Homeಅಂಕಣಗಳುಚರಿತ್ರೆಯ ಮಾರುವೇಷ

ಚರಿತ್ರೆಯ ಮಾರುವೇಷ

- Advertisement -
- Advertisement -

ರಹಮತ್ ತರೀಕೆರೆ |

ಕನ್ನಡದ ಮೊದಲಘಟ್ಟದ ಕಾದಂಬರಿಗಳಲ್ಲಿ ಒಂದಾದ ಪುಟ್ಟಣ್ಣನವರ `ಮಾಡಿದ್ದುಣ್ಣೋ ಮಹಾರಾಯ’ದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಆಸ್ಥಾನ ಪಂಡಿತರೊಬ್ಬರ ಮಗಳ ಮದುವೆಯಲ್ಲಿ ಭಾಗವಹಿಸುವ ಸನ್ನಿವೇಶವಿದೆ. ದೊರೆ, ದೊರೆತನದ ಹಮ್ಮಿಲ್ಲದೆ ಜನರೊಂದಿಗೆ ಬೆರೆಯುವುದನ್ನು ಚಿತ್ರಿಸುವ ಕಾದಂಬರಿ, ಭಾರತ ಮತ್ತು ಯೂರೋಪಿನ ದೊರೆಗಳ ಚರಿತ್ರೆಗೆ ಹೊರಳಿಕೊಳ್ಳುತ್ತದೆ. ಆ ಲೋಕಚರಿತ್ರೆಯ ಭಿತ್ತಿಯಲ್ಲಿ ಮೈಸೂರು ದೊರೆಯ ಚಿತ್ರವನ್ನಿಟ್ಟು ಬೆಲೆಕಟ್ಟುತ್ತದೆ:
“ಯುಗಾಂತರದಲ್ಲಿ ಪುರಾಣ ಪ್ರಸಿದ್ಧರಾದ ನಳ ಮಾಂಧಾತ ಶ್ರೀರಾಮ ಮೊದಲಾದ ಚಕ್ರವರ್ತಿಗಳೂ ಮತ್ತು ಈಚೆಗೆ ಇದ್ದ ಅನೇಕ ರಾಜರೂ ಪ್ರಜೆಗಳೇ ತಮ್ಮ ದೈವವೆಂದು ತಿಳಿದು ರಾಜಸದ ಅಟ್ಟಹಾಸವನ್ನು ಬಿಟ್ಟು ಎಲ್ಲರಲ್ಲಿಯೂ ಲಲಿತವಾಗಿ ಇರುತ್ತಾ ಅವರ ಕಷ್ಟಸುಖಗಳನ್ನು ಅರಿತು ಲೋಕೋಪಕಾರವನ್ನು ಮಾಡುತಿದ್ದರು.. ಪ್ರತಿಷ್ಠೆಯೂ ಡಂಭವೂ ನಮ್ಮ ಸೀಮೆಯ ರಾಜರುಗಳಲ್ಲಿ ಹೆಚ್ಚಿದ್ದರೂ, ಸಮಯ ಬಂದಾಗ ತಮ್ಮ ಪದವಿ ಎಂಬ ಪ್ರತಾಪದ ಗಂಟನ್ನು ಅತ್ತ ಇರಿಸಿ, ಬಡವರಾಗಿಯೂ ಪ್ರಜೆಗಳಲ್ಲಿ ಪ್ರಜೆಯಾಗಿಯೂ ವಿಶೇಷವಾದ ಸೌಲಭ್ಯದಿಂದ ನಡೆದುಕೊಂಡು, ಪ್ರಜೆಗಳನ್ನು ಕೇವಲ ಆದರದಿಂದ ಕಾಣುವ ಸಹಜವಾದ ಗುಣವು ನಮ್ಮ ಹಲವು ರಾಜರಲ್ಲಿರುವುದರಿಂದ, ಎಂಥಾ ತುಂಟನಾದರೂ ರಾಜನ ಒಳ್ಳೇತನದಿಂದ ಜಿತನಾಗುವನು. ಈ ಗುಣವು ನಮ್ಮ ಅರಸರಲ್ಲಿರುವುದರಿದಲೇ ಪಾಶ್ಚಾತ್ಯ ರಾಜರಿಗೆ ಉಂಟಾದ ಅನೇಕ ಬಾಧಕಗಳು ನಮ್ಮ ದೇಶಗಳಲ್ಲಿ ಹುಟ್ಟಿಲ್ಲ. ಈಚೆಗೆ ಯೂರೋಪಿನ ರಾಜರ ಹಾಗೆ ನಮ್ಮ ದೊರೆಗಳೂ ಪ್ರಜೆಗಳ ವಿಷಯದಲ್ಲಿ ಬಿರ್ರನೆ ಬೀರಿಕೊಂಡು ಅಸಹ್ಯವಾದ ಮುರುಕನ್ನು ತೋರಿಸುತಾ ಇರುವುದು, ತನ್ನ ಸರಣಿಯಲ್ಲಿ ಅದರ ಫಲವನ್ನು ತೋರಿಸದೇ ಇರದು. ಇಂಥಾ ದುರ್ಗುಣಗಳು ಸಮೀಪ ವೃತ್ತಿಯಲ್ಲಿರತಕ್ಕವರ ದುರ್ಗುಣದ ಪ್ರತಿಬಿಂಬವಾಗಿದೆ. ಈ ಅಂಶವನ್ನು ಬಿಟ್ಟು ಯೋಚಿಸಿದರೆ, ಮುಮ್ಮಡಿ ಕೃಷ್ಣರಾಜ ಒಡೆಯರ ಸೌಲಭ್ಯವೂ ಧಾರಾಳವೂ ಎಂಥಾ ಶತ್ರುಗಳನ್ನಾದರೂ ಮಿತ್ರಸ್ಥಾನಕ್ಕೆ ತರುತ್ತಾ ಇದ್ದವು. ಪ್ರಜೆಗಳು ಎಂದರೆ ತನ್ನ ಮಕ್ಕಳು ಎಂದು ಭಾವಿಸಿಕೊಂಡಿದ್ದ ಈ ಮಹಾರಾಯನ ವಿವೇಕದಿಂದಲೇ ಮೈಸೂರ ರಾಜ್ಯವು ಇದುವರೆಗೆ ಇಷ್ಟರಮಟ್ಟಿಗೆ ಉಳಿದಿದೆ.’’
ಇಲ್ಲಿ ಆದರ್ಶ ಮತ್ತು ಕೆಟ್ಟ ದೊರೆತನದ ವ್ಯಾಖ್ಯಾನವಿದೆ. ಆದರ್ಶ ದೊರೆಯ ಗುಣಗಳೆಂದರೆ-ಪ್ರಜೆಗಳಿಗೆ ಸುಲಭವಾಗಿ ಲಭ್ಯವಾಗುವುದು; ಆಡಂಬರವಿಲ್ಲದೆ ಸಾಮಾನ್ಯನಂತೆ ಬದುಕುವುದು. ಪ್ರಜೆಗಳ ಪ್ರೀತಿವಿಶ್ವಾಸ ಗಳಿಸುವುದು; ಕೆಟ್ಟದೊರೆಯ ಚಹರೆಯೆಂದರೆ- ಪ್ರಜಾನುರಾಗ ಕಳೆದುಕೊಳ್ಳುವುದು, ಪ್ರಜಾಪೀಡಕ ಅಧಿಕಾರಿಗಳಿಗೆ ಆಡಳಿತ ಬಿಟ್ಟುಕೊಟ್ಟು ಅನಾಯಕತ್ವ ಸೃಷ್ಟಿಸುವುದು. ದೊರೆಗಳ ಗುಣಾವಗುಣಗಳ ಜಿಜ್ಞಾಸೆಗೆ ಪ್ರಜೆಗಳ ಪ್ರತಿರೋಧ ಎದುರಿಸಬೇಕಾದ ಪಾಶ್ಚಾತ್ಯ ದೊರೆಗಳ ಚರಿತ್ರೆ ಇಲ್ಲಿ ನೆಪವಾಗಿದೆ. ರಾಜನ ದಕ್ಷತೆಯನ್ನು ಪ್ರಜೆಗಳ ಅಭಿಪ್ರಾಯದ ಮೂಲಕ ನಿರ್ಧರಿಸಬೇಕು ಎಂಬ ನಿಲುವು ಇಲ್ಲಿ ವ್ಯಕ್ತವಾಗುತ್ತಿದೆ. ಕೆಟ್ಟದೊರೆತನವನ್ನು ಜನ ಮೂಕವಾಗಿ ಸಹಿಸದೆ ಪರ್ಯಾಯ ರಾಜಕೀಯ ವ್ಯವಸ್ಥೆ ಹುಟ್ಟಿಸಿಕೊಳ್ಳಬಲ್ಲರು ಎಂಬ ರಾಜಕೀಯ ಸತ್ಯವನ್ನು ಕಾಣಿಸಲಾಗುತ್ತಿದೆ. ದೊರೆಯ ಕೆಡುವಿಕೆಯಲ್ಲಿ ವೈಯಕ್ತಿಕ ಸಹವಾಸ ದೋಷವನ್ನು ಪ್ರಧಾನ ಸಂಗತಿಯಾಗಿ ಗುರುತಿಸಲಾಗುತ್ತಿದೆ. ದೊರೆ ಎಷ್ಟೇ ಸಜ್ಜನನಾಗಿದ್ದರೂ ಆಳ್ವಿಕೆಯಲ್ಲಿ ಬಿಗಿ ಕಳೆದುಕೊಂಡರೆ, ಪರಿವಾರ ಹದ್ದಿನನೆರವಿಯಾಗುತ್ತದೆ; ರಾಜ್ಯ ಪತನಗೊಳ್ಳುತ್ತದೆ ಎಂದು ಸೂಚಿಸಸಲು ಕಾದಂಬರಿ ಈ ಸುದೀರ್ಘ ಪೀಠಿಕೆಯನ್ನು ಹಾಕುತ್ತಿದೆ. ಚಾರಿತ್ರಿಕವಾಗಿ ರಾಜಕೀಯ ಜಿಜ್ಞಾಸೆ ಮಾಡುತ್ತ ರಾಜಧರ್ಮದ ಪರಿಕಲ್ಪನೆಯನ್ನು ಮುಂದಿಡುತ್ತಿದೆ.
ಇಲ್ಲಿ ಕಾದಂಬರಿ ರಾಜಕೀಯ ಪಠ್ಯವಾಗಿ ರೂಪಾಂತರಗೊಳ್ಳುತ್ತಿದೆ; ಇದಕ್ಕೆ ಪ್ರತಿಯಾಗಿ ಕೆಲವು ಚರಿತ್ರೆಯ ಕೃತಿಗಳು ಕಾದಂಬರಿಗಳಂತೆ ಕಥನ ಮಾಡುತ್ತವೆ. ಮೈಸೂರು ಆಸ್ಥಾನದ ಚರಿತ್ರಕಾರ ಶಿಂಗ್ರಯ್ಯನವರು ರಚಿಸಿದ `ಚಾಮರಾಜೇಂದ್ರ ಒಡೆಯರವರ ಚರಿತ್ರೆ’ ಇದಕ್ಕೆ ನಿದರ್ಶನ. ಗಂಡುಸಂತಾನವಿಲ್ಲದ ಮುಮ್ಮಡಿಯವರು, ದತ್ತುಸ್ವೀಕಾರ ಮಾಡಲು ಬ್ರಿಟಿಶ್ ಸರ್ಕಾರವು ಒಪ್ಪದಿದ್ದಾಗ, ಕೃತಿ ಆಕ್ರೋಶ ಪ್ರಕಟಿಸುವ ಪರಿಯನ್ನು ಗಮನಿಸಬೇಕು: “ವಾಚಕ ಮಹಾಶಯರೇ! ಕಾಲವು ವಿಪರ್ಯಾಸವನ್ನು ಪಡೆದು ಎಷ್ಟು ವಿಚಿತ್ರಗತಿಗೊಳಗಾಯ್ತು ನೋಡಿದಿರಾ? ಮೈಸೂರು ಸಂಸ್ಥಾನಾಧಿಪತಿಯು ಔರಸಪುತ್ರಾಭಾವದಿಂದ ಕೊರಗುತ್ತಾ ಸ್ವವಂಶಾಭಿವೃದ್ಧ್ಯರ್ಥವಾಗಿ ಒಬ್ಬ ಪುತ್ರನನ್ನು ಸ್ವೀಕಾರ ಮಾಡಿಕೊಳ್ಳಬೇಕಾದರೂ ಅನ್ಯದೇಶಿಯರ ಅಪ್ಪಣೆಯನ್ನು ಪಡೆಯಬೇಕಾಯಿತು. ಯಾವಯಾವ ಕಾಲದಲ್ಲಿ ಏನೇನು ಸಂಭವಿಸುವುದೋ ಅರಿತವರಾರು? ಇದನ್ನು ನೋಡಿದರೆ `ಭವಿತವ್ಯಂ ಭವತ್ಯೇವ ಕರ್ಮಣಾಮೀದೃಶೀಗತಿಃ ಎಂಬ ವಿಚಾರಿಗಳ ವಾಕ್ಯವು ನೆನಪಿಗೆ ಬರುವುದಲ್ಲವೇ?’.
ಕೃತಿಯ ನಿರೂಪಣೆ ವಾಚಕರನ್ನು ಸಂಬೋಧಿಸುತ್ತ, ಅವರನ್ನು ತನ್ನ ಭಾವಾವೇಶದಲ್ಲಿ ಒಳಗು ಮಾಡುತ್ತಿದೆ. ಕಾದಂಬರಿ ಮತ್ತು ಚರಿತ್ರೆಗಳ ಈ ಪಾತ್ರ ಬದಲಾವಣೆಯು, ಚರಿತ್ರಲೇಖನ ಮತ್ತು ಕಥನಗಳು ಮಾಡಿದ ಕೂಡು ಪ್ರಯೋಗಶೀಲತೆಯ ಫಲವಾಗಿವೆ. ಇಂತಹುದೇ ಪ್ರಯೋಗಶೀಲತೆ ವಸಾಹತುಶಾಹಿ ಕಾಲಘಟ್ಟದ ಮುಖ್ಯ ರಾಜಕೀಯ ಚಿಂತಕರಾದ ಡಿವಿಜಿಯವರಲ್ಲೂ ಕಾಣಬಹುದು. ತಮ್ಮ `ದಿವಾನ್ ರಂಗಾಚಾರ್ಲು’ನಲ್ಲಿ ಪ್ರಪಂಚದ ದೇಶಗಳಲ್ಲಿ ರಾಜಪ್ರಭುತ್ವದ ವಿರುದ್ಧ ನಡೆದ ದಂಗೆಗಳನ್ನು ಉಲ್ಲೇಖಿಸುತ್ತ ಅವರು ಹೀಗೆನ್ನುತ್ತಾರೆ: “ಯುದ್ಧದಿಂದ ಅಪಾಯ ಹೊಂದದೆ ಮತ್ತಷ್ಟು ಮಹೋನ್ನತವಾಗಿರುವ ಸಿಂಹಾಸನವು ಯೂರೋಪು ಖಂಡದಲ್ಲೆಲ್ಲಾ ಇಂಗ್ಲೆಂಡ್ ಒಂದರದೇ. ಅದಕ್ಕೆ ಅಲ್ಲಿಯ ರಾಜರು, ಇತರ ರಾಜರಂತೆ ಉಚ್ಚøಂಖಲರಾಗಿರದೆ ಪ್ರಜಾಭಿಪ್ರಾಯಕ್ಕೆ ಅನುಸಾರವಾಗಿ ನಡೆಯುತ್ತಿರುವುದೇ ಕಾರಣವೆಂದು ರಾಜಧರ್ಮವಿದರೆಲ್ಲರೂ ಘೋಷಿಸುತ್ತಿರುವರು… ಈ ರೀತಿಯಾಗಿ ಈಗ ನಾಗರಿಕತೆಗೆ ಬಂದಿರುವ ಭೂಭಾಗಗಳಲ್ಲೆಲ್ಲಾ ಪ್ರಜಾರಾಜ್ಯವೇ ಸ್ಥಿರವಾಗುತ್ತಿದೆ. ಇದೆಲ್ಲವನ್ನೂ ವಿಚಾರಿಸಿ ನೋಡಿದರೆ ತೋರಿಬರುವ ನೀತಿಯು ನಮ್ಮ ವ್ಯಾಸ ಕಾಳಿದಾಸಾದಿಗಳು ಹೇಳಿದ “ರಾಜಾ ಪ್ರಕೃತಿ ರಂಜನಾತ್’’ ಎಂಬ ವಾಕ್ಯದ ಅನುವಾದದಂತೆ ಕಾಣುತ್ತದೆ.’’ ಸ್ಥಳೀಯ ದಿವಾನರ ಚರಿತ್ರೆಯನ್ನು ಹೇಳಲು ಹೊರಟಿರುವ ಕೃತಿಯು, ಪಾಶ್ಚಾತ್ಯ ಜಗತ್ತಿನ ರಾಜಕೀಯ ಬೆಳವಣಿಗೆ ಮತ್ತು ಚಿಂತನೆಗಳನ್ನು, ಭಾರತದ ಸಾಂಪ್ರದಾಯಿಕ ಪ್ರಭುತ್ವದ ಪರಿಕಲ್ಪನೆಯ ಜತೆಗಿಟ್ಟು ನೋಡುತ್ತಿದೆ. ಇಲ್ಲಿ ಎಂ.ಎಸ್. ಪುಟ್ಟಣ್ಣ, ಶಿಂಗ್ರಯ್ಯ, ಡಿವಿಜಿಯವರು ಪ್ರಭು ಮತ್ತು ಪ್ರಭುತ್ವಗಳಿಗೆ ಹೊಸವ್ಯಾಖ್ಯೆಯನ್ನು ಕೊಡುತ್ತ ಪರೋಕ್ಷವಾಗಿ ತಮ್ಮ ಕಾಲಕ್ಕೆ ಬೇಕಾದ ರಾಜಧರ್ಮದ ಪರಿಕಲಕ್ಪನೆಯನ್ನು ರೂಪಿಸುತ್ತಿರುವುದು ಸ್ಪಷ್ಟವಾಗಿದೆ.
ವಸಾಹತುಶಾಹಿ ಕಾಲಘಟ್ಟದ ರಾಜಕೀಯ ಪಠ್ಯಗಳಿಗೆ ಗತಕಾಲದ ರಾಜಕೀಯ ಚರಿತ್ರೆಯನ್ನು ಕಟ್ಟುವುದಕ್ಕಿಂತ, ಸಮಕಾಲೀನ ರಾಜಕಾರಣದ ಬಗ್ಗೆ ಟೀಕೆಟಿಪ್ಪಣಿ ಮಾಡುವ ತುಡಿತವೇ ಮುಖ್ಯವಾಗಿದೆ. `ಮಹಾರಾಯ’ವು ಸಹವಾಸ ದೋಷದಿಂದ ದೊರೆ ಕೆಡುವ ವಿಷಯದಲ್ಲಿ `ನಮ್ಮ ದೊರೆಗಳು’ ಎನ್ನುವಾಗ, ಆಗ ಅಧಿಕಾರದಲ್ಲಿದ್ದ ನಾಲ್ವಡಿಯವರತ್ತ ಬೆರಳು ಮಾಡುತ್ತಿರುವಂತೆ ಕಾಣುತ್ತಿದೆ. ತಾನು ಆದರ್ಶವೆಂದು ಹೊಗಳುತ್ತಿರುವ ಮುಮ್ಮಡಿಯವರೂ ಒಂದು ಕಾಲಕ್ಕೆ ಈ `ದೋಷ’ಕ್ಕೆ ಪಕ್ಕಾಗಿದ್ದರು ಎಂಬುದನ್ನು `ಈ ಅಂಶವನ್ನು ಬಿಟ್ಟು ಯೋಚಿಸಿದರೆ’ ಎಂಬ ಒಕ್ಕಣೆಯಲ್ಲಿ ಸ್ಪಷ್ಟವಾಗಿದೆ. `ಮಹಾರಾಯ’ ಶಬ್ದಕ್ಕಿರುವ ಪ್ರಭು ಎಂಬರ್ಥವನ್ನು ಗಮನಿಸಿದರೆ, ಮಾಡಿದ್ದನ್ನು ಉಣ್ಣಬೇಕಾದುದು ತಪ್ಪಿತಸ್ಥ ಅಧಿಕಾರಿಗಳು ಮಾತ್ರವಲ್ಲ, ಆಳುವದೊರೆ ಕೂಡ. ಕಾದಂಬರಿ-ಜೀವನಚರಿತ್ರೆಗಳು ನಡುವೆ ಅವಕಾಶ ಸೃಷ್ಟಿಸಿಕೊಂಡು ಸಾಮಾಜಿಕ ರಾಜಕೀಯ ಚರಿತ್ರೆಯನ್ನು ಹೇಳುತ್ತವೆ. ವಿಜಯನಗರ ಚರಿತ್ರೆ ಕುರಿತ ಗಳಗನಾಥರ `ಕರುಣಾವಿಲಾಸ’ವಂತೂ ಚರಿತ್ರೆಯನ್ನು ಹೇಳುವ ನೆಪದಲ್ಲಿ ಸುದೀರ್ಘ ಧಾರ್ಮಿಕ ಉಪದೇಶ ಮಾಡÀುತ್ತದೆ. ಗಳಗನಾಥ ಪುಟ್ಟಣ್ಣ ಇಬ್ಬರಿಗೂ ಕಾದಂಬರಿ-ಚರಿತ್ರೆ ಪ್ರಕಾರಗಳಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಕಾದಂಬರಿಗಳ ಜತೆ ಬೇರೆಬೇರೆ ದೊರೆ ಮತ್ತು ಸಂತರ ಮೇಲೆ ಚರಿತ್ರೆಯನ್ನೂ ರಚಿಸಿದವರು. ತಮ್ಮ ಕೃತಿಗಳಲ್ಲಿ ರಾಜಕಾರಣ ಮತ್ತು ಧರ್ಮದ ತಾತ್ವಿಕತೆಗಳನ್ನು ಏಕೀಭವಿಸಿದವರು. `ಮಹಾರಾಯ’ವು ಕುಟುಂಬದ ಕಥೆಯನ್ನು ಹೇಳಹೊರಟು ನಾಡಿನ ಕಥೆಯನ್ನು ನಿರೂಪಿಸುತ್ತದೆ. ಈ ವಿಷಯದಲ್ಲಿ ಅದು ಟಾಲ್‍ಸ್ಟಾಯನ `ವಾರ್ ಅಂಡ್ ಪೀಸ’ನ್ನು ನೆನಪಿಸುತ್ತದೆ. ಪುಟ್ಟಣ್ಣನವರ `ಕುಣಿಗಲ್ ರಾಮಶಾಸ್ತ್ರಿಯ ಚರಿತ್ರೆ’ಯಾದರೂ, ವ್ಯಕ್ತಿಕಥೆಯನ್ನು ಹೇಳುತ್ತಲೇ ಅದನ್ನು ದೊರೆಯ ಚರಿತ್ರೆಯ ಜತೆಗೆ ಅಭೇದಗೊಳಿಸುತ್ತದೆ. `ಕವಿರಾಜಮಾರ್ಗ’ದಲ್ಲಿ ದೊರೆ-ಕವಿಯ ಸಂಗಮವಿದ್ದರೆ, ಇಲ್ಲಿ ದೊರೆ-ಪಂಡಿತನದು. “ಕುಣಿಗಲ ರಾಮಶಾಸ್ತ್ರಿಗಳು ಮೈಸೂರ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಪ್ರಭುಗಳ ಆಸ್ಥಾನದಲ್ಲಿ ಮುಖ್ಯ ವಿದ್ವಾಂಸÀರಾಗಿದ್ದ ಕಾರಣ, ಈ ಚರಿತ್ರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ದರಬಾರಿನ ರೀತಿ, ರಾಜಸಭೆಯ ಸ್ಥಿತಿ, ಆಗಿದ್ದ ಮುಖಂಡರಾದ ವೈದಿಕ ಲೌಖಿಕರ ಯೋಗ್ಯತೆ ಮತ್ತು ಸದ್ಗುಣಗಳು, ಆಗಿನ ಗ್ರಂಥವ್ಯಾಸಂಗ ಕ್ರಮ, ಸಮಕಾಲಿಕರಾದ ಪ್ರಂಡಿತರ ಯೋಗ್ಯತೆ, ಇವೆಲ್ಲಕ್ಕೂ ಮುಖ್ಯ ಆಧಾರಭೂತರಾಗಿದ್ದ ಕೃಷ್ಣರಾಜಪ್ರಭುಗಳ ಅಮೋಘವಾದ ಗುಣಾತಿಶಯಗಳು, ಇವೇ ಮೊದಲಾದ ವಿಷಯಗಳನ್ನು ಸಂಗತವಾದ ಕಡೆ ವರ್ಣಿಸಿದೆ’’ ಎಂಬ ಕೃತಿಯ ಸಮಜಾಯಿಶಿ ಗಮನಾರ್ಹ.
ಕನ್ನಡದಲ್ಲಿ ಬಹುತೇಕ ಚಾರಿತ್ರಿಕ ಕಾದಂಬರಿಗಳು ರಾಜಕೀಯ ಕಾದಂಬರಿಗಳಾಗಿ, ತಮ್ಮದೇ ಆದ ರಾಜಕೀಯ ಮೀಮಾಂಸೆ ಮಂಡಿಸುತ್ತವೆ. ಕನ್ನಡದ ಮಟ್ಟಿಗೆ ರಾಜಕೀಯ ಚರ್ಚೆಗೆ ಬಳಕೆಯಾದ ಜ್ಞಾನಶಿಸ್ತುಗಳಲ್ಲಿ ಮುಖ್ಯವಾದುದು ಚರಿತ್ರೆಶಾಸ್ತ್ರ. ಚರಿತ್ರೆಯನ್ನು ಮರುಕಟ್ಟುವ ನೆಪದಲ್ಲಿ ರಾಜಕೀಯ ತತ್ವಶಾಸ್ತ್ರವನ್ನು ಅಭಿವ್ಯಕ್ತಿಸುವ ಕಾದಂಬರಿಗಳಿಗೆ ವರ್ತಮಾನದ ಓದುಗರಲ್ಲಿ ಹೊಸ ರಾಜಕೀಯ ತಿಳುವಳಿಕೆಯನ್ನು ಮೂಡಿಸುವ ಆಶಯವೂ ಇದೆ. ಈ ದೃಷ್ಟಿಯಿಂದ 19ನೇ ಶತಮಾನದ `ಮಂಜೂಷ’ಕ್ಕಿಂತ 20ನೇ ಶತಮಾನದ `ಮಹಾರಾಯ’ `ಕರುಣಾವಿಲಾಸ’ಗಳು, ತೀವ್ರವಾದ ರಾಜಕೀಯ-ಚಾರಿತ್ರಿಕ ಪಠ್ಯಗಳು. ಇಲ್ಲೇ ಇಂಥ ರಾಜಕೀಯ-ಚಾರಿತ್ರಿಕ ಕಾದಂಬರಿಗಳನ್ನು ಉದ್ಘಾಟಿಸಿದ `ಮುದ್ರಾಮಂಜೂಷ’ವನ್ನು ಸ್ಮರಿಸಬೇಕು. ಕುರ್ತಕೋಟಿಯವರು “ಕೆಂಪುನಾರಾಯಣನದು ಕಾದಂಬರಿ ರೂಪವಿನ್ಯಾಸವನ್ನು ಸಂಸ್ಕøತದ ಕಥಾರೂಪದೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಇತಿಹಾಸವನ್ನು ವಸ್ತುವಾಗಿಟ್ಟುಕೊಂಡು ಬರೆಯುವುದು ಕೂಡ ಆಗಿನ ಕಾಲಕ್ಕೆ ಹೊಸ ಮಾತಾಗಿತ್ತು… ಮೊಟ್ಟಮೊದಲಿಗೆ ಅವನು ಆಧುನಿಕ ಜನತೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದಿದ್ದಾನೆ’’ ಎಂದು ವ್ಯಾಖ್ಯಾನಿಸುವರು. ಮಂಜೂಷಕಾರನ ಲಕ್ಷ್ಯದಲ್ಲಿ ಜನರಿದ್ದರೊ ಇಲ್ಲವೊ, ಪ್ರಭುತ್ವವಂತೂ ಇತ್ತು. ಏಕಕಾಲಕ್ಕೆ ಪ್ರಭುತ್ವಕ್ಕೂ ಪ್ರಜೆಗಳಿಗೂ ಉದ್ದೇಶಿಸಿ ಹುಟ್ಟಿದ ಚಾರಿತ್ರಿಕ ಸಾಮಾಜಿಕ ರಾಜಕೀಯ ಕಾದಂಬರಿಯಿದು. ವಸಾಹತುಶಾಹಿ ಕಾಲದಲ್ಲಿ ಇಂಥ ರಾಜಕೀಯ ಪಠ್ಯಗಳನ್ನು ರಚಿಸಿದ ಬಹುತೇಕರು ಸ್ವತಃ ದೊರೆಗಳು, ರಾಜಾಶ್ರಿತ ಅಧಿಕಾರಿಗಳು, ಆಸ್ಥಾನಕವಿಗಳು ಹಾಗೂ ಸ್ವತಂತ್ರ ರಾಜಕೀಯ ಚಿಂತಕರು ಆಗಿದ್ದರು. ಕುಟುಂಬದ ದೊರೆಯ ಹಾಗೂ ನಾಡಿನ ಕಥೆಗಳು ಒಂದರೊಳಗೊಂದು ಹೊಕ್ಕಾಡುವ ವಿನ್ಯಾಸವುಳ್ಳ ಇವರ ಕೃತಿಗಳು ಅಂತಿಮವಾಗಿ ನಿರ್ವಚಿಸುವುದು ತಮ್ಮ ಕಾಲಕ್ಕೆ ಬೇಕಾದ ರಾಜನೀತಿಯನ್ನು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...