Homeಕರ್ನಾಟಕ‘ಮಧ್ಯಂತರ ಚುನಾವಣೆ ಗ್ಯಾರಂಟಿ’: ದೇವೇಗೌಡರ ಶಾಕಿಂಗ್ ಸ್ಟೇಟ್‌ಮೆಂಟ್‌ನ ಪರಿಣಾಮ ಏನಾಗಬಹುದು?

‘ಮಧ್ಯಂತರ ಚುನಾವಣೆ ಗ್ಯಾರಂಟಿ’: ದೇವೇಗೌಡರ ಶಾಕಿಂಗ್ ಸ್ಟೇಟ್‌ಮೆಂಟ್‌ನ ಪರಿಣಾಮ ಏನಾಗಬಹುದು?

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಹಗ್ಗದ ಮೇಲೆ ನಡೆದಷ್ಟು ನಾಜೂಕಾಗಿ ತೂಗಾಡುತ್ತಿರುವ ರಾಜ್ಯ ಮೈತ್ರಿ ಸರ್ಕಾರದ ಮೇಲೆ ಇದೀಗ ಇನ್ನೊಂದು ತೂಗುಗತ್ತಿ ಬಿದ್ದಿದೆ. ಸೀರಿಯಸ್ ವಿಷಯ ಅಂದ್ರೆ, ಆ ತೂಗುಗತ್ತಿಯನ್ನು ಗುರಿಯಿಟ್ಟು ಬಿಸಾಡಿರೋದು ಮಾಜಿ ಪ್ರಧಾನಿ ದೇವೇಗೌಡ್ರು. ಇವತ್ತು ಮಾಧ್ಯಮದವರ ಜೊತೆ ಮಾತನಾಡುತ್ತ ಮಧ್ಯಂತರ ಚುನಾವಣೆ ನಡೆಯೋದರ ಬಗ್ಗೆ ಡೌಟೇ ಬೇಡ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅದು ಬ್ರೇಕಿಂಗ್ ನ್ಯೂಸ್ ಆಗುವ ಸುಳಿವು ಸಿಗುತ್ತಿದ್ದಂತೆಯೇ ಸ್ಪಷ್ಟೀಕರಣ ಕೊಟ್ಟಿರುವ ಅವರು ಇಲ್ಲ ನನ್ನ ಮಾತನ್ನು ತಪ್ಪಾಗಿ ಅರ್ಥೈಸಬೇಡಿ. ನಾನು ಹೇಳಿದ್ದು ಲೋಕಲ್ ಬಾಡಿ ಎಲೆಕ್ಷನ್ ಬಗ್ಗೆಯೇ ಹೊರತು, ರಾಜ್ಯ ವಿಧಾನಸಭೆ ಕುರಿತಂತೆ ಅಲ್ಲ. ಕುಮಾರಸ್ವಾಮಿಯವರು ಹೇಳಿದಂತೆ ಈ ಸರ್ಕಾರ ಇನ್ನು ನಾಲ್ಕು ವರ್ಷ ನಿರಾತಂಕವಾಗಿ ಮುಂದುವರೆಯಲಿದೆ ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಆದ್ರೆ, ದೇವೇಗೌಡ್ರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾ ಆಡಿದ್ದ ಸಂಪೂರ್ಣ ಮಾತುಗಳನ್ನು ಕೇಳಿಸಿಕೊಂಡವರಿಗೆ ಅವರು ರಾಜ್ಯ ವಿಧಾನಸಭೆ ಗಮನದಲ್ಲಿಟ್ಟುಕೊಂಡೇ ಹೇಳಿರೋದು ಎಂಬುದು ಖಾತ್ರಿಯಾಗುತ್ತದೆ. ಯಾಕೆಂದರೆ ಮಧ್ಯಂತರ ಚುನಾವಣೆಯ ಮಾತನ್ನು ಮುಂದುವರೆಸುತ್ತಾ ಮಧ್ಯಂತರ ಚುನಾವಣೆ ನಡೆಯೋದ್ರ ಬಗ್ಗೆ ಡೌಟೇ ಬೇಡ. ಅವರು (ಕಾಂಗ್ರೆಸ್) ಐದು ವರ್ಷ ಸಪೋರ್ಟ್ ಮಾಡ್ತೀವಿ ಅಂತ ಹೇಳಿದ್ದ್ರು, ಆದ್ರೆ ಅವರು ಈಗ ಹೇಗೆ ವರ್ತಿಸ್ತಿದಾರೆ ನೋಡಿ. ನಮ್ಮ ಜನ ಬುದ್ದಿವಂತರು. ಎಲ್ಲವನ್ನೂ ಗಮನಿಸ್ತಾ ಇರ್‍ತಾರೆ. ನಾವೇನು ಮೈತ್ರಿ ಮಾಡಿಕೊಳ್ಳಿ ಅಂತ ಕೇಳಿರಲಿಲ್ಲ. ನನ್ನ ಮಗನನ್ನೇ (ಕುಮಾರಸ್ವಾಮಿ) ಮುಖ್ಯಮಂತ್ರಿ ಮಾಡಿ ಅಂತಾನು ಕೇಳಿರಲಿಲ್ಲ. ಅವರೇ (ಕಾಂಗ್ರೆಸ್) ನನ್ನನ್ನು ಕರೆದ್ರು, ಸರ್ಕಾರ ರಚಿಸುವಂತೆ ಹೇಳಿದ್ರು. ನಾನು ನನ್ನ ಕೆಲಸ ಮುಂದುವರೆಸ್ತೀನಿ. ಯಾರನ್ನೂ ದೂಷಿಸೋದಕ್ಕೆ ಹೋಗಲ್ಲ ಎಂದಿದ್ದರು. ಅಲ್ಲಿಗೆ ದೇವೇಗೌಡರು ಯಾವ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡ್ತಾ ಇದಾರೆ ಅನ್ನೋದು ಖಾತ್ರಿ ಆಯ್ತು. ಅತ್ತ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಲು ಕಲ್ಬುರ್ಗಿಗೆ ತೆರಳಿರುವ ವೇಳೆಯಲ್ಲಿ ಕ್ಯಾಪಿಟಲ್ ಸಿಟಿಯಲ್ಲಿ ಕೂತು ದೇವೇಗೌಡರು ಈ ಮಾತು ಹೇಳಿರೋದು ಕೇವಲ ಬಾಯಿ ತಪ್ಪಿ ಆಡಿದ ಮಾತಲ್ಲ. ಯಾಕೆಂದರೆ, ದೇವೇಗೌಡರು ಮಾತನಾಡೋದು ಕಮ್ಮಿ. ಆಡುವ ಮಾತನ್ನೂ ಬಲು ತೂಗಿಯೇ ಮಾತನಾಡಿರುತ್ತಾರೆ. ಲೋಕಲ್ ಬಾಡಿ ಎಲೆಕ್ಷನ್‌ಗಳ ಬಗ್ಗೆ ತಾನು ಮಾತನಾಡಿದ್ದು ಎಂಬುದಾಗಿ ದೇವೇಗೌಡರು ಕೊಟ್ಟಿರುವ ಸ್ಪಷ್ಟೀಕರಣರ ನೆಪ ಮಾತ್ರದ್ದಷ್ಟೆ. ಅದರ ಹಿಂದೆ ನಿರ್ದಿಷ್ಟ ಲೆಕ್ಕಾಚಾರಗಳಿವೆ. ಬಸವಳಿದು ಕೂತಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ಮುಟ್ಟಿಸುವ ಸ್ಪಷ್ಟ ಇರಾದೆಯಿದೆ.

ಸಿದ್ದರಾಮಯ್ಯನ ದಿಲ್ಲಿ ಭೇಟಿಯ ತರುವಾಯ ಕೆಪಿಸಿಸಿಯನ್ನು ಹೆಚ್ಚೂಕಮ್ಮಿ ವಿಸರ್ಜಿಸಿ ಹೊಸ ಪದಾಧಿಕಾರಿಗಳ ಆಯ್ಕೆಗೆ ಹೈಕಮಾಂಡ್ ಸಿದ್ದುಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದರ ಉದ್ದೇಶ ದೇವೇಗೌಡರ ದೂರದೃಷ್ಟಿಗೆ ಸ್ಪಷ್ಟವಾಗಿ ಗೋಚರಿಸಿದೆ. ಪಕ್ಷ ಸಂಘಟನೆ ಅಂದ್ರೆ, ಅದು ಯುದ್ದ ಸನಿಹದ ಶಸ್ತ್ರಾಸ್ತ್ರಾಭ್ಯಾಸವಿದ್ದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ದೇವೇಗೌಡರು ದಡ್ಡರೇನಲ್ಲ. ಅದೂ ಅಲ್ಲದೆ ಮೈತ್ರಿಗೆ ಮೊದಲಿಂದಲೂ ಮಗ್ಗುಲ ಮುಳ್ಳಾಗಿ ಇರಿಯುತ್ತಿರುವ ಸಿದ್ರಾಮಯ್ಯ ‘ಮೈತ್ರಿಯಿಂದ ಏನೂ ಪ್ರಯೋಜನವಿಲ್ಲ’ ಎಂಬ ಹೇಳಿಕೆ ನೀಡಿದ್ದು ಅವರ ಅನುಮಾನವನ್ನು ಸ್ಪಷ್ಟವಾಗಿಸಿದೆ. ಒಂದುಕಡೆಯಿಂದ ದಾಳಿ ಶುರುವಾದ ಮೇಲೆ ಮತ್ತೊಂದು ಕಡೆಯಿಂದ ಪ್ರತಿದಾಳಿ ನಡೆಸಲೇಬೇಕಾಗುತ್ತೆ. ಮಧ್ಯಂತರ ಚುನಾವಣೆಗೆ ನೀವಷ್ಟೆ ಅಲ್ಲ, ನಾವೂ ತಯಾರಾಗಿದ್ದೇವೆ ಎಂಬ ಸೂಚ್ಯ ಮೆಸೇಜನ್ನು ದಿಲ್ಲಿ ಕೈ ನಾಯಕರಿಗೆ ರವಾನಿಸುವ ಇರಾದೆಯಿಂದಲೇ ದೇವೇಗೌಡರು ಈ ಬಾಣ ಬಿಟ್ಟಿದ್ದಾರೆ.

ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಕಡೆಗಣಿಸಿರುವ ಒಂದು ವಾಸ್ತವವಿದೆ. ತಾವು ಮೈತ್ರಿ ಮುರಿದುಕೊಂಡು ಸರ್ಕಾರವನ್ನು ಪತನಗೊಳಿಸಿದ ಕೂಡಲೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದುಬಿಡುತ್ತೆ ಎಂದುಕೊಂಡಂತಿವೆ. ಆದರೆ ಸೆಂಚುರಿ ಮೇಲೆ ಒಂದು ಅದ್ಭುತ ಬೌಂಡರಿ ಮೂಲಕ 104 ನಾಟ್‌ಔಟ್ ಪೊಸೀಷನ್‌ನಲ್ಲಿರುವ; ಅಂಪೈರ್ (ರಾಜ್ಯಪಾಲ), ಥರ್ಡ್ ಅಂಪೈರ್ (ಪ್ರಧಾನಿ), ಮ್ಯಾಚ್ ರೆಫರಿ (ರಾಷ್ಟ್ರಪತಿ) ಸೇರಿದಂತೆ ಸಮಸ್ತ ತನ್ನದೇ ಹೋಮ್‌ಗ್ರೌಂಡ್‌ನಲ್ಲಿ ಸಜ್ಜಾಗಿ ನಿಂತಿರುವ ಬಿಜೆಪಿ ಅಷ್ಟು ಸುಲಭವಾಗಿ ಮಧ್ಯಂತರ ಚುನಾವಣೆ ನಡೆಸಲು ಬಿಡುತ್ತಾ? ಖಂಡಿತ ಇಲ್ಲ. ಅವರೇ ಕಿತ್ತಾಡಿ ಸರ್ಕಾರ ಬೀಳಿಸಿಕೊಳ್ಳುವ ಸನಿಹಕ್ಕೆ ಬರುತ್ತಿದ್ದಾರೆ ಎಂದಕೂಡಲೇ ಅಖಾಡಕ್ಕಿಳಿಯುವ ಬಿಜೆಪಿ ಈಗ ಸಚಿವಗಿರಿ ಸಿಗದೆ ಅತೃಪ್ತರಾಗಿರುವ ಕೈ-ತೆನೆ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿಬಿಡುತ್ತೆ.

ಮೇಲ್ನೋಟಕ್ಕೆ ಯಡಿಯೂರಪ್ಪನವರು ನಾವು ಆಪರೇಷನ್ ಕಮಲ ಮಾಡಲ್ಲ, ರಚನಾತ್ಮಕ ವಿರೋಧ ಪಕ್ಷವಾಗಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ ಎಂದು ಈಗಾಗಲೇ ಅಹೋರಾತ್ರಿ ಧರಣಿಗಳನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಸದ್ದಿಲ್ಲದೆ ಬಿಜೆಪಿ ಹೈಕಮಾಂಡ್, ಆಪರೇಷನ್ ಕಮಲ ನಡೆಸಲು ಯಡ್ಯೂರಪ್ಪನವರಿಗೆ ಲಾಸ್ಟ್ ಚಾನ್ಸ್ ನೀಡಿದ್ದು, ನಾವು ನೇರವಾಗಿ ಅಖಾಡಕ್ಕಿಳಿಯದೆ ದೂರದಲ್ಲೆ ನಿಂತು ಗೈಡ್ ಮಾಡುತ್ತೇವೆ, ಸಾಧಕ ಬಾಧಕಗಳನ್ನೆಲ್ಲ ಲೋಕಲ್ ಲೀಡರುಗಳೇ ಹೊತ್ತುಕೊಂಡು ಆಪರೇಷನ್ ನಡೆಸಬೇಕು ಎಂಬ ಗ್ರೀನ್ ಸಿಗ್ನಲ್ ನೀಡಿದೆ ಎಂಬ ವರ್ತಮಾನ ಬಿಜೆಪಿ ಮೂಲಗಳಿಂದಲೇ ಬೆಳಕಿಗೆ ಬಂದಿದೆ. ಈಚೆಗೆ ನಡೆದ ಲೋಕಸಭಾ ಎಲೆಕ್ಷನ್‌ನಲ್ಲಿ ಮೈತ್ರಿ ಅಖಾಡದ ಸುಮಾರು ಮೂವತ್ತು ಕಾಂಗ್ರೆಸ್-ಜೆಡಿಎಸ್ ಎಮ್ಮೆಲ್ಲೆಗಳು ಬೇರೆಬೇರೆ ಸ್ಥಳೀಯ ಕಾರಣಗಳಿಗಾಗಿ ಬಿಜೆಪಿಯನ್ನು ಬೆಂಬಲಿಸಿದ್ದರಿಂದಲೇ ೨೫ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದದ್ದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆ ಮೂವತ್ತು ಜನರು ಆಪರೇಷನ್ ಕಮಲಕ್ಕೆ ಈಡಾಗುವ ಸಂಭವ ಇಲ್ಲವಾದರು ಅದರಲ್ಲಿ ಅರ್ಧದಷ್ಟು ಜನರಾದರು ಬಿಜೆಪಿಯತ್ತ ಒಲವಿಟ್ಟುಕೊಂಡೇ ಈ ಪಕ್ಷದ್ರೋಹ ಬಗೆದಿರೋದು ಬಿಜೆಪಿಯ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆಯಂತೆ.

ಇಂಥಾ ಸಮಯದಲ್ಲಿ ಕಾಂಗ್ರೆಸ್, ಜೆಡಿಎಸ್‌ಗಳು ಮಧ್ಯಂತರ ಚುನಾವಣೆಯ ಕನವರಿಸುತ್ತಾ ಒಬ್ಬರ ಕಾಲು ಮತ್ತೊಬ್ಬರು ಎಳೆದಾಡಿಕೊಳ್ಳುತ್ತಿರೋದು ಬಿಜೆಪಿ ಪಾಲಿಗೆ ‘ಲಡ್ಡು ಬಂದು ಬಾಯಿಗೆ ಬಿತ್ತು’ ಎಂಬಂತಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...