Homeಮುಖಪುಟಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

ಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-16

ಪರಸ್ಪರ ವೈಯ್ಯುಕ್ತಿಕ ವ್ಯಾಜ್ಯಗಳ ಪರಿಹಾರ

ಜನರು ಒಟ್ಟಾಗಿ ಕೆಲಸ ಮಾಡುತ್ತಿರುವಾಗ ಪರಸ್ಪರ ವೈಯ್ಯುಕ್ತಿಕ ಮತಭೇದ ಮತ್ತು ವ್ಯಾಜ್ಯಗಳು ಸ್ವಾಭಾವಿಕ, ಹಾಗೂ ಸರ್ವೇ ಸಾಮಾನ್ಯ. ಎಲ್ಲಾ ಸಂಬಂಧಗಳು ಈ ದಾರಿಯಿಂದಲೇ ಸಾಗಿ ಪರಿಪಕ್ವವಾಗಬೇಕು. ವ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಂದ ಆತಂಕಗಳು ಕಡಿಮೆಯಾಗಿ, ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ವ್ಯಾಜ್ಯ ಎಂದ ಕೂಡಲೇ ಇದನ್ನು ಭೀಕರ ಕಾಳಗ, ಹೊಡೆದಾಟ, ಬಡಿದಾಟ ಎಂದೇ ಭಾವಿಸಬೇಕಿಲ್ಲ. ಇದು ಸಣ್ಣ ಮತಬೇಧದಿಂದ ಪ್ರಾರಂಭವಾಗಿ ಕೊನೆಗೆ ಹೊಡೆದಾಟ-ಬಡಿದಾಟಕ್ಕೂ ತಲುಪಬಹುದು. ಆದ್ದರಿಂದ ಇದನ್ನು ಸಣ್ಣದಾಗಿರುವಾಗಲೇ ಪರಿಹಾರ ಮಾಡುವುದು ಜಾಣತನದ ಕಲೆ. ತಂಡದಲ್ಲಿ ಜನರು ಕೆಲಸ ಮಾಡುತ್ತಿರುವಾಗ ಒಂದು ವ್ಯಕ್ತಿ ಅಥವಾ ಗುಂಪು ಒಟ್ಟಾಗಿ ಸೇರಿ, ಓರ್ವ ವ್ಯಕ್ತಿ ಅಥವಾ ಇನ್ನೊಂದು ಗುಂಪನ್ನು ಅದರ ಗುರಿ ತಲುಪದಂತೆ ಮಾಡಿದಾಗ ಉಂಟಾಗುವ ಸನ್ನಿವೇಶವನ್ನು ಸಂಸ್ಥೆಗಳ ಒಳವ್ಯಾಜ್ಯ ಎನ್ನಬಹುದು. ಈ ರೀತಿಯ ವ್ಯಾಜ್ಯಗಳಲ್ಲಿ ಮುಖ್ಯವಾಗಿ ಕಾಣುವುದು

· ವೈಯುಕ್ತಿಕ ಅಥವಾ ಸಂಬಂಧದ ತಿಕ್ಕಾಟ: ಇದರಲ್ಲಿ ಸ್ವ-ಪ್ರತಿಷ್ಠೆ, ನಿಷ್ಠೆ, ಅವಿಶ್ವಾಸ, ಅಗೌರವ ಮುಂತಾದ ಸಮಸ್ಯೆ ಇರುತ್ತದೆ.

· ವ್ಯವಸ್ಥೆಯ ತಿಕ್ಕಾಟ: ಇದರಲ್ಲಿ ಅವ್ಯವಸ್ಥೆ ಅಂದರೆ ಏಕ-ಕಾಲಕ್ಕೆ ಇಬ್ಬರು ಒಂದೇ ವಸ್ತುವಿನ ಉಪಯೋಗಕ್ಕೆ ಮುಂದಾಗುವುದು ಅಂದರೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದಾದ ವ್ಯಾಜ್ಯ.

· ಆಸಕ್ತಿಗಳ ಗುದ್ದಾಟ: ಇಬ್ಬರ ಅಥವಾ ಎರಡು ಗುಂಪಿನ ಆಸಕ್ತಿ, ಆದ್ಯತೆ ಇವುಗಳಲ್ಲಿ ಒಂದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿಂದಾಗುವ ವ್ಯಾಜ್ಯ.

ಇಲ್ಲಿ “ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ” ಎಂಬ ಗಾದೆಯಂತೆ ಬರುವ ಐದು ಸನ್ನಿವೇಶಗಳು:

ಗೆಲುವು-ಸೋಲು: (Win-Lose) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ನಮ್ಮ ಪ್ರತಿಪಾದನೆಯೂ ಜಾಸ್ತಿಯಾದಾಗ ಮತ್ತು ಸಂಬಂಧಗಳಿಗೆ ಮಹತ್ವ ಕಡಿಮೆಯಾಗಿ ಸಹಕಾರವೂ ಇಲ್ಲದಾದಾಗ ಉಂಟಾಗುವ ಸನ್ನಿವೇಶವೇ ಪ್ರತಿಸ್ಪರ್ಧೆ. ಇದರಲ್ಲಿ ಹೇಗಾದರೂ ಎದುರಾಳಿಯನ್ನು ಸೋಲಿಸಬೇಕು ಮತ್ತು ನಾವು ಜಯಶಾಲಿಯಾಗಬೇಕು ಎನ್ನುವ ಹಂಬಲ. ಇದರಲ್ಲಿ ಒಂದು ಪಕ್ಷಕ್ಕೆ ಮಾತ್ರ ಜಯಕ್ಕೆ ಆಸ್ಪದವಿರುತ್ತದೆ.

ಸೋಲು-ಸೋಲು ಅಥವಾ ಹಿಂದೇಟು: (Lose – Lose) ಪದಾರ್ಥದ ಮೇಲೆ ನಮಗೆ ಆಸಕ್ತಿ ಇಲ್ಲವಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಮತ್ತು ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇಲ್ಲದೆ, ಸಹಕಾರದ ಕೊರತೆಯೂ ಇದ್ದಾಗ, ಸ್ಪರ್ಧೆಯಿಂದ ಹಿಂದೇಟು ಹಾಕಿ, ಉಮೇದುವಾರಿಕೆ ಹಿಂಪಡೆಯುವ ಸನ್ನಿವೇಶ. ಇದರಲ್ಲಿ ಇಬ್ಬರಿಗೂ ಸೋಲುವ ಸಾಧ್ಯತೆ/ಭೀತಿ, ಹಾಗಾಗಿ ಹಿಂದೇಟು. ಯಾರಿಗೂ ಜಯವಿಲ್ಲ. ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ನಡೆಯಲಿಲ್ಲ ಎಂಬ ವಿಷಾದ.

ರಾಜಿ: (Compromise) ಪದಾರ್ಥದ ಮೇಲೆ ನಮಗೆ ಆಸಕ್ತಿ ಮಧ್ಯಮವಾಗಿದ್ದು, ಪ್ರತಿಪಾದನೆಯೂ ಮಧ್ಯಮವಾದಾಗ ಹಾಗೂ ಸಂಬಂಧಗಳಿಗೆ ಮಹತ್ವ ಮಧ್ಯಮವಾಗಿದ್ದು, ಸಹಕಾರದ ಅಪೇಕ್ಷೆಯೂ ಮಧ್ಯಮವಾಗಿದ್ದಾಗ ಉಂಟಾಗುವ ಸನ್ನಿವೇಶವೇ ಪರಸ್ಪರ ರಾಜಿ/ಅಂಗೀಕಾರ. ಇಲ್ಲಿ ಮಾತು-ಕತೆಗೆ ಅವಕಾಶ. ಯಾರಿಗೂ ಸೋಲಿಲ್ಲ, ಯಾರಿಗೂ ಗೆಲುವು ಇಲ್ಲ. ಒಂದು ರೀತಿಯ ಶೂನ್ಯದ ಡ್ರಾ.

ಸೋತು ಗೆಲ್ಲುವುದು: (Accommodate) ಪದಾರ್ಥದ ಮೇಲೆ ನಮ್ಮ ಆಸಕ್ತಿ ಕಡಿಮೆಯಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಹಾಗೂ ಸಂಬಂಧಗಳಿಗೆ ಅಧಿಕ ಬೆಲೆ ಇದ್ದು, ಸಹಕಾರದ ಸಾಧ್ಯತೆ ಹೆಚ್ಚಾದಾಗ ನಾವು ಸ್ಪರ್ಧೆಗೆ ಇಳಿಯದೆ, ಎದುರಾಳಿಗೆ ಆಟ ಬಿಟ್ಟುಕೊಡುವ ಮನಃಸ್ಥಿತಿಗೆ ಬರುತ್ತೇವೆ. ಇಲ್ಲಿಯೂ ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ಬಿಟ್ಟುಕೊಟ್ಟವರು ತಮ್ಮ ಅವಕಾಶಕ್ಕೆ ಕಾಯುತ್ತಿರುತ್ತಾರೆ.

ಇಬ್ಬರಿಗೂ ಜಯ: (Win –Win) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರತಿಪಾದನೆಯೂ ಹೆಚ್ಚಾಗಿದ್ದರೂ ಸಹ, ಸಂಬಂಧಗಳಿಗೂ ಬೆಲೆ ಅಧಿಕವಾಗಿದ್ದು ಸಹಕಾರದ ಸಾಧ್ಯತೆಯೂ ಹೆಚ್ಚಾಗಿದ್ದಾಗ ಇಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ಇದು ಅತ್ಯಂತ ಅಪೇಕ್ಷಣೀಯ ಪರಿಹಾರ. ಇದಕ್ಕೆ ಯಾವಾಗಲೂ ಪ್ರಯತ್ನಿಸಬೇಕು.

ವ್ಯಾಜ್ಯಗಳ ಪರಿಹಾರ ಹೇಗೆ
ವ್ಯಾಜ್ಯವನ್ನು ಪರಿಹಾರ ಮಾಡಲು ಬೇಕಾಗುವ ಕಲೆಗಳು:

·         ಸಂವಹನ ಕಲೆ

·         ಭಾವನೆಗಳ ಅಥವಾ ಆತಂಕ (ಸ್ಟ್ರೆಸ್ಸ್) ನಿರ್ವಹಣೆ ಮತ್ತು ಅನುಭೂತಿ

·         ಸಮಸ್ಯೆಗಳ ಪರಿಹಾರ / ನಿರ್ಧಾರ ತೆಗೆದುಕೊಳ್ಳುವ ಕಲೆ

·         ತಂಡದಲ್ಲಿ ಕೆಲಸ ಮಾಡುವ ಕಲೆ.

ಪರಿಹಾರದ ಹೆಜ್ಜೆಗಳು:

·         ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

·         ಎದುರಾಳಿಯ ಜೊತೆ ಮಾತು-ಕತೆ ನಡೆಸುವುದು.

·         ಮಧ್ಯಸ್ತಿಕೆಯೂ ಸೇರಿದಂತೆ, ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದು.

·         ಸರಿಯಾದ ಪರ್ಯಾಯದ ಆಯ್ಕೆ.

·         ಭಾವನೆಗಳನ್ನು ನಿರ್ವಹಿಸುವುದು.

ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ವ್ಯಾಜ್ಯಕ್ಕೆ ಮೂಲ ಕಾರಣ ಏನು ಎಂದು ತಿಳಿದು ಅದಕ್ಕೆ ಪರಿಹಾರ ಹುಡುಕಬೇಕು. ಇದಕ್ಕಾಗಿ ನಿಮ್ಮ ಮತ್ತು ಎದುರಾಳಿಯ ಇಬ್ಬರ ವಾದವೂ ಏನು ಎಂಬುದನ್ನು ಸ್ಪಷ್ಟವಾಗಿ ಇಡಬೇಕು. ಇಬ್ಬರ ಆಸಕ್ತಿ-ಆಸೆ-ಅಕಾಂಕ್ಷೆ-ಭೀತಿ ಏನು ಎಂಬುದನ್ನು ಅರಿಯಬೇಕು. ಇದನ್ನು ಅರಿಯಲು ಕೆಳಕಂಡ ಪ್ರಶ್ನೆಗಳು ಸಹಕಾರಿಯಾಗಬಹುದು:

ನಮ್ಮ ಆಸಕ್ತಿ ಏನು? ನಮ್ಮ ಮುಖ್ಯ ಅನುಮಾನ ಏನು? ಬೇಡಿಕೆ ಏನು? ಅವಶ್ಯಕತೆ ಏನು? ಆಕಾಂಕ್ಷೆ  ಮತ್ತು ಭೀತಿ ಏನು? ಇದೇ ರೀತಿ ಎದುರಾಳಿಯ ಮಾಹಿತಿಯನ್ನೂ ಪಡೆದು ಅದನ್ನೂ ಕೂಲಂಕಷವಾಗಿ ಅವಲೋಕಿಸಬೇಕು.

ಯಾವ ರೀತಿಯ ಸಂಧಾನಕ್ಕೆ ಬರಬಹುದು?

ಮೂರನೆಯ (ನಿಶ್ಪಕ್ಷ) ಪಕ್ಷವನ್ನು ಮಧ್ಯಸ್ಥಿಕೆ ವಹಿಸಲು ನೇಮಿಸಿದಲ್ಲಿ ನಮಗೆ ಸಂಧಾನಕ್ಕೆ ಬರಲು ಸಾಧ್ಯವೇ? ಇಬ್ಬರಿಗೂ ನ್ಯಾಯ ಸಿಕ್ಕಂತೆ ಆಗುತ್ತದೋ ಅಥವಾ ಇಬ್ಬರ ಜಗಳ ಮೂರನೆಯವರ ಲಾಭ ಆಗುತ್ತದೋ? ಯಾರು ಈ ಮೂರನೆಯ ಪಕ್ಷ? ಅವರು ಸಮಾಜದಲ್ಲಿ ಪ್ರತಿಷ್ಠಿತರೇ? ಸಂಧಾನ ಕಾನೂನಿನ ಚೌಕಟ್ಟಿನಲ್ಲಿರುತ್ತದೆಯೇ? ಅದನ್ನು ಯಾರು ಜಾರಿ ಮಾಡುವುದು ಮತ್ತು ನೋಡಿಕೊಳ್ಳುವುದು? ಖರ್ಚು ವೆಚ್ಚ ಯಾರು ಭರಿಸುವುದು? ಇಂತಹ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗಬೇಕು.

ಕೆಲವೊಮ್ಮೆ ಇಬ್ಬರೂ ತಮ್ಮ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿಕೊಂಡು, ನಿಜವಾಗಿ ಆಗುತ್ತಿರುವ ತಮ್ಮ ಆಸಕ್ತಿಯ ಹಾನಿಯನ್ನು ನಿರ್ಲಕ್ಷಿಸಿ, ತಮ್ಮ ಮುಖವನ್ನು ಉಳಿಸಿಕೊಳ್ಳುವ (ಸೇವಿಂಗ್ ದಿ ಫೇಸ್) ನಿಟ್ಟಿನಲ್ಲಿ,ನನಗೆ ಕನಿಷ್ಠ ಇಷ್ಟಾದರೂ ಸಿಗಬೇಕು ಎಂದು ಚೌಕಾಸಿ ಮಾಡಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ನಿಜವಾದ ಆಸಕ್ತಿ ಹಾನಿಯನ್ನು ಸಹಿಸಿಕೊಳ್ಳುತ್ತಾರೆ. ಆದ್ದರಿಂದ ಇಬ್ಬರ ಆಸಕ್ತಿ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ವ್ಯಾಜ್ಯ ಪರಿಹಾರ ಆಗುವ ತನಕ ಎರಡೂ ಪಕ್ಷಗಳು ತಮ್ಮ ಭಾವನಾತಿರೇಕಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ. ನೆನಪಿಡಿ, ಮಾತು ಬಲ್ಲವನಿಗೆ ಜಗಳವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...