಾಸಕರಾಗಿ ಮತ್ತೆ ಮುಂಬೈ ತಲುಪಿರೋ ನಾರಾಯಣಗೌಡ, ನಾಯಕರಿಗೆ ‘ಸಕಲ’ ವ್ಯವಸ್ಥೆ ಮಾಡಬಲ್ಲ ಚತುರ ಸುಧಾಕರ್, ಸಚಿವಗಿರಿ ಸಿಕ್ಕರೂ ಓಡಿ ಹೋಗಿರುವ ಶಂಕರ್, ನಾಗೇಶ್…….ಅಬ್ಬಬ್ಬಾ, ರಾಜೀನಾಮೆ ಸ್ವೀಕರಿಸದೇ ಇದ್ದರೆ ಇವರ ಬದುಕುವ ಹಕ್ಕಿನ ಉಲ್ಲಂಘನೆ ಆಗುತ್ತಾ?

ಅಯ್ಯೋ ಶಿವನೇ, ಇವರೆಲ್ಲ ರಾಜೀನಾಮೆ ನೀಡಿ ಬೇರೆ ವೃತ್ತಿಗೆ ಹೋಗಬಹುದಂತೆ! ‘ಬೇರೆ’ ಅಂದರೆ ಏನರ್ಥ? ಈಗಿರುವ ಶಾಸಕ ‘ವೃತ್ತಿ’ಯಿಂದ ಇನ್ನೊಂದು ದಂಧೆಗೆ ಅಲ್ಲವೇ? ಹಂಗಂದ್ರ, ಶಾಸಕನಾಗಿರುವುದೂ ಒಂದು ವೃತ್ತಿ ಅಂತೀರಾ ರೋಹ್ಟಗಿ ಸಾಹೇಬರೇ? ಇವರ್ಯಾರು ಈಗ ಬೇರೆ ವ್ಯವಹಾರವನ್ನೇ ಮಾಡ್ತಿಲ್ಲವೇ? ಈ ಪುಣ್ಯಾತ್ಮರು ಕ್ಷೇತ್ರವನ್ನೇ ಮರೆತು ಎಲ್ಲೋ ಓಡಿ ಹೋಗಿದ್ದಾರಲ್ಲ, ಅದು ನಮ್ಮ ಅಂದರೆ ಮತದಾರರ ಹಕ್ಕಿನ ಉಲ್ಲಂಘನೆ ಅಲ್ಲವೇ? ನಮಗಂತೂ ಗೊತ್ತಾಗ್ತಿಲ್ಲ. ಬಿಡ್ರಿ, ಅಲ್ಲಿ ಕುಳಿತ ಮೂರ್ಮಂದಿನೇ ತಲೆ ಕೆರೆದುಕೊಂಡು ನಾಳೆವರೆಗೆ ಏನ್ ಹೇಳಕ್ಕಾಗಲ್ಲ ಅಂದವ್ರೆ, ನಮ್ಮಂಥವರಿಗೇನು ಗೊತ್ತಾಗುತ್ತೆ…..

‘ಮೊಟ್ಟೆ ಮೊದಲೋ, ಕೋಳಿ ಮೊದಲೋ ಅನ್ನೋ ಥರ ಆಗಿದೆ. ರಾಜೀನಾಮೆ ಮೊದಲೋ, ಅನರ್ಹತೆ ಮೊದಲೋ ಅನ್ನಂಗಿಲ್ಲ.. ಎರಡೂ ಒಟ್ಟಿಗೆ ಸಂಬಂಧ ಹೊಂದಿವೆ…’

ಕರೆಕ್ಟು ವಕೀಲರೇ, ಫೆಬ್ರುವರಿ 11ಕ್ಕೆ ಮೊಟ್ಟೆಯೇ (ಜಾರಕಿ, ಕುಮಟಳ್ಳಿ ಅನರ್ಹತೆ) ಕೈಗೇ ಸಿಕ್ಕಿತ್ತಲ್ಲ್ಲ? ಇಲ್ಲಿವರೆಗೆ ಅದನ್ನ ಕೋಳಿ ಮಾಡೋಕೆ ಹೊರಟಿದ್ದರಾ? ಹುಂಜಗಳ ಸಹವಾಸದಲ್ಲಿ ಮೈಮರೆತು ಬಿಟ್ಟರಾ ನಿಮ್ಮ ಸಾಹೇಬರು…?

‘ಜುಲೈ 5ರಿಂದ 11ರವರೆಗೆ ಸ್ಪೀಕರ್ ಏನ್ ಮಾಡ್ತಿದ್ದರು?  ರಾಜೀನಾಮೆ ಅಂಗೀಕಾರ ಮಾಡೋಕೆ ಅಷಟೊಂದು ಟೈಮ್ ಬೇಕಿತ್ತಾ?’

ಪಟ್ಟಂತ ಡಿಸೈಡ್ ಮಾಡಬಹುದಿತ್ತು. ಆದರೆ ಸ್ಟಡಿ ಮಾಡಬೇಕು, ವಿಚಾರಣೆ ಮಾಡಬೇಕು ಅಲ್ಲವಾ? ಹಂಗೆಲ್ಲ ಏಕಾಏಕಿ ನಿರ್ಧಾರ ತಗೊಳ್ಳಕ್ಕೆ ಸಾಧ್ಯವಾ? ಈಗ ನೋಡಿ ಮುಂಬೈವಾಲಾಗಳು ದೆಹಲಿಗೆ ಅರ್ಜಿ ಸಲ್ಲಿಸಿ ಎಷ್ಟು ದಿನಾ ಆಯ್ತು? ನಿರ್ಧಾರ ತಗೊಳ್ಳಕ್ಕೆ ಆಯ್ತಾ? ತಲೆಕೆಟ್ಟು ಕೆರ ಹಿಡಿದು, ನೀವೇ ಒಂದ್ ಸಲ ಮುಂದಕ್ಕೆ ಹಾಕಿದ್ರಿ. ಇವತ್ ನೋಡಿದ್ರೆ 4 ತಾಸು ವಿಚಾರಣೆ ನಡೆಸಿದರೂ ಮೂರ್ಮಂದಿಗೆ ನಿರ್ಣಯ ತಗಳಕ್ಕೆ ಆಗ್ಲಿಲ್ಲ. ಅಂಥದ್ದರಲ್ಲಿ ಒಬ್ಬರೇ ಸ್ಪೀಕರ್ ಪಟ್ಟಂತ ನಿರ್ಣಯ ಕೈಗೊಳಬೇಕಿತ್ತು ಅನ್ನಾದು ನ್ಯಾಯವೇ ಸ್ವಾಮಿ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...