Homeಅಂಕಣಗಳುನೂರುನೋಟ | ಚುನಾವಣಾ ಆಯೋಗವನ್ನು ಸರಿಪಡಿಸುವುದು ಬಹಳ ಮುಖ್ಯ

ನೂರುನೋಟ | ಚುನಾವಣಾ ಆಯೋಗವನ್ನು ಸರಿಪಡಿಸುವುದು ಬಹಳ ಮುಖ್ಯ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ಕರ್ನಾಟಕ 2018ರ ವಿಧಾನಸಭಾ ಚುನಾವಣೆಗಳು ಮುಗಿದಿದೆ. ಈ ಚುನಾವಣೆಯ ಫಲಿತಾಂಶವನ್ನು ಅವಲೋಕನ ಮಾಡುವುದರ ಅಗತ್ಯತೆ ಇದೆ. ಭಾಜಪ ಚುನಾವಣೆಯಲ್ಲಿ 104 ಸ್ಥಾನಗಳನ್ನು ಕಾಂಗ್ರೆಸ್ 78 ಸ್ಥಾನಗಳನ್ನು ಜನತಾದಳ (ಜಾತ್ಯತೀತ) 38 ಸ್ಥಾನಗಳನ್ನು ಪಕ್ಷೇತರರು 2 ಸ್ಥಾನಗಳನ್ನು ಗಳಿಸಿದ್ದಾರೆ.ಅಂದರೆ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ.ಈ ಸಂದರ್ಭದಲ್ಲಿ ರಾಷ್ಟ್ರಿಯ ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಸಂಧಿಸಿ ನಮ್ಮ ಬೆಂಬಲ ನೀಡುತ್ತೇವೆ ಜಾತ್ಯತೀತ ಜನತಾದಳ ಸರ್ಕಾರ ರಚಿಸಲಿ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಜನತಾಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದಂತೆ ತಾವೇ ಸರ್ಕಾರ ರಚಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಬಂದಿವೆ. ಕರ್ನಾಟಕದಲ್ಲಿ ಭಾಜಪ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಮೋದಿಯವರ ಮಹತ್ವಾಕಾಂಕ್ಷೆಗೆ ಕೊಡಲಿ ಪೆಟ್ಟು ಬಿದ್ದಿದೆ. 2019ರ ಲೋಕಸಭೆಯ ಚುನಾವಣೆಯ ಮೇಲೆ ಬಿಜೆಪಿಯ ಈ ಹಿನ್ನಡೆ ತನ್ನ ಪ್ರಭಾವ ಬೀರುವುದೆಂಬುದು ಶತಃಸಿದ್ದ

2019ರ ಲೋಕಸಭಾ ಚುನಾವಣೆಗಳಲ್ಲಿ ಮೋದಿ ಮತ್ತು ಭಾರತೀಯ ಜನತಾಪಕ್ಷಗಳನ್ನು ಪರಾಭವಗೊಳಿಸಲು ವಿರೋಧಪಕ್ಷಗಳು ಈಗಾಗಲೇ ಧ್ರುವೀಕರಣದ ಮಾತುಕತೆಗಳನ್ನು ಆರಂಭ ಮಾಡಿವೆ. ಒಂದು ಕಡೆ ಪ್ರಾಂತೀಯ ಪಕ್ಷಗಳೆಲ್ಲ ಒಂದಾಗಿ ಬಿಜೆಪಿಯನ್ನು ಎದುರಿಸುವ ನಿರ್ಧಾರ ಮಾಡಿದ್ದಾರೆ. ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳೆಲ್ಲ ಕೂಡಿಕೊಂಡು ಬಿಜೆಪಿಯನ್ನು ಪರಾಭವಗೊಳಿಸುವ ಬಗೆಗೆ ಮಾತುಕತೆ ನಡೆಯುತ್ತಿದೆ.

ಈ ಎರಡೂ ಬಣಗಳು ಒಟ್ಟಾಗಿ ಕೂಡಿಕೊಂಡು ಭಾರತೀಯ ಜನತಾಪಕ್ಷವನ್ನು ಎದುರಿಸುದಾದರೆ ಮೋದಿಯನ್ನು ಮಣಿಸುವುದು ಮತ್ತಷ್ಟು ಸುಲಭವಾಗಬಹುದು. ಅವು ಬೇರೆ ಬೇರೆಯಾಗಿ ಚುನಾವಣೆಯನ್ನು ಎದುರಿಸುವ ಸಂದರ್ಭ ಏರ್ಪಟ್ಟರೂ ಮೋದಿ ಮತ್ತು ಬಿಜೆಪಿಯನ್ನು ಪರಾಭವಗೊಳಿಸುವುದು ಈ ಎರಡೂ ತಂಡಗಳ ಏಕೈಕಗುರಿಯಾಗಿರುವುದರಿಂದ ಅದು ಸ್ವಾಗತಾರ್ಹವೇ.

2019ರ ಚುನಾವಣಾ ಹೋರಾಟದ ರಾಜಕೀಯದಲ್ಲಿ ಬದಲಾವಣೆ ತರಲು ಬಯಸುವ ನಮ್ಮ ಪಾತ್ರವೇನು ಎಂಬುವುದನ್ನ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದು ಅಗತ್ಯ.

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯನ್ನು ಎದುರಿಸಲು ಕೋಮುಸೌಹಾರ್ದವೇದಿಕೆಯ ನೇತೃತ್ವದಲ್ಲಿ ನಡೆದ ಸಂಘಟಿತ ಪ್ರಯತ್ನ ತುಂಬಾ ಪರಿಣಾಮಕಾರಿಯಾಗಿತ್ತು. ಈ ಸಂದರ್ಭದಲ್ಲಿ ಕೈಜೋಡಿಸಿದ ಎಲ್ಲಕೋಮುವಿರೋದಿ üಸಂಸ್ಥೆಗಳಿಗೆ ನನ್ನ ಮೆಚ್ಚುಗೆಯನ್ನು ಸೂಚಿಸುತ್ತೇನೆ. ಈ ಸಂಘಟಿತ ಪ್ರಯತ್ನದಲ್ಲಿ ಪ್ರಮುಖಪಾತ್ರ ವಹಿಸಿದ ಜನತೆಯ ಪರವಾಗಿ ಕೈಗೊಂಡ ಈ ಮತದಾರರ ಜಾಗೃತಿ ಕಾರ್ಯಕ್ರಮ ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಅವಧಿ ಇರುವಾಗಲೇ ಕರ್ನಾಟಕದಲ್ಲಿ ಮುಂದುವರಿಯಬೇಕಲ್ಲದೆ ಉತ್ತರ ಭಾರತದಲ್ಲೂ ಈ ಪ್ರಚಾರಕಾರ್ಯ ನಡೆಸಬೇಕಿದೆ. ಕರ್ನಾಟಕದಲ್ಲಿ ಈಗಾಗಲೇ ರೂಪಿತವಾಗಿರುವ ಪ್ರಭಾವಿ ವ್ಯಕ್ತಿಗಳ ತಂಡ ಉತ್ತರಭಾರತದ ಎಲ್ಲ ರಾಜ್ಯಗಳಿಗೂ ಭೇಟಿಕೊಟ್ಟು ಅಲ್ಲಿಯೂ ಇಂತಹ ಮೋದಿ ವಿರೋಧಿ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲು ಕೂಡಲೇ ಕಾರ್ಯೋನ್ಮುಖವಾಗಬೇಕು. ಹೀಗೆ ಅಲ್ಲಿ ಅಸ್ತಿತ್ವದಲ್ಲಿರುವ ಮೋದಿ ವಿರೋಧಿ ಸಂಸ್ಥೆಗಳು ಸಮರೋಪಾದಿಯಲ್ಲಿ ಮತದಾರರಮಧ್ಯೆ ಕೆಲಸ ಮಾಡುವುದಾದರೆ ಬಿಜೆಪಿಯ ಹಾಗೂ ಮೋದಿಯ ಪ್ರಭಾವವನ್ನು ಪರಿಣಾಮಕಾರಿಯಾಗಿ ಕುಗ್ಗಿಸಲು ಬರುತ್ತದೆ.

ಮೋದಿಯನ್ನು ಪರಾಭವಗೊಳಿಸುವುದು ಎಷ್ಟು ಮುಖ್ಯವೋ ಚುನಾವಣಾ ಆಯೋಗವನ್ನು ಪರಿಣಾಮಕಾರಿಯಾಗಿ ಕಾರ್ಯತತ್ಪರವಾಗುವಂತೆ ಮಾಡುವುದು ಅಷ್ಟೇ ಮುಖ್ಯ. ಚುನಾವಣಾ ಆಯೋಗ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಶಾಂತಿಯುತವಾಗಿ ಚುನಾವಣೆಗಳನ್ನು ನಡೆಸುತ್ತಿರುವುದಕ್ಕೆ ತನ್ನಬೆನ್ನನ್ನು ತಾನೇತಟ್ಟಿಕೊಳ್ಳುತ್ತಿದೆ.

ಚುನಾವಣೆಯಿಂದ ಚುನಾವಣೆಗೆ ರಾಜಕೀಯ ಭ್ರಷ್ಟಾಚಾರ ಹೆಚ್ಚುತ್ತಿದೆ. ಹಣ,ಹೆಂಡ, ಬಟ್ಟೆ ಸೀರೆ,ತಾಳಿ,ಬೆಳ್ಳಿ ಸಾಮಾನುಗಳೆಲ್ಲವನ್ನು ಮತದಾರರಿಗೆ ಹಂಚುವ ಪ್ರಯತ್ನ ಹೆಚ್ಚುಹೆಚ್ಚಾಗಿ ಬೆಳೆಯುತ್ತಿದೆ. ಈಗ ನಡೆದ ಚುನಾವಣೆಯಲ್ಲಿ 50-60 ಕೋಟಿರೂ.ಗಳನ್ನು ಹಂಚುವುದರಿಂದ ಆಯೋಗ ವಶಪಡಿಸಿಕೊಂಡಿದೆ.ಇದಕ್ಕೆ ಶೇ.100ರಷ್ಟು ಹಣ ಮತದಾರರಲ್ಲಿಗೆ ರಾಜಕೀಯ ಪಕ್ಷಗಳು ಹಂಚಿದ್ದಾರೆ. ಕರ್ನಾಟಕ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಕೇಳಿದರೆ ಜಫ್ತಿಮಾಡಲಾದ ಎಲ್ಲ ಹಣವನ್ನು ಹುಜೂರ್ ಟ್ರಜರಿಗೆ ಕಟ್ಟಿದ್ದೇವೆ. ವಶಪಡಿಸಿಕೊಂಡ ಕುಡಿತಗಳನ್ನೆಲ್ಲ ನಾಶ ಮಾಡಿದ್ದೇವೆ ಎನ್ನುತ್ತಾರೆ.

ಪೊಲೀಸ್‍ ವರಿಷ್ಠರ ಕಚೇರಿಯ ಮುಖ್ಯಸ್ಥರನ್ನು ಕೇಳಿದರೆ ವಶ ಪಡಿಸಿಕೊಂಡ ಉಳಿದ ವಸ್ತುಗಳು ಆಯಾ ಪೊಲೀಸ್ ಠಾಣೆಯ ವಶದಲ್ಲಿದ್ದು ಅವರುಕಳ್ಳದಾಸ್ತಾನುದಾರರು ಕಳ್ಳಸಾಗಾಣಿಕೆದಾರರ ಕೇಸು ಹಾಕಿದ್ದಾರೆಎನ್ನುತ್ತಾರೆ.ಇದರ ಮಾಹಿತಿಯನ್ನು ನಮಗೆಕೊಡಲು ಎಸ್ಪಿಗಳಿಗೆ ಚುನಾವಣಾಧಿಕಾರಿಗಳು ಸುತ್ತೋಲೆ ಕಳಿಸಿದರೂ ಕೆಲದಿನಗಳನಂತರ ಇಬ್ಬರು ಎಸಿಪಿಗಳು ನಮ್ಮಜಿಲ್ಲೆಗಳಲ್ಲಿ ಅಂತಹದ್ದೇನುಪ್ರಸಂಗಗಳು ನಡೆದಿಲ್ಲ ಎಂದು ಬರೆದರು. ಉಳಿದ ಜಿಲ್ಲೆಗಳ ಎಸ್ಪಿಗಳು ಮೌನತಾಳಿದರು. ಉತ್ತರ ಬರೆಯುವ ಗೋಜಿಗೆ ಹೋಗಲಿಲ್ಲ.

ಈ ಭ್ರಷ್ಟಾಚಾರವನ್ನು ತೊಡೆದುಹಾಕಲು ಕಠಿಣ ಕ್ರಮಕೈಗೊಳ್ಳಿ, 2008 ಮತ್ತು 2013ರಲ್ಲಿ ನಡೆದಿರುವ ಎರಡು ಚುನಾವಣೆಗಳಲ್ಲಿ ಸಂಭವಿಸಿರುವ ಅವ್ಯವಹಾರಗಳ ವಿವರ, ಅದನ್ನು ಯಾವಪಕ್ಷದವರು ಎಸಗಿದ್ದಾರೆ, ಯಾರು ಮಾಡಿದ್ದಾರೆ ಎಂಬವವರ ಮೇಲೆಯಾವಾಗ ಕಟ್ಲೆ ಹೂಡಲಾಯಿತು, ಏನು ಶಿಕ್ಷೆಯಾಯಿತು, ಹಾಗೆ ಹಿಡಿದ ಸಾಮಗ್ರಿಗಳು ಯಾರು ವಶದಲ್ಲಿವೆ ಇವೆಲ್ಲದರ ವಿವರಗಳನ್ನೊಳಗೊಂಡ ಒಂದು ಶ್ವೇತಪತ್ರವನ್ನು 3ತಿಂಗಳೊಳಗೆ ಹೊರಡಿಸಬೇಕೆಂದು ಚುನಾವಣಾಧಿಕಾರಿಗಳನ್ನು ಒತ್ತಾಯ ಮಾಡಲು ಒಂದು ಅನಿರ್ದಿಷ್ಟ ಕಾಲದ ಧರಣಿಯನ್ನು ಅವರಕಚೇರಿಯ ಮುಂದೆ ನಡೆಸಬೇಕು.

ಕೇಂದ್ರದ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಇಷ್ಟೊಂದು ಭ್ರಷ್ಟಾಚಾರ ಹತ್ತಾರು ವರ್ಷಗಳಿಂದ ನಡೆಯುತ್ತಿದ್ದರೂ ಅದಕ್ಕೆ ಪರಿಣಾಮಕಾರಿಯಾದ ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮುಂದಿನ ಚುನಾವಣೆ ವೇಳೆಗಾದರೂ ಹಣ, ಹೆಂಡ ಮತ್ತು ಇತರ ಸಾಮಗ್ರಿಗಳನ್ನು ಮತದಾರರಿಗೆ ಹಂಚುವ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಈ ಕರ್ತವ್ಯವನ್ನು ನೀವು ನಿರ್ವಹಿಸದೆ ಕರ್ತವ್ಯ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಚುನಾವಣೆ ನಡೆಸದಂತೆ ಕೇಂದ್ರಚುನಾವಣಾ ಕಮೀಷನ್ ವಿರುದ್ಧ ಶಾಂತಿಯುತ ಹೋರಾಟ ನಡೆಸುವುದಾಗಿ ಪತ್ರ ಬರೆಯಬೇಕು.

ಅಲ್ಲದೆ ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣೆಗಳಲ್ಲಿ ನಡೆಯುವ ಎಲ್ಲಕ್ರಮಗಳನ್ನು ತಡೆಯಲು ಹಾಲಿ ಜಾರಿಯಲ್ಲಿರುವ ಎಲ್ಲ ಚುನಾವಣಾ ಕಾನೂನುಗಳನ್ನು ಮುಂಜಾಗ್ರತವಾಗಿ ಪರಿಷ್ಕರಿಸಿ ದ್ವೇಷಮುಕ್ತವಾದ ಕಾನೂನುಗಳನ್ನು ಜಾರಿಗೆ ಕೊಡಬೇಕೆಂದು ಒತ್ತಾಯಿಸುವ ಪತ್ರವನ್ನು ಬರೆಯಬೇಕು. ಈ ವರ್ಷ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮತ್ತೆ ಮುಂದಿನ ಚುನಾವಣೆಗೆನಿಂತರೆಅವರು ಇದಕ್ಕೆಹಿಂದೆ ನಡೆದ ಚುನಾವಣೆಯ ವೇಳೆ ಕೊಟ್ಟ ತಮ್ಮ ಆಸ್ತಿಯ ವಿವರಗಳಿಗೂ ಈ ವರ್ಷ ಕೊಟ್ಟಿರುವ ವಿವರಗಳಿಗೂ ತುಂಬಾ ಅಂತರವಿದ್ದರೆ ಅದನ್ನು ನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದಾರಾ ಇಲ್ಲವೆ ಅನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದೀರಾ ಎಂಬುದನ್ನು ಪತ್ತೆ ಮಾಡಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಚುನಾವಣಾ ಆಯೋಗದವರನ್ನು ಕೇಳಬೇಕು.

ಸ್ವತಂತ್ರ ಭಾರತದಲ್ಲಿ ಚುನಾವಣೆಗಳು ಕಳೆದ ಅರವತ್ತು ವರ್ಷಕ್ಕೆ ಮೇಲ್ಪಟ್ಟು ನಡೆಯುತ್ತಿದ್ದರೂ ಚುನಾವಣೆ ಕಾನೂನನ್ನು ಆಮೂಲಾಗ್ರವಾಗಿ ಪರಿಗಣಿಸುವ ಕೆಲಸ ಇಂದಿಗೂ ನಡೆದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...